Homeಅಂಕಣಗಳುಸಹಭಾಗಿ ಪತ್ರಿಕೋದ್ಯಮ-ಚಿಂತನೆ-ಚಳುವಳಿ

ಸಹಭಾಗಿ ಪತ್ರಿಕೋದ್ಯಮ-ಚಿಂತನೆ-ಚಳುವಳಿ

- Advertisement -
- Advertisement -

ಇತ್ತೀಚೆಗೆ ‘ದಿ ಸ್ಟೇಟ್’ ವೆಬ್ ಪತ್ರಿಕೆಯು ‘ಸಹಭಾಗಿ ಪತ್ರಿಕೋದ್ಯಮ’ ಎಂಬ ವಿಭಾಗದಲ್ಲಿ ಒಂದು ವಿಶಿಷ್ಟ ಸಂಗತಿಯನ್ನು ಪ್ರಕಟಿಸುತ್ತದೆ. ತಾನು ಮುಂಚೆ ಪ್ರಕಟಿಸಿದ್ದ ಯಾವುದಾದರೂ ವರದಿಯಲ್ಲಿದ್ದ ಸಂಗತಿಯನ್ನೇ ಇನ್ನಾರಾದರೂ (ಪ್ರಧಾನವಾಗಿ ಮುದ್ರಿತ ಪತ್ರಿಕೆಗಳು) ನಂತರ ಪ್ರಕಟಿಸಿದರೆ ಅಥವಾ ಅದರ ಫಾಲೋಅಪ್ ವರದಿಯನ್ನು ಪ್ರಕಟಿಸಿದರೆ ಅದನ್ನು ಗುರುತಿಸುತ್ತದೆ ಮತ್ತು ‘ಸಹಭಾಗಿ ಪತ್ರಿಕೋದ್ಯಮ’ ವಿಭಾಗದಲ್ಲಿ ತನ್ನ ಆ ವರದಿಯನ್ನು ಇಂತಹ ಪತ್ರಿಕೆಯೂ ಮಾಡಿದೆಯೆಂದು ಹೇಳಿ ಶ್ಲಾಘಿಸುತ್ತದೆ. ಯಾವುದೇ ಜನಪರವಾದ ಸುದ್ದಿಯು ಒಂದು ಪತ್ರಿಕೆಯಿಂದ ಇನ್ನೊಂದಕ್ಕೆ, ಒಂದು ಮಾಧ್ಯಮದ ರೂಪದಿಂದ ಇನ್ನೊಂದಕ್ಕೆ ಹರಿಯುವ ಅಗತ್ಯವಿದೆ. ಇನ್ನೊಂದು ಪತ್ರಿಕೆಯು ಮೊದಲು ಗುರುತಿಸಿದ ಸುದ್ದಿಯು ಅಂತಹ ದೊಡ್ಡ ಬ್ರೇಕಿಂಗ್ ನ್ಯೂಸ್ ಏನೂ ಅಲ್ಲ ಎನಿಸಿದರೆ ಅದನ್ನು ಮಿಕ್ಕವರು ಮೂಸಿ ನೋಡುವುದಿಲ್ಲ. ಅದರಲ್ಲೂ ಮೊದಲು ಬರೆದ ಪತ್ರಿಕೆ ಅಥವಾ ಚಾನೆಲ್ ಇದು ತನ್ನದೇ ಹೆಗ್ಗಳಿಕೆಯೆಂಬಂತೆ ಬಿಂಬಿಸಿದ್ದರಂತೂ ಆ ಕಡೆಗೆ ತಲೆ ಹಾಕುವುದಿಲ್ಲ. ಆ ಮೂಲಕ ತಾನು ಆ ಇನ್ನೊಂದು ಪತ್ರಿಕೆ ಅಥವಾ ಚಾನೆಲ್‍ಗೆ ಪ್ರಚಾರ ಕೊಡುವಂತಾಗುತ್ತದೆ ಎಂಬ ಸಂಕುಚಿತ ಮನೋಭಾವನೆ ಅದು. ಅದನ್ನು ದಾಟಿ ತನ್ನ ಸುದ್ದಿಯನ್ನು ಬೇರೆಯವರು ಪ್ರಕಟಿಸಿದ್ದಾರೆ ಎಂಬುದನ್ನು ಸಕಾರಾತ್ಮಕವಾಗಿ ಗುರುತಿಸುವ ಈ ಪರಿಪಾಠವು ಸಕಾರಾತ್ಮಕವಾದುದು.
