Homeಮುಖಪುಟಕಾಲಾ ಬಣ್ಣ ಮತ್ತು ಸಂಕೇತಗಳಲ್ಲಿ ಅರಳುವ ರಾಜಕಾರಣ

ಕಾಲಾ ಬಣ್ಣ ಮತ್ತು ಸಂಕೇತಗಳಲ್ಲಿ ಅರಳುವ ರಾಜಕಾರಣ

- Advertisement -
- Advertisement -

ಖ್ಯಾತಿ ಮತ್ತು ಹಣ ಮಾಡುವ ಉದ್ದೇಶಗಳನ್ನಿಟ್ಟುಕೊಂಡು ಸಿನಿಮಾ ಇಂಡಸ್ಟ್ರಿಗೆ ಬರುವ ಜನರೇ ಅಧಿಕವಾಗಿರುವ ಈ ಸಂದರ್ಭದಲ್ಲಿ ತಮಿಳು ಚಿತ್ರ ನಿರ್ದೇಶಕ ಪ. ರಂಜಿತ್‍ರಂತವರು ಬಹಳ ಅಪರೂಪ. ರಜನಿಕಾಂತ್ ಅಭಿನಯದ `ಕಾಲಾ’ವನ್ನು ಪ ರಂಜಿತ್ ಪ್ರಜ್ಞಾವಂತಿಕೆಯಿಂದ ಮಾಡಿದ್ದಾರೆ. `ಕಾಲಾ’ ಸಿನಿಮಾ ನೋಡಿದಾಗ ನಿರ್ದೇಶಕನ ಬೌದ್ಧಿಕತೆ, ಸಾಮಾಜಿಕ ಬದ್ಧತೆ ಮತ್ತು ಆತನ ಸೈದ್ಧಾಂತಿಕ ರಾಜಕಾರಣ ಎದ್ದು ಕಾಣುತ್ತದೆ. ಪ ರಂಜಿತ್ ಕೇವಲ ರಾಜಕೀಯ ಸಿದ್ಧಾಂತಗಳ ಮೂಲಕ ಕಥೆ ಹೇಳದೆ, ತನ್ನ ರಾಜ್ಯ ಕೇರಳದ ಸಾಂಸ್ಕøತಿಕ ರಾಜಕಾರಣ ಮತ್ತು ಕೇರಳದ ಸ್ಥಳೀಯ ಸಮುದಾಯಗಳ ಪರಂಪರೆಯನ್ನೂ ಬಳಸಿಕೊಂಡಿದ್ದಾರೆ. ಅದರಲ್ಲೂ ಕೇರಳದ ಅಡಿಯನ್ ಸಮುದಾಯದ ಮೌಖಿಕ ಕಥನಗಳ ಬಗ್ಗೆ ರಂಜಿತ್‍ಗೆ ಅಪಾರ ಅರಿವಿರುವುದು ಕಂಡುಬರುತ್ತದೆ.
