Homeರಾಜಕೀಯಹತಾಶ ಸಂಘ ಪರಿವಾರದಿಂದ ಕೋಮು ಧ್ರುವೀಕರಣಕ್ಕೆ ಷಡ್ಯಂತ್ರ

ಹತಾಶ ಸಂಘ ಪರಿವಾರದಿಂದ ಕೋಮು ಧ್ರುವೀಕರಣಕ್ಕೆ ಷಡ್ಯಂತ್ರ

- Advertisement -
- Advertisement -

ಪಿ.ಕೆ. |

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶೀಘ್ರ ಶುರುವಾಗಬೇಕು’……

ಇದೊಂದು ವ್ಯವಸ್ಥಿತ ಸಂಚು, ಮತಬೇಟೆಯ ಷಡ್ಯಂತ್ರ. ಮೇಲುನೋಟಕ್ಕೆ ಎಲ್ಲ ಬಿಡಿ ಬಿಡಿ ಘಟನೆ, ಬಿಡಿ ಬಿಡಿ ಹೇಳಿಕೆಗಳು ಎನಿಸುತ್ತವೆ. ಆದರೆ ನಾಗಪುರದ ಆರೆಸ್ಸೆಸ್ ಕಚೇರಿಯಲ್ಲಿ ಸ್ಕ್ರಿಪ್ಟ್ ಮೊದಲೇ ಸಿದ್ಧವಾಗಿದೆ.

ಈ ಎಲ್ಲದರ ಅಂತಿಮ ಗುರಿ: ಏನೇನೂ ಜನಪರ ಕೆಲಸ ಮಾಡದ, ಅದೂಅಲ್ಲದೇ ಮೂರ್ಖ, ಮುಠ್ಠಾಳತನದ ನಿರ್ಧಾರಗಳಿಂದ ದೇಶದ ಅರ್ಥವ್ಯವಸ್ಥೆಯನ್ನೇ ಶಿಥಿಲಗೊಳಿಸಿರುವ ಮೋದಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವುದು. ಅದಕ್ಕಿಂತ ಮುಖ್ಯವಾಗಿ, ಈ ನಾಲ್ಕೂವರೆ ವರ್ಷಗಳಲ್ಲಿ ಹುಟ್ಟಿಸಿರುವ ಅಸಹನೆಯ, ಕ್ರೌರ್ಯದ ವಾತಾವರಣವನ್ನು ಶಾಶ್ವತವಾಗಿ ನಿರ್ಮಿಸುವುದು, ಈಗ ಶಿಥಿಲಗೊಳಿಸಲ್ಪಟ್ಟಿರುವ ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ನಾಮ ಮಾಡುವುದು. ಆ ಮೂಲಕ ಸಂವಿಧಾನವನ್ನೇ ನಗಣ್ಯವಾಗಿಸಿ, ಚುನಾವಣೆಗಳನ್ನು ಪ್ರಹಸನಗಳನ್ನಾಗಿ ಪರಿವರ್ತಿಸಿ, ಒಂದು ಅರಾಜಕ ಸ್ಥಿತಿ ನಿರ್ಮಾಣ ಮಾಡುವುದು. ಅವರ ಮಟ್ಟಿಗೆ ಅದು ‘ಹಿಂದೂ ರಾಷ್ಟ್ರ’….ಅಲ್ಲಿಗೆ ಭಾರತ ದೇಶವು ಪಾಕಿಸ್ತಾನದ ಮಾದರಿಯಲ್ಲಿ ಸಾಗುವುದಂತೂ ಖಂಡಿತ.

