Homeಸಿನಿಮಾಸಿನಿ ಸುದ್ದಿಹಲೋ ಆಂಕರ್ಸ್, ಕೊಂಚ ಸೆನ್ಸ್ ಬೆಳೆಸಿಕೊಳ್ತೀರಾ..

ಹಲೋ ಆಂಕರ್ಸ್, ಕೊಂಚ ಸೆನ್ಸ್ ಬೆಳೆಸಿಕೊಳ್ತೀರಾ..

- Advertisement -
- Advertisement -

ರಂಗಿತರಂಗ, ಕಳೆದ ವರ್ಷದ ಅತ್ಯದ್ಭುತ ಸಿನಿಮಾಗಳಲ್ಲಿ ಒಂದು. ಆ ತಂಡದ ಮೇಲೆ ಭರವಸೆಯನ್ನೂ ಹೆಚ್ಚಿಸಿದ್ದ ಸಿನಿಮಾ ಅದು. ಆದರೀಗ ರೇಡಿಯೋ ಆಂಕರಮ್ಮ ಮಾಡಿದ ಯಡವಟ್ಟಿಗೆ ಇಡೀ ತಂಡ ತಮ್ಮ ಪ್ರತಿಭೆಯ ಕ್ವಾಲಿಟಿಗೆ ಮಸಿ ಬಳಿಸಿಕೊಂಡು ಮರುಗುತ್ತಿದೆ. ಆಕ್ಚುಯಲಿ ಏನಾಗಿದೆ ಅಂದ್ರೆ, ಮೊನ್ನೆ ಈ ತಂಡದ ಹೊಸ ಸಿನಿಮಾ ರಾಜರಥಾ ಬಿಡುಗಡೆಯಾಗಿತ್ತು. ಸಿನಿಮಾದ ಪ್ರಚಾರಕ್ಕೆಂದು ರಪರಪ ರ್ಯಾಪಿಡಮ್ಮ ಅರ್ಥಾತ್ ರ್ಯಾಪಿಡ್ ರಶುಮಮ್ಮನ ರೇಡಿಯೋ ಶೋನಲ್ಲಿ ತಂಡ ಕೂತಿತ್ತು. ಉಸಿರು ಬಿಗಿಹಿಡಿದಂತೆ ಒಂದೇಸಮನೆ ಮಾತಾಡೋದು ಬಿಟ್ಟು ತಮಗೊಂದು ಸೆನ್ಸಿಬಲ್ ಹೊಣೆ ಇದೆ ಅನ್ನೋದನ್ನೇ ಮರೆತ ಆ್ಯಂಕರ್ ಪರಂಪರೆಯ ರ್ಯಾಪಿಡ್ ರಶ್ಮಿ `ನಿಮ್ಮ ರಾಜರಥಾ ಸಿನಿಮಾವನ್ನು ನೋಡದಿರೋ ಪ್ರೇಕ್ಷಕರನ್ನು ನೀವು ಏನಂತ ಕರೀತೀರಾ?’ ಅನ್ನೋ ಅಸಂಬಂದ್ಧ ಪ್ರಶ್ನೆ ಎಸೆದಿದ್ದಳು. ಒಂದು ಸಿನಿಮಾ ರಿಲೀಸ್ ಆಯ್ತು ಅಂದ್ರೆ ಅದನ್ನು ಎಲ್ಲರು ನೋಡ್ಲೇಬೇಕಾ, ಹಾಗೊಮ್ಮೆ ನೋಡದೆ ಇದ್ರೆ ಅವರಲ್ಲಿ ಏನೊ ಡಿಫೆಕ್ಟ್ ಇದೆ ಅಂತ ಅಂದ್ಕೋಬೇಕಾ… ವಿಚಿತ್ರವಾಗಿದೆ ಆಯಮ್ಮನ ವಾದ. ಹೋಗ್ಲಿ, ಚಿತ್ರತಂಡವಾದರು ಈ ಪ್ರಶ್ನೆಯ ಅಸಂಬದ್ಧತೆಯನ್ನ ಅರ್ಥ ಮಾಡಿಕೊಂಡು ಆಂಕಂರಮ್ಮನನ್ನ ತಿದ್ದಬಹುದಿತ್ತು. ಅದರ ಬದಲಿಗೆ `ಈ ಸಿನಿಮಾ ನೋಡ್ದೇ ಇರೋರು ಕಚಡಾ ನನ್ಮಕ್ಕಳು’ ಅಂದುಬಿಡೋದಾ?.

