Homeಕರ್ನಾಟಕರಾಷ್ಟ್ರ ಜಾಗೃತಿ ಎನ್ನುವ ಆರ್‌ಎಸ್‌ಎಸ್‌ನವರು ಭ್ರಷ್ಟರಾಗಿದ್ದಾರೇಕೆ?

ರಾಷ್ಟ್ರ ಜಾಗೃತಿ ಎನ್ನುವ ಆರ್‌ಎಸ್‌ಎಸ್‌ನವರು ಭ್ರಷ್ಟರಾಗಿದ್ದಾರೇಕೆ?

‘ನಾನೇಕೆ ಆರ್‌ಎಸ್‌ಎಸ್‌ ತ್ಯಜಿಸಿದೆ’ ಲೇಖನ ಸರಣಿಯಲ್ಲಿ ಸಂಘಪರಿವಾರವನ್ನು ತೊರೆದ ಹಿರಿಯ ನಾಯಕ ಪ್ರವೀಣ್ ವಾಲ್ಕೆ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಹತ್ಯೆ ತಡೆ ವಿಚಾರವಾಗಿ ಪ್ರಕರಣ ಮೊಟ್ಟಮೊದಲು ದಾಖಲಾಗಿದ್ದು ನನ್ನ ಮೇಲೆ. ಬಾಲ್ಯದಿಂದಲೂ ಸಂಘ ಪರಿವಾರದಲ್ಲಿದ್ದವನು ನಾನು. ಅಲ್ಲಿ, ಜಳ್ಳನ್ನು ಬಿಟ್ಟು ಒಳ್ಳೆಯದನ್ನು ತೆಗೆದುಕೊಂಡಾಗ, ಹಿಂದೂ ಧರ್ಮ ಪ್ರತಿಪಾದಿಸುವ ಉದಾತ್ತತೆ ಇಲ್ಲ. ಸಾಮಾನ್ಯಮಟ್ಟದಲ್ಲಿ ಧರ್ಮ ಏನು ಹೇಳುತ್ತದೆ? ಮನುಷ್ಯತ್ವವೇ ಪ್ರಧಾನವಲ್ಲವೆ? ಅದು ಅಲ್ಲಿ ಕಾಣುತ್ತಿಲ್ಲ. ಹೀಗಾಗಿ ನಮ್ಮಂತವರೊಂದಿಗೆ ಸಂಘರ್ಷ ಏರ್ಪಟ್ಟು ದೊಡ್ಡ ವರ್ಗವೇ ಸಂಘ ಪರಿವಾರವನ್ನು ತೊರೆದು ಹೊರಬಂತು.

ಅಲ್ಲಿ ಜನರನ್ನು ದಾರಿ ತಪ್ಪಿಸುವುದಲ್ಲದೇ ಮತ್ತೆ ಬೇರೇನೂ ನಡೆಯುವುದಿಲ್ಲ. ಹಿಂದೂ ಧರ್ಮ ದಾರಿ ತಪ್ಪಿ ಎಂದು ಹೇಳಿದೆಯೇ? ಒಂದು ರೀತಿಯಲ್ಲಿ ನೋಡುವುದಾದರೆ ಸಂಘ ಪರಿವಾರದವರಿಗೆ ಹಿಂದೂಗಳೇ ವಿರೋಧಿಗಳು. ಕೆಳಮಟ್ಟದ ಕಾರ್ಯಕರ್ತರಿಗೆ ಮುಸಲ್ಮಾನರನ್ನು ವಿರೋಧಿಸಲು ಹೇಳುತ್ತಾರೆ. ಆದರೆ ಸಾಮಾಜಿಕ
ವಾಸ್ತವದಲ್ಲಿ ಆ ರೀತಿಯ ಯಾವುದೇ ವಿರೋಧ-ವಿವಾದ ಇಲ್ಲ.

