Homeಚಳವಳಿಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

- Advertisement -
- Advertisement -

| ಡಾ. ಹೆಚ್.ಡಿ. ಉಮಾಶಂಕರ್ |

ತಮಿಳಿನ ಯುವ ನಿರ್ದೇಶಕ ಪಾ ರಂಜಿತ್ “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದು ತುಂಬಾ ವಿವಾದಕ್ಕೆ ಈಡಾಗಿದೆ. ಇಲ್ಲಿ ಎರಡು ನೆಲೆಗಳ ಮೂಲಕ  ಈ ದೇಶದ ಮುಖವನ್ನು ಅರ್ಥಮಾಡಿಕೊಳ್ಳಬೇಕಿದೆ.

 

ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ಹೆಸರು ಮಾಡುತ್ತಿರುವ ನಿರ್ದೇಶಕ ಅಂದರೆ ಪಾ. ರಂಜಿತ್. ತಮಿಳಿನ ಸುಪ್ರಸಿದ್ಧ ನಟ ರಜನಿಕಾಂತ್ ಜೊತೆಗೆ ಒಂದು ಸಿದ್ಧಾಂತದಡಿ ಸಿನಿಮಾ ನಿರ್ಮಿಸಿ ಸೈ ಎನಿಸಿಕೊಂಡ ಭೂಪ ಈತ. ಇವರಿಬ್ಬರ ಸಹಯೋಗದಲ್ಲಿ ‘ಕಾಲಾ’ ಎನ್ನುವ ಮರೆಯಲಾಗದ ಸಿನಿಮಾವೊಂದು ಮೂಡಿ ಬಂದು ಇಂದಿಗೂ ನಮ್ಮೆಲ್ಲರೆದೆಯೊಳಗೆ ಹಚ್ಚಹಸಿರಾಗಿ ನಿಂತಿದೆ. “ನನಗೆ ಮತ್ತೊಮ್ಮೆ ಯಾಕೋ ‘ಕಾಲ’ ನೋಡಬೇಕೆನಿಸುತ್ತಿದೆ! ಥಿಯೇಟರಿನಿಂದ ಹೊರಬಂದಾಗ ಅಸಂಖ್ಯಾತ ಜನ ನನ್ನಂತಹ ಕರಿಯರು ‘ಕಾಲ’ನಲ್ಲಿ ಲೀನವಾಗಿ ಯಾವುದೋ ಪ್ರತಿಭಟನೆಯ ಮೆರವಣಿಗೆ ಹೊರಟಂತೆ ಭಾಸವಾಗುತ್ತದೆ!!” ಎಂದು ಸಿ.ಎಸ್. ದ್ವಾರಕಾನಾಥ್ ಬರೆದಿರುವುದನ್ನು ಗಮನಿಸಿದರೆ ಅದರ ಯಶಸ್ಸಿನ ಗುಟ್ಟು ತಿಳಿಯುತ್ತದೆ. ಭಾರತದಾದ್ಯಂತ ಜಗದ್ವಿಖ್ಯಾತ ನಿರ್ದೇಶಕರು, ನಟರು, ನಿರ್ಮಾಪಕರು, ತಂತ್ರಜ್ಞರು, ಸಂಗೀತಗಾರರು ಇದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದವರ ಸಾಲೂ ಇಲ್ಲಿದೆ. ಆದರೆ ಇಲ್ಲಿನ ರೋಗಗ್ರಸ್ತ ಮನಸ್ಥಿತಿಗಳನ್ನು ತಿದ್ದುವ ಸಿನಿಮಾಗಳನ್ನು ನಿರ್ಮಿಸಿದವರ ಸಂಖ್ಯೆ ತೀರಾ ವಿರಳಾತಿ ವಿರಳ ಎಂದರೆ ತಪ್ಪಾಗಲಾರದೇನೋ!

