Homeಅಂಕಣಗಳುಪೆರೋನಿಸಂ & ಮಿಲಿಟರಿ ಸರ್ವಾಧಿಕಾರ ಆಳುವ ವರ್ಗ ಮತ್ತು ಮಿಲಿಟರಿ

ಪೆರೋನಿಸಂ & ಮಿಲಿಟರಿ ಸರ್ವಾಧಿಕಾರ ಆಳುವ ವರ್ಗ ಮತ್ತು ಮಿಲಿಟರಿ

- Advertisement -
- Advertisement -

ಭರತ್ ಹೆಬ್ಬಾಳ್ |

1860ರಿಂದ 1910ರವರೆಗೂ ಉತ್ತರದ ದಿಕ್ಕಿನಲ್ಲಿರುವ ಪಂಪಾಸ್‍ನಲ್ಲಿ ಸ್ಥಳೀಯರ ಮಾರಣಹೋಮ ಮತ್ತು ಫಲವತ್ತಾದ ಭೂಮಿಯಲ್ಲಿ ಕೃಷಿ ವಿಸ್ತರಣೆಗಳಿಂದ ಅರ್ಜೆಂಟಿನಾದ ಆಧುನಿಕ ಆಳುವ ವರ್ಗಗಳು ಸೃಷ್ಟಿಯಾದವು. ಇದು ಯಾವ ರೀತಿ ಕ್ರೂರವಾಗಿತ್ತೆಂದರೆ ಪೆರುಗ್ವೆ ದೇಶದ 70% ಜನಸಂಖ್ಯೆಯನ್ನೇ ಅಳಿಸಿ ಹಾಕಿತ್ತು ಮತ್ತು ಇಂದಿನ ಅರ್ಜೆಂಟೀನದ ಗಡಿಗಳನ್ನು ಸ್ಥಾಪಿಸಿತ್ತು. 1970ರಿಂದ 1920ರವರೆಗೆ ಕೈಗಾರೀಕರಣಗೊಳ್ಳುತ್ತಿದ್ದ ಅಮೇರಿಕಕ್ಕೆ ಯುರೋಪಿನಿಂದ ಹೇಗೆ ಲಕ್ಷಾಂತರ ಜನ ವಲಸೆ ಬಂದರೋ ಹಾಗೆ ಅರ್ಜೆಂಟೀನಗೆ ಕೂಡ ಬಂದರು. 1870ರಲ್ಲಿ 18 ಲಕ್ಷವಿದ್ದ ಜನಸಂಖ್ಯೆ 45 ವರ್ಷಗಳಲ್ಲಿ ಯೂರೋಪಿನ ವಲಸೆಯಿಂದ 1914ರಲ್ಲಿ 78 ಲಕ್ಷಕ್ಕೆ ಏರಿತ್ತು. 1880ರಲ್ಲಿ 2500 ಕಿ.ಮೀ, ಇದ್ದ ರೈಲ್ವೆ ಲೈನ್ 1910ರಲ್ಲಿ 34000 ಕಿ.