Homeರಾಜಕೀಯಉಡುಪಿಯ ಮರಳು ಮಾಫಿಯಾಕ್ಕೆ ಅರಳು-ಮರಳು ಪೇಜಾವರರ ಕೃಪಾಶೀರ್ವಾದ!

ಉಡುಪಿಯ ಮರಳು ಮಾಫಿಯಾಕ್ಕೆ ಅರಳು-ಮರಳು ಪೇಜಾವರರ ಕೃಪಾಶೀರ್ವಾದ!

- Advertisement -
- Advertisement -

 ಶುದ್ಧೋಧನ |

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಮರಳುಗಾರಿಕೆ ಖತರ್‍ನಾಕ್ ಮಾಫಿಯಾ ಪಾರುಪತ್ಯದಲ್ಲಿದೆ. ಎತ್ತಿಂದೆತ್ತ ಲೆಕ್ಕ ಹಾಕಿ ತಾಳೆ ನೋಡಿದರೂ ಇದೊಂದು ಸಾವಿರಾರು ಕೋಟಿ ರೂಪಾಯಿಗಳ ಕಡುಕಪ್ಪು ದಂಧೆ ಎಂಬುದು ಖಾತ್ರಿಯಾಗುತ್ತದೆ. ಹೀಗಾಗಿ ಈ ಮಾಫಿಯಾಕ್ಕೆ ಎಂ.ಪಿ-ಎಮ್ಮೆಲ್ಲೆ-ಮಂತ್ರಿ-ಪೇಜಾವರರಂಥ ಸ್ವಾಮೀಜಿಗಳ ಕೃಪಾಶೀರ್ವಾದವೂ ಸಿಕ್ಕಿದೆ. ಮರಳಿನ ಸುತ್ತ ನಡೆಯುತ್ತಿರುವ ಅನಾಚಾರ, ಅವ್ಯವಹಾರ, ಅವಾಂತರ ಉಡುಪಿ ಜಿಲ್ಲೆ ಮಟ್ಟಿಗೆ ಒಂಚೂರು ವಿಭಿನ್ನ. ಉಡುಪಿಯ ಮರಳು ಭಾನ್ಗಡಿಯಲ್ಲಿ ಜಿಲ್ಲೆಯ ಅಷ್ಟೂ ಅಕ್ಕಲ್‍ಗೇಡಿ ಬಿಜೆಪಿ ಶಾಸಕ-ಸಂಸದರು ಮತ್ತವರ ರಾಜಗುರು ಪೇಜಾವರ ಸ್ವಾಮಿ ಎಂಟ್ರಿ ಹೊಡೆದಿರುವುದರಿಂದ ಚಿತ್ರ-ವಿಚಿತ್ರ ಸೀನ್ ಸೃಷ್ಟಿಯಾಗಿಬಿಟ್ಟಿವೆ!
ಉಡುಪಿ ಜಿಲ್ಲೆ ಉಪ್ಪು ನೀರಿನ ಸಿಆರ್‍ಝಡ್ ಮರಳುಗಾರಿಕೆ ಮತ್ತು ಸಿಹಿ ನೀರಿನ ನಾನ್ ಸಿಆರ್‍ಝಡ್ ಮರಳುಗಾರಿಕೆಯಲ್ಲಿ ಮಾಫಿಯಾ ಹಾವಳಿ ಮಿತಿಮೀರಿ ಹೋಗಿತ್ತು. ಮರಳು ರೌಡಿಗಳು ಲಂಗುಲಗಾಮಿಲ್ಲದೆ ಪುಂಡಾಟ ಶುರುಹಚ್ಚಿಕೊಂಡಿದ್ದರು. ಎರಡು-ಮೂರು ಸಾವಿರಕ್ಕೆ ಮನೆ ಬಾಗಿಲಿಗೆ ಬಂದು ಬೀಳುತ್ತಿದ್ದ ಲೋಡ್ ಮರಳಿಗೆ ಬರೋಬ್ಬರಿ ಇಪ್ಪತ್ತೈದು ಸಾವಿರ ಆಗಿಬಿಟ್ಟಿತು! ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿಗೆ ಹೋಗಿದ್ದ ನಿಷ್ಠೂರ ನಿಯತ್ತಿನ ಜಿಲ್ಲಾಧಿಕಾರಿಣಿ ಪ್ರಿಯಾಂಕ ಮೇರಿ ಮೇಲೆ ಹಲ್ಲೆಗೂ ಪ್ರಯತ್ನ ನಡೆದುಹೋಗಿತ್ತು! ಯಾವಾಗ ಸುಪ್ರೀಂ ಕೋರ್ಟ್ ಹಸಿರು ನ್ಯಾಯಾಧಿಕರಣದ ಮುಂದೆ ಅಕ್ರಮ ಮರಳುಗಾರಿಕೆ ವಿರುದ್ಧ ಅಹವಾಲು ಸಲ್ಲಿಕೆಯಾಯ್ತೋ ಆಗ ಕಳ್ಳರಿಗೆ ಕಡಿವಾಣ ಬಿತ್ತು. ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯ ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧ ಮಾಡಬೇಕಾಗಿ ಬಂತು.
