Homeಅಂಕಣಗಳುಜನರ ತಲೆಗೆ ಮೌಢ್ಯದ ‘ಚಿಪ್ಪು’!

ಜನರ ತಲೆಗೆ ಮೌಢ್ಯದ ‘ಚಿಪ್ಪು’!

- Advertisement -
- Advertisement -

ಬುರುಡೆ ಜ್ಯೋತಿಷ್ಯವು ಹೇಗೆ ಹುಟ್ಟಿದ ಮಗುವನ್ನು ತಕ್ಷಣವೇ ಸುತ್ತಿಕೊಳ್ಳುತ್ತದೆ ಮತ್ತು ಹೆಸರಿನ ನೆಪದಲ್ಲಿ ಹೇಗೆ ‘ಹ್ಯೂಮನ್ ಐಡೆಂಟಿಟಿ, ಸ್ಟೇಟಸ್ ರೆಕಗ್ನಿಷನ್ ಸಿಸ್ಟಮ್’ ಎಂಬ ಅದ್ಭುತ ಆವಿಷ್ಕಾರವು ಮನುಷ್ಯನ ಜಾತಿ ಮತ್ತು ಹಿನ್ನೆಲೆಯನ್ನು ಹೇಗೆ ಗುರುತಿಸುತ್ತದೆ ಹಾಗೂ ‘ಹ್ಯೂಮನ್ ಫಿಲ್ತ್ ಸೆಪರೇಶನ್ ಎಂಡ್ ಸೆಗ್ರೆಗೇಶನ್ ಸಿಸ್ಟಮ್’ ಎಂಬ ಅವಿಷ್ಕಾರವು ಹೇಗೆ ನಿಕೃಷ್ಟ ಮಾನವರನ್ನು ಗುರುತಿಸಿ, ಜೀವನದುದ್ದಕ್ಕೂ ಪ್ರತ್ಯೇಕಿಸಿ ಮೂಲೆಗುಂಪು ಮಾಡುತ್ತದೆ ಎಂಬುದನ್ನು ಕಳೆದ ಸಂಚಿಕೆಯಲ್ಲಿ ನೋಡಿದೆವು.

ದಶಕಗಳ ಹಿಂದೆ ಪಂಚಾಂಗಗಳು ಮನೆಮನೆಯನ್ನು ಪ್ರವೇಶಿಸಲು ಅರಂಭಿಸಿದವು. ದಿನಮಾನವನ್ನು ಅಂದರೆ ಭೂಮಿ ಚಂದ್ರಾದಿ ಗ್ರಹಗಳ ಚಲನೆಯನ್ನು, ಋತುಗಳನ್ನು, ಗ್ರಹಣಗಳನ್ನು ನಿಖರವಾಗಿ ಗುರುತಿಸುವ ಈ ಪಂಚಾಂಗಗಳು ವಾಸ್ತವಿಕವಾಗಿ ನಮ್ಮ ಪುರಾತನ ಖಗೋಳಶಾಸ್ತ್ರಜ್ಞರ, ಗಣಿತಜ್ಞರ, ವೈಜ್ಞಾನಿಕ ಕೊಡುಗೆ. ಅದರೆ, ಅದರ ಪೇಟೆಂಟ್ ಪಡೆದುಕೊಂಡ ಬುರುಡೆ ಶಾಸ್ತ್ರಜ್ಞರು ಅದಕ್ಕೆ ತಮ್ಮದೇ ಆದ ಹೊಸಹೊಸ ಆವಿಷ್ಕಾರಗಳನ್ನು ಸೇರಿಸಿ, ಮುಗ್ಧ ಜನರ ‘ಇಯರ್ ಮೇಲೆ ಫ್ಲವರ್’ ಇಡಲು ಪ್ರಾರಂಭಿಸಿದರು.
ಒಂದು ಪ್ರದೇಶದ ಋತುಮಾನ, ಹವಾಮಾನ, ಮಳೆಯ ಸಮಯವನ್ನು ಗುರುತಿಸಲು ಈ ಲೆಕ್ಕಾಚಾರಗಳು ರೈತಾಪಿ ಜನರಿಗೆ ಅನುಕೂಲಕರವಾದುದರಿಂದ ಸ್ವಲ್ಪ ಅಕ್ಷರ ಬಲ್ಲವರ ಮನೆಗಳಲ್ಲಿ ಪಂಚಾಂಗಗಳು ಇರುತ್ತಿದ್ದವು. ಅವರು ಕಾಂಪೌಂಡರ್‍ಗಳಂತೆ ಉಳಿದವರ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮದ್ದು ಕೊಡುತ್ತಿದ್ದರು. ದೊಡ್ಡ ಸಮಸ್ಯೆಗಳು ಎದುರಾದರೆ ಜೋಯಿಸರ ಬಳಿಯೇ ಹೋಗಬೇಕಾಗುತ್ತಿತ್ತು.
