Homeಅಂಕಣಗಳುಜನಪರ ವಿದ್ವಾಂಸ, ರಾಜಕಾರಣಿ ಅಶೋಕ್ ಮಿತ್ರ

ಜನಪರ ವಿದ್ವಾಂಸ, ರಾಜಕಾರಣಿ ಅಶೋಕ್ ಮಿತ್ರ

- Advertisement -
- Advertisement -

ಕಳೆದ ಮೇ ಒಂದರಂದು ಅಶೋಕ್ ಮಿತ್ರ ಅವರು ತೀರಿಕೊಂಡರು. ಅವರದು ಡಿeಟಿಚಿissಚಿಟಿಛಿe (ಪುನರುಜ್ಜೀವನ)ದ ಬಹುಮುಖೀ ವ್ಯಕ್ತಿತ್ವ ಎನ್ನಬಹುದು. ಬಂಗಾಳಿ ಭಾಷೆಯ ಲೇಖಕರಾಗಿದ್ದ ಅವರು ತಮ್ಮ ಪ್ರಬಂಧಗಳ ಅನೇಕ ಸಂಪುಟಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ. ಇಛಿoಟಿomiಛಿ ತಿeeಞಟಥಿ (ಈಗ eಛಿoಟಿomiಛಿ ಚಿಟಿಜ ಠಿoಟiಣiಛಿಚಿಟ ತಿeeಞಟಥಿ, ಇPW), ಖಿhe ಖಿeಟegಡಿಚಿಠಿh ಪತ್ರಿಕೆಗಳಿಗೆ ಅಂಕಣಕಾರರಾಗಿದ್ದ ಅವರು ಸಾವಿರಾರು ಓದುಗರನ್ನು ಗಳಿಸಿದ್ದರು.ತೀಕ್ಷ್ಣಮತಿಯ ಅರ್ಥಶಾಸ್ತ್ರಜ್ಞರಾಗಿದ್ದ ಅವರು ಆ ವಿಷಯದಲ್ಲಿ ಎರಡು ವಿಶೇಷವಾದ ಕೃತಿಗಳನ್ನೂ ರಚಿಸಿದ್ದಾರೆ, ಖಿhe Shಚಿಡಿe oಜಿ Wಚಿges iಟಿ ಓಚಿಣioಟಿಚಿಟ Iಟಿಛಿome ಚಿಟಿಜ ಖಿeಡಿms oಜಿ ಖಿಡಿಚಿಜe ಮತ್ತು ಅಟಚಿss ಖeಟಚಿಣioಟಿs, ಈ ಎರಡು ಕೃತಿಗಳು ಇಂದಿಗೂ ಪ್ರಸ್ತುತ.
ಅರ್ಥಶಾಸ್ತ್ರಜ್ಞರಾಗಿ ಪಶ್ಚಿಮ ಬಂಗಾಳದ ಸರಕಾರದೊಂದಿಗೆ ಕೆಲಸ ಮಾಡಿದ್ದ ಅವರು ಕೃಷಿ ಬೆಲೆ ಆಯೋಗದ ಅಧ್ಯಕ್ಷರೂ ಆಗಿದ್ದರು; ವಿತ್ತ ಸಚಿವಾಲಯದ ಮುಖ್ಯ ಸಲಹೆಗಾರರೂ ಆಗಿದ್ದರು. ತಮ್ಮ ಜೀವನದುದ್ದಕ್ಕೂ ಕಮ್ಯುನಿಸ್ಟರಾಗಿದ್ದ ಅವರು ತಮ್ಮ ಸೈದ್ಧಾಂತಿಕ ನಿಲುವುಗಳಲ್ಲಿ ಅತ್ಯಂತ ಪಾರದರ್ಶಕವಾಗಿದ್ದರು. ಭಾರತದ ಎಡಪಂಥೀಯ ಬುದ್ಧಿಜೀವಿಗಳಲ್ಲಿ ಅಶೋಕ್ ಮಿತ್ರ ಪ್ರಮುಖ ಹೆಸರು.
