Homeಅಂಕಣಗಳುಟಿಬೆಟ್ ಮತ್ತು ಕವಿ ಟೆಂಜಿನ್ ಬಗ್ಗೆ

ಟಿಬೆಟ್ ಮತ್ತು ಕವಿ ಟೆಂಜಿನ್ ಬಗ್ಗೆ

ಟೆಂಜಿನ್ ಅಪರೂಪದ ಹೋರಾಟಗಾರ. ಈತ ಕನ್ನಡಿಗರ ಗಮನವನ್ನು ಸೆಳೆದಿದ್ದು 2005ರಲ್ಲಿ. ಅವರು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‍ಸಿ)ಗೆ ಚೀನಾದ ಪ್ರಧಾನಿ ವೆನ್ ಜಿಯಾಬೊ ಬರಲಿದ್ದರು

- Advertisement -
- Advertisement -

| ಗೌರಿ ಲಂಕೇಶ್ |

ಈಗ ಎಲ್ಲಿನೋಡಿದರಲ್ಲಿ ಚುನಾವಣಾ ಬಗ್ಗೆಯೇ ಚರ್ಚೆ, ಬಾಜಿ, ಲೆಕ್ಕಾಚಾರ ಇತ್ಯಾದಿಗಳು. ಟಿವಿ ಚಾನೆಲ್‍ಗಳಲ್ಲಿ, ದಿನ ಪತ್ರಿಕೆಗಳಲ್ಲಿ, ಅಷ್ಟೇ ಏಕೆ ಈ ನಿಮ್ಮ ಪತ್ರಿಕೆಯ ಹಲವಾರು ಪುಟಗಳಲ್ಲೂ ಚುನಾವಣೆಗಳ ಬಗೆಗಿನ ವರದಿಗಳೇ ತುಂಬಿವೆ. ಆದ್ದರಿಂದ ನನಗೂ, ನಿಮಗೂ ಒಂದು ಪುಟ್ಟ ಬ್ರೇಕ್ ಸಿಗಲೆಂದು ಚುನಾವಣಾ ಹೊರತಾಗಿರುವ ವಿಷಯದ ಬಗ್ಗೆ ಬರೆಯಬೇಕೆನಿಸುತ್ತದೆ. ಇದಕ್ಕೆ ಪ್ರೇರಣೆ ನೀಡಿದ್ದು ಟಿಬೆಟ್‍ನ ಕವಿ ಮತ್ತು ಹೋರಾಟಗಾರ ಟೆಂಜಿನ್ ಟ್ಸಂಡು ಅವರು ಇತ್ತೀಚೆಗೆ ಬರೆದಿರುವ ಲೇಖನ.

ಟೆಂಜಿನ್ ಅಪರೂಪದ ಹೋರಾಟಗಾರ. ಈತ ಕನ್ನಡಿಗರ ಗಮನವನ್ನು ಸೆಳೆದಿದ್ದು 2005ರಲ್ಲಿ. ಅವರು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‍ಸಿ)ಗೆ ಚೀನಾದ ಪ್ರಧಾನಿ ವೆನ್ ಜಿಯಾಬೊ ಬರಲಿದ್ದರು. ಅವರ ಭೇಟಿಯನ್ನು ವಿರೋಧಿಸಿ ಕರ್ನಾಟಕದಲ್ಲಿರುವ ಟಿಬೆಟಿಯನ್ನರು ಹಲವು ಪ್ರತಿಭಟನೆಗಳನ್ನು ಮಾಡಿದ್ದರು. ಆದರೆ ಈ ಟೆಂಜಿನ್ ಅವರೆಲ್ಲರಿಗಿಂತ ಹಲವು ಹೆಜ್ಜೆ ಮುಂದೆ ಹೋಗಿದ್ದರು. ಒಂದೆರಡು ದಿನಗಳ ಹಿಂದೆಯೇ ಐಐಎಸ್‍ಸಿಯ ಮುಖ್ಯ ಕಟ್ಟಡದಲ್ಲಿ ಅವಿತುಕೊಂಡ ಟೆಂಜಿನ್ ಚೀನಾದ ಜಿಯಾಬೋ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆಯೇ ಕಟ್ಟಡದ ಮೇಲುಗಡೆ ಪ್ರತ್ಯಕ್ಷವಾಗಿ ಜಿಯಾಬೋ ಅವರ ತಲೆಯ ಮೇಲೆ ಟಿಬೆಟ್‍ನ ಧ್ವಜವನ್ನು ಹಾರಿಸಿದರಲ್ಲದೆ, ಅವರ ವಿರುದ್ಧ ಘೋಷಣೆಗಳನ್ನೂ ಕೂಗಿದರು. ಟಿಂಜನ್ ಅವರ ಉದ್ದೇಶ ಚೀನಾದ ಪ್ರಧಾನಿ ಮೇಲೆ ಭಯೋತ್ಪಾದಕ ಕೃತ್ಯವನ್ನು ಎಸಗುವುದಾಗಿರಲಿಲ್ಲ. ಬದಲಾಗಿ ತನ್ನ ಟಿಬೆಟ್ ಸಮಾಜದ ಮೇಲೆ ಚೀನಾ ಎಸಗುತ್ತಿರುವ ಭಯೋತ್ಪಾದಕ ಕೃತ್ಯಗಳತ್ತ ಜಗತ್ತಿನ ಗಮನವನ್ನು ಸೆಳೆಯುವುದಾಗಿತ್ತು.

