Homeಅಂಕಣಗಳುಸಾಹಿತ್ಯ ಸಮ್ಮೇಳನದಾರಂಭ ಮತ್ತು ‘ಸುಮಂಗಲಿ’ಯರಿಂದ ಪೂರ್ಣಕುಂಭ!!

ಸಾಹಿತ್ಯ ಸಮ್ಮೇಳನದಾರಂಭ ಮತ್ತು ‘ಸುಮಂಗಲಿ’ಯರಿಂದ ಪೂರ್ಣಕುಂಭ!!

- Advertisement -
- Advertisement -

ಧಾರವಾಡದಲ್ಲಿ ನಡೆಯಲಿರುವ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಆರಂಭಕ್ಕೆ, ಸಮ್ಮೇಳನಾಧ್ಯಕ್ಷರಿಗೆ ಸಾವಿರ ಮಂದಿ ‘ಸುಮಂಗಲಿ’ಯರಿಂದ ಪೂರ್ಣಕುಂಭ ಸ್ವಾಗತದ ವಿಚಾರ ಪತ್ರಿಕೆಗಳಲ್ಲಿ ಬರುತ್ತಿದ್ದಂತೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿಶೇಷವಾಗಿ ಸಾಹಿತ್ಯ ಮತ್ತು ಶಿಕ್ಷಣದ ವಿಚಾರದಲ್ಲಿ ನಾಡಿಗೆ ಹೆಸರಾಗಿರುವ ಧಾರವಾಡದ ಚಿಂತಕಿಯರು (ಮತ್ತು ಚಿಂತಕರೂ ಕೂಡಾ) ಹಾಗೂ ರಾಜ್ಯದ ಇತರೆಡೆಗಳ ಪ್ರಗತಿಪರ ಹೋರಾಟಗಾರ್ತಿಯರು, ಬರಹಗಾರ್ತಿಯರು ತೀವ್ರವಾಗಿ ಈ ಪೂರ್ಣಕುಂಭ ಸ್ವಾಗತದ ಸಂಗತಿಯನ್ನು ವಿರೋಧಿಸಿದರು. “‘ಸುಮಂಗಲಿ’ಯರಿಂದ ಸ್ವಾಗತ ಎಂದರೆ ಹಾಗಾದರೆ ಅಮಂಗಲೆಯರು ಯಾರು?”, “ಪೂರ್ಣಕುಂಭದ ಸ್ವಾಗತಕ್ಕೆ ಅಲ್ಲಿ ನಡೆಯುತ್ತಿರುವುದು ಧಾರ್ಮಿಕ ಕಾರ್ಯಕ್ರಮವೋ ಸಾಹಿತ್ಯಿಕ ಕಾರ್ಯಕ್ರಮವೋ?”, “ಧಾರವಾಡದ ನೆಲಕ್ಕೆ ಬಂಡಾಯದ ಮೂಲಗುಣವಿದೆ, ಇಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಆಚರಣೆಗಳಿಗೆ ಹೇಗೆ ಅವಕಾಶ ನೀಡಲು ಸಾಧ್ಯ?” ಇವೇ ಮೊದಲಾದ ಪ್ರಶ್ನೆಗಳು ಧಾರವಾಡಿಗರು ಮತ್ತು ಇತರೆಡೆಗಳ ಸಾಹಿತ್ಯಪ್ರಿಯರಿಂದ ತೂರಿಬಂದವು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರನ್ನೇ ಗುರಿಯಾಗಿಸಿ ಆನ್‍ಲೈನ್ ಪತ್ರ ಚಳವಳಿಯೂ ನಡೆದು ಈ ವಿಷಯ ಗಂಭೀರ ತಿರುವು ಪಡೆದುಕೊಳ್ಳುವ ಲಕ್ಷಣ ಕಾಣಿಸಿತು. ಕನ್ನಡದ ಪತ್ರಿಕೆಗಳೂ ಕೂಡಾ ತಕ್ಷಣವೇ ಈ ವಿಚಾರಕ್ಕೆ ಸ್ಪಂದಿಸಿ ‘ಪೂರ್ಣಕುಂಭಕ್ಕೆ ವಿರೋಧ’ ಎಂಬ ಪತ್ರಗಳನ್ನು ಪ್ರಕಟಿಸಿದವು. ಒಟ್ಟಿನಲ್ಲಿ ಈ ಎಲ್ಲ ವಿರೋಧಗಳ ಬಿಸಿ ತಟ್ಟಿ ಕೊನೆಗೂ ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತು ಈ ಆಚರಣೆಯಿಂದ ಹಿಂದೆ ಸರಿದಿದೆ. ಸಂಘಟಕರು ತಮ್ಮ ನಿರ್ಧಾರವನ್ನು ಸಮರ್ಥಿಸುವ ಅನೇಕ ವಾದಗಳನ್ನು ಮುಂದಿಟ್ಟರೂ ಕೂಡಾ ಅಂತಿಮವಾಗಿ ಪೂರ್ಣಕುಂಭದ ವಿಚಾರವನ್ನು ಕೈಬಿಡುವ ಹಾಗೆ ಕಾಣುತ್ತಿದೆ. ಇದು ಬಹಳ ಪ್ರಮುಖವಾದ ಬೆಳವಣಿಗೆ.
