Homeಸಾಮಾಜಿಕಮಂಗಳೂರು ಯೂನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಗಂಡಾಗುಂಡಿ

ಮಂಗಳೂರು ಯೂನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಗಂಡಾಗುಂಡಿ

- Advertisement -
- Advertisement -

ಮಂಗಳೂರು ವಿಶ್ವವಿದ್ಯಾಲಯಕ್ಕೆ “ಮಂಗಳ ಗಂಗೋತ್ರಿ” ಎಂಬ ಚಂದದ ಹೆಸರಿಡಲಾಗಿದೆ ವಿಕಟ ವ್ಯಂಗ್ಯವೆಂದರೆ, ಈ ಯೂನಿವರ್ಸಿಟಿ ಶುದ್ಧ ಅವ್ಯವಹಾರ, ಅಕ್ರಮ, ಅನ್ಯಾಯ, ಅನಾಚಾರದ ಗಂಗೋತ್ರಿಯಂತಾಗಿ ಅದ್ಯಾವುದೋ ಕಾಲವಾಗಿ ಹೋಗಿದೆ! ಇಲ್ಲಿಗೆ ಉಪಕುಲಪತಿಗಳಾಗಿ ವಕ್ಕರಿಸುವ ಭೂಪರಿಲ್ಲ ಸಿಕ್ಕóಷ್ಟು ಸ್ವಾಹಾ ಮಾಡುವ ಹಿಡನ್ ಅಜೆಂಡಾ ಇಟ್ಟುಕೊಂಡೇ ಬರುತ್ತಿದ್ದಾರೆ. ಹೀಗಾಗಿ ಮಂಗಳೂರು ವಿಶÀ್ವವಿದ್ಯಾಲಯ ಒಂದಲ್ಲ ಒಂದು ಬುರ್ನಾಸ್ ಭಾನ್ಗಡಿಯ ಸುದ್ದಿಗೀಡಾಗುತ್ತಲೇ ಇದೆ. ಈ ಪರಿಯ ಕವರ್iಕಾಂಡ, ಕಾಮಕತೆಗಳೆಲ್ಲವೂ ಲೋಕ ಪ್ರಸಿದ್ದ! ಮಂಗಳ ಗಂಗೋತ್ರಿಯಲ್ಲಾಗುವುದು ಕೋಟಿಗಳ ಲೆಕ್ಕದ ಬಿಲ್ ವಿದ್ಯೆ!! ಕಾಮಗಾರಿ, ನೇಮಕಾತಿ, ಖರೀದಿಯಲ್ಲಿ ಘನಘೋರ ಭ್ರಷ್ಟಾಚಾರ ನಡೆಯುತ್ತಿರುವ ಮಂಗಳೂರು ಯೂನಿವರ್ಸಿಟಿಯಲ್ಲಿ ಉಪನ್ಯಾಸಕಿಯರ, ವಿದ್ಯಾರ್ಥಿನಿಯರ ಲೈಂಗಿಕ ಶೋಷಣೆ ನಿತ್ಯಕರ್ಮದಂತಾಗಿದೆ.
