Homeಅಂಕಣಗಳುಸ್ವಚ್ಛ ಭಾರತ: ಎಲ್ಲರೂ ಉತ್ತರದಾಯಿಗಳೇ.....

ಸ್ವಚ್ಛ ಭಾರತ: ಎಲ್ಲರೂ ಉತ್ತರದಾಯಿಗಳೇ…..

- Advertisement -
- Advertisement -

ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದಾಗ ಹೊಗಳಿದವರೂ ಇದ್ದರು; ಆಡಿಕೊಂಡವರೂ ಇದ್ದರು. ಮೋದಿಯ ಪರ ಅಥವಾ ವಿರುದ್ಧ ನಿಲ್ಲದೇ ಸ್ವಚ್ಛತೆಯ ಪ್ರಶ್ನೆಯನ್ನು ಪಕ್ಷಾತೀತವಾಗಿ ನೋಡೋಣ. ನಗರೀಕರಣ ಹೆಚ್ಚಾದಂತೆಲ್ಲಾ ಕಸದ ಸಮಸ್ಯೆ ತೀವ್ರವಾಗಿ ಹೆಚ್ಚುತ್ತಲೇ ಹೋಗುತ್ತದೆ. ಗ್ರಾಮೀಣ ಭಾಗದಲ್ಲೂ ಬಯಲೇ ಶೌಚಾಲಯವಾಗಿರುವ ಕೋಟ್ಯಂತರ ಕುಟುಂಬಗಳು ಇಂದಿಗೂ ಇವೆ. ಹಾಗಾಗಿ ದೇಶಕ್ಕೆ ದೇಶವೇ ತಲೆ ಕೆಡಿಸಿಕೊಳ್ಳಬೇಕಾಗಿರುವ ವಿಷಯ ಇದು. ಕಸವೆಂಬುದು ನೈರ್ಮಲ್ಯದ, ಆರೋಗ್ಯದ, ಘನತೆಯ ಜೀವನದ, ನಾಗರಿಕ ಶಿಸ್ತಿನ ಜೊತೆ ತಳುಕು ಹಾಕಿಕೊಂಡಿರುವ ಸಂಗತಿ. ತೀರಾ ಇತ್ತೀಚೆಗೆ ಇದು ಹಣತರುವ ಬಾಬ್ತಾಗಿಯೂ ಕಂಡು, ಅದಕ್ಕಾಗಿ ಏಜೆನ್ಸಿಗಳು ಹುಟ್ಟಿಕೊಂಡಿವೆ. ಕಸ ತೆಗೆಯಲು ಜನರಿಂದ ತೆರಿಗೆಯನ್ನೂ ಸಂಗ್ರಹಿಸಲಾಗುತ್ತಿದೆ. ಇಷ್ಟಾಗಿಯೂ ನಮ್ಮ ಸರ್ಕಾರಗಳು ಇದನ್ನು ಏಕೆ ನಿಭಾಯಿಸಲಾಗುತ್ತಿಲ್ಲ?