ಕಾಲಾ ಸಿನಿಮಾ ವರ್ತಮಾನದ ಇಂಡಿಯಾದ ಜನಚಳವಳಿಗಳ ಸೈದ್ಧಾಂತಿಕ ನಿಲುವು ಹೇಗಿರಬೇಕು ಎಂಬುದನ್ನು ನಿರೂಪಿಸುವ ಚಿತ್ರ. ಅನೇಕ ದೃಶ್ಯಗಳಲ್ಲಿ ಬುದ್ಧ, ಪೆರಿಯಾರ್, ಜ್ಯೋತಿಬಾಫುಲೆ, ಅಂಬೇಡ್ಕರ್ ಮಾಕ್ರ್ಸ್ ಸಿದ್ಧಾಂತಗಳು ಸಾಂಕೇತಿಕವಾಗಿ ಬಂದುಹೋಗುತ್ತವೆ. ಚಿತ್ರದ ಕೊನೆಗೆ ನಾಯಕ ಚಳವಳಿಯ ಕುರಿತು ಮಾತಾಡುವಾಗ ಬಾಬಾ ಸಾಹೇಬರು ಭಾಷಣ ಮಾಡುವ ದೃಶ್ಯವೊಂದು ಕಂಡೂಕಾಣದಂತೆ ಇಣುಕುತ್ತದೆ. ಕೇರಳದ ಆದಿವಾಸಿಗಳಾದ ಅಡಿಯನ್ನರ ಕಥನಗಳಲ್ಲಿನ ‘ಭೂಮಿ ನಮ್ಮ ಆಜನ್ಮಸಿದ್ದ ಹಕ್ಕು, ಅದು ನಮ್ಮ ತಾಯಿಯೂ ಕೂಡ’ ಎಂಬಂಥ ಮಾತುಗಳು ನಾಯಕನ ಮಾತುಗಳಲ್ಲಿ ಮತ್ತೆ ಮತ್ತೆ ಬರುತ್ತವೆ. ‘ಭೂಮಿ ನಿಮಗೆ ವ್ಯಾಪಾರ ಅಧಿಕಾರ, ಆದರೆ ನಮಗದು ಬದುಕು, ಒಂದು ಹಿಡಿ ಮಣ್ಣು ಕೂಡ ನಿಮಗೆ ದಕ್ಕಲು ಬಿಡುವುದಿಲ್ಲ. ಈ ನೆಲ ನನ್ನದು, ನಿಮ್ಮ ದೇವರೇ ಬಂದರೂ ಆ ದೇವರನ್ನೂ ಕೂಡ ಲೆಕ್ಕಿಸಲಾರೆ’ ಎಂದು ಕಾಲಾ ಎದೆಯುಬ್ಬಿಸಿ ಹೇಳುತ್ತಾನೆ. ಇದು ಕಮ್ಯುನಿಸ್ಟರ ಭೂಮಿ ಹೋರಾಟಗಳನ್ನು ನೆನಪಿಸುತ್ತದೆ.
ಮುಂಬೈನ ಧಾರಾವಿ ಸ್ಲಮ್ಮನ್ನು ವಶಪಡಿಸಿಕೊಳ್ಳಲು ಸ್ಥಳೀಯ ಶ್ರೀಮಂತ ಹವಣಿಸುವ ಸಂದರ್ಭದಲ್ಲಿ ಅಲ್ಲಿನ ಜನನಾಯಕ ಕಾಲಾ ಪ್ರತಿಭಟಿಸುವುದರ ಮೂಲಕ ಸಿನಿಮಾ ಪ್ರಾರಂಭವಾಗುತ್ತದೆ. ರಿಯಲ್ ಎಸ್ಟೇಟ್ ಮಾಫಿಯ ಮತ್ತು ಸ್ಥಳೀಯ ಸರ್ಕಾರದ ವಿರುದ್ಧ ಕಾಲಾ ಸಮರ ಸಾರುತ್ತಾನೆ. `ಕಾಲಾ’ದಲ್ಲಿ ಹಸಿರು, ನೀಲಿ, ಕೆಂಪು, ಕಪ್ಪು ಮತ್ತು ಕೇಸರಿ ಬಣ್ಣದ ಧ್ವಜಗಳು ಢಾಳಾಗಿ ಕಾಣಿಸಿಕೊಳ್ಳುತ್ತವೆ. ಶ್ರೀಕೃಷ್ಣ ಮತ್ತು ಶ್ರೀರಾಮ್ ಘೋಷಣೆಗಳು, ಹಿಂಸೆ, ಆಯುಧಗಳ ಬಳಕೆಯನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಶ್ರೀಮಂತನೊಬ್ಬ ಹೇಗೆ ಜನರೆಲ್ಲ ತನ್ನ ಅಡಿಯಾಳಾಗಿರಬೇಕು, ಅವರ ಅಧೀನತೆಯನ್ನು ಶಾಶ್ವತವಾಗಿಡಲು ಬೇಕಾದ ಕೋಮುವಾದ, ಫ್ಯಾಸಿಸಂನ್ನು ಹೇಗೆ ಬಳಸಬೇಕು ಎಂಬುದನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಇಂತಹ ಜನವಿರೋಧಿ ರಾಜಕಾರಣದ ಪ್ರತಿನಿಧಿಯಾಗಿ ಶ್ರೀಹರಿದಾದ (ನಾನಾ ಪಾಟೇಕರ್) ಕಂಡುಬರುತ್ತಾನೆ. ಪ್ರಜ್ಞಾಪೂರ್ವಕವಾಗಿಯೇ ಪೊಲೀಸ್ ವ್ಯವಸ್ಥೆ ಫ್ಯಾಸಿಸಂನೊಂದಿಗೆ ಕೈ ಜೋಡಿಸುತ್ತಾ ದಮನಿತರನ್ನು ಸದೆಬಡಿಯುವ ಅತ್ಯಾಚಾರ ಮಾಡುವ, ಕೊಲ್ಲುವ ಚಿತ್ರಣಗಳನ್ನು ವಾಸ್ತವದ ನೆಲೆಯಲ್ಲಿ ತೋರಿಸಲಾಗಿದೆ. ಹಾಗಾಗಿ ಕಾಲಾ ಚಿತ್ರದ ವರ್ತಮಾನದ ಭಾರತದ ರಾಜಕಾರಣದ ಮೀನಿಯೇಚರ್‍ನÀಂತೆ ಕಾಣುತ್ತದೆ. ಹರಿದಾದನ ಪಟಾಲಂ ಗಣೇಶ ಚತುರ್ಥಿಯ ಆಚರಣೆ, ಅವರ ಪೋಸ್ಟರ್‍ಗಳಲ್ಲಿ
ಹರಿದಾದನ ಚಿತ್ರ ಮತ್ತು Im ಠಿuಡಿe ಠಿeಣಡಿioಣ, I ತಿiಟಟ ಛಿಟeಚಿಟಿ ಣhis ಛಿouಟಿಣಡಿಥಿ’ ಎಂಬ ಬರಹ ಕೇಸರಿ ಬಣ್ಣ ಸಮಕಾಲೀನ ರಾಜಕಾರಣವನ್ನು ಸಂಕೇತಿಸುತ್ತವೆ. ಚಳವಳಿಗಾರರ ಮೇಲೆ ಹಿಂಸಾತ್ಮಕ ದಾಳಿ ನಡೆಯುತ್ತಾ ಹೆಣಗಳು ಬೀಳುತ್ತಿದ್ದರೆ ಹರಿದಾದನ ಮನೆಯಲ್ಲಿ ಭಗವದ್ಗೀತೆ ಮತ್ತು ರಾಮಾಯಣದ ಪಾರಾಯಣ ನಡೆಯುತ್ತಿರುತ್ತದೆ. ಜೈಶ್ರೀರಾಮ್ ಮೊಳಗುತ್ತಿರುತ್ತದೆ. ಆಗ ಹರಿದಾದ ‘ಪೂಜೆಗೆ ಎಲ್ಲವನ್ನು ಅರ್ಪಿಸಿದ್ದೇವೆ, ದೇವರೂ ತೃಪ್ತಿಗೊಂಡಿದ್ದಾನೆ. ಆದರೆ ಕೊನೆಯದಾಗಿ ಒಂದೇ ಒಂದು ಮನುಷ್ಯನ ತಲೆ ಬೇಕಂತೆ ತಗಂಡು ಬಾ ಹೋಗು’ ಎಂದು ತನ್ನ ಹಿಂಬಾಲಕನಿಗೆ ಹೇಳುತ್ತಾನೆ.
