Homeಅಂಕಣಗಳುನೀರನಡೆ | ಭವಿಷ್ಯದ ನೆರಳಿನಂತಿರುವ ವರ್ತಮಾನದ ಸಣ್ಣ ಸಂಗತಿಗಳು

ನೀರನಡೆ | ಭವಿಷ್ಯದ ನೆರಳಿನಂತಿರುವ ವರ್ತಮಾನದ ಸಣ್ಣ ಸಂಗತಿಗಳು

- Advertisement -
- Advertisement -
  • ಡಾ. ವಿನಯಾ ಒಕ್ಕುಂದ |

ನಮ್ಮ ಸುತ್ತ ನಡೆಯುತ್ತಿರುವ ಸಣ್ಣ ಸಂಗತಿಗಳನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಅವು ಬೃಹತ್ ವಿದ್ಯಮಾನದ ನೆರಳಿನಂತಿರುತ್ತವೆ. ಮೊನ್ನೆ ಧಾರವಾಡದ ಮೇ ಸಾಹಿತ್ಯದ ಕಾರ್ಯಕ್ರಮದಲ್ಲಿದ್ದೆ. ನನ್ನ ಪಕ್ಕ ಹಿರಿಯರೊಬ್ಬರು ಕೂತಿದ್ದರು. ನಿಧಾನ ಮಾತು ಆರಂಭಿಸಿದರು. ‘ನಿಮ್ಮ ಮಗಳಾ?’ ‘ಹೀಗೆ ಫೋಟೋ ತೆಗೆದು ಓಡಾಡಿ ಮುಂದೇನು ಮಾಡುತ್ತಾಳೆ?’ .. ಆ ಮಾತುಗಳಲ್ಲಿ ಮಮತೆ ಇರಲಿಲ್ಲ. ವ್ಯಂಗ್ಯವಿತ್ತು. ಪೇಚಿಗೆ ಸಿಲುಕಿಸುವ ಇರಾದೆಯಿತ್ತು. ನಾನು ‘ಗೊತ್ತಿಲ್ಲ’ ಎಂದೆ. ‘ಚಿತ್ರ ಗಿತ್ರ ತಗೀತಾಳಂತಲ್ಲ?’ ‘ಹೂಂ’. ‘ಓದೋದು ಬರೆಯೋದು?’ ‘ಅಂಥದೇನಿಲ್ಲ’… ನಾನು ಕುರ್ಚಿಯನ್ನು ಅತ್ತಿತ್ತ ಜರುಗಿಸಿಕೊಂಡು ಕೂತೆ. ಅವಳು ಬಂದಾಗ ‘ನೋಡು ಚಿತ್ರವೆಂದರೆ ಹೀಗೆ ತಗೀಬೇಕು’ ಎಂದು ಮೊಬೈಲ್‍ನಿಂದ ತೋರಿಸಿದರು. ಬಿಜೆಪಿ ಶಾಸಕರೊಬ್ಬರ ಚಿತ್ರ ಬಿಡಿಸಿದ ಕಲಾವಿದರೊಬ್ಬರ ಚಿತ್ರಗಳವು. ಇವಳು ತಲೆಯಾಡಿಸಿ ಎದ್ದುಹೋದಳು. ಧರ್ಮದ ಕುರಿತ ಗೋಷ್ಠಿಯಲ್ಲಿ ವೀರಶೈವ- ಲಿಂಗಾಯತ ಚರ್ಚೆ ಬಂತು. ಎಚ್.ಎಸ್.