Homeಕರ್ನಾಟಕಯಲ್ಲಾಪುರ ಉಪಸಮರದಲ್ಲಿ ದೇಶಪಾಂಡೆ ಹಠಕ್ಕೆ ಹೆದರಿದ ಅನರ್ಹ ಶಾಸಕ ಶಿವರಾಮ್‌ ಹೆಬ್ಬಾರ್!

ಯಲ್ಲಾಪುರ ಉಪಸಮರದಲ್ಲಿ ದೇಶಪಾಂಡೆ ಹಠಕ್ಕೆ ಹೆದರಿದ ಅನರ್ಹ ಶಾಸಕ ಶಿವರಾಮ್‌ ಹೆಬ್ಬಾರ್!

- Advertisement -
- Advertisement -

“ನಾನು ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ… ಕಾಂಗ್ರೆಸಲ್ಲಿ ದೇಶಪಾಂಡೆ ಕಾಟ ತಾಳಲಾಗದೆ ಹೊರಬರಬೇಕಾಯ್ತು…” ಎಂದು ಯಲ್ಲಾಪುರ ಮುಂಡಗೋಡ-ಬನವಾಸಿ ಕ್ಷೇತ್ರದಾದ್ಯಂತ ಗೋಳಾಡುತ್ತ ಪ್ರಚಾರ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ “ಅನರ್ಹ” ಶಾಸಕ ಶಿವರಾಮ ಹೆಬ್ಬಾರ್‌ ಮಾತನ್ನು ಯಾರೆಂದರೆ ಯಾರೂ ನಂಬುತ್ತಿಲ್ಲ.

2018ರ ಅಸೆಂಬ್ಲಿ ಎಲೆಕ್ಷನ್ ರಿಸಲ್ಟ್ ಬಂದ ಮರುಘಳಿಗೆಯೇ ಹೆಬ್ಬಾರ ವ್ಯವಹಾರ ಚತುರೆ ಹೆಂಡತಿ, ಗಂಡನ ಬಿಜೆಪಿಗೆ ಸೇರಿಸಲು ಯಡ್ಡಿ ಮಗ ವಿಜಯೇಂದ್ರ ಜತೆ ಡೀಲ್ ನಡೆಸಿದ್ದು ಆಡಿಯೋ ಕೇಳಿದರ‍್ಯಾರೂ ಮರೆತಿಲ್ಲ! ಹೆಬ್ಬಾರ್ ಮಂತ್ರಿಗಿರಿ ದುರಾಸೆಗೆ ಬಿದ್ದೇ ಪಕ್ಷಾಂತರ ಮಾಡಿ ಅನವಶ್ಯಕ ಎಲೆಕ್ಷನ್ ಜನರ ಮೇಲೆ ಹೇರಿದ್ದಾನೆಂಬ ಕೂಗು ಇಡೀ ಕ್ಷೇತ್ರದಲ್ಲಿದೆ. ಮೂಲ ಬಿಜೆಪಿಗರಂತೂ ಹೆಬ್ಬಾರ ಮುಸುಡಿ ಕಂಡರೆ ಮೂಗು ಮುರಿಯುತ್ತಾರೆ. ನೋಟಾ ಬಟನ್ನಾದರೂ ಒತ್ತುತ್ತೇವೆಯೇ ಹೊರತು ಕೊಳಕು ರಾಜಕೀಯ ಮಾಡುವ ಹೆಬ್ಬಾರ್‌ ಗೆಲ್ಲಿಸಲಾರೆವೆಂದು ಕಟ್ಟರ್ ಕಮಲಿಗರು ಕೆರಳಿದ್ದಾರೆ!!

