Homeಕರ್ನಾಟಕಇಬ್ಬರಿಗೆ ಖಾತೆ ಹಂಚಿಕೆ: ಅದೂ ಒಂದು ಬಿಕ್ಕಟ್ಟೇ!

ಇಬ್ಬರಿಗೆ ಖಾತೆ ಹಂಚಿಕೆ: ಅದೂ ಒಂದು ಬಿಕ್ಕಟ್ಟೇ!

- Advertisement -
- Advertisement -

| ಮಲ್ಲನಗೌಡರ್ |

ಈ ಸಮ್ಮಿಶ್ರ ಸರ್ಕಾರದ ಪ್ರತಿ ಹೆಜ್ಜೆಯಲ್ಲೂ ಬಿಕ್ಕಟ್ಟುಗಳೇ ಇವೆ. ನೇರವಾದ, ಸುಲಲಿತವಾಗಿ ಯಾವುದೂ ಆಗುತ್ತಿಲ್ಲ. ಮೈತ್ರಿ ಪಕ್ಷಗಳ ನಾಯಕರು ದಿನವೂ ರಾಜಕೀಯದ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಂಡಿರುವುದರಿಂದ ಇಬ್ಬರು ಹೊಸ ಸಚಿವರಿಗೆ ಖಾತೆ ನೀಡುವುದು ಒಂದು ಸಣ್ಣ ಬಿಕ್ಕಟ್ಟೇ ಆಗಿರುವಂತಿದೆ.

ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸೇರಿದ ಇಬ್ಬರು ಪಕ್ಷೇತರರಿಗೆ 11-12 ದಿನವಾದರೂ ಖಾತೆ ಹಂಚಿಕೆ ಆಗಿಲ್ಲ. ಈಗ ವಿ. ಶಂಕರ್ ಕಾಂಗ್ರೆಸ್ ಸದಸ್ಯರು. ಅವರಿಗೆ ಕಾಂಗ್ರೆಸ್ ಪಾಲಿನ ಖಾತೆಯನ್ನೇ ಕೊಡದೇ ಬೇರೆ ದಾರಿಯೇ ಇಲ್ಲದಂತಾಗಿದೆ. ಮುಳಬಾಗಿಲು ಪಕ್ಷೇತರ ಶಾಸಕ ಎಚ್. ನಾಗೇಶರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯೇ ಬೇಕೆಂದು ಎಂದು ಪಟ್ಟು ಹಿಡಿದಿದ್ದಾರೆ.

ಆರಂಭದಲ್ಲಿ ತಾವು ನಿಭಾಯಿಸಿದ್ದ ಅರಣ್ಯ ಖಾತೆಯೇ ಬೇಕು ಎಂದು ಶಂಕರ್ ಪಟ್ಟು ಹಿಡಿದಿದ್ದಾರೆ. ರಮೇಶ ಜಾರಕಿಹೊಳಿ ನಿಭಾಯಿಸಿದ್ದ ಪೌರಾಡಳಿತ ಖಾತೆಯನ್ನು ನಂತರ ಕಾಗ್ರೆಸ್‍ನ ಸಿ.ಎಸ್ ಶಿವಳ್ಳಿ ನಿರ್ವಹಿಸಿದ್ದರು. ಅವರ ನಿಧನದ ನಂತರ ಖಾಲಿ ಇರುವ ಆ ಸ್ಥಾನವನ್ನು ಒಪ್ಪಲು ಶಂಕರ್ ಸಿದ್ದರಿಲ್ಲ. ಈಗ ಅರಣ್ಯ ಖಾತೆಗೆ ಪ್ರಬಲ ನಾಯಕ ಕಾಂಗ್ರೆಸ್‍ನ ಸತೀಶ ಜಾರಕಿಹೊಳಿ ಸಚಿವರಿದ್ದು ಅವರಿಂದ ಈ ಖಾತೆ ಕಿತ್ತು ಕೊಡಲೂ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‍ನ ಹಿರಿಯ ನಾಯಕರೂ ಒಪ್ಪುವುದಿಲ್ಲ. ಶಂಕರ್‍ಗೆ ಅರಣ್ಯ ಸಚಿವ ಖಾತೆ ನೀಡಲು ಒಂದು ಮಟ್ಟಿನ ಪುನರಾರಚನೆ ಮಾಡಬೇಕು ಇದರಿಂದ ಸಚಿವರಲ್ಲಿ ಖಾತೆಗಾಗಿ ಮತ್ತೆ ಸ್ಪರ್ಧೆ ಏರ್ಪಡಬಹುದು. ಅದರಿಂದಾಗಿ ಶಂಕರ್ ಅವರು ಪೌರಾಡಳಿತ ಖಾತೆ ಒಪ್ಪದೇ ಬೇರೆ ದಾರಿಯೇ ಇಲ್ಲ. ಇಂಥದ್ದೇ ಖಾತೆ ಎಂದು ಒತ್ತಾಯಿಸುತ್ತಾ ಕೂತರೆ ಇನ್ನಷ್ಟು ದಿನ ಖಾತೆ ರಹಿತ ಸಚಿವರಾಗಿಯೇ ಮುಂದುವರೆಯಬೇಕಾಗುತ್ತೆ ಎಂದು ಸಿಎಂ ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಬಿಎಸ್‍ಪಿಯ ಎನ್. ಮಹೇಶ್ ಸಚಿನ ಸ್ಥಾನಕ್ಕೆ ರಾಜಿನಾಮೆ ನೀಡಿದಾಗಿನಿಂದಲೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಖಾಲಿಯೇ ಇದೆ. ಸದ್ಯ ಅದನ್ನೇ ತಮಗೆ ನೀಡಲಿ ಎಂದು ನಾಗೇಶ ಪಟ್ಟು ಹಿಡಿದಿದ್ದಾರೆ. ಜೆಡಿಎಸ್ ಪಾಲಿನ ಖಾತೆಗಳಲ್ಲಿಯೇ ಮಹೇಶರಿಗೆ ನೀಡಲಾಗಿತ್ತು. ಈಗ ನಾಗೇಶರಿಗೆ ಕೊಡಲು ಹೋದರೆ, ಜೆಡಿಎಸ್‍ನ ಯಾವುದಾದರೂ ಸಚಿವರು ತಮಗೆ ಅದನ್ನು ಕೊಡಿ ಎಂದು ಬೇಡಿಕೆ ಇಡಬಹುದೇನೋ. ಬಹಳಷ್ಟು ಸಮಯದಿಂದ ಖಾಲಿಯೇ ಇರುವ ಶಿಕ್ಷಣ ಖಾತೆಯ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಯೇ ಇಲ್ಲ. ಶಾಲೆಗಳು ಪುನರಾರಂಭವಾದರೂ ಅಧಿಕಾರಿಗಳ ನಿರ್ದೇಶನದಂತೆ ಎಲ್ಲವೂ ನಡೆಯುತ್ತಿದೆ. ನಾಗೇಶರಿಗೆ ಶಿಕ್ಷಣ ಖಾತೆ ಕೊಡದಿದ್ದರೆ, ಕುಮಾರಸ್ವಾಮಿ ತಮ್ಮಲ್ಲೇ ಇರವ ಹಲವು ಖಾತೆಗಳ ಪೈಕಿ ಒಂದನ್ನು ನೀಡಬೇಕಾಗುತ್ತದೆ.

 

ಶಂಕರ್ ಮತ್ತು ನಾಗೇಶರನ್ನು ಸಚಿವರನ್ನಾಗಿ ಮಾಡಿದ ಕಾಂಗ್ರೆಸ್‍ನ ನಾಯಕರಿಗೆ ಖಾತೆಗಳ ಬಗ್ಗೆ ಗಮನ ಹರಿಸಲು ಪೂರೈಸುತ್ತಿಲ್ಲ. ಅತೃಪ್ತ ಶಾಸಕರನ್ನು ಓಲೈಸುವ ಯತ್ನದಲ್ಲೂ ಕಾಂಗ್ರೆಸ್‍ಗೆ ಆಸಕ್ತಿ ಹೋದಂತಿದೆ. ಚಿಂಚೋಳಿಯ ಗೆಲುವಿನಿಂದ ಒಂದು ಸೀಟು ಹೆಚ್ಚು ಕಡಿಮೆ ಮಾಡಿಕೊಂಡಿರುವ ಬಿಜೆಪಿ ಸದಕ್ಕೆ ಶಂಕರ್, ನಾಗೇಶರ ಮೇಲೆ ಅಶೆ ಬಿಟ್ಟಿದೆ ಎಂಬುದು ಸತ್ಯ. ರೋಶನ್ ಬೇಗ್‍ರಿಂದ ಖಾಲಿಯಾದ ಸ್ಥಾನವನ್ನು ಶಂಕರ್ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಸಮಾಧಾನ ಹೊಂದಿದೆ.

ಸತೀಶ್ ಜಾರಕಿಹೊಳಿ

ಅರಣ್ಯ ಇಲಾಖೆಯ ನೇಮಕಾತಿಗಳಲ್ಲಿ ಶೇ 30ರಷ್ಟನ್ನು ಅರಣ್ಯವಾಸಿಗಳಿಗೆ ಮೀಸಲು ಇರುವಂತೆ ಕ್ರಮ ಕೈಗೊಂಡ ಸತೀಶ ಜಾರಕಿಹೊಳಿ ಆ ಖಾತೆಯನ್ನು ಬಿಟ್ಟು ಕೊಡಲಾರರು. ಹೀಗಾಗಿ ಶಂಕರ್ ಅನಿವಾರ್ಯವಾಗಿ ಪೌರಾಡಳಿತ ಖಾತೆ ಒಪ್ಪಿಕೊಳ್ಳಲೇ ಬೇಕಾಗಬಹುದು. ಸದ್ಯಕ್ಕೆ ಮೈತ್ರಿಯ ನಾಯಕರಿಗೆ ಶಂಕರ್ ಮತ್ತು ನಾಗೇಶರ ಖಾತೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಇನ್ನಷ್ಟು ಅವಧಿಗೆ ಶಂಕರ್ ಮತ್ತು ನಾಗೇಶ ಖಾತೆರಹಿತ ಸಚಿವರಾಗಿಯೇ ಮುಂದುವರೆಯಬೇಕು ಅಥವಾ ಈಗ ಸೂಚಿಸಿದ ಖಾತೆಗಳನ್ನು ಒಪ್ಪಿಕೊಳ್ಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ರೇಟ್ ನಿಕೋಬಾರ್ : ಕಾರ್ಪೊರೇಟ್ ಹಿತಾಸಕ್ತಿಗೆ ಬಲಿಯಾಗುತ್ತಿರುವ ಪರಿಸರ, ಆದಿವಾಸಿಗಳ ಅಸ್ತಿತ್ವ

ಬಂಗಾಳಕೊಲ್ಲಿಯಲ್ಲಿರುವ ಭಾರತದ ದಕ್ಷಿಣ ತುದಿಯ ದ್ವೀಪದ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 72 ಸಾವಿರದಿಂದ 81 ಸಾವಿರ ಕೋಟಿ ರೂಪಾಯಿ ವೆಚ್ಚದ ’ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ’ಯನ್ನು ರೂಪಿಸಿದೆ.ಈ...

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...