Homeಮುಖಪುಟದರ್ಶನ್‍ಗೆ ಧಿಕ್ಕಾರ, ಏನಿದರ ಹುನ್ನಾರ?

ದರ್ಶನ್‍ಗೆ ಧಿಕ್ಕಾರ, ಏನಿದರ ಹುನ್ನಾರ?

- Advertisement -
- Advertisement -
  • ಗಿರೀಶ್ ತಾಳಿಕಟ್ಟೆ |

ಇತ್ತೀಚೆಗೆ ನಟ ದರ್ಶನ್ ಸಿಎಂ ಸಿದ್ರಾಮಯ್ಯ ಪರ ಪ್ರಚಾರ ಮಾಡಲು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋದಾಗ ಒಂದಷ್ಟು ಜೆಡಿಎಸ್ ಕಾರ್ಯಕರ್ತರ ದಂಡು ದರ್ಶನ್‍ಗೆ ಧಿಕ್ಕಾರ ಕೂಗಿತ್ತು, ಹಾಗೆ ಧಿಕ್ಕಾರ ಕೂಗಲು ಆ ಪ್ರತಿಭಟನಾಕಾರರ ಬಳಿ ಇದ್ದದ್ದು ಎರಡು ಆಪಾದನೆಗಳು. ಮೊದಲನೆಯದ್ದು, ಎಲ್ಲಾ ಪಕ್ಷದಲ್ಲೂ ದರ್ಶನ್ ಅಭಿಮಾನಿಗಳು ಇರೋದ್ರಿಂದ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡಬಾರದು. ಎರಡನೆಯದ್ದು, ಕಾವೇರಿ ವಿವಾದದಲ್ಲಿ ದರ್ಶನ್ ಏನೂ ಮಾಡದಿರುವುದರಿಂದ ಆತನಿಗೆ ಮತ ಕೇಳುವ ಹಕ್ಕಿಲ್ಲ!

ಒನ್ಸ್ ಎಗೇನ್, ಇವೆರಡೂ ಕಾರಣಗಳು ಜಸ್ಟ್ ನೆಪವಷ್ಟೇ. ಇವುಗಳ ಹಿಂದೆ ಇರೋದು ಮತ್ತದೇ ಪೊಲಿಟಿಕ್ಸ್, ಅದರಲ್ಲೂ ಜೆಡಿಎಸ್‍ನ ಜಾತಿ ಪೊಲಿಟಿಕ್ಸ್! ಮೊದಲನೇ ಕಾರಣವನ್ನೇ ತೆಗೆದುಕೊಳ್ಳೋಣ. ದರ್ಶನ್‍ಗಿರುವ ಪಕ್ಷಾತೀತ ಅಭಿಮಾನಿಗಳ ಕಾಳಜಿಯಿಂದ ಈ ಮಾತು ಹೇಳುವುದೇ ಆಗಿದ್ದರೆ, ಒಂದು ತಟಸ್ಥ ಅಭಿಮಾನಿ ಸಮೂಹವಾಗಿ ಅಂತಹ ಪ್ರತಿರೋಧವನ್ನು ಹೊರಹಾಕಬೇಕಿತ್ತು. ಅದನ್ನು ಬಿಟ್ಟು ಜೆಡಿಎಸ್ ಅನ್ನೊ ಒಂದು ಪೊಲಿಟಿಕಲ್ ಪಾರ್ಟಿಯ ಬ್ಯಾನರ್‍ನಡಿ, ಆ ಪಕ್ಷದ ಕಾರ್ಯಕರ್ತರಾಗಿ ಎದುರಾಳಿ ಪಕ್ಷದ ಪ್ರಚಾರ ಮಾಡಬೇಡ ಎಂದು ಅಭಿಮಾನವನ್ನು ಮುಂದೆ ಮಾಡೋದೇ ಒಂದರ್ಥದಲ್ಲಿ ಸಾಂಸ್ಕೃತಿಕ ಬೆದರಿಕೆ ಹಾಕಿದಂತೆ.

ಇನ್ನು ಎರಡನೇ ಕಾರಣವೂ ಅಷ್ಟೇ ಸವಕಲು. ಕಾವೇರಿ ವಿವಾದದಲ್ಲಿ ಏನನ್ನಾದರು ಮಾಡಲು ಪಾಪ ದರ್ಶನ್ ಚುನಾಯಿತ ಜನಪ್ರತಿನಿಧಿಯೇನಲ್ಲ. ಒಬ್ಬ ಕಲಾವಿದನಾಗಿ, ತನ್ನ ಕಲಾಬಳಗದ ಜೊತೆಗೂಡಿ ಯಾವ ಪ್ರತಿಭಟನೆಯನ್ನು ದಾಖಲಿಸಬೇಕಿತ್ತೊ ಅದನ್ನು ದರ್ಶನ್ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಿನದನ್ನು ಆತನಿಂದ ನಿರೀಕ್ಷಿಸಲಿಕ್ಕಾಗದು. ಈಗ ಆತನ ಪ್ರಚಾರಕ್ಕೆ ಆ ನೆಪವಿಟ್ಟುಕೊಂಡು ಅಡ್ಡಿಪಡಿಸೋದು ರಾಜಕಾರಣವಲ್ಲದೆ ಮತ್ತೇನೂ ಅಲ್ಲ.

