Homeಚಳವಳಿಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

- Advertisement -
- Advertisement -

| ಡಾ. ಹೆಚ್.ಡಿ. ಉಮಾಶಂಕರ್ |

ತಮಿಳಿನ ಯುವ ನಿರ್ದೇಶಕ ಪಾ ರಂಜಿತ್ “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದು ತುಂಬಾ ವಿವಾದಕ್ಕೆ ಈಡಾಗಿದೆ. ಇಲ್ಲಿ ಎರಡು ನೆಲೆಗಳ ಮೂಲಕ  ಈ ದೇಶದ ಮುಖವನ್ನು ಅರ್ಥಮಾಡಿಕೊಳ್ಳಬೇಕಿದೆ.

 

ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ಹೆಸರು ಮಾಡುತ್ತಿರುವ ನಿರ್ದೇಶಕ ಅಂದರೆ ಪಾ. ರಂಜಿತ್. ತಮಿಳಿನ ಸುಪ್ರಸಿದ್ಧ ನಟ ರಜನಿಕಾಂತ್ ಜೊತೆಗೆ ಒಂದು ಸಿದ್ಧಾಂತದಡಿ ಸಿನಿಮಾ ನಿರ್ಮಿಸಿ ಸೈ ಎನಿಸಿಕೊಂಡ ಭೂಪ ಈತ. ಇವರಿಬ್ಬರ ಸಹಯೋಗದಲ್ಲಿ ‘ಕಾಲಾ’ ಎನ್ನುವ ಮರೆಯಲಾಗದ ಸಿನಿಮಾವೊಂದು ಮೂಡಿ ಬಂದು ಇಂದಿಗೂ ನಮ್ಮೆಲ್ಲರೆದೆಯೊಳಗೆ ಹಚ್ಚಹಸಿರಾಗಿ ನಿಂತಿದೆ. “ನನಗೆ ಮತ್ತೊಮ್ಮೆ ಯಾಕೋ ‘ಕಾಲ’ ನೋಡಬೇಕೆನಿಸುತ್ತಿದೆ! ಥಿಯೇಟರಿನಿಂದ ಹೊರಬಂದಾಗ ಅಸಂಖ್ಯಾತ ಜನ ನನ್ನಂತಹ ಕರಿಯರು ‘ಕಾಲ’ನಲ್ಲಿ ಲೀನವಾಗಿ ಯಾವುದೋ ಪ್ರತಿಭಟನೆಯ ಮೆರವಣಿಗೆ ಹೊರಟಂತೆ ಭಾಸವಾಗುತ್ತದೆ!!” ಎಂದು ಸಿ.ಎಸ್. ದ್ವಾರಕಾನಾಥ್ ಬರೆದಿರುವುದನ್ನು ಗಮನಿಸಿದರೆ ಅದರ ಯಶಸ್ಸಿನ ಗುಟ್ಟು ತಿಳಿಯುತ್ತದೆ. ಭಾರತದಾದ್ಯಂತ ಜಗದ್ವಿಖ್ಯಾತ ನಿರ್ದೇಶಕರು, ನಟರು, ನಿರ್ಮಾಪಕರು, ತಂತ್ರಜ್ಞರು, ಸಂಗೀತಗಾರರು ಇದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದವರ ಸಾಲೂ ಇಲ್ಲಿದೆ. ಆದರೆ ಇಲ್ಲಿನ ರೋಗಗ್ರಸ್ತ ಮನಸ್ಥಿತಿಗಳನ್ನು ತಿದ್ದುವ ಸಿನಿಮಾಗಳನ್ನು ನಿರ್ಮಿಸಿದವರ ಸಂಖ್ಯೆ ತೀರಾ ವಿರಳಾತಿ ವಿರಳ ಎಂದರೆ ತಪ್ಪಾಗಲಾರದೇನೋ!

