Homeಕರ್ನಾಟಕಮೋದಿ-ಶಾರನ್ನು ಬಗ್ಗಿಸಿ ಸಿಎಂ ಆದ ಮೊದಲ ವ್ಯಕ್ತಿ ಯಡಿಯೂರಪ್ಪ

ಮೋದಿ-ಶಾರನ್ನು ಬಗ್ಗಿಸಿ ಸಿಎಂ ಆದ ಮೊದಲ ವ್ಯಕ್ತಿ ಯಡಿಯೂರಪ್ಪ

- Advertisement -
- Advertisement -

ಜುಲೈ 23ರ ಮಂಗಳವಾರ ರಾತ್ರಿ ಎಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಸೋತಕೂಡಲೇ ಯಡಿಯೂರಪ್ಪ ನಾಳೆಯಿಂದ ಅಭಿವೃದ್ದಿಪರ್ವ ಎಂದು ಹೇಳಿಕೆ ಕೊಟ್ಟರು. ಅಂದರೆ ನಾಳೆಯೇ ನಾವು ಸರ್ಕಾರ ರಚಿಸುತ್ತೇವೆ ಎಂಬ ಆತ್ಮ ವಿಶ್ವಾಸ ಅವರದ್ದಾಗಿತ್ತು. ಆದರೆ ಜುಲೈ 23ರ ಬುಧವಾರ ಅಂತಹ ಯಾವುದೇ ಘಟನೆಗಳು ನಡೆಯಲಿಲ್ಲ.

ಅಂದರೆ ಸರ್ಕಾರ ರಚನೆಗೆ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಹೈಕಮಾಂಡ್ ತಡೆವೊಡ್ಡಿತ್ತು. ತಾನು ಮುಖ್ಯಮಂತ್ರಿ ಆಗಿಯೇ ತೀರಬೇಕು ತಾಳ್ಮೆಯಿಂದ ಕಾಯುತ್ತಿದ್ದ ಯಡಿಯೂರಪ್ಪನವರಿಗೆ ಇದು ಪ್ರತಿಕ್ಷಣವೂ ತಾಳಲಾರದ ನೋವಾಗಿತ್ತು. ಕಷ್ಟಪಟ್ಟು ಮೈತ್ರಿ ಸರ್ಕಾರ ಉರುಳಿಸಿದರೂ ತನಗೆ ಹೈಕಮಾಂಡ್ ಪಟ್ಟ ಕಟ್ಟಲು ಹಿಂದೇಟು ಹಾಕುತ್ತಿರುವುದು ಅವರಿಗೆ ಸಿಟ್ಟು ತರಿಸಿತ್ತು.
ಈ ನಡುವೆ ಪೂರ್ಣ ಬಹುಮತ ಇಲ್ಲದ ಕಾರಣಕ್ಕೆ ಈಗಲೇ ಸರ್ಕಾರ ರಚಿಸುವುದು ಬೇಡ, ರಾಷ್ಟ್ರಪತಿ ಆಡಳಿತ ತರೋಣ ಎಂಬ ಚರ್ಚೆಗಳು ಶುರುವಾದವು. ಇದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮುಖ್ಯ ಕಾರಣರಾಗಿದ್ದರು ಎಂದು ಹೇಳಲಾಗುತ್ತಿತ್ತು.

ನಂತರ ಯಡಿಯೂರಪ್ಪ ಕೋಪಿಸಿಕೊಂಡು ಒಂದು ತಂಡವನ್ನು ದೆಹಲಿಗೆ ಕಳಿಸಿದರು. ಅಮಿತ್ ಶಾರನ್ನು ಭೇಟಿಯಾಗುವುದು ಈ ನಿಯೋಗದ ಕೆಲಸವಾಗಿತ್ತು. ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ವಿಜಯೇಂದ್ರ ಇಷ್ಟು ಜನ ನಿಯೋಗದಲ್ಲಿದ್ದರು. ಅಂದು ಬೆಳಿಗ್ಗೆ ಲೋಕಸಭೆಗೆ ಹೊರಡುವ ಮುನ್ನ ನಿಯೋಗವನ್ನು ಭೇಟಿ ಮಾಡಿದ ಅಮಿತ್ ಶಾ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಸಂಜೆ ಬರುತ್ತೇನೆ ಕಾಯಿರಿ ಎಂದು ಹೇಳಿಹೋದವರು ಸಂಜೆ ಬರಲೇ ಇಲ್ಲ.