ಶಿವಪ್ರಕಾಶ್, ಎಸ್ ಜಿ. ಸಿದ್ದರಾಮಯ್ಯ, ರಂಜಾನ್ ದರ್ಗಾ ಚರ್ಚಿಸುತ್ತಿದ್ದರು. ‘ಇದೇನಿದು, ಸಾಹಿತ್ಯದ ಬಗ್ಗೆ ಮಾತಾ? ತಥ್.. ನೀವು ಇಂಗ್ಲಿಷ್ ಲಿಟರೇಚರ್ ಓದಿದ್ದೀರಾ ಮೇಡಂ? ಅಲ್ಲಿ ಹೀಗೆ ಮಾತಾಡುವುದನ್ನು ಮಾತಿನ ವಾಂತಿ ಅಂತಾರೆ’. ನನಗೆ ಕೋಪ ಬರುತ್ತಿತ್ತು. ‘ನಿಮಗೆ ಬೇಡವಾದರೆ ಎದ್ದು ಹೋಗಿ’ ಎಂದೆ. ‘ಇಲ್ಲ ಇಲ್ಲ ನಾನು ಕೇಳಲಿಕ್ಕೇ ಬಂದಿದ್ದು’ ಎಂದು ಉತ್ತರ ಬಂತು. ದಿನೇಶ್ ಅಮೀನ್‍ಮಟ್ಟು, ‘ಇಷ್ಟೆಲ್ಲ ಮಾಡುವ ಬದಲು ಇವಿಎಂ ಮಶಿನ್‍ಗಳನ್ನು ಹ್ಯಾಕ್ ಮಾಡುವವರನ್ನು ತಯಾರು ಮಾಡಿಕೊಂಡಿದ್ದರೆ ಸಾಕಾಗಿತ್ತು’ ಎಂದು ಪ್ರಜಾಪ್ರಭುತ್ವದ ಅಭದ್ರತೆಯ ಬಗ್ಗೆ ವ್ಯಂಗ್ಯದಿಂದ ಮಾತು ಆರಂಭಿಸಿದರು. ನನ್ನ ಪಕ್ಕದ ವ್ಯಕ್ತಿಗೆ ಸಿಟ್ಟು ನೆತ್ತಿಗೇರಿತ್ತು. ‘ಏನಿದು ಬಾಯಿಬಡುಕರ ಹಾಗೆ ಒದರಿದರೆ..? ವಿವಿಪ್ಯಾಟ್ ಲಗತ್ತಿಸಿಲ್ವಾ?’ ಈ ಬಾರಿ ಆಸಾಮಿ ನನ್ನ ಕಡೆ ಹೊರಳಿರಲಿಲ್ಲ. ಆ ಕಡೆಯ ವ್ಯಕ್ತಿಯ ಜತೆಗೆ ಮಾತಾಡುತ್ತಿತ್ತು. ಆ ಕ್ಷಣ ವಿವಿಪ್ಯಾಟ್ ಹಿಂದೆ ಹೀಗೆ ಬಾಯ್ಮುಚ್ಚಿಸುವ ತಂತ್ರಗಾರಿಕೆ ಇದೆ ಅನ್ನಿಸಿತು.

ಸಂಜೆಯ ಸಮಾರೋಪದಲ್ಲಿ ಮಾತನಾಡುತ್ತ ಸುನಂದಾ ಕಡಮೆ, ಪ್ರಕಾಶ್ ರೈ ಮನೆಗೆ ಬಂದಿದ್ದ ಫೋಟೋ ಫೇಸ್ ಬುಕ್ಕಿಗೆ ಹಾಕಿದಾಗ ಕೆಲ ದಿನ ನಿರಂತರವಾಗಿ ಕೆಟ್ಟ ಮೆಸೇಜ್‍ಗಳು ಬಂದಿದ್ದನ್ನು ಪ್ರಸ್ತಾಪಿಸಿದರು. ನನಗೆ ಗಾಬರಿಯಾಯಿತು. ಪ್ರಕಾಶ್ ರೈ ಮನೆಗೆ ಬಂದಿದ್ದ ಫೋಟೋಗಳನ್ನು ನನ್ನ ಗಂಡನೂ ಮಗಳೂ ಫೇಸ್ ಬುಕ್ಕಿಗೆ ಹಾಕಿದ್ದರು. ಮಗಳಿಗೆ ಪ್ರಕಾಶ್ ರೈ ಕುರಿತು ಕೆಲವು ಕೆಟ್ಟ ಕಮೆಂಟ್‍ಗಳು ಬಂದಿದ್ದವಂತೆ. ‘ನನಗೆ ಹೇಳಲಿಲ್ಲವಲ್ಲ’ಎಂದರೆ ‘ನಾನೇ ಓದ್ಲಿಲ್ಲ, ಹೀಗೆ ಅಂತ ಕಂಡ ತಕ್ಷಣ ಬ್ಲಾಕ್ ಮಾಡಿ ಒಗೆದೆ’ ಎಂದಳು ನಿಸೂರಾಗಿ. ಇವೆಲ್ಲ ಇಷ್ಟು ಉಪೇಕ್ಷಿಸುವ ಸಂಗತಿಗಳಲ್ಲ ಎಂದು ಅವಳಿಗೆ ತಿಳಿದಿರಲಿಲ್ಲ. ಪ್ರಕಾಶ್ ರೈ, ನಮ್ಮ ಮನೆಯಲ್ಲಿ ಕೆಲಗಂಟೆ ಕಳೆದು ಹೋದ ಮೇಲೆ ನಡೆದ ಸಂಗತಿಗಳನ್ನು ನೆನಪಿಸಿಕೊಂಡೆ. ಅಕ್ಕಪಕ್ಕದವರ ಕಣ್ಣು ಬೇರೆ ನಮೂನಿ ತೂಗತೊಡಗಿವೆ ಅನ್ನಿಸಿತ್ತು. ಎಲ್ಲರ ಹಾಗೆ ಬಾಗಿಲಿಗೆ ರಂಗೋಲಿ ಇಕ್ಕಿ, ಎಲ್ಲರ ಹಾಗೆ ಆಕಾಶಬುಟ್ಟಿ ತೂಗುಬಿಟ್ಟು, ಎಲ್ಲರ ಹಾಗೆ ಕಬ್ಬು ನಿಲ್ಲಿಸಿ ತುಳಸಿ ಪೂಜೆ ಮಾಡಿ… ಏನೆಲ್ಲಾ ಮಾಡಿದರೂ ಇವರು ನಮ್ಮಂತಿಲ್ಲ ಅಂತ ಸುತ್ತಲ ಜನ ಇರುಸು-ಮುರಸು ಅನುಭವಿಸುತ್ತಿದ್ದ ಹಾಗಿತ್ತು. ಅವರ ಬಗ್ಗೆ ಪಾಪ ಅನ್ನಿಸಿತು. ನಮ್ಮ ಕೆಲಸದವಳು, ಆವತ್ತು ಪ್ರಕಾಶ್ ರೈ ಅಡಿಗೆ ಮನೆ ಬಾಗಿಲವರೆಗೂ ಬಂದು ಅವಳೊಡನೊಂದು ಫೋಟೋ ಕೂಡ ತಗೊಂಡಿದ್ದರು. ಅವಳು ಆವತ್ತು ಪ್ರಕಾಶ್ ರೈ ಬಗ್ಗೆ ಫಿದಾ ಆಗಿದ್ದು ನಿಜ. ಆದರೆ ದಿನವೂ ಒಂದೊಂದು ಪ್ರಶ್ನೆಗಳನ್ನು ತರುತ್ತಿದ್ದಳು. ‘ಅವರಿಗೆ ಕಾಂಗ್ರೆಸ್ ಏಜೆಂಟ್ ಅಂತಾರಂತಲ್ಲ?’ ‘ಅವರಿಗೆ ಎರಡು ಮದುವೆಯಾಗಿದಾವಂತಲ್ಲ?’ ಹೀಗೆ. ತಿಳಿದಷ್ಟನ್ನು ಸಮಾಧಾನದಿಂದ ವಿವರಿಸಿದ್ದೆ. ಪ್ರಕಾಶ ರೈ ಭಾಷಣದ ತುಣುಕುಗಳನ್ನು ಕೇಳಿಸಿದೆ. ‘ ಹೌದ್ ಬಿಡ್ರೀ, ಸರಿ ಬಿಡ್ರೀ,’ ಅಂತ ಸುಮ್ಮನಾಗಿದ್ದಳು. ನಿಜಕ್ಕೂ ಅವಳ ಅಂತರಂಗದಲ್ಲಿ ಹೌದೆನ್ನಿಸಿತೇ ತಿಳಿಯಲಿಲ್ಲ. ದುಡಿದು ಬದುಕುವ ಇಂತಹ ಜನರ ಅನಕ್ಷರತೆ, ಮುಗ್ಧತೆಗಳನ್ನು ಕೋಮುವಾದ ಬಳಸಿಕೊಳ್ಳುವ ಪರಿ ದಂಗುಬಡಿಯುವಂಥದ್ದು. ಕಲ್ಬುರ್ಗಿಯವರ ಹತ್ಯೆಯ ನಂತರದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮನೆಗೆ ಬರುವಾಗ ಆಟೋ ಚಾಲಕ ಕೇಳಿದ್ದ-‘ ಅವ್ರು ನಮ್ದೇವ್ರ ಮೇಲೆ ಉಚ್ಚಿ ಹೊಯ್ಬಹುದು