ಹೊಸ ಕಾನೂನಿನಿಂದ ಅಕ್ರಮ ಮರಳುಗಾರಿಕೆ ಕೊಟ್ಟಿದ್ದ ಧಾರಾಳ ಲೈಸೆನ್ಸ್ ಪದ್ದತಿ ನಿಂತಿತು. ಹಸಿರು ಪೀಠದಲ್ಲಿ ಕೇಸು ನಡೆಯುತ್ತಿದ್ದರಿಂದ ಮರಳುಗಾರಿಕೆಗೆ ಒಂದಿಷ್ಟು ಕಾಲ ನಿಷೇಧವೂ ಹಾಕಲಾಗಿತ್ತು. ಮಾಫಿಯಾದ ಕಳ್ಳ ಮರಳು ದಾಸ್ತಾನು ಖಾಲಿಯಾಗುತ್ತಿದ್ದಂತೆಯೇ ಕೃತಕ ಹಾಹಾಕಾರ ಶುರುವಾಯ್ತು. ಬಡವರಿಗೆ ಮನೆ ಕಟ್ಟಿಕೊಳ್ಳಲು ಮರಳು ಸಿಗುತ್ತಿಲ್ಲ; ಪಾಪದ ಮರಳು ಕಾರ್ಮಿಕರು ದಂಧೆಯಿಲ್ಲದೆ ಉಪವಾಸ-ವನವಾಸ ಬಿದ್ದಿದ್ದಾರೆಂದು ಶಾಸಕ ರಘುಪತಿ ಭಟ್ಟ, ಎಡಬಿಡಂಗಿ ಸಂತ ಪೇಜಾವರ ಸ್ವಾಮಿ ಗುರು-ಶಿಷ್ಯ ಜೋಡಿ ನೆಲ-ಮುಗಿಲು ಒಂದು ಮಾಡಿ ತುಂಡು ಗುಪ್ವಳ ಹೊಡೆಯತೊಡಗಿತು. ಬೇಕಂತಲೇ ಜಿಲ್ಲಾಧಿಕಾರಿಣಿ ಪ್ರಿಯಾಂಕ ಮೇರಿ ಮರಳುಗಾರಿಕೆಗೆ ಅವಕಾಶ ಕೊಡುತ್ತಿಲ್ಲ. ಆಕೆ ರಾಜಿನಾಮೆ ಕೊಡಬೇಕು; ಇಲ್ಲದಿದ್ದರೆ ಸರ್ಕಾರ ಎತ್ತಂಗಡಿ ಮಾಡಬೇಕೆಂದು ಎಡವಟ್ಟು ಎಮ್ಮೆಲ್ಲೆ ರಘುಪತಿ ಭಟ್ಟ ಬೊಬ್ಬಿರಿದು ಹೀರೋ ಆಗಲು ಹವಣಿಸಿದ್ದೇ ಹವಣಿಸಿದ್ದು. ಇದ್ಯಾವುದಕ್ಕೂ ಖಡಕ್ ಜಿಲ್ಲಾಧಿಕಾರಿಣಿ ಪ್ರಿಯಾಂಕ ಸೊಪ್ಪುಹಾಕಲಿಲ್ಲ. ಪಕ್ಕದ ಮಂಗಳೂರಿನ ಬೆಂಕಿ ಬ್ರಾಂಡಿನ ಸಂಸದ ನಳಿನ್‍ಕುಮಾರ್ ಕಟೀಲ್, ಕಾರ್ಕಳದ ಭಜರಂಗಿ ಶಾಸಕ ಸುನೀಲ್‍ಕುಮಾರ್, ಕಾಪುದ ಮಂಡೆಯಿಲ್ಲದ ಲಾಲಾಜಿ ಮೆಂಡನ್, ಬೈಂದೂರಿನ ಸಿಡಿಮಿಡಿ ಮುದುಕ ಸುಕುಮಾರ್ ಶೆಟ್ಟಿ ಮತ್ತು ಕುಂದಾಪುರದ ಆಜನ್ಮ ಬ್ರಹ್ಮಚಾರಿ ಹಾಲಾಡಿ ಶ್ರೀನಿವಾಸ್ ಶೆಟ್ಟಿಯನ್ನು ಬೆನ್ನಿಗಿಟ್ಟುಕೊಂಡು ರಘುಪತಿ ಭಟ್ಟ ಡಿಸಿ ಕಛೇರಿ ಬಳಿ ಆಹೋರಾತ್ರಿ ಧರಣಿ ಡ್ರಾಮಾ ಎಂಟು ದಿನ ನಡೆಸಿದ. ಗಣಿ ಇಲಾಖೆಯ ಕಾರ್ಯದರ್ಶಿ ಕೊಠಾರಿಯೂ ಬಂದು “ಸಾಂತ್ವನ” ಹೇಳುತ್ತಿದ್ದಂತೆಯೇ ಧರಣಿ ಟೆಂಟು ಕಿತ್ತುಕೊಂಡು ಹೋದ ಸಂಸದ-ಶಾಸಕರ ಅಸಲಿಯತ್ತು ಜಿಲ್ಲೆಯ ಜನರಿಗೀಗ ಅರ್ಥವಾಗಿ ಹೋಗಿದೆ.
ಬಡವರ ಮರಳು ಕಾರ್ಮಿಕರ ಹಿತೈಷಿಯಂತೆ ಪೋಸು ಕೊಡುತ್ತಿರುವ ರಘುಪತಿ ಭಟ್ಟ ಹುಸಿ ಹೋರಾಟದ ಮೂಲ ಉದ್ದೇಶ ಮರಳು ಮಾಫಿಯಾದ ಲೂಟಿಗೆ ನೆರವಾಗುವುದಷ್ಟೇ. ಕಳೆದ ಅಸೆಂಬ್ಲಿ ಇಲೆಕ್ಷನ್ ಹೊತ್ತಲ್ಲಿ ಈ ಭಟ್ಟನಿಗೆ ಮರಳು ಮಾಫಿಯಾ ದೊಡ್ಡ ಗಂಟು ಕೊಟ್ಟಿತ್ತು. ಅಂದು ಉಡುಪಿ ಶಾಸಕನೂ, ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದ ಪ್ರಮೋದ್ ಮಧ್ವರಾಜ್ ಎಂಬ ಮೊದ್ಮಣಿ ವಿರುದ್ಧ ಮರಳು ಮಾಫಿಯಾ ಮುರಕೊಂಡು ಬಿದ್ದಿತ್ತು. ಪ್ರಮೋದ್‍ನ ಮತ್ಸ್ಯೋದ್ಯಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಉದಯ ಸುವರ್ಣ ಅಕ್ರಮ ಮರಳುಗಾರಿಕೆ ಬಗ್ಗೆ ಹಸಿರು ನ್ಯಾಯಾಧೀಕರಣಕ್ಕೆ ದೂರು ಸಲ್ಲಿಸಿದ್ದರು. ಹಾಗಾಗಿ ಇದು ಪ್ರಮೋದರದೇ ಕಿತಾಪತಿ ಎಂಬ ತರ್ಕಕ್ಕೆ ಬಿದ್ದಿದ್ದ ಮರಳು ಮಾಫಿಯಾ ಆತನ ಎದುರಾಳಿ ರಘುಪತಿ ಭಟ್ಟನಿಗೆ ಎಲೆಕ್ಷನ್‍ನಲ್ಲಿ ಫೈನಾನ್ಸ್ ಮಾಡಿತ್ತು. ಮರಳು ಮಾಫಿಯಾ ಭಟ್ಟನಿಂದ ಈಗದರ ಕೂಲಿಯನ್ನು ಪಡೆಯಲು ಯತ್ನಿಸುತ್ತಿದೆ.