ಅಂಕಪಟ್ಟಿ ಹಗರಣ 2007 ರಲ್ಲಿ ನಡೆದಾಗ ಅಲ್ಲೋಲಕಲ್ಲೋಲವೇ ಮಂಗಳ ಗಂಗೋತ್ರಿಯಲ್ಲಾಗಿತ್ತು! ಅದನ್ನು ಮರೆಯದ ಚರ್ಚೆಯ ಸಂಗತಿಯಾಗಿ ಇದೆಯೇ ವಿನಾಃ ನಿಷ್ಠುರ ತನಿಖೆ ಎಂಬುದಾಗಲೇ ಇಲ್ಲ. ಅಂದು ಎಬಿವಿಪಿಯ ರಣಧೀರ ಕಂಠೀರವನಾಗಿದ್ದ ಇಂದಿನ ಬೆಳ್ತಂಗಡಿಯ ಚೆಡ್ಡಿ ಶಾಸಕ ಹರೀಶ್‍ರೈ ಆ ಹಗರಣದ ಫಲಾನುಭವಿಗಳಲ್ಲಿ ಒಬ್ಬ!! ಮಂಗಳೂರು ವಿವಿಯಲ್ಲಿ ಆಕಾಡೆಮಿಕ್ ವಾತಾವರಣದ ಬದಲು ಸ್ವಚ್ಛಂದ ಮೋಜಿನ ಮೂಡ್ ನೆಲೆನಿಂತಿದ್ದೆ. ಸಂಘ ಪರಿವಾರದ ಹಾವಳಿಯಂತೂ ಹೇಳತೀರದು. ಸಿದ್ದು ಕಾಲಾವಧಿಯಲ್ಲಿ ಉಪಕುಲಪತಿಯಾಗಿ ನೇಮಕವಾಗಿದ್ದ ಭೈರಪ್ಪ ವಾರ್ಸಿಟಿಯ ಶೆಕ್ಷಣಿಕ ಸುಧಾರಣೆಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಆತ ಎಲ್ಲೆಲ್ಲಿ ಎಷ್ಟೆಷ್ಟು ಗುಳುಂ ಮಾಡಲು ಸಾಧ್ಯವೆಂದು ತಲಾಸ್ ನಡೆಸಿ ಹೊಟ್ಟೆತುಂಬ ಉಂಡು ಎದ್ದು ಹೋಗಿದ್ದಾರೆ. ಈ ಭೈರಪ್ಪ ಮಂಗಳ ಗಂಗೋತ್ರಿಯಿಂದ ತೊಲಗಿ ಆದಿಚುಂಚನಗಿರಿ ಶೆಕ್ಷಣಿಕ ಸಾಮ್ರಾಜ್ಯದ ಪ್ರೋಚಾನ್ಸಲರ್ ಆಗಿ ಅಮರಿಕೊಂಡು ತಿಂಗಳೆರಡು ಗತಿಸಿದರೂ ಆತನ ಗೋಲ್‍ಮಾಲ್ ಲೀಲೆಗಳ ಆವಾಜ್ ಮಾತ್ರ ಇವತ್ತಿಗೂ ನಿಂತಿಲ್ಲ…………
ಯಾರ್ಯಾರ ದೌರ್ಬಲ್ಯ ಎಂತೆಂಥದೆಂದು ಕರಾರುವಾಕ್ಕಾಗಿ ಕಂಡುಹಿಡಿದು ಆ ಚೋರ ಚಂಡಾಲರನ್ನು ತನ್ನ ಮನೋಗಡಕ್ಕೆ ಬಳಸಿಕೊಳುವ ಕಲೆ ಕರಗತ ಮಾಡಿಕೊಂಡಿದ್ದ ಭೈರಪ್ಪ ಸಾಹೇಬರು ತನಗೆ ವಿಸಿಯಾಗಿ ಪ್ರಾತಿಷ್ಠಾಪಿಸಿದ್ದ ಕಾಂಗ್ರೆಸಿಗರಷ್ಟೇ ಆದÀರಿಂದ ಬಿಜೆಪಿಗರನ್ನು ನೋಡಿಕೊಳ್ಳುತ್ತಿದ್ದರು ಕೇಸರಿ ಕಿತಾಪತಿಗಾರರ ಆಡ್ಡೆಯಂತಾಗಿರುವ ಮಂಗಳೂರಲ್ಲಿ ಬಿಜೆಪಿ ಪರಿವಾರಿಗರ ಯಶಸ್ವಿಯಾಗಿ ನಿಭಾಯಿಸಿದ್ದ ಭೈರಪ್ಪ ವಿವಿಯನ್ನು ಮಾವನ ಮನೆಯಿಂದ ಬಂದ ಬಳುವಳಿಯಂತೆ ದರ್ಬಾರು ನಡೆಸುತ್ತಿದ್ದರು! ತನ್ನ ರಣ ಹಸಿವು ಅರ್ಥ ಮಾಡಿಕೊಂಡವರ ವಿವಿಯ ಆಯಕಟ್ಟಿನ ಜಾಗದಲ್ಲಿ ನಿಭಾಯಿಸಿದ್ದ ಈ ವಿಸಿ ತನ್ನ ಒಣ ಸೈದ್ದಾಂತಿಕತೆ, ಸ್ವಪ್ರತಿಷ್ಠೆ ಮತ್ತು ಹಣದ ಹಪಾಹಪಿಗೆ ತಕ್ಕಂತೆ ಆಡಳಿತ ನಡೆಸಿಕೊಂಡಿದ್ದರು!!
