Homeಅಂಕಣಗಳುಬೆಳ್ಳಿ ಚುಕ್ಕಿ: ದೂರದರ್ಶಕದಿಂದ ನಕ್ಷತ್ರ ಮತ್ತು ಗ್ರಹಗಳನ್ನು ನೋಡಿದಾಗ ಅವು ಬಹಳ ದೊಡ್ಡದಾಗಿ ಕಾಣುತ್ತವೆಯೇ?

ಬೆಳ್ಳಿ ಚುಕ್ಕಿ: ದೂರದರ್ಶಕದಿಂದ ನಕ್ಷತ್ರ ಮತ್ತು ಗ್ರಹಗಳನ್ನು ನೋಡಿದಾಗ ಅವು ಬಹಳ ದೊಡ್ಡದಾಗಿ ಕಾಣುತ್ತವೆಯೇ?

- Advertisement -
- Advertisement -

ರಾತ್ರಿ ಸಮಯದ ಆಕಾಶದಲ್ಲಿ ಗ್ರಹಗಳು, ನಕ್ಷತ್ರಗಳು ಮತ್ತು ನಕ್ಷತ್ರ ಪುಂಜಗಳನ್ನು ಗುರುತಿಸುವುದಕ್ಕೆ ನ್ಯಾಯಪಥದಲ್ಲಿ ಮೂಡುತ್ತಿರುವ ’ಬೆಳ್ಳಿಚುಕ್ಕಿ’ ಆಕಾಶ ವೀಕ್ಷಣೆಯ ಮಾರ್ಗದರ್ಶನ ನಿಮಗೆ ಸಹಾಯ ಮಾಡಿದೆ ಎಂದು ಭಾವಿಸುತ್ತೇನೆ. ನಾವು ಆಕಾಶ ವೀಕ್ಷಣೆಯನ್ನು ಬರಿಗಣ್ಣಿನಿಂದ ವೀಕ್ಷಿಸಿದ ನಂತರ, ದೂರದರ್ಶಕದಲ್ಲಿ ಆಕಾಶಕಾಯಗಳನ್ನು ನೋಡಿದರೆ ಹೇಗೆ ಕಾಣಬಹುದು ಎಂಬ ಕುತೂಹಲ ಹುಟ್ಟುವುದು ಸಹಜ. ಇದಕ್ಕೆ ಅನುಕೂಲವಾಗುವಂತೆ, ಮಾರುಕಟ್ಟೆಯಲ್ಲಿ ಎಲ್ಲರ ಬಜೆಟ್‌ಗೆ ಸಿಗುವ ತರಹೇವಾರಿ ದೂರದರ್ಶಕಗಳೂ ಲಭ್ಯವಿದೆ. ಅಂತಹ ದೂರದರ್ಶಕಗಳ ಬಾಕ್ಸ್‌ಗಳ ಮೇಲೆ ಗ್ರಹಗಳ ದೊಡ್ಡ ದೊಡ್ಡ ಚಿತ್ರಗಳನ್ನು ಪ್ರಿಂಟ್ ಮಾಡಿ, ಈ ದೂರದರ್ಶಕದಿಂದ ಗ್ರಹ, ನಕ್ಷತ್ರ ಮತ್ತು ಗ್ಯಾಲಾಕ್ಸಿಗಳನ್ನೂ ನೋಡಬಹುದು ಎಂದು ಚಿತ್ರಿಸಿರುತ್ತಾರೆ. ಸಾಮಾನ್ಯವಾಗಿ ಆಕಾಶ ವೀಕ್ಷಣೆಯನ್ನು ಹವ್ಯಾಸವಾಗಿ ಪ್ರಾರಂಭಿಸಿದಾಗ ಇಂತಹ ದೂರದರ್ಶಕಗಳನ್ನು ಕಂಡೊಡನೆ ಕೇಳುವ ಪ್ರಶ್ನೆಗಳು ಹೀಗಿವೆ: ಈ ದೂರದರ್ಶಕದಿಂದ ಎಷ್ಟು ದೂರ ನೋಡಬಹುದು? ಬಾಕ್ಸ್ ಮೇಲಿರುವ ಫೋಟೋದಲ್ಲಿ ತೋರಿಸಿರುವಂತೆ ಈ ದೂರದರ್ಶಕದಿಂದ ನಕ್ಷತ್ರ, ಗ್ರಹಗಳನ್ನು ಅಷ್ಟು ದೊಡ್ಡ ಗಾತ್ರದಲ್ಲಿ ನೋಡಬಹುದಾ? ಈ ದೂರದರ್ಶಕದಿಂದ ಬಣ್ಣದ ನೆಬುಲ್ಲಾಗಳು ಕಾಣುತ್ತವೆಯೇ (ಪೋಟೋದಲ್ಲಿ ಕಾಣುವಂತೆ)?

ದೂರದರ್ಶಕದಿಂದ ಆಕಾಶ ವೀಕ್ಷಣೆ ಮಾಡುವುದು ಹವ್ಯಾಸಿ ಖಗೋಳ ವಿಜ್ಞಾನಿಗಳ ಎರಡನೇ ಹಂತ. ಆದರೆ ಮೊದಲು ದೂರದರ್ಶಕದ ಬಗ್ಗೆ ಮೇಲೆ ನೀಡಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಬಹಳ ಮುಖ್ಯ.

ದೂರದರ್ಶಕವನ್ನು ನಮ್ಮ ಕಣ್ಣಿಗೆ ಹೋಲಿಸಿ ನೋಡೋಣ: ಕಣ್ಣಿಗೆ ಬೆಳಕು 7 ಮಿಲಿಮೀಟರ್ ವ್ಯಾಸವಿರುವ ಮಸೂರ (ಲೆನ್ಸ್) (2ಎಂಎಂ ನಿಂದ 7ಎಂಎಂ ವರೆಗೆ ಹೊಂದಿಕೊಳ್ಳುವ ಗುಣವನ್ನು ಹೊಂದಿರುತ್ತದೆ) ಮೂಲಕ ಹಾದು, ರೆಟಿನಾ ಮೇಲೆ ಬೀಳುತ್ತದೆ. ಹೀಗಾಗಿ ನಾವು ನೋಡುವ ವಸ್ತುವಿನ ದೃಶ್ಯವು 7ಎಂಎಂ ಮಸೂರದ ಮೂಲಕ ಹಾದು ಬಂದ ಬೆಳಕಿನಿಂದ ಮೂಡಿರುತ್ತದೆ. ವಸ್ತುವು ಬಹಳ ವಿವರವಾಗಿ ಕಾಣಬೇಕೆಂದರೆ, ಸಾಕಷ್ಟು ಬೆಳಕು ಕಣ್ಣಿಗೆ ಬೇಕಾಗುತ್ತದೆ. ಆದುದರಿಂದಲೇ ಕೊಠಡಿಯಲ್ಲಿ ಬೆಳಕಿದ್ದರೂ, ಲೈಟ್ ಹಾಕಿದಾಗ, ಅಲ್ಲಿರುವ ವಸ್ತುಗಳು ಇನ್ನಷ್ಟು ವಿವರವಾಗಿ ಕಾಣುತ್ತವೆ. ಇದನ್ನು ಮಸೂರದ ಬೆಳಕಿನ ಸಂಗ್ರಹ ಸಾಮರ್ಥ್ಯ ಎನ್ನುತ್ತೇವೆ.

ನಮ್ಮ ಕಣ್ಣಿನ ಮಸೂರ ಹೆಚ್ಚು ಹೆಚ್ಚು ಬೆಳಕು ಸಂಗ್ರಹಿಸುತ್ತಿದ್ದಂತೆ (ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿದರೆ), ನಾವು ನೋಡುವ ವಸ್ತುಗಳು ವಿವರವಾಗಿ ಕಾಣುತ್ತಾ ಹೋಗುತ್ತದೆ. ಕಣ್ಣಿನ ಹಾಗೆ, ದೂರದರ್ಶಕದಲ್ಲಿ ಬೆಳಕನ್ನು ಸಂಗ್ರಹಿಸಲು ಮಸೂರವನ್ನು (ಕೆಲವು ದೂರದರ್ಶಕದಲ್ಲಿ ದರ್ಪಣವನ್ನೂ ಬಳಸುತ್ತಾರೆ) ಬಳಸುತ್ತಾರೆ. ಈ ಮಸೂರವು ಕಡಿಮೆ ಅಂದರೂ 2 ಇಂಚಿನ ವ್ಯಾಸಕ್ಕಿಂತಲೂ ಹೆಚ್ಚು ಅಗಲವಾಗಿರುತ್ತದೆ. ಹಾಗಾಗಿ, ದೂರದರ್ಶಕದ ಹೆಸರನ್ನು ನಾವು ಅದರಲ್ಲಿ ಉಪಯೋಗಿಸಿರುವ ಮಸೂರ ಅಥವಾ ದರ್ಪಣದ ವ್ಯಾಸದ ಮೂಲಕವೇ ಕರೆಯುತ್ತೇವೆ. ಉದಾಹರಣೆಗೆ, 5 ಇಂಚ್ ದೂರದರ್ಶಕ, 10 ಇಂಚ್ ದೂರದರ್ಶಕ ಇತ್ಯಾದಿಯಾಗಿ.