ಮೊನ್ನೆ ಡಾ. ರಾಜ್‍ಕುಮಾರ್ ಅವರ ಕಾಮನಬಿಲ್ಲು ಸಿನಿಮಾವನ್ನು ನೋಡುತ್ತಿದ್ದೆ. ಅದರಲ್ಲಿ ರಾಜ್‍ಕುಮಾರ್ ಅವರು, ಇಬ್ಬರು ಮಕ್ಕಳು ವಿನಾಕಾರಣ ಸಣ್ಣ ಜಗಳ ಮಾಡಿಕೊಂಡ ನಿಮಿತ್ತ ಅಲ್ಲಿಗೆ ಬಂದಾಗ ಇಬ್ಬರ ಜಾತಿಯನ್ನೂ ಕೇಳಿ ಅದರಲ್ಲಿ ಒಬ್ಬ ಒಕ್ಕಲಿಗರವನು ಮತ್ತೊಬ್ಬ ಹೊಲೆಯರವನೆಂದು ತಿಳಿದು ಇಬ್ಬರಿಗೂ ‘ಮಕ್ಕಳು ದೇವರ ಸಮಾನ’ ಅನ್ನುವುದನ್ನು ನೆನಪಿಸುತ್ತಾರೆ. ಒಂದಾಗಿ ಬಾಳುವ ಮಹತ್ವವನ್ನು ತಿಳಿಹೇಳಿ ತಾನೂ ಕೂಡ ಅಲ್ಲಿದ್ದ ಎಲ್ಲ ಮಕ್ಕಳ ಜೊತೆಗೆ ಕಬಡ್ಡಿ ಆಟವನ್ನು ಆಡುತ್ತಾರೆ. ಈ ಘಟನೆ ಅದೆಷ್ಟು ನನಗೆ ಕಾಡಿತೆಂದರೆ ಇಡೀ ಚಿತ್ರರಂಗದಲ್ಲಿ ಈ ತರದ ಜಾತ್ಯತೀತ ನೆಲೆಗಳನ್ನು ಬಿತ್ತಿದ ನಿರ್ದೇಶಕರು ಎಷ್ಟಿರಬಹುದು ಎಂದು ಹುಡುಕಲು ಆರಂಭಿಸಿದೆ. ಈ ಹುಡುಕಾಟದಲ್ಲಿ ಸಿಕ್ಕಿದ್ದು ಅಸ್ಪಷ್ಟ ನೆನಪುಗಳೇ ಹೊರತು ನಿಖರ ನೆನಪು ಇಲ್ಲವೇ ಇಲ್ಲ. ನಾನೇನೂ ಎಲ್ಲ ಸಿನಿಮಾಗಳನ್ನು ನೋಡಿಲ್ಲದ ಕಾರಣ, ಜಾತ್ಯತೀತ ನೆಲೆ ಒಂದೊಮ್ಮೆ ಇದ್ದರೆ ಅದಕ್ಕಿಂತ ಖುಷಿ ಬೇರಿಲ್ಲ ಎಂದುಕೊಂಡೆ. ಹೀಗೆ ಯೋಚಿಸುತ್ತಿರುವಾಗ ಮಹತ್ವದ್ದಾಗಿ ಕಾಡಿಸಿದ ನಿರ್ದೇಶಕನೆಂದರೆ ಪಾ. ರಂಜಿತ್. ಆತ ನಂಬಿರುವ ಸಿದ್ಧಾಂತ; ಜಾತಿ, ಧರ್ಮ, ಮತ ಇವುಗಳ ಬಗೆಗಿನ ನಿರ್ದಿಷ್ಟ ನಿಲುವು, ಇವುಗಳು ಹೇಗೆ ಮನುಷ್ಯನನ್ನು ತುಳಿದಿವೆ ಎನ್ನುವ ನೋವು, ಇದರೊಂದಿಗೇ ಬೆರೆತಿರುವ ಜೀವಪರ ನಿಲುವಿನ ಕಳಕಳಿ ಎಲ್ಲವೂ ಮತ್ತೆ ಮತ್ತೆ ಎದೆಗಿಳಿದು ಒಂದು ರೀತಿಯ ಹೆಮ್ಮೆಯ ಭಾವವನ್ನು ತುಂಬುತ್ತಿದ್ದವು.