ಅಂದು ಸಂಜೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಸಭೆ ಸೇರಿ ಅತೃಪ್ತರನ್ನು ಮನವೊಲಿಸುವ ಅಂತಿಮ ಪ್ರಯತ್ನ ಮಾಡುವ ನಿರ್ಣಯವಾಯಿತು. ಆ ಪ್ರಕಾರ ಈಶ್ವರ್ ಖಂಡ್ರೆ ಅತೃಪ್ತರನ್ನು ಭೇಟಿಯಾಗಲು ಅವರು ಪೂನಾದಲ್ಲಿದ್ದಾರೆ ಎಂಬ ಮಾಹಿತಿಯ ಮೇರೆಗೆ ಪೂನಾಗೆ ಹೊರಟರೆ, ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದ ಅತೃಪ್ತ ಶಾಸಕರನ್ನು ಭೇಟಿ ಮಾಡಿ, ಅವರು ಕೇಸ್ ವಾಪಸ್ ಪಡೆದರೆ ಹೇಗೆ ಎಂದು ಚರ್ಚಿಸುವ ಉದ್ದೇಶದಿಂದ ಡಿ.ಕೆ ಶಿವಕುಮಾರ್ ದೆಹಲಿಗೆ ಹೊರಟರು.

ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ಸುಧಾಕರ್ ಮತ್ತು ಗೋಪಾಲಯ್ಯ ಮತ್ತೆ ವಾಪಸ್ ಮೈತ್ರಿ ಸರ್ಕಾರಕ್ಕೆ ಬರಲು ರೆಡಿ ಇದ್ದಾರೆ ಎನ್ನುವ ಮಾಹಿತಿ ಓಡಾಡಿತು. ಅತೃಪ್ತರ ಪೈಕಿ ಈ ಆರು ಜನರ ಮೇಲೆಯೇ ಬಿಜೆಪಿಗೂ ಡೌಟ್ ಇತ್ತು. ಇವರಲ್ಲಿ ಸುಧಾಕರ್ ಮತ್ತು ಗೋಪಾಲಯ್ಯ ಹಿಂದೆಯೂ ತಮ್ಮ ಪಕ್ಷಗಳ ವಿರುದ್ಧ ಮಾತಾಡಿದ್ದರು. ಉಳಿದ ನಾಲ್ಕು ಜನ ರಾಜೀನಾಮೆ ನೀಡಬಹುದು ಎಂಬ ನಿರೀಕ್ಷೆ ಮೊದಲು ಬಿಜೆಪಿಗೇ ಇರಲಿಲ್ಲ ಇಷ್ಟು ಜನ ಶಾಸಕರಿಗೆ ಕಾಂಗ್ರೆಸ್ ಒಂದು ಆಫರ್ ಸಹ ನೀಡಿತ್ತು. ಅದು ಡಿ.ಕೆ.ಶಿವಕುಮಾರ್ ಅಥವಾ ರಾಮಲಿಂಗಾರೆಡ್ಡಿ ಸಿಎಂ ಆಗುತ್ತಾರೆ ಎನ್ನುವ ಆಫರ್ ಅದಾಗಿತ್ತು. ಇದಕ್ಕೆ ಕೆಲವರಿಗೆ ಸಹಮತ ಸಹ ಇತ್ತು ಎನ್ನಲಾಗುತ್ತಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಎಚ್ಚೆತ್ತುಕೊಂಡರು.