ಮೂಲದಲ್ಲಿ ಜನಸಾಮಾನ್ಯರಿಗೆ ಮುಸಲ್ಮಾನರ ವಿರೋಧ ಇಲ್ಲ. ಮೋಹನ್ ಭಾಗವತ್ ಹೇಳಿದಂತೆ ಹಿಂದೂ-ಮುಸ್ಲಿಮರ ಡಿಎನ್‌ಎ ಒಂದೇ. ಆದರೆ ಒಂದು ಸಮುದಾಯವನ್ನು ತುಳಿಯುವ ಇವರ ಉದ್ದೇಶ ಅರಿತು ಹೊರಬಂದೆ. ದಲಿತರು, ಹಿಂದುಳಿದ ವರ್ಗಗಳನ್ನು ತುಳಿಯುವುದಲ್ಲದೇ ಬೇರೆ ಉದ್ದೇಶ ಅವರಿಗಿಲ್ಲ. ನಾನು ಹಿಂದೂ ಅಲ್ಲ ಎನ್ನಲಾರೆ. ಹಲವು ಕೊರತೆಗಳ ಹೊರತಾಗಿಯೂ ಹಿಂದೂ ಎಂಬುದರಲ್ಲಿ ಬಂಧುತ್ವವಿದೆ. ಮೂರ್ತಿಯನ್ನು ನಂಬುವ ಸಮುದಾಯದಲ್ಲಿ ನನ್ನ ಜನನವಾಗಿದೆ. ಈ ಧರ್ಮವನ್ನು ವಿರೋಧಿಸುವುದು ನನಗೆ ಬೇಕಾಗಿಲ್ಲ. ಆದರೆ ಸಂಘ ಪರಿವಾರದವರು ಧರ್ಮವನ್ನು ತೋರಿಸಿ ಜನರಿಗೆ ಮೋಸ ಮಾಡುತ್ತಾರೆ.

ಮಾತೆತ್ತಿದರೆ ಹಿಂದೂ-ಮುಸ್ಲಿಂ ಗಲಭೆ. ಯಾರೋ ಒಬ್ಬ ನಾಯಕನಿಗಾಗಿ, ಒಂದು ಮುಗ್ಧ ಜೀವಕ್ಕೆ ತೊಂದರೆ ಕೊಡುವುದು ಸರಿಯಲ್ಲ ಎಂದು ನನ್ನ ಆತ್ಮಸಾಕ್ಷಿ ಹೇಳಿತು. ನಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರ ಸ್ವತಂತ್ರವನ್ನು ಕಿತ್ತುಕೊಳ್ಳುತ್ತಿದ್ದೇವೆ ಅನಿಸಿತು. ಇದೆಲ್ಲ ಸರಿಯಲ್ಲ ಎಂದು ಅಲ್ಲಿಂದ ಹೊರಬಂದೆ. ಇವರ ಹಿಂದುತ್ವಕ್ಕೆ ಅರ್ಥ ಇಲ್ಲ. ಹಿಂದೂ ಎಂದ ಮೇಲೆ ಎಲ್ಲರನ್ನೂ ಸಮಾನವಾಗಿ ನೋಡಬೇಕು. ಈಗಿರುವ ಕೊರತೆಗಳನ್ನು ನೀಗಿಸಿಕೊಂಡು ಅತ್ತ ಹೆಜ್ಜೆಯಿಡಬೇಕು. ಯಾವ ಧರ್ಮದಲ್ಲೂ ಕಡಿ-ಬಡಿ ಇಲ್ಲ. ಯಾವ ಸಮುದಾಯದ ತಾಯಿಯಾದರೂ ತನ್ನ ಮಗ ರೌಡಿಯಾಗಬೇಕು ಎಂದು ಭಾವಿಸುವುದಿಲ್ಲ. ಆದರೆ ಇಲ್ಲಿ (ದಕ್ಷಿಣ ಕನ್ನಡ) ಸಂಘಟನೆಗೆ ಬರುವ ಮಕ್ಕಳೆಲ್ಲ ಆಗುವುದು ರೌಡಿಗಳೇ ಹೊರತು, ಬೇರೇನೂ ಅಲ್ಲ. ಹಿಂದೂ ಸಂಘಟನೆಯಾಗಲೀ, ಮುಸ್ಲಿಂ ಸಂಘಟನೆಯೇ ಆಗಲಿ- ತಮ್ಮ ಸ್ವಾರ್ಥಕ್ಕಾಗಿ ಈ ಸಂಘಟನೆಗಳ ನಾಯಕರು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ.

ಹಿಂದೂ ಧರ್ಮದ ಉಳಿವಿಗೆ ಸಂಘಟನೆಯ ಅಗತ್ಯವಿಲ್ಲ. ನಮ್ಮ ನಮ್ಮ ಮನೆಯಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದರೆ, ಹಿಂದೂ ಧರ್ಮ ಸುಧಾರಿಸಿ ಉಳಿಯುತ್ತದೆ. ಯಾವುದೇ ರಾಜಕೀಯ ನಾಯಕರ ಮಕ್ಕಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಇಲ್ಲ. ಇಲ್ಲಿನ ಕಾರ್ಯಕರ್ತರು, ಕೆಳವರ್ಗದ ಹುಡುಗರು ಮಾತ್ರ ಕೋರ್ಟ್ ಮೆಟ್ಟಿಲೇರುತ್ತಾರೆ. ಮೇಲ್ವರ್ಗದ ಹುಡುಗರಿಗೆ ಸಜೆಯಾಗಿದ್ದನ್ನಾಗಲೀ, ಪ್ರಕರಣ ದಾಖಲಾಗಿದ್ದಾಗಲೀ ನಾವು ನೋಡಲಿಲ್ಲ. ಪೂಜಾರಿಗಳು, ಶೆಟ್ಟಿಗಳು ಈ ಥರದ ಸಮುದಾಯಗಳೇ ಬಲಿಪಶುಗಳಾಗಿರುತ್ತವೆ. ಈ ಜನಾಂಗಗಳ ಜೀವನವನ್ನು ಹಾಳು ಮಾಡುವುದೇ ಇವರ ಉದ್ದೇಶ. ಇವರಿಂದ ದೇಶ ಉದ್ಧಾರವಾಗುವುದಿಲ್ಲ. ದೇಶ ಉದ್ಧಾರದ ಬ್ಯಾನರ್ ಹಾಕಿಕೊಂಡು ದೇಶವನ್ನು ’ಲಗಾಡಿ’ ತೆಗೆಯುತ್ತಿದ್ದಾರೆ.

ಗೋಹತ್ಯೆ ನಿಷೇಧ ಎಂದರು. ಆದರೆ ರಾಷ್ಟ್ರಮಟ್ಟದಲ್ಲಿ ದೊಡ್ಡ ನಮೂನೆಯಲ್ಲಿ ಗೋವು ರಫ್ತಾಗುತ್ತಿದೆ. ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ಗೋ ಮಾಂಸದ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿಯ ಸರ್ಕಾರವಿದೆ. “ಗೋಹತ್ಯೆ ನಿಷೇಧ ಮಾಡಲು ಆಗಲ್ಲ, ಆರ್ಥಿಕತೆ ನಾಶವಾಗುತ್ತದೆ” ಎಂದಾದರೂ ಕಾರ್ಯಕರ್ತರಿಗೆ ಹೇಳಬಹುದಲ್ಲ. ಕರ್ನಾಟಕಕ್ಕೆ ಒಂದು ಕಾನೂನು, ಗೋವಾಕ್ಕೆ ಒಂದು ಕಾನೂನು, ತ್ರಿಪುರಕ್ಕೆ ಒಂದು, ಮೇಘಾಲಯಕ್ಕೆ ಒಂದು, ಅಸ್ಸಾಂಗೊಂದು ಕಾನೂನು- ಇದೆಲ್ಲ ಏಕೆ? ಅಲ್ಲಿಯ ಹುಡುಗರಲ್ಲಿ ಹಿಂದೂಗಳಿಲ್ಲವೆ? ಇಲ್ಲಿಯ ಹುಡುಗರು ಮಾತ್ರವೇ ಹಿಂದೂಗಳಾ?