ಮಂತ್ರಿಯಾಗಿ ಜೀವನದ ಕೊನೆಯ ಆಸೆ ಈಡೇರಿಸಿಕೊಳ್ಳಬೇಕೆಂಬ ತೆವಲಿಗೆ ಬಿದ್ದಿರುವ ಹೆಬ್ಬಾರ್‌ ಲೆಕ್ಕಾಚಾರ ಸರಳ ಅಂಕಗಣಿತದಲ್ಲಿದೆ. ನಂಗೆ ಕಳೆದ ಬಾರಿ ಬಿದ್ದ ಮತದೊಂದಿಗೆ ಆಗಿನ ಎದುರಾಳಿ ವಿ.ಎಸ್.ಪಾಟೀಲ್ ಈಗ ಜತೆಗಿರುವುದರಿಂದ ಪ್ಲಸ್ ಆಗಿದೆ. ಸ್ವಜಾತಿ ಹವ್ಯಕರಲ್ಲಿ ಬೇಸರವಿದ್ದರೂ ಸ್ವರ್ಣವಲ್ಲಿ ಸ್ವಾಮಿಗಳ ಫರ್ಮಾನಿಂದ ಲಾಭ ಆಗ್ತದೆ. ಎದುರಾಳಿ ಕಾಂಗ್ರೆಸ್‌ನ ಭೀಮಣ್ಣ ನಾಯ್ಕಗೆ ಆತನ ದೀವರ ಜಾತಿ ಮತ ಬಿಟ್ಟರೆ ಬೇರಾರದೂ ಸಿಗದು. ಅದಿರು ವ್ಯವಹಾರದ ಕೊಪ್ಪರಿಗೆ ಹಣದಿಂದ ಪ್ರಚಾರ ಸಲೀಸಾಗುತ್ತದೆಂಬ ಅಂದಾಜು ಹೆಬ್ಬಾರ್ ಹಾಕಿದ್ದಾರೆ. ಆದರೆ ಅಷ್ಟು ಸರಳವಾಗಿಲ್ಲ ಉಪಚುನಾವಣಾ ಅಖಾಡ.

ಕಳೆದ ಬಾರಿ ಕೇವಲ 1,400 ಮತದಂತರದಿಂದ ಗೆದ್ದಿದ್ದ ಹೆಬ್ಬಾರ್‌ಗೆ ದಡ ತಲುಪಿಸಿದ್ದೇ ಮುಸ್ಲಿಮ್, ಕ್ರಿಶ್ಚಿಯನ್ನರು. 20 ಸಾವಿರದಷ್ಟಿರುವ ಈ ಅಲ್ಪಸಂಖ್ಯಾತರ ಬೆಂಬಲ ಈ ಸಲ ಹೆಬ್ಬಾರ್‌ಗೆ ಸಿಗಲಾರದು. ಬಿಜೆಪಿಯಿಂದ ಶಾಸಕನಾಗಬೇಕೆಂದು ಕಳೆದ ಬಾರಿಯೇ ಬಿಜೆಪಿ ಪಾಲಾಗಿರುವ ಜಿಪಂ ಸದಸ್ಯ ಎಲ್.ಟಿ.ಪಾಟೀಲ್‌ಗೆ ಹೆಬ್ಬಾರ್ ಬಿಜೆಪಿಗೆ ಬಂದಿದ್ದು ಸಹಿಸಲಾಗುತ್ತಿಲ್ಲ. ಸುಮಾರು 25 ಸಾವಿರ ಮತದಾರರಿರುವ ಮರಾಠ ಸಮುದಾಯದ ಪಾಟೀಲ ಮೂಲತಃ ದೇಶಪಾಂಡೆಯ ಅತ್ಯಾಪ್ತ ಶಿಷ್ಯ. ಈ ಪಾಟೀಲ್ ಕಳೆದ ಬಾರಿ ದೊಡ್ಡ ಮೊತ್ತಕ್ಕೆ ಡೀಲಾಗಿ ಹೆಬ್ಬಾರ್‌ಗೆ ಹೆಲ್ಪ್ ಮಾಡಿದ್ದ. ಆದರೀಗ ದೇಶಪಾಂಡೆ ಕಣ್ಸನ್ನೆಗೇ ಉಲ್ಟಾ ಹೊಡೆಯುತ್ತಿದ್ದಾನೆ.

ಹಿಂದಿನ ಪ್ರತಿಸ್ಪರ್ಧಿ ವಿ.ಎಸ್.ಪಾಟೀಲ್ ಸ್ವಜಾತಿ ದೊರೆ ಯಡ್ಡಿ ಮುಲಾಜಿಗೆ ಬಹಿರಂಗವಾಗಿ ಓಡಾಡಿಕೊಂಡಿದ್ದಾನಾದರೂ ಒಳಗೊಳಗೇ ಹೆಬ್ಬಾರ್ ಸೋಲಲಿ ಎಂದೇ “ಹಾರೈಸು”ತ್ತಿದ್ದಾರೆ. ಈತನ ಮಗ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರಿದ್ದು ಹೆಬ್ಬಾರ್‌ ರನ್ನು ದಂಗುಬಡಿಸಿದೆ.