ಗುರುವಾರ ರಾತ್ರಿ ಅತೃಪ್ತರ ಜೊತೆ ಮಾತನಾಡಿದ ಯಡಿಯೂರಪ್ಪ ಒಂದು ಹೊಸ ದಾಳ ಉರುಳಿಸಿದರು. ಅತೃಪ್ತರ ಹತ್ತಿರ ‘ಸ್ಪೀಕರ್ ನಮ್ಮನ್ನು ಯಾವಾಗ ಅನರ್ಹಗೊಳಿಸುತ್ತಾರೆ ಹೇಳಲಿಕ್ಕೆ ಬರುವುದಿಲ್ಲ. ಹಾಗಾಗಿ ಅದಕ್ಕೂ ಮುಂಚೆ ಹೊಸ ಸರ್ಕಾರ ರಚಿಸಿಬಿಡಬೇಕು, ಇಲ್ಲದಿದ್ದರೆ ನಮ್ಮ ಪಾಡನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಹೇಳಿಸಿದರು. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಯಡಿಯೂರಪ್ಪನವರ ಪರವಾದ ನಿಯೋಗ ಜೆ.ಪಿ ನಡ್ಡಾ ಮನೆಗೆ ಹೋಯಿತು. ಶೆಟ್ಟರ್ ಮೂಲಕ ಅತೃಪ್ತ ಶಾಸಕರು ಜೆ.ಪಿ ನಡ್ಡಾರನ್ನು ಬ್ಲಾಕ್‍ಮೇಲ್ ಮಾಡಿದರು. ನಾಳೆ ಬೆಳಿಗ್ಗೆ ಒಳಗೆ ಯಡಿಯೂರಪ್ಪನವರು ಸಿಎಂ ಆಗಿಬಿಡಬೇಕು ಇಲ್ಲದಿದ್ದರೆ ನಾವು ವಾಪಸ್ ಹೋಗುತ್ತೇವೆ ಎಂದು ಬೆದರಿಕೆ ಹಾಕಿದರು.
ತದನಂತರವಷ್ಟೇ ಹೆದರಿದ ಬಿಜೆಪಿ ಹೈಕಮಾಂಡ್ ಶುಕ್ರವಾರ ಮಧ್ಯಾಹ್ನದ ವೇಳೆಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಘೋಷಿಸಬೇಕಾಯ್ತು. ಅಂದರೆ ಮೊದಲ ಬಾರಿಗೆ ಹೈಕಮಾಂಡ್ ಅನ್ನು ಬಗ್ಗಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು.

ಕ್ಯಾಬಿನೆಟ್ ವಿಸ್ತರಣೆ ಮಾತ್ರ ಹೈಕಮಾಂಡ್ ಕೈಯಲ್ಲಿದೆ.

ಇದುವರೆಗೂ ಮೋದಿ-ಅಮಿತ್ ಶಾರನ್ನು ಬಗ್ಗಿಸಿ ಸಿಎಂ ಆದವರು ಯಾರು ಇರಲಿಲ್ಲ. ಮಾಸ್ ಫಾಲೋವರ್ಸ್ ಇಲ್ಲದವರನ್ನು ಮೋದಿ ಅಮಿತ್ ಶಾ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದರು. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್, ಗುಜರಾತಿನಲ್ಲಿ ವಿಜಯ್ ರೂಪಾಣಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಜಾರ್ಖಂಡ್‍ನಲ್ಲಿ ಆದಿವಾಸಿಯಲ್ಲದವರು ಸಿಎಂ, ಹರಿಯಾಣದಲ್ಲಿ ಪಂಜಾಬ್‍ನ ವ್ಯಕ್ತಿಯೊಬ್ಬನನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿತ್ತು, ಆದರೆ ಈಗ ಯಡಿಯೂರಪ್ಪ ಮಾತ್ರ ಅದಕ್ಕೆ ಬಗ್ಗಿಲ್ಲ.