ಮೀ. ಆಗುವಷ್ಟು ರೈಲ್ವೆ ಮಾರ್ಗಗಳ ವಿಸ್ತಾರವಾಗಿತ್ತು. ವ್ಯವಸಾಯಕ್ಕೆ ಪೂರಕವಾದ ಸಣ್ಣ ಪುಟ್ಟ ಕಾರ್ಖಾನೆಗಳು ಮತ್ತು ಮಾಂಸ ಸಂಸ್ಕರಣಾ ಘಟಕಗಳು ಸ್ಥಾಪನೆಯಾದವು. ಬ್ರಿಟನ್ ಈ ಆರ್ಥಿಕ ಪ್ರಗತಿಯಲ್ಲಿ ಅತ್ಯಂತ ಹೆಚ್ಚು ಬಂಡವಾಳ ಹೂಡಿತ್ತು. ಯೂರೋಪಿನಿಂದ ಬಂದ ವಲಸಿಗರೇ ಹೆಚ್ಚಿದ್ದರು ಮತ್ತು ಆ ಸಮಯದ ಯೂರೋಪಿನಲ್ಲಿ ಭುಗಿಲೆದ್ದಿದ್ದ ದುರಭಿಮಾನಿ ರಾಷ್ಟ್ರೀಯ ರಾಜಕೀಯವು ಅದಕ್ಕೆ ತಕ್ಕುನಾದ ಸಂಸ್ಕೃತಿ ಮತ್ತು ಆರ್ಥಿಕತೆಯನ್ನು ರೂಪಿಸಿಕೊಂಡಿತ್ತು. ವಲಸೆ ಬಂದವರಿಂದಲೇ ರೂಪುಗೊಂಡಿದ್ದ ಅರ್ಜೆಂಟೀನದ ಭೂಮಾಲೀಕ ಆಳುವ ವರ್ಗದ ಸ್ಥಳೀಯ (ಅರ್ಜೆಂಟೀನ) ರಾಷ್ಟ್ರವಾದವು ಇಲ್ಲಿನ ಸಮಾಜದಲ್ಲಿ ಬಲವಾಗಿ ಬೇರೂರಿತ್ತು. ಮಿಲಿಟರೀ ಅಧಿಕಾರದ ಇತಿಹಾಸವಿದ್ದ ಅರ್ಜೆಂಟಿನಾಗೆ, ಒಂದು ಸ್ಥಾಪಿತ ಹಿತಾಸಕ್ತಿಗಳ ರಾಷ್ಟ್ರವಾದಿ ಆಳುವ ವರ್ಗ ಸೃಷ್ಟಿಯಾಗಿತ್ತು. 1929ರ ವಾಲ್ ಸ್ಟ್ರೀಟ್ ಕುಸಿತದ ನಂತರ ಮಾರುಕಟ್ಟೆ ಆರ್ಥಿಕತೆ ಒಂದು ದೊಡ್ಡ ಬಿಕ್ಕಟ್ಟನ್ನು ಎದುರಿಸಿತು. ಆಗ ವ್ಯವಸಾಯ ಕೇಂದ್ರಿತ ಆಳುವ ವರ್ಗ ಮಿಲಿಟರಿ ಮೂಲಕ ಅಸ್ತಿತ್ವದಲ್ಲಿದ್ದ ಸರ್ಕಾರವನ್ನು ಕಿತ್ತೊಗೆಯಿತು. ಮತ್ತು ದುಡಿಯುವ ವರ್ಗವು 1919ರ ದಂಗೆಯ ನಂತರ ಪಡೆದಿದ್ದ ಸವಲತ್ತುಗಳನ್ನು ಕಿತ್ತು ಹಾಕಿ ದಮನಕಾರಿ ಸರ್ವಾಧಿಕಾರವನ್ನು ಸ್ಥಾಪಿಸಿತ್ತು. ಇಟಲಿಯ ಮುಸೊಲೊನಿ ಮತ್ತು ಜರ್ಮನಿಯ ಹಿಟ್ಲರ್‍ನ ರಾಷ್ಟ್ರೀಯ ದುರಭಿಮಾನಿ ನಿಲುವೇ ಈ ಮಿಲಿಟರೀ ಸರ್ಕಾರ ನಿಲುವಾಗಿತ್ತು.
