Homeಅಂಕಣಗಳುಜನಪರ ವಿದ್ವಾಂಸ, ರಾಜಕಾರಣಿ ಅಶೋಕ್ ಮಿತ್ರ

ಜನಪರ ವಿದ್ವಾಂಸ, ರಾಜಕಾರಣಿ ಅಶೋಕ್ ಮಿತ್ರ

- Advertisement -
- Advertisement -

ಕಳೆದ ಮೇ ಒಂದರಂದು ಅಶೋಕ್ ಮಿತ್ರ ಅವರು ತೀರಿಕೊಂಡರು. ಅವರದು ಡಿeಟಿಚಿissಚಿಟಿಛಿe (ಪುನರುಜ್ಜೀವನ)ದ ಬಹುಮುಖೀ ವ್ಯಕ್ತಿತ್ವ ಎನ್ನಬಹುದು. ಬಂಗಾಳಿ ಭಾಷೆಯ ಲೇಖಕರಾಗಿದ್ದ ಅವರು ತಮ್ಮ ಪ್ರಬಂಧಗಳ ಅನೇಕ ಸಂಪುಟಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ. ಇಛಿoಟಿomiಛಿ ತಿeeಞಟಥಿ (ಈಗ eಛಿoಟಿomiಛಿ ಚಿಟಿಜ ಠಿoಟiಣiಛಿಚಿಟ ತಿeeಞಟಥಿ, ಇPW), ಖಿhe ಖಿeಟegಡಿಚಿಠಿh ಪತ್ರಿಕೆಗಳಿಗೆ ಅಂಕಣಕಾರರಾಗಿದ್ದ ಅವರು ಸಾವಿರಾರು ಓದುಗರನ್ನು ಗಳಿಸಿದ್ದರು.ತೀಕ್ಷ್ಣಮತಿಯ ಅರ್ಥಶಾಸ್ತ್ರಜ್ಞರಾಗಿದ್ದ ಅವರು ಆ ವಿಷಯದಲ್ಲಿ ಎರಡು ವಿಶೇಷವಾದ ಕೃತಿಗಳನ್ನೂ ರಚಿಸಿದ್ದಾರೆ, ಖಿhe Shಚಿಡಿe oಜಿ Wಚಿges iಟಿ ಓಚಿಣioಟಿಚಿಟ Iಟಿಛಿome ಚಿಟಿಜ ಖಿeಡಿms oಜಿ ಖಿಡಿಚಿಜe ಮತ್ತು ಅಟಚಿss ಖeಟಚಿಣioಟಿs, ಈ ಎರಡು ಕೃತಿಗಳು ಇಂದಿಗೂ ಪ್ರಸ್ತುತ.
ಅರ್ಥಶಾಸ್ತ್ರಜ್ಞರಾಗಿ ಪಶ್ಚಿಮ ಬಂಗಾಳದ ಸರಕಾರದೊಂದಿಗೆ ಕೆಲಸ ಮಾಡಿದ್ದ ಅವರು ಕೃಷಿ ಬೆಲೆ ಆಯೋಗದ ಅಧ್ಯಕ್ಷರೂ ಆಗಿದ್ದರು; ವಿತ್ತ ಸಚಿವಾಲಯದ ಮುಖ್ಯ ಸಲಹೆಗಾರರೂ ಆಗಿದ್ದರು. ತಮ್ಮ ಜೀವನದುದ್ದಕ್ಕೂ ಕಮ್ಯುನಿಸ್ಟರಾಗಿದ್ದ ಅವರು ತಮ್ಮ ಸೈದ್ಧಾಂತಿಕ ನಿಲುವುಗಳಲ್ಲಿ ಅತ್ಯಂತ ಪಾರದರ್ಶಕವಾಗಿದ್ದರು. ಭಾರತದ ಎಡಪಂಥೀಯ ಬುದ್ಧಿಜೀವಿಗಳಲ್ಲಿ ಅಶೋಕ್ ಮಿತ್ರ ಪ್ರಮುಖ ಹೆಸರು.
