Homeಅಂಕಣಗಳುಕುಮಾರಣ್ಣ ಇಳದ್ರೆ ಯಾರಿಗೂ ಬೇಜಾರಾಗಲ್ಲ ಸಾ?

ಕುಮಾರಣ್ಣ ಇಳದ್ರೆ ಯಾರಿಗೂ ಬೇಜಾರಾಗಲ್ಲ ಸಾ?

- Advertisement -
- Advertisement -

| ಯಾಹೂ |

ಹಠಾತ್ತನೆ ಮನೆ ಕುಸಿಯತೊಡಗಿ ಜೆಡಿಎಸ್ ಕುಟೀರದ ಗೋಡೆ ಬಿರುಕು ಕಾಣಿಸಿಕೊಂಡ ಕೂಡಲೇ ಅನಾಹುತದ ನಿಖರತೆಯನ್ನು ಗುರುತಿಸಿದ ಎಡೂರಪ್ಪ, ನಾನು ಸನ್ಯಾಸಿಯಲ್ಲ ಎಂದು ಘೋಷಿಸಿಬಿಟ್ಟಿದ್ದಾರಲ್ಲಾ. ಅರೆ ಸಮ್ಮಿಶ್ರ ಸಂಸಾರ ಬಿಗಡಾಯಿಸಿಕೊಂಡು ಅಲ್ಲಿಂದ ಹೊರಬಿದ್ದವರೊಂದಿಗೆ ಕೂಡಿಕೆ ಮಾಡಿಕೊಂಡು ಸಂಸಾರ ಹೂಡುವ ಬಗ್ಗೆ, ಎಡೂರಪ್ಪನನ್ನು ತಡೆದವರಾರು. ಎಡೂರಪ್ಪನ ಬಾಯಲ್ಲಿ ಇಂತಹ ಮಾತು ಸುಮ್ಮಸುಮ್ಮನೆ ಬರಲಾರದು. ಯಾರೊ ಚಡ್ಡಿಗಳ ಪೈಕಿ ಎಡೂರಪ್ಪನಿಗೆ ವಯಸ್ಸಾಯ್ತು ಎಂದಿರಬಹುದು ಅಥವಾ ಅವರ ಸರದಿ ಮುಗಿಯಿತಲ್ಲಾ ಎಂದಿರಬಹುದು. ಈ ಎಲ್ಲಾ ವಾಸನೆ ಗ್ರಹಿಸಿದ ಎಡೂರಪ್ಪ, ನಾನು ಸನ್ಯಾಸಿಯಲ್ಲ ಸಂಸಾರಿ ಎಂದಿರುವುದು. ಅದಿರಲಿ, ಎಡೂರಪ್ಪ ಆಧುನಿಕ ಜಗತ್ತಿನ ಸನ್ಯಾಸಿಗಳನ್ನ ನೋಡಿಲ್ಲ ಅನ್ನಿಸುತ್ತದೆ. ಅವರೆಲ್ಲಾ ಗುಪ್ತ ಸಮಾಲೋಚನಾ ಪ್ರಿಯರಾಗಿ ಬಹಳ ವರ್ಷಗಳಾದವು. ಉಡುಪಿ ಮಠಗಳನ್ನೆ ಆದರ್ಶವಾಗಿ ಗ್ರಹಿಸಿ ಬದುಕನ್ನು ಇಡಿಯಾಗಿ ಮುಕ್ಕುವ ಕಲೆಯನ್ನು ಕರಗತ ಮಾಡಿಕೊಂಡು ಶತಮಾನವೇ ಸರಿಯಿತು. ತೀರ ಇತ್ತೀಚಿನ ತಾಜಾ ಉದಾಹರಣೆಯೆಂದರೆ ನಮ್ಮ ಸಿರಿಗೆರೆಯ ಶಿವಾಚಾರ್ಯ ಮಹಾಸ್ವಾಮಿಗಳವರು ಪೀಠದ ಸಂವಿಧಾನದ ರೀತಿ ಅರವತ್ತು ವರ್ಷಕ್ಕೆ ಪೀಠಬಿಟ್ಟು, ಹಿಂದೆ ಬಂದ ಮರಿಯನ್ನ ಸ್ಥಾಪಿಸಿ ಪಕ್ಕಕ್ಕೆ ನಿಲ್ಲಬೇಕಿತ್ತು. ಆದರೇನು ಭೂಪ ಇನ್ನ ಅಲ್ಲಾಡಿಲ್ಲ. ಇಂತಿರುವಾಗ ಎಡೂರಪ್ಪ ತಮ್ಮ ರಾಜಕಾರಣದ ಉದಾಹರಣೆಗೆ ನಾನು ಸನ್ಯಾಸಿಯಲ್ಲ ಎಂದಿದ್ದಾರಲ್ಲಾ, ಥೂತ್ತೇರಿ..

