Homeಸಾಮಾಜಿಕಜನತೆಯ ಸಂಗಾತಿ ಲಕ್ಷ್ಮಣ್‌ಜಿ

ಜನತೆಯ ಸಂಗಾತಿ ಲಕ್ಷ್ಮಣ್‌ಜಿ

- Advertisement -
- Advertisement -

ಸಿರಿಮನೆ ನಾಗರಾಜ್ |

ಕನ್ನಡದ ಮಹತ್ವದ ಕವಿ-ಕತೆಗಾರ-ಬರಹಗಾರರಲ್ಲಿ ಒಬ್ಬರಾಗಿದ್ದ, ದಲಿತ ಮತ್ತು ಜನಪರ ಚಳವಳಿಗಳ ಸತತ ಒಡನಾಡಿಯಾಗಿದ್ದ ಲಕ್ಷ್ಮಣಜಿ ಅವರ ಆತ್ಮಕತೆ ‘ಸಂಬೋಳಿ’ಯ ಇಂಗ್ಲಿಷ್ ಅನುವಾದಿತ ಅದೇ ಹೆಸರಿನ ಕೃತಿ ಕಳೆದ ವಾರ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆದ ಚಿಕ್ಕ ಚೊಕ್ಕ ಕಾರ್ಯಕ್ರಮದಲ್ಲಿ ಬಿಡುಗಡೆಯಾಯಿತು. ಅದೇ ಸಮಯದಲ್ಲಿ ಲಕ್ಷ್ಮಣಜಿ ಅವರನ್ನು ಕುರಿತು ಅವರ ಸಮಕಾಲೀನ ಚಳವಳಿಗಾರರು, ಬರಹಗಾರರು ಮತ್ತಿತರ ಅವರ ಸಂಗಾತಿಗಳು ಬರೆದಿರುವ ಆಪ್ತ ಬರಹಗಳ ಸಂಕಲನ ‘ಜನತೆಯ ಸಂಗಾತಿ ಲಕ್ಷ್ಮಣಜಿ’ ಪುಸ್ತಕವೂ ಬಿಡುಗಡೆಯಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿಯವರು ಎರಡೂ ಕೃತಿಗಳನ್ನು ಬಿಡುಗಡೆ ಮಾಡಿದರು.

ಸಂಬೋಳಿ ಕೃತಿಯನ್ನು ಪ್ರೊ. ಸುಶೀಲಾ ಪುನೀತಾ ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ, ದೇಶದ ಗಣ್ಯ ಪ್ರಕಾಶನ ಸಂಸ್ಥೆಗಳಲ್ಲಿ ಒಂದೆನ್ನಿಸಿರುವ ದೆಹಲಿಯ ನಿಯೋಗಿ ಪ್ರಕಾಶನ ಅದನ್ನು ಪ್ರಕಟಿಸಿದೆ. (ಅದನ್ನು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಿಂದ ಪ್ರಕಟಿಸಲು ಈ ಮೊದಲು ಮಾತುಕತೆಯಾಗಿದ್ದು, ಅಲ್ಲಿ ಇನ್ನೂ ಬಹಳ ತಡವಾಗುತ್ತೆ ಎನ್ನುವ ಕಾರಣಕ್ಕೆ ನಿಯೋಗಿ ಪ್ರಕಾಶನ ಅದನ್ನು ತೆಗೆದುಕೊಂಡು ಪ್ರಕಟಿಸಿದೆ.)

ಕನ್ನಡದಲ್ಲಿ ನಾಲ್ಕು ಮುದ್ರಣ ಕಂಡಿದ್ದು, ಈಗಾಗಲೇ ತಮಿಳಿಗೆ ಅನುವಾದವಾಗಿ ಎರಡು ಮರುಮುದ್ರಣ ಕಂಡು ಬಹಳ ಮೆಚ್ಚುಗೆ, ಸಂವೇದನೆ ಹುಟ್ಟುಹಾಕಿರುವ ಸಂಬೋಳಿಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಒಂದು ಪಠ್ಯದಲ್ಲೂ ಕಾಣಿಸಿಕೊಂಡಿದೆ. ‘LISTEN TO THE FLAMES’ – texts and readings from the margins ಎಂಬ ಪಠ್ಯದಲ್ಲಿ ಸಂಬೋಳಿಯ ಒಂದು ಭಾಗವು undying love ಎಂಬ ಹೆಸರಿನಲ್ಲಿ ಸೇರ್ಪಡೆಯಾಗಿದೆ.