1977ರಲ್ಲಿ ಪಶ್ಚಿಮ ಬಂಗಾಳದ ಮೊದಲ ಕಮ್ಯುನಿಸ್ಟ್ ಸರಕಾರದಲ್ಲಿ ವಾಣಿಜ್ಯ, ಅಭಿವೃದ್ಧಿ ಹಾಗೂ ಯೋಜನಾ ಸಚಿವರಾಗಿದ್ದರು. 1986ರವರೆಗೆ ಆ ಸ್ಥಾನದಲ್ಲಿ ಕಾರ್ಯನಿರ್ವಹಿಸಿ ರಾಜೀನಾಮೆ ನೀಡಿದರು. ಈ ಎಲ್ಲ ಕ್ಷೇತ್ರಗಳಲ್ಲಿ ಅವರ ಸಾಧನೆ ಅಗಾಧವಾದ್ದು. ಹೀಗೆ ತಮ್ಮ ಚಿಂತನೆ, ಬರವಣಿಗೆ ಹಾಗೂ ನಿರ್ವಹಿಸಿದ ಕಾರ್ಯಗಳ ಕಾರಣಕ್ಕಾಗಿ ಅವರು ಸ್ವಾತಂತ್ರ್ಯೋತ್ತರ ಭಾರತದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಇಂದಿನ ಬಾಂಗ್ಲಾದೇಶದಲ್ಲಿ 1928ರ ಏಪ್ರಿಲ್ 10 ರಂದು ಜನಿಸಿದ ಅಶೋಕ್ ಮಿತ್ರ, ಢಾಕಾದ ಅರ್ಮನಿಟೋಲ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಶಿಕ್ಷಣಕ್ಕಾಗಿ ಢಾಕಾ ವಿಶ್ವವಿದ್ಯಾಲಯಕ್ಕೆ ಹೋದರು. ಆದರೆ ಅವರು ಅರ್ಥಶಾಸ್ತ್ರದಲ್ಲಿ ಎಂಎ ಪರೀಕ್ಷೆ ಕಟ್ಟಬೇಕೆನ್ನುವಷ್ಟರಲ್ಲಿ ದೇಶ ವಿಭಜನೆಯಾಗಿ ಢಾಕಾ ಬಿಡಬೇಕಾಗಿ ಬಂತು. ಆಗ ಅವರು ತಮ್ಮ ಗುರು ಎ.ಕೆ.ದಾಸಗುಪ್ತ ಅವರನ್ನು ಹಿಂಬಾಲಿಸಿ ಬನಾರಸ್ ಹಿಂದು ವಿಶ್ವವಿದ್ಯಾಲಯಕ್ಕೆ ಬಂದು ಸೇರಿ, ಅಲ್ಲಿ ತಮ್ಮ ಎಂಎ ಡಿಗ್ರಿ ಮುಗಿಸಿದರು. ಆ ಪರೀಕ್ಷೆಯ ಭಾಗವಾಗಿ ಬರೆದ ಪ್ರಬಂಧವನ್ನು ಓದಿದ ಪರೀಕ್ಷಕರಾಗಿದ್ದ ಡಿ.ಪಿ. ಮುಖರ್ಜಿಯವರು ಆ ಪ್ರಬಂಧದ ಆಧಾರದ ಮೇಲೆಯೇ ಅಶೋಕ್ ಮಿತ್ರ ಅವರನ್ನು ಲಖನೌ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಲು ಆಹ್ವಾನಿಸಿದರು. ಹೀಗೆ ಅಶೋಕ್ ಮಿತ್ರ ಅವರು ಲಖನೌನಲ್ಲಿ ಉಪನ್ಯಾಸಕರಾಗಿ ಕೆಲಕಾಲ ಕೆಲಸ ಮಾಡಿ, ನಂತರ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಸೇರಿದರು. ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಎಕನಾಮಿಕ್ ರಿಸರ್ಚ್‍ನಲ್ಲಿಯೂ ಕೆಲವು ವರ್ಷ ದುಡಿದಿದ್ದರು.