ಕರ್ನಾಟಕದ ಇವತ್ತಿನ ಸ್ಥಿತಿಯ ಬಗ್ಗೆ ಯಾರಿಗೆ ಫೋನು ಮಾಡಲಿ, ಕುಮಾರಣ್ಣ ಕನಲಿ ಕೆಂಡವಾಗಿದ್ದಾರೆ, ಸಿದ್ದು ಆತಂಕ ತೋರಿಕೆಯಂತೆ ಕಾಣುತ್ತಿದೆ. ಬಿಜೆಪಿಗಳು ಶುದ್ಧ ಕಿಡಿಗೇಡಿಗಳಂತೆ ಕಾಣುತ್ತಿದ್ದಾರೆ. ವಿಶ್ವನಾಥ್ ಈ ಶತಮಾನದ ಮೀರ್‍ಸಾದಿಕನಂತೆ ಗೋಚರಿಸಿದರೆ, ಕೆ.ಆರ್.ಪೇಟೆ ನಾರಾಯಣಗೌಡ ನಿಜಕ್ಕೂ ನೊಂದಂತೆ ಕಾಣುತ್ತಿದ್ದಾನೆ. ಇವೆಲ್ಲಾ ಸಂಗತಿಗಳನ್ನ ಚರ್ಚಿಸಲು ಸೂಕ್ತ ವ್ಯಕ್ತಿಗಾಗಿ ತಪಾಸಣೆ ಮಾಡುತ್ತಿದ್ದಾಗ ವಾಟಿಸ್ಸೆ ಹೆಸರು ಹೊಳೆಯಬೇಕೆ? ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು…

ರಿಂಗ್‍ಟೋನ್ “ಹೋಗದಿರೀ ಸೋದರರೇ.. ಹೋಗದಿರೀ ಬಂಧುಗಳೇ.. ಮನೆಯನು ತೊರೆದು ಹೋಗುವಿರಾ?” ಹಲೊ ಗುಡಾಪ್ಟರ್ ನೂನ್ ಸರ್”
“ವಾಟಿಸ್ಸೆ ಎಲ್ಲಿದ್ದೀ”
“ಎಲ್ಯಾರ ಇದ್ರೂ ನಿಮ್ಮೆದುರಿಗೆ ನಿಂತಂಗಲವ ಸಾ, ಅದ್ಕೆ ಹಂಡ್ರೆಂಡ್ ರುಪೀಸ್ ಕರೆನ್ಸಿ ಹಾಕ್ಸಿ”
“ಹಾಕುಸ್ತಿನಿ ಕರ್ನಾಟಕದ ರಾಜಕಾರಣ ಏನನ್ನಸ್ತಾ ಅದೆ”
“ಏನಾಗಬೇಕೊ ಅದಾಯ್ತ ಅದೆ ಸಾ”
“ಎಮ್ಮೆಲ್ಲೆಗಳ ರಾಜೀನಾಮೆ ಬಗ್ಗೆ ಏನೇಳ್ತಿ”
“ಅವೊಂತರಾ ಬ್ರಾಂಬ್ರು ಕೇರಿಯ ನಾಯಿದ್ದಂಗೆ ಸಾ”
“ಅಂದ್ರೆ”
“ಈ ಬ್ರಾಂಬ್ರು ಕೇರಿ ನಾಯಿಗಳು ಅಕಸ್ಮಾತ್ ಶೂದ್ರ ಕೇರಿಗೋಯ್ತವೆ. ಅಲ್ಲಿ ಚರಂಡೀಲಿ ಕುರಿ, ಆಡಿನ ಮೂಳೆ, ಕೋಳಿ ಮೂಳೆ ರುಚಿ ನೋಡಿದೂ ಅಂದ್ರೇ ತಿರಗಿ ಬ್ರಾಂಬ್ರು ಕೇರಿಗೋಗದಿಲ್ಲ”