ಇಂತಹ ಅಪರೂಪದ ಚಿತ್ರನಿರ್ದೇಶಕ ಪಾ.ರಂಜಿತ್‍ನ ಇತ್ತೀಚಿನ ಹೇಳಿಕೆಯಂತೂ ತುಂಬಾ ಸದ್ದು ಮಾಡುತ್ತಿದೆ. ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇವರು “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದು ತುಂಬಾ ವಿವಾದಕ್ಕೆ ಈಡಾಗಿದೆ. ಇದಕ್ಕೆ ಬಾಲಾ ಎನ್ನುವವವರು ಪೊಲೀಸ್ ಸ್ಟೇಶನ್‍ನಲ್ಲಿ “ರಂಜಿತ್ ಅವರು ಮಾಡುತ್ತಿರುವ ಸಿನಿಮಾ, ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯ ವೈಷಮ್ಯವನ್ನು ಬೆಳೆಸುತ್ತದೆ” ಎನ್ನುವ ಕಾರಣ ಕೊಟ್ಟು ದೂರನ್ನೂ ದಾಖಲಿಸಿದ್ದಾರೆ. ಇಲ್ಲಿ ಎರಡು ನೆಲೆಗಳ ಮೂಲಕ ಈ ದೇಶದ ಮುಖವನ್ನು ಅರ್ಥಮಾಡಿಕೊಳ್ಳಬೇಕು ಎನಿಸುತ್ತದೆ. ಒಂದು ಪಾ. ರಂಜಿತ್‍ನ ಸಂಶೋಧನಾ ಮನೋಭಾವ ಮತ್ತು ಸತ್ಯದ ಹಲವು ಮುಖಗಳನ್ನು ಪರಿಚಯಿಸುವ ದಿಟ್ಟ ನೋಟ. ಇನ್ನೊಂದು ದೂರು ದಾಖಲಿಸಿದವರಲ್ಲಿ ಕಾಣುತ್ತಿರುವ ಅಸಹನೆ. ಇವರದ್ದು ಹಳೆಯ ಹಳಹಳಿಕೆಗಳಲ್ಲೇ ಕಾಲ ಕಳೆಯುವ ಮನ. ಯಥಾಸ್ಥಿತಿ ಚೂರು ಅಲುಗಿದರೂ ಅವರು ದಿಗಿಲುಗೊಳ್ಳುತ್ತಾರೆ ಮತ್ತು ಸತ್ಯಕ್ಕೆ ಬೆನ್ನು ತಿರುಗಿಸಿ ಸದಾ ಸುಳ್ಳಿನ ಪರದೆಯಲ್ಲೇ ಸುತ್ತುವ ಹಿನ್ನೋಟವಿರುವ ಹೀನ ಮನಸ್ಥಿತಿ ಉಳ್ಳವರಾಗಿರುತ್ತಾರೆ. ಇವೆರಡೂ ಒಂದು ರೀತಿಯಲ್ಲಿ ಈ ಘಟನೆಯಿಂದ ಮುಖಾಮುಖಿಗೊಂಡಿವೆ ಎನಿಸುತ್ತಿದೆ.