ಈ ಪಂಚಾಂಗಗಳಲ್ಲಿ ನಕ್ಷತ್ರಗಳ ಪಟ್ಟಿ, ಘಳಿಗೆ, ಇಲ್ಲದ ರಾಹುಕಾಲ, ಗುಳಿಕಕಾಲ, ಯಮಗಂಡ ಕಾಲ, ರಾಶಿ, ದೋಷಗಳು, ಫಲಗಳು, ಕಾಟಗಳು ಇತ್ಯಾದಿಗಳನ್ನು ಸೇರಿಸಲಾಯಿತು. ಇವರ ಅತ್ಯಂತ ದೊಡ್ಡ ಆವಿಷ್ಕಾರವೆಂದರೆ ವೈಜ್ಞಾನಿಕವಾದ ಪುರಾತನ ಆವಿಷ್ಕಾರಗಳಿಗೆ ಬುರುಡೆ ಅಪ್ಲಿಕೇಷನ್‍ಗಳನ್ನು ಕಂಡುಹಿಡಿದು, ಅವುಗಳ ಜೊತೆಗೆ ಭಯದ ಪ್ರೋಗ್ರಾಮ್ ಚಿಪ್ಪನ್ನು ಜನರ ಮೆದುಳಿಗೆ ಇಂಪ್ಲಾಂಟ್ ಮಾಡಿದ್ದು! ಇಂದಿಗೂ ವಿದ್ಯಾವಂತರೆನಿಸಿಕೊಂಡವರು ಕೂಡಾ ಇಂತಹ ಒಂದು ಚಿಪ್ಪನ್ನು ತಲೆಯೊಳಗೆ ಹೊತ್ತು ತಿರುಗುವುದನ್ನು ನೋಡಬಹುದು. ನಮ್ಮ ಮಾಧ್ಯಮದಲ್ಲೂ ಇಂತಹ ‘ಚಿಪ್ಪು’ ಹಂದಿಗಳು ದಂಡಿಯಾಗಿವೆ!
ಪಂಚಾಂಗಗಳ ದೊಡ್ಡ

ಸಾಧನೆ ಎಂದರೆ ಮನುಷ್ಯನ ಹುಟ್ಟು-ಸಾವು-ಕರ್ಮಗಳಿಗೂ ಗ್ರಹ-ನಕ್ಷತ್ರ-ಘಳಿಗೆಗಳಿಗೂ, ಭವಿಷ್ಯಕ್ಕೂ ಇಲ್ಲದ ಸಂಬಂಧ ಕಲ್ಪಿಸಿದ್ದು! ಮತ್ತು ಮಂತ್ರವಾದಿ ಕತೆಗಳಂತಹ ಕಾಲ್ಪನಿಕ ಚಿತ್ರಣವನ್ನು ಪಂಚಾಂಗಕ್ಕೆ ಸೇರಿಸಿ ಸಂವತ್ಸರಗಳು ಪಿಶಾಚಿಗಳಂತೆ ಜನರ ತಲೆಯಲ್ಲಿ ಕುಣಿಯುವಂತೆ ಮಾಡಿದ್ದು.
ನನ್ನ ಬಾಲ್ಯದಲ್ಲಿ ಪಂಚಾಂಗ ಮನೆ ಸೇರಿದ ಕೂಡಲೇ ತಂದೆಯವರು ಒಮ್ಮೆ ಕಣ್ಣಾಡಿಸಿದ್ದೇ ತಡ ಅದು ನನ್ನ ಪಾಲಾಗುತ್ತಿತ್ತು. ಯಾಕೆಂದರೆ ಶಾಲೆಗಳಲ್ಲಿ ಅಶ್ವಿನಿ, ಭರಣಿ, ಕೃತ್ತಿಕಾ… ಮುಂತಾದ ನಕ್ಷತ್ರಗಳು, ಮೇಷ, ವೃಷಭ, ಮಿಥುನ… ಮುಂತಾದ ರಾಶಿಗಳು, ಚೈತ್ರ, ವೈಶಾಖ, ಆಷಾಡ…ಇತ್ಯಾದಿ ಋತುಗಳು, ಪ್ರಭವ, ವಿಭವ, ಶುಕ್ಲ…ಇತ್ಯಾದಿ ಸಂವತ್ಸರಗಳನ್ನು ಉರುಹೊಡೆಸಲಾಗುತ್ತಿತ್ತು.