“ಅಂಗಂತಿಯಾ”
“ಹೂ ಮತ್ತೆ. ಆ ಬಿಜೆಪಿಗಳು ಕೊಡೋ ದುಡ್ಡಿಗೆ, ಅಧಿಕಾರಕ್ಕೆ, ಮನಸು ಕೊಟ್ಟವೆ ಅನ್ನಸ್ತದೆ ಅದ್ಕೆ ಹೋದೊ ಬುಡಿ ಅತ್ತಗೆ”
“ಹೋಗಿಲ್ಲ ಇನ್ನ ಇಲ್ಲೆ ಇದ್ದಿವಿ ಅಂತಾರಲ್ಲಾ”
“ಇನ್ನ ಇಲ್ಲೇ ಇದ್ದಿವಿ ಅಂದ್ರೆ ಅವುರಿಗೇನಾಗ್ಯದೆ ಕೇಳಬೇಕು ಸಾ.”
“ಯಾರು ಕೇಳಬೇಕು.”
“ಇನ್ಯಾರು ಮುಖ್ಯಮಂತ್ರಿನೇ ಕೇಳಬೇಕು. ಇವುನು ಗ್ರಾಮ ವಾಸ್ತವ್ಯಕ್ಕೋದ್ರೆ ಹಿಂಗೆ ಆಗದು”
“ಈಗೇನಾಗಬವುದು”
“ಅಲ್ಲ ಸಾ, ಬೆಂಗಳೂರಲ್ಲಿರೊ ನೀವು ಹೇಳಬೇಕು.”
“ಜನಗಳಭಿಪ್ರಾಯ ಹೇಳು.”
“ಜನಗಳು ವಿಶ್ವನಾಥನ್ನ ಉಗೀತಾ ಅವುರೆ ಸಾ”
“ಯಾಕೆ?”
“ಯಾಕೆ ಅಂದ್ರೆ ಸಿದ್ದರಾಮಯ್ಯ ಇವುನೇಗ್ತಿ ನೋಡಿ ಕುರಿ ಕ್ವಟಗೆ ಒಳಿಕೆ ನೂಕಿದ್ದ. ದ್ಯಾವೇಗೌಡ ಹೋಗಿ ಕರದು ತಲೆ ಸವುರಿದ. ಆಗ ತನ್ನ ತಲೇನೆ ಸವುರಿಕೊಂಡಂಗಾಯ್ತು. ಕೂಡ್ಳೆ ಪಾರ್ಟಿ ಪ್ರೆಸಿಡೆಂಟ್ ಮಾಡಿ ಎಮ್ಮೆಲ್ಲೆ ಮಾಡಿದ್ರೆ, ಇವುನು ಕೈ ಕೊಡದ ಅಂತ ಅವುರೆ”
“ನಿನಗೇನನ್ಸುತ್ತೆ”
“ಮಂತ್ರಿ ಮಾಡಿದ್ರೆ ಖಾತೆ ಚನ್ನಾಗಿ ನಿಭಾಯಿಸೋನು, ಅಂಗೆ ನೋಡಿದ್ರೆ ಸಾ.ರಾ. ಮಯೇಶ, ಪುಟ್ಟರಾಜ, ತಮ್ಮಣ್ಣ ಇಂತ ಸ್ಕ್ರಾಪ್ ಮಾಲಿಗಿಂತ ವಿಶ್ವನಾಥ್ ಯೋಗ್ಯ, ಈಗ ಮಾತ್ರ ಅಯೋಗ್ಯ”
“ಕೆ.ಆರ್.ಪೇಟೆ ನಾರಾಯಣಗೌಡನ ಬಗ್ಗೆ ಏನೇಳ್ತಿ’.’
