Homeರಾಜಕೀಯಅಪರಾ-ತಪರಾ: ಅಕೌಂಟಿಗೆ ಹಣ ಮತ್ತು ಕೌಂಟ್‌ಲೆಸ್ ಸುಳ್ಳು

ಅಪರಾ-ತಪರಾ: ಅಕೌಂಟಿಗೆ ಹಣ ಮತ್ತು ಕೌಂಟ್‌ಲೆಸ್ ಸುಳ್ಳು

- Advertisement -
ಮಲ್ಲಿ |
2014ರ ಲೋಕಸಭಾ ಚುನಾವಣೆಯ ಪ್ರಚಾರದಿಂದ ಇಲ್ಲಿವರೆಗೆ ‘ಅಕೌಂಟಿಗೆ ರೊಕ್ಕ’ ಎಂಬುದನ್ನು ನರೇಂದ್ರ ಮೋದಿ ಬಡಬಡಿಸುತ್ತಲೇ ಬಂದಿದ್ದಾರೆ. ಈ ವಿಷಯದಲ್ಲಿ ಕೌಂಟ್‌ಲೆಸ್ (ಎಣಿಸಲಾಗದಷ್ಟು!) ಸುಳ್ಳುಗಳನ್ನು  ‘ಸಚ್ಚಾ’ ಪ್ರಧಾನಿ ಹೇಳುತ್ತಲೇ ಬಂದಿದ್ದು, ಆದರೆ 2016ರ ನಂತರ ಕಪ್ಪುಹಣದ ವಿಷಯವನ್ನು ಡ್ರಾಪ್ ಮಾಡಿಬಿಟ್ಟರು!
ಆದರೆ ಅಕೌಂಟು ಎಂಬ ಪದ ಮಾತ್ರ ಅವರ ನಾಲಿಗೆ ಮೇಲೆ ಸೀಟ್ ರಿಸರ್ವ್ ಮಾಡಿಕೊಂಡು ಕೂತು ಬಿಟ್ಟಿದೆ.
ಮೊದಲಿಗೆ, 2014ರ ಚುನಾವಣಾ ಪ್ರಚಾರದಲ್ಲಿ, ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರ್ತೇನೆ, ಎಲ್ಲರ ಅಕೌಂಟಿಗೂ ೧೫ ಲಕ್ಷ ಹಾಕ್ತೇನೆ ಎಂದರು.
* ಕಪ್ಪುಹಣ ತರೋದು ಗೋಲ್ವಾಲ್ಕರಾಣೆಗೂ ಸಾಧ್ಯವಿಲ್ಲ ಎಂದು ಅರಿವಾಯಿತು. ತಾವೂ ಗೆದ್ದಿದ್ದು ಅಂಥದೇ ಹಣದಿಂದ ಅಲ್ವಾ ಅಂತಾ ಆ ಹಣದ ಮೇಲೆ ಕರುಣೆ ಉಕ್ಕಿತು, ಅಂತಹ ಹಣದಾತರ ಸೇವೆ ಮಾಡಲು ಶುರು ಮಾಡಿದರು.
* ’15 ಲಕ್ಷ ಹಾಕಬೇಕು ಅನಕೊಂಡಿದ್ದೆ. ಆದರೆ ಈ ದೇಶದ ಕೋಟ್ಯಂತರ ಬಡವರಿಗೆ ಬ್ಯಾಂಕ್ ಅಕೌಂಟೇ ಇಲ್ಲ ಎಂಬುದು ಗೊತ್ತಾಗಿತು. ಅದಕ್ಕೇ ಜನಧನ್ ಅಕೌಂಟು ಆರಂಭಿಸಿದೆ…’ ಎಂದರು.
ಈ ಅಕೌಂಟುಗಳಿಗೆ ಝೀರೋ ಅಕೌಂಟು ಎಂದೂ ಕರೆಯಲಾಗುತ್ತಿದೆ. ಹೆಸರು ಸರಿಯಾಗಿಯೇ ಇದೆ.
* ‘ಡಿಜಿಟಲ್ ಇಂಡಿಯಾ’ ಶುರುವಾದ ಮೇಲೆ ಡಿಜಿಟಲ್ಲಾಗಿಯೇ ಹಣ ಟ್ರಾನ್ಸ್ಫರ್ ಮಾಡೋ ಯೋಚನೆ ಬಂತಂತೆ. ಅಂದರೆ ಮುಟ್ಟಲಾಗದ, ತಟ್ಟಲೂ ಆಗದ ಡಿಜಿಟಲ್ ಹಣ!