ಪ್ರಾದೇಶಿಕವಾಗಿ ಪ್ರಬಲ ಮಾಸ್ ಲೀಡರ್ ಇರಬಾರದು ಎಂಬುದು ಸಾಮಾನ್ಯವಾಗಿ ದೆಹಲಿ ನಾಯಕರುಗಳ ಇರಾದೆಯಾಗಿರುತ್ತದೆ. ಈ ಸದ್ಯ ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರಗಳನ್ನು ಉರುಳಿಸುವುದು ಬಿಜೆಪಿಗೆ ಕಷ್ಟವೇನಲ್ಲ. ಅದರಲ್ಲೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಸರಳ ಬಹುಮತವೂ ಇಲ್ಲ. ಆದರೆ, ಇಂತಹ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಪ್ರಾದೇಶಿಕವಾಗಿ ಪ್ರಬಲವಾಗಿರುವ ನರೇಂದ್ರ ಮೋದಿ ಮತ್ತು ಅಮಿತ್‍ಶಾ ಸಮಕಾಲೀನರಾಗಿರುವ ಶಿವರಾಜ್ ಚೌಹಾಣ್ ಮತ್ತು ವಸುಂದರರಾಜೇ ಸಿಂಧಿಯಾ ಅವರನ್ನೇ ಸಿಎಂಗಳನ್ನಾಗಿಸಬೇಕಾಗುತ್ತದೆ. ಅದು ಬೇಡ ಎಂಬ ಕಾರಣಕ್ಕೂ ಅಲ್ಲಿ ಸರ್ಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕುತ್ತಿಲ್ಲ.

ಕರ್ನಾಟಕದಲ್ಲಿ ಯಡಿಯೂರಪ್ಪನವರು ಅಷ್ಟು ಕಾಯಲು ಸಿದ್ಧರಿಲ್ಲ. ಜೊತೆಗೆ ದಕ್ಷಿಣ ಭಾರತದ ಒಂದು ರಾಜ್ಯದಲ್ಲಾದರೂ ಸರ್ಕಾರ ಇರುವುದು ಬಿಜೆಪಿಗೂ ಬೇಕು. ಹೀಗಾಗಿ ಕರ್ನಾಟಕ ಸರ್ಕಾರ ಉರುಳಿಸಿ ಚುನಾವಣೆಗೆ ಹೋಗೋಣ ಎಂಬ ಬಗ್ಗೆ ದೆಹಲಿ ನಾಯಕರು ಯೋಚಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಅತೃಪ್ತರ ಮೂಲಕ ಯಡಿಯೂರಪ್ಪನವರು ಒಂದು ಷಾಕ್ ಟ್ರೀಟ್‍ಮೆಂಟ್ ಕೊಟ್ಟಿದ್ದಲ್ಲದೇ ಇನ್ನೂ ಖಚಿತವಾದ ಸಂದೇಶವನ್ನೂ ನೀಡಿದರು ಎನ್ನಲಾಗುತ್ತದೆ.

ಅಲ್ಲಿಂದಾಚೆಗೆ ಅಮಿತ್ ಶಾಗೆ ಹೆಚ್ಚಿನ ಸಾಧ್ಯತೆಗಳಿರಲಿಲ್ಲ. ಗವರ್ನರ್ ಮತ್ತು ಯಡಿಯೂರಪ್ಪ ಇಬ್ಬರಿಗೂ ಗೋ ಅಹೆಡ್ ಎಂಬ ಸೂಚನೆಯನ್ನು ರವಾನಿಸಿದರು. ಆದರೆ, ಅಲ್ಲಿಂದ ಮುಂದಕ್ಕೆ ಎಲ್ಲಾ ವಿಚಾರಗಳೂ ಯಡಿಯೂರಪ್ಪ ಹೇಳಿದಂತೆ ನಡೆಯಲು ಬಿಡಬಾರದು ಅಂತಲೂ ತೀರ್ಮಾನಿಸಿದರು. ಹಾಗಾಗಿಯೇ ಯಡ್ಡಿ ಒಬ್ಬರನ್ನೇ ಪ್ರಮಾಣವಚನ ಸ್ವೀಕರಿಸಲು ಹೇಳಿದರು. ಸ್ಪೀಕರ್ ರಮೇಶ್‍ಕುಮಾರ್ ರಾಜೀನಾಮೆ ನೀಡಿದ ನಂತರ, ಆ ಸ್ಥಾನಕ್ಕೆ ಬೋಪಯ್ಯನವರನ್ನು ತರಬೇಕು ಎಂಬ ಯಡಿಯೂರಪ್ಪನವರ ಇರಾದೆಗೂ ಸೊಪ್ಪು ಹಾಕಲಿಲ್ಲ. ಸಂಘಪರಿವಾರಕ್ಕೆ ನಿಷ್ಠರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಯಡಿಯೂರಪ್ಪನವರ ಆಯ್ಕೆಯಾಗಿರಲಿಲ್ಲ.