‘ದೆಹಲಿಯ ಲೆ.ಗವರ್ನರ್ ಮನೆ ಮುಂದೆ ಕಸ ಸುರಿಯಿರಿ’
ಇದನ್ನು ಹೇಳಿದ್ದು ಸುಪ್ರೀಂ ಕೋರ್ಟು. ಹೌದು ಮೂರು ದಿನದ ಕೆಳಗೆ ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳು ‘ಕಸವನ್ನು ತೆಗೆದುಕೊಂಡು ಹೋಗಿ ರಾಜ್‍ನಿವಾಸ್ ಮಾರ್ಗ್‍ದಲ್ಲಿ ಸುರಿಯಿರಿ’ ಎಂದು ತೆರೆದ ಕೋರ್ಟಿನಲ್ಲೇ ಹೇಳಿದರು. ಅವರು ಲೆಫ್ಟಿನೆಂಟ್ ಗವರ್ನರ್ ಮನೆಯ ಕುರಿತೇ ಮಾತಾಡುತ್ತಿದ್ದಾರೆಂದು ಗೊತ್ತಾಗಿ ಕೋರ್ಟಿನಲ್ಲಿದ್ದವರು ಅವಾಕ್ಕಾದರು. ಕಾರಣ ಇಷ್ಟೇ. ದಕ್ಷಿಣ ದೆಹಲಿಯ ಮುನಿಸಿಪಾಲಿಟಿ (ಎಸ್‍ಡಿಎಂಸಿ)ಯ ವ್ಯಾಪ್ತಿಯಲ್ಲಿ ಪ್ರತಿದಿನ 3,600 ಟನ್ ಕಸ ಸಂಗ್ರಹವಾಗುತ್ತಿದ್ದು, ಅದರಲ್ಲಿ 1,800 ಟನ್‍ಗಳನ್ನು ಸೋನಿಯಾ ವಿಹಾರ್ ಎಂಬ ಬಡಜನರೇ ಹೆಚ್ಚು ವಾಸಿಸುವ ಕಡೆ ಸುರಿಯಲಾಗುತ್ತಿದೆ. ಅಲ್ಲಿನ ನಿವಾಸಿಗಳು ನಾನಾ ಕೋರ್ಟ್‍ಗಳನ್ನು ಸುತ್ತಾಡಿ, ಅಂತಿಮವಾಗಿ ಸುಪ್ರೀಂಕೋರ್ಟಿನ ಕದ ತಟ್ಟಿದಾಗ, ಮುನಿಸಿಪಾಲಿಟಿಯ ಪರ ವಾದ ಮಾಡಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ‘ಇದು ಅನಿವಾರ್ಯ, ಅವರು ಪ್ರಶ್ನಿಸಬಾರದು’ ಎಂದಿದ್ದಾರೆ. ಆಗ ಸಿಟ್ಟಿಗೆದ್ದ ನ್ಯಾಯಮೂರ್ತಿಗಳ ಪ್ರತಿಕ್ರಿಯೆ ಇದಾಗಿತ್ತು.
ಈ ಮುನಿಸಿಪಾಲಿಟಿಯಲ್ಲಿ ಬಿಜೆಪಿ ಪಕ್ಷವು ಅಧಿಕಾರದಲ್ಲಿದೆ. ತಾವು ಈಗಷ್ಟೇ ಅಧಿಕಾರಕ್ಕೆ ಬಂದೆವು ಎಂದು ಹೇಳುವ ಹಾಗಿಲ್ಲ; ಇದರ ಹಿಂದಿನ ಅವಧಿಯಲ್ಲೂ ಅವರೇ ಇದ್ದರು. ಅದು ದೆಹಲಿ. ನರೇಂದ್ರ ಮೋದಿಯವರು ತಮ್ಮ ಕೈಯ್ಯಾರೆ ಸ್ವಚ್ಛ ಭಾರತ ಆಂದೋಲನವನ್ನು ಉದ್ಘಾಟಿಸಿದ ದೇಶದ ರಾಜಧಾನಿ. ಈಗ ಹೇಳಿ? ಏನು ಮಾಡುವುದು? ಮೋದಿಯವರು ಸ್ವಚ್ಛತೆಗಾಗಿ ಇದ್ದ ಅನುದಾನವನ್ನು ಕಡಿಮೆ ಮಾಡಿ, ಅದರಲ್ಲೂ ಹೆಚ್ಚಿನ ಹಣವನ್ನು ತಮ್ಮ ಜಾಹೀರಾತಿಗಾಗಿ ಬಳಸಿದರು ಎಂಬ ಆರೋಪ ನಿಜವಾಯಿತಲ್ಲವೇ?
ಪ್ರಧಾನಿ ಏನೇ ಗಿಮಿಕ್ ಮಾಡಿದ್ದರೂ, ಅವರ ಚರಿಷ್ಮಾ ಈ ಅಭಿಯಾನದಿಂದ ಹೆಚ್ಚಾದರೂ ಅದನ್ನೆಲ್ಲಾ ದೊಡ್ಡ ವಿಚಾರ ಮಾಡುವುದು ಬೇಡ; ಸ್ವಚ್ಛತೆ ಹೆಚ್ಚಾಗಿದ್ದರೆ ಅಷ್ಟೇ ಸಾಕು. ಆಗಿದೆಯೆ? ಖಂಡಿತ ಇಲ್ಲ.