ಧಾರಾವಿ ಸ್ಲಮ್ಮನ್ನು ಅಭಿವೃದ್ಧಿಪಡಿಸಲು ಬರುವ ಜಲೀನಳನ್ನು ಸ್ಲಮ್ಮಿನ ಜನರಾದ ತಮಗೆ ಯಾವ ಅನುಕೂಲಗಳು ಬೇಕು ಎಂದು ಕೇಳಿದಾಗ ಜನ ಕರೆಂಟು, ನೀರು, ವಸತಿ, ಕ್ರೀಡಾಂಗಣ ಕೇಳುತ್ತಾರೆಯೆ ವಿನಃ ನಮಗೊಂದು ದೇವಾಲಯ ಬೇಕೆಂದು ಅಪ್ಪಿತಪ್ಪಿಯೂ ಪ್ರಸ್ತಾಪಿಸುವುದಿಲ್ಲ. ಸೂಕ್ಷ್ಮ ಅಂಬೇಡ್ಕರ್‍ವಾದಿಯೊಬ್ಬನ ಪ್ರಜ್ಞಾವಂತಿಕೆಯಿದು. ಅಂಬೇಡ್ಕರ್ ಕಾಲಾರಾಮ ದೇವಸ್ಥಾನದ ಪ್ರವೇಶಿಕೆಯ ಸಂದರ್ಭದಲ್ಲಿ ಹೇಳುವ ‘ ದೇವಾಲಯ ಮತ್ತು ಧರ್ಮ ಅಸಮಾನತೆಯ ಕೂಪಗಳು, ನಮಗೆ ಬೇಕಿರುವುದು ಶಾಲೆ, ರಾಜ್ಯಸಭೆಗಳು ಲೋಕಸಭೆಗಳೆ ವಿನಃ ದೇವಾಲಯಗಳಲ್ಲ’ ಎಂಬ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಕೋಮುಪ್ರೇರಿತ ರಾಜಕಾರಣವನ್ನು ಅರ್ಥಮಾಡಿಕೊಳ್ಳಬೇಕಾದ ಸೂಕ್ಷ್ಮತೆಗಳ ಕುರಿತ ಚಿತ್ರದ ಆಶಯ ಮನನೀಯ. ಮೊದಲ ಹಾಡಿನಲ್ಲಿ ಕೋಮುವಾದಿಗಳು ಮುಸ್ಲಿಮರನ್ನು ಬೆನ್ನಟ್ಟಿ ಬರುವಾಗ ನಾಯಕ ಅವರನ್ನು ರಕ್ಷಿಸುತ್ತಾನೆ. ಕಾಲಾನ ಸಂಭ್ರಮ ಮತ್ತು ಚಳವಳಿಯಲ್ಲಿ ಮುಸ್ಲಿಮರ ಪಾಲಿರುತ್ತದೆ. ಚಳವಳಿಯ ಒಗ್ಗಟ್ಟು ಒಡೆಯಲು ಮಸೀದಿಯೊಳಗೆ ಹಂದಿಮಾಂಸವನ್ನು ಹಾಕುವ ಮೂಲಕ ಧರ್ಮದ ಹೆಸರಿನಲ್ಲಿ ಉದ್ರಿಕ್ತರನ್ನಾಗಿ ಮಾಡುವ ತಂತ್ರವನ್ನು ಕೋಮುವಾದಿಗಳು ಮಾಡುತ್ತಾರೆ. ಇದನ್ನು ಅತ್ಯಂತ ಪ್ರಜ್ಞಾವಂತಿಕೆಯಿಂದ ನಿವಾರಿಸಿಕೊಳ್ಳುವ ನಾಯಕ ಸಂಘಟನೆಗೆ ಒಗ್ಗಟ್ಟು ಮತ್ತು ಸೂಕ್ಷ್ಮಗ್ರಹಿಕೆಗಳ ಬಗ್ಗೆ ಮನವರಿಕೆ ಮಾಡಿ ಚಳವಳಿಗೆ ತೊಡಗಿಸುತ್ತಾನೆ.