‘ವೆಬ್ ಪತ್ರಿಕೆಗಳಿಗೆ ಅಂತಹ ಮಹತ್ವವಿಲ್ಲವೆಂದು ಭಾವಿಸಬೇಡಿ, ನಮ್ಮ ಸುದ್ದಿಯನ್ನು ಇತರರೂ ಕಾಪಿ ಮಾಡಿ ಪ್ರಕಟಿಸುತ್ತಿದ್ದಾರೆ’ ಎಂಬ ಸಂದೇಶ ಕೊಡುವ ಅಗತ್ಯವೂ ಇದರ ಹಿಂದೆ ಇದ್ದಿರಬಹುದು. ಅದೇನೂ ಅಂತಹ ಸಮಸ್ಯೆಯಲ್ಲ. ಇಂತಹ ಅಗತ್ಯಗಳು ಹೊಸ ರೀತಿಯ ಮಾಧ್ಯಮಕ್ಕೆ ಇರುತ್ತವೆ. ಕನ್ನಡದ ಬಹಳ ವಿಶಿಷ್ಟ ಪ್ರಯತ್ನವಾದ ದಿ ಸ್ಟೇಟ್ ಪತ್ರಿಕೆಯನ್ನು ಅವರ ಪ್ರಯೋಗಕ್ಕಾಗಿ ನಾವು ಅಭಿನಂದಿಸಬೇಕು.
ಈ ವಿದ್ಯಮಾನವನ್ನು ಈ ಸಂಚಿಕೆಯಲ್ಲಿ ಬರೆಯುತ್ತಿರುವುದಕ್ಕೆ ಕಾರಣವಿದೆ. ಸಿಪಿಎಂ ಪಕ್ಷದ ಮುಖವಾಣಿಯಾದ ಜನಶಕ್ತಿ ವಾರಪತ್ರಿಕೆಯು ‘ನ್ಯಾಯಪಥ’ ಪತ್ರಿಕೆಯ ಬಿಡುಗಡೆಯೂ ಇದ್ದ, ಗೌರಿದಿನ ಕಾರ್ಯಕ್ರಮದ ಕುರಿತು ಸಂಪಾದಕೀಯ ಹಾಗೂ ವರದಿಯನ್ನು ವಿಶೇಷವಾದ ರೀತಿಯಲ್ಲಿ ಪ್ರಕಟಿಸಿದೆ. ತನ್ನ ಮೆಚ್ಚುಗೆಯನ್ನೂ, ಕೆಲವು ವಿಮರ್ಶೆಗಳನ್ನು ಅದರಲ್ಲಿ ದಾಖಲಿಸಿದೆ. ನ್ಯಾಯಪಥ ಮುಖಪುಟವನ್ನೂ ತನ್ನ ಕಡೆಯ ಪುಟದಲ್ಲಿ ಅಚ್ಚಿಸಿದೆ. ಇಂತಹ ‘ಸಹಭಾಗಿತ್ವ’ವೂ ಸಕಾರಾತ್ಮಕವಾದುದು.
ಒಂದು ಮಹತ್ವದ ಅಂಶವನ್ನು ‘ಜನಶಕ್ತಿ’ಯ ಸಂಪಾದಕೀಯದಲ್ಲಿ ಬರೆಯಲಾಗಿದೆ. ಸೆಪ್ಟೆಂಬರ್ 5ರ ಆ ದಿನದಂದೇ ದೆಹಲಿಯಲ್ಲಿ ನಡೆದ ರೈತ-ಕಾರ್ಮಿಕರ ಐಕ್ಯ ರ್ಯಾಲಿ, ಗೌರಿ ದಿನ ಮತ್ತು ದಕ್ಷಿಣಾಯನ ಹಾಗೂ ಗ್ರಾಮಸೇವಾ ಸಂಘದ ವತಿಯಿಂದ ನಡೆದ ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ – ಆ ವಾರದ ಮೂರು ಪ್ರಮುಖ ಕಾರ್ಯಕ್ರಮಗಳೆಂದು ಹೇಳಿ, ಮೂರರ ಕುರಿತಾಗಿ ವಿಶ್ಲೇಷಣೆಯನ್ನು ಮುಂದಿಡಲಾಗಿದೆ. ಸಾಹಿತ್ಯಿಕ-ಸಾಂಸ್ಕøತಿಕ ಎಂದು ತೋರುವ ಬೆಂಗಳೂರಿನ ಎರಡು ಕಾರ್ಯಕ್ರಮಗಳ ಸಕಾರಾತ್ಮಕ ಅಂಶಗಳನ್ನು ಶ್ಲಾಘಿಸುತ್ತಲೇ, ರೈತ ಕಾರ್ಮಿಕರ ಆಂದೋಲನ ಫ್ಯಾಸಿಸಂನ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಬಲ್ಲುದು ಎಂಬುದನ್ನು ಅದು ಹೇಳುತ್ತದೆ. ಹಾಗಾಗಿ ಅಂತಹ ಸಮುದಾಯಗಳನ್ನು ಪ್ರತಿನಿಧಿಸುವ ದೊಡ್ಡ ಸಂಘಟನೆಗಳನ್ನು ಒಳಗೊಳ್ಳದ ಯಾವುದೇ ಪ್ರತಿರೋಧ ಅದ್ಹೇಗೆ ಯಶಸ್ವಿಯಾಗಬಲ್ಲುದು ಎಂಬ ಪ್ರಶ್ನೆಯನ್ನು ‘ಜನಶಕ್ತಿ’ ಪತ್ರಿಕೆಯು ಮುಂದಿಟ್ಟಿದೆ.
