Homeಮುಖಪುಟಕಾಲಾ ಬಣ್ಣ ಮತ್ತು ಸಂಕೇತಗಳಲ್ಲಿ ಅರಳುವ ರಾಜಕಾರಣ

ಕಾಲಾ ಬಣ್ಣ ಮತ್ತು ಸಂಕೇತಗಳಲ್ಲಿ ಅರಳುವ ರಾಜಕಾರಣ

- Advertisement -
- Advertisement -

ಖ್ಯಾತಿ ಮತ್ತು ಹಣ ಮಾಡುವ ಉದ್ದೇಶಗಳನ್ನಿಟ್ಟುಕೊಂಡು ಸಿನಿಮಾ ಇಂಡಸ್ಟ್ರಿಗೆ ಬರುವ ಜನರೇ ಅಧಿಕವಾಗಿರುವ ಈ ಸಂದರ್ಭದಲ್ಲಿ ತಮಿಳು ಚಿತ್ರ ನಿರ್ದೇಶಕ ಪ. ರಂಜಿತ್‍ರಂತವರು ಬಹಳ ಅಪರೂಪ. ರಜನಿಕಾಂತ್ ಅಭಿನಯದ `ಕಾಲಾ’ವನ್ನು ಪ ರಂಜಿತ್ ಪ್ರಜ್ಞಾವಂತಿಕೆಯಿಂದ ಮಾಡಿದ್ದಾರೆ. `ಕಾಲಾ’ ಸಿನಿಮಾ ನೋಡಿದಾಗ ನಿರ್ದೇಶಕನ ಬೌದ್ಧಿಕತೆ, ಸಾಮಾಜಿಕ ಬದ್ಧತೆ ಮತ್ತು ಆತನ ಸೈದ್ಧಾಂತಿಕ ರಾಜಕಾರಣ ಎದ್ದು ಕಾಣುತ್ತದೆ. ಪ ರಂಜಿತ್ ಕೇವಲ ರಾಜಕೀಯ ಸಿದ್ಧಾಂತಗಳ ಮೂಲಕ ಕಥೆ ಹೇಳದೆ, ತನ್ನ ರಾಜ್ಯ ಕೇರಳದ ಸಾಂಸ್ಕøತಿಕ ರಾಜಕಾರಣ ಮತ್ತು ಕೇರಳದ ಸ್ಥಳೀಯ ಸಮುದಾಯಗಳ ಪರಂಪರೆಯನ್ನೂ ಬಳಸಿಕೊಂಡಿದ್ದಾರೆ. ಅದರಲ್ಲೂ ಕೇರಳದ ಅಡಿಯನ್ ಸಮುದಾಯದ ಮೌಖಿಕ ಕಥನಗಳ ಬಗ್ಗೆ ರಂಜಿತ್‍ಗೆ ಅಪಾರ ಅರಿವಿರುವುದು ಕಂಡುಬರುತ್ತದೆ.
