Homeಚಳವಳಿಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

- Advertisement -
- Advertisement -

| ಡಾ. ಹೆಚ್.ಡಿ. ಉಮಾಶಂಕರ್ |

ತಮಿಳಿನ ಯುವ ನಿರ್ದೇಶಕ ಪಾ ರಂಜಿತ್ “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದು ತುಂಬಾ ವಿವಾದಕ್ಕೆ ಈಡಾಗಿದೆ. ಇಲ್ಲಿ ಎರಡು ನೆಲೆಗಳ ಮೂಲಕ  ಈ ದೇಶದ ಮುಖವನ್ನು ಅರ್ಥಮಾಡಿಕೊಳ್ಳಬೇಕಿದೆ.

 

ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ಹೆಸರು ಮಾಡುತ್ತಿರುವ ನಿರ್ದೇಶಕ ಅಂದರೆ ಪಾ. ರಂಜಿತ್. ತಮಿಳಿನ ಸುಪ್ರಸಿದ್ಧ ನಟ ರಜನಿಕಾಂತ್ ಜೊತೆಗೆ ಒಂದು ಸಿದ್ಧಾಂತದಡಿ ಸಿನಿಮಾ ನಿರ್ಮಿಸಿ ಸೈ ಎನಿಸಿಕೊಂಡ ಭೂಪ ಈತ. ಇವರಿಬ್ಬರ ಸಹಯೋಗದಲ್ಲಿ ‘ಕಾಲಾ’ ಎನ್ನುವ ಮರೆಯಲಾಗದ ಸಿನಿಮಾವೊಂದು ಮೂಡಿ ಬಂದು ಇಂದಿಗೂ ನಮ್ಮೆಲ್ಲರೆದೆಯೊಳಗೆ ಹಚ್ಚಹಸಿರಾಗಿ ನಿಂತಿದೆ. “ನನಗೆ ಮತ್ತೊಮ್ಮೆ ಯಾಕೋ ‘ಕಾಲ’ ನೋಡಬೇಕೆನಿಸುತ್ತಿದೆ! ಥಿಯೇಟರಿನಿಂದ ಹೊರಬಂದಾಗ ಅಸಂಖ್ಯಾತ ಜನ ನನ್ನಂತಹ ಕರಿಯರು ‘ಕಾಲ’ನಲ್ಲಿ ಲೀನವಾಗಿ ಯಾವುದೋ ಪ್ರತಿಭಟನೆಯ ಮೆರವಣಿಗೆ ಹೊರಟಂತೆ ಭಾಸವಾಗುತ್ತದೆ!!” ಎಂದು ಸಿ.ಎಸ್. ದ್ವಾರಕಾನಾಥ್ ಬರೆದಿರುವುದನ್ನು ಗಮನಿಸಿದರೆ ಅದರ ಯಶಸ್ಸಿನ ಗುಟ್ಟು ತಿಳಿಯುತ್ತದೆ. ಭಾರತದಾದ್ಯಂತ ಜಗದ್ವಿಖ್ಯಾತ ನಿರ್ದೇಶಕರು, ನಟರು, ನಿರ್ಮಾಪಕರು, ತಂತ್ರಜ್ಞರು, ಸಂಗೀತಗಾರರು ಇದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದವರ ಸಾಲೂ ಇಲ್ಲಿದೆ. ಆದರೆ ಇಲ್ಲಿನ ರೋಗಗ್ರಸ್ತ ಮನಸ್ಥಿತಿಗಳನ್ನು ತಿದ್ದುವ ಸಿನಿಮಾಗಳನ್ನು ನಿರ್ಮಿಸಿದವರ ಸಂಖ್ಯೆ ತೀರಾ ವಿರಳಾತಿ ವಿರಳ ಎಂದರೆ ತಪ್ಪಾಗಲಾರದೇನೋ!