ಇಂದು ಇಡೀ ದೇಶದ ಎಲ್ಲಾ ಎಡ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳು ಎದುರಿಸುತ್ತಿರುವ ಮಹತ್ವದ ಸವಾಲೆಂದರೆ ಇದೇ. ಫ್ಯಾಸಿಸಂ ಎಂಬುದು ಕೇವಲ ಸರ್ವಾಧಿಕಾರವಲ್ಲ. ಜನರ ಸಮ್ಮತಿಯೊಂದಿಗೆ ಮತ್ತು ಅವರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಸುವ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಸರ್ವಾಧಿಕಾರವದು. ಅಂದರೆ ಜನಸಾಮಾನ್ಯರ ಗಣನೀಯ ವಿಭಾಗವು, ರೈತ-ಕಾರ್ಮಿಕ-ಆದಿವಾಸಿಗಳನ್ನೊಳಗೊಂಡಂತೆ, ಒಂದು ರೀತಿಯ ಸಮ್ಮತಿಯೊಂದಿಗೆ ಜಾರಿಯಲ್ಲಿರುವ ಯಾಜಮಾನ್ಯ ಅದು. ಆರ್ಥಿಕವಾಗಿ ಕೆಲವು ಕಷ್ಟ ನಷ್ಟಗಳನ್ನೆದುರಿಸಿದಾಗ ಫ್ಯಾಸಿಸ್ಟ್ ಪ್ರಭುತ್ವದ ಮುಂದೆಯೂ ಕೆಲವು ‘ಬೇಡಿಕೆ’ಗಳನ್ನಿಟ್ಟು ಹೋರಾಡಲು ಈ ಸಮುದಾಯಗಳು ಮುಂದೆ ಬರುತ್ತವೆ. ಆದರೆ, ಈ ಸರ್ಕಾರದ ನೇತೃತ್ವ ವಹಿಸುವ ಕೋಮುವಾದಿ ಪಕ್ಷಕ್ಕೇ ಓಟು ಹಾಕುತ್ತವೆ. ದೇಶದ ಎಲ್ಲಾ ಭಾಗಗಳಲ್ಲೂ ಬಿಜೆಪಿಯ ಮತ ಪ್ರಮಾಣ ಹೆಚ್ಚಾಗುತ್ತಿರುವುದನ್ನು ನಾವು ನೋಡಬಹುದು. ಇದರಲ್ಲಿ ಮುಂಚೂಣಿಯಲ್ಲಿರುವುದು ಮಧ್ಯಮವರ್ಗ ಮತ್ತು ಮೇಲ್ಜಾತಿಗಳೇ ಆಗಿವೆ ಎಂಬುದರಲ್ಲಿ ಸಂಶಯವಿಲ್ಲ.