ಪ್ರತಿ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದು ಮಂಗಳೂರು ವಿವಿಯ ಸಂಪ್ರದಾಯ ಎಂಬಂತಾಗಿದೆ! ಭೈರಪ್ಪನ ಪರ್ವದಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗವಾದಾಗ ದೊಡ್ಡ ಗದ್ದಲವೂ ಆಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ವ್ಯವಸ್ಥಿತ ಜಾಲದಲ್ಲಿ ವೀಸಿ ಸಾಹೇಬರೂ ಇದ್ದಾರೆಂಬ ಪುಕಾರುಗಳು ಎದ್ದಿದ್ದವು. ತುಂಬ ನಾಜೂಕಾಗಿ ಪ್ರಕರಣ ನಿಭಾಯಿಸಿದ ವಿಸಿ ಭೈರಪ್ಪ ಎಲ್ಲಾ ಮುಚ್ಚಿಹಾಕಿ ಬಚಾವಾದರು. ಅಂಕಪಟ್ಟಿ ಅಕ್ರಮದಲ್ಲಂತೂ ಬಹುಕೋಟಿ ವ್ಯವಹಾರ ರಾಜಾರೋಷವಾಗೇ ನಡೆದುಹೋಗಿದೆ. ಇದರಲ್ಲಿ ವಿಸಿ ಸಾಹೇಬರಿಗೆ ದೊಡ್ಡದೊಂದು ಪಾಲು ದಕ್ಕಿದೆಯೆಂದು ಯೂನಿವರ್ಸಿಟಿಯ ಕಂಬ-ಕಂಬವೂ ಪಿಸುಗುಡುತ್ತದೆ. ಕೆಎಸ್‍ಓಯು ಯುಜಿಸಿ ಮಾನ್ಯತೆ ಕಳೆದುಕೊಂಡಿತು. ಈ ಕೆಎಸ್‍ಓಯು ಮತ್ತು ದೂರಶಿಕ್ಷಣ ನಿರ್ದೇಶನಾಲಯವನ್ನು ದುಡ್ಡು ಮಾಡುವ ಅಡ್ಡೆಯಂತಾಗಿಸಲಾಯಿತು. ಕಾಸು ಕೊಟ್ಟವರಿಗೆಲ್ಲಾ ಪದವಿ ರಾತ್ರಿ ಬೆಳಗಾಗುವುದರಲ್ಲಿ ಮಂಗಳಗಂಗೋತ್ರಿಯಲ್ಲಿ ಸಲೀಸಾಗಿ ಸಿಗುತ್ತಿದೆ.