ಮೊನ್ನೆ ಡಾ. ರಾಜ್‍ಕುಮಾರ್ ಅವರ ಕಾಮನಬಿಲ್ಲು ಸಿನಿಮಾವನ್ನು ನೋಡುತ್ತಿದ್ದೆ. ಅದರಲ್ಲಿ ರಾಜ್‍ಕುಮಾರ್ ಅವರು, ಇಬ್ಬರು ಮಕ್ಕಳು ವಿನಾಕಾರಣ ಸಣ್ಣ ಜಗಳ ಮಾಡಿಕೊಂಡ ನಿಮಿತ್ತ ಅಲ್ಲಿಗೆ ಬಂದಾಗ ಇಬ್ಬರ ಜಾತಿಯನ್ನೂ ಕೇಳಿ ಅದರಲ್ಲಿ ಒಬ್ಬ ಒಕ್ಕಲಿಗರವನು ಮತ್ತೊಬ್ಬ ಹೊಲೆಯರವನೆಂದು ತಿಳಿದು ಇಬ್ಬರಿಗೂ ‘ಮಕ್ಕಳು ದೇವರ ಸಮಾನ’ ಅನ್ನುವುದನ್ನು ನೆನಪಿಸುತ್ತಾರೆ. ಒಂದಾಗಿ ಬಾಳುವ ಮಹತ್ವವನ್ನು ತಿಳಿಹೇಳಿ ತಾನೂ ಕೂಡ ಅಲ್ಲಿದ್ದ ಎಲ್ಲ ಮಕ್ಕಳ ಜೊತೆಗೆ ಕಬಡ್ಡಿ ಆಟವನ್ನು ಆಡುತ್ತಾರೆ. ಈ ಘಟನೆ ಅದೆಷ್ಟು ನನಗೆ ಕಾಡಿತೆಂದರೆ ಇಡೀ ಚಿತ್ರರಂಗದಲ್ಲಿ ಈ ತರದ ಜಾತ್ಯತೀತ ನೆಲೆಗಳನ್ನು ಬಿತ್ತಿದ ನಿರ್ದೇಶಕರು ಎಷ್ಟಿರಬಹುದು ಎಂದು ಹುಡುಕಲು ಆರಂಭಿಸಿದೆ. ಈ ಹುಡುಕಾಟದಲ್ಲಿ ಸಿಕ್ಕಿದ್ದು ಅಸ್ಪಷ್ಟ ನೆನಪುಗಳೇ ಹೊರತು ನಿಖರ ನೆನಪು ಇಲ್ಲವೇ ಇಲ್ಲ. ನಾನೇನೂ ಎಲ್ಲ ಸಿನಿಮಾಗಳನ್ನು ನೋಡಿಲ್ಲದ ಕಾರಣ, ಜಾತ್ಯತೀತ ನೆಲೆ ಒಂದೊಮ್ಮೆ ಇದ್ದರೆ ಅದಕ್ಕಿಂತ ಖುಷಿ ಬೇರಿಲ್ಲ ಎಂದುಕೊಂಡೆ. ಹೀಗೆ ಯೋಚಿಸುತ್ತಿರುವಾಗ ಮಹತ್ವದ್ದಾಗಿ ಕಾಡಿಸಿದ ನಿರ್ದೇಶಕನೆಂದರೆ ಪಾ. ರಂಜಿತ್. ಆತ ನಂಬಿರುವ ಸಿದ್ಧಾಂತ; ಜಾತಿ, ಧರ್ಮ, ಮತ ಇವುಗಳ ಬಗೆಗಿನ ನಿರ್ದಿಷ್ಟ ನಿಲುವು, ಇವುಗಳು ಹೇಗೆ ಮನುಷ್ಯನನ್ನು ತುಳಿದಿವೆ ಎನ್ನುವ ನೋವು, ಇದರೊಂದಿಗೇ ಬೆರೆತಿರುವ ಜೀವಪರ ನಿಲುವಿನ ಕಳಕಳಿ ಎಲ್ಲವೂ ಮತ್ತೆ ಮತ್ತೆ ಎದೆಗಿಳಿದು ಒಂದು ರೀತಿಯ ಹೆಮ್ಮೆಯ ಭಾವವನ್ನು ತುಂಬುತ್ತಿದ್ದವು.