ಟೆಂಜಿನ್ ಅವರ ಈ ಅಪರೂಪದ ಪ್ರತಿಭಟನೆಯಿಂದಾಗಿ ಭಾರತದ ಭದ್ರತಾ ಪಡೆ ವ್ಯವಸ್ಥೆಗೆ ಮುಜುಗರವಾಗಿತ್ತಲ್ಲದೆ, ಚೀನಾಕ್ಕೆ ಮುಖಭಂಗವಾಗಿತ್ತು. ಟೆಂಜಿನ್ ಅವರ ವಿರುದ್ಧ ಹಲವಾರು ಕಾನೂನು ಕ್ರಮಗಳನ್ನು ಜರುಗಿಸಿದ ಭಾರತದ ಸರ್ಕಾರ ಅವಮಾನಗೊಂಡಿದ್ದ ಚೀನಾವನ್ನು ಸಂತೈಸಲು ಆ ದೇಶದ ಸರ್ಕಾರದ ಮುಂದೆ ಡೊಗ್ಗು ಸಲಾಮು ಹೊಡೆದಿತ್ತು.

2006ರಲ್ಲಿ ಚೀನಾದ ಅಧ್ಯಕ್ಷ ಹು ಜಿಂಟಾವೊ ಭಾರತಕ್ಕೆ ಭೇಟಿ ನೀಡಿದಾಗ ಚೀನಾದ ಸರ್ಕಾರದ ಅಪೇಕ್ಷೆಯಂತೆ ಟಿಂಜನ್ ಅವರ ಚಲನವಲನಗಳನ್ನು 14 ದಿನಗಳ ಕಾಲ ಧರ್ಮಶಾಲಾ ಪ್ರದೇಶಕ್ಕೆ ಸೀಮಿತಗೊಳಿಸಿ ಅವರ ಮೇಲೆ ಕಟ್ಟೆಚ್ಚರ ಇಡಲಾಗಿತ್ತು.