ನಮ್ಮ ಕಣ್ಣಿನ 7ಎಂಎಂ ಮಸೂರ ಸಂಗ್ರಹಿಸುವ ಬೆಳಕಿನ ಸಾಮರ್ಥ್ಯ ಮತ್ತು ದೂರದರ್ಶಕಗಳು (ಕಡಿಮೆ ಅಂದರೂ 2 ಇಂಚು) ಸಂಗ್ರಹಿಸುವ ಬೆಳಕಿನ ಸಾಮರ್ಥ್ಯದ ನಡುವೆ ಸಾಕಷ್ಟು ಪಟ್ಟು ವ್ಯತ್ಯಾಸವಿದೆ. ಇಂತಹ ದೂರದರ್ಶಕವನ್ನು ಬಳಸಿ, ವಸ್ತುಗಳನ್ನು ವೀಕ್ಷಿಸಿದರೆ, ವಸ್ತುವಿನ ವಿವರಗಳನ್ನು ಸ್ಪಷ್ಟವಾಗಿ ನೋಡಬಹುದು. ಆದರೂ, ದೂರದರ್ಶಕಗಳು ವಸ್ತುವನ್ನು ದೊಡ್ಡದಾಗಿ ನೋಡಲು ಸಹಾಯ ಮಾಡುವುದಿಲ್ಲ! ಈ ಕೆಲಸ ಮಾಡುವುದು, ದೂರದರ್ಶಕಗಳಿಗೆ ಜೋಡಿಸಿರುವ Eye-Piece. ಈ Eye-pieceಗಳು 2X, 4X, 10X ವಿಧಗಳಲ್ಲಿ ಇರುತ್ತವೆ. ಇಲ್ಲಿ ’X’ ಅಂದರೆ, ಸಾಮನ್ಯವಾಗಿ ಕಣ್ಣಿಗೆ ಕಾಣುವ ವಸ್ತುವಿನ ಗಾತ್ರವು 2 ಪಟ್ಟು, ನಾಲ್ಕು ಪಟ್ಟು, ಹತ್ತು ಪಟ್ಟು ದೊಡ್ಡದಾಗಿ ಕಾಣುವುದು ಎನ್ನುವುದನ್ನು ತಿಳಿಸಲು ಬಳಸುವ ಸೂಚಕ. (2X: 2ಪಟ್ಟು ದೊಡ್ಡದಾಗಿ, 3X: ಮೂರು ಪಟ್ಟು ದೊಡ್ಡದಾಗಿ ನೊಡಬಹುದು ಎಂದರ್ಥ).