‘ಪೂರ್ಣಕುಂಭದ ಸ್ವಾಗತ ನಡೆಯುತ್ತಿರುವುದು ಇದೇ ಮೊದಲ ಸಲವಲ್ಲ; ಈ ಹಿಂದೆಯೂ ನಡೆಯುತ್ತಾ ಬಂದಿದೆ; ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಚಂದ್ರಶೇಖರ್ ಪಾಟೀಲ್‍ರಂತಹ ಬಂಡಾಯದ ಸಾಹಿತಿಗಳ ಅಧ್ಯಕ್ಷತೆಯಲ್ಲೂ ಕೂಡಾ ಇಂತಹವೆಲ್ಲ ನಡೆದಿದ್ದವು. ಆದರೆ ಈ ಬಾರಿ ಮಾತ್ರ ವಿರೋಧ ಯಾಕೋ ಅರ್ಥವಾಗುತ್ತಿಲ್ಲ’ ಎಂಬಂತೆ ಸಾಹಿತ್ಯ ಪರಿಷತ್ತು ಸಮರ್ಥನೆ ಕೊಟ್ಟುಕೊಂಡಿದೆ. ಈ ಹಿಂದೆ ಒಂದು ವೇಳೆ ಇಂತಹವು ನಡೆದದ್ದು ನಿಜವಾದರೆ ಅದೂ ಕೂಡಾ ಖಂಡನಾರ್ಹ. ಆದರೆ, ಹಿಂದೆ ನಡೆದಿತ್ತು; ಪ್ರಗತಿಪರರೇ ಇದ್ದಾಗ ನಡೆದಿತ್ತು ಎಂಬುದರ ಅರ್ಥ ಈಗಲೂ ನಡೆಯಲಿ ಎಂಬುದಂತೂ ಆಗಬಾರದು. ಈ ಬಾರಿ ವಿರೋಧ ಬಂದಿದೆ, ವಿರೋಧ ಸಕಾರಣವಾದುದಾಗಿದೆ. ಆದ್ದರಿಂದ ಇಂತಹ ಆಚರಣೆ ನಿಲ್ಲಬೇಕು, ಈ ಬಾರಿ ಮಾತ್ರವಲ್ಲ ಮುಂದೆಯೂ ನಡೆಯಬಾರದು ಎಂಬುದಂತೂ ಖಚಿತ.
ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ಆಚರಣೆಗಳು ಸದ್ದಿಲ್ಲದೆ ನುಸುಳುತ್ತಾ ಸಾರ್ವಜನಿಕ ಸಭೆ ಸಮಾರಂಭಗಳ ಭಾಗವಾಗುತ್ತಿರುವುದು ಸಹಜವೆಂಬಂತೆ ನಡೆಯುತ್ತಿದೆ. ಈ ಸಾಹಿತ್ಯ ಸಮ್ಮೇಳನದ ಪೂರ್ಣಕುಂಭದ ವಿಚಾರಕ್ಕೆ ಬಂದ ಸಮರ್ಥನೆಗಳನ್ನು ಗಮನಿಸಿದರೂ ಇದು ಸ್ಪಷ್ಟವಾಗುತ್ತದೆ. ಈ ಹಿಂದೆ ನಡೆದಿತ್ತೆಂಬುದಷ್ಟೇ ಅಲ್ಲ, ಇದು ನಮ್ಮ ದೇಶದ ಸಂಸ್ಕøತಿ, ಅದನ್ನು ಆಚರಿಸಿದರೆ ತಪ್ಪೇನಿದೆ ಎಂಬರ್ಥದಲ್ಲಿ ಹಲವಾರು ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಅದರಲ್ಲೂ ಮಹಿಳಾ ಚಿಂತಕಿಯರು ಯಾರು ಇದನ್ನೆಲ್ಲ ವಿರೋಧಿಸುತ್ತಿದ್ದರೋ, ಅವರುಗಳನ್ನು ಸಂಸ್ಕøತಿ ವಿರೋಧಿಗಳೆಂಬಂತೆ ಪರೋಕ್ಷವಾಗಿ ದೂಷಿಸುವ ಕೆಲಸವೂ ನಡೆಯಿತು. ಇದು ನಿಜಕ್ಕೂ ಈ ದೇಶದ ಸಾಮಾನ್ಯ ಸಂಪ್ರದಾಯಕ್ಕೆ ವಿರುದ್ಧವಾದುದೆಂಬುದು ಹೆಚ್ಚು ಮುನ್ನೆಲೆಗೆ ಬರಲಿಲ್ಲ. ಸಾರ್ವಜನಿಕ ಕಾರ್ಯಕ್ರಮವೊಂದು ಧರ್ಮ ನಿರಪೇಕ್ಷವಾಗಿರಬೇಕು ಹಾಗೂ ತನ್ನ ಮೂಲ ಆಶಯಕ್ಕೆ ಪೂರಕವಾದ ರೀತಿಯಲ್ಲಿ ನಡೆಯಬೇಕು ಎಂಬುದು ಭಾರತದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಚಾಲ್ತಿಯಲ್ಲಿರುವ ಸಂಪ್ರದಾಯ ಹಾಗೂ ಈ ದೇಶದ ಸಾಮಾನ್ಯ ಜ್ಞಾನ. ಅಸಂಖ್ಯಾತ ಧರ್ಮಗಳಿರುವ ಈ ದೇಶದಲ್ಲಿ ಸೌಹಾರ್ದತೆ ಉಳಿಯಬೇಕಾದರೆ ಪಾಲಿಸಲೇಬೇಕಾದ ಮೂಲಭೂತ ಸಂಗತಿಗಳಲ್ಲಿ ಇದೂ ಒಂದು. ಆದರೆ, ಈ ಸಾಮಾನ್ಯ ಜ್ಞಾನವನ್ನು ಮೀರುವ ರೀತಿಯಲ್ಲಿ ಸಾಂಸ್ಕøತಿಕ ಹೇರಿಕೆಯ ವಾತಾವರಣ ಬಲಿಯುತ್ತಿರುವುದು ಆತಂಕದ ಸಂಗತಿ. ಆದ್ದರಿಂದಲೇ, ಈ ಹಿಂದೆ ಅಷ್ಟು ಚರ್ಚೆಗೆ ಗ್ರಾಸವಾಗದಿದ್ದ ಪೂರ್ಣಕುಂಭದಂತಹ ವಿಚಾರಗಳು ಶಾಂತಿ ಸೌಹಾರ್ದತೆ ಬಯಸುವವರು ಈ ವಾತಾವರಣದಲ್ಲಿ ಹೆಚ್ಚು ಎಚ್ಚರಿಕೆಯ ನೋಟ ಹೊಂದುತ್ತಿರುವುದರಿಂದ ಕಂಡುಬಂದಿರಲೂ ಬಹುದು.
