HomeUncategorizedಥೂತ್ತೇರಿ : ಈಟು ದಿನ ಎಲ್ಲಿ ಮಲಗಿದ್ದ್ಯೆವ್ವಾ?

ಥೂತ್ತೇರಿ : ಈಟು ದಿನ ಎಲ್ಲಿ ಮಲಗಿದ್ದ್ಯೆವ್ವಾ?

- Advertisement -
- Advertisement -

ಯಾಹೂ |

ನಮ್ಮ ಸಾಣೆಹಳ್ಳಿ ರಂಗಭೂಮಿ ದೇಶದಲ್ಲೇ ಹೆಸರುವಾಸಿಯಾದ ರಂಗ ಪ್ರದೇಶ. ಏಕೆಂದರೆ, ಅಲ್ಲಿನ ಜಗದ್ಗುರುವಾದ ಪಂಡಿತಾರಾಧ್ಯರು ತಮ್ಮ ವಂಶವನ್ನು ನಾಟಕದ ಚಟುವಟಿಕೆಗೆ ಮೀಸಲಾಗಿರಿಸಿದ್ದಾರೆ. ಇಂತಹ ಸಾಹಸವನ್ನು ಯಾರೂ ಮಾಡಿಲ್ಲ. ಹೆಗ್ಗೋಡನ್ನು ಬಿಟ್ಟರೆ ರಾಜ್ಯಾದ್ಯಂತ ರಂಗಸಂಚಾರ ಆರಂಭಿಸಿದ ಸಾಣೆಹಳ್ಳಿ ಮಠ, ಹೆಗ್ಗೋಡನ್ನು ಸೈಡಿಗೆ ಸರಿಸಿದ್ದು ಈಗ ಇತಿಹಾಸ. ಏಕೆಂದರೆ ಹೆಗ್ಗೋಡು ಬರುಬರುತ್ತಾ ಹೆಗ್ಗೋಳಾಗಿ ಕಾಟಾಚಾರಕ್ಕೆ ತಿರುಗಾಟ ಶುರುವಿಟ್ಟುಕೊಂಡಾಗ ನಮ್ಮ ಪ್ರೇಕ್ಷಕರು ಅತ್ತ ತಾತ್ಸಾರ ತೋರಿದ್ದು, ಇದಕ್ಕೆ ಉತ್ತರವಾಗಿ ಹೆಗ್ಗೋಡಿನ ಹವ್ಯಕರು ಆಪ್ತರಂಗಭೂಮಿ ಮಾಡಿಕೊಂಡು ತಾವೇ ಎಂಟತ್ತು ಜನ ಸುತ್ತ ಕುಳಿತು ಎಲೆಯಡಿಕೆ ಜಗಿದು ನಾಟಕ ಅಂತ ನೋಡಿದ್ದು ಈಗ ಇತಿಹಾಸ. ಇದಕ್ಕೆ ಉತ್ತರವೆಂಬಂತೆ ಸಾಣೆಹಳ್ಳಿಯ ರಂಗಭೂಮಿ, ಏಕಕಾಲಕ್ಕೆ ನಾಲ್ಕೈದು ಸಾವಿರ ಜನ ಒಮ್ಮೆಲೆ ನಾಟಕ ನೋಡುವಂತೆ ಮಾಡಿದ್ದು, ಆಡಿದ್ದೂ ಒಂದು ದಾಖಲೆ. ಇಂತಿರುವಾಗ ಈಚೆಗೆ ನಾಟಕೋತ್ಸವ ಮಾಡಿದ ಸಾಣೆಹಳ್ಳಿ ಶ್ರೀಗಳು ಉತ್ಸವಕ್ಕೆ ಕರೆಸಿದ ಗೆಸ್ಟುಗಳ ಲಿಸ್ಟು ನೋಡಿದಾಗ ಬಿಜೆಪಿ ಲೀಡರ್‌ಗಳ ಪರಿಷೆಯೇ ನೆರೆದಂತಿತ್ತಲ್ಲಾ! ಈ ಬಗ್ಗೆ ಪೂರ್ವಗ್ರಹಪೀಡಿತ ಪ್ರಶ್ನೆ ಕೇಳಿದಾಗ, ಸಾಣೆಹಳ್ಳಿ ಅಂಗಳದಿಂದ ಬಂದ ಉತ್ತರ ದಂಗುಬಡಿಸುವಂತಿತ್ತು. ಜಾತ್ಯತೀತ ಮನೋಭಾವ, ಭಾರತೀಯ ಸಹಿಷ್ಣು ಚಿಂತನೆಯ ಸಾರ, ಸರ್ವಜನಾಂಗದ ಶಾಂತಿಯ ತೋಟದಲ್ಲಿ ತಾವೂ ಒಂದು ಗಿಡವಾಗಿ, ಮರವಾಗಿ, ಕಡೆಗೆ ಹುಲ್ಲಾಗುವ ಜ್ಞಾನ ಬೇಕಿರುವುದು ಈ ಬಿಜೆಪಿಯ ಜನಕ್ಕೆ. ಅದಕ್ಕೆ ಸಾಣೆಹಳ್ಳಿ ಗುರುಗಳು ಬಿಜೆಪಿಯ ಹೆಚ್ಚು ಜನರನ್ನ ಕರೆಸಿದ್ದಾರಂತಲ್ಲಾ, ಥೂತ್ತೇರಿ!