ದೂರದರ್ಶಕಕ್ಕೆ ನಾವು eye piece ಜೋಡಿಸಿದಾಗ, ಸಾಮಾನ್ಯವಾಗಿ ವಸ್ತುವು ಬರಿಗಣ್ಣಿನಿಂದ ನೋಡಿದಾಗ ಎಷ್ಟು ದೊಡ್ಡದಾಗಿ ಕಾಣುತ್ತದೋ, ಅದಕ್ಕಿಂತಲೂ eye pieceನ ಸಾಮರ್ಥ್ಯಕ್ಕನುಸಾರವಾಗಿ ಅಷ್ಟು ದೊಡ್ಡದಾಗಿ ವಸ್ತುವನ್ನು ನೋಡಬಹುದಾಗಿರುತ್ತದೆ. ಹಾಗಂತ, ಕಡಿಮೆ ಬೆಳಕಿನ ಸಾಮರ್ಥ್ಯದ ದೂರದರ್ಶಕಕ್ಕೆ ಹೆಚ್ಚು ಸಾಮರ್ಥ್ಯದ eye piece ಜೋಡಿಸಿದರೆ (ಉದಾಹರಣೆಗೆ: 2 ಇಂಚಿನ ದೂರದರ್ಶಕಕ್ಕೆ, 40X Eye Piece ಜೋಡಿಸಿದರೆ), ವಸ್ತುವು ದೊಡ್ಡದಾಗಿ ಕಂಡರೂ, ಹೆಚ್ಚು ಬೆಳಕಿನ ಸಂಗ್ರಹ ಇಲ್ಲದಿರುವುದರಿಂದ ಬಹಳ ಮಸುಕಾಗಿ ಕಾಣುತ್ತದೆ ಅಥವಾ ಕಾಣುವುದೇ ಇಲ್ಲ ಹಾಗಾಗಿ ದೂರದರ್ಶಕದಲ್ಲಿ ವಸ್ತುವನ್ನು ದೊಡ್ಡದಾಗಿ ನೋಡಬೇಕಾದರೆ, ಬರಿ eye piece ಅಷ್ಟೇ ಅಲ್ಲ ದೊಡ್ಡದಾದ ದೂರದರ್ಶಕವು ಬೇಕಾಗುತ್ತದೆ ಎನ್ನುವುದನ್ನು ನಾವು ಗಮನಿಸಬೇಕು.

ಈಗ ನಮ್ಮ ಮೊದಲ ಪ್ರಶ್ನೆಗೆ ಬರೋಣ. ದೂರದರ್ಶಕದಿಂದ ನೋಡಿದಾಗ, ಆಕಾಶ ಕಾಯಗಳು ದೊಡ್ಡದಾಗಿ ಕಾಣುತ್ತವೆಯೇ? ಮೊದಲಿಗೆ ನಕ್ಷತ್ರಗಳು ಹೇಗೆ ಕಾಣುತ್ತವೆ ನೋಡೋಣ. ಯಾವುದೇ ಗಾತ್ರದ ದೂರದರ್ಶಕದಲ್ಲಾದರೂ ನಕ್ಷತ್ರಗಳನ್ನು ನೋಡಿದಾಗ, ಅದು ಬರಿಗಣ್ಣಿಗೆ ಹೇಗೆ ಒಂದು ಸೂಜಿಮೊನೆಯಂತೆ ಕಾಣುತ್ತದೋ, ಅದೇ ಆಕಾರದಲ್ಲಿ ಕಾಣುತ್ತದೆ! ಏಕೆಂದರೆ, ನಮ್ಮ ಭೂಮಿಯಿಂದ ನಕ್ಷತ್ರಗಳು ಸಾವಿರ, ಲಕ್ಷ ಬೆಳಕಿನ ವರ್ಷದ ದೂರದಲ್ಲಿವೆ (ಒಂದು ಬೆಳಕಿನ ವರ್ಷ ಎಂದರೆ, ಬೆಳಕು ಒಂದು ವರ್ಷದಲ್ಲಿ ಚಲಿಸುವ ದೂರ- ಬೆಳಕು ಒಂದು ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರ್ ಚಲಿಸುತ್ತದೆ). ಹಾಗಾಗಿ, ಭೂಮಿ ಅಥವಾ ಆಕಾಶದಲ್ಲಿರುವ ದೂರದರ್ಶಕದಿಂದ (ಹಬಲ್ ದೂರದರ್ಶಕ) ನಕ್ಷತ್ರವನ್ನು ನೋಡಿದರೂ, ಅದು magnify ಆಗುವುದಿಲ್ಲ.

