Homeಅಂಕಣಗಳುಶೋಷಿತ ಸಮುದಾಯಗಳ ಪರ ರಾಜಕೀಯ ಕಥನಕ್ಕೆ ತಿಲಾಂಜಲಿ?

ಶೋಷಿತ ಸಮುದಾಯಗಳ ಪರ ರಾಜಕೀಯ ಕಥನಕ್ಕೆ ತಿಲಾಂಜಲಿ?

- Advertisement -
- Advertisement -

ಐದು ರಾಜ್ಯಗಳ ಪೈಕಿ, ಮೂರರಲ್ಲಿ ಗೆಲುವನ್ನು ಸಾಧಿಸಿದ ನಂತರ ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್‍ಗಾಂಧಿಯವರು ಪತ್ರಕರ್ತರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಗಮನಿಸಬಹುದಾದ ಕೆಲವು ಅಂಶಗಳಿದ್ದವು. ಅದರಲ್ಲಿ ಒಂದು ಅಂಶವನ್ನು ಈ ಸದ್ಯ ದೇಶಾದ್ಯಂತ ಗಟ್ಟಿಗೊಳ್ಳುತ್ತಿರುವ ಕಥನವೊಂದರ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಅದೇನೆಂದರೆ, ಸುಮಾರು 28 ನಿಮಿಷಗಳ ಆ ಪತ್ರಿಕಾಗೋಷ್ಠಿಯಲ್ಲಿ ಒಮ್ಮೆಯೂ ರಾಹುಲ್ ಶೋಷಿತ ಸಮುದಾಯಗಳನ್ನು ಉಲ್ಲೇಖಿಸಲೇ ಇಲ್ಲ. ದೇಶದಲ್ಲಿ ಬಿಕ್ಕಟ್ಟಿನಲ್ಲಿರುವ ರೈತರು ಮತ್ತು ನಿರುದ್ಯೋಗಿ ಯುವಜನರ ಪರವಾಗಿ ಅವರು ವ್ಯಕ್ತಪಡಿಸಿದ ಕಾಳಜಿ ಸರಿಯಾಗಿಯೇ ಇತ್ತು. ಆದರೆ, ವಿವಿಧ ರೀತಿಯ ದಾಳಿಗಳಿಗೆ ಗುರಿಯಾಗಿರುವ ಮುಸ್ಲಿಂ ಸಮುದಾಯವನ್ನಾಗಲೀ, ದಲಿತ ಸಮುದಾಯವನ್ನಾಗಲೀ ಅವರು ಹೆಸರಿಸಲಿಲ್ಲ. ಕನಿಷ್ಠ, ತಮ್ಮ ಪಕ್ಷವು ಜಾತ್ಯಾತೀತತೆಗೆ ಹಾಗೂ ದಮನಿತ ಸಮುದಾಯಗಳ ಏಳಿಗೆಗೆ ಬದ್ಧವಾಗಿರುತ್ತದೆಂಬ ಮಾತುಗಳನ್ನು ಅವರು ತೇಲಿಸಿದಂತೆಯೂ ಆಡಲಿಲ್ಲ.
ಇದು ಈ ನಿರ್ದಿಷ್ಟ ಪತ್ರಿಕಾಗೋಷ್ಠಿಯಲ್ಲಿ ಮಾತ್ರ ನಡೆದ ಒಂದು ಪ್ರತ್ಯೇಕಿತ ಬೆಳವಣಿಗೆಯಾಗಿದ್ದರೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ, ಕರ್ನಾಟಕದ ಚುನಾವಣೆಯ ಹೊತ್ತಿಗೆ ಶುರುವಾದ ಭಿನ್ನ ಕಥನದ ಸ್ವರೂಪವು ಈ ಐದು ರಾಜ್ಯಗಳ ಚುನಾವಣೆಯ ಹೊತ್ತಿಗೆ ಗಟ್ಟಿಕೊಂಡಿತ್ತು. ಕರ್ನಾಟಕದಲ್ಲಾದರೂ, ಸಿದ್ದರಾಮಯ್ಯನವರು ಅಹಿಂದ ಸಮುದಾಯಗಳಿಗೆ ಒಳಿತನ್ನು