ಪೆರೋನಿಸಂ
ಮಿಲಿಟರೀ ಸರ್ಕಾರಗಳಿಂದಲೇ ನಡೆಯುತ್ತಿದ್ದ ಅರ್ಜೆಂಟೀನಾದಲ್ಲಿ ಆಧುನಿಕ ರಾಜಕೀಯ ಇತಿಹಾಸ ಶುರುವಾಗುವುದೇ ವಾನ್ ಡೊಮಿಂಗೊ ಪೆರೋನ್ ಎಂಬ ಮಾಜಿ ಮಿಲಿಟರೀ ಜನರಲ್‍ನಿಂದ. ಆತ 1930ರಿಂದ 1940ರವರೆಗೂ ಇಟಲಿಯಲ್ಲಿ ಮಿಲಿಟರೀ ಕಾರ್ಯತಂತ್ರಗಳ ಜೊತೆಗೆ ಇಟ್ಯಾಲಿಯನ್ ಫ್ಯಾಸಿಸಮ್, ಜರ್ಮನೀ ನಾಝೀ ಫ್ಯಾಸಿಸಮ್ ಕಲಿಯುತ್ತಾರೆ. 1943ರಲ್ಲಿ ಜನರಲ್ ಆರ್ಟುರೊ ರಾವನ್ ಜೊತೆಗೆ ಅಧ್ಯಕ್ಷ ರಾಮನ್ ಕ್ಯಾಸ್ಟಿಲ್ಲೊನನ್ನು ಅಧಿಕಾರದಿಂದ ಇಳಿಸಲು ಕ್ಷಿಪ್ರಕ್ರಾಂತಿ ನಡೆಸಿ ಗೆಲ್ಲುತ್ತಾರೆ. ಅವರಿಗೆ ಕಾರ್ಮಿಕ ಕಾರ್ಯದರ್ಶಿ ಸ್ಥಾನ ನೀಡಲಾಗುತ್ತದೆ, ನಂತರ ಅವರು ಕಾರ್ಮಿಕ ಇಲಾಖೆಯ ಮುಖ್ಯಸ್ಥರಾದರು ಮತ್ತು ಅಂತಿಮವಾಗಿ ಅವರು ಉಪಾಧ್ಯಕ್ಷರಾದರು. ಕಾರ್ಮಿಕರಿಗೆ ಸಂಬಳ, ಸವಲತ್ತುಗಳು, ಮತ್ತು ವಿರಾಮ ಸಮಯವನ್ನು ಹೆಚ್ಚಿಸಿದರು. ಅದೇ ಸಮಯದಲ್ಲಿ ಪರಿಚಯವಾದ ಏವ ಡ್ವಾರ್ಟೇ ಎಂಬ ರೇಡಿಯೋ ನಿರೂಪಕಿ ಪೆರೋನ್ ಯಶಸ್ಸಿನ ಹಿಂದಿನ ಶಕ್ತಿ ಎಂದು ಹೇಳಲಾಗುತ್ತದೆ. ತೀರಾ ಬಡತನದ ಹಿನ್ನೆಲೆಯಿಂದ ಬಂದಿದ್ದ ಏವ, ಪೆರೋನ್ ಮತ್ತು ಅರ್ಜೆಂಟೀನದ ಇತಿಹಾಸವನ್ನೇ ಬದಲಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. 1945ರಲ್ಲಿ ಇವರ ಜನಪ್ರಿಯತೆ ಎಷ್ಟಿತ್ತೆಂದರೆ ಇವರನ್ನು ಮಿಲಿಟರೀ ಆಡಳಿತವು ಸರ್ಕಾರದಿಂದ ಕಿತ್ತೊಗೆದಾಗ ನಗರದ ದುಡಿಯುವ ವರ್ಗ ಇವರ ಪರವಾಗಿ ಬೀದಿಗಿಳಿದು ದೊಡ್ಡ ಪ್ರತಿಭಟನೆ ಮಾಡಿತ್ತು ಮತ್ತು 1946ರಲ್ಲಿ ನಡೆದ ಚುನಾವಣೆಯಲ್ಲಿ ಪೇರೋನ್ ಅಧಿಕಾರ ಹಿಡಿದಾಗ ಆ ಯಶಸ್ಸಿನ ಹಿಂದಿನ ರೂವಾರಿಯಾಗಿದ್ದರು.
