HomeಮುಖಪುಟJNU ಮಾತ್ರವಲ್ಲ, ವಿಶ್ವದ ಹಲವು ವಿವಿಗಳ ಮೇಲೆ ಯೋಜಿತ ನಿರಂತರ ದಾಳಿ ನಡೆದಿದೆ. ಏಕೆ?

JNU ಮಾತ್ರವಲ್ಲ, ವಿಶ್ವದ ಹಲವು ವಿವಿಗಳ ಮೇಲೆ ಯೋಜಿತ ನಿರಂತರ ದಾಳಿ ನಡೆದಿದೆ. ಏಕೆ?

ನಿನಗಿಂತ ಮೊದಲು ಈ ಸಿಂಹಾಸನದ ಮ್ಯಾಲೆ ಒಬ್ಬವ ಕೂತಿದ್ದನಲ್ಲಾ ಅವನಿಗೂ ನಿನ್ನಂಗನ, ತಾನ ದೇವರು ಅನ್ನೋದು ಖಾತ್ರಿ ಆಗಿತ್ತು...

- Advertisement -
- Advertisement -

ಸುದ್ದಿಯೇನೇ ಮನೋಲ್ಲಾಸಿನಿ? ಬೈ ಐ. ವಿ ಗೌಲ್

ಈಗೇನು ಸುದ್ದಿ – ಜೆಎನ್‌ಯೂನಲ್ಲಿ ಹರಿದ ರಕ್ತದ ಸುದ್ದಿ

ಕೆಲವು ವರ್ಷಗಳ ಹಿಂದ ಈಗ ರಾಜ್ಯ ಸಚಿವಸಂಪುಟದಲ್ಲಿ ಇರುವ ಸಚಿವರೊಬ್ಬರು ಅಂದಿನ ಉಚ್ಚಶಿಕ್ಷಣ ಮಂತ್ರಿಗಳಲ್ಲಿ ಒಂದು ಮನವಿ ಮಾಡಿದ್ದರು. ಅದೇನು ಅಂದರ ಅವರ ತಾಲೂಕಿನೊಳಗ ಐಐಟಿ ಸ್ಥಾಪಿಸುವುದು. ಸಚಿವರು ನೋಡೋಣ ಅಂದರು. ಅದೇ ಕಾರ್ಯಕ್ರಮದೊಳಗ ಇದ್ದ ಒಬ್ಬ ಲೇಖಕರು ಶಾಸಕರನ್ನು ಬಾಜೂ ಕರದು. ಐಐಟಿ ಕೇಳಬೇಡಿ. ನಮ್ಮದು ಅತೀ ಹಿಂದುಳಿದ ತಾಲೂಕು. ಅವರು ನಿಕ್ಕೀ ಕೊಡೋದಿಲ್ಲ. ದೊಡ್ಡ ದೊಡ್ಡ ಶಹರಗಳಿಗೆ ಮಾತ್ರ ಕೊಡತಾರ. ನಿಮಗ ನಿಜವಾಗಿಯೂ ನಿಮ್ಮ ತಾಲೂಕಿನ ಬಡವರ ಬಗ್ಗೆ ಕಾಳಜಿ ಇದ್ದರ ಹೋಬಳಿಗೊಂದು ಐಟಿಐ ಕೇಳ್ರಿ ಅಂತ ಸಲಹೆ ಕೊಟ್ಟರು.

ಆಗ ಆ ಶಾಸಕರು ಐಐಟಿಗೂ, ಐಟಿಐಗೂ ಭಾಳ ವ್ಯತ್ಯಾಸ ಇರ್ತದಾ ಸಾರ್ ಅಂತ ಕೇಳಿದರು.

ಅವರಿಗೆ ಇದ್ದ ಸಂದೇಹ ಈಗಲೂ ಅನೇಕರ ಮನಸ್ಸಿನೊಳಗ ಮುಂದುವರದದ. ಜವಾಹರ ಲಾಲ ನೆಹರು ವಿಶ್ವವಿದ್ಯಾಲಯ ಹಾಗೂ ಇತರ ಕಾಲೇಜುಗಳ ನಡುವೆ ವ್ಯತ್ಯಾಸ ಗೊತ್ತಿರದವರು ಈ ದೇಶದಾಗ ಅನೇಕರಿದ್ದಾರ. ಅವರೊಳಗ ಕೆಲವರಿಗೆ ಅಧಿಕಾರ ಸಿಕ್ಕದ. ಅವರು ಮಂತ್ರಿ, ತಂತ್ರಿ, ಇನ್ನೇನೋ ಆಗಿ ಹೋಗ್ಯಾರ.