ನೆದರ್ಲ್ಯಾಂಡ್ ನಲ್ಲಿ ನೋಬೆಲ್ ಪುರಸ್ಕøತ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಜಾನ್ ಟಿನ್ಬರ್ಗೆನ್ ಅವರ ಮೇಲ್ವಿಚಾರಣೆಯಲ್ಲಿ ಅಶೋಕ್ ಮಿತ್ರ ತಮ್ಮ ಡಾಕ್ಟೋರಲ್ ಪ್ರಬಂಧವನ್ನು ಬರೆದು ಮಂಡಿಸಿದರು. ಆ ಪ್ರಬಂಧದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ ಮೈಕಲ್ ಕಲೆಕೀ ಅವರು ಪ್ರತಿಪಾದಿಸಿದ ವಿತರಣೆಯ ಸಿದ್ಧಾಂತಕ್ಕೆ ತಿದ್ದುಪಡಿಗಳನ್ನು ಸೂಚಿಸಿದ್ದರು. ಈ ಪ್ರಬಂಧ ಮಿತ್ರ ಅವರಿಗೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು. ಭಾರತಕ್ಕೆ ಮರಳಿದ ನಂತರ ಕೊಲ್ಕೋತದಲ್ಲಿರುವ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (IIಒ) ಜೊತೆಗೆ ಸೇರಿಕೊಂಡು, ಆ ಸಂಸ್ಥೆಯನ್ನು ಸಾಮಾಜಿಕ ವಿಜ್ಞಾನದ ದೇಶದ ಒಂದು ಅತ್ಯುನ್ನತ ಸಂಸ್ಥೆಯಾಗಿ ರೂಪಿಸುವ ಮಹತ್ಕಾರ್ಯದಲ್ಲಿ ಭಾಗಿಯಾದರು.
ಐಐಎಂನ ನಂತರದಲ್ಲಿ ಅಶೋಕ್ ಸರಕಾರವನ್ನು ಸೇರಿಕೊಂಡರು, ತುರ್ತುಪರಿಸ್ಥಿತಿ ಹೇರಿದಾಗ ಕೆಲಕಾಲ ವಿದೇಶದಲ್ಲಿ ಅಜ್ಞಾತವಾಸದಲ್ಲಿ ಕಳೆದು, 1977ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾದರು; ಜ್ಯೋತಿ ಬಸು ಸರಕಾರದಲ್ಲಿ ಸಚಿವರೂ ಆದರು. ಅವರು ಸಚಿವರಾಗಿದ್ದ ಕಾಲದಲ್ಲಿಯೇ ಪಶ್ಚಿಮ ಬಂಗಾಳದ ಗ್ರಾಮೀಣ ಭಾಗದಲ್ಲಿ ಅತ್ಯದ್ಭುತ ಬದಲಾವಣೆಗಳಾದವು ಹಾಗೂ ಈ ಬದಲಾವಣೆಗಳಲ್ಲಿ ಅಶೋಕ್ ಮಿತ್ರ ಅವರ ಪಾತ್ರ ನಿರ್ಣಾಯಕವಾದುದು. ಈ ಅವಧಿಯನ್ನು ‘ಆಪರೇಷನ್ ಬರ್ಗಾ’ ಎಂದು ಕರೆಯಲಾಗುತ್ತದೆ. ಆಗ ಭೂಮಿ ಹಂಚಿಕೆಯ ಪ್ರಕ್ರಿಯೆಯನ್ನು ಪುನರಾರಂಭಿಸಲಾಯಿತು ಮತ್ತು ಹೆಚ್ಚಿನ ಸಂಪನ್ಮೂಲಗಳ ಒಡೆತನವನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಪಂಚಾಯತಿಗಳಿಗೇ ವಹಿಸಲಾಯಿತು. ಅದರೊಂದಿಗೆ ಕೃಷಿ, ನೀರಾವರಿ ಹಾಗೂ ಗ್ರಾಮೀಣ ಮೂಲಸೌಕರ್ಯಗಳ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಯಿತು. ಈ ಎಲ್ಲ ಕ್ರಮಗಳು ಪಶ್ಚಿಮ ಬಂಗಾಳದಲ್ಲಿ ಅನೇಕ ದಶಕಗಳಿಂದ ಕೃಷಿ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ಜಡತೆಯನ್ನು ಹೋಗಲಾಡಿಸಿ, ಗ್ರಾಮೀಣ ಆರ್ಥಿಕತೆಗೆ ಹೊಸ ಜೀವ ತುಂಬಿದವು
ಅತ್ಯಂತ ಸೌಜನ್ಯ, ಅಸೀಮ ಧೈರ್ಯ ಹಾಗೂ ಪ್ರಾಮಾಣಿಕತೆಯನ್ನು ಹೊಂದಿದ್ದ ಅಶೋಕ್ ಮಿತ್ರ, ಅತ್ಯಂತ ನೇರನಡೆಯವರು, ನಿಷ್ಠುರ ಮಾತುಗಳಿಗೆ ಹೆಸರಾಗಿದ್ದವರು, ಸ್ನೇಹಪೂರ್ಣ ನಡವಳಿಕೆಯ ಜೊತೆಜೊತೆಗೇ ತಮ್ಮ ನೇರಾನೇರ ಟೀಕೆಗಳಿಗೂ ಖ್ಯಾತರಾಗಿದ್ದರು. (ಈ ಮಾತನ್ನು ನಾನು ಅನುಭವದಿಂದ ಹೇಳುತ್ತಿದ್ದೇನೆ). ಪಕ್ಷಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದರೂ ಕೂಡ ಪಕ್ಷದ ಕ್ರಮಗಳು ತಪ್ಪೆಂದು ಕಂಡಾಗ ಕಟುವಾದ ಟೀಕೆಗಳಿಗೆ ಒಳಪಡಿಸುತ್ತಿದ್ದರು. ಆದರೆ ಅವರ ನಿಷ್ಕಲ್ಮಷ ಮನಸ್ಸನ್ನು ಎಲ್ಲರೂ ಬಲ್ಲವರಾದುದರಿಂದ ಯಾರೂ ಬೇಸರಿಸಿಕೊಳ್ಳುತ್ತಿದ್ದಿಲ್ಲ.
ತಾತ್ವಿಕ ಭಿನ್ನಾಭಿಪ್ರಾಯದಿಂದ ಎಡಪಕ್ಷದ ಸರಕಾರಕ್ಕೆ ರಾಜೀನಾಮೆ ನೀಡಿ ಹೊರಬಂದರೂ, ಸಿಪಿಎಂ ಪಕ್ಷ ಅವರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿತು. ದೇಶದಲ್ಲಿ ನವಉದಾರೀಕರಣದ ನೀತಿಗಳನ್ನು ಜಾರಿಗೊಳಿಸಲು ಪ್ರಾರಂಭಿಸಿದ್ದ ಸಮಯ ಅದು. ರಾಜ್ಯಸಭೆಯ ಸದಸ್ಯರಾಗಿ ಅವರು ಕೈಗಾರಿಕೆ ಮತ್ತು ವಾಣಿಜ್ಯದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ಅಲ್ಲಿದ್ದುಕೊಂಡು ಆ ಸಮಯದಲ್ಲಿ ಡಬ್ಲುಟಿಒ ಮುಖಾಂತರ ಅಮೆರಿಕ, ಮತ್ತು ಇತರ ಮುಂದುವರೆದ ರಾಷ್ಟ್ರಗಳ ಬೆಂಬಲದಿಂದ ಹೇರಲಾಗುತ್ತಿದ್ದ ಬೌದ್ಧಿಕ ಆಸ್ತಿ ಹಕ್ಕುಗಳ  ಆಧಿಪತ್ಯವನ್ನು ತಡೆಗಟ್ಟಲು ಹೋರಾಡಿದರು.