ಮಂಗಳ ಗಂಗೋತ್ರಿಯ ಅಷ್ಟೂ ಅವ್ಯವಹಾರ ತಾಯಿಬೇರು ಖರೀದಿ ಕಮಿಟಿ(ಪರ್ಚೆಸ್ ಕಮಿಟಿ) ವೀಸಿ ಕಣ್ಗಾವಲಿನಲ್ಲಿರುವ ಈ ಕಮಿಟಿಯಲ್ಲಿ ಡೀನ್‍ಗಳೆಲ್ಲ ಇರುತ್ತಾರೆ. ಇಲ್ಲಾಗುವ ಖೋಟಾ ಖರೀದಿ, ಕಮಿಷನ್, ಕಿಕ್‍ಬ್ಯಾಕ್‍ಗಳು ಲಕ್ಷದ ಲೆಕ್ಕದಲ್ಲೇ ಇರುತ್ತದೆ! ಖರೀದಿಗಳು ಕೊಟ್ಯಾಂತರ ರೂಪಾಯಿಗಳಾದರೆ ಲಫಡಾ ಲಕ್ಷಾಂತರ ರೂಪಾಯಿಗಳದು. ಪೀಠೋಪಕರಣ, ಎಲೆಕ್ಟ್ರಿಕಲ್ ಸಾಮಾನು, ಕಂಪ್ಯೂಟರ್ ಮುಂತಾದ ವಸ್ತು ಕೊಳ್ಳುವಾಗ ವಿಪರೀತ ಬೆಲೆ ನಮೂದಿಸಿ ಪರ್ಸೆಂಟೇಜ್ ಹೊಡೆಯುವುದು ಸದ್ರಿ ವಾರ್ಸಿಟಿ ವಾಡಿಕೆ. ಈ ಕಮಾಯಿ ಭೈರಪ್ಪನ ಟೀಮು ಹಗಲೂ-ಇರುಳೂ ನಡೆಸಿ ದುಂಡಗಾಗಿದೆ. ಈ ಪರ್ಚೆಸ್ ಪರಾಕ್ರಮದ ಸರಿಯಾದ ತನಿಖೆ ನಡೆದರೆ ಭೈರಪ್ಪ ಅಂಡ್‍ಕೋದ ಲೂಟಿ ಲೆಕ್ಕಸಿಗುತ್ತದೆ. ಆ ತಾಕತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರಿಗಿದೆಯಾ? ಸ್ವಜಾತಿ ಬಂಧುವಾದ ಭೈರಪ್ಪರ ಮುಟ್ಟುವ ಮನಸ್ಸು ಮಂತ್ರಿ ದೇವೇಗೌಡರಿಗಿಲ್ಲ ಎಂದು ವಾರ್ಸಿಟಿಯ ಮಂದಿ ಮುಸಿಮುಸಿ ನಗುತ್ತಾರೆ.
ವಿಸಿ ಭೈರಪ್ಪರ ಡಬ್ಬಲ್ ವೆಂಚರ್ ಎಂದೇ ಕುಖ್ಯಾತವಾಗಿದೆ ವಿವಿಯಲ್ಲಿ ಬೇಕಾಬಿಟ್ಟಿಯಾಗಿ ಅಳವಡಿಸಿರುವ ಸಿಸಿ ಕ್ಯಾಮರಾ ಮತ್ತು ಸೋಲಾರ್ ಹಗರಣಗಳು!! ಎರಡೂ ಕೋಟಿ ಕರಾಮತ್ತೇ. ಸೋಲಾರ್ ಗುತ್ತಿಗೆ ಕಡಿಮೆ ಮೊತ್ತದ ಬಿಡ್‍ದಾರನ ಬದಲಿಗೆ ದೊಡ್ಡ ಬಿಡ್‍ದಾರನಿಗೆ ಭೈರಪ್ಪರ ಗ್ಯಾಂಗು ದಯಪಾಲಿಸಿದೆ. ಇದರಲ್ಲಿ ಲಕ್ಷಾಂತರ ಕಮಿಷನ್ ಪಡೆದಿರುವ ವೀಸಿ ಬಳಗ ಬರೊಬ್ಬರಿ ನಾಲ್ಕು ಕೋಟಿ ರೂಪಾಯಿಗಳ ಸಿಸಿ ಕ್ಯಾಮರಾ ಅಳವಡಿಕೆಯಲ್ಲಿ ಬುದ್ಧಿಪೂರ್ವಕವಾಗೇ ಟೆಂಡರ್ ನಿಯಮ ಧಿಕ್ಕರಿಸಿದೆ. ಯಾವುದೇ ಟೆಂಡರ್ ಇಲ್ಲದೆ ಮುಗುಮ್ಮಾಗಿ ಆಗಿ ನಡೆದಿರುವ ಈ ಸಿಸಿಕ್ಯಾಮರಾ ಅಳವಡಿಕೆ ಕಾಮಗಾರಿ ವೀಸಿ ಭೈರಪ್ಪರ ದೆಸೆಯನ್ನೇ ಬದಲಿಸಿದೆ!