ಗೋಹತ್ಯೆ ನಿಷೇಧ ಮಾಡಲು ಸಾಧ್ಯವಾದರೆ ಮಾಡಿ. ಆದರೆ ಒತ್ತಾಯವೇನೂ ಇಲ್ಲ. ವಾಸ್ತವ ಅವರಿಗೂ ಗೊತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಗೋಹತ್ಯೆ ನಿಷೇಧ ಪ್ರಚಾರವೂ ಮುಖ್ಯವಾಗಿತ್ತು. ಏಕೆಂದರೆ ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಆಗಿಲ್ಲವಲ್ಲ. ಎಲೆಕ್ಷನ್ ಬರುವ ಹೊತ್ತಿಗೆ ಗಲಾಟೆಗಳು ಶುರುವಾಗುತ್ತವೆ. ಈಗ ಮತ್ತೆ ಶುರುವಾಗಿದೆ. ಹಿಂದೂ ಸಮಾಜೋತ್ಸವ, ಮುಸ್ಲಿಂ ಸಮಾಜೋತ್ಸವ ನಡೆಯಲಾರಂಭಿಸಿವೆ. ಕರಾವಳಿಯಲ್ಲಿ ದೊಡ್ಡ ನಮೂನೆಯಲ್ಲಿ, ರಾಷ್ಟ್ರಮಟ್ಟದ ನಾಯಕರೆಲ್ಲ ಬಂದು ಭಾಷಣ ಮಾಡುವುದು ಬಾಕಿ ಇದೆ.

ನಾನು ಭಜರಂಗದಳ ಸಂಸ್ಥಾಪಕ ವಿಭಾಗೀಯ ಸಂಚಾಲಕನಾಗಿದ್ದೆ. ಸಂಘಟನೆಗೆ ಸೇರಿದ್ದೇ ದೊಡ್ಡ ಗಿಲ್ಟ್. ಇವರ ಜೊತೆಗೆ ಸೇರಿದ್ದೇ ನೋವಿನ ಸಂಗತಿ. ಇವರು ಹೇಳುತ್ತಿದ್ದ ಹಾಗೆ, ಕಾರ್ಯಕರ್ತರನ್ನು ನೋಡಿಕೊಳ್ಳಲಿಲ್ಲ. ಇವರ ಸ್ವಾರ್ಥಕ್ಕಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳವನ್ನು ಬಳಕೆ ಮಾಡಿಕೊಂಡರು. ಸಂಘದ ಶಿಕ್ಷಣ ನಮಗೆ ಬೇಡ. ಮನೆಯಲ್ಲಿ ನಮಗೆ ಶಿಕ್ಷಣವನ್ನು ನೀಡಿದ್ದಾರೆ. ಅದರಿಂದ ಸಿಕ್ಕಿರುವ ತಿಳಿವಳಿಕೆಯೇ ಸಾಕು ಎಂದು ಈಗ ಅರಿವಾಗಿದೆ.

ಎಂ.ಪಿ., ಎಂ.ಎಲ್.ಎ.ಗಳೆಲ್ಲ ಸಂಘದ ಶಿಕ್ಷಣ ಪಡೆದವರು, ಆದರೆ ಏಕೆ ಭ್ರಷ್ಟಾಚಾರ ಮಾಡುತ್ತಾರೆ? ರಾಷ್ಟ್ರ ಜಾಗೃತಿ ಇರಬೇಕು ಎನ್ನುವ ಸಂಘದವರು ಭ್ರಷ್ಟರಾಗಿದ್ದಾರೇಕೆ? ರಾಷ್ಟ್ರೀಯತೆ ಮತ್ತು ಧರ್ಮದ ಕುರಿತು ಮಾತನಾಡುವವರು ಭ್ರಷ್ಟರಾಗಿರುವುದು ವಿಪರ್ಯಾಸವಲ್ಲವೇ? ಕೆಲವು ಮಠಾಧೀಶರು ಕೂಡ ಭ್ರಷ್ಟರಾಗಿದ್ದಾರೆ, ರಾಜಕಾರಣಿಗಳ ಗುಲಾಮರಾಗಿದ್ದಾರೆ. ಶೇ. 90ರಷ್ಟು ಸಾಧುಗಳು ಅಂಗಡಿ ತೆರೆದಿದ್ದಾರೆ. ಸರ್ವತ್ಯಾಗಿಯಾದವರಿಗೂ ಇವರಿಂದ ಏನೋ ಸಿಗುತ್ತದೆ ಎಂದಾಗ ಧರ್ಮದ ಬಗ್ಗೆ ಮಾತನಾಡೋದೇನಿದೆ? “ಹಿಂದೂ ಹುಡುಗಿಯರನ್ನು ಮುಸಲ್ಮಾನ್ ಹುಡುಗರು ಪ್ರೀತಿಸಿ ಲವ್ ಜಿಹಾದ್ ಮಾಡುತ್ತಿದ್ದಾರೆ” ಎಂದು ಪ್ರಚೋದಿಸುತ್ತಾರೆ. ಆದರೆ ಸಂಘದವರು ಈ ವಿಚಾರಗಳನ್ನು ತಮ್ಮ ಮಕ್ಕಳಿಗೆ ಹೇಳುವುದಿಲ್ಲ. ಬಡಪಾಯಿಗಳ ಮಕ್ಕಳಿಗೆ ಹೇಳಿ ಪ್ರಚೋದಿಸುತ್ತಾರೆ.

ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅಂದು ಆರ್‌ಎಸ್‌ಎಸ್‌ ಹುಟ್ಟಿರಲಿಲ್ಲ: ಬಿ.ಎಲ್.ಸಂತೋಷ್

ಸಂಘಪರಿವಾರ ಒಗ್ಗೂಡಿದೆ. ಆದರೆ ಅದರಿಂದ ಹೊರಗೆ ಬಂದವರು ಒಟ್ಟಿಗೆ ಇಲ್ಲದಿರುವುದು ಮತ್ತೊಂದು ಸಮಸ್ಯೆ. ಹೊರಗೆ ಬಂದ ಹತ್ತು ಜನರು ಒಂದಾಗಿ ನಿಂತಿದ್ದರೆ ಇದನ್ನೆಲ್ಲ ಯಾವತ್ತೋ ಮಟ್ಟ ಹಾಕಬಹುದಿತ್ತು. ಹೊರಗೆ ಬಂದವರು ಬೇರೆ ಬೇರೆ ಸಂಘಟನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಸಂಘ ಪರಿವಾರದಲ್ಲಿ ದೇಶಪ್ರೇಮ ಯಾರ ಬಳಿಯೂ ನೋಡಲಿಲ್ಲ. ದೇಶಪ್ರೇಮ, ಹಿಂದುತ್ವ- ಎಲ್ಲ ಬ್ಯಾನರ್‌ಗಳಲ್ಲಿದೆ ಅಷ್ಟೇ. ಎಲ್ಲ ಕಡೆ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಹಿಂದೆಲ್ಲ ಜುಗಾರಿ, ವೇಶ್ಯಾವಾಟಿಕೆ, ಮರಳುದಂಧೆ ಎಂದೆಲ್ಲ ದನಿ ಎತ್ತುತ್ತಿದ್ದವರು ಈಗ ಏಕೆ ಮಾತನಾಡುತ್ತಿಲ್ಲ? ಏಕೆಂದರೆ ಅಂದು ದನಿ ಎತ್ತಿದವರೇ ಇಂದು ಇವುಗಳನ್ನು ನಡೆಸುತ್ತಿದ್ದಾರೆ. ಹೀಗಾದಾಗ ದೇಶ ಜಾಗೃತಿ ಆಗುತ್ತದೆಯೇ?

ಒಬ್ಬ ಹುಡುಗ ಮೊದಲ ಬಾರಿಗೆ ಜೈಲಿಗೆ ಹೋದಾಗ ಸಂಘ ಪರಿವಾರದಲ್ಲಿ ಬಹಳ ಮುರ್ಯಾದೆ ಕೊಡಲಾಗುತ್ತದೆ. ಮತ್ತೆಮತ್ತೆ ಇದೇ ರೀತಿ ಗಲಾಟೆಯಾಯಿತೆಂದರೆ ಅವನನ್ನು ಸಂಘಟನೆಯವರು ಹಿಂದಕ್ಕೆ ಹಾಕುತ್ತಾರೆ. ಹಿಂದೂ ಆಗಲಿ, ಮುಸ್ಲಿಂ ಆಗಲೀ- ದಕ್ಷಿಣ ಕನ್ನಡ ಜಿಲ್ಲೆ ಗ್ಯಾಂಗ್ ಕಟ್ಟಿ ಎದುರುಬದುರಾಗಿಸಲು ಒಂದು ಕಾರ್ಖಾನೆಯಂತಾಗಿದೆ. ಯುವಕರನ್ನು ರೌಡಿಸಂ ಕಾರ್ಖಾನೆಗೆ ಹಿಂದೂ ಮುಸ್ಲಿಂ ಧರ್ಮಗಳ ಕಟ್ಟರ್ ಸಂಘಟನೆಗಳು ದೂಡುತ್ತಿವೆ.