ಇಂತಹ ಮುಖಾಮುಖಿ ಇವತ್ತಿನದೇನಲ್ಲ; ಇಂತಹ ಸಾಕಷ್ಟು ಮುಖಾಮುಖಿಗಳು ಜಗತ್ತಿನಾದ್ಯಂತ ನಡೆದು ಹೋಗಿವೆ ಮತ್ತು ನಡೆಯುತ್ತಲೇ ಇವೆ. ಅಂಬೇಡ್ಕರ್ ಅವರು ಈ ದೇಶದ ಸಂಸ್ಕೃತಿ, ಪುರಾಣ, ಶಾಸ್ತ್ರ, ಸ್ಮೃತಿ, ಧರ್ಮ, ಇತಿಹಾಸ ಮುಂತಾದವುಗಳ ತಳಸ್ಪರ್ಶಿ ಅಧ್ಯಯನ ಮಾಡಿ ಅದರೊಳಗಿನ ಮಾನವ ವಿರೋಧಿತನವನ್ನು ಬಿಚ್ಚಿಟ್ಟ ಪರಿಣಾಮ ಹಲವರಿಗೆ ಅದನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಚರಿತ್ರೆಯ ಗತಿಯನ್ನು ಸ್ವಲ್ಪ ನಿಂತು ಹಿಂದಿರುಗಿ ನೋಡಿದರೆ ಸತ್ಯವನ್ನು ಯಾರು ಹೇಳಿದರೆ ತಾನೆ ಏನು? ಎನ್ನುವ ಮನೋಭಾವ ಇಲ್ಲಿ ನೆಲೆನಿಂತಂತೆ ಕಂಡುಬರುವುದಿಲ್ಲ. ಅದನ್ನು ಹೇಳಲಿಕ್ಕೆ ಕೆಲವರು ಬೇಕು! ಅವರು ಹೇಳಿದರೆ ಮಾತ್ರ ಅದು ಸತ್ಯವಾಗಿರುತ್ತದೆ! ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವ ಹಾಗೆ! ಸುಳ್ಳಿನ ಸರಮಾಲೆ ಕಟ್ಟಿದರೂ ಸರಿ ಅವರು ಹೇಳಿದ್ದೇ ಸರಿ! ಎಂದು ನಂಬುವ ಭಾರತೀಯ ಪಡೆ ಇಲ್ಲಿ ಸದಾ ಸನ್ನದ್ಧವಾಗಿ ನಿಂತಿದೆ. ಇದರಿಂದಾಗಿಯೇ ಇಲ್ಲಿ ಚರಿತ್ರೆಯನ್ನು ಕಟ್ಟಿದವರು, ಪುರಾಣ, ಶಾಸ್ತ್ರ ಬರೆದಿಟ್ಟು ಹೋದವರೆಲ್ಲ ಬಹುಪಾಲು ಮೇಲ್ಜಾತಿಗೆ ಸೇರಿದವರೇ! ಹೀಗಿರುವಲ್ಲಿ ತಳಸಮುದಾಯದವರ ಮಾತು ಇವರಿಗೆ ಪಥ್ಯವಾಗುವುದಾದರೂ ಹೇಗೆ? ಪಾ. ರಂಜಿತ್ ವಿಷಯದಲ್ಲೂ ಹೀಗೇ ಆಗಿದೆ. ತಳ ಸಮುದಾಯದವರು ಚಿಂತಿಸಿದರೆ ಅನುಮಾನಿಸುವುದು, ಅವರಿಗಾಗುವ ಅನ್ಯಾಯಗಳ ಬಗ್ಗೆ ಮಾತನಾಡಿದರೆ ದೇಶಕ್ಕೆ ಗಂಡಾಂತರವೇನೋ ಕಾದಿದೆ ಎನ್ನುವಂತೆ ನೋಡುವುದು, ಇಂತಹ ಮನಸ್ಥಿತಿ ಈ ದೇಶದಲ್ಲಿ ಅಘೋಷಿತವಾಗೇ ಬೇರುಬಿಟ್ಟು ನಿಂತಿದೆ. ಇಂತಹ ಮನಸ್ಥಿತಿಯೇ ಸತ್ಯ ಹೇಳಲು ಹೊರಟ ರಂಜಿತ್ ಮೇಲೆ ಕೇಸು ಹಾಕುವಂತೆ ಮಾಡಿದೆ. ಅಷ್ಟಕ್ಕೂ ಈ ವಿರೋಧಿ ಪಡೆ ಇನ್ನೊಂದಕ್ಕಂತೂ ಹೆದರಿ ಕುಂತಿದೆ! ಅದ್ಯಾವುದೆಂದರೆ….ರಂಜಿತ್ ಹೇಳುತ್ತಿರುವ ಸತ್ಯ ಬರವಣಿಗೆಯ ಮಾಧ್ಯಮದ ಮೂಲಕ ಕೆಲವರಿಗಷ್ಟೇ ದಕ್ಕುತ್ತಿತ್ತು. ಈಗ ಸಿನಿಮಾ ಬಂದುಬಿಟ್ಟರೆ ಅದು ಏಕಕಾಲದಲ್ಲಿ ಕೋಟ್ಯಾಂತರ ಜನಕ್ಕೆ ಗೊತ್ತಾಗಿ ತಾವು ಕಟ್ಟಿದ ಸುಳ್ಳಿನ ಪರದೆಗೆ ಎಲ್ಲಿ ಬೆಂಕಿ ಬೀಳುವುದೋ ಎನ್ನುವ ಆತಂಕ ಅವರಿಗೆ ಹೆಚ್ಚಾಗಿದೆ. ಈ ಕಾರಣದಿಂದಲೇ ಆತಂಕದ ಮನಸ್ಸುಗಳೆಲ್ಲ ತೊಡೆತಟ್ಟಿ ನಿಂತಿವೆ ಅಷ್ಟೇ.