ಚೀನಾದ ಸಾಂಸ್ಕೃತಿಕ ಕ್ರಾಂತಿ ಅಂತ್ಯಗೊಂಡು ಆ ದೇಶ ಮಾವೋನ ಹಿಡಿತಕ್ಕೆ ಸಿಕ್ಕ ನಂತರ ಆತ ಟಿಬೆಟ್‍ಅನ್ನು ಚೀನಾದ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಲಾರಂಭಿಸಿದ. ಆಗ ಟಿಬೆಟ್ ಜನರ ನೆರವಿಗೆ ಮುಂದಾಗಿದ್ದು ಅಮೆರಿಕಾದ ಸಿಐಎ ಮತ್ತು ಭಾರತದ ಸರ್ಕಾರ. ಇದರಿಂದಾಗಿ ಟಿಬೆಟ್ ಸೈನ್ಯ ರೂಪಗೊಂಡಿತ್ತಾದರೂ ಚೀನಾದ ದಬ್ಬಾಳಿಕೆ ನಿಲ್ಲಲಿಲ್ಲ. ಆಗ ಟಿಬೆಟ್ ಜನ ದಂಗೆ ಎದ್ದರು. ಇದಕ್ಕೆ ಪ್ರತಿಯಾಗಿ ಟಿಬೆಟಿಯನ್ನರ ಪರಮಗುರು ದಲೈ ಲಾಮರನ್ನೇ ಮುಗಿಸಲು ಚೀನಾ ಸಂಚು ರೂಪಿಸಿತು. ಆಗ ಅನಿವಾರ್ಯವಾಗಿ ದಲೈಲಾಮಾ ಅವರು ಭಾರತಕ್ಕೆ ಓಡಿಬಂದು ಇಲ್ಲಿ ರಕ್ಷಣೆ ಪಡೆಯಬೇಕಾಯಿತು. ಹೀಗೆ ದಲೈಲಾಮಾ ತಪ್ಪಿಸಿಕೊಂಡ ನಂತರ ಟಿಬೆಟ್ ಮೇಲೆ ಚೀನಾ ತನ್ನ ಕ್ರೌರ್ಯವನ್ನು ಹೆಚ್ಚಿಸಿ ಲಕ್ಷಾಂತರ ಜನರನ್ನು ಕೊಂದು ಹಾಕಿತು.

ದಲೈಲಾಮಾರೊಂದಿಗೆ ಸಾವಿರಾರು ಟಿಬೆಟಿಯನ್ನರು ಭಾರತದಲ್ಲಿ ವಾಸಿಸಲಾರಂಭಿಸಿದರು. ಮಾತ್ರವಲ್ಲ, ಅವರಲ್ಲಿ ನೂರಾರು ಜನ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ಕೂಲಿಗಳಾಗಿ ದುಡಿಯಲಾರಂಭಿಸಿದರು. ಹಾಗೆ ದುಡಿಯುತ್ತಾ, ಟೆಂಟ್‍ನಲ್ಲಿ ವಾಸಿಸುತ್ತಿದ್ದ ದಂಪತಿಗಳಿಗೆ ಒಂದು ದಿನ ರಸ್ತೆಬದಿಯಲ್ಲಿ ಜನಿಸಿದ ಕವಿಯೇ ಈ ಟೆಂಜಿನ್‍ಟ್ಸಂಡು.

ಚೆನೈನಲ್ಲಿರುವ ಲಯೋಲಾ ಕಾಲೇಜಿನಿಂದ ಪದವಿ, ಮುಂಬೈನಲ್ಲಿ ಸ್ನಾತಕೋತ್ತರ ಪದವಿ ಪಡೆದ ಟೆಂಜಿನ್ ಶೇಕ್ಸ್‍ಪಿಯರ್‍ನೊಂದಿಗೆ ಕನ್ನಡದ ಎ.ಕೆ.ರಾಮಾನುಜನ್ ಅವರನ್ನು ಅನುಸರಿಸುತ್ತ ಕವಿಯಾಗಿ ರೂಪುಗೊಂಡರು. ಜೊತೆಗೆ ಟಿಬೆಟ್‍ನ ಸ್ವಾತಂತ್ರ್ಯದ ಕಿಚ್ಚನ್ನೂ ತಮ್ಮ ಎದೆಯಲ್ಲಿ ಹೊತ್ತಿಸಿಕೊಂಡರು. ಆತನೇ ಹೇಳುವಂತೆ “ಟಿಬೆಟ್‍ನಲ್ಲಿ ಕ್ರಾಂತಿಯನ್ನು ಪ್ರಾರಂಭಿಸಲು ಅಲ್ಲಿಗೆ ಹೋದೆ. ಆದರೆ ಕೆಲದಿನಗಳಲ್ಲೇ ಈ ರೋಮಾಂಚಕ ಬಂಡಾಯಗಾರರನ್ನು ಬಂಧಿಸಿ, ಹೊಡೆದು, ಲಾಸಾದಲ್ಲಿನ ಜೈಲಿಗೆ ದೂಡಿದರು. ಜೈಲಿನಲ್ಲಿ ಜೊತೆಗಿದ್ದ ಬಂಧಿಯೊಬ್ಬ ‘ಸ್ವತಂತ್ರ ಟಿಬೆಟ್‍ಗಾಗಿ ನಿನ್ನ ಎದೆ ಬೆಂಕಿ ಹತ್ತಿ ಉರಿದರೂ ಅದರ ಹೊಗೆ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸು’ ಎಂದು ಉಪದೇಶ ನೀಡಿದ. ಆದರೆ ಭಗತ್‍ಸಿಂಗ್‍ನ ಅಭಿಮಾನಿಯಾದ ಈ ಅನನುಭವಿ ಕ್ರಾಂತಿಕಾರಿ ಅಷ್ಟೊತ್ತಿಗಾಗಲೇ ತಾನು ಟಿಬೆಟ್‍ಅನ್ನು ಬಿಡುಗಡೆಗೊಳಿಸಲು ಬಂದಿರುವುದಾಗಿ ಕೊಚ್ಚಿಕೊಂಡಿದ್ದ.”

