Homeಸಿನಿಮಾಸಿನಿ ಸುದ್ದಿಹಲೋ ಆಂಕರ್ಸ್, ಕೊಂಚ ಸೆನ್ಸ್ ಬೆಳೆಸಿಕೊಳ್ತೀರಾ..

ಹಲೋ ಆಂಕರ್ಸ್, ಕೊಂಚ ಸೆನ್ಸ್ ಬೆಳೆಸಿಕೊಳ್ತೀರಾ..

- Advertisement -
- Advertisement -

ರಂಗಿತರಂಗ, ಕಳೆದ ವರ್ಷದ ಅತ್ಯದ್ಭುತ ಸಿನಿಮಾಗಳಲ್ಲಿ ಒಂದು. ಆ ತಂಡದ ಮೇಲೆ ಭರವಸೆಯನ್ನೂ ಹೆಚ್ಚಿಸಿದ್ದ ಸಿನಿಮಾ ಅದು. ಆದರೀಗ ರೇಡಿಯೋ ಆಂಕರಮ್ಮ ಮಾಡಿದ ಯಡವಟ್ಟಿಗೆ ಇಡೀ ತಂಡ ತಮ್ಮ ಪ್ರತಿಭೆಯ ಕ್ವಾಲಿಟಿಗೆ ಮಸಿ ಬಳಿಸಿಕೊಂಡು ಮರುಗುತ್ತಿದೆ. ಆಕ್ಚುಯಲಿ ಏನಾಗಿದೆ ಅಂದ್ರೆ, ಮೊನ್ನೆ ಈ ತಂಡದ ಹೊಸ ಸಿನಿಮಾ ರಾಜರಥಾ ಬಿಡುಗಡೆಯಾಗಿತ್ತು. ಸಿನಿಮಾದ ಪ್ರಚಾರಕ್ಕೆಂದು ರಪರಪ ರ್ಯಾಪಿಡಮ್ಮ ಅರ್ಥಾತ್ ರ್ಯಾಪಿಡ್ ರಶುಮಮ್ಮನ ರೇಡಿಯೋ ಶೋನಲ್ಲಿ ತಂಡ ಕೂತಿತ್ತು. ಉಸಿರು ಬಿಗಿಹಿಡಿದಂತೆ ಒಂದೇಸಮನೆ ಮಾತಾಡೋದು ಬಿಟ್ಟು ತಮಗೊಂದು ಸೆನ್ಸಿಬಲ್ ಹೊಣೆ ಇದೆ ಅನ್ನೋದನ್ನೇ ಮರೆತ ಆ್ಯಂಕರ್ ಪರಂಪರೆಯ ರ್ಯಾಪಿಡ್ ರಶ್ಮಿ `ನಿಮ್ಮ ರಾಜರಥಾ ಸಿನಿಮಾವನ್ನು ನೋಡದಿರೋ ಪ್ರೇಕ್ಷಕರನ್ನು ನೀವು ಏನಂತ ಕರೀತೀರಾ?’ ಅನ್ನೋ ಅಸಂಬಂದ್ಧ ಪ್ರಶ್ನೆ ಎಸೆದಿದ್ದಳು. ಒಂದು ಸಿನಿಮಾ ರಿಲೀಸ್ ಆಯ್ತು ಅಂದ್ರೆ ಅದನ್ನು ಎಲ್ಲರು ನೋಡ್ಲೇಬೇಕಾ, ಹಾಗೊಮ್ಮೆ ನೋಡದೆ ಇದ್ರೆ ಅವರಲ್ಲಿ ಏನೊ ಡಿಫೆಕ್ಟ್ ಇದೆ ಅಂತ ಅಂದ್ಕೋಬೇಕಾ… ವಿಚಿತ್ರವಾಗಿದೆ ಆಯಮ್ಮನ ವಾದ. ಹೋಗ್ಲಿ, ಚಿತ್ರತಂಡವಾದರು ಈ ಪ್ರಶ್ನೆಯ ಅಸಂಬದ್ಧತೆಯನ್ನ ಅರ್ಥ ಮಾಡಿಕೊಂಡು ಆಂಕಂರಮ್ಮನನ್ನ ತಿದ್ದಬಹುದಿತ್ತು. ಅದರ ಬದಲಿಗೆ `ಈ ಸಿನಿಮಾ ನೋಡ್ದೇ ಇರೋರು ಕಚಡಾ ನನ್ಮಕ್ಕಳು’ ಅಂದುಬಿಡೋದಾ?.