ಅಷ್ಟಕ್ಕೂ ಇವರು ಕೊಡುತ್ತಿರುವ ಕಾರಣವಾದರೂ ಏನು? ‘ಇದು ಸಮಾಜದಲ್ಲಿ ಜಾತಿಜಾತಿಗಳ ಮಧ್ಯೆ ವೈಮನಸ್ಯ ಬೆಳೆಸುತ್ತದೆ’ ಎಂದು ಅಲ್ಲವೇ? ಇವರನ್ನೇ ನೇರವಾಗಿ ಕೇಳೋಣ… ಹಾಗಾದರೆ ಇಲ್ಲಿ ಜಾತ್ಯತೀತ ವ್ಯವಸ್ಥೆ ಇದೆಯೋ? ಜಾತಿ ವ್ಯವಸ್ಥೆ ಇದೆಯೋ? ಜಾತಿಜಾತಿಗಳ ಮಧ್ಯ ಪ್ರೀತಿ ಇದ್ದರೆ ತಾನೆ ವೈಮನಸ್ಯದ ಬಗ್ಗೆ ಆತಂಕಗೊಳ್ಳಬೇಕು!.. ಇಲ್ಲಿ ಮೊದಲೇ ತುಂಬಿತುಳುಕುತ್ತಿರುವ ಜಾತಿಗ್ರಸ್ತ ರೋಗದ ಮನಸ್ಸುಗಳಿವೆ. ಇಲ್ಲಿ ಈ ಕಾರಣಕ್ಕಾಗಿ ಸಾವಿರಾರು ಕೊಲೆಗಳು, ಅತ್ಯಾಚಾರಗಳು, ಮಾನಭಂಗಗಳು, ಅವಮಾನಗಳು, ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಇವೆಲ್ಲಕ್ಕೂ ಕುರುಡರಂತೆ ಕಣ್ಮುಚ್ಚಿ ಕುಳಿತು ಶೋಧಕನೊಬ್ಬ ಸತ್ಯ ತೋರಿಸಲು ಹೊರಟರೆ ಉಂಟಾಗಬಹುದಾದ ವೈಷಮ್ಯದ ಬಗ್ಗೆ ಮಾತನಾಡುವುದು ಎಷ್ಟು ಸರಿ?

‘ವ್ಯಕ್ತಿ ಸತ್ತರೂ ಸತ್ಯ ಸಾಯುವುದಿಲ್ಲ’ ಎನ್ನುವುದು ಹಳೆಯ ಮಾತಾದರೂ ಇದು ಸತ್ಯವೇ ಸರಿ. ಆದರೂ ವ್ಯಕ್ತಿಗೆ ಏನಾದರೂ ಆಗುವ ಮೊದಲು ಸತ್ಯದ ಪರ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಜೀವಪರ ಇರುವರೆಲ್ಲ ಪಾ. ರಂಜಿತ್ ಪರ ನಿಲ್ಲಬೇಕಿದೆ. ಈ ಮೂಲಕ ಸತ್ಯ ಹೇಳಲು ಹೊರಟವರ ಬಾಯಿ ಮುಚ್ಚಿಸುತ್ತಿರುವ, ಸಂಸ್ಕøತಿ ಹೆಸರಿನಲ್ಲಿ ಹಳೆಯ ಹಳಹಳಿಕೆಯಲ್ಲೇ ಕೂತು ಜಾತಿಗ್ರಸ್ತವಾಗುತ್ತಿರುವ ಹೀನ ಮನಸ್ಸುಗಳ ಹುನ್ನಾರವನ್ನು ಬಯಲುಗೊಳಿಸಿ ಜೀವಪರ ನಿಲುವನ್ನು ಗಟ್ಟಿಗೊಳಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...