ಗುತ್ತಿಗೆ ಆಧಾರದಲ್ಲಿ ನೇಮಕಾತಿಯಾಗುವ ದುರ್ಬಲರ ಸಂಬಳಕ್ಕೂ ನಾಲಿಗೆ ಚಾಚುವ ಭೈರಪ್ಪರ ಬಣದ ಚಾಳಿ ಮಂಗಳೂರು ವಿವಿ ವ್ಯಾಪ್ತಿಯ ಅಷ್ಟೂ ಶಿಕ್ಷಣ ಸಂಸ್ಥೆಗಳಲ್ಲಿ ಸುಪ್ರಸಿದ್ಧ!! ಸೆಕ್ಯೂರಿಟಿ, ಸಿಫಾಯಿ, ಅಟೆಂಡರ್, ಗುಮಾಸ್ತರಂಥ ಸಣ್ಣ-ಪುಟ್ಟ ಕರ್ಮಚಾರಿಗಳನ್ನು ವಿವಿಯಲ್ಲಿ ಗುತ್ತಿಗೆಯಲ್ಲಿ ತೆಗೆದುಕೊಳ್ಳಲಾಗಿದೆ. ಇವರಿಗೆಲ್ಲಾ ಅಬ್ಬಬ್ಬಾ ಎಂದರೆ ಏಳೆಂಟು ಸಾವಿರ ರೂಪಾಯಿ ಪಗಾರು ಕೊಡಲಾಗುತ್ತಿದೆ. ಆದರೆ ಇವರ ಹೆಸರಲ್ಲಿ ಹದಿನೈದು ಸಾವಿರದಿಂದ ಇಪ್ಪತ್ತೈದು ಸಾವಿರ ರೂಪಾಯಿಗಳ ತನಕ ಖರ್ಚು ಹಾಕಲಾಗಿದೆಯಂತೆ. ವ್ಯತ್ಯಾಸದ ಕಾಸು ಎಲ್ಲಿ ಹೋಗಿದೆ ಎಂಬುದು ಭೈರಪ್ಪರಿಗೆ ಮಾತ್ರ ಗೊತ್ತಿದೆ! ಪೆವಿಲಿಯನ್ ಮತ್ತು ಕಟ್ಟಡಗಳ ನಿರ್ಮಾಣದಲ್ಲಿ ಕೋಟಿ-ಕೋಟಿ ನಾಯಿ-ನರಿ ಪಾಲಾಗಿದೆ ಎಂಬ ಆರೋಪಗಳಿವೆ. ಒಟ್ಟಿನಲ್ಲಿ ವಿವಿ ದುಡ್ಡಲ್ಲಿ ವಿಸಿಯಾಗಿದ್ದ ಭೈರಪ್ಪ ಭರ್ಜರಿ ಯಲ್ಲಮ್ಮನ ಜಾತ್ರೆ ಮಾಡಿಹೋಗಿದ್ದಾರೆ.