ಅಶೋಕ್ ಮಿತ್ರ ಅವರನ್ನು ಎಲ್ಲಕ್ಕಿಂತ ಹೆಚ್ಚಾಗಿ ನೆನಪಿಸಿಕೊಳ್ಳುವುದು ರಾಜ್ಯಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದ ಕಾರಣಕ್ಕಾಗಿ. ಕೇಂದ್ರ ಸರ್ಕಾರದಲ್ಲಿದ್ದ ಅಧಿಕಾರ ಮತ್ತು ಸಂಪನ್ಮೂಲಗಳ ಅಪಾರ ಕೇಂದ್ರೀಕರಣವನ್ನು ಬಯಲು ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಇಂತಹ ಕೇಂದ್ರೀಕರಣದ ವ್ಯವಸ್ಥೆ ಯಾರ ಗಮನಕ್ಕೂ ಬರದಂತೆ ಸಾಗುತ್ತಿತ್ತು. ದೇಶದ ಒಕ್ಕೂಟ ವ್ಯವಸ್ಥೆಗೆ ಮಹತ್ವ ನೀಡುವಂತೆ ಅವರು ದೇಶದ ಎಡಪಕ್ಷಗಳಿಗೆ ಮನವರಿಕೆ ಮಾಡಿಕೊಟ್ಟರು. ಜ್ಯೋತಿಬಸು ಜೊತೆಗೂಡಿ ಎಲ್ಲ ವಿರೋಧ ಪಕ್ಷಗಳು ಮತ್ತು ಸರಕಾರಗಳನ್ನು ಒಕ್ಕೂಟದ ವೇದಿಕೆಯಡಿಯಲ್ಲಿ ಒಗ್ಗೂಡಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರು. ಅವರ ಪರಿಶ್ರಮದ ಫಲವಾಗಿ ಕಾಂಗ್ರೆಸೇತರ ಮುಖ್ಯಮಂತ್ರಿಗಳ ಹಲವಾರು ಸಭೆಗಳು ನಡೆದು, ಶ್ರೀನಗರದಲ್ಲಿ ಒಂದು ಭಾರೀ ಸಭೆಯೊಂದಿಗೆ ಅಂತಿಮ ರೂಪ ತಳೆದಿತ್ತು.
ಎಂಬತ್ತರ ದಶಕದ ಮಧ್ಯದ ನಂತರ ಇಡೀ ದೇಶದ ಗಮನ ಬೇರೆಡೆ ಹೊರಳಿದರೂ ಅಶೋಕ್ ಮಿತ್ರ ಅವರು ದೇಶದ ಒಕ್ಕೂಟ ತತ್ವದ ಬಗ್ಗೆ ತಮಗಿದ್ದ ಬದ್ಧತೆ ಬಿಟ್ಟು ಕದಲಲಿಲ್ಲ. ಅವರು ಸರಕು ಮತ್ತು ಸೇವಾ ತೆರಿಗೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದರು, ಅದು ರಾಜ್ಯಗಳ ಹಿತಾಸಕ್ತಿಗಳ ವಿರುದ್ಧವಿದ್ದು, ರಾಜ್ಯಗಳ ಹಕ್ಕುಗಳ ಮೇಲೆ ಉSಖಿ ಗಂಭೀರ ಅತಿಕ್ರಮಣ ಮಾಡುತ್ತದೆಂದು ಅವರು ವಾದಿಸಿದರು. ತಮ್ಮ ಆರೋಗ್ಯ ಹದಗೆಡುತ್ತಿದ್ದರೂ ಅವರು ಈ ವಿಷಯದ ಬಗ್ಗೆ ನಿರಂತರವಾಗಿ ಬರೆದರು ಹಾಗೂ ಅಂತಿಮವಾಗಿ ರಾಜ್ಯಗಳು ಉSಖಿ ವ್ಯವಸ್ಥೆಗೆ ಸಮ್ಮತಿ ನೀಡಿದಾಗ ಸಹಜವಾಗಿಯೇ ನಿರಾಶೆಗೊಂಡಿದ್ದರು.
ಹೀಗೆ, ತಮ್ಮ ಜೀವನದುದ್ದಕ್ಕೂ ಹಲವಾರು ರಂಗಗಳಲ್ಲಿ ದಣಿವರಿಯದೆ ದುಡಿದ ಮೇರು ವ್ಯಕ್ತಿ ಅಶೋಕ್ ಮಿತ್ರ. ಅವರ ನಿಧನದೊಂದಿಗೆ, ನಮ್ಮ ದೇಶ ಸದಾ ದುಡಿವ ವರ್ಗಗಳ ಜನರ ಹಕ್ಕುಗಳ ಬಗ್ಗೆಯೇ ಚಿಂತಿಸುತ್ತಿದ್ದ ಒಬ್ಬ ಶ್ರೇಷ್ಠ ಜ್ಞಾನಿಯನ್ನು ಕಳೆದುಕೊಂಡಿದೆ.

ಇಂಗ್ಲಿಷ್ ಮೂಲ : ಪ್ರಭಾತ್ ಪಟ್ನಾಯಕ್
ಕನ್ನಡಕ್ಕೆ : ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...