ಕಾಲಾ ಸಿನಿಮಾ ವರ್ತಮಾನದ ಇಂಡಿಯಾದ ಜನಚಳವಳಿಗಳ ಸೈದ್ಧಾಂತಿಕ ನಿಲುವು ಹೇಗಿರಬೇಕು ಎಂಬುದನ್ನು ನಿರೂಪಿಸುವ ಚಿತ್ರ. ಅನೇಕ ದೃಶ್ಯಗಳಲ್ಲಿ ಬುದ್ಧ, ಪೆರಿಯಾರ್, ಜ್ಯೋತಿಬಾಫುಲೆ, ಅಂಬೇಡ್ಕರ್ ಮಾಕ್ರ್ಸ್ ಸಿದ್ಧಾಂತಗಳು ಸಾಂಕೇತಿಕವಾಗಿ ಬಂದುಹೋಗುತ್ತವೆ. ಚಿತ್ರದ ಕೊನೆಗೆ ನಾಯಕ ಚಳವಳಿಯ ಕುರಿತು ಮಾತಾಡುವಾಗ ಬಾಬಾ ಸಾಹೇಬರು ಭಾಷಣ ಮಾಡುವ ದೃಶ್ಯವೊಂದು ಕಂಡೂಕಾಣದಂತೆ ಇಣುಕುತ್ತದೆ. ಕೇರಳದ ಆದಿವಾಸಿಗಳಾದ ಅಡಿಯನ್ನರ ಕಥನಗಳಲ್ಲಿನ ‘ಭೂಮಿ ನಮ್ಮ ಆಜನ್ಮಸಿದ್ದ ಹಕ್ಕು, ಅದು ನಮ್ಮ ತಾಯಿಯೂ ಕೂಡ’ ಎಂಬಂಥ ಮಾತುಗಳು ನಾಯಕನ ಮಾತುಗಳಲ್ಲಿ ಮತ್ತೆ ಮತ್ತೆ ಬರುತ್ತವೆ. ‘ಭೂಮಿ ನಿಮಗೆ ವ್ಯಾಪಾರ ಅಧಿಕಾರ, ಆದರೆ ನಮಗದು ಬದುಕು, ಒಂದು ಹಿಡಿ ಮಣ್ಣು ಕೂಡ ನಿಮಗೆ ದಕ್ಕಲು ಬಿಡುವುದಿಲ್ಲ. ಈ ನೆಲ ನನ್ನದು, ನಿಮ್ಮ ದೇವರೇ ಬಂದರೂ ಆ ದೇವರನ್ನೂ ಕೂಡ ಲೆಕ್ಕಿಸಲಾರೆ’ ಎಂದು ಕಾಲಾ ಎದೆಯುಬ್ಬಿಸಿ ಹೇಳುತ್ತಾನೆ. ಇದು ಕಮ್ಯುನಿಸ್ಟರ ಭೂಮಿ ಹೋರಾಟಗಳನ್ನು ನೆನಪಿಸುತ್ತದೆ.
ಮುಂಬೈನ ಧಾರಾವಿ ಸ್ಲಮ್ಮನ್ನು ವಶಪಡಿಸಿಕೊಳ್ಳಲು ಸ್ಥಳೀಯ ಶ್ರೀಮಂತ ಹವಣಿಸುವ ಸಂದರ್ಭದಲ್ಲಿ ಅಲ್ಲಿನ ಜನನಾಯಕ ಕಾಲಾ ಪ್ರತಿಭಟಿಸುವುದರ ಮೂಲಕ ಸಿನಿಮಾ ಪ್ರಾರಂಭವಾಗುತ್ತದೆ. ರಿಯಲ್ ಎಸ್ಟೇಟ್ ಮಾಫಿಯ ಮತ್ತು ಸ್ಥಳೀಯ ಸರ್ಕಾರದ ವಿರುದ್ಧ ಕಾಲಾ ಸಮರ ಸಾರುತ್ತಾನೆ. `ಕಾಲಾ’ದಲ್ಲಿ ಹಸಿರು, ನೀಲಿ, ಕೆಂಪು, ಕಪ್ಪು ಮತ್ತು ಕೇಸರಿ ಬಣ್ಣದ ಧ್ವಜಗಳು ಢಾಳಾಗಿ ಕಾಣಿಸಿಕೊಳ್ಳುತ್ತವೆ. ಶ್ರೀಕೃಷ್ಣ ಮತ್ತು ಶ್ರೀರಾಮ್ ಘೋಷಣೆಗಳು, ಹಿಂಸೆ, ಆಯುಧಗಳ ಬಳಕೆಯನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಶ್ರೀಮಂತನೊಬ್ಬ ಹೇಗೆ ಜನರೆಲ್ಲ ತನ್ನ ಅಡಿಯಾಳಾಗಿರಬೇಕು, ಅವರ ಅಧೀನತೆಯನ್ನು ಶಾಶ್ವತವಾಗಿಡಲು ಬೇಕಾದ ಕೋಮುವಾದ, ಫ್ಯಾಸಿಸಂನ್ನು ಹೇಗೆ ಬಳಸಬೇಕು ಎಂಬುದನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಇಂತಹ ಜನವಿರೋಧಿ ರಾಜಕಾರಣದ ಪ್ರತಿನಿಧಿಯಾಗಿ ಶ್ರೀಹರಿದಾದ (ನಾನಾ ಪಾಟೇಕರ್) ಕಂಡುಬರುತ್ತಾನೆ. ಪ್ರಜ್ಞಾಪೂರ್ವಕವಾಗಿಯೇ ಪೊಲೀಸ್ ವ್ಯವಸ್ಥೆ ಫ್ಯಾಸಿಸಂನೊಂದಿಗೆ ಕೈ ಜೋಡಿಸುತ್ತಾ ದಮನಿತರನ್ನು ಸದೆಬಡಿಯುವ ಅತ್ಯಾಚಾರ ಮಾಡುವ, ಕೊಲ್ಲುವ ಚಿತ್ರಣಗಳನ್ನು ವಾಸ್ತವದ ನೆಲೆಯಲ್ಲಿ ತೋರಿಸಲಾಗಿದೆ. ಹಾಗಾಗಿ ಕಾಲಾ ಚಿತ್ರದ ವರ್ತಮಾನದ ಭಾರತದ ರಾಜಕಾರಣದ ಮೀನಿಯೇಚರ್‍ನÀಂತೆ ಕಾಣುತ್ತದೆ. ಹರಿದಾದನ ಪಟಾಲಂ ಗಣೇಶ ಚತುರ್ಥಿಯ ಆಚರಣೆ, ಅವರ ಪೋಸ್ಟರ್‍ಗಳಲ್ಲಿ
ಹರಿದಾದನ ಚಿತ್ರ ಮತ್ತು Im ಠಿuಡಿe ಠಿeಣಡಿioಣ, I ತಿiಟಟ ಛಿಟeಚಿಟಿ ಣhis ಛಿouಟಿಣಡಿಥಿ’ ಎಂಬ ಬರಹ ಕೇಸರಿ ಬಣ್ಣ ಸಮಕಾಲೀನ ರಾಜಕಾರಣವನ್ನು ಸಂಕೇತಿಸುತ್ತವೆ. ಚಳವಳಿಗಾರರ ಮೇಲೆ ಹಿಂಸಾತ್ಮಕ ದಾಳಿ ನಡೆಯುತ್ತಾ ಹೆಣಗಳು ಬೀಳುತ್ತಿದ್ದರೆ ಹರಿದಾದನ ಮನೆಯಲ್ಲಿ ಭಗವದ್ಗೀತೆ ಮತ್ತು ರಾಮಾಯಣದ ಪಾರಾಯಣ ನಡೆಯುತ್ತಿರುತ್ತದೆ. ಜೈಶ್ರೀರಾಮ್ ಮೊಳಗುತ್ತಿರುತ್ತದೆ. ಆಗ ಹರಿದಾದ ‘ಪೂಜೆಗೆ ಎಲ್ಲವನ್ನು ಅರ್ಪಿಸಿದ್ದೇವೆ, ದೇವರೂ ತೃಪ್ತಿಗೊಂಡಿದ್ದಾನೆ. ಆದರೆ ಕೊನೆಯದಾಗಿ ಒಂದೇ ಒಂದು ಮನುಷ್ಯನ ತಲೆ ಬೇಕಂತೆ ತಗಂಡು ಬಾ ಹೋಗು’ ಎಂದು ತನ್ನ ಹಿಂಬಾಲಕನಿಗೆ ಹೇಳುತ್ತಾನೆ.