1977ರಲ್ಲಿ ಪಶ್ಚಿಮ ಬಂಗಾಳದ ಮೊದಲ ಕಮ್ಯುನಿಸ್ಟ್ ಸರಕಾರದಲ್ಲಿ ವಾಣಿಜ್ಯ, ಅಭಿವೃದ್ಧಿ ಹಾಗೂ ಯೋಜನಾ ಸಚಿವರಾಗಿದ್ದರು. 1986ರವರೆಗೆ ಆ ಸ್ಥಾನದಲ್ಲಿ ಕಾರ್ಯನಿರ್ವಹಿಸಿ ರಾಜೀನಾಮೆ ನೀಡಿದರು. ಈ ಎಲ್ಲ ಕ್ಷೇತ್ರಗಳಲ್ಲಿ ಅವರ ಸಾಧನೆ ಅಗಾಧವಾದ್ದು. ಹೀಗೆ ತಮ್ಮ ಚಿಂತನೆ, ಬರವಣಿಗೆ ಹಾಗೂ ನಿರ್ವಹಿಸಿದ ಕಾರ್ಯಗಳ ಕಾರಣಕ್ಕಾಗಿ ಅವರು ಸ್ವಾತಂತ್ರ್ಯೋತ್ತರ ಭಾರತದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಇಂದಿನ ಬಾಂಗ್ಲಾದೇಶದಲ್ಲಿ 1928ರ ಏಪ್ರಿಲ್ 10 ರಂದು ಜನಿಸಿದ ಅಶೋಕ್ ಮಿತ್ರ, ಢಾಕಾದ ಅರ್ಮನಿಟೋಲ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಶಿಕ್ಷಣಕ್ಕಾಗಿ ಢಾಕಾ ವಿಶ್ವವಿದ್ಯಾಲಯಕ್ಕೆ ಹೋದರು. ಆದರೆ ಅವರು ಅರ್ಥಶಾಸ್ತ್ರದಲ್ಲಿ ಎಂಎ ಪರೀಕ್ಷೆ ಕಟ್ಟಬೇಕೆನ್ನುವಷ್ಟರಲ್ಲಿ ದೇಶ ವಿಭಜನೆಯಾಗಿ ಢಾಕಾ ಬಿಡಬೇಕಾಗಿ ಬಂತು. ಆಗ ಅವರು ತಮ್ಮ ಗುರು ಎ.ಕೆ.ದಾಸಗುಪ್ತ ಅವರನ್ನು ಹಿಂಬಾಲಿಸಿ ಬನಾರಸ್ ಹಿಂದು ವಿಶ್ವವಿದ್ಯಾಲಯಕ್ಕೆ ಬಂದು ಸೇರಿ, ಅಲ್ಲಿ ತಮ್ಮ ಎಂಎ ಡಿಗ್ರಿ ಮುಗಿಸಿದರು. ಆ ಪರೀಕ್ಷೆಯ ಭಾಗವಾಗಿ ಬರೆದ ಪ್ರಬಂಧವನ್ನು ಓದಿದ ಪರೀಕ್ಷಕರಾಗಿದ್ದ ಡಿ.ಪಿ. ಮುಖರ್ಜಿಯವರು ಆ ಪ್ರಬಂಧದ ಆಧಾರದ ಮೇಲೆಯೇ ಅಶೋಕ್ ಮಿತ್ರ ಅವರನ್ನು ಲಖನೌ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಲು ಆಹ್ವಾನಿಸಿದರು. ಹೀಗೆ ಅಶೋಕ್ ಮಿತ್ರ ಅವರು ಲಖನೌನಲ್ಲಿ ಉಪನ್ಯಾಸಕರಾಗಿ ಕೆಲಕಾಲ ಕೆಲಸ ಮಾಡಿ, ನಂತರ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಸೇರಿದರು. ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಎಕನಾಮಿಕ್ ರಿಸರ್ಚ್‍ನಲ್ಲಿಯೂ ಕೆಲವು ವರ್ಷ ದುಡಿದಿದ್ದರು.