ಟಿಬೆಟ್ ಮೇಲೆ ಚೀನಾ ದಾಳಿ ಮಾಡಿ ಅಲ್ಲಿನ ಜನರನ್ನು ತನ್ನ ಸರ್ವಾಧಿಕಾರಿ ಧೋರಣೆಗೆ ಗುರಿ ಮಾಡಿ ಈಗ್ಗೆ ಐವತ್ತು ವರ್ಷಗಳಾಗಿವೆ. ಈ ಐದು ದಶಕಗಳಲ್ಲಿ ಟಿಬೆಟ್‍ನಲ್ಲಿರುವ ಆರು ಮಿಲಿಯನ್ ಜನರು ಮತ್ತು ಗಡಿಪಾರಾಗಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಇಂದು ಬದುಕುತ್ತಿರುವ ಲಕ್ಷಾಂತರ ಟಿಬೆಟಿಯನ್ನರು ಹಂಬಲಿಸುತ್ತಿರುವುದು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ. ಸ್ವಾಭಿಮಾನದ ಬದುಕಿಗಾಗಿ. ಬೌದ್ಧ ಧರ್ಮೀಯರಾದ ಟಿಬೆಟಿಯನ್ನರು ತಮ್ಮ ಕನಸನ್ನು ನನಸಾಗಿಸಲು ಅನುಸರಿಸುತ್ತಿರುವುದು ಅಹಿಂಸಾತ್ಮಕ ಹಾದಿಯನ್ನು. ಆದರೆ ಆ ಹಾದಿ ಎಷ್ಟು ಕಷ್ಟಕರವಾಗಿದೆ ಎಂಬುದನ್ನು ಟೆಂಜಿನ್ ಅವರ ಈ ಪದ್ಯ ಬಿಂಬಿಸುತ್ತದೆ.

ನನ್ನ ಅಪ್ಪ ಸತ್ತ
ತನ್ನ ಮನೆ, ತನ್ನ ಹಳ್ಳಿ
ತನ್ನ ದೇಶಕ್ಕಾಗಿ ಹೋರಾಡುತ್ತಾ.
ಆದರೆ ನಾವು ಬೌದ್ಧರು.
ಜನ ಹೇಳುತ್ತಾರೆ ನಾವು
ಶಾಂತರಾಗಿರಬೇಕೆಂದು,
ಅಹಿಂಸಾವಾದಿಗಳಾಗಿರಬೇಕೆಂದು.
ಆದ್ದರಿಂದ ನಾನು ನನ್ನ ವೈರಿಗಳನ್ನು
ಕ್ಷಮಿಸಿದೆ.
ಹಲವೊಮ್ಮೆ ಅನ್ನಿಸುತ್ತೆ,
ಹಾಗೆ ಕ್ಷಮಿಸುವ ಮೂಲಕ
ನಾನು ನನ್ನ ತಂದೆಗೆ
ದ್ರೋಹ ಬಗೆದೆನೆಂದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...