ಹೊಸ ಮುಖ್ಯಮಂತ್ರಿಗೆ ಇನ್ನು ಮುಂದೆ ಅಡಿಗಡಿಗೂ ತೊಡಕುಂಟಾಗಲಿರುವುದು ವಿರೋಧ ಪಕ್ಷಗಳಲ್ಲ. ಬದಲಿಗೆ ಬಿಜೆಪಿ ಹೈಕಮಾಂಡ್ ಮತ್ತು ಅದರ ದಾಳಗಳಾಗಿ ಕರ್ನಾಟಕದಲ್ಲಿ ಬಳಕೆಯಾಗಲಿರುವ ಬಿಜೆಪಿ ನಾಯಕರುಗಳು. ಇದನ್ನು ಬಲ್ಲ ಯಡ್ಡಿ, ಅಗತ್ಯಕ್ಕಿಂತಲೂ ಹೆಚ್ಚೇ ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವ ಮಾತುಗಳನ್ನು ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ಆಡಿದರು. ದ್ವೇಷದ ಕ್ರಮಗಳಿಗೆ ತಾನು ಮುಂದಾಗುವುದಿಲ್ಲ ಎಂತಲೂ ಹೇಳಿದರು.

ಆದರೆ ಅವರು ತೆಗೆದುಕೊಳ್ಳುತ್ತಿರುವ ಕ್ರಮಗಳು ಮಾತ್ರ ವಿರೋಧ ಪಕ್ಷಗಳ ಹಿತಾಸಕ್ತಿಗಳನ್ನು ಸಿಟ್ಟಿಗೇಳಿಸುವ ರೀತಿಯೇ ಇದೆ. ಇನ್ನೂ ನಿಯೋಜಿತ ಮುಖ್ಯಮಂತ್ರಿಯಾಗಿದ್ದಾಗಲೇ, ಹಿಂದಿನ ಸರ್ಕಾರದ ಆದೇಶಗಳನ್ನು ಪೆಂಡಿಂಗ್ ಇರಿಸಿದರು; ಕುಮಾರಸ್ವಾಮಿಯವರ ಬಜೆಟ್‍ಗೆ ಮೂರು ತಿಂಗಳ ಲೇಖಾನುದಾನ ಮಾತ್ರ ಪಡೆದುಕೊಂಡು, ಇನ್ನೊಂದು ಬಜೆಟ್ ಮಂಡಿಸುವ ಸುಳಿವು ನೀಡಿದ್ದಾರೆ. ಇನ್ನೂ ಸಚಿವ ಸಂಪುಟ ರಚನೆಯಾಗುವ ಮೊದಲೇ, ಸಚಿವ ಸಂಪುಟದ ತೀರ್ಮಾನವಾಗಿ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ. ಕೆಜೆಪಿಗೆ ಹೋದಾಗ ಟಿಪ್ಪು ಟೋಪಿಯನ್ನು ಹಾಕಿಕೊಂಡು, ಖಡ್ಗ ಹಿಡಿದುಕೊಂಡು ಮಿಂಚಿದ್ದ ಯಡಿಯೂರಪ್ಪನವರ ಮೇಲೆ ಬಿಜೆಪಿಯ ಬೇರೆ ಶಕ್ತಿಗಳ ಒತ್ತಡದ ಪರಿಣಾಮವೂ ಇವಾಗಿರುವ ಸಾಧ್ಯತೆ ಇದೆ.