ಮಂಗಳಗಂಗೋತ್ರಿಯ ಮತ್ತೊಂದು ಮಗ್ಗುಲಲ್ಲಿ ಅವ್ಯವಹಾರ-ಅಕ್ರಮಗಳಷ್ಟೇ ಬಿರುಸಾಗಿ ಕಾಮಕಾಂಡವೂ ನಡೆದಿದೆ. ಉಪನ್ಯಾಸಕರ ವೃತ್ತಿಗೆ ನಾಲಾಯಕ್ ಆಗಿರುವವರೆಲ್ಲ ಅಮಾಯಕ ವಿದ್ಯಾರ್ಥಿನಿಯರ ನಡುವೆ ಅನಾಹುತಕಾರಿಗಳಂತೆ ಅಂಡಲೆಯುತ್ತಿದ್ದಾರೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಅಧ್ಯಾಪಕ ಡಾ|| ಉಮೇಶ್‍ನಾಯ್ಕ್ ಲ್ಯಾಬ್ ಮತ್ತು ಲೈಬ್ರರಿಯಲ್ಲಿ ಹುಡುಗಿಯರ ಜತೆ ಅಸಹ್ಯವಾಗಿ ವರ್ತಿಸುತ್ತಾನೆಂಬ ಗುಲ್ಲೆದ್ದಿದೆ. ಮರೈನ್ ಬಾಯಲಾಜಿ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟು ಸಿಕ್ಕಿಬಿದ್ದಿದ್ದ. ಡಾ|| ಸುಜಾತ ಎಂಬ ಉಪನ್ಯಾಸಕಿ ತನಗೆ ಸಹೋದ್ಯೋಗಿ ಪ್ರೊಫೆಸರ್ ಡಾ|| ರಶೀದ್ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಡೆತ್‍ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಳು. ಬರೋಬ್ಬರಿ ಒಂಭತ್ತು ವರ್ಷ ಆಕೆಗೆ ರಶೀದ್ ಪೀಡಿಸುತ್ತಿದ್ದನಂತೆ. ಈ ಕಾಮಕತೆಗಳು ಮಂಗಳಗಂಗೋತ್ರಿ ಹೆಣ್ಣು ಕು¯ಕ್ಕೆ ಸುರಕ್ಷಿತವಲ್ಲ ಎಂಬ ಸಂದೇಶ ಕಳಿಸಿದೆ. ಅನಾಚಾರ-ಅವ್ಯವಹಾರ-ಅಕಾಡಮಿಕ್ ಪರಿಸರಕ್ಕೆ ಗಂಡಾಂತರಿಕಾರಿಯಾದ ಕುಕೃತ್ಯಗಳು ಒಂದರ ಹಿಂದೊಂದರಂತೆ ನಡೆದರೂ ಯಾವುದೂ ಸರಿಯಾದ ತನಿಖೆಗೆ ಒಳಪಡದೆ ಘಟಿಂಗರು ಪಾರಮ್ಯ ಮೆರೆಯುತ್ತಿದ್ದಾರೆ.
ಮಂಗಳ ಗಂಗೋತ್ರಿಯನ್ನು ಹಳಿಗೆ ತರುವ ಕೆಲಸ ಉನ್ನತ ಶಿಕ್ಷಣ ಮಂತ್ರಿ ಜಿ.ಟಿ. ದೇವೇಗೌಡರ ಕೈಲಿ ಸಾಧ್ಯವಾ? ಆ ಖಾತೆ ನಿಭಾಯಿಸುವ ಧೈರ್ಯ ತನಗಿಲ್ಲವೆಂಬ ಕೀಳಮೆಯ ದೇವೇಗೌಡರಿದ್ದಾರೆ. ಹಾಗಾಗಿ ವಿವಿ ಕುಲಾಧಿಪತಿಯಾಗಿರುವ ರಾಜ್ಯಪಾಲ ವಾಲಾ ಮೂಗು ತೂರಿಸುವ ಮೋದಲೇ ಸಿಎಂ ಕುಮ್ಮಿ ಎಚ್ಚೆತ್ತುಕೊಳ್ಳುವರಾ?!

– ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...