Homeಮುಖಪುಟಒಂದು ಫ್ಯಾಕ್ಟ್ ಚೆಕಿಂಗ್.... ಕೋಲ್ಕತ್ತ ಹಿಂಸಾಚಾರ: ಮಾಡಿದ್ದ್ಯಾರು? ಹಿಂದಿರುವ ಕುತಂತ್ರವೇನು? ವಾಸ್ತವವೇನು?

ಒಂದು ಫ್ಯಾಕ್ಟ್ ಚೆಕಿಂಗ್…. ಕೋಲ್ಕತ್ತ ಹಿಂಸಾಚಾರ: ಮಾಡಿದ್ದ್ಯಾರು? ಹಿಂದಿರುವ ಕುತಂತ್ರವೇನು? ವಾಸ್ತವವೇನು?

ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದೂ ಅಲ್ಲದೇ, ಹಲವು ರೀತಿಯ ಹಿಂಸಾಚಾರ ಕೊಲ್ಕೊತ್ತಾದಲ್ಲಿ ನಡೆದಿದೆ. ಸ್ವತಃ ಅಮಿತ್ ಷಾ ಪತ್ರಿಕಾಗೋಷ್ಠಿ ನಡೆಸಿ ಟಿಎಂಸಿ ಮೇಲೆ ಆಪಾದನೆ ಮಾಡಿದ್ದಾರೆ. ಆದರೆ, ವಾಸ್ತವವೇನು? ನೋಡಿ

- Advertisement -
ಕಂಪ್ಲೀಟ್ ವಿಡಿಯೋ ಎಲ್ಲ ಮಾಧ್ಯಮಗಳ ಬಳಿಯಿದೆ. ಆದರೆ, ಅದರಲ್ಲಿ ಶೇ. 90 ರಷ್ಟು ಮಾಧ್ಯಮಗಳು ಕೋಲ್ಕತ್ತ ಹಿಂಸಾಚಾರದಲ್ಲಿ ಭಾಗವಹಿಸಿದವರಾರು, ವಿದ್ಯಾಸಾಗರ್ ಕಾಲೇಜಿನೊಳ್ಳಕ್ಕೆ ನುಗ್ಗಿದವರಾರು, ವಿದ್ಯಾಸಾಗರರ ಪುತ್ಥಳಿ ಒಡೆದವರಾರು ಎಂಬ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ‘ಈ ಕೃತ್ಯ ಮಾಡಿದ್ದು ನಿಮ್ಮ ಪಕ್ಷವೇ’ ಎಂದು ಬಿಜೆಪಿ ಮತ್ತು ಟಿಎಂಸಿ ಪಕ್ಷಗಳೆರಡೂ ಪರಸ್ಪರ ಆರೋಪ ಮಾಡುತ್ತಿವೆ ಎಂದು ಕೈ ತೊಳೆದುಕೊಂಡಿವೆ. ಇಲ್ಲಿ ಟಿಎಂಸಿ ನೀಡಿರುವ ವಿಡಿಯೋ ನಂಬಲರ್ಹವಾಗಿದ್ದರೆ, ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ, ಅಷ್ಟೇ ಅಲ್ಲ, ಅದು ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತ ನಡೆದಿದೆ. ಹಾಗಾಗಿ ಬಿಜೆಪಿಯ ಆರೋಪ ಅಥವಾ ಕ್ಲೈಮ್‍ಗಳ ಸತ್ಯಾಸತ್ಯತೆಯನ್ನು ಇಲ್ಲಿ ಪರಿಶೀಲಿಸಲಾಗಿದೆ….
ಮೇ 15ರ ಮುಂಜಾನೆ ಬಿಜೆಪಿ ಐಟಿ ಸೆಲ್‍ನ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ, ‘ವಿದ್ಯಾಸಾಗರ ಕಾಲೇಜಿನಲ್ಲಿ ನಡೆದ ದೊಂಬಿಯ ಮೊದಲ ಪ್ರತ್ಯಕ್ಷದರ್ಶಿ’ಯ ಫೇಸ್‍ಬುಕ್ ಪೋಸ್ಟ್ ಉಲ್ಲೇಖಿಸಿ, ಕಾಲೇಜಿನೊಳಗೆ ಇದ್ದ ಟಿಎಂಸಿ ವಿದ್ಯಾರ್ಥಿ ಘಟಕದ ಸದಸ್ಯರು ಈ ದೊಂಬಿ ಆರಂಭಿಸಿದರು’ ಎಂದು ಬರೆಯುತ್ತಾರೆ. ಇದರಲ್ಲಿ ಈ ಘಟನೆಯ ಮೊದಲ ‘ಪ್ರತ್ಯಕ್ಷದರ್ಶಿ’ ಆ ಕಾಲೇಜಿನ ವಿದ್ಯಾರ್ಥಿ ಬೀರಜ್ ನಾರಾಯಣ ರಾಯ್ ಮಾಡಿದ ಬೆಂಗಾಲಿ ಭಾಷೆಯ ಪೋಸ್ಟ್ ಉಲ್ಲೇಖಿಸಿ ಐಟಿ ಸೆಲ್‍ನ ಮಾಳವೀಯ ಅಪಾದನೆ ಮಾಡಿದರು.
- Advertisement -