ಮಾಡಲು ಪ್ರಯತ್ನಿಸಿದ ಧುರೀಣರಾಗಿ ರಾಹುಲ್ ಜೊತೆಯಲ್ಲಿಯೇ ಇದ್ದರು. ಆದರೆ ಉಳಿದ ರಾಜ್ಯಗಳಲ್ಲಿ ಬಲಾಢ್ಯ ಜಾತಿಗಳಿಗೆ ಸೇರಿದವರೇ ಹೆಚ್ಚು ಮುಂಚೂಣಿಯಲ್ಲಿದ್ದ ಪ್ರಚಾರದಲ್ಲಿ ಮತ್ತೆ ಮತ್ತೆ ಕೇಳಿಬಂದದ್ದು ರೈತರು ಮತ್ತು ಯುವಜನರು. ರಾಫೇಲ್ ಹಗರಣವನ್ನು ವಿವರಿಸಬೇಕಾದಾಗಲೂ ರಾಹುಲ್ ಗಾಂಧಿ ಹೇಳುತ್ತಿರುವುದೇನೆಂದರೆ, ಅದೆಷ್ಟೋ ಸಾವಿರ ಕೋಟಿ ಸಾಲದಲ್ಲಿರುವ ಒಬ್ಬ ವ್ಯಕ್ತಿಗೆ ನೀವು ಇನ್ನೆಷ್ಟೋ ಸಾವಿರ ಕೋಟಿಗಳ ಡೀಲ್‍ಅನ್ನು ಉಡುಗೊರೆಯಾಗಿ ನೀಡಿದ್ದೀರಿ. ಅದೇ ಹಣವನ್ನು ನೀವು ರೈತರ ಸಾಲಮನ್ನಾಕ್ಕೆ ಬಳಸಬಹುದಿತ್ತಲ್ಲವೇ? ಎಂದು.
ರೈತರು ಮತ್ತು ಯುವಜನರು ಎಂದಾಗ ಸೀಮಿತ ಐಡೆಂಟಿಟಿಗಳಾಚೆ ಜನರನ್ನು ಒಗ್ಗೂಡಿಸುವ ಸಾಮುದಾಯಿಕ ಪರಿಭಾಷೆಯೆಂದು ನಾವು ಸಕಾರಾತ್ಮಕವಾಗಿಯೂ ನೋಡಬಹುದು; ಬಹುತೇಕ ಭೂಮಿ ಹೊಂದಿದ ಬಲಾಢ್ಯ ಸಮುದಾಯಗಳನ್ನಷ್ಟೇ ‘ರೈತರು’ ಎಂಬ ಪದ ಸಾಮಾನ್ಯವಾಗಿ ಬಿಂಬಿಸುತ್ತದೆಂದೂ ಭಾವಿಸಬಹುದು. ದೆಹಲಿಯಲ್ಲಿ ಬೃಹತ್ ರೈತ ಪ್ರತಿಭಟನೆ ಆಯೋಜಿಸಿದ್ದ ‘ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ’ಯು ಸ್ಪಷ್ಟವಾಗಿ ‘ನಾವು ರೈತರು ಎಂದಾಗ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭೂಮಿಯನ್ನು, ಕೃಷಿಯನ್ನು ನಂಬಿ ಬದುಕುತ್ತಿರುವ ಎಲ್ಲಾ ಗ್ರಾಮೀಣ ಸಮುದಾಯ’ ಎಂದೇ ವ್ಯಾಖ್ಯಾನಿಸುತ್ತೇವೆಂದು ಹೇಳಿದೆ. ಜೊತೆಗೆ ಎರಡು ಖಾಸಗಿ ಮಸೂದೆಗಳನ್ನು ತಯಾರಿಸುವಾಗಲೂ, ಈ ಎಲ್ಲಾ ಸಮುದಾಯಗಳಿಗೂ ಅನುಕೂಲವಾಗುವಂತೆಯೇ ರೂಪಿಸಿದೆ. ಆದರೂ ಇಂದು ಹೊಸ ಸರ್ಕಾರಗಳು ಸಾಲಮನ್ನಾ ಘೋಷಣೆಯನ್ನು ಮಾಡುವಾಗ, ಅದು ಭೂಮಿಯುಳ್ಳ ರೈತರ ಸಾಲಮನ್ನಾ ಮಾತ್ರ ಆಗುತ್ತಿದೆ. ಹಲವು ಸಾರಿ ದೊಡ್ಡ ಭೂಮಾಲೀಕರಿಗೆ ಮಾತ್ರ ಈ ಸಾಲಮನ್ನಾ ಅನುಕೂಲ ಮಾಡಿಕೊಡುವ ಸಾಧ್ಯತೆಯೇ ಹೆಚ್ಚು.