ಅಂದಿದ್ರಂತಲ್ಲ. ಅಂಥವರ ಸಂಬಂಧ ರ್ಯಾಲಿ ಮಾಡೀರಿ? ಹುಷಾರ್ರೀ ನಿಮ್ಮ ಮನಿಗೋಳ ಮ್ಯಾಲೂ ಕಲ್ ಬಿದ್ದಾವು’. ಹಿಂದುತ್ವದ ಅಜೆಂಡಾ ತುಂಬಾ ಪ್ರಬಲವಾಗಿ ಈ ಕೆಲಸ ಮಾಡುತ್ತಿದೆ. ಸಾಮಾಜಿಕ ವ್ಯವಸ್ಥೆಯ ತಳಹದಿಯಲ್ಲಿರುವ ಜೀವಿಗಳಲ್ಲಿ ತನ್ನ ನಂಬಿಕೆಯನ್ನು ಉತ್ಪಾದಿಸುತ್ತಿದೆ. ನಿಧಾನ ವಿಷದಂತೆ ದಿನವೂ ಸುಳ್ಳುಗಳು ತಪ್ಪುಗಳು ಅರೆ ಬರೆ ವ್ಯಾಖ್ಯಾನಗಳು ಅವರನ್ನು ತಲುಪುತ್ತವೆ. ಮರು ವಿಶ್ಲೇಷಿಸಬಹುದಾದ ಸುದ್ದಿಯಾಗಿಯಲ್ಲ, ನಂಬಿಕೆಯಾಗಿ. ಈ ನಂಬಿಕೆಯ ಲೇಹ್ಯದ ಕಟುತ್ವವನ್ನು ಯಾವ ವೈಚಾರಿಕತೆಯೂ ಮಾಗಿಸಲಾರದು ಎನ್ನುವಷ್ಟು ತೀವ್ರವಾಗಿ.

ಪ್ರಕಾಶ್ ರೈ ಬಂದುಹೋದ ಕೆಲ ದಿನಗಳಲ್ಲಿ, ಮಗಳು ತನ್ನ ಗೆಳತಿಯೊಂದಿಗೆ ಸಮೀಪದ ಪರಿಚಯದ ಪಾರ್ಲರಿಗೆ ಹೋಗಿದ್ದಳು ಕೂದಲು ಶೇಪ್‍ಲೆಸ್ ಆಗಿದೆ ಎಂದು ಗೊಣಗಿಕೊಳ್ಳುತ್ತ. ಬೇಡವೆಂದರೂ ಏನೋ ಮಹತ್ವದ್ದನ್ನು ಪಡೆಯುವ ಉಮೇದಿಯಲ್ಲಿ. ಬಂದಾಗ ಕೋಪದಿಂದ ಧುಮುಗುಡುತ್ತಿದ್ದಳು. ಆ ಪಾರ್ಲರಿನಲ್ಲಿ ಗಂಡಹೆಂಡತಿ ಇಬ್ಬರೂ ಇರುತ್ತಾರೆ. ಮಕ್ಕಳ ಕೂದಲನ್ನು ಶೇಪ್ ಮಾಡೋದು ಸಾಮಾನ್ಯವಾಗಿ ಗಂಡನೇ ಅಂತೆ. ಅವರ ಮಗಳು ಇವರ ಗೆಳತಿ ಕೂಡ. ಅವರು ತೆಲುಗು ಮಾತಾಡುವ ದಲಿತರು. ಬಹಳ ಕಾಲದಿಂದ ಇಲ್ಲೇ ಇರುವವರು. ಇವಳು ಕೂದಲು ಕೊಟ್ಟು ಕೂತಾಗ ಆತ ಕೇಳಿದನಂತೆ. ‘ನಿಮ್ಮನೆಗೆ ಹುಚ್ಚ ಬಂದಿದ್ದನಂತಲ್ಲ?’ ‘ಆಂ’? ‘ಆ ಪ್ರಕಾಶ ರೈ ಅನ್ನೋ ಹುಚ್ಚ ಬಂದಿದ್ದನಂತಲ್ಲ?’ ‘ಯಾಕ್ರಿ ಅಂಕಲ್, ಅನಂತಕುಮಾರ ಹೆಗಡೆ ಬಂದಿದ್ದರೆ ಹಾಗನ್ನಬಹುದಿತ್ತು. ಹೋಗಿ ಹೋಗಿ ಅಷ್ಟು ದೊಡ್ಡ ವ್ಯಕ್ತಿಗೆ ಹೀಗನ್ನುತ್ತೀರಲ್ರೀ.. ಏನ್ರೀ ನೀವು…?’ ಆತ ದಂಗಾದನಂತೆ. ಇಷ್ಟು ಸಣ್ಣ ಹುಡುಗಿ ಹೀಗೆ ಉತ್ತರಿಸಬಹುದೆಂದುಕೊಂಡಿರಲಿಲ್ಲವೇನೋ. ನಂತರದ್ದು ಇನ್ನೊಂದು ಬಗೆಯ ವಿಕಾರ. ಚೆಂದದ ಕೂದಲನ್ನು ಅಸಡ್ಡಾಳ ಕತ್ತರಿಸಿದ್ದ. ಕಣ್ಣೊರೆಸಿಕೊಳ್ಳುತ್ತ ಬಂದವಳು ಕೂದಲ ದುಃಸ್ಥಿತಿ ನೋಡಿ ಕೊರಗುತ್ತಲೇ ಇದ್ದಳು. ಆದರೆ, ಪ್ರಕಾಶ್ ರೈ ಜತೆ ಇದ್ದ ಬಿದ್ದ ಫೋಟೋಗಳನ್ನೆಲ್ಲ ಅಪ್ ಲೋಡ್ ಮಾಡಿದಳು. ನನಗೆ ಅರ್ಧ ಹೇರ್ ಕಟಿಂಗ್ ಮಾಡಿ ಹೊರದಬ್ಬಿಸಿಕೊಂಡಿದ್ದ ಹಿರೇಕೆರೂರಿನ ದಲಿತ ಯುವಕ ನೆನಪಾಗುತ್ತಿದ್ದ. ಅವನನ್ನು ಹೊರದಬ್ಬಲಾಗಿತ್ತು. ಇವಳು ಇನ್ನೊಂದು ರೀತಿಯಲ್ಲಿ ಹೊರಬಂದಿದ್ದಳು, ಇನ್ನೆಂದೂ ಅಲ್ಲಿ ಕಾಲಿಡಲಾರದಂತೆ. ಜಾತಿ, ಧರ್ಮ, ಲಿಂಗಗಳ ಜತೆಗೆ ವೈಚಾರಿಕತೆಯೂ ತೀವ್ರ ಒತ್ತುವರಿಗೆ ಒಳಗಾಗುತ್ತಿರುವ ಕಾಲವಿದು.

ರಾಜೇಂದ್ರ ಚೆನ್ನಿಯವರು ನಮ್ಮ ಈ ವರ್ತಮಾನವನ್ನು ಜಾರ್ಜ್ ಆರ್ವೆಲ್ 1984ರಲ್ಲಿ ಬರೆದ Thought police ವಿಧಾನದೊಂದಿಗೆ ಇಡುತ್ತಾರೆ. ಬಿಗ್ ಬ್ರದರ್ ತನ್ನ ಪ್ರಜೆಗಳ ಮೇಲೆ ನಿಗಾ ಇಡುತ್ತಾನೆ. ಸಾರ್ವಜನಿಕ ಸ್ಥಳಗಳಲ್ಲಿ ಪರದೆಯ ಮೇಲೆ ದೊಡ್ಡ ಭಾವಚಿತ್ರ ಮೂಡುತ್ತದೆ. ಯಾರು ನಮಸ್ಕರಿಸುವುದಿಲ್ಲವೋ ಅದು ದಾಖಲಾಗುತ್ತದೆ. ಅಂಥವರನ್ನು ಅರೆಸ್ಟ್ ಮಾಡಲಾಗುತ್ತದೆ. ಇದು ಸಲೀಸಾಗಿ ನಡೆಯುತ್ತದೆ. ಯಾಕೆಂದರೆ ಪ್ರಭುತ್ವಕ್ಕೆ ಅಪಥ್ಯವೆನ್ನಿಸುವ ಚರಿತ್ರೆಯ ನೆನಪುಗಳನ್ನು ಜನರ ಮನಸ್ಸಿನಿಂದ ಶಾಶ್ವತವಾಗಿ ಅಳಿಸಲಾಗಿದೆ. ನಮ್ಮ ಸುತ್ತ ನಡೆಯುತ್ತಿರುವ ಸಣ್ಣಸಣ್ಣ ಸಂಗತಿಗಳು ಅದೇ ಕರೆಗಂಟೆಗಳೇ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...