ಸ್ವಜಾತಿಯ ಸ್ವ-ಪಕ್ಷದ ಹಿತಶತ್ರುಗಳಾದ ಪ್ರಮೋದ್ ಹೆಗಡೆ. ಗುರುಮುರಿಗೆ ಸಂಸದ ಅನಂತ್ಮಾಣಿಗಳ ಅರ್ಥವಾಗದ ಅಂತರಾಳ ಹೆಬ್ಬಾರ್‌ರನ್ನು ಅಂಜಿಸುತ್ತಲೇ ಇದೆ. ಬಿಜೆಪಿ ಜಿಲ್ಲಾಧ್ಯಕ್ಷನಾಗಿದ್ದಾಗಲೇ ಅನಂತ್ಮಾಣಿಯಿಂದ ಕೆನ್‌ಕೆನ್ನೆಗೆ ಬಾರಿಸಿಕೊಂಡು ಬಿಜೆಪಿ ಸೇರಿದ್ದ ಹೆಬ್ಬಾರ್‌ರಿಗೆ ಆತನ ಸಹಕಾರ ಸಿಗುವುದಾದರೂ ಹೇಗೆ? ಅನಂತ್ಮಾಣಿಗೆ ಸ್ವ-ಪಕ್ಷದ ಹೆಬ್ಬಾರ್‌ಗಿಂತಲೂ ವಿರೋಧಿ ಪಡೆಯ ಭೀಮಣ್ಣ ನಾಯ್ಕ ಎಂದರೇನೇ ಕಾಳಜಿ ಜಾಸ್ತಿ. ಸ್ಪೀಕರ್ ಕಾಗೇರಿಯಂತೂ ತನ್ನ ಮಂತ್ರಿಗಿರಿಗೆ ಸಂಚಕಾರ ತರುವ, ಸ್ವ-ಜಾತಿ ಹವ್ಯಕರಲ್ಲಿ ಪ್ರತಿಸ್ಪರ್ಧಿಯಾಗುವ ಹೆಬ್ಬಾರ್ ಗೆಲ್ಲುವುದು ಸಹಜವಾಗೇ ಬೇಡವಾಗಿದೆ. ಇಷ್ಟಾಗಿಯೂ ಈ ಹವ್ಯಕ ಲೀಡರ್‌ಗಳೆಲ್ಲ ತಮ್ಮ ಕುಲಗುರು ಸ್ವರ್ಣವಲ್ಲಿ ಸ್ವಾಮಿ ಮಂತ್ರಾಕ್ಷತೆಗೆ ಮಣಿದರೆ ಹವ್ಯಕರ ಮತ ಸಿಗಬಹುದೇ ಹೊರತು ಅಹಿಂದ ಮತ ತರಲು ಸಾಧ್ಯವೇ ಇಲ್ಲ.