“ಅವುನು ಬಾಂಬೆಯಿಂದ ತಪ್ಪಿಸಿಕೊಂಡು ಬಂದ ಮಾರವಾಡಿ ಹುಡುಗನಂಗೆ ಕಾಣ್ತನೆ ಸಾರ್. ಜೆಡಿಎಸ್‍ಗೆ ಬೇಕಾದಷ್ಟು ಮಾಡ್ಯವುನೆ, ಚುಂಚನಗಿರಿ ಮಠಕ್ಕೆ ಬೊಂಬಾಯಿಲೆ ಜಾಗ ಕೊಡಿಸ್ಯಾವುನೆ, ಅಂಥೊನ್ನ ದ್ಯಾವೇಗೌಡನ ಮನೆವ್ರು ಚಪ್ರಾಸಿಯಂಗೆ ನ್ಯಡಿಸಿಕೊಬಾರದಿತ್ತು.”
“ಒಟ್ಟಾರೆ ಈ ರಾಜೀನಾಮೆ ಪ್ರಕರಣ ಏನನ್ನಸುತ್ತೆ”
“ನನಿಗೇನನ್ನಸ್ತದೆ ಅಂದ್ರೆ, ಒಂದು ಅವಿಭಕ್ತ ಕುಟುಂಬದಲ್ಲಿ ಅತೃಪ್ತ ಜನ ಏನೇನೊ ನಾಟಗ ಮಾಡ್ತರೆ. ಹೊಟ್ಟೆನೊವ್ವು ಅಂತರೆ, ಬೇಧಿ ಅಂತರೆ, ಹಲ್ಲುನೋವು ಅಂತರೆ, ಸುಮ್ಮನೆ ಮೂಲೇಲಿ ಮನಿಕತ್ತರೆ, ಅದು ಅವುರ ಪ್ರತಿಭಟನೆ ಸಾ. ಈಗ್ಲು ನ್ಯಡದಿರದು ಈ ಕುಮಾರಸ್ವಾಮಿ ಬ್ಯಾಡ ಅನ್ನೊ ಪ್ರತಿಭಟನೆ ಅಷ್ಟೆ ಸಾ”
“ಅಂಗಾರೆ ಕುಮಾರಣ್ಣ ಬ್ಯಾಡವಾ”
“ಇವುನು ಹೋಯ್ತನೆ ಅಂದ್ರೆ ಯಾರಿಗೂ ಫೀಲಾಗಲ್ಲ ಸಾರ್, ಯಾಕಂದ್ರೆ ಇವುರಿಂದ್ಲೆ ಹಾರವರು ಲಕ್ಕಪತಿಗಳಾದ್ರು, ಅದೇನು ಯಜ್ಞ – ಅದೇನು ಯಾಗ, ಅದೇನು ಹೋಮ, ಅದಿರ್ಲಿ ಯಾರಾರ ತಲೆಯಿದ್ದೋರು, ನಾಮಪತ್ರ ತಗಂಡೋಗಿ ಶೃಂಗೇರೀಲಿ ಪೂಜೆ ಮಾಡಿಸಿಗಂಡು ಬತ್ತರ ಸಾ”
“ಇಲ್ಲ ಬುಡು ಇತಿಹಾಸದಲ್ಲಿ ಯಾರು ಅಂಗೆ ಮಾಡಿಲ್ಲ”
“ದ್ಯಾವೇಗೌಡ್ರು ಫ್ಯಾಮಿಲಿ ಪವರಿಂದ ಇಳದ್ರೆ ಬ್ರಾಂಬ್ರಿಗೆ ಲಾಸಾಗಬಹುದು. ನನಿಗಂತು ಯಾವ ನಷ್ಟನೂ ಇಲ್ಲ ಸಾ”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...