ನೆದರ್ಲ್ಯಾಂಡ್ ನಲ್ಲಿ ನೋಬೆಲ್ ಪುರಸ್ಕøತ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಜಾನ್ ಟಿನ್ಬರ್ಗೆನ್ ಅವರ ಮೇಲ್ವಿಚಾರಣೆಯಲ್ಲಿ ಅಶೋಕ್ ಮಿತ್ರ ತಮ್ಮ ಡಾಕ್ಟೋರಲ್ ಪ್ರಬಂಧವನ್ನು ಬರೆದು ಮಂಡಿಸಿದರು. ಆ ಪ್ರಬಂಧದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ ಮೈಕಲ್ ಕಲೆಕೀ ಅವರು ಪ್ರತಿಪಾದಿಸಿದ ವಿತರಣೆಯ ಸಿದ್ಧಾಂತಕ್ಕೆ ತಿದ್ದುಪಡಿಗಳನ್ನು ಸೂಚಿಸಿದ್ದರು. ಈ ಪ್ರಬಂಧ ಮಿತ್ರ ಅವರಿಗೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು. ಭಾರತಕ್ಕೆ ಮರಳಿದ ನಂತರ ಕೊಲ್ಕೋತದಲ್ಲಿರುವ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (IIಒ) ಜೊತೆಗೆ ಸೇರಿಕೊಂಡು, ಆ ಸಂಸ್ಥೆಯನ್ನು ಸಾಮಾಜಿಕ ವಿಜ್ಞಾನದ ದೇಶದ ಒಂದು ಅತ್ಯುನ್ನತ ಸಂಸ್ಥೆಯಾಗಿ ರೂಪಿಸುವ ಮಹತ್ಕಾರ್ಯದಲ್ಲಿ ಭಾಗಿಯಾದರು.
ಐಐಎಂನ ನಂತರದಲ್ಲಿ ಅಶೋಕ್ ಸರಕಾರವನ್ನು ಸೇರಿಕೊಂಡರು, ತುರ್ತುಪರಿಸ್ಥಿತಿ ಹೇರಿದಾಗ ಕೆಲಕಾಲ ವಿದೇಶದಲ್ಲಿ ಅಜ್ಞಾತವಾಸದಲ್ಲಿ ಕಳೆದು, 1977ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾದರು; ಜ್ಯೋತಿ ಬಸು ಸರಕಾರದಲ್ಲಿ ಸಚಿವರೂ ಆದರು. ಅವರು ಸಚಿವರಾಗಿದ್ದ ಕಾಲದಲ್ಲಿಯೇ ಪಶ್ಚಿಮ ಬಂಗಾಳದ ಗ್ರಾಮೀಣ ಭಾಗದಲ್ಲಿ ಅತ್ಯದ್ಭುತ ಬದಲಾವಣೆಗಳಾದವು ಹಾಗೂ ಈ ಬದಲಾವಣೆಗಳಲ್ಲಿ ಅಶೋಕ್ ಮಿತ್ರ ಅವರ ಪಾತ್ರ ನಿರ್ಣಾಯಕವಾದುದು. ಈ ಅವಧಿಯನ್ನು ‘ಆಪರೇಷನ್ ಬರ್ಗಾ’ ಎಂದು ಕರೆಯಲಾಗುತ್ತದೆ. ಆಗ ಭೂಮಿ ಹಂಚಿಕೆಯ ಪ್ರಕ್ರಿಯೆಯನ್ನು ಪುನರಾರಂಭಿಸಲಾಯಿತು ಮತ್ತು ಹೆಚ್ಚಿನ ಸಂಪನ್ಮೂಲಗಳ ಒಡೆತನವನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಪಂಚಾಯತಿಗಳಿಗೇ ವಹಿಸಲಾಯಿತು. ಅದರೊಂದಿಗೆ ಕೃಷಿ, ನೀರಾವರಿ ಹಾಗೂ ಗ್ರಾಮೀಣ ಮೂಲಸೌಕರ್ಯಗಳ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಯಿತು. ಈ ಎಲ್ಲ ಕ್ರಮಗಳು ಪಶ್ಚಿಮ ಬಂಗಾಳದಲ್ಲಿ ಅನೇಕ ದಶಕಗಳಿಂದ ಕೃಷಿ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ಜಡತೆಯನ್ನು ಹೋಗಲಾಡಿಸಿ, ಗ್ರಾಮೀಣ ಆರ್ಥಿಕತೆಗೆ ಹೊಸ ಜೀವ ತುಂಬಿದವು