ಮೊನ್ನೆ ಡಾ. ರಾಜ್‍ಕುಮಾರ್ ಅವರ ಕಾಮನಬಿಲ್ಲು ಸಿನಿಮಾವನ್ನು ನೋಡುತ್ತಿದ್ದೆ. ಅದರಲ್ಲಿ ರಾಜ್‍ಕುಮಾರ್ ಅವರು, ಇಬ್ಬರು ಮಕ್ಕಳು ವಿನಾಕಾರಣ ಸಣ್ಣ ಜಗಳ ಮಾಡಿಕೊಂಡ ನಿಮಿತ್ತ ಅಲ್ಲಿಗೆ ಬಂದಾಗ ಇಬ್ಬರ ಜಾತಿಯನ್ನೂ ಕೇಳಿ ಅದರಲ್ಲಿ ಒಬ್ಬ ಒಕ್ಕಲಿಗರವನು ಮತ್ತೊಬ್ಬ ಹೊಲೆಯರವನೆಂದು ತಿಳಿದು ಇಬ್ಬರಿಗೂ ‘ಮಕ್ಕಳು ದೇವರ ಸಮಾನ’ ಅನ್ನುವುದನ್ನು ನೆನಪಿಸುತ್ತಾರೆ. ಒಂದಾಗಿ ಬಾಳುವ ಮಹತ್ವವನ್ನು ತಿಳಿಹೇಳಿ ತಾನೂ ಕೂಡ ಅಲ್ಲಿದ್ದ ಎಲ್ಲ ಮಕ್ಕಳ ಜೊತೆಗೆ ಕಬಡ್ಡಿ ಆಟವನ್ನು ಆಡುತ್ತಾರೆ. ಈ ಘಟನೆ ಅದೆಷ್ಟು ನನಗೆ ಕಾಡಿತೆಂದರೆ ಇಡೀ ಚಿತ್ರರಂಗದಲ್ಲಿ ಈ ತರದ ಜಾತ್ಯತೀತ ನೆಲೆಗಳನ್ನು ಬಿತ್ತಿದ ನಿರ್ದೇಶಕರು ಎಷ್ಟಿರಬಹುದು ಎಂದು ಹುಡುಕಲು ಆರಂಭಿಸಿದೆ. ಈ ಹುಡುಕಾಟದಲ್ಲಿ ಸಿಕ್ಕಿದ್ದು ಅಸ್ಪಷ್ಟ ನೆನಪುಗಳೇ ಹೊರತು ನಿಖರ ನೆನಪು ಇಲ್ಲವೇ ಇಲ್ಲ. ನಾನೇನೂ ಎಲ್ಲ ಸಿನಿಮಾಗಳನ್ನು ನೋಡಿಲ್ಲದ ಕಾರಣ, ಜಾತ್ಯತೀತ ನೆಲೆ ಒಂದೊಮ್ಮೆ ಇದ್ದರೆ ಅದಕ್ಕಿಂತ ಖುಷಿ ಬೇರಿಲ್ಲ ಎಂದುಕೊಂಡೆ. ಹೀಗೆ ಯೋಚಿಸುತ್ತಿರುವಾಗ ಮಹತ್ವದ್ದಾಗಿ ಕಾಡಿಸಿದ ನಿರ್ದೇಶಕನೆಂದರೆ ಪಾ. ರಂಜಿತ್. ಆತ ನಂಬಿರುವ ಸಿದ್ಧಾಂತ; ಜಾತಿ, ಧರ್ಮ, ಮತ ಇವುಗಳ ಬಗೆಗಿನ ನಿರ್ದಿಷ್ಟ ನಿಲುವು, ಇವುಗಳು ಹೇಗೆ ಮನುಷ್ಯನನ್ನು ತುಳಿದಿವೆ ಎನ್ನುವ ನೋವು, ಇದರೊಂದಿಗೇ ಬೆರೆತಿರುವ ಜೀವಪರ ನಿಲುವಿನ ಕಳಕಳಿ ಎಲ್ಲವೂ ಮತ್ತೆ ಮತ್ತೆ ಎದೆಗಿಳಿದು ಒಂದು ರೀತಿಯ ಹೆಮ್ಮೆಯ ಭಾವವನ್ನು ತುಂಬುತ್ತಿದ್ದವು.