ವಿಚಿತ್ರ:  ಸಂಪೂರ್ಣ ವಿಡಿಯೋ ಹೊರ ಬೀಳುತ್ತಿದ್ದಂತೆ, ‘ಮೊದಲ ಪ್ರತ್ಯಕ್ಷದರ್ಶಿ’ ಬೀರಜ್ ನಾರಾಯಣ್ ರಾಯ್‍ನ ‘ಫೇಸ್‍ಬುಕ್’ ಅಕೌಂಟೇ ನಾಪತ್ತೆ! ಇನ್ನೂ ವಿಚಿತ್ರವೆಂದರೆ, ಆತನ ಪೋಸ್ಟನ್ನೇ ಹಾಕಿ ‘ತಾನೇ ಪ್ರತ್ಯಕ್ಷದರ್ಶಿ’ ಎಂಬಂತೆ ವಿವಿಧ ಖಾತೆಗಳಿಂದ ಪೋಸ್ಟ್‍ಗಳು ಹೊರಹೊಮ್ಮಿದವು!
ಈ ‘ಮೊದಲ ಪ್ರತ್ಯಕ್ಷದರ್ಶಿ’(ಗಳ!) ಪೋಸ್ಟ್ ಆಧಾರದಲ್ಲಿ ಬಿಜೆಪಿ ಮಾಡಿರುವ ಅಪಾದನೆ ಅಥವಾ ಕ್ಲೈಮ್‍ಗಳನ್ನು ನೋಡೋಣ:

1. ಮೊದಲ ಇಟ್ಟಿಗೆ ಕಾಲೇಜ್ ಕ್ಯಾಂಪಸ್ ಒಳಗಿಂದ ತೂರಿ ಬಂತು…

ಈ ಆರೋಪ ಸಮರ್ಥಿಸಲು ಒಂದೇ ಒಂದು ವಿಡಿಯೋವೂ ಲಭ್ಯ ಇಲ್ಲ. ‘ಮೊದಲ ಪ್ರತ್ಯಕ್ಷದರ್ಶಿ’ಯ ಅಕೌಂಟೇ ಕ್ಲೋಸ್!
ಸ್ಥಳೀಯ ‘ಆನಂದ್ ಬಜಾರ್’ ಪತ್ರಿಕೆಯ ಸ್ಪಾಟ್ ವರದಿ ಪ್ರಕಾರ, ಕಾಲೇಜಿನ ಹೊರಭಾಗದ ರಸ್ತೆಯಿಂದ (ಅಮಿತ್ ಶಾ ರ್ಯಾಲಿ ಪಾಸಾಗುತ್ತಿದ್ದ ರಸ್ತೆ) ಕಲ್ಲುಗಳನ್ನು ಕಾಲೇಜಿನ ಕ್ಯಾಂಪಸ್ ಒಳಕ್ಕೆ ಎಸೆಯಲಾಯಿತು.  ಅದನ್ನು ಎಸದವರು ‘ನಮೋ ಒನ್ಸ್ ಎಗೇನ್’ ಎಂಬ ಕೇಸರಿ ಟೀ ಶರ್ಟ್ ತೊಟ್ಟ, ರ್ಯಾಲಿಯ ಭಾಗವಾಗಿದ್ದ ಯುವಕರು. ಆದರೆ ಕಾಲೇಜ್ ಒಳಗಡೆಯಿಂದ ಯಾವುದೇ ಇಟ್ಟಿಗೆ ಎಸೆದಿದ್ದಕ್ಕೆ ಆಧಾರವಿಲ್ಲ.
ಈ ವಿಡಿಯೋ ನೋಡಿ:

2. ಟಿಎಂಸಿ ಬೈಕ್‍ಗಳನ್ನು ಸುಟ್ಟಿತು…

ಫೇಸ್‍ಬುಕ್ (ಮಾಯವಾದ ಪ್ರತ್ಯಕ್ಷದರ್ಶಿ ಮತ್ತು ನಂತರ ಅದನ್ನೇ ಕಾಪಿ ಮಾಡಿ ‘ಪ್ರತ್ಯಕ್ಷದರ್ಶಿ’ ಗಳಾದವರ ಪೋಸ್ಟ್) ಪೋಸ್ಟ್ ಮತ್ತು ಬಿಜೆಪಿ ನಾಯಕರ ಆರೋಪ ಎಂದರೆ, ಟಿಎಂಸಿ ಕಾರ್ಯಕರ್ತರು ಬೈಕ್‍ಗಳನ್ನು ಸುಟ್ಟರು.
ವಿಡಿಯೋ ನೋಡಿ: ಇಲ್ಲಿ ರ್ಯಾಲಿಯಲ್ಲಿದ್ದ ಕೇಸರಿ ಟೀ ಶರ್ಟಿನ  ಹುಡುಗರೇ ಬೈಕ್‍ಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ.

3. ಕ್ಯಾಂಪಸ್‍ಗೆ ಬೀಗ ಹಾಕಿದ್ದರಿಂದ ಬಿಜೆಪಿ ಕಾರ್ಯಕರ್ತರು ಒಳಕ್ಕೆ ಪ್ರವೇಶಿಸಲು ಅಸಾಧ್ಯ.

ಇದನ್ನು ಅಮಿತ್ ಶಾ ಸೇರಿದಂತೆ ಮಾಳವಿಯ ಮತ್ತು ಭಕ್ತರು ಹೇಳುತ್ತಿದ್ದಾರೆ. ಈ ಕುರಿತು ಪಾತ್ರಿಕಾಗೋಷ್ಠಿಯಲ್ಲೂ ಶಾ ಹೇಳಿದ್ದಾರೆ. ಗಲಭೆ ನಡೆದ 7.30ರ ಸಮಯದಲ್ಲಿ ಕಾಲೇಜ  ಮುಚ್ಚಿತ್ತು, ಎಲ್ಲ ಗೇಟ್ ಬಂದ್ ಆಗಿದ್ದವು. ಹೀಗಾಗಿ ಬಿಜೆಪಿ ಕಾರ್ಯಕರ್ತರು ಒಳಗೆ ಹೋಗುವುದು ಹೇಗೆ ಸಾಧ್ಯ? ಎಂದು ವಾದಿಸಿದ್ದಾರೆ.
ಆದರೆ ಈ ಕೆಳಗಿನ ವಿಡಿಯೊ ನೋಡಿ: ಗೇಟ್‍ನ ಬೀಗವನ್ನು ಒಡೆಯುತ್ತಿರುವುದು ಬಿಜೆಪಿ ಕಾರ್ಯಕರ್ತರು ಎಂಬುದು ಇಲ್ಲಿ ಸ್ಪಷ್ಟ..

ಬಿಜೆಪಿ ಕಾರ್ಯಕರ್ತರು ಗೇಟ್ ಬೀಗ ಒಡೆಯುತ್ತಿರುವ ವಿಡಿಯೋ
ಕ್ಯಾಂಪಸ್ ಒಳಗೆ ಪ್ರವೇಶಿಸಿದ ವಿಡಿಯೋ

ಒಳಗಿನ ದೃಶ್ಯ ತೋರಿಸುವ ಏರಿಯಲ್ ವೀವ್ ವಿಡಿಯೋ

4. ಕಬ್ಬಿಣದ ಗೇಟ್ ಮತ್ತು ನಂತರ ಕಟ್ಟಿಗೆ ಬಾಗಿಲಿರುವ ರೂಮ್‍ನಲ್ಲಿರುವ ವಿದ್ಯಾಸಾಗರರ ಪುತ್ಥಳಿಯನ್ನು ಬಿಜೆಪಿ ಕಾರ್ಯಕರ್ತರು ಒಡೆಯಲು ಹೇಗೆ ಸಾಧ್ಯ?

