Homeಅಂಕಣಗಳುಕುಮಾರಣ್ಣ ಇಳದ್ರೆ ಯಾರಿಗೂ ಬೇಜಾರಾಗಲ್ಲ ಸಾ?

ಕುಮಾರಣ್ಣ ಇಳದ್ರೆ ಯಾರಿಗೂ ಬೇಜಾರಾಗಲ್ಲ ಸಾ?

- Advertisement -
- Advertisement -

| ಯಾಹೂ |

ಹಠಾತ್ತನೆ ಮನೆ ಕುಸಿಯತೊಡಗಿ ಜೆಡಿಎಸ್ ಕುಟೀರದ ಗೋಡೆ ಬಿರುಕು ಕಾಣಿಸಿಕೊಂಡ ಕೂಡಲೇ ಅನಾಹುತದ ನಿಖರತೆಯನ್ನು ಗುರುತಿಸಿದ ಎಡೂರಪ್ಪ, ನಾನು ಸನ್ಯಾಸಿಯಲ್ಲ ಎಂದು ಘೋಷಿಸಿಬಿಟ್ಟಿದ್ದಾರಲ್ಲಾ. ಅರೆ ಸಮ್ಮಿಶ್ರ ಸಂಸಾರ ಬಿಗಡಾಯಿಸಿಕೊಂಡು ಅಲ್ಲಿಂದ ಹೊರಬಿದ್ದವರೊಂದಿಗೆ ಕೂಡಿಕೆ ಮಾಡಿಕೊಂಡು ಸಂಸಾರ ಹೂಡುವ ಬಗ್ಗೆ, ಎಡೂರಪ್ಪನನ್ನು ತಡೆದವರಾರು. ಎಡೂರಪ್ಪನ ಬಾಯಲ್ಲಿ ಇಂತಹ ಮಾತು ಸುಮ್ಮಸುಮ್ಮನೆ ಬರಲಾರದು. ಯಾರೊ ಚಡ್ಡಿಗಳ ಪೈಕಿ ಎಡೂರಪ್ಪನಿಗೆ ವಯಸ್ಸಾಯ್ತು ಎಂದಿರಬಹುದು ಅಥವಾ ಅವರ ಸರದಿ ಮುಗಿಯಿತಲ್ಲಾ ಎಂದಿರಬಹುದು. ಈ ಎಲ್ಲಾ ವಾಸನೆ ಗ್ರಹಿಸಿದ ಎಡೂರಪ್ಪ, ನಾನು ಸನ್ಯಾಸಿಯಲ್ಲ ಸಂಸಾರಿ ಎಂದಿರುವುದು. ಅದಿರಲಿ, ಎಡೂರಪ್ಪ ಆಧುನಿಕ ಜಗತ್ತಿನ ಸನ್ಯಾಸಿಗಳನ್ನ ನೋಡಿಲ್ಲ ಅನ್ನಿಸುತ್ತದೆ. ಅವರೆಲ್ಲಾ ಗುಪ್ತ ಸಮಾಲೋಚನಾ ಪ್ರಿಯರಾಗಿ ಬಹಳ ವರ್ಷಗಳಾದವು. ಉಡುಪಿ ಮಠಗಳನ್ನೆ ಆದರ್ಶವಾಗಿ ಗ್ರಹಿಸಿ ಬದುಕನ್ನು ಇಡಿಯಾಗಿ ಮುಕ್ಕುವ ಕಲೆಯನ್ನು ಕರಗತ ಮಾಡಿಕೊಂಡು ಶತಮಾನವೇ ಸರಿಯಿತು. ತೀರ ಇತ್ತೀಚಿನ ತಾಜಾ ಉದಾಹರಣೆಯೆಂದರೆ ನಮ್ಮ ಸಿರಿಗೆರೆಯ ಶಿವಾಚಾರ್ಯ ಮಹಾಸ್ವಾಮಿಗಳವರು ಪೀಠದ ಸಂವಿಧಾನದ ರೀತಿ ಅರವತ್ತು ವರ್ಷಕ್ಕೆ ಪೀಠಬಿಟ್ಟು, ಹಿಂದೆ ಬಂದ ಮರಿಯನ್ನ ಸ್ಥಾಪಿಸಿ ಪಕ್ಕಕ್ಕೆ ನಿಲ್ಲಬೇಕಿತ್ತು. ಆದರೇನು ಭೂಪ ಇನ್ನ ಅಲ್ಲಾಡಿಲ್ಲ. ಇಂತಿರುವಾಗ ಎಡೂರಪ್ಪ ತಮ್ಮ ರಾಜಕಾರಣದ ಉದಾಹರಣೆಗೆ ನಾನು ಸನ್ಯಾಸಿಯಲ್ಲ ಎಂದಿದ್ದಾರಲ್ಲಾ, ಥೂತ್ತೇರಿ..