ಮಹಾ ಕುತೂಹಲಕಾರಿ, ಅದ್ಭುತ, ಭಯಾನಕವಾಗಿದ್ದುದು ಮಾತ್ರ ಚಂದಾಮಾಮ ಕತೆಗಳನ್ನು ಮೀರಿಸುವ ಸಂವತ್ಸರ ಫಲ! ಅವುಗಳಲ್ಲಿ ಆಯಾ ಸಂವತ್ಸರಕ್ಕೆ ಒಂದೊಂದು ಭಯಾನಕ ರೂಪ ಕೊಡಲಾಗುತ್ತಿತ್ತು. “ರಕ್ತಾಕ್ಷಿ ನಾಮದ ದೇವತೆಯು ಪೀತವಸ್ತ್ರಧಾರಿಣಿಯಾಗಿ, ಒಂದು ಕೈಯಲ್ಲಿ ಕಪಾಳವನ್ನೂ ಇನ್ನೊಂದು ಕೈಯ್ಯಲ್ಲಿ ಶೂಲವನ್ನೂ ಹಿಡಿದುಕೊಂಡು, ನೇರಳೆ ಬಣ್ಣದ ಹೂವಿನ ಮಾಲೆಯನ್ನು ಧರಿಸಿಕೊಂಡು, ಭಿಕ್ಷಾನ್ನವನ್ನು ಮುಕ್ಕುತ್ತಾ, ಪಶ್ಚಿಮದಿಂದ ಪೂರ್ವಾಭಿಮುಖವಾಗಿ ದಕ್ಷಿಣ ದಿಕ್ಕನ್ನು ದಿಟ್ಟಿಸುತ್ತಾ ಕತ್ತೆಯ ಮೇಲೇರಿ ಪಯಣಿಸುವಳು… ಎರಡು ಕೊಳಗ ಮಳೆಯನ್ನು ಸುರಿಸುವಳು… ಇಷ್ಟ ಧಾನ್ಯ ಗೋಧಿ… ಆಕೆ ಬಳಸಿದ ವಸ್ತುಗಳಿಗೆ ಕೊರತೆಯಾಗುವುದು… ಹೀಗೆ ಸಾಗುವ ಕತೆಯನ್ನು ಓದಿ ನಾವು ಮಕ್ಕಳು ರಾತ್ರಿ ವೇಳೆ ಭಯಾನಕ ಕನಸುಬಿದ್ದು ಬೆವರುತ್ತಿದ್ದರೆ, ಹಿರಿಯರು ಇವುಗಳಿಗೆ ತಮ್ಮದೇ ಕಾಲ್ಪನಿಕ ಅರ್ಥ ಕಲ್ಪಿಸಿ, ಈ ಸಲ ಮಳೆ ಕಡಿಮೆ, ಕಾಲ ಕಷ್ಟ, ಗೋಧಿಗೆ ಹೇಗೋ ಗೊತ್ತಿಲ್ಲ; ಭತ್ತಕ್ಕೆ ತೊಂದರೆಯಿಲ್ಲ ಎಂಬಿತ್ಯಾದಿ ಚಿಂತೆಗಳಲ್ಲಿ ಮುಳುಗಿರುತ್ತಿದ್ದರು. ಇಂತಹಾ ಒಂದು ಸಾಮೂಹಿಕ ಸನ್ಮೋಹನದ, ಸಮೂಹ ಸನ್ನಿಯ ಮನಶ್ಶಾಸ್ತ್ರೀಯ ಆವಿಷ್ಕಾರವನ್ನು ಭಾರತದ ಬುರುಡೆ ಜ್ಯೋತಿಷಿಗಳು ಬಿಟ್ಟರೆ ಪ್ರಪಂಚದಲ್ಲಿ ಬೇರಾರೂ ಮಾಡಿರಲಿಕ್ಕಿಲ್ಲ.