ಆದರೆ, ಇದು ಅಷ್ಟು ಸುಲಭವಲ್ಲೆಂಬುದು ಮೋದಿ, ಶಾಗಳು ಸೇರಿದಂತೆ ಇಡೀ ಸಂಘಪರಿವಾರಕ್ಕೆ ಮನವರಿಕೆಯಾಗಿದೆ. ದೇಶದ ರೈತರು, ಕಾರ್ಮಿಕರು, ಯುವಕರು ಸ್ಪಷ್ಟವಾಗಿಯೇ ತಮ್ಮ ಖಚಿತ ವಿರೋಧಗಳನ್ನು ದಾಖಲಿಸುತ್ತಿದ್ದಾರೆ. ಇದು ಸಂಘದ ಮುಂದಿರುವ ಸವಾಲು.

ಜನರ ಬಳಿ ಹೇಳಿಕೊಳ್ಳಲು ಯಾವ ಸಾಧನೆಯೂ ಇಲ್ಲ, ಮಣ್ಣಾಂಗಟ್ಟಿಯೂ ಇಲ್ಲ. ನಾಕೂವರೆ ವರ್ಷ ‘ಇಮೇಜ್’ ಕಾಪಾಡಲು ಹೆಣಗಿದ ಮಾಧ್ಯಮಗಳು ಸುಸ್ತಾಗಿವೆ, ವಿಶ್ವಾಸ ಕಳೆದುಕೊಳ್ಳುತ್ತಿವೆ. ಸುಳ್ಳು ಸುದ್ದಿಗಳನ್ನು ಹರಡುತ್ತ ಬಂದವರಿಗೇ ನಾಚಿಕೆಯಾಗಿದೆ.

ಸಂಘ ಪರಿವಾರದ ಒಳಗಡೆ ಹತಾಶೆ ಗಿಜಿಗಿಟ್ಟಿ ತುಳುಕಾಡುತ್ತಿದೆ. 2019ರ ಚುನಾವಣೆ ಸುಲಭವಲ್ಲ ಎಂಬುದು ಅದಕ್ಕೆ ಪಕ್ಕಾ ಆಗಿದೆ. ಅದಕ್ಕಾಗಿ ಅದು ಭಿನ್ನ ವೇದಿಕೆಗಳಿಂದ ಭಿನ್ನ ಸ್ತರಗಳಲ್ಲಿ ‘ಶೀಘ್ರವೇ ರಾಮ ಮಂದಿರ ನಿರ್ಮಾಣ ಆಗಬೇಕು’ ಎಂದು ಹುಯಿಲು ಎಬ್ಬಿಸಲು ಯತ್ನಿಸುತ್ತಿದೆ. ನಾಲ್ಕೂವರೆ ವರ್ಷದ ನಂತರ ಅದಕ್ಕೆ ದಿಢೀರ್ ಶ್ರೀರಾಮ ನೆನಪಾಗಿದ್ದಾನೆ.

ಖಂಡಿತ, ಅದರ ಗುರಿ ರಾಮಮಂದಿರ ನಿರ್ಮಾಣ ಅಲ್ಲವೇ ಅಲ್ಲ, ಶ್ರೀರಾಮನ ಅಪ್ಪನಾಣೆಗೂ ಅದಕ್ಕೆ ರಾಮ ಮಂದಿರ ನಿರ್ಮಾಣ ಮುಖ್ಯವೇ ಅಲ್ಲ. ರಾಮನ ಹೆಸರಲ್ಲಿ ಸಮಾಜದಲ್ಲಿ ಬಿರುಕು ಮೂಡಿಸಬೇಕು, ನಂತರ ಸಣ್ಣಪುಟ್ಟ ಗಲಾಟೆಗಳು ನಡೆಯಬೇಕು. ಮುಸ್ಲಿಮರನ್ನು ಮಂಇರ ವಿರೋಧಿಗಳು ಎಂದು ಬಿಂಬಿಸಬೇಕು, ಇದಕ್ಕೆ ವಿಪಕ್ಷಗಳನ್ನು ಹೊಣೆಗಾರರನ್ನಾಗಿ ಮಾಡಬೇಕು…… ಇದನ್ನೇ ಮುಂದಿಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಗಲಭೆ, ಹಿಂಸಾಚಾರ ಎಬ್ಬಿಸುವುದು ಅದರ ಮೊಡರೆಸ್ ಅಪರೆಂಡಿ-ಕಾರ್ಯವಿಧಾನ…ಹೆಣಗಳು ಬೀಳಬೇಕು, ಮುಸ್ಲಿಮರದು, ಹಿಂದೂಗಳದು….ಒಟ್ಟು ಹೆಣಗಳು ಬೀಳಬೇಕು, ರಕ್ತಪಾತವಾಗಬೇಕು…’ಹಿಂದೂಗಳು ಅಪಾಯದಲ್ಲಿ’ ಎಂದೆಲ್ಲ ಹುಯಿಲೆಬ್ಬಿಸಿ ಹಿಂದೂ-ಮುಸ್ಲಿಂ ಧ್ರುವೀಕರಣ ನಡೆಯಬೇಕು, ೨೦೧೯ರ ಚುನಾವಣೆ ಇದರ ಆಧಾರದ ಮೇಲೇ ನಡೆದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು…..
* * * *