ಅಭಿಮಾನವನ್ನು ಅಡ್ಡವಿಟ್ಟುಕೊಂಡು ದರ್ಶನ್ ಪ್ರಚಾರಕ್ಕೆ ಅಡ್ಡಿಪಡಿಸೋ ದರ್ದು ಜೆಡಿಎಸ್‍ಗೆ ಏನಿತ್ತು ಅಂತ ಕೆದಕಲು ಶುರು ಮಾಡಿದರೆ ಚಾಮುಂಡೇಶ್ವರಿ ಕ್ಷೇತ್ರದ ಜಾತಿ ಚುನಾವಣೆಯ ರಂಗು ತೆರೆದುಕೊಳ್ಳುತ್ತೆ. ದೇವೇಗೌಡರ ಕುಟುಂಬದ ವೈಯಕ್ತಿಕ ಸಿಟ್ಟಿಗೆ ತುತ್ತಾಗಿರುವ ಸಿದ್ರಾಮಯ್ಯರನ್ನು ಸೋಲಿಸಲು ಚಾಮುಂಡೇಶ್ವರಿಯಲ್ಲಿ ಭರ್ಜರಿ ಜಾತಿ ರಣತಂತ್ರವನ್ನೇ ಹೆಣೆಯಲಾಗಿದೆ. ಸಿದ್ರಾಮಯ್ಯ ರನ್ನು ಒಕ್ಕಲಿಗರ ವಿರೋಧಿಯಂತೆ ಬಿಂಬಿಸಿ ಕ್ಷೇತ್ರದಲ್ಲಿರುವ ಒಕ್ಕಲಿಗರ ನಡುವೆ ಒಂದು ಬಗೆಯ ಕಡುಕೆಟ್ಟ ಉನ್ಮತ್ತ ಒಗ್ಗಟ್ಟನ್ನು ಹುಟ್ಟಿಸಲಾಗಿದೆ. ಹೀಗೆ ಜಾತಿ ರಾಜಕಾರಣವನ್ನು ರೊಚ್ಚಿಗೆಬ್ಬಿಸದಿದ್ದರೆ ಚಾಮುಂಡೇಶ್ವರಿಯಲ್ಲಿ ಸಿದ್ರಾಮಯ್ಯರನ್ನು ಮಣಿಸೋದು ಕಷ್ಟ ಅನ್ನೋದು ಜೆಡಿಎಸ್ ಅಭ್ಯರ್ಥಿ ಜಿ,ಟಿ,ದೇವೇಗೌಡರಿಗೆ ಸ್ಪಷ್ಟವಾಗಿತ್ತು. ಯಾಕೆಂದರೆ 2006ರ ಉಪಚುನಾವಣೆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಮತ್ತು ಜೆಡಿಎಸ್ ಪಾರ್ಟಿಗಳು ಜಂಟಿಯಾಗಿ ಸಿದ್ರಾಮಯ್ಯರನ್ನು ಸೋಲಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಿರಲಿಲ್ಲ. ಆ ಮಟ್ಟಕ್ಕೆ ಸಿದ್ರಾಮಯ್ಯ ಚಾಮುಂಡೇಶ್ವರಿಯಲ್ಲಿ ತಮ್ಮದೇ ಮತಬ್ಯಾಂಕ್ ಹೊಂದಿದ್ದಾರೆ. ಅಂತದ್ದರಲ್ಲಿ ಈಗ ಸಿಎಂ ಆಗಿರುವ ಅವರನ್ನು ಅಲ್ಲಿ ಸೋಲಿಸೋದು ಅಂದ್ರೆ ಸುಮ್ನೇ ಮಾತಾ?

ಅದೇ ಕಾರಣಕ್ಕೆ ಒಕ್ಕಲಿಗ ಜಾತಿ ಕೆಮಿಸ್ಟ್ರಿಯನ್ನೇ ಜೆಡಿಎಸ್ ಅಲ್ಲಿ ವಿಪರೀತ ನಂಬಿ ಕೂತಿದೆ. ದರ್ಶನ್ ಬಂದು ಪ್ರಚಾರ ಮಾಡಿದರೆ ಒಕ್ಕಲಿಗರ ಜಾತಿ ಮತಗಳ ಈ ಕಟ್ಟು ಮುಕ್ಕಾಗಿ ಬಿಡುತ್ತೆ ಎಂಬ ಆತಂಕ ಜೆಡಿಎಸ್ ಅಭ್ಯರ್ಥಿಗೆ ಶುರುವಾಗಿದ್ದೇ ಈ ಪ್ರತಿಭಟನೆ ಹಿಂದಿರುವ ಅಸಲೀ ಕಾರಣ. ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಭಾವಿ ಎನಿಸಿಕೊಂಡಿರುವ ಒಕ್ಕಲಿಗರಿಗೆ, ಅದರಲ್ಲೂ ಒಕ್ಕಲಿಗ ಸಮುದಾಯದ ಯುವಜನರಿಗೆ ದರ್ಶನ್ ಎಂದರೆ ಐಕಾನ್ ಇದ್ದಂತೆ. ಆತ ಒಮ್ಮೆ ಕೈಬೀಸಿದರೆ ಅಭಿಮಾನದ ಹುಚ್ಚು ಹೊಳೆಯಲ್ಲಿ ಅವರೆಲ್ಲಿ ಕೊಚ್ಚಿ ಹೋಗುತ್ತಾರೋ ಎಂಬ ಆತಂಕ ಆ ಪ್ರತಿಭಟನೆಯನ್ನು ಆಯೋಜಿಸಿದೆ.