ಒಂದೆರಡು ಕೊಳಗ ಮಳೆ ಎಂದರೆ ಬರ ಬರುತ್ತದೆಂದೂ, ನಾಲ್ಕು ಕೊಳಗ ಎಂದರೆ ಪ್ರಳಯವೆಂದೂ ನಂಬುವ ರೈತಾಪಿ ಜನರು, ಈ ಸಂವತ್ಸರವು ಇಡೀ ಜಗತ್ತಿಗೆ ಅನ್ವಯಿಸುವುದಾದರೆ ಮರುಭೂಮಿಯಲ್ಲಿ ಕಡಿಮೆ ಮಳೆ, ಕರಾವಳಿ-ಮಲೆನಾಡುಗಳಲ್ಲಿ ಹೆಚ್ಚು ಮಳೆ ಯಾಕೆ ಸುರಿಸುತ್ತದೆ ಎಂದು ಎಂದಿಗೂ ಯೋಚಿಸುವುದಿಲ್ಲ! ಏನಾದರೂ ಹೆಚ್ಚುಕಡಿಮೆ ಅದರೆ, ಸಮಜಾಯಿಷಿ ಕೊಡಲು ಜೋಯಿಸರಿಗೆ ಮಾತ್ರ ಈ ತರ್ಕ ಅನುಕೂಲಕ್ಕೆ ಬರುತ್ತದೆ.
ನಾಲ್ಕು ಕೊಳಗ ಮಳೆ ಎಂದಿದ್ದಾಗ ತೀರಾ ಕಡಿಮೆ ಮಳೆ ಬಂದಿದ್ದನ್ನೂ, 1974ರಲ್ಲಿ ಎರಡೋ ಮೂರೋ ಕೊಳಗ ಎಂದಿದ್ದಾಗ, ನೇತ್ರಾವತಿ ನದಿಯಲ್ಲಿ ಒಂದು ಇಡೀ ತಲೆಮಾರು ಮರೆಯದ, ಪ್ರಳಯದಂತಹ ಮಳೆ ಮತ್ತು ನೆರೆ ಬಂದದ್ದನ್ನೂ ನಾನು ಕಂಡಿದ್ದೇನೆ, ಆ ಮಾತು ಬೇರೆ.
ಈ ಜೋಯಿಸರು ಒಳ್ಳೆಯ ಹಾಸ್ಯಪಟುಗಳೂ ಹೌದು! ಅದಕ್ಕಾಗಿಯೇ ಅವರು ‘ಗವಳಿ ಪತನ ಫಲ’ ಎಂದೇನೋ ಒಂದು ಶಕುನವನ್ನೂ ಕೊಡುತ್ತಿದ್ದರು. ಅಂದರೆ, ಅಕಸ್ಮಾತ್ ಹಲ್ಲಿಯೇನಾದರೂ ಮೈಮೇಲೆ ಬಿದ್ದರೆ ಯಾವ ಫಲ ಇತ್ಯಾದಿ. ಕೈಗೆ ಬಿದ್ದರೆ, ಹೆಗಲಿಗೆ ಬಿದ್ದರೆ…ಹೀಗೆ ಫಲಗಳಿರುತ್ತವೆ. ಇರುವ ಎಲ್ಲಾ ಮನೆವಾರ್ತೆ ಪ್ರಾಣಿಗಳಲ್ಲಿ ಹಲ್ಲಿ ಏಕೆ ವಿಶೇಷ ಎಂದು ನನಗಿನ್ನೂ ಒಗಟು. ಹಲ್ಲಿ ಏನಾದರೂ ಬ್ಯಾಲೆನ್ಸ್ ತಪ್ಪಿ ಜೋಕಾಲಿಯಿಂದ ಬಲೆಗೆ ಬೀಳುವ ಸರ್ಕಸಿನ ಜೋಕರ್‍ನಂತೆ ಅನ್ನದ ಪಾತ್ರೆಗೆ ಬಿದ್ದರೆ ಏನು ಫಲ ಎಂದರೆ, ತಿಂದವರಿಗೆ ವಾಂತಿ-ಬೇಧಿ ಎಂದು ಕಂಡಿದ್ದೇನೆ. ಅದರೆ ಹಲ್ಲಿ ಬೀಳುವುದಕ್ಕೂ ಭವಿಷ್ಯಕ್ಕೂ ಏನು ಸಂಬಂಧ? ಆಗ ಭವಿಷ್ಯದ ಮೇಲೆ ಪ್ರಭಾವ ಬೀರುವ ಗ್ರಹ, ನಕ್ಷತ್ರಗಳು ರಜೆ ಹಾಕಿರುತ್ತವೆಯೆ!?
ನಾನು ಏಳನೇ ತರಗತಿಯಲ್ಲಿರುವಾಗ ಹಲ್ಲಿ ಪತನದ ಪರಿಣಾಮವನ್ನು ಕಣ್ಣಾರೆ ಕಾಣುವಂತಾಯಿತು. ಆ ಭಯಾನಕ ಘಟನೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ! ನಮ್ಮದು ಅಗಲೇ ಏಳ್ನೂರು ವಿದ್ಯಾರ್ಥಿಗಳಿದ್ದ ಅತ್ಯಂತ ಹಳೆಯ ಖಾಸಗಿ ಅನುದಾನಿತ ಕನ್ನಡ ಮಾಧ್ಯಮ ಶಾಲೆ! ಭಾರಿ ಕಟ್ಟಡ, ಇಪ್ಪತ್ತೈದು ಅಡಿ ಮೀರಿದ ಛಾವಣಿ.
