Homeದಿಟನಾಗರಫ್ಯಾಕ್ಟ್‌‌ಚೆಕ್: ಕಂಗನಾ ರಾಣಾವತ್‌ ಚುನಾವಣೆಯಲ್ಲಿ ಬಲವಂತವಾಗಿ ಶಿವಸೇನೆಗೆ ಮತ ಚಲಾಯಿಸಿದರೆ?

ಫ್ಯಾಕ್ಟ್‌‌ಚೆಕ್: ಕಂಗನಾ ರಾಣಾವತ್‌ ಚುನಾವಣೆಯಲ್ಲಿ ಬಲವಂತವಾಗಿ ಶಿವಸೇನೆಗೆ ಮತ ಚಲಾಯಿಸಿದರೆ?

ತಾನು ಬಿಜೆಪಿ ಬೆಂಬಲಿಸುವವಳಾಗಿದ್ದು, ಬಿಜೆಪಿ-ಶಿವಸೇನೆ ಮೈತ್ರಿಯಿಂದ ಬಲವಂತವಾಗಿ ಶಿವಸೇನೆಗೆ ಮತನೀಡುವಂತಾಯಿತು ಎಂದಿದ್ದರು.

- Advertisement -
- Advertisement -

ಸಧ್ಯ ವಿವಾದದಲ್ಲಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್‌, ಮಹರಾಷ್ಟ್ರದ ಶಿವಸೇನೆ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುವುದನ್ನು ಮುಂದುವರೆಸಿದ್ದು, ಇತ್ತೀಚೆಗೆ ಟೈಮ್ಸ್‌ ನೌ ಸಂದರ್ಶನವೊಂದರಲ್ಲಿ, ’ತಾನು ಮನಸ್ಸಿಲ್ಲದೆ ಬಲವಂತವಾಗಿ ಶಿವಸೇನೆಗೆ ಮತಚಲಾಯಿಸಿದ್ದೇನೆ’ ಎಂದು ಹೇಳಿದ್ದಾರೆ.

ಕಂಗನಾ ತನ್ನ ಸಂದರ್ಶನದಲ್ಲಿ, ನಾನು ಬಿಜೆಪಿಯನ್ನು ಬೆಂಬಲಿಸುವವಳು, ಆದರೆ ಶಿವಸೇನೆಗೆ ಯಾಕೆ ಮತ ಹಾಕಬೇಕು? ಶಿವಸೇನೆ ಮತ್ತು ಬಿಜೆಪಿ ಮೈತ್ರಿಯಾಗಿದ್ದರಿಂದ ಬಾಂದ್ರಾದಲ್ಲಿ ಬಿಜೆಪಿಯ ಆಯ್ಕೆ ಇಲ್ಲದೆ ಶಿವಸೇನೆಗೆ ಮತ ಹಾಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಂಗನಾಗೆ ಬೆಂಬಲ ನೀಡಲು ಮುಂಬೈಗೆ ಆಗಮಿಸಿತೆ ಕರ್ಣಿಸೇನಾ!: ಸತ್ಯಾಸತ್ಯತೆ ಏನು..?

ಫ್ಯಾಕ್ಟ್‌‌ಚೆಕ್

ಇಂಡಿಯಾ ಟುಡೆ ಉಪ ಸಂಪಾದಕ ಕಮಲೇಶ್ ಸುತಾರ್ ಕಂಗನಾ ಅವರ ಪ್ರತಿಪಾದನೆ ಸುಳ್ಳು ಎಂದು ಕೆಲವು ವಿಚಾರಗಳ ಬಗ್ಗೆ ಗಮನ ಸೆಳೆದಿದ್ದಾರೆ. “ಮಹಾರಾಷ್ಟ್ರ ಚುನಾವಣಾ ಆಯೋಗದ ಪ್ರಕಾರ, ಕಂಗನಾ ಬಾಂದ್ರಾ ಪಶ್ಚಿಮ ಕ್ಷೇತ್ರದ ಮತದಾರಾಗಿದ್ದಾರೆ. ಇಲ್ಲಿ 2019 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಆಶಿಶ್ ಶೆಲಾರ್ ಶಿವಸೇನೆ-ಬಿಜೆಪಿ ಅಭ್ಯರ್ಥಿಯಾಗಿದ್ದರು. ಅಷ್ಟೇ ಅಲ್ಲದೆ ಲೋಕಸಭೆಯಲ್ಲಿ ಕೂಡಾ ಬಿಜೆಪಿಯ ಪೂನಂ ಮಹಾಜನ್ ಇಲ್ಲಿ ಸ್ಫರ್ಧಿಸಿ ಜಯಗಳಿಸಿದರು” ಎಂದು ಹೇಳಿದ್ದರು.

 

ಇದನ್ನೂ ಓದಿ: ಮುಸ್ಲಿಂ ಮದುವೆಯಲ್ಲಿ ಪಾಲ್ಗೊಂಡಿದ್ದಕ್ಕೆ ಕೇರಳದ RSS ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಯಿತೇ?

ಕಮಲೇಶ್‌ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಕಮಲೇಶ್‌ ಸುಳ್ಳು ಹರಡುತ್ತಿದ್ದಾರೆ, ಆದ್ದರಿಂದ ಕಾನೂನು ಕ್ರಮದ ನೋಟಿಸು ಕಳುಹಿಸುತ್ತೇನೆ ಎಂದ ಕಂಗನಾ, “ನಾನು ಲೋಕಸಭಾ ಚುನಾವಣೆಯ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿದ್ದೇನೆ ಆದರೆ ಅವರು ಉದ್ದೇಶಪೂರ್ವಕವಾಗಿ ವಿಧಾನಸಭಾ ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಅವರು ಬರೆದಿದ್ದಾರೆ.