ಆ ಒಂದು ಹೇಳಿಕೆ ಹೊಸಬರ ತಂಡದ ಮೇಲಿದ್ದ ಸಭ್ಯತೆಯ ನಿರೀಕ್ಷೆಗಳನ್ನೆಲ್ಲ ಧ್ವಂಸ ಮಾಡಿದ್ದಲ್ಲದೆ, ಹೈಗ್ರೌಂಡ್ಸ್ ಪೊಲೀಸ್ ಸ್ಟೇಷನ್‍ನಲ್ಲಿ ಪುಕ್ಕಟೆ ಕೇಸ್ ಕೂಡಾ ಅವರ ಹೆಗಲೇರುವಂತೆ ಮಾಡಿದೆ. ಅದೊಂದು ವಿವಾದವಾಗಿ ಬೆಳೆದದ್ದು, ಸಾರಾ ಗೋವಿಂದು ರಾಜಿಪಂಚಾಯ್ತಿಯಲ್ಲಿ ಅವರೆಲ್ಲ `ಸೋ, ಸಾರಿ ಪ್ರೇಕ್ಷಕರೇ’ ಅಂತ ಅವಲತ್ತುಕೊಂಡದ್ದು, ಇವೆಲ್ಲ ಸುದ್ದಿಗಳಾಗಿ ರಾರಾಜಿಸಿದವು. ಆದ್ರೆ ಈ ಆಂಕರ್‍ಗಳ ಐಲುತನದ ಬಗ್ಗೆ ಹೆಚ್ಚು ಚರ್ಚೆಯೇ ಹುಟ್ಟಿಕೊಳ್ಳಲಿಲ್ಲ. ಅದೇ ದುರಂತದ ಸಂಗತಿ. ನಿರೂಪಣೆ ತನ್ನ ಸೊಗಸು ಕಳಕೊಂಡು ಅದ್ಯಾವ ಘಳಿಗೆಯಲ್ಲಿ ಆಂಕರಿಂಗ್‍ನ ಅರೆಬೆಂದ ರೂಪ ಪಡೆಯಿತೋ ಆಗಿನಿಂದ ಅವರ ಅಧ್ವಾನಗಳನ್ನು ನೋಡಲಾಗುತ್ತಿಲ್ಲ. ಇತ್ತೀಚೆಗೆ ಈ ಆಂಕರ್‍ಗಳಿಗೆ ಸ್ಟಾರ್‍ಗಿರಿಯ ಭ್ರಮೆಯೂ ಶುರುವಾಗಿದ್ದು ಅವರ ಅವತಾರಗಳಿಗೆ ಲಂಗು ಲಗಾಮೇ ಇಲ್ಲದಂತಾಗಿದೆ. ಆಂಕರ್‍ಗಳ ಇಂಥಾ ಅಸಂಬಂದ್ಧ ಐಲಾಟ ಇದೇ ಮೊದಲೇನಲ್ಲ. ಯುವನಟಿ ರಶ್ಮಿಕಾ ಮಂದಣ್ಣಗೆ `ಕನ್ನಡದಲ್ಲಿ ಶೋ ಆಫ್ ನಟ ಅಂತ ನೀವು ಯಾರನ್ನ ಕರೀತಿರಿ?’ ಅನ್ನೋ ಪ್ರಶ್ನೆ ಹಾಕಿದ್ದ ಆಂಕರ್, ಆಕೆಗೆ ಇಷ್ಟವಿಲ್ಲದಿದ್ದರೂ ಒತ್ತಾಯಿಸಿ `ಯಶ್’ ಎಂಬ ಉತ್ತರ ಹೊರಬರುವಂತೆ ಮಾಡಿದ್ದ. ಪಾಪಾ, ಆಕೆ ಆಮೇಲೆ ಹಲವರ ವಿರೋಧ ಎದುರಿಸಬೇಕಾಯ್ತು. ಅದೇರೀತಿ ಆ್ಯಂಕರಿಂಗ್ ದೊರೆ ಬಿಗ್‍ಬಾಸ್ ಸಂಜನಾಗೆ `ನಿಮ್ಮ ಪ್ರಕಾರ ‘ಬಿಲ್ಡಪ್’ ನಟ ಯಾರು?’ ಅಂತ ಕೇಳಿ, ಅವಳ ಬಾಯಿಂದ ದರ್ಶನ್ ಹೆಸರು ಹೊರಬರುವಂತೆ ಮಾಡಿದ್ದ. ಅದೂ ವಿವಾದವಾಗಿತ್ತು. ಇಂಥಾ ಅದೆಷ್ಟೊ ನಿದರ್ಶನಗಳು ಸಿಗುತ್ತವೆ.

ವಿವಾದ ಸೃಷ್ಟಿಸೋದು, ಮತ್ತೊಬ್ಬರನ್ನು ಹೀಗಳೆಯೋದೇ ಆ್ಯಂಕರಿಂಗ್ ಅಂದುಕೊಂಡಿರೋ ಇವರಿಗೆ ನಿರೂಪಣೆಯ ವ್ಯಾಕರಣ ಅರ್ಥವಾಗೋದು ಕಷ್ಟ. ಆದ್ರೆ, ಕಡೇಪಕ್ಷ ತಾವಾಡುವ ಮಾತುಗಳಲ್ಲಿ ಒಂದಷ್ಟು ಕಾಮನ್‍ಸೆನ್ಸ್ ಇರಬೇಕು ಅನ್ನೋ ಪ್ರಜ್ಞೇನಾದ್ರು ಇವರು ಬೆಳೆಸಿಕೊಳ್ಳಬೇಕಿದೆ. ಅಂದಹಾಗೆ, ಇದೆಲ್ಲಾ ನಮ್ಮ ಎಂಟರ್‍ಟೈನ್‍ಮೆಂಟ್ ಚಾನೆಲ್ ಆ್ಯಂಕರ್‍ಗಳ ಐಲಾಟವಾಯ್ತು. ಇನ್ನು ನ್ಯೂಸ್ ಚಾನೆಲ್ ಆ್ಯಂಕರ್‍ಗಳ ಐಲಾಟಕ್ಕೆ ಹೋದ್ರೆ, ಬೆಂಗ್ಳೂರಲ್ಲಿ ಪ್ರಳಯವೇ ಆಗ್ಬಿಡುತ್ತೆ. ಬೇಡ ಬಿಡಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...