ಇಂತಹ ಅಪರೂಪದ ಚಿತ್ರನಿರ್ದೇಶಕ ಪಾ.ರಂಜಿತ್‍ನ ಇತ್ತೀಚಿನ ಹೇಳಿಕೆಯಂತೂ ತುಂಬಾ ಸದ್ದು ಮಾಡುತ್ತಿದೆ. ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇವರು “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದು ತುಂಬಾ ವಿವಾದಕ್ಕೆ ಈಡಾಗಿದೆ. ಇದಕ್ಕೆ ಬಾಲಾ ಎನ್ನುವವವರು ಪೊಲೀಸ್ ಸ್ಟೇಶನ್‍ನಲ್ಲಿ “ರಂಜಿತ್ ಅವರು ಮಾಡುತ್ತಿರುವ ಸಿನಿಮಾ, ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯ ವೈಷಮ್ಯವನ್ನು ಬೆಳೆಸುತ್ತದೆ” ಎನ್ನುವ ಕಾರಣ ಕೊಟ್ಟು ದೂರನ್ನೂ ದಾಖಲಿಸಿದ್ದಾರೆ. ಇಲ್ಲಿ ಎರಡು ನೆಲೆಗಳ ಮೂಲಕ ಈ ದೇಶದ ಮುಖವನ್ನು ಅರ್ಥಮಾಡಿಕೊಳ್ಳಬೇಕು ಎನಿಸುತ್ತದೆ. ಒಂದು ಪಾ. ರಂಜಿತ್‍ನ ಸಂಶೋಧನಾ ಮನೋಭಾವ ಮತ್ತು ಸತ್ಯದ ಹಲವು ಮುಖಗಳನ್ನು ಪರಿಚಯಿಸುವ ದಿಟ್ಟ ನೋಟ. ಇನ್ನೊಂದು ದೂರು ದಾಖಲಿಸಿದವರಲ್ಲಿ ಕಾಣುತ್ತಿರುವ ಅಸಹನೆ. ಇವರದ್ದು ಹಳೆಯ ಹಳಹಳಿಕೆಗಳಲ್ಲೇ ಕಾಲ ಕಳೆಯುವ ಮನ. ಯಥಾಸ್ಥಿತಿ ಚೂರು ಅಲುಗಿದರೂ ಅವರು ದಿಗಿಲುಗೊಳ್ಳುತ್ತಾರೆ ಮತ್ತು ಸತ್ಯಕ್ಕೆ ಬೆನ್ನು ತಿರುಗಿಸಿ ಸದಾ ಸುಳ್ಳಿನ ಪರದೆಯಲ್ಲೇ ಸುತ್ತುವ ಹಿನ್ನೋಟವಿರುವ ಹೀನ ಮನಸ್ಥಿತಿ ಉಳ್ಳವರಾಗಿರುತ್ತಾರೆ. ಇವೆರಡೂ ಒಂದು ರೀತಿಯಲ್ಲಿ ಈ ಘಟನೆಯಿಂದ ಮುಖಾಮುಖಿಗೊಂಡಿವೆ ಎನಿಸುತ್ತಿದೆ.