ಇಂತಹ ಅಪರೂಪದ ಚಿತ್ರನಿರ್ದೇಶಕ ಪಾ.ರಂಜಿತ್‍ನ ಇತ್ತೀಚಿನ ಹೇಳಿಕೆಯಂತೂ ತುಂಬಾ ಸದ್ದು ಮಾಡುತ್ತಿದೆ. ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇವರು “ಚೋಳರ ಕಾಲದ ರಾಜರಾಜ ಚೋಳನ ಆಳ್ವಿಕೆಯಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದಲಿತರ ಭೂ ಕಬಳಿಕೆ ಮತ್ತು ದಲಿತ ಹೆಣ್ಣುಮಕ್ಕಳನ್ನು ದೇವದಾಸಿ ಮಾಡುವಂತಹ ಘಟನೆಗಳು ನಡೆದಿವೆ… ಇವುಗಳನ್ನೆಲ್ಲ ಸಿನೆಮಾ ಮಾಡಿ ತೋರಿಸಬೇಕು” ಎಂದಿದ್ದು ತುಂಬಾ ವಿವಾದಕ್ಕೆ ಈಡಾಗಿದೆ. ಇದಕ್ಕೆ ಬಾಲಾ ಎನ್ನುವವವರು ಪೊಲೀಸ್ ಸ್ಟೇಶನ್‍ನಲ್ಲಿ “ರಂಜಿತ್ ಅವರು ಮಾಡುತ್ತಿರುವ ಸಿನಿಮಾ, ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯ ವೈಷಮ್ಯವನ್ನು ಬೆಳೆಸುತ್ತದೆ” ಎನ್ನುವ ಕಾರಣ ಕೊಟ್ಟು ದೂರನ್ನೂ ದಾಖಲಿಸಿದ್ದಾರೆ. ಇಲ್ಲಿ ಎರಡು ನೆಲೆಗಳ ಮೂಲಕ ಈ ದೇಶದ ಮುಖವನ್ನು ಅರ್ಥಮಾಡಿಕೊಳ್ಳಬೇಕು ಎನಿಸುತ್ತದೆ. ಒಂದು ಪಾ. ರಂಜಿತ್‍ನ ಸಂಶೋಧನಾ ಮನೋಭಾವ ಮತ್ತು ಸತ್ಯದ ಹಲವು ಮುಖಗಳನ್ನು ಪರಿಚಯಿಸುವ ದಿಟ್ಟ ನೋಟ. ಇನ್ನೊಂದು ದೂರು ದಾಖಲಿಸಿದವರಲ್ಲಿ ಕಾಣುತ್ತಿರುವ ಅಸಹನೆ. ಇವರದ್ದು ಹಳೆಯ ಹಳಹಳಿಕೆಗಳಲ್ಲೇ ಕಾಲ ಕಳೆಯುವ ಮನ. ಯಥಾಸ್ಥಿತಿ ಚೂರು ಅಲುಗಿದರೂ ಅವರು ದಿಗಿಲುಗೊಳ್ಳುತ್ತಾರೆ ಮತ್ತು ಸತ್ಯಕ್ಕೆ ಬೆನ್ನು ತಿರುಗಿಸಿ ಸದಾ ಸುಳ್ಳಿನ ಪರದೆಯಲ್ಲೇ ಸುತ್ತುವ ಹಿನ್ನೋಟವಿರುವ ಹೀನ ಮನಸ್ಥಿತಿ ಉಳ್ಳವರಾಗಿರುತ್ತಾರೆ. ಇವೆರಡೂ ಒಂದು ರೀತಿಯಲ್ಲಿ ಈ ಘಟನೆಯಿಂದ ಮುಖಾಮುಖಿಗೊಂಡಿವೆ ಎನಿಸುತ್ತಿದೆ.