ಅತ್ಯಂತ ಸೌಜನ್ಯ, ಅಸೀಮ ಧೈರ್ಯ ಹಾಗೂ ಪ್ರಾಮಾಣಿಕತೆಯನ್ನು ಹೊಂದಿದ್ದ ಅಶೋಕ್ ಮಿತ್ರ, ಅತ್ಯಂತ ನೇರನಡೆಯವರು, ನಿಷ್ಠುರ ಮಾತುಗಳಿಗೆ ಹೆಸರಾಗಿದ್ದವರು, ಸ್ನೇಹಪೂರ್ಣ ನಡವಳಿಕೆಯ ಜೊತೆಜೊತೆಗೇ ತಮ್ಮ ನೇರಾನೇರ ಟೀಕೆಗಳಿಗೂ ಖ್ಯಾತರಾಗಿದ್ದರು. (ಈ ಮಾತನ್ನು ನಾನು ಅನುಭವದಿಂದ ಹೇಳುತ್ತಿದ್ದೇನೆ). ಪಕ್ಷಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದರೂ ಕೂಡ ಪಕ್ಷದ ಕ್ರಮಗಳು ತಪ್ಪೆಂದು ಕಂಡಾಗ ಕಟುವಾದ ಟೀಕೆಗಳಿಗೆ ಒಳಪಡಿಸುತ್ತಿದ್ದರು. ಆದರೆ ಅವರ ನಿಷ್ಕಲ್ಮಷ ಮನಸ್ಸನ್ನು ಎಲ್ಲರೂ ಬಲ್ಲವರಾದುದರಿಂದ ಯಾರೂ ಬೇಸರಿಸಿಕೊಳ್ಳುತ್ತಿದ್ದಿಲ್ಲ.
ತಾತ್ವಿಕ ಭಿನ್ನಾಭಿಪ್ರಾಯದಿಂದ ಎಡಪಕ್ಷದ ಸರಕಾರಕ್ಕೆ ರಾಜೀನಾಮೆ ನೀಡಿ ಹೊರಬಂದರೂ, ಸಿಪಿಎಂ ಪಕ್ಷ ಅವರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿತು. ದೇಶದಲ್ಲಿ ನವಉದಾರೀಕರಣದ ನೀತಿಗಳನ್ನು ಜಾರಿಗೊಳಿಸಲು ಪ್ರಾರಂಭಿಸಿದ್ದ ಸಮಯ ಅದು. ರಾಜ್ಯಸಭೆಯ ಸದಸ್ಯರಾಗಿ ಅವರು ಕೈಗಾರಿಕೆ ಮತ್ತು ವಾಣಿಜ್ಯದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ಅಲ್ಲಿದ್ದುಕೊಂಡು ಆ ಸಮಯದಲ್ಲಿ ಡಬ್ಲುಟಿಒ ಮುಖಾಂತರ ಅಮೆರಿಕ, ಮತ್ತು ಇತರ ಮುಂದುವರೆದ ರಾಷ್ಟ್ರಗಳ ಬೆಂಬಲದಿಂದ ಹೇರಲಾಗುತ್ತಿದ್ದ ಬೌದ್ಧಿಕ ಆಸ್ತಿ ಹಕ್ಕುಗಳ  ಆಧಿಪತ್ಯವನ್ನು ತಡೆಗಟ್ಟಲು ಹೋರಾಡಿದರು.