ಧಾರಾವಿ ಸ್ಲಮ್ಮನ್ನು ಅಭಿವೃದ್ಧಿಪಡಿಸಲು ಬರುವ ಜಲೀನಳನ್ನು ಸ್ಲಮ್ಮಿನ ಜನರಾದ ತಮಗೆ ಯಾವ ಅನುಕೂಲಗಳು ಬೇಕು ಎಂದು ಕೇಳಿದಾಗ ಜನ ಕರೆಂಟು, ನೀರು, ವಸತಿ, ಕ್ರೀಡಾಂಗಣ ಕೇಳುತ್ತಾರೆಯೆ ವಿನಃ ನಮಗೊಂದು ದೇವಾಲಯ ಬೇಕೆಂದು ಅಪ್ಪಿತಪ್ಪಿಯೂ ಪ್ರಸ್ತಾಪಿಸುವುದಿಲ್ಲ. ಸೂಕ್ಷ್ಮ ಅಂಬೇಡ್ಕರ್‍ವಾದಿಯೊಬ್ಬನ ಪ್ರಜ್ಞಾವಂತಿಕೆಯಿದು. ಅಂಬೇಡ್ಕರ್ ಕಾಲಾರಾಮ ದೇವಸ್ಥಾನದ ಪ್ರವೇಶಿಕೆಯ ಸಂದರ್ಭದಲ್ಲಿ ಹೇಳುವ ‘ ದೇವಾಲಯ ಮತ್ತು ಧರ್ಮ ಅಸಮಾನತೆಯ ಕೂಪಗಳು, ನಮಗೆ ಬೇಕಿರುವುದು ಶಾಲೆ, ರಾಜ್ಯಸಭೆಗಳು ಲೋಕಸಭೆಗಳೆ ವಿನಃ ದೇವಾಲಯಗಳಲ್ಲ’ ಎಂಬ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಕೋಮುಪ್ರೇರಿತ ರಾಜಕಾರಣವನ್ನು ಅರ್ಥಮಾಡಿಕೊಳ್ಳಬೇಕಾದ ಸೂಕ್ಷ್ಮತೆಗಳ ಕುರಿತ ಚಿತ್ರದ ಆಶಯ ಮನನೀಯ. ಮೊದಲ ಹಾಡಿನಲ್ಲಿ ಕೋಮುವಾದಿಗಳು ಮುಸ್ಲಿಮರನ್ನು ಬೆನ್ನಟ್ಟಿ ಬರುವಾಗ ನಾಯಕ ಅವರನ್ನು ರಕ್ಷಿಸುತ್ತಾನೆ. ಕಾಲಾನ ಸಂಭ್ರಮ ಮತ್ತು ಚಳವಳಿಯಲ್ಲಿ ಮುಸ್ಲಿಮರ ಪಾಲಿರುತ್ತದೆ. ಚಳವಳಿಯ ಒಗ್ಗಟ್ಟು ಒಡೆಯಲು ಮಸೀದಿಯೊಳಗೆ ಹಂದಿಮಾಂಸವನ್ನು ಹಾಕುವ ಮೂಲಕ ಧರ್ಮದ ಹೆಸರಿನಲ್ಲಿ ಉದ್ರಿಕ್ತರನ್ನಾಗಿ ಮಾಡುವ ತಂತ್ರವನ್ನು ಕೋಮುವಾದಿಗಳು ಮಾಡುತ್ತಾರೆ. ಇದನ್ನು ಅತ್ಯಂತ ಪ್ರಜ್ಞಾವಂತಿಕೆಯಿಂದ ನಿವಾರಿಸಿಕೊಳ್ಳುವ ನಾಯಕ ಸಂಘಟನೆಗೆ ಒಗ್ಗಟ್ಟು ಮತ್ತು ಸೂಕ್ಷ್ಮಗ್ರಹಿಕೆಗಳ ಬಗ್ಗೆ ಮನವರಿಕೆ ಮಾಡಿ ಚಳವಳಿಗೆ ತೊಡಗಿಸುತ್ತಾನೆ.