ಇಂತಹ ಮುಖಾಮುಖಿ ಇವತ್ತಿನದೇನಲ್ಲ; ಇಂತಹ ಸಾಕಷ್ಟು ಮುಖಾಮುಖಿಗಳು ಜಗತ್ತಿನಾದ್ಯಂತ ನಡೆದು ಹೋಗಿವೆ ಮತ್ತು ನಡೆಯುತ್ತಲೇ ಇವೆ. ಅಂಬೇಡ್ಕರ್ ಅವರು ಈ ದೇಶದ ಸಂಸ್ಕೃತಿ, ಪುರಾಣ, ಶಾಸ್ತ್ರ, ಸ್ಮೃತಿ, ಧರ್ಮ, ಇತಿಹಾಸ ಮುಂತಾದವುಗಳ ತಳಸ್ಪರ್ಶಿ ಅಧ್ಯಯನ ಮಾಡಿ ಅದರೊಳಗಿನ ಮಾನವ ವಿರೋಧಿತನವನ್ನು ಬಿಚ್ಚಿಟ್ಟ ಪರಿಣಾಮ ಹಲವರಿಗೆ ಅದನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಚರಿತ್ರೆಯ ಗತಿಯನ್ನು ಸ್ವಲ್ಪ ನಿಂತು ಹಿಂದಿರುಗಿ ನೋಡಿದರೆ ಸತ್ಯವನ್ನು ಯಾರು ಹೇಳಿದರೆ ತಾನೆ ಏನು? ಎನ್ನುವ ಮನೋಭಾವ ಇಲ್ಲಿ ನೆಲೆನಿಂತಂತೆ ಕಂಡುಬರುವುದಿಲ್ಲ. ಅದನ್ನು ಹೇಳಲಿಕ್ಕೆ ಕೆಲವರು ಬೇಕು! ಅವರು ಹೇಳಿದರೆ ಮಾತ್ರ ಅದು ಸತ್ಯವಾಗಿರುತ್ತದೆ! ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವ ಹಾಗೆ! ಸುಳ್ಳಿನ ಸರಮಾಲೆ ಕಟ್ಟಿದರೂ ಸರಿ ಅವರು ಹೇಳಿದ್ದೇ ಸರಿ! ಎಂದು ನಂಬುವ ಭಾರತೀಯ ಪಡೆ ಇಲ್ಲಿ ಸದಾ ಸನ್ನದ್ಧವಾಗಿ ನಿಂತಿದೆ. ಇದರಿಂದಾಗಿಯೇ ಇಲ್ಲಿ ಚರಿತ್ರೆಯನ್ನು ಕಟ್ಟಿದವರು, ಪುರಾಣ, ಶಾಸ್ತ್ರ ಬರೆದಿಟ್ಟು ಹೋದವರೆಲ್ಲ ಬಹುಪಾಲು ಮೇಲ್ಜಾತಿಗೆ ಸೇರಿದವರೇ! ಹೀಗಿರುವಲ್ಲಿ ತಳಸಮುದಾಯದವರ ಮಾತು ಇವರಿಗೆ ಪಥ್ಯವಾಗುವುದಾದರೂ ಹೇಗೆ? ಪಾ. ರಂಜಿತ್ ವಿಷಯದಲ್ಲೂ ಹೀಗೇ ಆಗಿದೆ. ತಳ ಸಮುದಾಯದವರು ಚಿಂತಿಸಿದರೆ ಅನುಮಾನಿಸುವುದು, ಅವರಿಗಾಗುವ ಅನ್ಯಾಯಗಳ ಬಗ್ಗೆ ಮಾತನಾಡಿದರೆ ದೇಶಕ್ಕೆ ಗಂಡಾಂತರವೇನೋ ಕಾದಿದೆ ಎನ್ನುವಂತೆ ನೋಡುವುದು, ಇಂತಹ ಮನಸ್ಥಿತಿ ಈ ದೇಶದಲ್ಲಿ ಅಘೋಷಿತವಾಗೇ ಬೇರುಬಿಟ್ಟು ನಿಂತಿದೆ. ಇಂತಹ ಮನಸ್ಥಿತಿಯೇ ಸತ್ಯ ಹೇಳಲು ಹೊರಟ ರಂಜಿತ್ ಮೇಲೆ ಕೇಸು ಹಾಕುವಂತೆ ಮಾಡಿದೆ. ಅಷ್ಟಕ್ಕೂ ಈ ವಿರೋಧಿ ಪಡೆ ಇನ್ನೊಂದಕ್ಕಂತೂ ಹೆದರಿ ಕುಂತಿದೆ! ಅದ್ಯಾವುದೆಂದರೆ….ರಂಜಿತ್ ಹೇಳುತ್ತಿರುವ ಸತ್ಯ ಬರವಣಿಗೆಯ ಮಾಧ್ಯಮದ ಮೂಲಕ ಕೆಲವರಿಗಷ್ಟೇ ದಕ್ಕುತ್ತಿತ್ತು. ಈಗ ಸಿನಿಮಾ ಬಂದುಬಿಟ್ಟರೆ ಅದು ಏಕಕಾಲದಲ್ಲಿ ಕೋಟ್ಯಾಂತರ ಜನಕ್ಕೆ ಗೊತ್ತಾಗಿ ತಾವು ಕಟ್ಟಿದ ಸುಳ್ಳಿನ ಪರದೆಗೆ ಎಲ್ಲಿ ಬೆಂಕಿ ಬೀಳುವುದೋ ಎನ್ನುವ ಆತಂಕ ಅವರಿಗೆ ಹೆಚ್ಚಾಗಿದೆ. ಈ ಕಾರಣದಿಂದಲೇ ಆತಂಕದ ಮನಸ್ಸುಗಳೆಲ್ಲ ತೊಡೆತಟ್ಟಿ ನಿಂತಿವೆ ಅಷ್ಟೇ.