ಸಿದ್ದರಾಮಯ್ಯನವರಿಂದ ಪೌರಕಾರ್ಮಿಕರಿಗೆ ಒಳಿತಾಯಿತೇ?
ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ಆರಂಭದಲ್ಲೇ, ಗುತ್ತಿಗೆ ಪದ್ಧತಿಯ ವಿರುದ್ಧ ಸಂಪುಟದಲ್ಲಿ ಚರ್ಚೆಗಳಾದವು. ಆದರೆ, ಅದನ್ನು ತೆಗೆದುಹಾಕುವುದು ಸುಲಭವಾಗಿರಲಿಲ್ಲ. ಶೋಷಿತ ಸಮುದಾಯದ ಬಗ್ಗೆ ಕಾಳಜಿಯಿದ್ದ ಅವರು ಗುತ್ತಿಗೆ ಪೌರಕಾರ್ಮಿಕರನ್ನಾದರೂ ಖಾಯಂ ಮಾಡಿಕೊಳ್ಳೋಣವೆಂದು ತೀರ್ಮಾನಿಸಿದರು. ಅದೂ ಸಾಧ್ಯವಿಲ್ಲ ಎಂದು ಗೊತ್ತಾಯಿತು. ಇರುವವರನ್ನೇ ಖಾಯಂ ಮಾಡಿಕೊಳ್ಳುವುದು ಅಸಾಧ್ಯ ಎಂದಾದರೆ, ಹೊಸದಾಗಿ ನೇಮಕಾತಿ ಆರಂಭಿಸಿ ಇರುವವರಿಗೇ ಆ ಉದ್ಯೋಗ ಸಿಗುವ ಹಾಗೆ ನೇಮಕಾತಿ ನಿಯಮ ರೂಪಿಸಲಾಯಿತು. ಇದೊಂದು ಸಕಾರಾತ್ಮಕ ನಡೆಯಾಗಿತ್ತು. ಆದರೆ, ಇವತ್ತಿನವರೆಗೂ ಆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆಗ ಗುತ್ತಿಗೆ ಪೌರಕಾರ್ಮಿಕರ ಪರವಾಗಿ ಎರಡು ಮಹತ್ವದ ತೀರ್ಮಾನಗಳನ್ನು ಸಿದ್ದರಾಮಯ್ಯನವರು ತೆಗೆದುಕೊಂಡರು. ಒಂದು, ಅವರ ವೇತನವನ್ನು ಎರಡು ಪಟ್ಟು ಹೆಚ್ಚಿಸಿದರು; ಗುತ್ತಿಗೆದಾರರ ಮಧ್ಯಸ್ಥಿಕೆಯಿಲ್ಲದೇ ನೇರವಾಗಿ ಗುತ್ತಿಗೆ ಪೌರಕಾರ್ಮಿಕರ ಅಕೌಂಟಿಗೇ ವೇತನ ಹೋಗಲಿ ಎಂದು ಆದೇಶಿಸಿದರು.
ಅದಾಗಿ, ಹಲವು ತಿಂಗಳಾದ ನಂತರ ಹೊಸ ಸರ್ಕಾರ ಬಂತು. ಸುಬ್ರಮಣಿ ಎಂಬ ಗುತ್ತಿಗೆ ಪೌರಕಾರ್ಮಿಕ ಬೆಂಗಳೂರಿನಲ್ಲೇ ಆತ್ಮಹತ್ಯೆ ಮಾಡಿಕೊಂಡರು. ಕಾರಣ ಏನು ಎಂದು ನೋಡಿದರೆ, 5 ತಿಂಗಳಿಂದ ಆತನ ಅಕೌಂಟಿಗೆ ವೇತನ ಬಂದಿರಲಿಲ್ಲ. ಅಂದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ, ಹಣಕಾಸು ಮಂತ್ರಿಯಾಗಿದ್ದ ಸಂದರ್ಭದಿಂದಲೂ ವೇತನ ಪಾವತಿಯಾಗಿರಲಿಲ್ಲ. ಈ ಸುಬ್ರಮಣಿಯ ಆತ್ಮಹತ್ಯೆಯ ನಂತರ ಕಾಂಗ್ರೆಸ್ ಪಕ್ಷದ, ದಲಿತ ಸಮುದಾಯಕ್ಕೆ ಸೇರಿದ ಮೇಯರ್ ಎಚ್ಚೆತ್ತುಕೊಂಡರು.