ಇದೆಲ್ಲಕ್ಕಿಂತ ಕೈ ಕಮಾಂಡ್ ದೇಶಪಾಂಡೆಯ ಜಿದ್ದೊಂದೇ ಅಖಾಡದಲ್ಲಿ ಹೆಬ್ಬಾರ್‌ರನ್ನು ಹೈರಾಣಾಗಿಸಿದೆ. ದೇಶಪಾಂಡೆ ತನ್ನ ರಾಜಕೀಯ ಇತಿಹಾಸದಲ್ಲಿ ಯಾರನ್ನೂ ಗೆಲ್ಲಿಸಲು ಪ್ರಯತ್ನಿಸಿದ್ದೇ ಇಲ್ಲ. ಆತನದೇನಿದ್ದರೂ ಸೋಲಿಸುವ ಕರಾಮತ್ತು. ಆದರೆ ಈ ಬಾರಿ ದೇಶಪಾಂಡೆ ಹೇಗಾದರೂ ಮಾಡಿ ಹೆಬ್ಬಾರ್‌ರನ್ನು ಹೆಡೆಮುರಿ ಕಟ್ಟಿ ಬೇಡ್ತಿ ನದಿಯಲ್ಲಿ ಬಿಡಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ತನ್ನನ್ನು ಕಾಂಗ್ರೆಸಲ್ಲಿದ್ದಾಗಲೂ ಕೆಣಕುತ್ತಿದ್ದ ಹೆಬ್ಬಾರ್ ಪಾರ್ಟಿ ಬಿಡಲಿಕ್ಕೆ ತಾನೇ ಕಾರಣವೆಂದು ಹೇಳಿದ್ದು ಕೆರಳಿಸಿದೆ. ಕ್ಷೇತ್ರದ ಮುಂಡಗೋಡದಲ್ಲಿ ದೇಶಪಾಂಡೆಗೆ ಹಿಡಿತವಿದೆ. ಕ್ಷೇತ್ರ ಪುನರ್ ವಿಂಗಡಣೆಗೂ ಮೊದಲು ಮುಂಡಗೋಡ ದೇಶಪಾಂಡೆಯ ಹಳಿಯಾಳ ಕ್ಷೇತ್ರದ ಜತೆಗಿತ್ತು. ಇಲ್ಲಿಯೇ ಬಿಡಾರ ಹೂಡಿರುವ ದೇಶಪಾಂಡೆ ಹೆಬ್ಬಾರ್‌ನ ಸೋಲಿಸಲು ಸಕಲ ಸ್ಟ್ರಾಟರ್ಜಿ ಮಾಡುತ್ತಿದ್ಧಾರೆ. ಬ್ರಾಹ್ಮಣೇತರ ಮರಾಠ, ಗೌಳಿ, ಸಿದ್ದಿ, ಬುಡಕಟ್ಟು, ದಲಿತ ಮತ ಬ್ಯಾಂಕ್ ಮೇಲೆ ದೇಶಪಾಂಡೆ ಗಮನ ಕೇಂದ್ರೀಕರಿಸಿರುವುದು ಹೆಬ್ಬಾರ್‌ಗೂ ಗೊತ್ತಾಗಿದೆ.

ದೇಶಪಾಂಡೆ ತಂತ್ರಗಾರಿಕೆಗೆ ಹೆಬ್ಬಾರ್ ಒಂಥರಾ ಡೆಸ್ಟರೇಟ್ ಆದಂತಿದೆ. ಅರಣ್ಯ ಅತಿಕ್ರಮಣದಾರರ ಸಂಘಟಕ ರವೀಂದ್ರ ನಾಯ್ಕರನ್ನು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ದೇಶಪಾಂಡೆ ಕರೆತಂದಿದ್ದಾರೆ. ಬಹುತೇಕ ಜಿ.ಪಂ- ತಾ.ಪಂ- ಗ್ರಾಪಂ.ನ ಕಾಂಗ್ರೆಸ್ ಮೆಂಬರ್‌ಗಳು ಹೆಬ್ಬಾರ್ ಜತೆಗಿದ್ದರೂ ದೇಶಪಾಂಡೆಯ “ಋಣ” ಇರುವುದರಿಂದ ಆತನ ರಹಸ್ಯ ನಿರ್ದೇಶನಕ್ಕೆ ಬದ್ಧರಾಗಿದ್ದಾರೆಂಬುದು ಎಲೆಕ್ಷನ್ ವಿಶ್ಲೇಷಕರ ಆಂಬೋಣ.

ಕಾಂಗ್ರೆಸ್ ಕ್ಯಾಂಡಿಡೇಟ್ ಭೀಮಣ್ಣ ನಾಯ್ಕ ಪಾಪದ ಆಸಾಮಿ. ಹಲವು ಎಲೆಕ್ಷನ್‌ನಲ್ಲಿ ಸೋತವನೆಂಬ ಸಿಂಪಥಿ ಕ್ಷೇತ್ರದಲ್ಲಿದೆ. ’ಮಾಜಿ ಸಿಎಂ ಬಂ’ ಭಾಮೈದನೆಂಬ ಅಂಶ ಆತನಿಗೆ ಸ್ವಜಾತಿ ದೀವರ 15 ಸಾವಿರದಷ್ಟಿರುವ ಮತದಲ್ಲಿ ಹೆಚ್ಚಿನದು ಪಡೆಯಲು ಅನುಕೂಲವಾಗಿದೆ. ನೆರೆ ಬಂದಾಗ ಸಮ್ಮಿಶ್ರ ಸರ್ಕಾರ ಉರುಳಿಸಲು ಮುಂಬೈನ ಐಷಾರಾಮಿ ಹೋಟೆಲ್‌ನಲ್ಲಿ “ಆಟ” ಆಡುತ್ತಿದ್ದ ಹೆಬ್ಬಾರ್ ಬಗ್ಗೆ ಕ್ಷೇತ್ರದಲ್ಲಿ ಸಿಟ್ಟಿದೆ. ಮೂಲಸೌಕರ್ಯ, ರಸ್ತೆಯಂಥ ಸೌಲಭ್ಯ ಒದಗಿಸುವ ಹೆಬ್ಬಾರ್‌ನ ಭರವಸೆ ಎರಡು ಬಾರಿ ಶಾಸಕರಾದರೂ ಈಡೇರಿಲ್ಲವೆಂಬ ಬೇಸರ ಜನರಿಗಿದೆ.