* * * *

ಸಾಣೆಹಳ್ಳಿಯ ರಂಗಭೂಮಿಗೆ ಉಪಮುಖ್ಯಮಂತ್ರಿ ಪರಮೇಶ್ವರರೂ ಬಂದಿದ್ದರು. ಅಪರೂಪದ ಜೀವಿಯಾದ ಪರಮೇಶ್ವರರ ಭೋಜನವನ್ನು ಜೀವರಕ್ಷಕರಾದ ವೈದ್ಯರು ಕಡ್ಡಿಯಲ್ಲಿ ಕೆದಕಿ, ಪರೀಕ್ಷಿಸಿ ಪರಮೇಶ್ವರ್‌ಗೆ ತಿನ್ನಿಸಬಹುದೆಂದು ಪರವಾನಗಿ ಕೊಟ್ಟದ್ದು ಜಗದ್ಗುರುಗಳ ಕೋಪಾಗ್ನಿಗೆ ಕಾರಣವಾಯ್ತಂತಲ್ಲಾ. ಸಾವಿರಾರು ಜನ ಪ್ರಸಾದ ಸ್ವೀಕರಿಸುವ ಜಾಗಕ್ಕೆ ಬಂದು ಅತಿಥಿಯೊಬ್ಬನ ಭೋಜನಕ್ಕೆ ಕಡ್ಡಿ ಎಟ್ಟಿ ಪರಿಶೀಲಿಸುವುದು ಎಷ್ಟು ಸರಿ. ಸಾವಿರಾರು ಜನರ ಪ್ರಾಣ ಮುಖ್ಯವೋ ಅಥವಾ ಒಬ್ಬನ ಪ್ರಾಣ ಮುಖ್ಯವೋ. ಒಂದು ಜೀವ ಹೋದರೆ ನಷ್ಟವೇನು ಎಂದರಂತಲ್ಲಾ. ಶ್ರೀಗಳು ತಮ್ಮ ನಿಷ್ಠುರ ಮಾತಿನ ಸಾಣೆಯನ್ನು ಹರಿತಗೊಳಿಸಿಕೊಳ್ಳಲು ಆಡಿದ ಮಾತು, ನಾಡಿನ ಪರಮ ಶಿಷ್ಯರನ್ನು ಕೆಣಕಿದೆಯಂತಲ್ಲಾ. ಪರಮೇಶ್ವರರ ಜೀವದ ಬಗ್ಗೆ ಹೀಗೆ ಹಗುರವಾಗಿ ಮಾತಾಡಿರುವ ಶ್ರೀಗಳು ಎಡೂರಪ್ಪನ ಹೀಗೆ ಮಾತಾಡಬಲ್ಲರೆ, ಇಲ್ಲ ಸಿದ್ದರಾಮಯ್ಯನ ಬಗ್ಗೆ ಹೀಗೆ ಹೇಳಬಲ್ಲರೆ. ಅಗ್ಗವಾಗಿ ಸಿಕ್ಕಿದ ನಮ್ಮ ಪರಮಣ್ಣನಿಗೆ ಹೀಗಂದಿರುವುದು ಸರಿಯಲ್ಲ ಎಂದು ಸಣ್ಣದಾಗಿ ಗೊಣಗಿದರಲ್ಲಾ. ನಮ್ಮ ಪರಮಣ್ಣನ ಜೀವ ಸದ್ಯಕ್ಕೆ ಅಮೂಲ್ಯವಾದುದೇ ಸರಿ. ಇಷ್ಟು ವರ್ಷಗಳ ನಂತರ ಮುಖ್ಯಮಂತ್ರಿ ಪದವಿ ಸನಿಹಕ್ಕೆ ತೆವಳಿದ್ದಾರೆ. ಅದೂ ಶಿಕ್ಷಣ ಸಂಸ್ಥೆ ಮಾಡಿಕೊಂಡು ಶಾಮನೂರರ ತಮ್ಮನಂತಾದ ಕಾರಣಕ್ಕೆ. ದೇವೇಗೌಡರ ಮಗ ಎಂಬ ಕಾರಣಕ್ಕೆ ಅನಾಯಾಸವಾಗಿ ಎರಡು ಬಾರಿ ಮುಖ್ಯಮಂತ್ರಿಯಾದ ಕುಮಾರಣ್ಣನವರಿಗೆ ಹೋಲಿಸಿದರೆ ಪರಮಣ್ಣನ ಜೀವ ಬಹು ಬೆಲೆಯದ್ದು ಎಂದು ಡಿಎಸ್‌ಎಸ್ ವೈರಿ ವೆಂಕಟಸ್ವಾಮಿಯ ವ್ಯಾಖ್ಯಾನವಾಗಿದೆಯಲ್ಲಾ, ಥೂತ್ತೇರಿ!