ಕರ್ನಾಟಕದ ಇವತ್ತಿನ ಸ್ಥಿತಿಯ ಬಗ್ಗೆ ಯಾರಿಗೆ ಫೋನು ಮಾಡಲಿ, ಕುಮಾರಣ್ಣ ಕನಲಿ ಕೆಂಡವಾಗಿದ್ದಾರೆ, ಸಿದ್ದು ಆತಂಕ ತೋರಿಕೆಯಂತೆ ಕಾಣುತ್ತಿದೆ. ಬಿಜೆಪಿಗಳು ಶುದ್ಧ ಕಿಡಿಗೇಡಿಗಳಂತೆ ಕಾಣುತ್ತಿದ್ದಾರೆ. ವಿಶ್ವನಾಥ್ ಈ ಶತಮಾನದ ಮೀರ್‍ಸಾದಿಕನಂತೆ ಗೋಚರಿಸಿದರೆ, ಕೆ.ಆರ್.ಪೇಟೆ ನಾರಾಯಣಗೌಡ ನಿಜಕ್ಕೂ ನೊಂದಂತೆ ಕಾಣುತ್ತಿದ್ದಾನೆ. ಇವೆಲ್ಲಾ ಸಂಗತಿಗಳನ್ನ ಚರ್ಚಿಸಲು ಸೂಕ್ತ ವ್ಯಕ್ತಿಗಾಗಿ ತಪಾಸಣೆ ಮಾಡುತ್ತಿದ್ದಾಗ ವಾಟಿಸ್ಸೆ ಹೆಸರು ಹೊಳೆಯಬೇಕೆ? ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು…

ರಿಂಗ್‍ಟೋನ್ “ಹೋಗದಿರೀ ಸೋದರರೇ.. ಹೋಗದಿರೀ ಬಂಧುಗಳೇ.. ಮನೆಯನು ತೊರೆದು ಹೋಗುವಿರಾ?” ಹಲೊ ಗುಡಾಪ್ಟರ್ ನೂನ್ ಸರ್”
“ವಾಟಿಸ್ಸೆ ಎಲ್ಲಿದ್ದೀ”
“ಎಲ್ಯಾರ ಇದ್ರೂ ನಿಮ್ಮೆದುರಿಗೆ ನಿಂತಂಗಲವ ಸಾ, ಅದ್ಕೆ ಹಂಡ್ರೆಂಡ್ ರುಪೀಸ್ ಕರೆನ್ಸಿ ಹಾಕ್ಸಿ”
“ಹಾಕುಸ್ತಿನಿ ಕರ್ನಾಟಕದ ರಾಜಕಾರಣ ಏನನ್ನಸ್ತಾ ಅದೆ”
“ಏನಾಗಬೇಕೊ ಅದಾಯ್ತ ಅದೆ ಸಾ”
“ಎಮ್ಮೆಲ್ಲೆಗಳ ರಾಜೀನಾಮೆ ಬಗ್ಗೆ ಏನೇಳ್ತಿ”
“ಅವೊಂತರಾ ಬ್ರಾಂಬ್ರು ಕೇರಿಯ ನಾಯಿದ್ದಂಗೆ ಸಾ”
“ಅಂದ್ರೆ”
“ಈ ಬ್ರಾಂಬ್ರು ಕೇರಿ ನಾಯಿಗಳು ಅಕಸ್ಮಾತ್ ಶೂದ್ರ ಕೇರಿಗೋಯ್ತವೆ. ಅಲ್ಲಿ ಚರಂಡೀಲಿ ಕುರಿ, ಆಡಿನ ಮೂಳೆ, ಕೋಳಿ ಮೂಳೆ ರುಚಿ ನೋಡಿದೂ ಅಂದ್ರೇ ತಿರಗಿ ಬ್ರಾಂಬ್ರು ಕೇರಿಗೋಗದಿಲ್ಲ”