ʻʻಹೆಂಗೆಂಗೋ ಇದ್ದವರು ಹಿಂಗ ಹಿಂಗ ಆಗಿ ಬಿಟ್ಟಾರ

ಹಿಂಗ ಹಿಂಗ ಇದ್ದವರು ಹೆಂಗೆಂಗೋ ಆಗಿ ಬಿಟ್ಟಾರʼʼ

ಅಂತ ಹೇಳಿದ ನಮ್ಮ ದಖ್ಖನಿ ಕವಿ ನಜೀರ ಹೇಳ್ಯಾನಲ್ಲಾ ಹಂಗ.

ಈಗ ಇವರ ಷಾಗಿರ್ದಗಳು ಒಂದೊಂದಾಗಿ ವಿಶ್ವವಿದ್ಯಾಲಯದೊಳಗ ಹುಡುಕಿ ಹುಡುಕಿ ಹುಡುಗ ಹುಡುಗಿಯರನ್ನ ಹಿಡಕೊಂಡು ಹೊಡೀಲಿಕ್ಕೆ ಹತ್ಯಾರ. ಮೊದಲಿಗೆ ಮುಸ್ಲಿಂ ಹುಡುಗರು ಓದೋ ಸಂಸ್ಥೆ ಅಂತ ತಿಳಕೊಂಡು ಜಾಮಿಯಾ ಮತ್ತು ಅಲಿಘರ್‌ಗೆ ಪೊಲೀಸರನ್ನ ಕಳಿಸಿದರು.

ಅವರನ್ನ ಕೆಲವೇ ಕೆಲವು ಹುಡುಗಿಯರು ಹಿಡದು ನಿಲ್ಲಿಸಿದ್ದು ನೋಡಿ, ಇದು ಪೊಲೀಸರ ಕೈಯಲ್ಲಿ ಆಗಲಾರದ ಮಾತು ಅಂತ ಹೇಳಿ ತಾವೇ ಲಾಠಿ ಹಿಡಕೊಂಡು ಹೊಡಿಲಿಕ್ಕೆ ಹೋದರು. ಮೈಯೊಳಗ ಪಾವು ಲೀಟರ್ ರಕ್ತ ಇರೋ ಐಷೆ ಘೋಷ್ ಅನ್ನೋ ಹುಡುಗಿ ತಲಿ ಒಡದು ಅರ್ಧ ರಕ್ತ ಹರಿಸಿದರು.

ಆದರ ಇದು ಯಾವುದೂ ಹೊಸಾದಲ್ಲ. ಇದು ಅಲೆಕ್ಸಾಂಡರ್ ದಿ ಗ್ರೇಟ್ ಅವರ ಟೈಂನಿಂದ ಶುರು ಆಗೇದ. ಓದಿನ, ಜ್ಞಾನದ, ತಿಳಿವಳಿಕೆ, ಮಾಹಿತಿಯ ಕೇಂದ್ರಗಳನ್ನು ಹಾಳು ಮಾಡೋದು ಆಳುವವರ ಹಳೇ ಚಾಳಿ.

ಐದು ಸಾವಿರ ವರ್ಷ ಹಿಂದೆ ಅಲೆಕ್ಸಾಂಡ್ರಿಯಾದಲ್ಲಿ ಇದ್ದ ಬೃಹತ್ ಗ್ರಂಥಾಲಯಕ್ಕ ಗ್ರೀಕ್ ಸೈನಿಕರು ಬೆಂಕಿ ಹಾಕಿದರು. ಅಲೆಕ್ಸಾಂಡರ್ ಅವರು ತಮ್ಮ ಸೈನ್ಯದ ದೋಣಿಗಳಿಗೆ ಬೆಂಕಿ ಹಾಕಲು ಹೋಗಿ ಆ ಲೈಬ್ರರಿ ಉರಿದು ಬಿತ್ತು ಅಂತ ಸಮಜಾಯಿಷಿ ಕೊಡೋರೂ ಇದ್ದಾರ. ತೀರ ಲೈಬ್ರರಿಗೂ ದೋಣಿಗೂ ವ್ಯತ್ಯಾಸ ಗೊತ್ತಿರಲಾರದವರು ಎಂಥಾ ನಾಯಕರು ಇರಬೇಕು. ಲೈಬ್ರರಿ ಅಂದರ ನೆಲದ ಮ್ಯಾಲೆ ಇರತಾವು. ದೋಣಿ ನೀರಾಗ ಇರತಾವು. ಇನ್ನ ಗ್ರಂಥಾಲಯ ಅಂದರ ಪುಸ್ತಕದ ಮನೆ. ಇದರಾಗ ಪುಸ್ತಕ ಇರತಾವು ದೋಣಿ ಅಂದರ ಸಂಚಾರ ಸಾಧನ. ಅದರಾಗ ಹುಟ್ಟು, ಚೀಲ, ಹಗ್ಗ, ತೋಪು, ಇತ್ಯಾದಿ ಇರತಾವು. ಇದನ್ನೂ ಯಾರರ ಅಲೆಕ್ಸಾಂಡರಿಗೆ ಹೇಳಿ ಕೊಡಬೇಕಾಗಿತ್ತ?