ಡಿಸೆಂಬರ್ 2ರಂದು ಬೆಂಗಳೂರಿನಲ್ಲಿ ನಡೆದ ‘ರಾಮ ಮಂದಿರಕ್ಕಾಗಿ ಜನಾಗ್ರಹ’ ಸಭೆಯಲ್ಲಿ ಪೇಜಾವರ ಶ್ರೀಗಳು ಮಾತಾಡಿ, ‘ರಾಮಮಂದಿರಕ್ಕಾಗಿ ಮುಸ್ಲಿಮರು ಮತ್ತು ಕ್ರೈಸ್ತರು ಕೈ ಜೋಡಿಸಬೇಕು’ ಎಂದು ಫರ್ಮಾನು ಹೊರಿಸಿದ್ದಾರೆ. ಮುಂದುವರೆದು, ‘ಹಿಂದೂ-ಮುಸ್ಲಿಂ ಸೌಹಾರ್ದತೆ ಕಾಪಾಡಲು ಮುಸ್ಲಿಮರಿಗೆ ಇದೊಂದು ಒಳ್ಳೆಯ ಅವಕಾಶ’ ಎನ್ನುತ್ತಾರೆ. ಕೇಳಲಿಕ್ಕೆ ಹಿತ ಎನಿಸಬಹುದಾದ ಈ ಮಾತಿನ ಹಿಂದೆ ಸಂಘದ ಅಜೆಂಡಾ ಇದೆ. ಅಂದರೆ ಈ ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದತೆ ಕೆಡಲು ಮುಸ್ಲಿಮರ ತಪ್ಪುಗಳೇ ಕಾರಣ ಎಂದು ಸುಳ್ಳು ಆರೋಪವನ್ನು ಮುಸ್ಲಿಮರ ತಲೆಗೆ ಕಟ್ಟುವ ಹುನ್ನಾರ ಮತ್ತೆ ಪ್ರವರ್ಧಮಾನಕ್ಕೆ ಬಂದಿದೆ. 1992, 2002 ರ ಹಿಂಸಾಚಾರಗಳಿಗೂ ಮೊದಲು ಇದೇ ರೀತಿ ವ್ಯವಸ್ಥಿತ ಅಪಪ್ರಚಾರ ಮಾಡಲಾಗಿತ್ತು ಎಂಬುದನ್ನು ಮರೆಯದಿರೋಣ.