ಹರಿದಾದ ಮತ್ತು ಕಾಲಾ ನಡುವಿನ ಒಂದು ಸಂಭಾಷಣೆ ಗಮನ ಸೆಳೆಯುವಂತಹದ್ದು. ‘ಏನದು ಕಾಲಾ, ಕಪ್ಪುಬಣ್ಣ ಕಪ್ಪುಬಟ್ಟೆ ನೋಡೋಕೆ ಅಸಹ್ಯ’ ಎನ್ನುತ್ತಾನೆ. ‘ಬಿಳಿ ಶ್ರೇಷ್ಠ, ಕಪ್ಪು ಕೊಳಕು ನಿಮ್ಮ ದೃಷ್ಟಿಕೋನವೆ ಸರಿಯಿಲ್ಲ. ಕಪ್ಪು ಶ್ರಮಸಂಸ್ಕøತಿಯ ಸಂಕೇತ ಕಣೊ’ ಎನ್ನುವ ನಾಯಕನ ಮಾತು ಪೆರಿಯಾರರನ್ನು ನೆನಪಿಸುತ್ತದೆ. ಇಡೀ ಚಿತ್ರ ನಾಯಕನೆ ಬಂದು ಚಳವಳಿಯನ್ನು ಮುನ್ನಡೆಸಬೇಕಿಲ್ಲ ಎಲ್ಲರೂ ನಾಯಕರಾಗಬೇಕು ಎನ್ನುವ ಸತ್ಯವನ್ನು ಸೂಚಿಸುತ್ತದೆ. ಕಪು,್ಪ ಹಸಿರು, ಕೆಂಪು, ನೀಲಿ, ಬಣ್ಣಗಳೆಲ್ಲಾ ಸೇರಿ ಬಂಡವಾಳಶಾಹಿಯನ್ನು, ಕೋಮುವಾದವನ್ನು ಹಿಮ್ಮೆಟ್ಟಿಸುವ ಚಿತ್ರದ ಕ್ಲೈಮ್ಯಾಕ್ಸ್ ಕಾವ್ಯಾತ್ಮಕವಾಗಿದೆ. ಜೊತೆಗ ಹಿಂಸೆಯೆ ಪರಿಹಾರವಲ್ಲ ಎಂಬ ಬುದ್ಧ, ಬಸವ, ಮಂಡೇಲಾ, ಅಂಬೇಡ್ಕರ್ ಆಶಯದಂತೆ ಚಿತ್ರದ ಕೊನೆಯಲ್ಲಿ ಖಳನಾಯಕನ್ನು ಕೊಲ್ಲುವುದಿಲ್ಲ. ಚಿತ್ರದಲ್ಲಿ ಹೊಡೆದಾಟಗಳನ್ನು ಚಳವಳಿಯ ಅನಿವಾರ್ಯ ರಕ್ಷಣೆಯ ಭಾಗವೆಂಬಂತೆ ಚಿತ್ರಿಸಲಾಗಿದೆಯೆ ವಿನಃ ವಿಜೃಂಭಿಸಿಲ್ಲ.
ಚಿತ್ರದಲ್ಲಿ ವರ್ತಮಾನದ ಕಾರ್ಪೊರೇಟ್ ಆಡಳಿತದ ಹುಸಿ ಅಭಿವೃದ್ಧಿ, ಹುಸಿ ದೇಶಪ್ರೇಮವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಇಂಥ ಸಂದರ್ಭದಲ್ಲಿ ಎಲ್ಲರೂ ಸೈದ್ಧಾಂತಿಕ ಭಿನ್ನತೆಗಳಾಚೆ ಒಂದಾಗಿ ಅಪಾಯದಲ್ಲಿರುವ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಬೇಕಿದೆ ಎಂಬ ಸಂದೇಶ ಸಕಾಲಿಕ. ಚಳವಳಿಯ ಮೂಲಕ ಮಾತ್ರ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದೂ ಸಿನಿಮಾದ ಮೂಲಕ ಹೇಳಿದ್ದಾರೆ ಪ. ರಂಜಿತ್. ಇಜuಛಿಚಿಣe ಶಿಕ್ಷಿತರಾಗಿ, ಂgiಣಚಿಣe, ವಿಚಾರವಂತರಾಗಿ ಯೋಚಿಸಿ, ಔಡಿgಚಿಟಿize ಸಂಘಟಿತರಾಗಿ ಹೋರಾಡಿ ಎಂಬ ತತ್ವಗಳನ್ನು ಹಂತಹಂತವಾಗಿ ಸಾರುತ್ತದೆ.