ಭಾರತದ ವಿವಿಗಳ ಮೇಲೆ ಪ್ರಾಚೀನ ಕಾಲದಾಗ, ಮಧ್ಯಯುಗದಾಗನೂ ದಾಳಿ ನಡದದ,

ಆಧುನಿಕ ಕಾಲದಾಗ ನೈಜಿರಿಯಾದಾಗ ಗುಜಬಾ ಹಾಗೂ ಒಬಾಫೇಮಿ ವಿವಿಗಳ ಮ್ಯಾಲೆ ದಾಳಿ ನಡದಿತ್ತು.

ಸಿರಿಯಾದಾಗ ಅಲೆಪ್ಪೋ ವಿವಿ ಮ್ಯಾಲೆ ಬಾಂಬ್ ದಾಳಿ ಆಗಿತ್ತು.

ಇಸ್ರೇಲಿನ ಹಿಬ್ರು ವಿವಿ ಮೇಲೆ ಬಾಂಬ್ ದಾಳಿ ನಡೀತು.

ಪಾಕಿಸ್ತಾನದ ಬಚ್ಚಾಖಾನ್ ವಿವಿ ಹಾಗೂ ಅಂತರರಾಷ್ಟ್ರೀಯ ಇಸ್ಲಾಮಿಕ್ ಮೇಲೆ ನಡೀತು.

ಢಾಕಾ ವಿವಿ ಮೇಲೆ,

ಮೆಕ್ಸಿಕೊದ ಮಾಂಟೆರಿ ತಾಂತ್ರಿಕ ವಿವಿ ಮೇಲೆ,

ಇರಾಕಿನ ಮುಸ್ತಾನ ಸಿರಿಯಾ ವಿವಿ ಮೇಲೆ,

ಅಮೆರಿಕದ ಕ್ಯಾಲಿಫೋರ್ನಿಯಾ ವಿವಿ ಸೇರಿದಂತೆ 37 ವಿವಿ ಹಾಗೂ ಕಾಲೇಜುಗಳ ಮ್ಯಾಲೆ ದಾಳಿ ನಡದದ.

ಹಂಗಾರ ಇವು ಯಾಕ ನಡೀತಾವ?