ಅಷ್ಟಕ್ಕೂ ಇವರು ಕೊಡುತ್ತಿರುವ ಕಾರಣವಾದರೂ ಏನು? ‘ಇದು ಸಮಾಜದಲ್ಲಿ ಜಾತಿಜಾತಿಗಳ ಮಧ್ಯೆ ವೈಮನಸ್ಯ ಬೆಳೆಸುತ್ತದೆ’ ಎಂದು ಅಲ್ಲವೇ? ಇವರನ್ನೇ ನೇರವಾಗಿ ಕೇಳೋಣ… ಹಾಗಾದರೆ ಇಲ್ಲಿ ಜಾತ್ಯತೀತ ವ್ಯವಸ್ಥೆ ಇದೆಯೋ? ಜಾತಿ ವ್ಯವಸ್ಥೆ ಇದೆಯೋ? ಜಾತಿಜಾತಿಗಳ ಮಧ್ಯ ಪ್ರೀತಿ ಇದ್ದರೆ ತಾನೆ ವೈಮನಸ್ಯದ ಬಗ್ಗೆ ಆತಂಕಗೊಳ್ಳಬೇಕು!.. ಇಲ್ಲಿ ಮೊದಲೇ ತುಂಬಿತುಳುಕುತ್ತಿರುವ ಜಾತಿಗ್ರಸ್ತ ರೋಗದ ಮನಸ್ಸುಗಳಿವೆ. ಇಲ್ಲಿ ಈ ಕಾರಣಕ್ಕಾಗಿ ಸಾವಿರಾರು ಕೊಲೆಗಳು, ಅತ್ಯಾಚಾರಗಳು, ಮಾನಭಂಗಗಳು, ಅವಮಾನಗಳು, ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಇವೆಲ್ಲಕ್ಕೂ ಕುರುಡರಂತೆ ಕಣ್ಮುಚ್ಚಿ ಕುಳಿತು ಶೋಧಕನೊಬ್ಬ ಸತ್ಯ ತೋರಿಸಲು ಹೊರಟರೆ ಉಂಟಾಗಬಹುದಾದ ವೈಷಮ್ಯದ ಬಗ್ಗೆ ಮಾತನಾಡುವುದು ಎಷ್ಟು ಸರಿ?

‘ವ್ಯಕ್ತಿ ಸತ್ತರೂ ಸತ್ಯ ಸಾಯುವುದಿಲ್ಲ’ ಎನ್ನುವುದು ಹಳೆಯ ಮಾತಾದರೂ ಇದು ಸತ್ಯವೇ ಸರಿ. ಆದರೂ ವ್ಯಕ್ತಿಗೆ ಏನಾದರೂ ಆಗುವ ಮೊದಲು ಸತ್ಯದ ಪರ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಜೀವಪರ ಇರುವರೆಲ್ಲ ಪಾ. ರಂಜಿತ್ ಪರ ನಿಲ್ಲಬೇಕಿದೆ. ಈ ಮೂಲಕ ಸತ್ಯ ಹೇಳಲು ಹೊರಟವರ ಬಾಯಿ ಮುಚ್ಚಿಸುತ್ತಿರುವ, ಸಂಸ್ಕøತಿ ಹೆಸರಿನಲ್ಲಿ ಹಳೆಯ ಹಳಹಳಿಕೆಯಲ್ಲೇ ಕೂತು ಜಾತಿಗ್ರಸ್ತವಾಗುತ್ತಿರುವ ಹೀನ ಮನಸ್ಸುಗಳ ಹುನ್ನಾರವನ್ನು ಬಯಲುಗೊಳಿಸಿ ಜೀವಪರ ನಿಲುವನ್ನು ಗಟ್ಟಿಗೊಳಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...