ಸಿನಿಮಾದಲ್ಲಿ ಕೇವಲ ಪ್ರತಿಭಟನೆ ಹೋರಾಟಗಳೆ ಇವೆಯೆಂದು ಭಾವಿಸಬಾರದು. ಔಚಿತ್ಯಪೂರ್ಣವಾದ ಕೆಲವು ಭಾವುಕ ಸನ್ನಿವೇಶಗಳಿವೆ. ಕೇವಲ ಒಂದು ಸಾಮಾನ್ಯ ಕುಟುಂಬದಂತೆಯೆ ಕಾಲಾನ ಕುಟುಂಬವಿದೆ. ಜೊತೆಗೊಂದು ಕಂಟ್ರಿನಾಯಿಯೂ. ಸೆಲ್ವಿಯ ಸೊಸೆಯರ ಮಕ್ಕಳ ಮೊಮ್ಮೊಕ್ಕಳ ನಡುವಿನ ಬಾಂಧವ್ಯ ಕುಟುಂಬದಿಂದ ನಮ್ಮನ್ನು ಪ್ರತ್ಯೇಕಿಸುವುದಿಲ್ಲ. ಆಕರ್ಷಣೆಯೂ ಅಲ್ಲದ, ದೇಹದಾಸೆಯೂ ಅಲ್ಲದ ಕಾಲಾ ಮತ್ತು ಜಲೀನ ನಡುವಿನ ಉನ್ನತಪ್ರೇಮ, ಚಳವಳಿಯ ಸಂಗಾತಿಗಳಾದ ಲೆನಿನ್ ಪ್ರೇಮ ಅಲ್ಲಲ್ಲಿ ಕಥೆಗೆ ಪೂರಕವಾಗಿವೆ. ಹರಿದಾದನ ಮೊಮ್ಮಗಳ ಎರಡು ಮಾತುಗಳು; ‘ತಾತ ಆತ ಒಳ್ಳೆಯ ಮನುಷ್ಯ ದಯವಿಟ್ಟು ಆತನನ್ನು ಕೊಲ್ಲಬೇಡಿ’ ಮತ್ತು ‘ಆತನನ್ನು ಕೊಲ್ಲದೆ ಬಿಟ್ಟಿದ್ದಕ್ಕೆ ಥ್ಯಾಂಕ್ಸ್’ ಎನ್ನುವ ಮಾತುಗಳು ತೀವ್ರವಾಗಿ ಕಾಡುತ್ತವೆ. ದಾರಾವಿಗೆ ಬೆಂಕಿಬಿದ್ದು ಸುಟ್ಟು ಕರಕಲಾದ ಬಟ್ಟೆ ಮತ್ತು ಪುಸ್ತಕಗಳನ್ನು ತೋರಿಸಿ ‘ತಾತ ನಾಳೆ ಹೀಗೇ ಸ್ಕೂಲಿಗೆ ಹೋದರೆ ಒಳಗೆ ಬಿಡಿಸಿಕೊಳ್ಳುವುದಿಲ್ಲ’ ಎಂಬ ಕಾಲಾನ ಮೊಮ್ಮೊಗಳ ಮಾತು ಕಣ್ಣು ತೇವ ಮಾಡುತ್ತದೆ. ಚಿತ್ರದಲ್ಲಿನ ಕತ್ತಲು ಧಾರಾವಿಯ ಜನರ ಬದುಕನ್ನು ಸಂಕೇತಿಸುತ್ತದೆ.