ಯಾಕಂದರ ವಿಚಾರವನ್ನ ವಿಚಾರದಿಂದ ವಿರೋಧ ಮಾಡಲಿಕ್ಕಾಗಲಾರದವರು ಹೊಡದು- ಬಡದು ಮಾಡಲಿಕ್ಕೆ ಬರತಾರ. ಕೈಲೆ ಆಗಲಾರದವರು ಮೈ ಪರಚಿಕೊಂಡಾ ಅಂತಾರಲ್ಲ. ಹಂಗ ಇವರು ಬ್ಯಾರೆದವರ ಮೈಪರಚಲಿಕ್ಕೆ ಬರತಾರ. ಯಾರಿಗೆ ವೈಚಾರಿಕತೆ ಕಂಡರ ಆಗಂಗಿಲ್ಲೋ, ಯಾರು ಕೇವಲ ಅಂಧಾನುಕರಣೆಯೊಳಗ ವಿಶ್ವಾಸ ಇಟ್ಟಿರತಾರೋ, ಯಾರು ಪ್ರಶ್ನೆ ಕೇಳೋದನ್ನ ಮರತುಬಿಟ್ಟಿರತಾರೋ, ಯಾರು ವಿಚಾರವಂತಿಕೆಯನ್ನ ಗೂಟಕ್ಕ ಹಾಕಿ ಕಟ್ಟಿ ಮನಿಯಿಂದಾ ಹೊರಗ ಬೀಳತಾರೋ, ಅವರಿಗೆ ಮಾಹಿತಿ, ಜ್ಞಾನ, ವಿವೇಕ, ತಿಳವಳಿಕೆ ಅನ್ನೋದು ಎಲ್ಲಾ ಅಲರ್ಜಿ ಆಗಿಹೋಗಿರತದ. ಇಷ್ಟು ದಿವಸ ರಾಜಕೀಯರಹಿತವಾಗಿ ಇರಬಲ್ಲವರನ್ನು ಸುಮ್ಮನೇ ಬಿಟ್ಟು ಬಿಡತಾ ಇದ್ದರು ಆದರ ಈಗ ಅದುನೂ ಉಳದಿಲ್ಲ. ನೀವು ನಮ್ಮ ಸಂಗಡ ಇಲ್ಲದಿದ್ದರೆ ನಮ್ಮ ವಿರುದ್ಧ ಇದ್ದಂತ ಅಂದ ಜಾರ್ಜ ಬುಷ್ ಅವರ ನೀತಿ ಎಲ್ಲಾ ಕಡೆ ಪಸರಿಸಿಬಿಟ್ಟದ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಹೇಳೀದ ಮಾತೊಂದು ನೆನಪ ಆಗತದ. ಪುಸ್ತಕವನ್ನು ಪುಸ್ತಕವೇ ಸರಿಗಟ್ಟಬಲ್ಲದು. ಅದನ್ನು ಬೇರೆ ರೀತಿಯಿಂದ ವಿರೋಧಿಸಬಾರದು ಅಂತ. ಈ ಮಾತು ಅವರ ಹಿಂಬಾಲಕರಿಗಿಂತ ಇತರರಿಗೇ ಹೆಚ್ಚು ನೆನಪ ಐತಿ ಅಂತ ಅನಸತೈತಿ.

ಹಂಗಾರ ಇವರು ತಿಳಕೊಂಡಿರೋದರ ಏನು?

ಸರ್ವಕಾಲಕ್ಕೂ ನಾವೇ ಅಧಿಕಾರಕ್ಕ ಬರೋರು

ನಮಗ ರಾಜಕೀಯ ಅಧಿಕಾರ ಸಿಕ್ಕು ಬಿಟ್ಟರ ಸಾಕು ಎಲ್ಲಾ ರೀತಿ ಅಧಿಕಾರ ಸಿಕ್ಕಂಗ

ನಮಗ ಅಧಿಕಾರ ಬಂದಾಗ ನಾವು ಏನು ಬೇಕಾದ್ದು ಮಾಡಬಹುದು. ಯಾರೂ ಏನೂ ಕೇಳಂಗಿಲ್ಲ

ಯಾರು ಕಂಕಿಂ ಅಂತಾರೋ ಅವರನ್ನ ನಾವು ಉಸಿರು ಎತ್ತಲಾರದಂಗ ಮಾಡಿ ಬಿಡತೇವಿ

ಈ ರೀತಿ ವಿಚಾರ ಮಾಡೋರು ಒಂದು ಮಾತು ನೆನಪು ಇಟ್ಟುಕೊಳ್ಳಬೇಕು.

ಅಧಿಕಾರ ಶಾಶ್ವತ ಅಲ್ಲ. ಅದನ್ನ ಯಾರೂ ಯಾರಿಗೂ ಬರದು ಕೊಟ್ಟಿಲ್ಲ.

ಈಗ ಸೋತವರು ನಾಳೆ ಗೆಲ್ಲಬಹುದು. ಈ ದೇಶದಾಗ ಯರ‍್ಯಾರು ಸೋತಾರ ಅನ್ನೋದನ್ನ ನೆನಪಿಸಿಕೊಂಡರ ಗಾಬರಿ ಆಗತದ.

ಹಂಗೇನರ ಆಗಿ ಇವರು ಸೋತು ಅವರು ಬಂದರ.

ಈಗ ಇವರು ಮಾಡಿದ್ದನ್ನ ನಾಳೆ ಅವರು ಮಾಡಬಹುದು.

ಹಂಗ ಮಾಡಿದಾಗ ಇವರು ಸುಮ್ಮನೇ ಇರಬೇಕಾಗತದ.