ಸಿದ್ದರಾಮಯ್ಯನವರಿಗೆ ಕಾಳಜಿ ಇರಲಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ, ಹೇಗಾದರೂ ಪೌರಕಾರ್ಮಿಕರಿಗೆ ಒಳ್ಳೆಯದಾಗಲಿ ಎಂಬ ಭಾವನೆ ಇದ್ದುದರಿಂದಲೇ ಒಂದಾದ ಮೇಲೆ ಒಂದರಂತೆ ಕ್ರಮಗಳನ್ನು ತೆಗೆದುಕೊಂಡರು. ಆದರೆ ಆ ಭಾವನೆ ಮತ್ತು ಕ್ರಮಗಳು ಅಂತಿಮವಾಗಿ ಕಟ್ಟಕಡೆಯ ಸಮುದಾಯಕ್ಕೆ ಅನುಕೂಲ ಮಾಡಿಕೊಡಲು ಒಬ್ಬ ವ್ಯಕ್ತಿ ‘ಹುತಾತ್ಮ’ನಾಗಬೇಕಾಯಿತು. ಈ ಸದ್ಯ ಮೇಯರ್ ತೋರಿರುವ ಕಾಳಜಿಯೂ ಎಷ್ಟು ತಿಂಗಳ ಕಾಲ ವೇತನ ಪಾವತಿಯ ನಿರಂತರತೆಯಾಗಿ ಉಳಿದುಕೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಇದೂ ಸ್ವಚ್ಛ ಭಾರತಕ್ಕೆ ಸಂಬಂಧಿಸಿದ ವಿಷಯವೇ ಆಗಿದೆ.

ಮ್ಯಾನ್‍ಹೋಲ್ ಸಾವು ಮತ್ತು ಕುಮಾರಸ್ವಾಮಿ
ಈ ವಾರದಲ್ಲೇ ಶಿವಮೊಗ್ಗ ನಗರದ ಚರಂಡಿಯ ಮ್ಯಾನ್‍ಹೋಲ್‍ನಲ್ಲಿ ಇಳಿದ ಇಬ್ಬರು ಗುತ್ತಿಗೆ ನೌಕರರು ಸಾವನ್ನಪ್ಪಿದ್ದಾರೆ. ಎಷ್ಟೋ ಕಾಲದಿಂದ ಆಗುತ್ತಿರುವ ಈ ಸಾವುಗಳಿಗೆ ಈಗಷ್ಟೇ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ಹೇಗೆ ಹೊಣೆಗಾರರಾಗುತ್ತಾರೆ ಎಂದು ಕೇಳಬಹುದು. ಅವರೊಬ್ಬರೇ ಹೊಣೆಗಾರರಲ್ಲ. ಆದರೆ, ಪ್ರಾಣವನ್ನು ಪಣಕ್ಕೊಡ್ಡಿ ಸರ್ಕಾರೀ ಕೆಲಸಗಳನ್ನು ಸುಸೂತ್ರವಾಗಿ ಸಾಗಿಸುತ್ತಿರುವ ಸಾವಿರಾರು ನೌಕರರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂತೇಮರಳ್ಳಿಯಲ್ಲಿ ಚೆಸ್ಕಾಂ ನೌಕರನೊಬ್ಬ ಕೆಲಸದಲ್ಲಿದ್ದಾಗ ವಿದ್ಯುತ್ ತಗುಲಿ ತೀವ್ರ ಆಘಾತಕ್ಕೊಳಪಟ್ಟ ಮತ್ತು ಶರೀರ ಸುಟ್ಟಿತು. ಇವತ್ತಿನವರೆಗೂ ಒಂದು ರೂಪಾಯಿ ಪರಿಹಾರವೂ ಸಿಕ್ಕಿಲ್ಲ. ಇದೇ ವಾರದಲ್ಲಿ ಕುಮಾರಸ್ವಾಮಿಯವರ ಬೀಗರಾದ ಡಿ.ಸಿ.ತಮ್ಮಣ್ಣನವರ ಕ್ಷೇತ್ರದ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಕೆಲಸದ ಅವಧಿಯಲ್ಲೇ ಗುತ್ತಿಗೆ ನರ್ಸ್ ಒಬ್ಬರು ಅಸುನೀಗಿದರು. ಪರಿಹಾರವೆಲ್ಲಾ ದೂರದ ಮಾತು.
