HomeUncategorizedಗದಗ್ ನಲ್ಲಿ ನಡೆದ ಕಲಾಶಿಬಿರದಲ್ಲಿ ಯುದ್ಧ ಮತ್ತು ಸ್ವಾತಂತ್ರ್ಯ: ಹಿಟ್ಲರ್‍ಗೆ ಪಿಕಾಸೋ ಮುಖಾಮುಖಿ

ಗದಗ್ ನಲ್ಲಿ ನಡೆದ ಕಲಾಶಿಬಿರದಲ್ಲಿ ಯುದ್ಧ ಮತ್ತು ಸ್ವಾತಂತ್ರ್ಯ: ಹಿಟ್ಲರ್‍ಗೆ ಪಿಕಾಸೋ ಮುಖಾಮುಖಿ

- Advertisement -
- Advertisement -

| ಮಲ್ಲನಗೌಡರ್ |
ಇಲ್ಲಿ ಫ್ಯಾಸಿಸಂ ಮತ್ತು ಯುದ್ಧಗಳಿಗೆ ಮಾನವೀಯತೆ ಮತ್ತು ಅಂತ:ಕರಣ ಮುಖಾಮುಖಿಯಾಗುತ್ತಿದೆ,,,, ದೇಶದ ಜನರ ಸಂಕಟವನ್ನು ಕೆಲವೇ ಗೆರೆಗಳ ಮೂಲಕ ಮನದಾಳಕ್ಕೆ ತಟ್ಟಿಸಿ ಎಚ್ಚರಿಸುವ ಯತ್ನ ನಡೆದಿದೆ.

ಗದಗಿನಲ್ಲಿ ಇವತ್ತು ಫ್ಯಾಸಿಸ್ಟ್ ಹಿಟ್ಲರ್‍ಗೆ ಜೀವಪರ ನಿಲುವಿನ ಕಲಾವಿದ ಪಿಕಾಸೋ ಮುಖಾಮುಖಿಯಾಗಿ ಗೆದ್ದಿದ್ದಾರೆ. ಮೇ 4, 5 ರಂದು ಗದಗಿನಲ್ಲಿ ನಡೆಯುತ್ತಿರುವ 6ನೇ ಮೇ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ, ಪೂರಕವಾಗಿ ಇಂದು ಚಿತ್ರಕಲಾ ಶಿಬಿರದ ಚಾಲನೆಯಾಗಿದೆ.

ಹೋರಾಟಕ್ಕೆ ಕತ್ತಿ, ಚೂರಿ, ಬಂದೂಕೂ ಬೇಕಿಲ್ಲ, ಸಂವಿಧಾನವೇ ನಮ್ಮ ಹೋರಾಟದ ಅಸ್ಸ್ತ್ರ ಎಂದು ಶಿಬಿರಕ್ಕೆ ಚಾಲನೆ ನೀಡಿದ ಖ್ಯಾತ ಕಲಾವಿದ ರಾ. ಸೂರಿ ಹೇಳಿದರು. ಅವರು ಹೇಳಿದ್ದಕ್ಕಿಂತ ಹೆಚ್ಚಿನದನ್ನು ಅವರು ಬಿಡಿಸಿದ ಚಿತ್ರ ಹೇಳುತ್ತಿತ್ತು! ಕಲೆಯ ಶಕ್ತಿಯೇ ಅದಲ್ಲವೇ?

ಹಿಟ್ಲರ್ ಬಂದೂಕು ಗಿ/s ಪಿಕಾಸೋ ಚಿತ್ರ!
ಮೇ ಸಾಹಿತ್ಯ ಸಮ್ಮೇಳನಕ್ಕೆ ಪೂರಕವಾಗಿಯೇ ನಡೆದಿರುವ ಈ ಕಲಾ ಶಿಬಿರದಲ್ಲಿ ಹಿಟ್ಲರ್ ಬಂದಿದ್ದು ಆತನಿಗೆ ಎದುರಾಗಿ ಕಲಾವಿದ ಪಿಕಾಸೋ ನಿಂತಿದ್ದು ಆಶ್ಚರ್ಯವೇನೂ ಅಲ್ಲ. ಈ ಸಲದ ಸಮ್ಮೇಳನದ ಥೀಮೇ ಭ್ರಮಾತ್ಮಕ ಭಾರತ ಗಿ/s ವಾಸ್ತವ ಭಾರತ… ಅಂದರೆ ಅಭಿವೃದ್ಧಿ ಭಾರತ: ಕವಲು ದಾರಿಗಳ ಮುಖಾಮುಖಿ…