* * * *

ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲದ ಸಮಸ್ಯೆಯನ್ನು ಚಿಟಕಿ ಹೊಡೆದಂತೆ ಬಗೆಹರಿಸುತ್ತೇನೆಂದು ಅಧಿಕಾರಕ್ಕೆ ಬಂದ ಕುಮಾರಣ್ಣನನ್ನು ಬೆಳಗಾವಿಯ ಕಬ್ಬಿನ ಬೆಳೆ ರೈತರು ಗಾಣಕ್ಕೆ ಹಾಕಿ ಹರೆಯತೊಡಗಿದ್ದಾರಂತಲ್ಲಾ. ಇದಕ್ಕೆ ಕಾರಣ ಕುಮಾರಣ್ಣನ ನುಡಿಮುತ್ತುಗಳೇ ಹೊರತು ರೈತರಲ್ಲಾ ಎಂಬುದು ರೈತ ಸಂಘದ ದೂರಾಗಿದೆಯಲ್ಲಾ. ಬೆಳಗಾವಿ ಕಡೆ ರೈತರು ಕಬ್ಬು ಬೆಳೆಗಾರರು ಕಬ್ಬು ಬೆಳೆಯಷ್ಟು ರಗಳೆ ಬೆಳೆಯಲ್ಲ. ನೆಟ್ಟು, ನೀರು ಗೊಬ್ಬರ ಕೊಟ್ಟರಾಯ್ತು ಕಟಾವಿಗೆ ಬರುವವರೆಗೆ ಬೆಳಗಾವಿಯಲ್ಲಿ ಅಡ್ಡಾಡಬಹುದು ಅಥವಾ ಆರಾಮವಾಗಿರಬಹುದು. ಇದನ್ನು ಗ್ರಹಿಸಿಯೋ ಏನೋ ಕುಮಾರಣ್ಣ ರೈತ ಮಹಿಳೆಯೊಬ್ಬರಿಗೆ `ಯಾವುದೋ ಕಂಪನಿಯಿಂದ ಬರಬೇಕಾದ ಸಾಲಕ್ಕೆ ನನ್ನನ್ನು ದೂರುವ ನೀನು ಇಷ್ಟು ದಿನ ಎಲ್ಲಿ ಮಲಗಿದ್ದೆವ್ವ’ ಎಂದು ಬುಟ್ಟಿದ್ದಾರಲ್ಲಾ. ಈ ಸಮಯದಲ್ಲಿ ಲಂಕೇಶರ ಹಾಡಾದ ‘ಎಲ್ಲಿದ್ದೆ ಇಲ್ಲಿತಂಕ ಎಲ್ಲಿಂದ ಬಂದ್ಯವ್ವ’ ಎಂಬ ಹಾಡು ನೆನಪಾಗುವುದರ ಜೊತೆಗೆ ಮುಖ್ಯಮಂತ್ರಿಯಾದವನು ಮಾತನ್ನು ಬಂಗಾರದಂತೆ ತೂಗಿ ಆಡಬೇಕು, ಎಲ್ಲಿ ಮಲಗಿದ್ದೆ ಎಂದರೆ ಏನರ್ಥ, ನಿನ್ನಂತೆ ಎಲ್ಲೆಲ್ಲೋ ಮಲಗಿ ಉಪಸಂಸಾರ ಮಾಡಿಕೊಂಡಿಲ್ಲ, ನನ್ನ ಜಮೀನಿನಲ್ಲಿ ಕಬ್ಬು ಬೆಳೆದು, ಅ ಬೆಳೆಯೊಳಗೆ ಮಲಗಿದ್ದೆ, ಇಂತಹ ಮಾತನಾಡುವ ನೀನು ಮುಖ್ಯಮಂತ್ರಿಯಾಗಲು ನಾಲಾಯಕ್ ಎಂದು ಬೆಳಗಾವಿಯ ಭೂದೇವಿ ಅಬ್ಬರಿಸಿದ್ದಾಳಲ್ಲ. ಬೆಳಗಾವಿ ಅಧಿವೇಶನದ ವೇಳೆ ರೈತರನ್ನು ಎತ್ತಿಕಟ್ಟಿ ಸಿದ್ದುಗೆ ಸಮಸ್ಯೆಯೊಡ್ಡಿದ್ದ ಕುಮಾರಣ್ಣನ ಕತೆಯೀಗ ಮಾಡಿದ್ದುಣ್ಣೋ ಮಾರಾಯನಂತಾಯ್ತಲ್ಲಾ, ಥೂತ್ತೇರಿ!