ಬರುವ ತಿಂಗಳು ಸುಪ್ರಿಂ ಕೋರ್ಟ್ ವಿಚಾರಣೆಯ ಸ್ವರೂಪವನ್ನು ನಿರ್ಧರಿಸುವುದು ಗೊತ್ತಿದ್ದೂ ಪೇಜಾವರಶ್ರೀಗಳು ಸುಗ್ರೀವಾಜ್ಞೆಗೆ ಆಗ್ರಹಿಸುವುದರ ಹಿಂದೆ ಮಸಲತ್ತಿದೆ. ನಿರ್ಣಾಯಕ ಘಟ್ಟಗಳಲ್ಲಿ ಇಂತಹ ಪಾತ್ರ ನಿರ್ವಹಿಸುತ್ತಲೇ ಬಂದಿರುವ ಅವರು ಈಗ ತಮ್ಮ ಪಾತ್ರದ ಅಂತಿಮ ದೃಶ್ಯಕ್ಕೆ ರೆಡಿಯಾದಂತಿದೆ.

ಇದೇ ಹೊತ್ತಲ್ಲಿ, ಅಖಿಲ ಭಾರತ್ ಅಖಾಡ ಪರಿಷತ್ ಎನ್ನುವ ಸಾಧು ಸಂತರ ಗುಂಪು ಮುಸ್ಲಿಮರ ಜೊತೆ ಮಾತುಕತೆ ನಡೆಸುವ ಮೂಲಕ ಮಂದಿರ ಕಟ್ಟುತ್ತೇವೆ ಎನ್ನುತ್ತದೆ. ಮುಖ್ಯವಾಹಿನಿ ಮಾಧ್ಯಮಗಳು, ‘ಹಿಂದೂತ್ವ ಗುಂಪುಗಳಲ್ಲಿ ಭಿನ್ನಮತ’ ಎಂದು ಬರೆದು, ಮತ್ತದೇ ಹಿಂದಿನ ತಪ್ಪನ್ನು (ಬೇಕೆಂತಲೇ) ಮಾಡಿವೆ. ಈ ಅಖಾಡದ ಉದ್ದೇಶವೂ ಮುಸ್ಲಿಮರನ್ನು ಬಲಿಪಶು ಮಾಡುವುದೇ ಆಗಿದೆ ಮತ್ತು ಇದು ಆರ್‌ಎಸ್‌ಎಸ್ ಸ್ಕ್ರಿಪ್ಟ್‌ನ ಭಾಗವೇ ಆಗಿದೆ ಎಂಬುದರಲ್ಲಿ ಸಂಶಯವಿಲ್ಲ.

ವಿವಾದಿತ ಪ್ರದೇಶ ತನ್ನ ಆಸ್ತಿ ಎಂದು ಭ್ರಮಿಸಿರುವ ವಿಎಚ್‌ಪಿ, ಆ ಜಾಗವನ್ನು ತನ್ನ ಸುಪರ್ದಿಗೆ ಒಪ್ಪಿಸಿ ಮಂದಿರ ನಿರ್ಮಾಣ ಆರಂಭಿಸಲು ಅನುವು ಮಾಡಿ ಕೊಡಬೇಕು ಎನ್ನುತ್ತಿದೆ. ಕೇಂದ್ರ ಸಚಿವ ಗಿರಿರಾಜ್‌ಸಿಂಗ್ ಮಂದಿರ ನಿರ್ಮಾಣಕ್ಕೆ ಅವಕಾಶ ಸಿಗದಿದ್ದರೆ ಅನಾಹುತಗಳು ಸಂಭವಿಸಲಿವೆ ಎಂದು ಎಚ್ಚರಿಸಿದ್ದಾನೆ. ರಾಜ್ಯಸಭಾ ಸದಸ್ಯ ಮತ್ತು ಆರ್‌ಎಸ್‌ಎಸ್ ಸಿದ್ದಾಂತಿ ರಾಕೇಶ್ ಶರ್ಮಾ ಚಳಿಗಾಲ ಅಧಿವೇಶನದಲ್ಲಿ ಮಂದಿರಕ್ಕಾಗಿ ಖಾಸಗಿ ಮಸೂದೆ ಮಂಡಿಸುತ್ತಾನಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ಆತ, ‘ನೀವು ಮಂದಿರದ ಪರವೋ, ವಿರೋಧವೋ’ ಎಂಬುದನ್ನು ಹೇಳಬೇಕು ಎಂದು ರಾಹುಲ್ ಗಾಂಧಿ, ಸೀತಾರಾಮ್ ಯೆಚೂರಿ, ಮಾಯಾವತಿ ಮುಂತಾದ ವಿಪಕ್ಷ ನಾಯಕರನ್ನು ಆಗ್ರಹಿಸಿದ್ದಾನೆ. ಮಂದಿರ ನಿರ್ಮಾಣಕ್ಕೆ ವಿಪಕ್ಷಗಳೇ ಮುಖ್ಯವಾಗಿ ಕಾಂಗ್ರೆಸ್ಸೇ ಅಡ್ಡಿ ಎಂಬ ಭಾವ ಸೃಷ್ಟಿಸುವ ಭಾಗವಾಗಿ ಈ ‘ಮಸೂದೆ’ ಡ್ರಾಮಾ ತಯ್ಯಾರಿ ನಡೆಯುತ್ತಿದೆ.