“ಅಂಗಂತಿಯಾ”
“ಹೂ ಮತ್ತೆ. ಆ ಬಿಜೆಪಿಗಳು ಕೊಡೋ ದುಡ್ಡಿಗೆ, ಅಧಿಕಾರಕ್ಕೆ, ಮನಸು ಕೊಟ್ಟವೆ ಅನ್ನಸ್ತದೆ ಅದ್ಕೆ ಹೋದೊ ಬುಡಿ ಅತ್ತಗೆ”
“ಹೋಗಿಲ್ಲ ಇನ್ನ ಇಲ್ಲೆ ಇದ್ದಿವಿ ಅಂತಾರಲ್ಲಾ”
“ಇನ್ನ ಇಲ್ಲೇ ಇದ್ದಿವಿ ಅಂದ್ರೆ ಅವುರಿಗೇನಾಗ್ಯದೆ ಕೇಳಬೇಕು ಸಾ.”
“ಯಾರು ಕೇಳಬೇಕು.”
“ಇನ್ಯಾರು ಮುಖ್ಯಮಂತ್ರಿನೇ ಕೇಳಬೇಕು. ಇವುನು ಗ್ರಾಮ ವಾಸ್ತವ್ಯಕ್ಕೋದ್ರೆ ಹಿಂಗೆ ಆಗದು”
“ಈಗೇನಾಗಬವುದು”
“ಅಲ್ಲ ಸಾ, ಬೆಂಗಳೂರಲ್ಲಿರೊ ನೀವು ಹೇಳಬೇಕು.”
“ಜನಗಳಭಿಪ್ರಾಯ ಹೇಳು.”
“ಜನಗಳು ವಿಶ್ವನಾಥನ್ನ ಉಗೀತಾ ಅವುರೆ ಸಾ”
“ಯಾಕೆ?”
“ಯಾಕೆ ಅಂದ್ರೆ ಸಿದ್ದರಾಮಯ್ಯ ಇವುನೇಗ್ತಿ ನೋಡಿ ಕುರಿ ಕ್ವಟಗೆ ಒಳಿಕೆ ನೂಕಿದ್ದ. ದ್ಯಾವೇಗೌಡ ಹೋಗಿ ಕರದು ತಲೆ ಸವುರಿದ. ಆಗ ತನ್ನ ತಲೇನೆ ಸವುರಿಕೊಂಡಂಗಾಯ್ತು. ಕೂಡ್ಳೆ ಪಾರ್ಟಿ ಪ್ರೆಸಿಡೆಂಟ್ ಮಾಡಿ ಎಮ್ಮೆಲ್ಲೆ ಮಾಡಿದ್ರೆ, ಇವುನು ಕೈ ಕೊಡದ ಅಂತ ಅವುರೆ”
“ನಿನಗೇನನ್ಸುತ್ತೆ”
“ಮಂತ್ರಿ ಮಾಡಿದ್ರೆ ಖಾತೆ ಚನ್ನಾಗಿ ನಿಭಾಯಿಸೋನು, ಅಂಗೆ ನೋಡಿದ್ರೆ ಸಾ.ರಾ. ಮಯೇಶ, ಪುಟ್ಟರಾಜ, ತಮ್ಮಣ್ಣ ಇಂತ ಸ್ಕ್ರಾಪ್ ಮಾಲಿಗಿಂತ ವಿಶ್ವನಾಥ್ ಯೋಗ್ಯ, ಈಗ ಮಾತ್ರ ಅಯೋಗ್ಯ”
“ಕೆ.ಆರ್.ಪೇಟೆ ನಾರಾಯಣಗೌಡನ ಬಗ್ಗೆ ಏನೇಳ್ತಿ’.’