* ಈಗ 2019ರ ಚುನಾವಣೆ ಬಂತಲ್ಲ, ಸಣ್ಣ ರೈತರ ಅಕೌಂಟುಗಳಿಗೆ ಅದರಲ್ಲೂ ಝೀರೋ ಅಕೌಂಟುಗಳಿಗೆ ದಿನಕ್ಕೆ 15 ರೂ. ಹಾಕೋದಾಗಿ ರೀಲು ಬಿಟ್ರು. ‘15 ಲಕ್ಷ ರೂ.’ದಲ್ಲಿನ ಲಕ್ಷ ಅಲಕ್ಷ್ಯಕ್ಕೊಳಗಾದ ಕತೆ ಹೀಗಿದೆ ನೋಡಿ!
ಈಗ ತಮ್ಮ ಸ್ವಂತ 15 ರೂ.ನಲ್ಲಿ ಒಂದು ಚಾ ಕುಡಿದು, ಎಲೆ-ಅಡಿಕೆ-ಸುಣ್ಣ-ತಂಬಾಕು ತಿಂದು ಮೋದಿ ಮಕಕ್ಕ  ಉಗಿಯಲು ರೈತರಷ್ಟೇ ಅಲ್ಲ, ನಿರುದ್ಯೋಗಿ ಯುವ ಜನರೂ ರೆಡಿಯಾಗಿದ್ದಾರೆ.
ರೈತರ ಆದಾಯ ದ್ವಿಗುಣ ಆಗೇ ಬಿಟ್ಟಿದೆ!
ಮೋದಿ ಮತ್ತೆ ಮತ್ತೆ ಹೇಳುವುದು ರೈತರ ಆದಾಯವನ್ನು ದ್ವಿಗುಣ ಮಾಡ್ತೀವಿ ಅಂತಾ. ಆದರೆ ಆ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡಲೇ ಇಲ್ಲ. ಆದರೆ ಒಂದರ್ಥದಲ್ಲಿ ಮೋದಿ ಕಾರಣದಿಂದಾಗಿ ರೈತರ ಆದಾಯ ದ್ವಿಗುಣಗೊಂಡಿದೆ:
ಉದಾಹರಣೆಗೆ: ಒಬ್ಬ ಸಣ್ಣ ರೈತನ ಸಾಲ ೫ ಲಕ್ಷ ಅಂತಾ ಇಟ್ಟುಕೊಳ್ಳಿ. ಅದನ್ನು ಹೀಗೂ ಹೇಳಬಹುದು: ‘ಆತನ/ಆಕೆಯ ಆದಾಯ  –5 ಲಕ್ಷ ರೂ (ಮೈನಸ್ 5 ಲಕ್ಷ ರೂ)’…..ಈಗ ಮೋದಿಯ  ಕೃಷಿ ವಿರೋಧಿ ನೀತಿಯಿಂದಾಗಿ ಆ ರೈತನ ಸಾಲ 10 ಲಕ್ಷಕ್ಕೆ ಏರಿದೆ. ಅಂದರೆ ಆ ರೈತನ ಆದಾಯ ಈಗ -10 ಲಕ್ಷ ರೂ!  ಆಯಿತಲ್ಲ ರೈತನ ಆದಾಯ ದ್ವಿಗುಣ!
                       ****
೨೦೧೪ರ ಚುನಾವಣಾ ಪ್ರಚಾರದಿಂದ ಇಲ್ಲಿವರೆಗೆ ಸುಳ್ಳುಗಳನ್ನೇ ಹೇಳುತ್ತ ಜನದ್ರೋಹಿ ಆಡಳಿತ ನೀಡಿದ, ಅಕೌಂಟೆಬಿಲಿಟಿಯೇ (ಹೊಣೆಗಾರಿಕೆ) ಇಲ್ಲದ ಈ ಮನುಷ್ಯನನ್ನು ಇನ್ನೂ ಹಾಡಿ ಹೊಗಳುವ ಭಕ್ತರಿದ್ದಾರಲ್ಲ, ಅವರಿನ್ನೂ ಮೋದಿಯ ಪೆಪ್ಪರಮೆಂಟು ಚೀಪುತ್ತಲೇ ಇದ್ದಾರೆ….
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...