ಹರಿದಾದ ಮತ್ತು ಕಾಲಾ ನಡುವಿನ ಒಂದು ಸಂಭಾಷಣೆ ಗಮನ ಸೆಳೆಯುವಂತಹದ್ದು. ‘ಏನದು ಕಾಲಾ, ಕಪ್ಪುಬಣ್ಣ ಕಪ್ಪುಬಟ್ಟೆ ನೋಡೋಕೆ ಅಸಹ್ಯ’ ಎನ್ನುತ್ತಾನೆ. ‘ಬಿಳಿ ಶ್ರೇಷ್ಠ, ಕಪ್ಪು ಕೊಳಕು ನಿಮ್ಮ ದೃಷ್ಟಿಕೋನವೆ ಸರಿಯಿಲ್ಲ. ಕಪ್ಪು ಶ್ರಮಸಂಸ್ಕøತಿಯ ಸಂಕೇತ ಕಣೊ’ ಎನ್ನುವ ನಾಯಕನ ಮಾತು ಪೆರಿಯಾರರನ್ನು ನೆನಪಿಸುತ್ತದೆ. ಇಡೀ ಚಿತ್ರ ನಾಯಕನೆ ಬಂದು ಚಳವಳಿಯನ್ನು ಮುನ್ನಡೆಸಬೇಕಿಲ್ಲ ಎಲ್ಲರೂ ನಾಯಕರಾಗಬೇಕು ಎನ್ನುವ ಸತ್ಯವನ್ನು ಸೂಚಿಸುತ್ತದೆ. ಕಪು,್ಪ ಹಸಿರು, ಕೆಂಪು, ನೀಲಿ, ಬಣ್ಣಗಳೆಲ್ಲಾ ಸೇರಿ ಬಂಡವಾಳಶಾಹಿಯನ್ನು, ಕೋಮುವಾದವನ್ನು ಹಿಮ್ಮೆಟ್ಟಿಸುವ ಚಿತ್ರದ ಕ್ಲೈಮ್ಯಾಕ್ಸ್ ಕಾವ್ಯಾತ್ಮಕವಾಗಿದೆ. ಜೊತೆಗ ಹಿಂಸೆಯೆ ಪರಿಹಾರವಲ್ಲ ಎಂಬ ಬುದ್ಧ, ಬಸವ, ಮಂಡೇಲಾ, ಅಂಬೇಡ್ಕರ್ ಆಶಯದಂತೆ ಚಿತ್ರದ ಕೊನೆಯಲ್ಲಿ ಖಳನಾಯಕನ್ನು ಕೊಲ್ಲುವುದಿಲ್ಲ. ಚಿತ್ರದಲ್ಲಿ ಹೊಡೆದಾಟಗಳನ್ನು ಚಳವಳಿಯ ಅನಿವಾರ್ಯ ರಕ್ಷಣೆಯ ಭಾಗವೆಂಬಂತೆ ಚಿತ್ರಿಸಲಾಗಿದೆಯೆ ವಿನಃ ವಿಜೃಂಭಿಸಿಲ್ಲ.
ಚಿತ್ರದಲ್ಲಿ ವರ್ತಮಾನದ ಕಾರ್ಪೊರೇಟ್ ಆಡಳಿತದ ಹುಸಿ ಅಭಿವೃದ್ಧಿ, ಹುಸಿ ದೇಶಪ್ರೇಮವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಇಂಥ ಸಂದರ್ಭದಲ್ಲಿ ಎಲ್ಲರೂ ಸೈದ್ಧಾಂತಿಕ ಭಿನ್ನತೆಗಳಾಚೆ ಒಂದಾಗಿ ಅಪಾಯದಲ್ಲಿರುವ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಬೇಕಿದೆ ಎಂಬ ಸಂದೇಶ ಸಕಾಲಿಕ. ಚಳವಳಿಯ ಮೂಲಕ ಮಾತ್ರ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದೂ ಸಿನಿಮಾದ ಮೂಲಕ ಹೇಳಿದ್ದಾರೆ ಪ. ರಂಜಿತ್. ಇಜuಛಿಚಿಣe ಶಿಕ್ಷಿತರಾಗಿ, ಂgiಣಚಿಣe, ವಿಚಾರವಂತರಾಗಿ ಯೋಚಿಸಿ, ಔಡಿgಚಿಟಿize ಸಂಘಟಿತರಾಗಿ ಹೋರಾಡಿ ಎಂಬ ತತ್ವಗಳನ್ನು ಹಂತಹಂತವಾಗಿ ಸಾರುತ್ತದೆ.