ಒಂದು ದಿನ ಬೋಳು ತಲೆಯ ಒಬ್ಬರು ಮೇಷ್ಟ್ರು ಪಾಠ ಮಾಡುತ್ತಿದ್ದರು. ಮೇಲ್ಜಾತಿಗೆ ಸೇರಿದ ಅವರು ಮಕ್ಕಳನ್ನು ಜಾತಿ-ಧರ್ಮದ ಹೆಸರೆತ್ತಿ ಅವಮಾನಿಸುತ್ತಿದ್ದರಿಂದ, ಹೊಡೆಯುತ್ತಿದ್ದುದರಿಂದ ಅವರನ್ನು ಕಂಡರೆ ನಮಗ್ಯಾರಿಗೂ ಆಗುತ್ತಿರಲಿಲ್ಲ! ಆ ದಿನ ಮಟಮಟ ಮಧ್ಯಾಹ್ನ! ಒಂದು ಹಲ್ಲಿ ತಟಕ್ಕನೇ ಅವರ ಬೋಳು ನೆತ್ತಿಯ ಮೇಲೆ ಬಿತ್ತು! ಇಡೀ ತರಗತಿ ದಂಗಾಯಿತು. ನನ್ನನ್ನೂ ಸೇರಿದಂತೆ ಹೆಚ್ಚಿನವರಿಗೇ ಒಳಗೊಳಗೇ ಖುಷಿ ಕೂಡ- “ಮಾಷ್ಟ್ರು ಸಾಯುತ್ತಾರೆ!”. ನಡುನೆತ್ತಿಗೆ ಹಲ್ಲಿ ಬಿದ್ದರೆ ಮರಣ ಅಂತ ಪಂಚಾಂಗದಲ್ಲಿ ಬರೆದಿದೆ! ಕೊನೆಗೂ ಹಾಗೆಯೇ ಆಯಿತು!
ಮೇಷ್ಟ್ರು ಕೇಳಿದರು, “ಪಂಚಾಂಗ ನೋಡುತ್ತೀರ?! ನಡು ನೆತ್ತಿಯ ಮೇಲೆ ಹಲ್ಲಿ ಬಿದ್ದರೆ ಏನು ಫಲ?”
ನಾನು ತಟ್ಟನೇ ಉತ್ತರಿಸಿದೆ, “ಮರಣ!”
ಮೇಷ್ಟ್ರು “ಹೌದು! ಮರಣ! ಯಾರಿಗೆ?…ಹಲ್ಲಿಗೆ!” ಎಂದವರೇ ನೆಲ ತೋರಿಸಿದರು. ಅಲ್ಲಿ ಅಷ್ಟು ಎತ್ತರದಿಂದ ಬಿದ್ದಿದ್ದ ಹಲ್ಲಿ ಕಾಲು ಮೇಲಾಗಿ ಬಿಳಿಹೊಟ್ಟೆ ತೋರಿಸುತ್ತಾ ಸತ್ತುಬಿದ್ದಿತ್ತು! ಅಂದೇ, ಈ ಬುರುಡೆ ಜ್ಯೋತಿಷ್ಯ ಕುರಿತ ನನ್ನ ನಂಬಿಕೆ ಕಳಚಿಹೋಯಿತು. ಈ ಮೇಷ್ಟ್ರು ಇಂದಿಗೂ ಮುಂಬಯಿಯಲ್ಲಿ ಮಕ್ಕಳ ಮನೆಯಲ್ಲಿ ಇದ್ದಾರೆಂದು ಕೇಳಿದ್ದೆ!
ಇವೆಲ್ಲವುಗಳ ವಾಸ್ತವವನ್ನು ಮುಂದೆ ಆಧುನಿಕ ವಿಜ್ಞಾನದ ಮೂಲಕ ವಿವರವಾಗಿ ಮತ್ತು ತಾರ್ಕಿಕವಾಗಿ ಪರಿಶೀಲಿಸುವ ಮೊದಲು ಇಂತಹ ಇನ್ನಷ್ಟು ಆವಿಷ್ಕಾರಗಳ ಕತೆಗಳನ್ನು ಕೇಳೋಣ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...