ನಕ್ಷತ್ರ ಸೂಜಿಮೊನೆಯಂತೆಯೇ ಕಾಣುತ್ತದೆ. ಇದರ ಜೊತೆಗೆ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಬಣ್ಣ ಬಣ್ಣದ ಎಷ್ಟೋ ನೆಬುಲ್ಲಾಗಳನ್ನು ನಾವು ನೋಡಿರಬಹುದು. ಈ ನೆಬುಲ್ಲಾಗಳು ನಕ್ಷತ್ರ ಮತ್ತು ಹೈಡ್ರೋಜನ್ ಮೋಡಗಳಿಂದ ಸೃಷ್ಟಿಯಾಗಿದ್ದು, ಇದರಿಂದ ಮಸುಕಾದ ಬೆಳಕು ಭೂಮಿಯ ಕಡೆಗೆ ಬರುತ್ತಿರುತ್ತದೆ. ಇವುಗಳು ದೂರದರ್ಶಕದಲ್ಲಿ ಮಸುಕುಮಸುಕಾದ ಹಾಲಿನ ಬಣ್ಣದಲ್ಲಿ ಕಾಣುತ್ತವೆ. ದೊಡ್ಡ ದೂರದರ್ಶಕದಲ್ಲಿ (40 ಇಂಚಿಗೂ ಹೆಚ್ಚು ದೊಡ್ಡದು) ನೆಬುಲ್ಲಾದ ಮಸುಕಾದ ಆಕಾರ ಸ್ವಲ್ಪ ಪ್ರಕಾಶಮಾನವಾಗಿ ಕಾಣಬಹುದು. ಹೆಚ್ಚು Exposure ಇರುವ ಕಲರ್ ಕ್ಯಾಮರಾಗಳು ಮಾತ್ರ ಈ ನೆಬುಲ್ಲಾಗಳಿಂದ ಬರುವ ಮಸುಕು ಬೆಳಕಿನಿಂದ ಬಣ್ಣಗಳನ್ನು ಕಾಣಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ನಮ್ಮ ಕಣ್ಣಿಗೆ ಈ ಸಾಮರ್ಥ್ಯವಿಲ್ಲ. ಬಣ್ಣದ ನೆಬುಲ್ಲಾಗಳನ್ನು ಚಿತ್ರದಲ್ಲಿ ಮಾತ್ರ ನೋಡಲು ಸಾಧ್ಯ. ಬರಿಗಣ್ಣಿನಲ್ಲಿ ಅಥವಾ ದೂರದರ್ಶಕದಿಂದ ನೋಡುವುದು ಅಸಾಧ್ಯ.

ಉಳಿದಂತೆ, 2 ಇಂಚಿನಿಂದ 8 ಇಂಚಿನ ದೂರದರ್ಶಕಗಳಲ್ಲಿ ಸೌರ ಮಂಡಲದ ಗ್ರಹಗಳನ್ನು ಅವುಗಳ ಬಣ್ಣಗಳಿಗನುಸಾರವಾಗಿ ದೊಡ್ಡದಾಗಿ magnify ಮಾಡಿ ದೂರದರ್ಶಕದಿಂದ ನೋಡಬಹುದಾಗಿದೆ. ದೂರದರ್ಶಕದ ಬಾಕ್ಸ್ ಮೇಲೆ ಚಿತ್ರಿಸಿರುವ ಗ್ರಹಗಳ ದೊಡ್ಡದಾದ ಚಿತ್ರಗಳಂತೆ ಕಾಣದಿದ್ದರೂ, ಕೆಲವು ಗ್ರಹಗಳ ವೈಶಿಷ್ಟ್ಯತೆಗಳಾದ: ಶನಿ ಗ್ರಹದ ಉಂಗುರ, ಗುರು ಗ್ರಹದ ದೊಡ್ಡ ಸುಂಟರ ಗಾಳಿಯ ಮೋಡ ಮತ್ತು ಅದರ ಚಂದ್ರಗಳು, ಮಂಗಳ ಗ್ರಹದ ಮಂಜಿನ ಬೆಟ್ಟ, ಚಂದ್ರನ ಕುಳಿಗಳು, ಶುಕ್ರ ಗ್ರಹದ ಬಿಂಬಾವಸ್ಥೆಗಳನ್ನು ನೋಡಬಹುದು.


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ನಮಗೆ ಬೇಸಿಗೆ ಕಾಲ ಬರುತ್ತದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕೇರಳ ಸರ್ಕಾರ ಕೈಗೊಂಡ ನಿರ್ಧಾರದಿಂದ ಅಲ್ಲಿನ ಜನತೆ ದುಗುಡದಿಂದ ಹೊರಬಂದಿದ್ದಾರೆ,ನಮ್ಮ ರಾಜ್ಯಕ್ಕೆ ಆ ದಿನ ಬರುವಂತಾಗಲಿ. ಅಂದೇ ದುಡಿದು ಅಂದೇ ಅಕ್ಕಿ ಬೇಳೆ ತರುತ್ತಿದ್ದವರ ಪಾಡು ನೋಡಲಾಗದು.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...