ಸಿನಿಮಾದಲ್ಲಿ ಕೇವಲ ಪ್ರತಿಭಟನೆ ಹೋರಾಟಗಳೆ ಇವೆಯೆಂದು ಭಾವಿಸಬಾರದು. ಔಚಿತ್ಯಪೂರ್ಣವಾದ ಕೆಲವು ಭಾವುಕ ಸನ್ನಿವೇಶಗಳಿವೆ. ಕೇವಲ ಒಂದು ಸಾಮಾನ್ಯ ಕುಟುಂಬದಂತೆಯೆ ಕಾಲಾನ ಕುಟುಂಬವಿದೆ. ಜೊತೆಗೊಂದು ಕಂಟ್ರಿನಾಯಿಯೂ. ಸೆಲ್ವಿಯ ಸೊಸೆಯರ ಮಕ್ಕಳ ಮೊಮ್ಮೊಕ್ಕಳ ನಡುವಿನ ಬಾಂಧವ್ಯ ಕುಟುಂಬದಿಂದ ನಮ್ಮನ್ನು ಪ್ರತ್ಯೇಕಿಸುವುದಿಲ್ಲ. ಆಕರ್ಷಣೆಯೂ ಅಲ್ಲದ, ದೇಹದಾಸೆಯೂ ಅಲ್ಲದ ಕಾಲಾ ಮತ್ತು ಜಲೀನ ನಡುವಿನ ಉನ್ನತಪ್ರೇಮ, ಚಳವಳಿಯ ಸಂಗಾತಿಗಳಾದ ಲೆನಿನ್ ಪ್ರೇಮ ಅಲ್ಲಲ್ಲಿ ಕಥೆಗೆ ಪೂರಕವಾಗಿವೆ. ಹರಿದಾದನ ಮೊಮ್ಮಗಳ ಎರಡು ಮಾತುಗಳು; ‘ತಾತ ಆತ ಒಳ್ಳೆಯ ಮನುಷ್ಯ ದಯವಿಟ್ಟು ಆತನನ್ನು ಕೊಲ್ಲಬೇಡಿ’ ಮತ್ತು ‘ಆತನನ್ನು ಕೊಲ್ಲದೆ ಬಿಟ್ಟಿದ್ದಕ್ಕೆ ಥ್ಯಾಂಕ್ಸ್’ ಎನ್ನುವ ಮಾತುಗಳು ತೀವ್ರವಾಗಿ ಕಾಡುತ್ತವೆ. ದಾರಾವಿಗೆ ಬೆಂಕಿಬಿದ್ದು ಸುಟ್ಟು ಕರಕಲಾದ ಬಟ್ಟೆ ಮತ್ತು ಪುಸ್ತಕಗಳನ್ನು ತೋರಿಸಿ ‘ತಾತ ನಾಳೆ ಹೀಗೇ ಸ್ಕೂಲಿಗೆ ಹೋದರೆ ಒಳಗೆ ಬಿಡಿಸಿಕೊಳ್ಳುವುದಿಲ್ಲ’ ಎಂಬ ಕಾಲಾನ ಮೊಮ್ಮೊಗಳ ಮಾತು ಕಣ್ಣು ತೇವ ಮಾಡುತ್ತದೆ. ಚಿತ್ರದಲ್ಲಿನ ಕತ್ತಲು ಧಾರಾವಿಯ ಜನರ ಬದುಕನ್ನು ಸಂಕೇತಿಸುತ್ತದೆ.