ಅಶೋಕ್ ಮಿತ್ರ ಅವರನ್ನು ಎಲ್ಲಕ್ಕಿಂತ ಹೆಚ್ಚಾಗಿ ನೆನಪಿಸಿಕೊಳ್ಳುವುದು ರಾಜ್ಯಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದ ಕಾರಣಕ್ಕಾಗಿ. ಕೇಂದ್ರ ಸರ್ಕಾರದಲ್ಲಿದ್ದ ಅಧಿಕಾರ ಮತ್ತು ಸಂಪನ್ಮೂಲಗಳ ಅಪಾರ ಕೇಂದ್ರೀಕರಣವನ್ನು ಬಯಲು ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಇಂತಹ ಕೇಂದ್ರೀಕರಣದ ವ್ಯವಸ್ಥೆ ಯಾರ ಗಮನಕ್ಕೂ ಬರದಂತೆ ಸಾಗುತ್ತಿತ್ತು. ದೇಶದ ಒಕ್ಕೂಟ ವ್ಯವಸ್ಥೆಗೆ ಮಹತ್ವ ನೀಡುವಂತೆ ಅವರು ದೇಶದ ಎಡಪಕ್ಷಗಳಿಗೆ ಮನವರಿಕೆ ಮಾಡಿಕೊಟ್ಟರು. ಜ್ಯೋತಿಬಸು ಜೊತೆಗೂಡಿ ಎಲ್ಲ ವಿರೋಧ ಪಕ್ಷಗಳು ಮತ್ತು ಸರಕಾರಗಳನ್ನು ಒಕ್ಕೂಟದ ವೇದಿಕೆಯಡಿಯಲ್ಲಿ ಒಗ್ಗೂಡಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರು. ಅವರ ಪರಿಶ್ರಮದ ಫಲವಾಗಿ ಕಾಂಗ್ರೆಸೇತರ ಮುಖ್ಯಮಂತ್ರಿಗಳ ಹಲವಾರು ಸಭೆಗಳು ನಡೆದು, ಶ್ರೀನಗರದಲ್ಲಿ ಒಂದು ಭಾರೀ ಸಭೆಯೊಂದಿಗೆ ಅಂತಿಮ ರೂಪ ತಳೆದಿತ್ತು.
ಎಂಬತ್ತರ ದಶಕದ ಮಧ್ಯದ ನಂತರ ಇಡೀ ದೇಶದ ಗಮನ ಬೇರೆಡೆ ಹೊರಳಿದರೂ ಅಶೋಕ್ ಮಿತ್ರ ಅವರು ದೇಶದ ಒಕ್ಕೂಟ ತತ್ವದ ಬಗ್ಗೆ ತಮಗಿದ್ದ ಬದ್ಧತೆ ಬಿಟ್ಟು ಕದಲಲಿಲ್ಲ. ಅವರು ಸರಕು ಮತ್ತು ಸೇವಾ ತೆರಿಗೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದರು, ಅದು ರಾಜ್ಯಗಳ ಹಿತಾಸಕ್ತಿಗಳ ವಿರುದ್ಧವಿದ್ದು, ರಾಜ್ಯಗಳ ಹಕ್ಕುಗಳ ಮೇಲೆ ಉSಖಿ ಗಂಭೀರ ಅತಿಕ್ರಮಣ ಮಾಡುತ್ತದೆಂದು ಅವರು ವಾದಿಸಿದರು. ತಮ್ಮ ಆರೋಗ್ಯ ಹದಗೆಡುತ್ತಿದ್ದರೂ ಅವರು ಈ ವಿಷಯದ ಬಗ್ಗೆ ನಿರಂತರವಾಗಿ ಬರೆದರು ಹಾಗೂ ಅಂತಿಮವಾಗಿ ರಾಜ್ಯಗಳು ಉSಖಿ ವ್ಯವಸ್ಥೆಗೆ ಸಮ್ಮತಿ ನೀಡಿದಾಗ ಸಹಜವಾಗಿಯೇ ನಿರಾಶೆಗೊಂಡಿದ್ದರು.
ಹೀಗೆ, ತಮ್ಮ ಜೀವನದುದ್ದಕ್ಕೂ ಹಲವಾರು ರಂಗಗಳಲ್ಲಿ ದಣಿವರಿಯದೆ ದುಡಿದ ಮೇರು ವ್ಯಕ್ತಿ ಅಶೋಕ್ ಮಿತ್ರ. ಅವರ ನಿಧನದೊಂದಿಗೆ, ನಮ್ಮ ದೇಶ ಸದಾ ದುಡಿವ ವರ್ಗಗಳ ಜನರ ಹಕ್ಕುಗಳ ಬಗ್ಗೆಯೇ ಚಿಂತಿಸುತ್ತಿದ್ದ ಒಬ್ಬ ಶ್ರೇಷ್ಠ ಜ್ಞಾನಿಯನ್ನು ಕಳೆದುಕೊಂಡಿದೆ.