ಈ ಅಜೆಂಡಾದ ಪ್ರಮುಖ ಭಾಗವಾಗಿರುವ ಫಲಾನುಭವಿ ಪ್ರಧಾನಿ, ಮಂದಿರ ವಿಷಯ ಬೇಗ ಇತ್ಯರ್ಥ ಆಗದಂತೆ ನ್ಯಾಯಾಲಯದ ಮೇಲೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂದು ಚುನಾವಣಾ ಪ್ರಚಾರದಲ್ಲಿ ನಿರ್ಲಜ್ಜವಾಗಿ ಹೇಳಿದ್ದಾರೆ. ಹೇಳಿಕೊಳ್ಳಲೂ ಯಾವ ಸಾಧನೆಯೂ ಇಲ್ಲ, ಜನರ ದೈನಂದಿನ ಬದುಕು ಹದಗೆಡಲು ಮಾಡಿದ ಕೆಲಸಗಳಿಗೆ ಲೆಕ್ಕವಿಲ್ಲ. ಹೀಗಾಗಿ ಪ್ರಧಾನಿಗೆ ರಾಮನ ಪಾದ ಬಿಟ್ಟರೆ ಗತಿಯಿಲ್ಲ. ಅವರ ಅಜೆಂಡಾದ ಪ್ರಕಾರ ಕೋಮು ಧ್ರುವೀಕರಣ ಆಗಬೇಕು, ಅದಾಗಬೇಕೆಂದರೆ 1992 ಮತ್ತು 2002ರ ಹಿಂಸಾಚಾರಗಳು ಸಂಭವಿಸಬೇಕು… ಈಗ ನಡೆಯುತ್ತಿರುವುದು ಇದಕ್ಕೆ ಬೇಕಾದ ಪೂರ್ವಸಿದ್ದತೆಗಳು ಅಷ್ಟೇ.

ಈಗಲೇ ಜನರು ಇದನ್ನು ಅರಿತುಕೊಂಡರೆ, ಭೀಕರ ಅನಾಹುತವನ್ನು ತಪ್ಪಿಸಬಹುದು. ದೆಹಲಿಯಲ್ಲಿ ನಡೆದ ರೈತರ ರ‍್ಯಾಲಿ ಈ ದಿಸೆಯಲ್ಲಿನ ಆಶಾದಾಯಕ ಬೆಳವಣಿಗೆ. ಧರ್ಮದ ವಿಚಾರ ಬಿಟ್ಟು ಬದುಕಿನ ಸಂಕಟಗಳ ಕುರಿತು, ಅವುಗಳ ಪರಿಹಾರ ದಾರಿಗಳ ಕುರಿತು ಜನ ಯೋಚಿಸತೊಡಗಿದರೆ ಸಂಘದ ಸಂಚು ಮಣ್ಣುಪಾಲಾಗುವುದು ಖಚಿತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...