Homeಅಂಕಣಗಳುಆಡಿಯೋ ಬಿಚ್ಚಿಡುತ್ತಿರುವ ಸತ್ಯ; ಮೋದಿ-ಶಾ ಪ್ರಸ್ತಾಪಕ್ಕೆ ಬಿಜೆಪಿಗೆ ಖೇದವೇ ಇಲ್ಲ!

ಆಡಿಯೋ ಬಿಚ್ಚಿಡುತ್ತಿರುವ ಸತ್ಯ; ಮೋದಿ-ಶಾ ಪ್ರಸ್ತಾಪಕ್ಕೆ ಬಿಜೆಪಿಗೆ ಖೇದವೇ ಇಲ್ಲ!

- Advertisement -
- Advertisement -

ಪೀಕೆ |
ಒಂದು ಆಡಿಯೋ ಸುತ್ತ ನಡೆಯುತ್ತಿರುವ ಒಟ್ಟೂ ಪ್ರಹಸನ ಬಿಚ್ಚಿಡುತ್ತಿರುವ ಸತ್ಯ ಏನೆಂದರೆ, ಆಪರೇಷನ್ ಕಮಲಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬೆಂಬಲವಿದೆ ಎಂಬುದನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಒಪ್ಪಿಕೊಳ್ಳುತ್ತಿದ್ದಾರೆ ಬಿಜೆಪಯ ನಾಯಕರು!

ಸದನದಲ್ಲಿ ಈ ಆಡಿಯೋ ವಿಚಾರವಾಗಿ ಮಾತನಾಡಿದ ಬಿಜೆಪಿಯ ಎಲ್ಲ ನಾಯಕರು ಪದೇ ಪದೇ, ‘ಸ್ಪೀಕರ್ ರಮೇಶಕುಮಾರವರೇ, ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ತಮ್ಮ ಹೆಸರು ಉಲ್ಲೇಖವಾದುದಕ್ಕೆ ನಮಗೂ ಬೇಜಾರಾಗಿದೆ’ ಎಂದು ಸ್ಪೀಕರ್ ಅವರ ಪ್ರಾಮಾಣಿಕತೆಗೆ ಸರ್ಟಿಫಿಕೆಟ್ ಕೊಡುತ್ತಿದ್ದಾರೆ. ಆದರೆ, ಆ ಆಡಿಯೋದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೆಸರೂ ಪ್ರಸ್ತಾಪವಾಗಿದೆಯಲ್ಲ? ಆ ಬಗ್ಗೆ ಇಲ್ಲಿವರೆಗೂ ಯಾವ ಬಿಜೆಪಿ ನಾಯಕನೂ ಖೇದ ವ್ಯಕ್ತಪಡಿಸಿಲ್ಲ, ನೊಂದುಕೊಂಡಿಲ್ಲ. ಅಂದರೆ ಅವರಿಗೆ ಪಕ್ಕಾ ಗೊತ್ತಿದೆ: ಮೋದಿ-ಶಾ ಬೆಂಬಲದಿಂದಲೇ ಇದೆಲ್ಲ ನಡೆಯುತ್ತಿದೆ ಎಂಬುದು. ಆದರೆ ಬಾಹ್ಯವಾಗಿಯಾದರೂ ಈ ಕುರಿತಂತೆ ಮಾತಾಡಬಹುದಿತ್ತಲ್ಲ? ಎಂಟು ತಿಂಗಳಿಂದ ನಡೆದಿರುವ ಅಸಹ್ಯ ಆಪರೇಷನ್ ಕಮಲದಲ್ಲಿ ತಮ್ಮ ರಾಷ್ಟ್ರೀಯ ನಾಯಕರೂ ಭಾಗಿ ಎಂಬುದು ಮನದಟ್ಟಾಗಿರುವುದರಿಂದ ಅರ‍್ಯಾರಿಗೂ ಆಡಿಯೊದಲ್ಲಿ ಬಂದ ‘ಸತ್ಯ’ವನ್ನು ವಿರೋಧಿಸಲು ಆಗುತ್ತಿಲ್ಲವೇ?

ಇಲ್ಲಿ ಒಂದಿಷ್ಟು ಅಂಶಗಳನ್ನು ಸುಮ್ಮನೆ ಗಮನಿಸಿ:

* ಸೋಮವಾರ ಸ್ಪೀಕರ್ ಈ ವಿಷಯ ಎತ್ತಿದ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಮಾಧುಸ್ವಾಮಿ, ‘ಎಲ್ಲೋ ಯಾರೋ ಮಾತಾಡಿದ್ದಕ್ಕೆ ತಾವು (ಸ್ಪೀಕರ್) ನೊಂದುಕೊಳ್ಳಬೇಡಿ. ನಿಮ್ಮ ಬಗ್ಗೆ ನಮಗೆಲ್ಲ ಗೌರವವಿದೆ. ಏನೋ ಅಚಾತುರ್ಯ ನಡೆದಿದೆ, ಅದನ್ನು ಮರೆತುಬಿಡಿ, ಮನ್ನಿಸಿಬಿಡಿ’ ಎಂದರು. ಅಂದರೆ ಈ ‘ಅಚಾತುರ್ಯ’ ನಡೆದಿರುವುದು ಸತ್ಯ ಎಂದು ಪರೋಕ್ಷವಾಗಿ ಅವರು ಒಪ್ಪಿಕೊಂಡರು. ಆದರೆ ರಮೇಶಕುಮಾರ್ ಹೆಸರು ಪ್ರಸ್ತಾಪವಾದುದಕ್ಕೆ ಕಳವಳ ವ್ಯಕ್ತಪಡಿಸಿದ ಅವರಿಗೆ, ಮೋದಿ-ಶಾ ಹೆಸರು ಪ್ರಸ್ತಾಪವಾಗಿದ್ದರ ಬಗ್ಗೆ ಯಾವ ಬೇಜಾರೂ ಇಲ್ಲವೆಂದಾಯಿತಲ್ಲ? ಅವತ್ತು ಮಾತಾಡಿದ ಬಿಜೆಪಿಯ ಎಲ್ಲ ನಾಯಕರೂ ಸ್ಪೀಕರ್ ಹೆಸರು ಬಂದುದಕ್ಕೆ ಬೇಸರ ವ್ಯಕ್ತಪಡಿಸಿದರೆ ಹೊರತು ತಮ್ಮ ರಾಷ್ಟ್ರೀಯ ನಾಯಕರ ಹೆಸರು ಪ್ರಸ್ತಾಪವಾದುದಕ್ಕೆ ಖೇದ ಪಡಲೇ ಇಲ್ಲ!

* ಮಂಗಳವಾರ, ಬುಧವಾರ ಎಸ್‌ಐಟಿ ತನಿಖೆಗೆ ವಿರೋಧ ವ್ಯಕ್ತ ಮಾಡುವಾಗಲೂ, ಆಡಿಯೋದ ಸಣ್ಣ ಭಾಗ ಮಾತ್ರ ರಿಲೀಸ್ ಮಾಡಲಾಗಿದೆ ಎಂದರೆ ಹೊರತು ಅದು ನಕಲಿ ರಂದೂ ಗಟ್ಟಿಯಾಗಿ ಪ್ರತಿಪಾದಿಸಲೇ ಇಲ್ಲ!

* ಶರಣಗೌಡ ಎಂಬ 37 ವರ್ಷದ ಜೆಡಿಎಸ್ ಕಾರ್ಯಕರ್ತನೊಂದಿಗೆ ಒಂದೆರಡು ತಾಸು ಮಾತಾಡಿದ್ದಾರಂತೆ ಯಡಿಯೂರಪ್ಪ ಮತ್ತು ಶಿವನಗೌಡ ನಾಯಕ್. ಆ ‘ಹುಡುಗ’ನ ಜೊತೆ ಮಾತಾಡಿದ ಪೂರ್ತಿ ಆಡಿಯೋ ಬಿಡಿಗಡೆಯಾದರೂ, ಈಗ ರಲೀಸ್ ಆಗಿರುವ ವಿಷಯ ಸತ್ಯ ಎಂಬುದು ಗ್ಯಾರಂಟಿಯಾಯಿತಲ್ಲ. ಅಷ್ಟಕ್ಕೂ ಶರಣಗೌಡನಿಗೆ ಪ್ರಜಾಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ ಯಡಿಯೂರಪ್ಪ ಬೋಧಿಸುತ್ತ ಕುಳಿತಿದ್ದರೆ? ಮಧ್ಯರಾತ್ರಿಯಲ್ಲಿ ದೇವದುರ್ಗದ ಶಾಸಕ ಶಿವನಗೌಡ, ಸರ್ಕಾರ ತಾನಾಗೇ ಬೀಳುತ್ತೆ. ಆಗ ನಮ್ಮ ಜೊತೆ ನೀನು ಇರು ಸಾಕು. ಎಲ್ಲ ನ್ಯಾಯಯುತವಾಗಿಯೇ ನಡೆಯಲಿದೆ/ ಎಂದು ಶರಣಗೌಡನಿಗೆ ಉಪದೇಶ ಮಾಡುತ್ತಿದ್ದರೆ?

ಹೀಗೆ ಸುಮ್ಮನೆ ಸರಳ ತರ್ಕ ಉಪಯೋಗಿಸಿದರೂ, ಬಿಜೆಪಿಯ ಹಿಪಾಕ್ರಸಿ ಬಯಲಾಗುತ್ತ ಹೋಗುತ್ತದೆ. ಆಡಿಯೋದಲ್ಲಿರುವ ಧ್ವನಿ ತನ್ನದೇ ಎಂದ ಮೇಲೆ, ಎಸ್‌ಐಟಿ ತನ್ನನ್ನು ಹಣಿಯಲಿದೆ ಎಂಬುದು ಖಾತ್ರಿಯಾಗಿದ್ದರಿಂದಲೇ ಯಡಿಯೂರಪ್ಪ ಈಗ ಸದಸನದ ಕಲಾಪಗಳನ್ನೆಲ್ಲ ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಇದರಲ್ಲಿ ಮಾಧುಸ್ವಾಮಿಯಂತವರು ಸಂಪೂರ್ಣ ಬೆತ್ತಲಾಗುತ್ತಿದ್ದಾರೆ. ಯಡಿಯೂರಪ್ಪ, ಶಿವನಗೌಡರನ್ನು ಬಿಡಿ, ಅವರು ಎಂದೋ ವಿವಸ್ತ್ರರಾಗಿ ಬಿಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...