ವಿಪರ್ಯಾಸವೆಂದರೆ, ನಟ ದರ್ಶನ್ ಒಕ್ಕಲಿಗ ಸಮುದಾಯದವರೇ ಅಲ್ಲ. ಆತ ಬಲಿಜ ಜಾತಿಯವ. ಆದಾಗ್ಯೂ ಒಕ್ಕಲಿಗರ ಸಾಂಸ್ಕøತಿಕ ಐಕಾನ್‍ನಂತಿರುವ ಅಂಬರೀಷ್‍ರ ಸಿನಿ ಹೀರೊ ವ್ಯಾಕ್ಯೂಮನ್ನು ತುಂಬಿದ ಬದಲೀ ನಟನಾಗಿ ದರ್ಶನ್ ತನ್ನನ್ನು ತಾನು ಬಿಂಬಿಸಿಕೊಂಡರೆ, ಅದಕ್ಕೆ ತಕ್ಕಂತೆ ದರ್ಶನ್‍ರ ಸಿನಿ ಪಯಣದ ಮೊದಲ ದಿನದಿಂದ ಇಲ್ಲಿಯವರೆಗೂ ಅಂಬರೀಶ್ ಆತನ ಗಾಡಫಾದರ್‍ನಂತೇ ವರ್ತಿಸಿದ್ದಾರೆ. ಹಾಗಾಗಿ ಒಕ್ಕಲಿಗ ಸಿನಿ ಪ್ರಿಯರು ಅಂಬರೀಷ್ ಮೇಲಿಟ್ಟಿದ್ದ ಅಷ್ಟೂ ಅಭಿಮಾನವನ್ನು ದರ್ಶನ್‍ಗೂ ಹರಿಸಿದ್ದಾರೆ. ಯಾವ ಮಟ್ಟಕ್ಕೆಂದರೆ, ದರ್ಶನ್‍ರನ್ನು ಒಕ್ಕಲಿಗ ಅಂತಲೇ ಸುಮಾರಷ್ಟು ಮಂದಿ ಭ್ರಮಿಸುವಷ್ಟರ ಮಟ್ಟಿಗೆ ಗೊಂದಲ ಗೂಡುಕಟ್ಟಿದೆ. ಇದೇ ಗೊಂದಲ ಎಲ್ಲಿ ತಮ್ಮ ಜಾತಿ ರಾಜಕಾರಣವನ್ನು ದಿಕ್ಕೆಡಿಸಿಬಿಡುತ್ತೋ ಎಂಬ ಭಯ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಪಾಳಯವನ್ನು ಕಾಡಿದೆ. ಅದರ ಫಲವಾಗಿಯೇ ಅಭಿಮಾನ, ಕಾವೇರಿ ವಿವಾದಗಳನ್ನು ಮುಂದಿಟ್ಟುಕೊಂಡು ದರ್ಶನ್‍ಗೆ ಧಿಕ್ಕಾರದ ಕೂಗು ಹುಟ್ಟಿಕೊಂಡಿದೆ.

ಈ ಸಿನಿ ಮಂದಿ ಪ್ರಸ್ತುತ ರಾಜಕೀಯದ ಅರಿವು ಇಲ್ಲದೆ, ಸೈದ್ಧಾಂತಿಕ ಬದ್ಧತೆ ಇಲ್ಲದೆ ಹತ್ತು ಹಲವು ಮರ್ಜಿಗಳಿಗೆ ಕಟ್ಟುಬಿದ್ದು ಬಣ್ಣದ ಬೊಂಬೆಯಂತೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸೋದು ಎಷ್ಟು ಅಸಮಂಜಸವೋ, ರಾಜಕೀಯ ಲೆಕ್ಕಾಚಾರದ ಕಾರಣಕ್ಕೆ ಅಭಿಮಾನವನ್ನು ನೆಪ ಮಾಡಿಕೊಂಡು ಅದೇ ಸಿನಿ ಮಂದಿಯ ಚುನಾವಣಾ ಪ್ರಚಾರಕ್ಕೆ ಅಡ್ಡಿ ಮಾಡೋದು ಕೂಡಾ ಅಷ್ಟೇ ಅಸಂಬದ್ಧ ರಾಜಕಾರಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...