ಒಬ್ಬ ಹುಡುಗ ಸತ್ತನೆಂದರೆ ಆ ಮನೆಯ ಪರಿಸ್ಥಿತಿ ಏನಾಗಬೇಕು? ಯಾವ ಲೀಡರ್ ಮಗ ಸತ್ತಿದ್ದಾನೆ? ಇಲ್ಲಿನ ಹುಡುಗರಿಗೆ ಕೆಲಸಗಳಿಲ್ಲ. ಹೀಗಾಗಿ ಈ ಕಟ್ಟರ್ ಸಂಘಟನೆಗಳಿಗೆ ಹೋಗಿ ಯಡವಟ್ಟುಗಳಾಗುತ್ತಿವೆ. ಕೆಲಸವಿದ್ದರೆ ಯಾರಿಗೆ ಬೇಕು ಈ ಗಲಾಟೆಗಳು? ನಾಳೆ ಸೆಕೆಂಡ್ ಶಿಪ್ಟ್ ಕೆಲಸವಿದೆ ಎಂದಾದರೆ, ಯಾವುದಾದರೂ ಗಲಾಟೆಗೆ ಹೋಗುತ್ತೀರಾ? ಮನೆಯ ಜವಾಬ್ದಾರಿ ಇಲ್ಲದವ ಸಂಘಟನೆಗೆ ಸೇರುತ್ತಾನಷ್ಟೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಸಾಧ್ಯವಾಗುವ ಸ್ಥಿತಿ ಇಲ್ಲ. ಪ್ರವಾಹದ ಎದುರು ಎದೆಗೊಡುವುದಕ್ಕೆ ಆಗುವುದಿಲ್ಲ. ಏನೋ ಆಗಲಿಕ್ಕಿದೆ. ರಾಜಕಾರಣಿಗಳು ಸಾಮರಸ್ಯ ಸಾಧ್ಯವಾಗಲು ಬಿಡುವುದಿಲ್ಲ. ಯಾಕೆಂದರೆ ಪರಿಸ್ಥಿತಿ ಹೀಗೆ ಮುಂದುವರಿದರೆ ಅವರಿಗೆ ಅನುಕೂಲವಾಗುತ್ತದೆ.

ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದ ಹೊರತು ಮುಂದಿನ ದಿನಗಳು ಇನ್ನೂ ಆತಂಕಕಾರಿಯಾಗಲಿವೆ!

(ನಿರೂಪಣೆ): ಯತಿರಾಜ್ ಬ್ಯಾಲಹಳ್ಳಿ

ಪ್ರವೀಣ್ ವಾಲ್ಕೆ

ಪ್ರವೀಣ್ ವಾಲ್ಕೆ
ದಕ್ಷಿಣ ಕನ್ನಡದಲ್ಲಿ ಭಜರಂಗದಳ ಸಂಘಟನೆಗೆ ಭದ್ರಬುನಾದಿ ಹಾಕಿದ ಪ್ರಮುಖರಲ್ಲಿ ಪ್ರವೀಣ್ ವಾಲ್ಕೆ ಕೂಡ ಒಬ್ಬರು. ಸಂಘಪರಿವಾರದ ಇಬ್ಬಂದಿತನದಿಂದ ಬೇಸತ್ತು ಹೊರಬಂದಿದ್ದಾರೆ. ಈಗ ’ಹಿಂದುತ್ವದಿಂದ ಭಂದುತ್ವದೆಡೆಗೆ’ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ನಾನೇಕೆ ಆರ್ ಎಸ್ ಎಸ್ ತೊರೆದೆ ಸರಣಿ; ದೇಶಕ್ಕಾಗಿ ಸಂಘದ ಸಖ್ಯ ಬಿಟ್ಟೆ!


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...