ಜನಸಾಮಾನ್ಯರನ್ನು ಒಳಗೊಳ್ಳದ ‘ಪ್ರಜ್ಞಾವಂತರ’ ಸೆಕ್ಯುಲರಿಸಂ, ಲಭ್ಯವಿದ್ದ ಮತ್ತು ಇಂದೂ ಸ್ವಲ್ಪಮಟ್ಟಿಗೆ ಉಳಿದುಕೊಂಡಿರುವ ಲಿಬರಲ್ ಅವಕಾಶಗಳನ್ನು ಬಳಸಿಕೊಂಡು ಪ್ರಜಾತಾಂತ್ರಿಕ ಆಶಯಗಳನ್ನು ಮಂಡಿಸಬಯಸುತ್ತಿದೆ. ಆದರೆ, ಒಂದು ಸಮಗ್ರ ಕಾರ್ಯಸೂಚಿಯ ಕೊರತೆ ಈ ಸಮೂಹವನ್ನು ‘ತನ್ನಂತೆಯೇ ಯೋಚಿಸುವ ನಿರ್ದಿಷ್ಟ ಸಮೂಹದೊಳಗೇ ಆಡಿದ್ದೇ ಆಡುವ’ ವರ್ತುಲದಲ್ಲಿ ಕಟ್ಟಿ ಹಾಕಿದೆ. ಸ್ವಲ್ಪ ಆಚೀಚೆ ಹೋಗಬಯಸುವ ಪ್ರಯತ್ನಗಳನ್ನು ಗುಮಾನಿಯಿಂದಲೂ ನೋಡುವ ವಾತಾವರಣವಿದೆ. ಗ್ರಾಮಸೇವಾ ಸಂಘದ ಪ್ರಯತ್ನಗಳ ಕುರಿತು ಇನ್ನೂ ಸ್ವಲ್ಪಕಾಲ ತಾಳ್ಮೆಯಿಂದ ಪರಿಶೀಲಿಸುವ ಅಗತ್ಯವಿದೆ. ಜನಶಕ್ತಿಯ ಸಂಪಾದಕೀಯದಲ್ಲೂ, ಅದೇ ಪತ್ರಿಕೆಯಲ್ಲಿ ಪುನರ್‍ಮುದ್ರಿತವಾದ ಅರುಣ್ ಜೋಳದಕೂಡ್ಲಿಗಿಯವರ ದಿ ಸ್ಟೇಟ್‍ನ ಬರಹದಲ್ಲೂ ಇದೇ ಗುಮಾನಿಯ ಧ್ವನಿಯಿದೆ. ಒಂದು ಕಡೆ ಸಾಪ್ತಾಹಿಕ ಪುರವಣಿಯ ಬರಹಗಾರರು ಕೋಮುವಾದದ ವಿರುದ್ಧದ ಆಂದೋಲನಕ್ಕೆ ಬರುವುದಿಲ್ಲವೆಂದು ಟೀಕಿಸುವುದು, ಇನ್ನೊಂದು ಕಡೆ ಅವರು ಬಂದರೆ ಅದನ್ನೂ ಟೀಕಿಸುವುದು ನಡೆದರೆ, ಅದು ಫ್ಯಾಸಿಸಂ ವಿರುದ್ಧದ ವಿಶಾಲ ತಳಹದಿಯ ಆಂದೋಲನಕ್ಕೆ ತೊಡಕುಂಟು ಮಾಡುವುದಿಲ್ಲವೇ? ಕಾಂಗ್ರೆಸ್ಸನ್ನು ಮೃದು ಹಿಂದುತ್ವವಾದಿ ಎಂದು ಕರೆದು ದೂರವಿಡುವ ಪರಿಸ್ಥಿತಿಯಲ್ಲಿ ಇಂದು ದೇಶದ ಫ್ಯಾಸಿಸ್ಟ್ ವಿರೋಧಿ ಶಕ್ತಿಗಳು ಇರುವವೇ? ಹೀಗಿರುವಾಗ ನಮ್ಮ ಜೊತೆ ಬರುವ ಅಲ್ಪಸ್ವಲ್ಪ ಸಾಧ್ಯತೆಯಿರುವವರನ್ನೂ ದೂರ ತಳ್ಳುವ ಕೆಲಸ ಆಗಬಾರದು.