ಆ ಒಂದು ಹೇಳಿಕೆ ಹೊಸಬರ ತಂಡದ ಮೇಲಿದ್ದ ಸಭ್ಯತೆಯ ನಿರೀಕ್ಷೆಗಳನ್ನೆಲ್ಲ ಧ್ವಂಸ ಮಾಡಿದ್ದಲ್ಲದೆ, ಹೈಗ್ರೌಂಡ್ಸ್ ಪೊಲೀಸ್ ಸ್ಟೇಷನ್‍ನಲ್ಲಿ ಪುಕ್ಕಟೆ ಕೇಸ್ ಕೂಡಾ ಅವರ ಹೆಗಲೇರುವಂತೆ ಮಾಡಿದೆ. ಅದೊಂದು ವಿವಾದವಾಗಿ ಬೆಳೆದದ್ದು, ಸಾರಾ ಗೋವಿಂದು ರಾಜಿಪಂಚಾಯ್ತಿಯಲ್ಲಿ ಅವರೆಲ್ಲ `ಸೋ, ಸಾರಿ ಪ್ರೇಕ್ಷಕರೇ’ ಅಂತ ಅವಲತ್ತುಕೊಂಡದ್ದು, ಇವೆಲ್ಲ ಸುದ್ದಿಗಳಾಗಿ ರಾರಾಜಿಸಿದವು. ಆದ್ರೆ ಈ ಆಂಕರ್‍ಗಳ ಐಲುತನದ ಬಗ್ಗೆ ಹೆಚ್ಚು ಚರ್ಚೆಯೇ ಹುಟ್ಟಿಕೊಳ್ಳಲಿಲ್ಲ. ಅದೇ ದುರಂತದ ಸಂಗತಿ. ನಿರೂಪಣೆ ತನ್ನ ಸೊಗಸು ಕಳಕೊಂಡು ಅದ್ಯಾವ ಘಳಿಗೆಯಲ್ಲಿ ಆಂಕರಿಂಗ್‍ನ ಅರೆಬೆಂದ ರೂಪ ಪಡೆಯಿತೋ ಆಗಿನಿಂದ ಅವರ ಅಧ್ವಾನಗಳನ್ನು ನೋಡಲಾಗುತ್ತಿಲ್ಲ. ಇತ್ತೀಚೆಗೆ ಈ ಆಂಕರ್‍ಗಳಿಗೆ ಸ್ಟಾರ್‍ಗಿರಿಯ ಭ್ರಮೆಯೂ ಶುರುವಾಗಿದ್ದು ಅವರ ಅವತಾರಗಳಿಗೆ ಲಂಗು ಲಗಾಮೇ ಇಲ್ಲದಂತಾಗಿದೆ. ಆಂಕರ್‍ಗಳ ಇಂಥಾ ಅಸಂಬಂದ್ಧ ಐಲಾಟ ಇದೇ ಮೊದಲೇನಲ್ಲ. ಯುವನಟಿ ರಶ್ಮಿಕಾ ಮಂದಣ್ಣಗೆ `ಕನ್ನಡದಲ್ಲಿ ಶೋ ಆಫ್ ನಟ ಅಂತ ನೀವು ಯಾರನ್ನ ಕರೀತಿರಿ?’ ಅನ್ನೋ ಪ್ರಶ್ನೆ ಹಾಕಿದ್ದ ಆಂಕರ್, ಆಕೆಗೆ ಇಷ್ಟವಿಲ್ಲದಿದ್ದರೂ ಒತ್ತಾಯಿಸಿ `ಯಶ್’ ಎಂಬ ಉತ್ತರ ಹೊರಬರುವಂತೆ ಮಾಡಿದ್ದ. ಪಾಪಾ, ಆಕೆ ಆಮೇಲೆ ಹಲವರ ವಿರೋಧ ಎದುರಿಸಬೇಕಾಯ್ತು. ಅದೇರೀತಿ ಆ್ಯಂಕರಿಂಗ್ ದೊರೆ ಬಿಗ್‍ಬಾಸ್ ಸಂಜನಾಗೆ `ನಿಮ್ಮ ಪ್ರಕಾರ ‘ಬಿಲ್ಡಪ್’ ನಟ ಯಾರು?’ ಅಂತ ಕೇಳಿ, ಅವಳ ಬಾಯಿಂದ ದರ್ಶನ್ ಹೆಸರು ಹೊರಬರುವಂತೆ ಮಾಡಿದ್ದ. ಅದೂ ವಿವಾದವಾಗಿತ್ತು. ಇಂಥಾ ಅದೆಷ್ಟೊ ನಿದರ್ಶನಗಳು ಸಿಗುತ್ತವೆ.

ವಿವಾದ ಸೃಷ್ಟಿಸೋದು, ಮತ್ತೊಬ್ಬರನ್ನು ಹೀಗಳೆಯೋದೇ ಆ್ಯಂಕರಿಂಗ್ ಅಂದುಕೊಂಡಿರೋ ಇವರಿಗೆ ನಿರೂಪಣೆಯ ವ್ಯಾಕರಣ ಅರ್ಥವಾಗೋದು ಕಷ್ಟ. ಆದ್ರೆ, ಕಡೇಪಕ್ಷ ತಾವಾಡುವ ಮಾತುಗಳಲ್ಲಿ ಒಂದಷ್ಟು ಕಾಮನ್‍ಸೆನ್ಸ್ ಇರಬೇಕು ಅನ್ನೋ ಪ್ರಜ್ಞೇನಾದ್ರು ಇವರು ಬೆಳೆಸಿಕೊಳ್ಳಬೇಕಿದೆ. ಅಂದಹಾಗೆ, ಇದೆಲ್ಲಾ ನಮ್ಮ ಎಂಟರ್‍ಟೈನ್‍ಮೆಂಟ್ ಚಾನೆಲ್ ಆ್ಯಂಕರ್‍ಗಳ ಐಲಾಟವಾಯ್ತು. ಇನ್ನು ನ್ಯೂಸ್ ಚಾನೆಲ್ ಆ್ಯಂಕರ್‍ಗಳ ಐಲಾಟಕ್ಕೆ ಹೋದ್ರೆ, ಬೆಂಗ್ಳೂರಲ್ಲಿ ಪ್ರಳಯವೇ ಆಗ್ಬಿಡುತ್ತೆ. ಬೇಡ ಬಿಡಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...