ಇದು ಅಮಿತ್ ಶಾ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಪ್ರಶ್ನೆ. ನಿಜ, ಅಲ್ಲಿ ಕಬ್ಬಿಣದ ಗೇಟ್, ನಂತರ ಕಟ್ಟಿಗೆಯ ದ್ವಾರ ಎಲ್ಲ ಇರುವುದು ನಿಜ. ಅಂತಹ ಕಬ್ಬಿಣದ ಗೇಟ್ ಒಡೆಯಲು ಸಾಧ್ಯವೇ ಎಂಬುದು ಬಿಜೆಪಿಯ ಮೂರ್ಖ ಪ್ರಶ್ನೆ. ಯಾವುದೇ ಶಕ್ತಿಶಾಲಿ ಕಬ್ಬಿಣದ ಗೇಟ್ ಇರಲಿ, ಅದರ ಶಕ್ತಿ ಇರುವುದು ಅದರ ಲಾಕ್ ಎಷ್ಟು ಶಕ್ತಿಯುತವಾಗಿದೆಯೋ ಅಷ್ಟೇ.. ಮೇಲಿನ ವಿಡಿಯೊದಲ್ಲಿಯೇ ನೋಡಿ, ರಾಡ್‍ಗಳಿಂದ ಬಿಜೆಪಿ ಕಾರ್ಯಕರ್ತರು ಆ ಲಾಕ್ ಒಡೆದು ಒಳ ನುಗ್ಗಿರುವುದನ್ನು..

5. ಒಳಗಿರುವ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿಯನ್ನು ವಿರೂಪಗೊಳಿಸಿದ್ದು ಟಿಎಂಸಿ ಕಾರ್ಯಕರ್ತರು… 

ಈ ಅಪಾದನೆಗೂ ಯಾವುದೇ ಸಾಕ್ಷ್ಯಗಳಿಲ್ಲ. ಬದಲಿಗೆ ಲಭ್ಯವಿರುವ ಎಲ್ಲ ವಿಡಿಯೊಗಳ ಪ್ರಕಾರ, ಶಾ ರ್ಯಾಲಿಯ ಬಿಜೆಪಿ ಕಾರ್ಯಕರ್ತರೇ ವಿದ್ಯಾಸಾಗರರ ಪುತ್ಥಳಿಯನ್ನು ವಿರೂಪಗೊಳಿಸಿ, ಅದರ ತುಂಡನ್ನು ಹೊರಗೆ ತಂದು ಬಿಸಾಡಿದ್ದಾರೆ ಎಂಬುದನ್ನು ವಿಡಿಯೋಗಳೇ ಹೇಳುತ್ತಿವೆ. ಜೊತೆಗೆ ಟೆಲಿಗ್ರಾಫ್ ಪತ್ರಿಕೆಯ ಪ್ರತ್ಯಕ್ಷ ವರದಿಯೂ ಅದನ್ನೇ ಹೇಳುತ್ತಿದೆ.

ಸಾರಾಂಶ: ಕೋಲ್ಕತ್ತ ಹಿಂಸಾಚಾರಕ್ಕೆ ಟಿಎಂಸಿ ಕಾರಣ ಎಂಬ ಬಿಜೆಪಿ ಅಪಾದನೆಗೆ ಯಾವ ತಳ ಸಾಕ್ಷ್ಯವೂ ಲಭ್ಯವಿಲ್ಲ. ಅದನ್ನು ತೋರಿಸು ಸಾಕ್ಷ್ಯಗಳೂ ಬಿಜೆಪಿ ಬಳಿಯಿಲ್ಲ. ಅದು ‘ಮೊದಲ ಪ್ರತ್ಯಕ್ಷದರ್ಶಿ’ಯ ಪೇಸ್‍ಬುಕ್ ಪೇಜ್ ಉಲ್ಲೇಖಿಸಿ ಬಚಾವಾಗಲು ನೋಡಿತು. ಆದರೆ ತಕ್ಷಣವೇ ಆ ಅಕೌಂಟ್ ಮಾಯ… ಇಲ್ಲಿ ತೋರಿಸಿರುವ ಎಲ್ಲ ವಿಡಿಯೊಗಳಲ್ಲಿ ರ್ಯಾಲಿಯಲ್ಲಿದ್ದ ‘ನಮೋ ಒನ್ಸ್ ಎಗೇನ್’ ಹೆಸರಿನ ಕೇಸರಿ ಟೀಶರ್ಟ್ ಧರಿಸಿದ್ದ ಮತ್ತು ಅವರ ಜೊತೆಗಿದ್ದ ಬಿಜೆಪಿ ಕಾರ್ಯಕರ್ತರೇ ಈ ಹಿಂಸಾಚಾರ, ಗಲಭೆ ಮಾಡಿದ್ದಾರೆ….)
(ಆಧಾರ:Altnews.in)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...