ಯಾಕಂದರ ತಮಗ ಅಧಿಕಾರ ಬಂದಾಗ ಇವರು ಹಿಂಗೆಲ್ಲಾ ಮಾಡಿ ಮೇಲ್ಪಂಕ್ತಿ ಹಾಕಿ ಕೊಟ್ಟಿರತಾರ. ಬ್ಯಾರೆದವರು ಅನುಕರಿಸಲಿ ಅಂತ ಹೇಳಿ.

ಆವಾಗ ಇಬ್ಬರೂ ಮಾತಾಡಂಗಿಲ್ಲ. ಆದರ ಇಬ್ಬರ ಕ್ರೌರ್ಯಕ್ಕ ಬಲಿ ಆಗೋರು ಮಾತ್ರ , ಬಡವರು, ಹೊಟ್ಟಿಗೆ ಇರಲಾರದವರು, ಅಧಿಕಾರದ ಚೌಕಟ್ಟಿನಿಂದ ದೂರ ಇರೋರು, ಭಿಕ್ಷಾ ಬೇಡೋರು, ರೋಡಿನ್ಯಾಗ ನಿಂಬಿಹಣ್ಣು ಮಾರೋರು, ಇತ್ಯಾದಿ

ಹಿಟ್ಲರ್‌ನ ಆಳ್ವಿಕೆಯಲ್ಲಿ ನಾಜಿಗಳು ಒಂದು ಹಬ್ಬ ಆಚರಿಸತಾರ. ಅದೇನಪಾ ಅಂದರ ಕ್ರಿಸ್ಟಲ್ ನೈಟ್ ಅಥವಾ ಗಾಜಿನ ರಾತ್ರಿ. ಆಳುವ ಪಕ್ಷದ ಸೈನಿಕರು ಊರಾಗಿನ ಎಲ್ಲಾ ಗಾಜುಗಳನ್ನ ಒಡದು, ಅದರ ಮ್ಯಾಲೆ ಯಹೂದಿಗಳನ್ನ ಬರಿಗಾಲಿನಿಂದ ನಡಸತಾರ. ಸಣ್ಣಸಣ್ಣ ಹುಡುಗರು, ಮುದುಕರು, ಹೆಣ್ಣುಮಕ್ಕಳು ಹಿಂಗ ನಡೆಯುವಾಗ, ಅವರ ಕಾಲಾಗ ರಕ್ತ ಬಂದು ಅವರು ನೋವಿನಿಂದ ಚೀರಿದಾಗ, ನಾಜಿಗಳು ಸಾಲಾಗಿ ನಿಂತು ಮಜಾ ನೋಡತಾರ.

ಅಧಿಕಾರಸ್ಥರು ತಮ್ಮ ಅಫಸರ್‌ಶಾಹಿ ಆಡಳಿತದಿಂದ ಈ ಥರದ ಪೂರ್ವ ನಿಯೋಜಿತ ಪಾಪಕೃತ್ಯಗಳನ್ನು ಮಾಡೋದು ವಿಶ್ವವ್ಯಾಪಿ. ಆದರ ಅದು ಎರಡು ಅಲುಗಿನ ಕತ್ತಿ.

ಭಾರತದ ರಾಜಕೀಯ ಅರ್ಥಮಾಡಿಕೊಳ್ಳಬೇಕು ಅನ್ನೋವವರು ಉಲ್ಟಾ ತರ್ಕದಿಂದ ವಿಚಾರ ಮಾಡಬೇಕು ಅಂತ ವಿಚಾರವಾದಿ ಕಾನ್ಶಿರಾಂ ಹೇಳತ್ತಿದ್ದರಂತ. ಜೆಎನ್‌ಯು ಘಟನೆಯನ್ನೂ ಉಲ್ಟಾ ವಿಚಾರ ಮಾಡಿದರ ನಮ್ಮ ಮುಂದ ಕಾಣುವುದು ಇದು. ಬಹಳ ಜನ ಈಗ ಆಗಿರೋದು ಸರಿ ಅಂತ ವಾದಿಸುತ್ತಾ ಇದ್ದಾರ. ಇಂಥವರಿಗೆ