ಇಂತಹ ಮುಖಾಮುಖಿ ಇವತ್ತಿನದೇನಲ್ಲ; ಇಂತಹ ಸಾಕಷ್ಟು ಮುಖಾಮುಖಿಗಳು ಜಗತ್ತಿನಾದ್ಯಂತ ನಡೆದು ಹೋಗಿವೆ ಮತ್ತು ನಡೆಯುತ್ತಲೇ ಇವೆ. ಅಂಬೇಡ್ಕರ್ ಅವರು ಈ ದೇಶದ ಸಂಸ್ಕೃತಿ, ಪುರಾಣ, ಶಾಸ್ತ್ರ, ಸ್ಮೃತಿ, ಧರ್ಮ, ಇತಿಹಾಸ ಮುಂತಾದವುಗಳ ತಳಸ್ಪರ್ಶಿ ಅಧ್ಯಯನ ಮಾಡಿ ಅದರೊಳಗಿನ ಮಾನವ ವಿರೋಧಿತನವನ್ನು ಬಿಚ್ಚಿಟ್ಟ ಪರಿಣಾಮ ಹಲವರಿಗೆ ಅದನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಚರಿತ್ರೆಯ ಗತಿಯನ್ನು ಸ್ವಲ್ಪ ನಿಂತು ಹಿಂದಿರುಗಿ ನೋಡಿದರೆ ಸತ್ಯವನ್ನು ಯಾರು ಹೇಳಿದರೆ ತಾನೆ ಏನು? ಎನ್ನುವ ಮನೋಭಾವ ಇಲ್ಲಿ ನೆಲೆನಿಂತಂತೆ ಕಂಡುಬರುವುದಿಲ್ಲ. ಅದನ್ನು ಹೇಳಲಿಕ್ಕೆ ಕೆಲವರು ಬೇಕು! ಅವರು ಹೇಳಿದರೆ ಮಾತ್ರ ಅದು ಸತ್ಯವಾಗಿರುತ್ತದೆ! ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವ ಹಾಗೆ! ಸುಳ್ಳಿನ ಸರಮಾಲೆ ಕಟ್ಟಿದರೂ ಸರಿ ಅವರು ಹೇಳಿದ್ದೇ ಸರಿ! ಎಂದು ನಂಬುವ ಭಾರತೀಯ ಪಡೆ ಇಲ್ಲಿ ಸದಾ ಸನ್ನದ್ಧವಾಗಿ ನಿಂತಿದೆ. ಇದರಿಂದಾಗಿಯೇ ಇಲ್ಲಿ ಚರಿತ್ರೆಯನ್ನು ಕಟ್ಟಿದವರು, ಪುರಾಣ, ಶಾಸ್ತ್ರ ಬರೆದಿಟ್ಟು ಹೋದವರೆಲ್ಲ ಬಹುಪಾಲು ಮೇಲ್ಜಾತಿಗೆ ಸೇರಿದವರೇ! ಹೀಗಿರುವಲ್ಲಿ ತಳಸಮುದಾಯದವರ ಮಾತು ಇವರಿಗೆ ಪಥ್ಯವಾಗುವುದಾದರೂ ಹೇಗೆ? ಪಾ. ರಂಜಿತ್ ವಿಷಯದಲ್ಲೂ ಹೀಗೇ ಆಗಿದೆ. ತಳ ಸಮುದಾಯದವರು ಚಿಂತಿಸಿದರೆ ಅನುಮಾನಿಸುವುದು, ಅವರಿಗಾಗುವ ಅನ್ಯಾಯಗಳ ಬಗ್ಗೆ ಮಾತನಾಡಿದರೆ ದೇಶಕ್ಕೆ ಗಂಡಾಂತರವೇನೋ ಕಾದಿದೆ ಎನ್ನುವಂತೆ ನೋಡುವುದು, ಇಂತಹ ಮನಸ್ಥಿತಿ ಈ ದೇಶದಲ್ಲಿ ಅಘೋಷಿತವಾಗೇ ಬೇರುಬಿಟ್ಟು ನಿಂತಿದೆ. ಇಂತಹ ಮನಸ್ಥಿತಿಯೇ ಸತ್ಯ ಹೇಳಲು ಹೊರಟ ರಂಜಿತ್ ಮೇಲೆ ಕೇಸು ಹಾಕುವಂತೆ ಮಾಡಿದೆ. ಅಷ್ಟಕ್ಕೂ ಈ ವಿರೋಧಿ ಪಡೆ ಇನ್ನೊಂದಕ್ಕಂತೂ ಹೆದರಿ ಕುಂತಿದೆ! ಅದ್ಯಾವುದೆಂದರೆ….ರಂಜಿತ್ ಹೇಳುತ್ತಿರುವ ಸತ್ಯ ಬರವಣಿಗೆಯ ಮಾಧ್ಯಮದ ಮೂಲಕ ಕೆಲವರಿಗಷ್ಟೇ ದಕ್ಕುತ್ತಿತ್ತು. ಈಗ ಸಿನಿಮಾ ಬಂದುಬಿಟ್ಟರೆ ಅದು ಏಕಕಾಲದಲ್ಲಿ ಕೋಟ್ಯಾಂತರ ಜನಕ್ಕೆ ಗೊತ್ತಾಗಿ ತಾವು ಕಟ್ಟಿದ ಸುಳ್ಳಿನ ಪರದೆಗೆ ಎಲ್ಲಿ ಬೆಂಕಿ ಬೀಳುವುದೋ ಎನ್ನುವ ಆತಂಕ ಅವರಿಗೆ ಹೆಚ್ಚಾಗಿದೆ. ಈ ಕಾರಣದಿಂದಲೇ ಆತಂಕದ ಮನಸ್ಸುಗಳೆಲ್ಲ ತೊಡೆತಟ್ಟಿ ನಿಂತಿವೆ ಅಷ್ಟೇ.