ಅಂದರೆ, ಮೇಲ್ಜಾತಿಗಳ ಧ್ರುವೀಕರಣಕ್ಕೆ ಕಾರಣವಾಗಿರುವ ಮತ್ತು ಬಹುಸಂಖ್ಯಾತ ಮತೋನ್ಮಾದವನ್ನು ಹೆಚ್ಚಿಸಿ ಧ್ರುವೀಕರಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಹಾಗೂ ಅದರ ಪರಿವಾರಕ್ಕೆದುರು, ಶೋಷಿತ ಸಮುದಾಯಗಳೆಲ್ಲದರ ಧ್ರುವೀಕರಿಸುವ ಮತ್ತು ಮೇಲ್ಜಾತಿಗಳಲ್ಲೂ ಒಂದಷ್ಟು ಭಾಗವನ್ನು ಸೆಳೆಯುವ ಸಾಧ್ಯತೆ ಇಲ್ಲವೆಂದು ಕಾಂಗ್ರೆಸ್ ಭಾವಿಸಿದಂತಿದೆ. ಇಂದು ಬಿಜೆಪಿಯನ್ನು ಸೋಲಿಸಲು ಹೀಗೆ ಮಾಡಿದರೇ ಸರಿ ಎಂದು ರಾಹುಲ್‍ಗಾಂಧಿ ಮುಂದಿಡುತ್ತಿರುವ ಕಥನವನ್ನು ರೂಪಿಸುತ್ತಿರುವ ತಂಡವು ನಿಶ್ಚಯಿಸಿದಂತಿದೆ. ಇದೇ ರೀತಿ ರಾಹುಲ್‍ಗಾಂಧಿಯ ಹಿಂದೂ ದೈವ ಭಕ್ತಿ ಮತ್ತು ಬ್ರಾಹ್ಮಣ ಐಡೆಂಟಿಟಿಯನ್ನೂ ಮುನ್ನೆಲೆಗೆ ತರುವ ಕೆಲಸ ಪ್ರಜ್ಞಾಪೂರ್ವಕವಾಗಿಯೇ ನಡೆಯುತ್ತಿದೆ.
ರಾಹುಲ್‍ಗಾಂಧಿ ಸರಿಯಾಗಿಯೇ ಮಾಡುತ್ತಿದ್ದಾರೆಂದು ಪ್ರತಿಪಾದಿಸುವ ನಿಲುವನ್ನು ಕ್ವಿಂಟ್ ಮತ್ತು ಪ್ರಿಂಟ್ ವೆಬ್‍ಪೋರ್ಟಲ್ ಸಂಪಾದಕರು ತೆಗೆದುಕೊಂಡಿದ್ದರೆ, ವೈರ್ ವೆಬ್‍ಪೋರ್ಟಲ್‍ನಲ್ಲೂ ಈ ನಿಲುವನ್ನು ಮುಂದಿಡುವ ಲೇಖನವು (Why Rahul Gandhi Is Right to Pit Hinduism Against Hindutva) ಪ್ರಕಟವಾಗಿದೆ. ಅಂದರೆ, ಈ ರೀತಿ ಭಾವಿಸುವ ದೊಡ್ಡ ಗುಂಪೇ ಇದೆಯೆಂದಾಯಿತು. ಇಂದಿನ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಸೋಲಿಸುವುದು ಅತ್ಯಂತ ಪ್ರಮುಖವಾದ ರಾಷ್ಟ್ರೀಯ ಒಳಿತಿನ ಕೆಲಸವಾಗಿರುವುದರಿಂದ, ಇದೆಲ್ಲವನ್ನೂ ಸಹಜ, ಅನಿವಾರ್ಯ ಎಂದು ತಳ್ಳಿ ಹಾಕಲೂಬಹುದು. ಬಿಜೆಪಿ ಸೋತಾಗ ಹೇಗೂ ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯ ಇಂದಿನ ಮಟ್ಟಕ್ಕೆ ಸಂಕಷ್ಟಕ್ಕೀಡಾಗದಿರರು. ಹಾಗಾಗಿ ಬಿಜೆಪಿ ಸೋಲುವುದರಲ್ಲೇ ಅವರ ಹಿತವೂ ಅಡಗಿದೆ ಎಂದೂ ಹೇಳಿಬಿಡಬಹುದು.