ಒಂದು ಪ್ರಶ್ನೆ. ಎನ್‌ಡಿಎ ಜಾಗದಲ್ಲಿ ಯುಪಿಎ ಇತ್ತು ಅನಕೋರಿ. ಜೆಎನ್‌ಯು ಜಾಗದಾಗ ಬನಾರಸ್ ಹಿಂದೂ ವಿವಿನೋ, ಸಂಸ್ಕೃತ- ಯೋಗ ವಿವಿನೋ ಇತ್ತು ಅಂತ ತಿಳಕೋರಿ, ಪೊಲೀಸರೋ ಅಥವಾ ಈಗಿನಂತೆ ಮುಖ ಮುಚ್ಚಿಕೊಂಡ ದುಷ್ಕರ್ಮಿಗಳು ಎಡಪಂಥೀಯ ಹುಡುಗರ ಬದಲಿಗೆ ಬಲಪಂಥೀಯ ಹುಡುಗರನ್ನ ಹೊಡದಿದ್ದರಂದರ ನಿಮ್ಮ ಪ್ರತಿಕ್ರಿಯೆ ಏನಿರುತ್ತಿತ್ತು? ಈ ದೇಶದಾಗ ಹಿಂಗಾಗಿದ್ದು, ಹಂಗಾಗಲಿಕ್ಕೂ ಸಾಧ್ಯ ಅದ ಹೌದಲ್ಲೋ?

ಎರಡೂ ತಪ್ಪು ಅಂತ ನಿಮಗ ಅನ್ನಿಸಿದರ ಮಾತ್ರ ನೀವು ಮನುಷ್ಯರು.

ಇಂದಿನ ನಮ್ಮ ಸಂಕಟ ವ್ಯಕ್ತಪಡಿಸೋ ಹಬೀಬ್ ಜಾಲಿಬ್ ಅವರ ಒಂದು ಕವನ ಹಿಂಗದ

ʻʻನಿನಗಿಂತ ಮೊದಲು ಈ ಸಿಂಹಾಸನದ ಮ್ಯಾಲೆ ಒಬ್ಬವ ಕೂತಿದ್ದನಲ್ಲಾ

ಅವನಿಗೂ ನಿನ್ನಂಗನ, ತಾನ ದೇವರು ಅನ್ನೋದು ಖಾತ್ರಿ ಆಗಿತ್ತು.

ಜನರಿಗೆ ಸೆಡ್ಡು ಹೊಡದು ನಿಲ್ಲೋರು ಯಾರರ ಇದ್ದರ ತೋರಸರೆಲ್ಲಾ

ತಮ್ಮ ತಮ್ಮ ಮ್ಯಾಲೆ ಭಾಳ ಅಭಿಮಾನ ಇರೋರು ಎಲ್ಲಾದರೋ ಏನೋ

ಈ ಮಣ್ಣಿನ ಕೆಳಗ ಮಲಗಿದವರು ಯರ‍್ಯಾರು ಗೊತ್ತೈತೇನು?

ಅದರಾಗ ಕೆಲವರು ಬೆಂಕಿ, ಇನ್ನ ಕೆಲವರು ಮಂಜು,

ಮತ್ತ ಕೆಲವರು ಚಂದ್ರಕಾಂತಿ ಅನ್ನಿಸಿಕೊಂಡವರು

ಈಗೇನು ನಮ್ಮೂರಿನ ಗಲ್ಲಿಯೊಳಗ ಒಬ್ಬೊಬ್ಬರ ಅಡ್ಯಾಡತಾರಲ್ಲಾ

ಒಂದು ಕಾಲದಾಗ ಅವರ ಧಿಮಾಕು ಮುಗಿಲಿಗೂ ಮ್ಯಾಲ ಇತ್ತೇನಪಾ

ಮನಿ ಬಿಟ್ಟು ಇರೋದು ನಮಗೇನು ಹೊಸಾದು ಅಲ್ಲೇ ಅಲ್ಲಪಾ ಜಾಲಿಬ್,

ನಾವು ಯಾವಾಗಲೂ ದೇಶದ ಚಿಂತಿ ಮಾಡೇವಿ ಹೊರತು

ಜೈಲಿನ ವಿಚಾರನ ಬಂದಿಲ್ಲೇನಪಾ

ನಿನಗಿಂತ ಮೊದಲು ಈ ಸಿಂಹಾಸನದ ಮ್ಯಾಲೆ ಒಬ್ಬವ ಕೂತಿದ್ದನಲ್ಲಾ

ಅವನಿಗೂ ನಿನ್ನಂಗನ, ತಾನ ದೇವರು ಅನ್ನೋದು ಖಾತ್ರಿ ಆಗಿತ್ತು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...