ಇಲ್ಲೊಂದು ವೈರುಧ್ಯವಿರುವುದನ್ನೂ ಗಮನಿಸಬೇಕು. ಒಂದೆಡೆ, ಕನ್ನಡದ ಸಾಹಿತ್ಯ ಲೋಕ ಹೆಚ್ಚು ಸಂವೇದನಾಶೀಲವಾದುದು, ಜಾತ್ಯತೀತವಾದುದು ಮತ್ತು ಜನಪರ ಕಾಳಜಿಗಳಿಗೆ ಬೇಗ ತನ್ನನ್ನು ತಾನು ಒಗ್ಗಿಸಿಕೊಂಡಂಥದ್ದು ಎಂಬ ಒಂದು ವಿಚಾರ. ಅದೇ ಸಮಯದಲ್ಲಿ ಮತ್ತೊಂದೆಡೆ ಈ ದೇಶದ ಸಾಂಸ್ಕøತಿಕ ಸಾಮಾಜಿಕ ಇತಿಹಾಸವು ಅನೇಕಾನೇಕ ತಾರತಮ್ಯ, ವಿರೋಧಾಭಾಸ ಮತ್ತು ಶ್ರೇಣೀಕರಣಗಳನ್ನು ಹೊಂದಿ, ಅವುಗಳನ್ನು ಆಚರಿಸುತ್ತಾ, ವಿರೋಧ ಬಂದಾಗೆಲ್ಲ ಎತ್ತಿಹಿಡಿದು ಬಲವಾಗಿ ಸಮರ್ಥಿಸುತ್ತಾ ಬಂದಿರುವಂಥದ್ದು. ಆದ್ದರಿಂದಲೇ ಸಾಹಿತ್ಯದ ಹೆಸರಿನಲ್ಲಿ ನಡೆಯುವ ಕಾಯಕ್ರಮಗಳೂ ಎಷ್ಟೋ ಬಾರಿ ಇಂತಹ ಶ್ರೇಣೀಕರಣ ಅಥವಾ ಅಸೂಕ್ಷ್ಮತೆಗಳನ್ನು ಪ್ರದರ್ಶಿಸುವಂತಿರುತ್ತವೆ. ಆಳ್ವಾಸ್ ನುಡಿಸಿರಿಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಬೋವಿ ಸಮುದಾಯದ ಪುರುಷರು ಪಲ್ಲಕ್ಕಿಯಲ್ಲಿ ಹೊತ್ತು ತರುತ್ತಿದ್ದ ಆಚರಣೆ ನೆನೆಯಬಹುದು. ಆದ್ದರಿಂದ, ಎಲ್ಲ ಬಗೆಯ ತಾರತಮ್ಯದ ಆಚರಣೆಗಳಿಂದ ಮುಕ್ತಿ ಬಯಸುವ ವಿಚಾರವಂತರು ಸದಾ ಎಚ್ಚರದಲ್ಲೇ ಇರಬೇಕಾಗುವ, ಸ್ವಲ್ಪ ಮೈಮರೆತರೂ ಇಂತಹ ಅನೇಕ ಆಚರಣೆಗಳು ಸಹಜವೆಂಬಂತೆ ಒಳತೂರುವ ಸನ್ನಿವೇಶವೇ ಇಂದೂ ಇದೆ (ಅಥವಾ ಈ ಅಪಾಯ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ) ಎಂಬ ವಾಸ್ತವವನ್ನು ಮರೆಯಲು ಸಾಧ್ಯವಿಲ್ಲ! ಕೆಲವೊಮ್ಮೆ ಸ್ವಲ್ಪ ಅತಿ ಎನ್ನಿಸಿದರೂ, ಇಂತಹವನ್ನು ವಿರೋಧಿಸಬೇಕಾದ್ದು ಇಂದು ಅನಿವಾರ್ಯವೂ ಕೂಡಾ.
ಆದ್ದರಿಂದ, ‘ಸಮ್ಮೇಳನದ ಸರ್ವಾಧ್ಯಕ್ಷರಿಗೆ ಸುಮಂಗಲಿಯರಿಂದ ಪೂರ್ಣಕುಂಭ ಸ್ವಾಗತ’ದ ಆಚರಣೆಯನ್ನು ಬಹಳ ಬೇಗ ಗಮನಿಸಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ ತಮ್ಮ ಸಕಾಲಿಕ ಮಧ್ಯಪ್ರವೇಶದಿಂದ ಅದನ್ನು ನಿಲ್ಲಿಸಲು ಪ್ರಯತ್ನಿಸಿದ ಕನ್ನಡದ ಎಚ್ಚೆತ್ತ ಮಹಿಳೆಯರನ್ನು ‘ನ್ಯಾಯಪಥ’ ಅಭಿನಂದಿಸುತ್ತದೆ. ಇಂತಹ ಎಚ್ಚರ ಇಂದಿನ ತುರ್ತು. ಆದ್ದರಿಂದ ನಿಮ್ಮ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...