ಕಡುದಾರಿದ್ರ್ಯದ, ಜೀತದ ದಲಿತ ಬದುಕಿನಿಂದ ಬಂದು, ಹೇಗೋ ಕಾಲೇಜು ಕಲಿತು ಕೆಎಲ್‌ಇ ಸೊಸೈಟಿಯ ಕಾಲೇಜಿನಲ್ಲಿ ಗುಮಾಸ್ತರಾಗಿದ್ದ ಅತ್ಯಂತ ಸ್ನೇಹಜೀವಿ ಲಕ್ಷ್ಮಣಜಿ, ಎಷ್ಟು ಸ್ನೇಹಜೀವಿಯೋ ಅಷ್ಟೇ ಗಟ್ಟಿಯಾದ ಸಾಮಾಜಿಕ ಬದ್ಧತೆ ಹೊಂದಿದ್ದವರು. ಎಂಥ ಕಷ್ಟವೇ ಇದ್ದರೂ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುವುದನ್ನು ತಪ್ಪಿಸುತ್ತಿರಲಿಲ್ಲ. ದಲಿತ ಸಂಘಟನೆಗಳು ಒಡೆದು ಚೂರಾಗುತ್ತ, ನಾಯಕರಲ್ಲಿ ಪ್ರಾಮಾಣಿಕತೆ-ಕಳಕಳಿ ಕಡಿಮೆಯಾಗಿ, ಚಳವಳಿಯೊಂದು ಬದುಕಿನ ದಾರಿಯಾಗತೊಡಗಿದ್ದುದು, ದೇಶದಲ್ಲಿ ಎಡಪಂಥೀಯ ಚಳವಳಿ ಹಿನ್ನಡೆಗೆ ಈಡಾಗಿ ಸಂಘಪರಿವಾರದ ಫ್ಯಾಸಿಸ್ಟ್ ಶಕ್ತಿಗಳು ವಿಜೃಂಭಿಸತೊಡಗಿದ್ದು ಇವೆಲ್ಲ ಅವರನ್ನು ಬಹಳವಾಗಿ ಕಾಡುತ್ತಿದ್ದವು. ಹಾಗಂತ ಯಾವುದೇ ಚಳವಳಿಯ ಯಾವ ನಾಯಕರ ಜೊತೆಗೂ ಮನಸ್ತಾಪ ಮಾಡಿಕೊಂಡವರಲ್ಲ. ಅವರವರು ಒಂದುವೇಳೆ ಪರಸ್ಪರ ಮುಖ ನೋಡದ, ಮಾತಾಡದ ಹಗೆತನ ಬೆಳೆಸಿಕೊಂಡಿದ್ದರೂ ಲಕ್ಷ್ಮಣಜಿ ಎಲ್ಲರಿಗೂ ಬೇಕಾದವರಾಗಿದ್ದರು. 1989ರಲ್ಲಿ ‘ಕರ್ನಾಟಕ ವಿಮೋಚನಾ ರಂಗ’ ಸ್ಥಾಪನೆಯಾದಾಗ ಅದರ ಜೊತೆಗೂಡಿದ ಲಕ್ಷ್ಮಣಜಿ, ಕವಿರಂ ಇದ್ದಷ್ಟು ಕಾಲವೂ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

ಲಕ್ಷ್ಮಣಜಿ ಐವತ್ತರವತ್ತು ವರ್ಷ ಹಿಂದಿನ ಬೆಂಗಳೂರು ಸೀಮೆಯ ಜೀತದ ಬದುಕನ್ನು ಕಂಡುಂಡು ಬೆಳೆದುಬಂದವರು. ಅಂದಿನ ಜೀತಗಾರರ ಬದುಕಿನ ದಟ್ಟ ಚಿತ್ರಣ ಅವರ ಕವಿತೆ-ಕತೆ-ಬರಹಗಳಲ್ಲಿ ಅತ್ಯಂತ ಸಹಜವಾಗಿ ಬಿಂಬಿತವಾಗಿವೆ. ಅಂಬೇಡ್ಕರ್ ಬಗ್ಗೆ ಅಪಾರ ಅಭಿಮಾನ, ಆದರ. ಮಾರ್ಕ್ಸ್ ಮತ್ತು ಮಾರ್ಕ್ಸ್‌ವಾದದ ಬಗ್ಗೆಯೂ ಅಷ್ಟೇ ಆಸಕ್ತಿ, ಒಲವು. ದಲಿತ ಸಮುದಾಯದ ದುರ್ಭರ ಬದುಕಿನ ಬಗ್ಗೆ ಗಾಢವಾದ ಕ್ರಿಯಾಶೀಲ ಕಳಕಳಿ. ಹಾಗೆಯೇ ಎಲ್ಲ ದುಡಿವ ಜನರ, ಶೋಷಿತರ, ದಮನಿತರ ಬಗ್ಗೆಯೂ ಸಮಾನ ಅನುಕಂಪ, ತುಡಿತ. ಎಲ್ಲೋ ಯಲಹಂಕವೋ, ಪೀಣ್ಯವೋ, ಕಮಗೊಂಡನಹಳ್ಳಿಯೋ … ಎಲ್ಲೆಲ್ಲಿಯದೋ ಗುಡಿಸಲು ವಾಸಿಗಳ, ಬಡಜನರ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೇಗೋ ನಾಲ್ಕಾರು ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಹೋಗಿ, ಮನವರಿಕೆ ಮಾಡಿಯೋ, ಬೆದರಿಕೆ ಹಾಕಿಯೋ ಸಮಸ್ಯೆ ಬಗೆಹರಿಸದೆ ಬಿಡುತ್ತಿರಲಿಲ್ಲ.

ಲಕ್ಷ್ಮಣಜಿ ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಹೆಜ್ಜೆಹೆಜ್ಜೆಗೂ ಹೋದಲ್ಲಿ ಬಂದಲ್ಲಿ, ಮಾತಲ್ಲಿ ಕ್ರಿಯೆಯಲ್ಲಿ ಎಲ್ಲೆಲ್ಲೂ ಅವರು ಎಡೆಬಿಡದೆ ನೆನಪಾಗುತ್ತಾರೆಂದರೆ, ಯಾರೇ ಒಬ್ಬ ಕ್ರಿಯಾಶೀಲ ವ್ಯಕ್ತಿಯ ಸಾಮಾಜಿಕ ಬದುಕು ಸಾರ್ಥಕವೆನ್ನಿಸುವುದು ಹೀಗೇ ಅಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...