ಫಾಸಿವಾದದ ಹಿನ್ನೆಲೆ ಇದ್ದರೂ ಪೆರೋನ್‍ನ ನೀತಿಗಳು ಅರ್ಜೆಂಟೀನಾದ ದುಡಿಯುವ ಮತ್ತು ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಉಪಕಾರಿಯಾಗಿದ್ದವು. ಇದನ್ನು ಯೂರೋಪಿನ ಸೋಶಿಯಲ್ -ಡೆಮೊಕ್ರ್ಯಾಟ್ಸ್ ರಾಜಕೀಯ ನೀತಿಗಳಿಗೆ ಹೋಲಿಸಲಾಗುತ್ತದೆ. ಮೊದಲ ಬಾರಿಗೆ ದುಡಿಯುವ ಜನರ ಮಕ್ಕಳು ಕಾಲೇಜು ವಿಶ್ವವಿದ್ಯಾನಿಲಯಗಳ ಮೆಟ್ಟಿಲು ಏರುವಂತಾಯಿತು. ಶಿಕ್ಷಣ ಎಲ್ಲರಿಗೂ ಉಚಿತವಾಗಿ ದೊರೆಯುವಂತಾಯಿತು. ಬಡವರ ಪರವಾಗಿ ಏವ ಪೇರೋನ್ ರೂಪಿಸಿದ ನೀತಿಗಳನ್ನು ಅರ್ಜೆಂಟಿನಿಯನ್ನರು ಇನ್ನೂ ಸ್ಮರಿಸುತ್ತಾರೆ. ಪೇರೋನಿಸ್ಮ್‍ನ ಮುಖ್ಯ ಧ್ಯೇಯ ಕಮ್ಯೂನಿಸಮ್ ಮತ್ತು ಕ್ಯಾಪಿಟಲಿಸಮ್ ವಿರೋಧಿಸಿ ನ್ಯಾಯ ಮತ್ತು ಕಲ್ಯಾಣದ ಸವಲತ್ತುಗಳನ್ನು ಅರ್ಜೆಂಟೀನಾ ಪ್ರಭುತ್ವದ ಮೂಲಕ ಪಡೆಯಬಹುದಾದ ಮೂರನೇ ಪರ್ಯಾಯವನ್ನು ಕಂಡುಕೊಳ್ಳುವುದು. ಇವರ ಘೋಷಣೆಯೇ “ವರ್ಗ ಸಂಘರ್ಷವನ್ನು ಬಿಟ್ಟು, ದುಡಿಯುವ ಜನ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ” ಹೋಗಿ ಪ್ರಭುತ್ವದ ಸವಲತ್ತುಗಳನ್ನು ಪಡೆಯುವುದು. ಹಲವು ಆರ್ಥಿಕ ರಕ್ಷಣಾತ್ಮಕ ನೀತಿಗಳನ್ನು ಅನುಸರಿಸಿದ್ದ ಪೆರೋನ್ ಮುಂದೆ ಹೋಗುತ್ತಾ 1948ರಲ್ಲಿ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಕಸರತ್ತು ಮಾಡಿದರು. ವಿದೇಶಿ ಬಂಡವಾಳವನ್ನು ಆಕರ್ಷಿಸಲು ಮತ್ತು ಉತ್ಪಾದನೆ ಹೆಚ್ಚಿಸಲು ಶಿಸ್ತುಬದ್ದ ದುಡಿಯುವ ವರ್ಗ ಬೇಕು. ಆದರೆ ಪೇರೋನ್ ಅವರಿಗೆ ಸವಲತ್ತುಗಳನ್ನು ಕೊಟ್ಟು ಕಾರ್ಮಿಕ ವರ್ಗವನ್ನು ಹಾಳು ಮಾಡುತ್ತಿದ್ದಾನೆ ಎಂದು ಆಳುವ ವರ್ಗ ಪೇರೋನ್ ವಿರುದ್ದ ತಿರುಗಿ ಬಿದ್ದರು. 1955ರಲ್ಲಿ ಮಿಲಿಟರೀ ನಡೆಸಿದ ಕ್ಷಿಪ್ರ ಕ್ರಾಂತಿಯಿಂದ ಪೇರೊನ್‍ಅನ್ನು ಸ್ಪೇನ್ ದೇಶಕ್ಕೆ ಉಚ್ಚಾಟಿಸಲಾಗಿತ್ತು. ನಂತರ ಬಂದ ಮಿಲಿಟರೀ ಸರ್ವಾಧಿಕಾರ ಒಂದು ರೀತಿಯಲ್ಲಿ ಸಂಘಟಿತರಾಗಿದ್ದ ಕಾರ್ಮಿಕ ವರ್ಗವನ್ನು ಒಡೆಯಲು ಪ್ರಯತ್ನಿಸಿತು. 60ರಿಂದ 80ರ ದಶದವರೆಗೂ ಅತಿ ಹೆಚ್ಚು ಕಾರ್ಮಿಕ ವರ್ಗವನ್ನು ಹೊಂದಿದ್ದ ದಕ್ಷಿಣ ಅಮೆರಿಕಾದ ಈ ದೇಶವು ಅವರಿಗೆ ಪ್ರತಿರೋಧಗಳನ್ನೂ ಒಡ್ಡುತ್ತಲಿತ್ತು.