ಅಷ್ಟಕ್ಕೂ ಇವರು ಕೊಡುತ್ತಿರುವ ಕಾರಣವಾದರೂ ಏನು? ‘ಇದು ಸಮಾಜದಲ್ಲಿ ಜಾತಿಜಾತಿಗಳ ಮಧ್ಯೆ ವೈಮನಸ್ಯ ಬೆಳೆಸುತ್ತದೆ’ ಎಂದು ಅಲ್ಲವೇ? ಇವರನ್ನೇ ನೇರವಾಗಿ ಕೇಳೋಣ… ಹಾಗಾದರೆ ಇಲ್ಲಿ ಜಾತ್ಯತೀತ ವ್ಯವಸ್ಥೆ ಇದೆಯೋ? ಜಾತಿ ವ್ಯವಸ್ಥೆ ಇದೆಯೋ? ಜಾತಿಜಾತಿಗಳ ಮಧ್ಯ ಪ್ರೀತಿ ಇದ್ದರೆ ತಾನೆ ವೈಮನಸ್ಯದ ಬಗ್ಗೆ ಆತಂಕಗೊಳ್ಳಬೇಕು!.. ಇಲ್ಲಿ ಮೊದಲೇ ತುಂಬಿತುಳುಕುತ್ತಿರುವ ಜಾತಿಗ್ರಸ್ತ ರೋಗದ ಮನಸ್ಸುಗಳಿವೆ. ಇಲ್ಲಿ ಈ ಕಾರಣಕ್ಕಾಗಿ ಸಾವಿರಾರು ಕೊಲೆಗಳು, ಅತ್ಯಾಚಾರಗಳು, ಮಾನಭಂಗಗಳು, ಅವಮಾನಗಳು, ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಇವೆಲ್ಲಕ್ಕೂ ಕುರುಡರಂತೆ ಕಣ್ಮುಚ್ಚಿ ಕುಳಿತು ಶೋಧಕನೊಬ್ಬ ಸತ್ಯ ತೋರಿಸಲು ಹೊರಟರೆ ಉಂಟಾಗಬಹುದಾದ ವೈಷಮ್ಯದ ಬಗ್ಗೆ ಮಾತನಾಡುವುದು ಎಷ್ಟು ಸರಿ?

‘ವ್ಯಕ್ತಿ ಸತ್ತರೂ ಸತ್ಯ ಸಾಯುವುದಿಲ್ಲ’ ಎನ್ನುವುದು ಹಳೆಯ ಮಾತಾದರೂ ಇದು ಸತ್ಯವೇ ಸರಿ. ಆದರೂ ವ್ಯಕ್ತಿಗೆ ಏನಾದರೂ ಆಗುವ ಮೊದಲು ಸತ್ಯದ ಪರ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಜೀವಪರ ಇರುವರೆಲ್ಲ ಪಾ. ರಂಜಿತ್ ಪರ ನಿಲ್ಲಬೇಕಿದೆ. ಈ ಮೂಲಕ ಸತ್ಯ ಹೇಳಲು ಹೊರಟವರ ಬಾಯಿ ಮುಚ್ಚಿಸುತ್ತಿರುವ, ಸಂಸ್ಕøತಿ ಹೆಸರಿನಲ್ಲಿ ಹಳೆಯ ಹಳಹಳಿಕೆಯಲ್ಲೇ ಕೂತು ಜಾತಿಗ್ರಸ್ತವಾಗುತ್ತಿರುವ ಹೀನ ಮನಸ್ಸುಗಳ ಹುನ್ನಾರವನ್ನು ಬಯಲುಗೊಳಿಸಿ ಜೀವಪರ ನಿಲುವನ್ನು ಗಟ್ಟಿಗೊಳಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....