ಇಷ್ಟು ಹೇಳಿದ ಮೇಲೆ ಈ ಸಿನಿಮಾಕ್ಕೆ ಮಿತಿಗಳು ದೋಷಗಳು ಇಲ್ಲವೆಂದಲ್ಲ. ಅಬ್ಬರದ ಸಂಗೀತದಲ್ಲಿ ಸಂಭಾಷಣೆ ಗೌಣವಾಗಿ ಮಾತು ಸರಿಯಾಗಿ ಕೇಳಿಸುವುದಿಲ್ಲ. ಬೇರೆ ಭಾಷೆಗೆ ಡಬ್ ಆದ ಕಾರಣ ಮೂಲಭಾಷೆಗೆ ಹೊಂದಿಕೆಯಾದ ದೇಹಭಾಷೆ ಮತ್ತು ಟೈಮಿಂಗ್ ಹೊಂದಾಣಿಕೆಯಾಗದೆ ಕಿರಿಕಿರಿಯಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ರಜನಿಕಾಂತ್ ಅಭಿನಯಿಸಬೇಕಿತ್ತು ಅನಿಸುತ್ತದೆ. ಇದು ಸಂಪೂರ್ಣ ನಿರ್ದೇಶಕನ ಸಿನಿಮಾ. ಹೆಂಡತಿ ಮತ್ತು ಮಗನನ್ನು ಕಳಕೊಂಡ ಮೇಲೆ ಹರಿದಾದನ ಮನೆಗೆ ಹೋದ ಕಾಲಾ ಒಂದು ಮಾತು ಹೇಳುತ್ತಾನೆ. ‘ನಾನು ಇಲ್ಲಿಗೆ ಬಂದದ್ದು ನಿನಗೆ ಸವಾಲು ಹಾಕಲು ಅಲ್ಲ. ಹೆಂಡತಿ ಮತ್ತು ಮಗನನ್ನು ಕಳಕೊಂಡರೂ ನಾನು ತಗ್ಗಿಲ್ಲ ನಿತ್ರಾಣಗೊಂಡಿಲ್ಲ ಎಂದು ನಿನಗೆ ತೋರಿಸಲು’ ಎಂದು. ಇದು ಒರಿಜಿನಲ್ಲಾಗಿ ಅಂಬೇಡ್ಕರರ ಧೀಮಂತಿಕೆ, ಅವರ ಬದುಕನ್ನು ಓದಿ ತಿಳಿದವರಿಗೆ ಬೇಗ ಅರ್ಥವಾಗುತ್ತದೆ. ರಜನಿಕಾಂತ್ ಅವರ ಸ್ಟಾರ್‍ಗಿರಿ ಮತ್ತು ಇಮೇಜನ್ನು ಪಕ್ಕಕ್ಕಿಟ್ಟು, ಅವರ ಇಮೇಜಿಗೆ ತಕ್ಕಂತೆ ಕಥೆಯನ್ನು ನಿರೂಪಿಸದೆ, ಕಥೆ ಬಯಸುವಂತೆ ರಜನಿಯನ್ನು ಬಗ್ಗಿಸಿದ ಕಾರಣ ಕಥೆಯ ಶಕ್ತಿಯು ಉಳಿದುಕೊಂಡಿದೆ. ಸ್ವಲ್ಪ ನಿಷ್ಠುರವಾಗಿ ಹೇಳುವುದಾದರೆ, ಕಾಲಾ ಪಾತ್ರದಿಂದ ರಜಿನಿಕಾಂತ್ ಸಹ ಕಲಿಯುವುದು ತುಂಬಾ ಇದೆ.

– ಆರಡಿ ಮಲ್ಲಯ್ಯ ಕಟ್ಟೇರ್

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...