ಆದರೆ, ಇದು ಅಷ್ಟು ಸರಳ ಸಂಗತಿಯಲ್ಲ. ಸಾರ್ವಜನಿಕ ಡಿಸ್‍ಕೋರ್ಸ್‍ನಿಂದಲೇ ದೇಶದ ಬಹುಸಂಖ್ಯಾತ ಶೋಷಿತ ಜನಸಮುದಾಯಗಳ ಪರವಾದ ಕಥನವು ಮರೆಯಾಗುವುದು ದೀರ್ಘಕಾಲಿಕ ನಕಾರಾತ್ಮಕ ಪರಿಣಾಮವನ್ನೇ ಉಂಟು ಮಾಡುತ್ತದೆ. ತಾನೇ ಕಟ್ಟಿಕೊಂಡು ಬಂದ ಕಥನವನ್ನು ತೃಪ್ತಿಪಡಿಸುವ ಕ್ರಮಗಳನ್ನೇ ಆಯ್ಕೆಯಾಗಿ ಬಂದ ಸರ್ಕಾರವು ತೆಗೆದುಕೊಳ್ಳುತ್ತದೆ. ಶೋಷಿತ ಸಮುದಾಯಗಳ ಸುಖ-ದುಃಖಗಳು ಅಪ್ರಸ್ತುತವಾಗುತ್ತಾ ಹೋಗುತ್ತವೆ. ಈಗಾಗಲೇ ಮುಸ್ಲಿಂ ಸಮುದಾಯವು ಹಕ್ಕನ್ನು ಕೇಳುವುದಕ್ಕಿಂತ ಹೆಚ್ಚು ಶಾಂತಿಯನ್ನು ಮಾತ್ರ ಬಯಸುವ ಕಡೆಗೆ ತಳ್ಳಲ್ಪಟ್ಟಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಉಪಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳನ್ನು ಕೇಳಲು ಶ್ರಮಹಾಕುವ ಗೋಜಿಗೇ ‘ಜಾತ್ಯಾತೀತ ಕೂಟ’ದ ನಾಯಕರು ಹೋಗಲಿಲ್ಲ. ಕನಿಷ್ಠ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆಯಾದರೂ ಅಲ್ಪಸಂಖ್ಯಾತರ ಓಟಿನ ಲಾಭಕ್ಕಾಗಿ ಪ್ರಯತ್ನಿಸುವ, ಅಗತ್ಯವೂ ಇಲ್ಲದಂತೆ ಹೊಸ ಮೈತ್ರಿಯು ನೋಡಿಕೊಂಡಿತು.
ಹೇಗೂ ಈ ಸಮುದಾಯಗಳಿಗೆ ನಮಗೆ ಮತ ಹಾಕುವುದಲ್ಲದೇ ಬೇರೆ ದಿಕ್ಕಿಲ್ಲ ಎಂಬ ಅಭಿಪ್ರಾಯವು ಬಲವಾಗಿರುವುದರಿಂದಲೇ ಇಂತಹ ಬೆಳವಣಿಗೆಗಳು ನಡೆಯುತ್ತವೆ. ಮೊದಲು ಎನ್‍ಡಿದಲ್ಲಿದ್ದ ಮಮತಾ ಬ್ಯಾನರ್ಜಿ ಹೆಚ್ಚೆಚ್ಚು ಮೋದಿ ವಿರೋಧಿ ಆಗುತ್ತಾ ಬಂದಿದ್ದು ಮುಸ್ಲಿಂ ಮತಗಳ ಕಾರಣಕ್ಕೇ ಎಂಬುದರಲ್ಲಿ ಸಂಶಯವೇನೂ ಇಲ್ಲ. ಈಗೊಂದು ವೇಳೆ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳ ನಡುವೆ ಮಹಾಘಟಬಂಧನ್ ಏರ್ಪಟ್ಟರೆ, ಉಳಿಯುವ ಪೈಪೋಟಿ ‘ಹಿಂದೂ ಮತ’ಗಳನ್ನು ಪಡೆಯುವುದಕ್ಕೆ ಮಾತ್ರವಾಗಿರುತ್ತದೆ.
ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸುವವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಯಾವುದೇ ಕ್ಷೇತ್ರದಲ್ಲೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಬಹುಸಂಖ್ಯಾತರಾಗಿರದಿರುವುದರಿಂದ, ಹೆಚ್ಚಿನ ಪೈಪೋಟಿ ಮೇಲ್ಜಾತಿಗಳನ್ನು ತೃಪ್ತಿಪಡಿಸುವುದಕ್ಕೇ ಆಗಿರುತ್ತದೆ. ಹೆಚ್ಚು ಕಡಿಮೆ ಇದೇ ಪರಿಸ್ಥಿತಿ, ‘ಅನಿವಾರ್ಯ ಓಟ್‍ಬ್ಯಾಂಕ್’ ಆಗಿ ಸೃಷ್ಟಿಯಾದ ಸಮುದಾಯಗಳದ್ದು ಆಗುತ್ತಿದೆ.