ಶಿಬಿರಕ್ಕೆ ಚಾಲನೆ ನೀಡಿದ ರಾ. ಸೂರಿ ಸಂವಿಧಾನದ ಮಹತ್ವದ ಕುರಿತು ಬಿಡಿಸಿದ ಚಿತ್ರ ಸಾಕಷ್ಟು ಸಂಚಲನೆ ಉಂಟು ಮಾಡಿತು. ನಂತರ ಮಾತಾಡಿದ ಪ್ರೇಮಾ ಹಂದಿಗೋಳರು ಮೂಲಭೂತ ಸೌಕರ್ಯ ಮತ್ತು ಸ್ವಾತಂತ್ರ್ಯ ಇದ್ದಾಗಲಷ್ಟೇ ಕಲಾವಿದ ಶಕ್ತಿಶಾಲಿ ಮೆಸೇಜ್ ಕೊಡಬಲ್ಲ ಎಂದರು.

ಶೀಬಿರದ ನಿದೇರ್ಶಕ ಭರಮಗೌಡರು ಹಿಟ್ಲರ್ ಮತ್ತು ಶ್ರೇಷ್ಠ ಕಲಾವಿದ ಪಿಕಾಸೋನನ್ನು ಚರ್ಚೆಗೆ ಎಳೆ ತಂದರು. ಯುದ್ಧದ ಭೀಕರತೆಯನ್ನು, ಸಾವುನೋವನ್ನು ನೋಡಲಾಗದೇ ತತ್ತರಿಸಿದ ಪಿಕಾಸೋ ಮನೆ ಬಾಗಿಲು ಹಾಕಿಕೊಂಡು ಯುದ್ಧದ ಕ್ರೌರ್ಯವನ್ನು ಖಂಡಿಸುವ ಮತ್ತು ಜಗತ್ತಿಗೆ ಅಗತ್ಯವಾದ ಮಾನವೀಯತೆಯನ್ನು ಬೆಂಬಲಿಸುವ ಶ್ರೇಷ್ಠ ಚಿತ್ರಗಳನ್ನು ಬರೆದ ಎಂದರು.

ಶಿಬಿರದ ಇನ್ನೊಬ್ಬ ನಿರ್ದೇಶಕ ವಿಜಯ ಕಿರೇಸೂರು ಈ ವಿಷಯವನ್ನು ಇನ್ನಷ್ಟು ವಿಸ್ತರಿಸಿದರು. ಹಿಟ್ಲರ್ ಒಬ್ಬ ಒಳ್ಳೆ ಕಲಾವಿದ… ಕಲಾವಿದನೂ ಮೃಗನಾಗಬಲ್ಲ ಎಂಬುದಕ್ಕೆ ಅವನೇ ಸಾಕ್ಷಿ ಎಂದರು. ‘ ಚಿತ್ರ ಪ್ರದರ್ಶನದಲ್ಲಿ ಪಿಕಾಸೋ ಬಿಡಿಸಿದ ಯುದ್ಧದ ಕ್ರೌರ್ಯ ಕುರಿತ ಚಿತ್ರಗಳನ್ನು ನೋಡುವಾಗ, ಇದನ್ನು ಯಾರು ರಚಿಸಿದ್ದು ಎನ್ನುತ್ತಾನೆ ಹಿಟ್ಲರ್. ಆಗ ಪಕ್ಕದಲ್ಲೇ ಇದ್ದ ಪಿಕಾಸೋ ‘ನೀವೇ’ ಎನ್ನುವ ಮೂಲಕ ಮಾರ್ಮಿಕ ಉತ್ತರ ನೀಡಿದರು ಎಂಬುದನ್ನು ಕಿರೇಸೂರು ವಿವರಿಸಿದರು.

ಮೇ ಸಾಹಿತ್ಯ ಸಮ್ಮೇಳನ ಹೀಗೆ ಯುದ್ಧ ವಿರೋಧಿಯಾಗಿ, ಸೌಹಾರ್ದದ ಬೆಂಬಲಿಗನಾಗಿ ಈಗಷ್ಟೇ ಶುರುವಾಗಿದೆ. ಮೇ 4, 5 ರಂದು ಈ ಚಿತ್ರಗಳ ಮಾತಿನ ಬದಲು ವ್ಯಕ್ತಿಗಳ ಮಾತನ್ನು ಕೇಳಲು ಗದಗದಲ್ಲಿ ಸೇರೋಣ. ಬನ್ನಿ….
ಬನ್ನಿ ಗದಗಿಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....