ಇದಾಗ್ಯೂ, ಕಂಗನಾ ಶಿವಸೇನೆಗೆ ಬಂಲವಂತವಾಗಿ ಮತ ಚಲಾಯಿಸಿದ್ದೇನೆ ಎಂಬ ಹೇಳಿಕೆಯು ನಿಜವಲ್ಲ. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳೆರಡರಲ್ಲೂ ಕಂಗನಾ ಮತ ಚಲಾಯಿಸಲು ನೋಂದಾಯಿಸಲಾಗಿರುವ ಕ್ಷೇತ್ರಗಳ ಅಭ್ಯರ್ಥಿಗಳು ಬಿಜೆಪಿಗೆ ಸೇರಿದವರಾಗಿದ್ದು, ಇಲ್ಲಿ ಚುನಾವಣೆಯ ವೇಳೆ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು.

ಲೋಕಸಭಾ ಚುನಾವಣೆ

2019 ರ ಲೋಕಸಭಾ ಚುನಾವಣೆಯಲ್ಲಿ ಕಂಗನಾ ಖಾರ್‌ನ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ್ದರು.

ಖಾರ್ ಮುಂಬೈನ ಉಪನಗರ ಜಿಲ್ಲೆಯಲ್ಲಿದ್ದು, ಇದು ಮುಂಬೈ ನಾರ್ತ್ ಸೆಂಟ್ರಲ್ ಲೋಕಸಭಾ ಕ್ಷೇತ್ರದ ವಾಂಡ್ರೆ (ಬಾಂದ್ರಾ) ಪಶ್ಚಿಮ ವಿಧಾನಸಭಾ ಕ್ಷೇತ್ರದ ಭಾಗವಾಗಿದೆ. ‘General Information>List of Polling Stations’ ಅಡಿಯಲ್ಲಿ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲಿ ಓದುಗರು ಇದನ್ನು ಸ್ವಯಂ ಪರಿಶೀಲಿಸಬಹುದು.

ಇದನ್ನೂ ಓದಿ: ಕೇಂದ್ರ ಸರ್ಕಾರ ಪ್ರತಿ ಹೆಣ್ಣು ಮಕ್ಕಳಿಗೆ ಮಾಸಿಕ ತಲಾ 2000 ರೂ. ನೀಡುತ್ತಿರುವುದು ನಿಜವೆ?

ಮುಂಬೈ ನಾರ್ತ್ ಸೆಂಟ್ರಲ್‌ನಿಂದ ಬಿಜೆಪಿ-ಶಿವಸೇನೆ ಮೈತ್ರಿಯ ಅಭ್ಯರ್ಥಿ ಬಿಜೆಪಿಯ ಪೂನಂ ಮಹಾಜನ್ ವಿಜಯಶಾಲಿಯಾಗಿದ್ದರು.

ಆದ್ದರಿಂದ ಮೈತ್ರಿಯಿಂದಾಗಿ ತಾನು ಮನಸ್ಸಿಲ್ಲದೆ ಶಿವಸೇನೆಗೆ ಮತ ಚಲಾಯಿಸಿದ್ದೇನೆ ಎಂದು ಕಂಗನಾ ರಾಣಾವತ್‌ ಹೇಳಿರುವುದು ಸುಳ್ಳಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಕಾಳಿ ದೇವಿಯ ಮೂರ್ತಿ ಸುಟ್ಟರೆ?

ವಿಧಾನಸಭಾ ಚುನಾವಣೆ

ಅಮರ್ ಉಜಲಾ ವರದಿಯ ಪ್ರಕಾರ, 2019 ರ ಅಕ್ಟೋಬರ್‌ನಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಂಗನಾ ಮುಂಬೈನಲ್ಲಿ ಇರಲಿಲ್ಲ. ಆದರೆ ಅವರು ಅಲ್ಲಿದ್ದು ಮತ ಚಲಾಯಿಸಿದ್ದರೂ ಅದು ಬಿಜೆಪಿಯ ರಾಜಕಾರಣಿಗೆ ಆಗಿರುತ್ತಿತ್ತು. ಅಂದು ಬಿಜೆಪಿಯ ಆಶಿಶ್ ಶೆಲಾರ್ ಬಾಂದ್ರಾ ವೆಸ್ಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ-ಶಿವಸೇನೆಯ ಮೈತ್ರಿ ಅಭ್ಯರ್ಥಿಯಾಗಿದ್ದರು ಹಾಗೂ ಗೆದ್ದರು.

ಕಂಗನಾ ಟಿವಿ ಸಂದರ್ಶನದಲ್ಲಿ ಸುಳ್ಳು ಹೇಳಿಕೆ ನೀಡಿದ್ದಲ್ಲದೆ, ಅದನ್ನು ಸಮರ್ಥಿಸಲು ಹೋಗಿ ಸಾಮಾಜಿಕ ಜಾಲತಾಣದಲ್ಲಿ ಕೂಡಾ ಸುಳ್ಳು ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ವೈರಲ್ ಚಿತ್ರದಲ್ಲಿರುವ ಮಹಿಳೆ ’ಲವ್‌ ಜಿಹಾದ್’ ಪ್ರಕರಣದಲ್ಲಿ ಹತ್ಯೆ ಆಗಿದ್ದು ನಿಜವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read