ಇಂತಹವರೆಲ್ಲರಿಗೂ ಸೇವಾಭದ್ರತೆ ಮತ್ತು ಸಮಾನವೇತನ ಕಲ್ಪಿಸುತ್ತೇನೆಂದು ಚುನಾವಣೆಗೆ ಮುಂಚೆ ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗ ‘ಇದೆಲ್ಲಾ ಅಷ್ಟು ಸುಲಭವಲ್ಲ; ಹಿಂದಿನ ಸರ್ಕಾರಗಳ ಅವಧಿಯಲ್ಲಿ ಏನೇನೋ ಆಗಿರುತ್ತದೆ, ಎಲ್ಲದಕ್ಕೂ ನಾನೇ ತಲೆಕೊಡಬೇಕಾ?’ ಎನ್ನುತ್ತಿದ್ದಾರೆ. ಹೀಗಿರುವಾಗ ಗುತ್ತಿಗೆ ಪೌರಕಾರ್ಮಿಕರಿಗೆ, ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಇವರಿಂದ ನ್ಯಾಯ ಸಿಗಬಹುದಾ?

ಬನ್ನಿ, ಕಸ ಬಾಚೋಣ
ಎಲ್ಲೆಂದರಲ್ಲಿ ಕಸ ಚೆಲ್ಲಾಡುವ ಪ್ರವೃತ್ತಿ ನಾಗರಿಕರಲ್ಲೂ ಸಾಕಷ್ಟಿದೆ. ಯಾವುದೇ ಪ್ರವಾಸಿ ತಾಣದಲ್ಲೂ ಗಲೀಜು ರಾಚುತ್ತದೆ. ಜಾತ್ರೆ, ಹಬ್ಬ, ರಾಜಕಾರಣಿಗಳ ಕಾರ್ಯಕ್ರಮಗಳು, ಸಂಘಟನೆಗಳು ನಡೆಸುವ ಪ್ರತಿಭಟನೆಗಳು, ಮದುವೆ ಇತ್ಯಾದಿ ಖಾಸಗಿ ಕಾರ್ಯಕ್ರಮಗಳು ಮುಗಿದ ನಂತರ ಕಸದ ರಾಶಿ ಇಟ್ಟಾಡುತ್ತದೆ. ಹಸಿ ಕಸ, ಒಣ ಕಸ ವಿಂಗಡಿಸಲು ಸೋಮಾರಿತನ ತೋರುವ ‘ನಾಗರಿಕರು’, ಮನೆಯಲ್ಲಿ ಶೌಚಾಲಯ ಕಟ್ಟಿಸಲು ಹಿಂಜರಿಯುವ ಹಳ್ಳಿಗರು ಎಲ್ಲರೂ ಇದರಲ್ಲಿ ಪಾಲುದಾರರಾಗಿದ್ದೇವೆ.
ತೋರಿಕೆಗೆ ಕಸ ಗುಡಿಸುವ ನಾಟಕವಾಡಿ, ಅದರ ಜಾಹೀರಾತಿಗೇ ಹೆಚ್ಚು ಹಣ ಖರ್ಚು ಮಾಡಿಸುವ ಪ್ರಧಾನಿಯಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಎಲ್ಲರೂ ಕಸಕ್ಕೆ ಜವಾಬ್ದಾರರು. ಆದರೆ, ಕಸ ಬಳಿಯುವ ಜನರ ಬದುಕನ್ನು ಇನ್ನಷ್ಟು ಘನತೆಯುಳ್ಳದ್ದನ್ನಾಗಿ ಮಾಡುವ ಪರಿಣಾಮಕಾರಿ ಪ್ರಯತ್ನವಾದರೂ ಈ ಸಮಾಜದಲ್ಲಿ ಜಾರಿಯಾಗುತ್ತಿಲ್ಲ.
ಇನ್ನಾದರೂ ಕಸ ಬಳಿಯೋಣ; ಸ್ವಚ್ಛ ಭಾರತ ಕಟ್ಟೋಣ.

.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...