raghupathi bhat, BJP mla

ಮರಳುಗಾರಿಕೆ ನಿಂತಿರುವುದು ಕೇಂದ್ರ ಸರ್ಕಾರದ ಕಾನೂನು-ನಿಯಮದಿಂದ ಎಂಬುದು ಮರೆಮಾಚಿ ಪ್ರಾಮಾಣಿಕ ಜಿಲ್ಲಾಧಿಕಾರಿಣಿ ಮತ್ತು ಕಾಂಗ್ರೆಸ್ ಮೇಲೆ ಪೆದ್ದು ಆರೋಪ ಹೊರಿಸುತ್ತಿರುವ ಭಟ್ಟ ಮರಳು ತೆಗೆಯುತ್ತೇವೆಂದು ಪೊಕ್ಕು ಪೌರುಷ ತೋರಿಸುತ್ತಿದ್ದಾನೆ. ಇನ್ನು ಸಂಸದ ನಳಿನ್ ತನ್ನದೇ ಪಕ್ಷದ ಕೇಂದ್ರ ಸರ್ಕಾರದ ಪರಿಸರ ಮಂತ್ರಿಯ ಮೂಗು ಹಿಡಿದು ತನಗೆ ಬೇಕಾದಂತೆ “ಮರಳು ನೀತಿ” ಮಾಡಿಕೊಳ್ಳಬಹುದಾದರೂ, ಆ ತಾಕತ್ತಿಲ್ಲದ ಆತ ರಾಜ್ಯ ಸರ್ಕಾರ, ಜಿಲ್ಲಾಡಳಿತದತ್ತ ಬೆಟ್ಟು ತೋರಿಸುತ್ತಾ ತನ್ನತ್ತಲೇ ಇತರ ಮೂರು ಬೆರಳುಗಳನ್ನು ತಿರುಗಿಸಿಕೊಂಡಿದ್ದಾನೆ.
ಕಳೆದ ವರ್ಷ ಈ ಮರಳು ಮಾಫಿಯಾ ಎಂಥ ಹಗಲು ದರೋಡೆ ಮಾಡಿದೆ, ಎಂತೆಂಥ ಗೂಂಡಾಗಿರಿ ಮಾಡಿದೆ. ಬಡವರಿಗೆ ಮರಳು ಸಿಗದಂತೆ ಮಾಡಿ ಮಲ್ಟಿ ಎಕ್ಸಲ್ ಲಾರಿಗಳಲ್ಲಿ ಮರಳು ತುಂಬಿ ಯಾವ್ಯಾವ ಜಿಲ್ಲೆಗೆ-ರಾಜ್ಯಕ್ಕೆ ಕಳಿಸಿದೆ ಎಂಬುದೆಲ್ಲಾ ಬಿಜೆಪಿ ಶಾಸಕ, ಸಂಸದರಿಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಪೋಸು ಕೊಡುತ್ತಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ 9,67,179 ಮೆಟ್ರಿಕ್ ಟನ್ ಮರಳು ಎತ್ತಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಇದರ ದುಪ್ಪಟ್ಟು ಮರಳು ತೆಗೆಯಲಾಗಿದೆ. ಇದರಲ್ಲಿ ಶೇಕಡ ಹದಿನೈದರಷ್ಟು ಉಡುಪಿ ಜಿಲ್ಲೆಯವರಿಗೆ ಮನೆ ಕಟ್ಟಲು ಸಿಕ್ಕಿಲ್ಲ!
ಉಳಿದ ಮರಳನ್ನು ಪ್ರತಿ ಲೋಡ್‍ಗೆ ಇಪ್ಪತ್ತೈದು ಸಾವಿರದಂತೆ ಬೇರೆ-ಬೇರೆ ಜಿಲ್ಲೆಗೆ ಕಳ್ಳಸಾಗಾಣಿಕೆ ಮಾಡಲಾಗಿದೆ. ಕಳೆದ ಒಂದೇ ವರ್ಷದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬರೋಬ್ಬರಿ ಹದಿನಾಲ್ಕುವರೆ ಸಾವಿರ ಕೋಟಿ ರೂಪಾಯಿ ಮರಳಿನ ದಂಧೆ ನಡೆದಿದೆಯೆಂದು ಪರಿಸರ ಹೋರಾಟಗಾರರು ಅಂದಾಜಿಸಿದ್ದಾರೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಜಿಲ್ಲೆಯಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿದೆ. ಆದರೆ ಮೀನುಗಾರಿಕೆ ದೋಣಿಗಳಿಗೆ ಗಂಡಾಂತರಕಾರಿಯಾದ ನದಿಯೊಳಗಿನ ಮರಳು ದಿಬ್ಬ ತೆಗೆಯಲು ಶರತ್ತಿನ ಅವಕಾಶ ನೀಡಲಾಗಿದೆ. ಮರಳಿನ ದಿಬ್ಬಗಳನ್ನು ನೀರಿನ ಮೇಲ್ಮಟ್ಟದಿಂದ ಒಂದು ಮೀಟರ್ ಆಳದವರೆಗಷ್ಟೇ ತೆರವುಗೊಳಿಸಲು ಸಾಂಪ್ರದಾಯಿಕ ಮರಳುಗಾರಿಕೆ ಕಸುಬಿನವರಿಗೆ ಪರವಾನಗಿ ನೀಡಲು ಹೇಳಿದೆ.