ಈ ಸಾರಿ ಆಪರೇಷನ್ ಮಾಡಿದ್ದು ಯಡ್ಡಿಯೇ
ಸ್ಥಳೀಯ ಬಿಜೆಪಿಗೆ ಗೊತ್ತಿಲ್ಲದೆಯೇ ಡೀಲ್ ನಡೆದಿದೆಯಂತೆ, ಹೈಕಮಾಂಡೇ ಎಲ್ಲರನ್ನೂ ಸಂಪರ್ಕಿಸಿ ಬುಟ್ಟಿಗೆ ಹಾಕಿಕೊಂಡಿದೆಯಂತೆ ಎಂಬ ವದಂತಿಗಳು ಸಾಕಷ್ಟು ಹರಿದಾಡಿದ್ದವು. ಆದರೆ ಇದು ಯಡಿಯೂರಪ್ಪ ಮತ್ತು ಹೈಕಮಾಂಡ್ ಜೊತೆ ಸೇರಿ ನಡೆಸಿದ ಆಪರೇಷನ್ ಆಗಿತ್ತು. ಅರವಿಂದ ಲಿಂಬಾವಳಿ, ಯಡ್ಡಿ ಪಿ.ಎ. ಸಂತೋಷ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಯೋಗೇಶ್ವರ್ ಮತ್ತು ಆರ್.ಅಶೋಕ್ ಅವರುಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಫೈನಾನ್ಸ್ ಡೀಲ್ ಮಾಡಿದ್ದು ಪಿಯೂಷ್ ಗೋಯೆಲ್ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಹೈಕಮಾಂಡ್ ನೇರವಾಗಿ ಇಳಿದು ಕಾರ್ಯಾಚರಣೆ ನಡೆಸಲಾರಂಭಿಸಿದ್ದು, ರಾಜೀನಾಮೆಗಳ ನಂತರವೇ. ರಾಜೀನಾಮೆಯ ನಂತರ ಮಹಾರಾಷ್ಟ್ರಕ್ಕೆ ಬರುವುದು ಮತ್ತು ಅಲ್ಲಿ ಬೇಕಾದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿದ್ದು ಕೇಂದ್ರ ಬಿಜೆಪಿ – ಸ್ಥಳೀಯ ಸರ್ಕಾರದ ನೆರವಿನೊಂದಿಗೆ. ಅಲ್ಲಿಂದಾಚೆಗೆ ಆ ಎಲ್ಲಾ ಶಾಸಕರೂ ಗಟ್ಟಿಯಾಗಿ ಉಳಿಯುತ್ತಾರೆ ಎಂಬ ಭರವಸೆ ಬಿಜೆಪಿಗೇ ಇರಲಿಲ್ಲ. ಆಗ ಶಾಸಕರಿಗೆ ಪರೋಕ್ಷವಾಗಿ ಇಡಿ-ಐಟಿಯ ಭಯವನ್ನು ಹುಟ್ಟಿಸಲಾಯಿತು. ಅದರಲ್ಲೂ ಹೈಕಮಾಂಡ್‍ನ ನೇರ ಭಾಗವಹಿಸುವಿಕೆ ಇತ್ತು. ಎಂಟಿಬಿ ನಾಗರಾಜ್‍ರ ವಿಚಾರದಲ್ಲೂ ಬಿಜೆಪಿಯ ಕೇಂದ್ರ ನಾಯಕರ ಪಾತ್ರವಿತ್ತು (ಕಳೆದ ಸಂಚಿಕೆಯಲ್ಲಿ ಈ ಕುರಿತು ಬರೆಯಲಾಗಿದೆ)
ಇದೆಲ್ಲಾ ಏನೇ ಇದ್ದರೂ, ಈ ಸಾರಿಯ ಆಪರೇಷನ್‍ನ ಮೂಲ ಸೂತ್ರಧಾರಿ ಸ್ವತಃ ಯಡಿಯೂರಪ್ಪನವರೇ ಆಗಿದ್ದರು. ಆಪರೇಷನ್ ನಡೆಯಲಿ ಎಂಬ ಅಭಿಪ್ರಾಯ ಬಿಜೆಪಿ ಹೈಕಮಾಂಡ್‍ದಾಗಿತ್ತಾದರೂ, ಕೂಡಲೇ ಬಿಜೆಪಿ ಸರ್ಕಾರ ರಚಿಸಬೇಕೇ ಎಂಬ ಕುರಿತು ಅಂತಿಮ ತೀರ್ಮಾನ ತೆಗೆದುಕೊಂಡಿರಲಿಲ್ಲ. ಯಡಿಯೂರಪ್ಪನವರನ್ನು ಈಗಲೇ ಪಕ್ಕಕ್ಕೆ ಸರಿಸುವುದು ಕಷ್ಟ; ಆದರೆ ಅವರನ್ನೇ ಕರ್ನಾಟಕದ ಬಲಿಷ್ಠ ನಾಯಕನನ್ನಾಗಿ ಬಿಂಬಿಸಬಾರದು ಎಂಬುದು ಅವರ ಲೆಕ್ಕಾಚಾರವಿದ್ದಂತೆ ತೋರುತ್ತದೆ.