ಇದಕ್ಕೆ ಕೇವಲ ರಾಹುಲ್‍ಗಾಂಧಿ ಅಥವಾ ಕಾಂಗ್ರೆಸ್ ಪಕ್ಷವನ್ನು ದೂರುವ ಹಾಗಿಲ್ಲ. ಬಹುಸಂಖ್ಯಾತರಾಗಿದ್ದರೂ, ರಾಜಕೀಯ ಧ್ರುವೀಕರಣವನ್ನು ಸಾಧಿಸಿಕೊಳ್ಳಲಾಗದ ಅಹಿಂದ ಸಮಷ್ಟಿಯೂ ತನ್ನೊಳಗೆ ಆಲೋಚಿಸಿಕೊಳ್ಳಬೇಕಾಗುತ್ತದೆ. ಅಂತಹದೊಂದು ಧ್ರುವೀಕರಣ ಸಾಧ್ಯವಾಗದಂತೆ ಅತ್ಯಂತ ಶೋಷಿತ ಸಮುದಾಯಗಳನ್ನು ಒಡೆಯಲು ನಡೆಯುವ ಪ್ರಯತ್ನಗಳಿಗೆ ಇಂಬುಕೊಡುವ ಈ ಸಮುದಾಯಗಳ ‘ಪ್ರಜ್ಞಾವಂತ’ರೂ ಉತ್ತರ ಕೊಡಬೇಕಾಗುತ್ತದೆ. ಅದೇನೇ ಇದ್ದರೂ, ಹೆಚ್ಚೆಚ್ಚು ಜಾತಿ, ಧರ್ಮಗಳ ಅಸ್ಮಿತೆಗಳನ್ನು ಆಧರಿಸಿ ಮಾಡುವ ರಾಜಕಾರಣವು ಇಂತಹ ಅಪಾಯಗಳಿಗೆ ಎದುರಾಗುವ ಸಾಧ್ಯತೆ ಇದ್ದೇ ಇರುತ್ತದೆ. ಅಂತಹ ಅಪಾಯಗಳನ್ನು ಎದುರಿಸುವ ಮತ್ತು ಶೋಷಿತ ಸಮುದಾಯಗಳ ಹಿತವನ್ನೂ ಕಾಪಾಡುವ ರಾಜಕೀಯ ಸಮೀಕರಣವನ್ನು ಇನ್ನೂ ಫೈಸಲ್ ಮಾಡಿಕೊಳ್ಳಲಾಗದ ಸಮಸ್ಯೆಯೂ ಒಂದು ಕಾರಣವಾಗಿದೆ.
ಆ ಜವಾಬ್ದಾರಿ ರಾಹುಲ್‍ಗಾಂಧಿಯದ್ದೇ ಎಂದು ಯಾರಾದರೂ ಭಾವಿಸಿದರೆ ಅದಕ್ಕಿಂತ ಮೂರ್ಖರಿರಲು ಸಾಧ್ಯವಿಲ್ಲ. ಈ ನಿರ್ದಿಷ್ಟ ಸಂದರ್ಭದಲ್ಲಿ ಮೋದಿಗೆದುರಾಗಿ ಆತ ಪರವಾಗಿಲ್ಲ ಎಂದು ಕಾಣುತ್ತಿರಬಹುದು. ಆದರೆ, ಭಾರತದ ಸಂಸದೀಯ ರಾಜಕಾರಣದಲ್ಲಿ, ನಮ್ಮ ರಾಜಕೀಯಾರ್ಥಿಕತೆ ಹಾಗೂ ಚಳವಳಿಗಳು ರೂಪಿಸಿದ ಶೋಷಿತ ಸಮುದಾಯಗಳ ವೋಟ್‍ಬ್ಯಾಂಕ್‍ಅನ್ನು ಅಡ್ರೆಸ್ ಮಾಡಲು ರಾಜಕೀಯ ಪಕ್ಷಗಳು ಜನಪರವಾಗಿದೆಯೇ ಹೊರತು ತಮ್ಮಂತೆ ತಾವೇ ಜನಮುಖಿಯಾಗಿರುವುದು ಸಾಧ್ಯವಿಲ್ಲ. ಹಾಗಾಗಿ ಸಮಾಜದಲ್ಲಿ ರೂಪಿತಗೊಳ್ಳಬೇಕಾದ ಶೋಷಿತ ಸಮುದಾಯಗಳ ರಾಜಕೀಯ ಒತ್ತಾಸೆಯು, ರಾಜಕೀಯ ಪಕ್ಷಗಳಿಂದ ಪೂರಕವಾದ ರಾಜಕೀಯ ಕಥನವನ್ನು ರೂಪಿಸುತ್ತದೆಯೇ ಹೊರತು ಅದರ ವಿರುದ್ಧ ದಿಕ್ಕಿನಲ್ಲಿ ಅಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...