ಎರಡನೆಯದಾಗಿ ಸ್ಪಷ್ಟ ಕಾರ್ಯಸೂಚಿಯ ಪ್ರಶ್ನೆ. ಸ್ಪಷ್ಟ ಕಾರ್ಯಸೂಚಿಯನ್ನು ಸೀಮಿತವಾದ ಉದ್ದೇಶ ಹೊಂದಿರುವ ಕಾರ್ಯಕ್ರಮಗಳು ಮುಂದಿಡಲು ಸಾಧ್ಯವೇ? ದೇಶದ ಬಹುತೇಕ ಜನರ ಹಿತಾಸಕ್ತಿಯನ್ನು ಒಳಗೊಳ್ಳುವ, ದೊಡ್ಡ ಜನಸಮುದಾಯಗಳನ್ನು ಸಂಘಟಿಸಲು ಸಾಧ್ಯವಿರುವ, ರಾಜಕೀಯ ಸಂಘಟನೆಗಳು ಮಾಡಬಹುದಾದ್ದನ್ನು ಮಿಕ್ಕವರು ಮಾಡಲಿಲ್ಲ ಎಂದು ಆರೋಪಿಸಲಾಗದು. ಆದರೆ, ಸಾಂಸ್ಕøತಿಕ ಮತ್ತು ಮಾಧ್ಯಮ ಪ್ರಯತ್ನಗಳೂ ಸಹಾ ತಮ್ಮ ಮಿತಿಯೊಳಗೆ ಮಾಡಬಹುದಾದ್ದನ್ನು ಸ್ಪಷ್ಟಗೊಳಿಸಿಕೊಳ್ಳದೇ ಸಂಘಟಿಸಲಾಗುತ್ತಿರುವ ವಾರ್ಷಿಕ ಕಾರ್ಯಕ್ರಮಗಳಲ್ಲೂ ಸಹಾ ‘ಬಿಡಿ ಬಿಡಿ ಆತಂಕಗಳೇ’ ಪದೇ ಪದೇ ಪುನರಾವರ್ತನೆಯಾಗುತ್ತಿವೆ. ಇದನ್ನು ದಕ್ಷಿಣಾಯನಕ್ಕೆ ಮಾತ್ರ ಅನ್ವಯಿಸಲಾಗದು. ಎಡ ಸಂಘಟನೆಗಳು ಸೇರಿದಂತೆ ಹಲವರು ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಲು ಆರಂಭಿಸಿ ಬಹಳ ವರ್ಷಗಳೇ ಕಳೆದವು. ಇನ್ನಾದರೂ ಕಾರ್ಯಸೂಚಿಯನ್ನು ಚರ್ಚಿಸುವುದಕ್ಕೇ ಎಲ್ಲರೂ ಫೋಕಸ್ ಮಾಡಿಕೊಳ್ಳಬೇಕಿದೆ.
ಬಹಳ ಮುಖ್ಯವಾಗಿ ದುಡಿಯುವ ವರ್ಗಗಳ ಅತ್ಯುತ್ತಮ ಹೋರಾಟಗಳೂ ತಕ್ಷಣದ ಆರ್ಥಿಕ ಬೇಡಿಕೆಗಳಾಚೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಅರಿವು ಪಡೆದುಕೊಳ್ಳದೇ ಹೋದ ದುರಂತವನ್ನೂ ದೇಶ ನೋಡಿದೆ. ಹಾಗಾಗಿಯೇ ‘ಎಡಪರ್ಯಾಯ’ವು ಪರ್ಯಾಯವಲ್ಲ ಎಂಬ ಭಾವನೆ ಬಲಗೊಂಡಿದೆ. ಮಧ್ಯಮವರ್ಗವನ್ನೂ ಒಳಗೊಳ್ಳಬಲ್ಲ, ವಿಶಾಲ ಜನಸಮುದಾಯವನ್ನು ಆರ್ಥಿಕ ರಾಜಕೀಯ ಸಾಮಾಜಿಕ ಮತ್ತು ಸಾಂಸ್ಕøತಿಕ ನೆಲೆಯಲ್ಲಿ ಒಂದಾಗಿಸಬಲ್ಲ ಪರ್ಯಾಯವನ್ನು ಮುಂದಿಡಲಾಗದೇ ಹೋದದ್ದಕ್ಕೆ ಒಬ್ಬರು ಇನ್ನೊಬ್ಬರನ್ನು ದೂರಿಕೊಂಡು ಕುಳಿತರೆ ಸಾಕಾಗದು.
ಸಹಭಾಗಿ ಪತ್ರಿಕೋದ್ಯಮದಂತೆಯೇ ಸಹಭಾಗಿ ಚಿಂತನೆ, ಸಹಭಾಗಿ ಚಳವಳಿ ಸಾಧ್ಯವಾಗಬೇಕು. ಈ ಸದಾಶಯದೊಂದಿಗೆ ಎಲ್ಲರೂ ಅವರವರ ಪಾತ್ರವನ್ನು ನಿಭಾಯಿಸೋಣ. ನ್ಯಾಯಪಥ ಎಂಬ ಈ ಗೌರಿ ಪತ್ರಿಕೆಯು ತನ್ನ ಪಾತ್ರ ನಿಭಾಯಿಸಲು ಸಜ್ಜಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....