ಈ ಅವಕಾಶ ಬಳಸಿಕೊಂಡು ಮರಳು ಮಾಫಿಯಾ ನೀರಿನ ಮೇಲ್ಮಟ್ಟದಿಂದ 25-30 ಅಡಿ ಆಳದವರೆಗೆ ಮರಳು ತೆಗೆದಿದೆ. ಕೇಂದ್ರ ಪರಿಸರ ಇಲಾಖೆಯ ನಿಯಮದಂತೆ ಮರಳು ಕಸುಬಿನವರು ನದಿಯಲ್ಲಿ ಮುಳುಗಿ ಬುಟ್ಟಿಯಲ್ಲಿ ಮರಳು ತುಂಬಿ ನಾಡದೋಣಿಗೆ ಹಾಕಬೇಕು. ಆದರೆ ಮರಳಿನ ದಿಬ್ಬ ತೆರವು ಮಾಡುವಾಗ ದೊಡ್ಡ-ದೊಡ್ಡ ಫೈಬರ್, ಕಬ್ಬಿಣದ ದೋಣಿ ಬಳಸಲಾಗಿದೆ; ಜೆಸಿಬಿ, ಜರಡಿಯಿಂದ ಮರಳು ಲೂಟಿ ಮಾಡಲಾಗಿದೆ. ಹಸಿರು ಪೀಠ ಮರಳು ದಿಬ್ಬ ತೆರವುಗೊಳಿಸಲು ಸಾಂಪ್ರದಾಯಿಕ ಮರಳು ಕರ್ಮಚಾರಿಗಳಿಗಷ್ಟೇ ಲೈಸೆನ್ಸ್ ಕೊಡಬೇಕೆಂದು ಹೇಳಿದೆ. ಆದರೆ ಮರಳು ಕಸುಬು ಎಂದೂ ಮಾಡದ ದುಡ್ಡಿನ ಕುಳಗಳು ಅಕ್ರಮವಾಗಿ ಪರವಾನಗಿ ಪಡೆದಿದ್ದಾರೆ. ಮಾಫಿಯಾ ಬಿಹಾರ, ಉತ್ತರ ಪ್ರದೇಶದ ಕೂಲಿಗಳನ್ನು ತಂದು ದೇಖಾದಂಧೆ ನಡೆಸುತ್ತಿದೆ.
ತಾವು ಮಾತ್ರ ದೇಶೋದ್ಧಾರಕರು ದೇಶಭಕ್ತರೆಂದು ಬೊಬ್ಬಿರಿಯುವ ಬಿಜೆಪಿ ಭೂಪರಿಗೆ ಮರಳು ಕಳ್ಳದಂಧೆಯಲ್ಲಿ ಸಿಗುವ ಪಾಲು ಎಷ್ಟು? ಹಸಿರು ನ್ಯಾಯಪೀಠದ ಆದೇಶ ಉಲ್ಲಂಘಿಸಿ ಮರಳು ಕಳ್ಳರ ನರವಿಗೆ ಜಿಲ್ಲಾಧಿಕಾರಣಿ ಬರುವಂತೆ ಮಾಡಲೆಂದೇ ಶಾಸಕ ರಘುಪತಿ ಭಟ್ಟ, ಪೇಜಾವರ ಸ್ವಾಮಿ ಬಳಗ ಧರಣಿ ತಂತ್ರಗಾರಿಕೆ ಮಾಡಿತ್ತಲ್ಲವಾ? ಇಂಥ ಪ್ರಶ್ನೆಗಳೀಗ ಉಡುಪಿ ಜಿಲ್ಲೆಯ ಜನರನ್ನು ಕಾಡಲಾರಂಭಿಸಿವೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...