ಮಿಲಿಟರಿ ಸರ್ವಾಧಿಕಾರ
1959ರಲ್ಲಿ ಫಿಡೆಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಚೆ ಗುವೇರ ಮತ್ತು ಸಂಗಡಿಗರು ಮಾಡಿದ ಕ್ಯೂಬ ಕ್ರಾಂತಿ ನಂತರದ ಬೆಳವಣಿಗೆಯಲ್ಲಿ ದಕ್ಷಿಣ ಅಮೆರಿಕಾದಲ್ಲಿ ಹಬ್ಬುತ್ತಿದ್ದ ಕಮ್ಯೂನಿಸಮ್ ತಡೆಯಲು ಮತ್ತು ಉಳ್ಳವರ ಪರವಾದ ನವ ಉದಾರೀಕರಣದ ಹೊಸ ರೀತಿಯ ಆರ್ಥಿಕ ವ್ಯವಸ್ಥೆಯನ್ನು ದೇಶಗಳ ಮೇಲೆ ಹೇರಲು ಜಾಗತಿಕ ಬಂಡವಾಳಶಾಹಿಗಳು ಬಳಸಿಕೊಂಡದ್ದೆ ಚಿಲಿ ಮತ್ತು ಅರ್ಜೆಂಟಿನವನ್ನು. 1955ರಿಂದ 1969ವರೆಗೂ ಈ ಸಂಘರ್ಷವೇ ಒಂದು ಸಾಮಾನ್ಯ ಸ್ಥಿತಿಯಾಗಿತ್ತು. ಬೆಳೆಯುತ್ತಿದ್ದ ಸಾಮಾಜಿಕ ಉದ್ವೇಗದ ನಡುವೆ 1966ರಲ್ಲಿ ವಿದ್ಯಾರ್ಥಿಗಳ ದೊಡ್ಡ ಹೋರಾಟ ಅರ್ಜೆಂಟಿನಾದ್ಯಂತ ಭುಗಿಲೆದ್ದಿತ್ತು. ಆರ್ಥಿಕ ಬಿಕ್ಕಟ್ಟು, ಏರುತ್ತಿರುವ ಬೆಲೆ, ಕ್ಷೀಣಿಸುತ್ತಿರುವ ಸಂಬಳ ಮತ್ತು ಸವಲತ್ತುಗಳು 60 ಮತ್ತು 80ರ ದಶಕದಲ್ಲಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿದ್ದ ದಕ್ಷಿಣ ಅಮೆರಿಕಾದ್ಯಂತ ತೀವ್ರ ಹೋರಾಟಗಳಿಗೆ, ಬಂಡಾಯಗಳಿಗೆ ದಾರಿ ಮಾಡಿಕೊಟ್ಟಿತ್ತು. 1973ರ ಹೊತ್ತಿಗೆ ಕಚ್ಚಾ ತೈಲ ಬೆಲೆ ಬಿಕ್ಕಟ್ಟಿನಿಂದ ತೈಲ ಬೆಲೆ ನಾಲ್ಕು ಪಟ್ಟು ಹೆಚ್ಚಾದಾಗ ಜಾಗತಿಕ ಬಂಡವಾಳಿಗರು ಹೊಸ ದಾರಿಯನ್ನು ಹುಡುಕಿಕೊಂಡರು. ಹೊಸದಾಗಿ ಸೃಷ್ಟಿಯಾಗಿದ್ದ ಪೆಟ್ರೋ ಡಾಲರ್ ಹಣವನ್ನು ಹೂಡಲು ಗಲ್ಫ್ ರಾಷ್ಟ್ರಗಳು ಅಮೆರಿಕ ಬ್ಯಾಂಕುಗಳನ್ನು