* * * *

ಮೀಟು ಪ್ರಖರಣಗಳ ಕಾವು ಕಡಿಮೆಯಗುತ್ತಿರುವ ಈ ಹೊತ್ತಿನಲ್ಲಿ, ಡಾಬಸ್‌ಪೇಟೆಯ ಕನ್ನಡದ ಪ್ರಖರ ವಿಮರ್ಶಕರು ಎಚ್ಚೆತ್ತುಕೊಂಡು ಮೀಟೂ ಕಡೆ ಬ್ಯಾಟರಿ ಹಚ್ಚಿ ನೋಡ ತೊಡಗಿದ್ದಾರಂತಲ್ಲಾ. ವಯೋಮಾನದ ಕಾರಣಕ್ಕೆ ಮೀಟು ಪ್ರಕರಣ ಮಬ್ಬಾಗಿ ಕಂಡದ್ದರಿಂದಲೋ ಏನೋ, ಸಿಟ್ಟಾಗಿರುವ ವಿಮರ್ಶಕರು ಮೀಟುಗೆ ತುತ್ತಾದ ನಟಿ ಇಷ್ಟು ದಿನ ಎಲ್ಲಿದ್ದಳು? ಆ ಸಮಯದಲ್ಲೇಕೆ ಸುಮ್ಮನಿದ್ದಳು? ಕೇಳಿದಕೂಡಲೆ ಅಂಗಾತ ಮಲಗಲು ಆಕೆಯೇನು ಹಳ್ಳಿಯವಳೆ? ಪ್ರತಿಷ್ಠಿತ ಶಿಕ್ಷಿತ ಸಮಾಜದವಳಾದ ಆಕೆ ಸುಮ್ಮನಿದ್ದುದ್ದೇಕೆ? ಅಮೆರಿಕಾದಿಂದ ಆಮದಾದ ಆ ಮೀಟುವನ್ನು ಇಲ್ಲಿ ಒಪ್ಪಲು ಸಾಧ್ಯವೆ? ಇತ್ಯಾದಿ ಪ್ರಶ್ನಿಸಿ ನಟಿಯ ನಡವಳಿಕೆ ಮೇಲೆ ಹರಿಹಾಯ್ದಿದ್ದಾರಂತಲ್ಲಾ. ಹರಿತವಾದ ಆಯುಧ ಹೊಂದಿರುವ ಸದರಿ ವಿಮರ್ಶಕರು. ಯಾರ ಮೇಲಾದರೂ ಹರಿಹಾಯಲೇಬೇಕಾಗುತ್ತದೆ. ವಿಮರ್ಶಕರ ಈ ಮಾನದಂಡವಿಡಿದು ಮಾತನಾಡುವುದಾದರೆ ನಮ್ಮ ರಾಮಚಂದ್ರಾಪುರ ಮಠದ ಕೆಂದು ಹೋರಿ ಇನ್ನು ಕಡಸುಗಳ ಮೇಲೆ ಹಾರುತ್ತ ಹಾಯಾಗಿರುತ್ತಿತ್ತು. ವಿಮರ್ಶಕರೇ ಹೇಳುವಂತೆ ನಮ್ಮ ಸಂಸ್ಕೃತಿಯೇ ನಮ್ಮ ಕಾಮವನ್ನು ನಿಯಂತ್ರಿಸುವುದಾಗಿದ್ದರೆ, ರಾಘವ ರೂಢಿಸಿಕೊಂಡ ಸಂಸ್ಕೃತಿ ಯಾವುದು. ಹೆಂಡತಿಯಿಂದ ಸುಕ್ಷೇಮ ದೂರ ಕಾಪಾಡಿಕೊಂಡು ಬದುಕುವ ಸಾಹಿತಿಗಳ ಸಮಸ್ಯೆ ಸಾರ್ವತ್ರಿಕವಾಗಲು ಸಾಧ್ಯವಿಲ್ಲವಂತಲ್ಲಾ, ಥೂತ್ತೇರಿ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...