“ಅವುನು ಬಾಂಬೆಯಿಂದ ತಪ್ಪಿಸಿಕೊಂಡು ಬಂದ ಮಾರವಾಡಿ ಹುಡುಗನಂಗೆ ಕಾಣ್ತನೆ ಸಾರ್. ಜೆಡಿಎಸ್‍ಗೆ ಬೇಕಾದಷ್ಟು ಮಾಡ್ಯವುನೆ, ಚುಂಚನಗಿರಿ ಮಠಕ್ಕೆ ಬೊಂಬಾಯಿಲೆ ಜಾಗ ಕೊಡಿಸ್ಯಾವುನೆ, ಅಂಥೊನ್ನ ದ್ಯಾವೇಗೌಡನ ಮನೆವ್ರು ಚಪ್ರಾಸಿಯಂಗೆ ನ್ಯಡಿಸಿಕೊಬಾರದಿತ್ತು.”
“ಒಟ್ಟಾರೆ ಈ ರಾಜೀನಾಮೆ ಪ್ರಕರಣ ಏನನ್ನಸುತ್ತೆ”
“ನನಿಗೇನನ್ನಸ್ತದೆ ಅಂದ್ರೆ, ಒಂದು ಅವಿಭಕ್ತ ಕುಟುಂಬದಲ್ಲಿ ಅತೃಪ್ತ ಜನ ಏನೇನೊ ನಾಟಗ ಮಾಡ್ತರೆ. ಹೊಟ್ಟೆನೊವ್ವು ಅಂತರೆ, ಬೇಧಿ ಅಂತರೆ, ಹಲ್ಲುನೋವು ಅಂತರೆ, ಸುಮ್ಮನೆ ಮೂಲೇಲಿ ಮನಿಕತ್ತರೆ, ಅದು ಅವುರ ಪ್ರತಿಭಟನೆ ಸಾ. ಈಗ್ಲು ನ್ಯಡದಿರದು ಈ ಕುಮಾರಸ್ವಾಮಿ ಬ್ಯಾಡ ಅನ್ನೊ ಪ್ರತಿಭಟನೆ ಅಷ್ಟೆ ಸಾ”
“ಅಂಗಾರೆ ಕುಮಾರಣ್ಣ ಬ್ಯಾಡವಾ”
“ಇವುನು ಹೋಯ್ತನೆ ಅಂದ್ರೆ ಯಾರಿಗೂ ಫೀಲಾಗಲ್ಲ ಸಾರ್, ಯಾಕಂದ್ರೆ ಇವುರಿಂದ್ಲೆ ಹಾರವರು ಲಕ್ಕಪತಿಗಳಾದ್ರು, ಅದೇನು ಯಜ್ಞ – ಅದೇನು ಯಾಗ, ಅದೇನು ಹೋಮ, ಅದಿರ್ಲಿ ಯಾರಾರ ತಲೆಯಿದ್ದೋರು, ನಾಮಪತ್ರ ತಗಂಡೋಗಿ ಶೃಂಗೇರೀಲಿ ಪೂಜೆ ಮಾಡಿಸಿಗಂಡು ಬತ್ತರ ಸಾ”
“ಇಲ್ಲ ಬುಡು ಇತಿಹಾಸದಲ್ಲಿ ಯಾರು ಅಂಗೆ ಮಾಡಿಲ್ಲ”
“ದ್ಯಾವೇಗೌಡ್ರು ಫ್ಯಾಮಿಲಿ ಪವರಿಂದ ಇಳದ್ರೆ ಬ್ರಾಂಬ್ರಿಗೆ ಲಾಸಾಗಬಹುದು. ನನಿಗಂತು ಯಾವ ನಷ್ಟನೂ ಇಲ್ಲ ಸಾ”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...