ಇಂಗ್ಲಿಷ್ ಮೂಲ : ಪ್ರಭಾತ್ ಪಟ್ನಾಯಕ್
ಕನ್ನಡಕ್ಕೆ : ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಮ್ಮ ರಕ್ತದಿಂದ ಅವರು ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆಯೇ?’: ಕೇರಳ ವಿವಿಯಲ್ಲಿ ಜಾತಿ ತಾರತಮ್ಯದ ವಿರುದ್ಧ ದಲಿತ ಸಂಶೋಧನಾ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಉಪವಾಸ

ತಿರುವನಂತಪುರಂ: ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳ ನಿರಾಕರಣೆಯ ಆರೋಪಗಳನ್ನು ಮುಂದಿಟ್ಟುಕೊಂಡು ಕೇರಳದ ತುಂಚತ್ ಎಳುಥಾಚನ್ ಮಲಯಾಳಂ ವಿಶ್ವವಿದ್ಯಾಲಯದ ದಲಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಅನಘಾ ಶಾಸಿ...

ಸ್ವತಂತ್ರ ಭಾರದ್ವಾಜ್ ಬಂಧನದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಮನೆ ಮೇಲೆ ಕಲ್ಲು ತೂರಾಟ, ಪೊಲೀಸರ ರಕ್ಷಣೆಗೆ ಮನವಿ

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಸಂಜಯ್ ಆಝಾದ್ ಎಂಬುವವರ ಮೇಲೆ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಭೀಕರವಾಗಿ ಹಲ್ಲೆ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ...

ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಬ್ಯಾಂಕ್‌ ಖಾತೆ ನಿಷ್ಕ್ರಿಯ: ಆರ್‌ಟಿಐ ಮಾಹಿತಿ

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಲಭ್ಯವಾಗಿರುವ ಉತ್ತರದ ಪ್ರಕಾರ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಖಾತೆಯು ನಿಷ್ಕ್ರಿಯಗೊಂಡಿದೆ. ಸುಮಾರು 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದೆ. ಆಗಸ್ಟ್ 12,...

ಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ (ಸೆ.6) ಬೆಂಗಳೂರಿನ...

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...

ತಲೆ ಮರೆಸಿಕೊಂಡಿದ್ದ ಸ್ವತಂತ್ರ ಭಾರದ್ವಾಜ್‌ ಅರೆಸ್ಟ್ : ಪೋಕ್ಸೋ ಅಡಿ ಮತ್ತೊಂದು ಪ್ರಕರಣ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದುತ್ವ ಸೋಶಿಯಲ್ ಮೀಡಿಯಾ 'ಇನ್‌ಫ್ಲುಯೆನ್ಸರ್' ಸ್ವತಂತ್ರ...

ಆರ್‌ಎಸ್ಎಸ್ ಬೆಂಬಲಿತ ಗುಂಪುಗಳಿಂದ ದೇಣಿಗೆ ಸ್ವೀಕರಿಸದಿರಲು ಅಮೆರಿಕದ ರಾಜಕಾರಣಿಗಳಿಂದ ಪ್ರತಿಜ್ಞೆ

ಅಮೆರಿಕದ ಸುಮಾರು 90 ಜನಪ್ರತಿನಿಧಿಗಳು ಮತ್ತು ರಾಜಕೀಯ ಅಭ್ಯರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಬೆಂಬಲಿತ ಗುಂಪುಗಳಿಂದ ರಾಜಕೀಯ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದುತ್ವ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್...