ಬಳಸಿಕೊಂಡಿದ್ದರು. ಈ ಹಣವನ್ನು ಜಾಗತಿಕ ಬಂಡವಾಳಶಾಹಿಗಳು ಶಿಕಾಗೋ ಸ್ಕೂಲ್ ಆಫ್ ಎಕನಾಮಿಕ್ಸ್‍ನ ಮುಕ್ತ ಮಾರುಕಟ್ಟೆ ಪ್ರತಿಪಾದಕ ಮಿಲ್ಟನ್ ಫ್ರೀಡ್‍ಮೆನ್ ಮೂಲಕ ಹೊಸದಾದ ನವಉದಾರೀಕರಣದ ಆರ್ಥಿಕತೆಯನ್ನು ಪರಿಚಯಿಸಿದರು. ಅದಕ್ಕೆ ಅವರು ಮಿಲಿಟರೀ ಸರ್ವಾಧಿಕಾರದ ನೆರವು ಪಡೆದುಕೊಂಡಿದ್ದರು.
ಮೊದಲು ಚಿಲಿಯಲ್ಲಿ ಪ್ರಜಾತಾಂತ್ರಿಕ ಮಾರ್ಗದಲ್ಲಿ ಚುನಾಯಿತರಾಗಿದ್ದ ಸ್ಯಾಲ್ವಡಾರ್ ಅಲೆಂಡೆಯನ್ನು ಸೆಪ್ಟೆಂಬರ್ 11, 1973ರಂದು ಯುದ್ದ ವಿಮಾನಗಳಿಂದ ಬಾಂಬ್ ಹಾಕಿ ಕೊಂದರು ಮತ್ತು ಆಗುಸ್ತೋ ಪಿಣೋಚೆ ಎಂಬ ಮಿಲಿಟರೀ ಸರ್ವಾಧಿಕಾರಿಯನ್ನು ಅಧ್ಯಕ್ಷನನ್ನಾಗಿಸಲಾಯಿತು. ಕಲ್ಯಾಣ ರಾಜ್ಯದ ಸವಲತ್ತುಗಳನ್ನು ತೆಗೆದು ಹಾಕಿ, ಸಂಬಳವನ್ನು ಅರ್ಧ ಮಾಡಿ ಕಾರ್ಮಿಕ ಹೋರಾಟಗಳನ್ನು ನಿರ್ದಾಕ್ಷಿಣ್ಯವಾಗಿ ಧ್ವಂಸ ಮಾಡಲಾಯಿತು. ಏರುತ್ತಿರುವ ನಿರುದ್ಯೋಗ ಮತ್ತು ಸತತ ಕಾರ್ಮಿಕ ಬಂಡಾಯಗಳಿಂದ ಅತಂತ್ರ ರಾಜಕೀಯ ಸ್ಥಿತಿಯಲ್ಲಿದ್ದ ಅರ್ಜೆಂಟೀನಾ ಕೂಡ ಅದನ್ನೇ 1976ರಲ್ಲಿ ಅನುಸರಿಸಿತು. ಅದಕ್ಕೆ ಅವರು ಕೊಟ್ಟ ಕಾರಣ ಸಮಾಜದಲ್ಲಿ ತಲೆದೋರುತ್ತಿರುವ ಗೆರಿಲ್ಲಾ ದಂಗೆಗಳ ವಿರುದ್ಧ ನಿರ್ಣಾಯಕ ಹೋರಾಟ ಅಗತ್ಯವೆಂದು. ತನ್ನ ಅರೆಸೈನಿಕ ಗುಂಪುಗಳ ಸಹಯೋಗದೊಂದಿಗೆ ಮಿಲಿಟೆಂಟ್ ಕಾರ್ಮಿಕರ ಮತ್ತು ಯೂನಿಯನ್ ಮುಖಂಡರ ಬಂಧನ, ಚಿತ್ರಹಿಂಸೆ ಮತ್ತು ಕೊಲೆಗಳನ್ನು ನಿರಂತರವಾಗಿ ನಡೆಸಿದರು. ಒಂದು ಅಂದಾಜಿನ ಪ್ರಕಾರ 50 ಸಾವಿರ ಎಡಪಂಥೀಯ ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು, ಕಾರ್ಮಿಕ ಒಕ್ಕೂಟದ ನಾಯಕರುಗಳು ಕಾಣೆಯಾಗತೊಡಗಿದರು. ನಂತರ ಹೊರಬಂದ ಗೌಪ್ಯ ದಾಖಲೆಗಳ ಪ್ರಕಾರ ಅಮೆರಿಕ ಈ “ಕೊಳಕು ಯುದ್ಧದಲ್ಲಿ” ನೇರ ಭಾಗಿಯಾಗಿತ್ತಲ್ಲದೆ ಪೊಲೀಸ್ ಹಾಗೂ ಮಿಲಿಟರೀ ತರಬೇತಿ ಸಹಿತ ಸೇನೆ ಉಪಕರಣಗಳನ್ನು ಧಾರಾಳವಾಗಿ ಅರ್ಜೆಂಟೀನದ ಮಿಲಿಟರೀ ಸರ್ವಾಧಿಕಾರಕ್ಕೆ ನೀಡಿತ್ತು. ಇವೆಲ್ಲದರ ನಡುವೆಯೂ ಅರ್ಜೆಂಟೀನದ ಸಾಮಾನ್ಯ ಪ್ರಜೆಗಳು ಮತ್ತು ಕಾರ್ಮಿಕ ವರ್ಗವು ಸರ್ವಾಧಿಕಾರದ ವಿರುದ್ಧ ನಿರಂತರ ಪ್ರತಿರೋಧವನ್ನು ಒಡ್ಡಿತು.
ಪ್ರಭುತ್ವದ ಭಯೋತ್ಪಾದನೆ ಮತ್ತು ಕಣ್ಮರೆಯಾಗುತ್ತಿದ್ದ ಯುವಕ/ಯುವತಿಯರ ಅಮ್ಮಂದಿರು ಏಪ್ರಿಲ್ 30, 1977ರಲ್ಲಿ ಇತಿಹಾಸಿಕ “ಪ್ಲಾಜಾ ಡೆ ಮಾಯೊವಿನ ಅಮ್ಮಂದಿರು” ಪ್ರತಿಭಟನೆ ಮಾಡಿದರು ಮತ್ತು ಅದು ಈಗಲೂ ಜೀವಂತವಾಗಿದೆ. ಅರ್ಜೆಂಟೀನಾದ ಸವಾಧಿಕಾರಿ ಆಡಳಿತವು 1979ರ ಕಚ್ಚಾ ತೈಲ ಬಿಕ್ಕಟ್ಟಿನ ನಂತರ 1981ರಲ್ಲಿ ವಿದೇಶಿ ಸಾಲದ ಸುಳಿಯಲ್ಲಿ ಸಿಲುಕಿತು. 1982ರಲ್ಲಿ ಫಾಕ್‍ಲ್ಯಾಂಡ್ ದ್ವೀಪ ಅಥವಾ ಮ್ಯಾಲ್ವೀನೇಸ್ ಎಂದು ಕರೆಯಲ್ಪಡುವ ಬ್ರಿಟಿಷ್ ದ್ವೀಪವನ್ನು ಆಕ್ರಮಿಸಲು ಹೋಗಿ ಸೋತುಹೋಯಿತು. ಅದು ಸಾಮಾನ್ಯ ನಾಗರಿಕರ ಸಂಘಟಿತ ಪ್ರತಿರೋಧದ ಕಾರಣದಿಂದ ಪ್ರಜಾತಾಂತ್ರಿಕ ವ್ಯವಸ್ಥೆಗೆ ಹಿಂದಿರುಗಲು ನಾಂದಿಯಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...