ಇಷ್ಟು ಹೇಳಿದ ಮೇಲೆ ಈ ಸಿನಿಮಾಕ್ಕೆ ಮಿತಿಗಳು ದೋಷಗಳು ಇಲ್ಲವೆಂದಲ್ಲ. ಅಬ್ಬರದ ಸಂಗೀತದಲ್ಲಿ ಸಂಭಾಷಣೆ ಗೌಣವಾಗಿ ಮಾತು ಸರಿಯಾಗಿ ಕೇಳಿಸುವುದಿಲ್ಲ. ಬೇರೆ ಭಾಷೆಗೆ ಡಬ್ ಆದ ಕಾರಣ ಮೂಲಭಾಷೆಗೆ ಹೊಂದಿಕೆಯಾದ ದೇಹಭಾಷೆ ಮತ್ತು ಟೈಮಿಂಗ್ ಹೊಂದಾಣಿಕೆಯಾಗದೆ ಕಿರಿಕಿರಿಯಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ರಜನಿಕಾಂತ್ ಅಭಿನಯಿಸಬೇಕಿತ್ತು ಅನಿಸುತ್ತದೆ. ಇದು ಸಂಪೂರ್ಣ ನಿರ್ದೇಶಕನ ಸಿನಿಮಾ. ಹೆಂಡತಿ ಮತ್ತು ಮಗನನ್ನು ಕಳಕೊಂಡ ಮೇಲೆ ಹರಿದಾದನ ಮನೆಗೆ ಹೋದ ಕಾಲಾ ಒಂದು ಮಾತು ಹೇಳುತ್ತಾನೆ. ‘ನಾನು ಇಲ್ಲಿಗೆ ಬಂದದ್ದು ನಿನಗೆ ಸವಾಲು ಹಾಕಲು ಅಲ್ಲ. ಹೆಂಡತಿ ಮತ್ತು ಮಗನನ್ನು ಕಳಕೊಂಡರೂ ನಾನು ತಗ್ಗಿಲ್ಲ ನಿತ್ರಾಣಗೊಂಡಿಲ್ಲ ಎಂದು ನಿನಗೆ ತೋರಿಸಲು’ ಎಂದು. ಇದು ಒರಿಜಿನಲ್ಲಾಗಿ ಅಂಬೇಡ್ಕರರ ಧೀಮಂತಿಕೆ, ಅವರ ಬದುಕನ್ನು ಓದಿ ತಿಳಿದವರಿಗೆ ಬೇಗ ಅರ್ಥವಾಗುತ್ತದೆ. ರಜನಿಕಾಂತ್ ಅವರ ಸ್ಟಾರ್‍ಗಿರಿ ಮತ್ತು ಇಮೇಜನ್ನು ಪಕ್ಕಕ್ಕಿಟ್ಟು, ಅವರ ಇಮೇಜಿಗೆ ತಕ್ಕಂತೆ ಕಥೆಯನ್ನು ನಿರೂಪಿಸದೆ, ಕಥೆ ಬಯಸುವಂತೆ ರಜನಿಯನ್ನು ಬಗ್ಗಿಸಿದ ಕಾರಣ ಕಥೆಯ ಶಕ್ತಿಯು ಉಳಿದುಕೊಂಡಿದೆ. ಸ್ವಲ್ಪ ನಿಷ್ಠುರವಾಗಿ ಹೇಳುವುದಾದರೆ, ಕಾಲಾ ಪಾತ್ರದಿಂದ ರಜಿನಿಕಾಂತ್ ಸಹ ಕಲಿಯುವುದು ತುಂಬಾ ಇದೆ.

– ಆರಡಿ ಮಲ್ಲಯ್ಯ ಕಟ್ಟೇರ್

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...