ಬಿಜೆಪಿಯ ಟಾಪ್ ಲೀಡರ್‌ಗಳು ಎರಡೆರಡು ಬಾರಿ ಸಂಧಾನ ಸಭೆ ನಡೆಸಿದರೂ ಬಿಜೆಪಿಯ ಬಹುತೇಕ ಘಟಕಗಳಿನ್ನೂ ಫೀಲ್ಡಿಗೆ ಇಳಿದಿಲ್ಲ. ಹೆಬ್ಬಾರ್ ಗ್ಯಾಂಗಿನ ಜತೆ ಸೇರಲು ಮೂಲ ಬಿಜೆಪಿಗರ ಮನಸು ಒಪ್ಪುತ್ತಿಲ್ಲ. ಹೊರನೋಟಕ್ಕೆ ಹೆಬ್ಬಾರ್ ಹವಾ ಜೋರಿರುವಂತೆ ಕಂಡರೂ ಆತನಿಗೆ ಸ್ವಜಾತಿ ಹವ್ಯಕರು ಮತ್ತು ಯಡ್ಡಿ ದೆಸೆಯಿಂದ 25 ಸಾವಿರದಷ್ಟಿರುವ ಲಿಂಗಾಯತರ ಮತ ಬಿಟ್ಟರೆ ಉಳಿದ ಯಾವ ಸಮುದಾಯದ ಮತವೂ ದೊಡ್ಡ ಪ್ರಮಾಣದಲ್ಲಿ ದಕ್ಕಲಾರದು.

ಕ್ಷೇತ್ರ ವ್ಯಾಪ್ತಿಯ ಏಳು ಜಿಪಂ ಕ್ಷೇತ್ರಗಳ ಪೈಕಿ ನಾಲ್ಕು ಬಿಜೆಪಿ (ಇಬ್ಬರು ಕಾಂಗ್ರೆಸ್‌ನಿಂದ ಹೋದವರು) ಪರವಿದ್ದರೆ ಮೂರು ಕಾಂಗ್ರೆಸ್ ಕಡೆಗಿದೆ. ದೇಶಪಾಂಡೆ ಕರಾರುವಾಕ್ಯ ದಾಳ ಉರುಳಿಸಿದಂತೆ ಕಾಂಗ್ರೆಸ್ ಕ್ಯಾಂಡಿಡೇಟ್ ಬಲಗೊಳ್ಳುತ್ತಿದ್ದಾರೆ. ಸದ್ಯಕ್ಕೆ ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಕ್ಷೇತ್ರ ಯಾವ ಮೂಲೆಯಲ್ಲಿ ನಿಂತು ಕಣ್ಣು ಹಾಯಿಸಿದರೂ ಪಕ್ಷಾಂತರಿ ಹೆಬ್ಬಾರ್‌ಗೆ ಅಖಾಡ ಕಠಿಣ ಆಗುತ್ತಿರುವುದು ಸ್ಪಷ್ಟವಾಗುತ್ತಿದೆ. ದೇಶಪಾಂಡೆ ಇದೇ ನಿಷ್ಠೆ-ಬದ್ಧತೆ-ಹಠದಿಂದ ಕಡೆವರೆಗೂ ಹೋರಾಡಿದರೆ ಕ್ಷೇತ್ರಕ್ಕೆ ಮೋಸ-ವಂಚನೆ ಮಾಡಿದ ಹೆಬ್ಬಾರ್‌ಗೊಂದು ನೈತಿಕ ಪಾಠವಾಗೋದು ಗ್ಯಾರಂಟಿ ಎಂಬುದು ಕ್ಷೇತ್ರದಲ್ಲಿ ಕೇಳಿಬರುವ ಸಾಮಾನ್ಯ ಮಾತು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...