ವಿರೋಧ ಪಕ್ಷದ ನಾಯಕ ಯಾರು?
ಯಡಿಯೂರಪ್ಪನವರು ವಿಶ್ವಾಸಮತ ಯಾಚನೆ ಮಾಡುವಾಗ, ಉಪಸಭಾಧ್ಯಕ್ಷರ ಪಕ್ಕದ ಸೀಟು – ಅಂದರೆ ವಿರೋಧ ಪಕ್ಷದ ನಾಯಕರ ಸೀಟು – ಯಾರಿಗೆ ಎಂಬುದು ನಿರ್ಧಾರವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದಾಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಅದು ತನಗೇ ಮೀಸಲಾದದ್ದು ಎಂಬ ರೀತಿಯಲ್ಲಿ ಅಲ್ಲಿ ಕೂತರು. ವಿರೋಧ ಪಕ್ಷದ ನಾಯಕನಿಗಿಂತಲೂ ತಾನೇ ಮುಖ್ಯಮಂತ್ರಿ ಎಂಬ ರೀತಿಯಲ್ಲಿ ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್ ಮತ್ತು ನಡವಳಿಕೆ ಇತ್ತು. ಒಮ್ಮೆ ಯಡಿಯೂರಪ್ಪನವೂ ಬಾಯಿ ತಪ್ಪಿ, ‘ಮಾನ್ಯ ಮುಖ್ಯಮಂತ್ರಿಗಳೇ’ ಎಂದು ಸಿದ್ದರಾಮಯ್ಯನವರನ್ನು ಸಂಬೋಧಿಸಿದರು.

ಸರ್ಕಾರ ಉಳಿಯುವವರೆಗೆ ಸಿದ್ದರಾಮಯ್ಯನವರನ್ನು ವಿರೋಧಿಸದಿದ್ದ, ಇತರ ಕಾಂಗ್ರೆಸ್ ನಾಯಕರು ಇದೀಗ ‘ಸರ್ಕಾರ ಉರುಳಲು ಸಿದ್ದರಾಮಯ್ಯನವರು ತಮ್ಮ ಆಪ್ತರನ್ನು ಹಿಡಿದಿಟ್ಟುಕೊಳ್ಳದಿದ್ದುದೂ ಕಾರಣ’ ಎಂದು ಪಕ್ಷದ ವಲಯಗಳೊಳಗೆ ಮಾತಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಈಗಾಗಲೇ ‘ಪಕ್ಷ ಹೇಳಿದರೆ, ಸದನದಲ್ಲಿ ಪಕ್ಷವನ್ನು ಮುನ್ನಡೆಸುತ್ತೇನೆ’ ಎಂದೂ ಹೇಳಿಯಾಗಿದೆ.

ಶಾಸಕರು ರಾಜೀನಾಮೆ ಕೊಟ್ಟ ನಂತರ, ಸರ್ಕಾರ ಬೀಳುವವರೆಗೆ ಅಪೂರ್ವ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್-ಜೆಡಿಎಸ್ ನಾಯಕರ ಮುಂದಿನ ನಡವಳಿಕೆ ಹೇಗಿರುತ್ತದೆ ಎಂಬುದನ್ನು ಈಗಲೇ ಹೇಳಲಾಗದು. ಆದರೆ, ಆ ಒಂದು ವಾರದ ಒಗ್ಗಟ್ಟಂತೂ ಉಳಿಯುವುದಿಲ್ಲ ಎಂಬುದಕ್ಕೆ ಸೂಚನೆಗಳು ಈಗಾಗಲೇ ಸಿಕ್ಕಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...