Homeಮುಖಪುಟನೀವೀಗ ಕಾಶ್ಮೀರಿ ಸುಂದರಿಯರನ್ನು ಮದುವೆಯಾಗಬಹದು: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

ನೀವೀಗ ಕಾಶ್ಮೀರಿ ಸುಂದರಿಯರನ್ನು ಮದುವೆಯಾಗಬಹದು: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

- Advertisement -
- Advertisement -

370 ನೇ ವಿಧಿ ರದ್ಧತಿ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗಾಣಿಸಿರುವುದರಿಂದ ಇನ್ನು ಮುಂದೆ ನಮ್ಮ ಪಕ್ಷದ ಕಾರ್ಯಕರ್ತರು ಕಾಶ್ಮೀರದ ಸುಂದರ ಮಹಿಳೆಯರನ್ನು ಮದುವೆಯಾಗಬಹುದು. ಹೀಗೆಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ನಡೆಯ ಉಪಯೋಗಗಳನ್ನು ತಿಳಿಸಿರುವುದು ಯಾವುದೋ ಸಾಮಾನ್ಯ ಜನರಲ್ಲ, ಬದಲಿಗೆ ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಮ್ ಸೈನಿ..

ಕೇಂದ್ರದ ಈ ಕ್ರಮಗಳ ಯೋಗ್ಯತೆಯನ್ನು ವಿವರಿಸುವ ಶಾಸಕರೊಬ್ಬರು ಈ ಭಯಾನಕ ಅಂಶವನ್ನು ಹೊರಹಾಕಿದ್ದಾರೆ. ಮುಂದುವರೆದು ಅವರು ಸರ್ಕಾರದ ಕಾಶ್ಮೀರದ ನಿರ್ಧಾರದಿಂದ, ಬಿಜೆಪಿ ಕಾರ್ಯಕರ್ತರು ಈಗ ಅಲ್ಲಿಗೆ ಹೋಗಬಹುದು, ಜಮೀನುಗಳನ್ನು ಖರೀದಿಸಬಹುದು ಮತ್ತು ಮದುವೆಯಾಗಬಹುದು ಎಂದು ವಿಕ್ರಮ್ ಸೈನಿ ಮಂಗಳವಾರ ಮುಜಫರ್ ನಗರದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದಾರೆ.

“ಇದರಿಂದ ನಮ್ಮ ಪಕ್ಷದ ಕಾರ್ಯಕರ್ತರು ತುಂಬಾ ಉತ್ಸುಕರಾಗಿದ್ದಾರೆ ಇನ್ನೂ ಮದುವೆಯಾಗದಿರುವವರು ಅಲ್ಲಿ ಮದುವೆಯಾಗಬಹುದು. ಈಗ ಯಾವುದೇ ಸಮಸ್ಯೆ ಇಲ್ಲ. ಈ ಹಿಂದೆ ಅಲ್ಲಿ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆದಿವೆ. ಕಾಶ್ಮೀರದ ಮಹಿಳೆಯೊಬ್ಬರು ಉತ್ತರ ಪ್ರದೇಶದ ಪುರುಷನನ್ನು ಮದುವೆಯಾದರೆ, ಅವರ ಪೌರತ್ವ ರದ್ದುಪಡಿಸಲಾಗಿದೆ. ಭಾರತ ಮತ್ತು ಕಾಶ್ಮೀರಕ್ಕೆ ವಿಭಿನ್ನ ಪೌರತ್ವವಿತ್ತು” ಎಂದು ಶಾಸಕರು ಹೇಳಿದ್ದಾರೆ.

“ಮುಸ್ಲಿಂ ಕಾರ್ಯಕರ್ತರು ಸಹ ಸಂಭ್ರಮ ಆಚರಿಸಬೇಕು. ಅವರು ಸುಂದರ ಕಾಶ್ಮೀರಿ ಹುಡುಗಿಯರನ್ನು ಮದುವೆಯಾಗಬಹುದು. ಹಾಗಾಗಿ  ಹಿಂದೂಗಳಾಗಿರಲಿ ಅಥವಾ ಮುಸ್ಲಿಮರಾಗಿರಲಿ ಸಂಭ್ರಮ ಆಚರಿಸಬೇಕು. ಇದು ಇಡೀ ದೇಶ ಸಂಭ್ರಮಪಡಬೇಕಾದ ವಿಷಯ.” ಎಂದಿದ್ದಾರೆ.

ಈ ಸುದ್ದಿ ಎಲ್ಲೆಡೆ ವೈರಲ್ ಆದ ಕೂಡಲೇ ಪಕ್ಷದಿಂದಲೇ ಆಕ್ಷೇಪಣೆಗಳು ಕೇಳಿಬಂದಿವೆ. ನಂತರ ಅವರ ಈ ಹೇಳಿಕೆಯ ಬಗ್ಗೆ ಕೇಳಿದಾಗ, ಪಶ್ಚಾತ್ತಾಪಪಡದ ಶಾಸಕರು, ನಾನು ಹೇಳಿದ್ದರಲ್ಲಿ ಆಕ್ಷೇಪಾರ್ಹ ಏನೂ ಇಲ್ಲ ಎಂದು ಹೇಳಿದ್ದಾರೆ.

“ಈಗ ಯಾರಾದರೂ ಯಾವುದೇ ಸಮಸ್ಯೆಯಿಲ್ಲದೆ ಕಾಶ್ಮೀರಿ ಹುಡುಗಿಯನ್ನು ಮದುವೆಯಾಗಬಹುದು. ಎಂದು ನಾನು ಹೇಳಿದ್ದು ಅಷ್ಟೆ ಮತ್ತು ಇದು ಸತ್ಯ. ಇದು ಕಾಶ್ಮೀರದ ಜನರಿಗೆ ಸ್ವಾತಂತ್ರ್ಯ. ಅದಕ್ಕಾಗಿಯೇ ನಾವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈಗ ಕಾಶ್ಮೀರಿಗಳು ಸ್ವಾತಂತ್ರ್ಯವನ್ನು ಪಡೆದಿದ್ದಾರೆ. “ಮೋದಿಜಿ ನಮ್ಮ ಕನಸನ್ನು ಈಡೇರಿಸಿದ್ದಾರೆ” ಎಂದು ವಿಕ್ರಮ್ ಸೈನಿ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಪ್ರದೇಶದ ಖತೌಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸೈನಿ, ಈ ಹಿಂದೆಯೂ, ಭಾರತದಲ್ಲಿ ಅಸುರಕ್ಷಿತರೆಂದು ಭಾವಿಸಿದವರಿಗೆ “ಬಾಂಬ್” ಹಾಕುವ ಬೆದರಿಕೆ ಹಾಕುವ ಮೂಲಕ ಕುಖ್ಯಾತಿಯನ್ನು ಗಳಿಸಿದ್ದರು.

“ಈ ದೇಶದಲ್ಲಿ ಅಸುರಕ್ಷಿತರಾದವರು ದೇಶ ವಿರೋಧಿಗಳು, ಅವರು ಇಲ್ಲಿ ವಾಸಿಸಲು ಅರ್ಹರಲ್ಲ. ನನಗೆ ಒಂದು ಸಚಿವಾಲಯವನ್ನು ನೀಡಿ ಮತ್ತು ನಾನು ಅವರಿಗೆ ಬಾಂಬ್‌ಗಳನ್ನು ಕಟ್ಟಿ ಅವುಗಳನ್ನು ಸ್ಫೋಟಿಸುತ್ತೇನೆ” ಎಂದು ಜನವರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿ ವಿವಾದಕ್ಕೀಡಾಗಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...