Homeಅಂಕಣಗಳುಜನರ ತಲೆಗೆ ಮೌಢ್ಯದ ‘ಚಿಪ್ಪು’!

ಜನರ ತಲೆಗೆ ಮೌಢ್ಯದ ‘ಚಿಪ್ಪು’!

- Advertisement -
- Advertisement -

ಬುರುಡೆ ಜ್ಯೋತಿಷ್ಯವು ಹೇಗೆ ಹುಟ್ಟಿದ ಮಗುವನ್ನು ತಕ್ಷಣವೇ ಸುತ್ತಿಕೊಳ್ಳುತ್ತದೆ ಮತ್ತು ಹೆಸರಿನ ನೆಪದಲ್ಲಿ ಹೇಗೆ ‘ಹ್ಯೂಮನ್ ಐಡೆಂಟಿಟಿ, ಸ್ಟೇಟಸ್ ರೆಕಗ್ನಿಷನ್ ಸಿಸ್ಟಮ್’ ಎಂಬ ಅದ್ಭುತ ಆವಿಷ್ಕಾರವು ಮನುಷ್ಯನ ಜಾತಿ ಮತ್ತು ಹಿನ್ನೆಲೆಯನ್ನು ಹೇಗೆ ಗುರುತಿಸುತ್ತದೆ ಹಾಗೂ ‘ಹ್ಯೂಮನ್ ಫಿಲ್ತ್ ಸೆಪರೇಶನ್ ಎಂಡ್ ಸೆಗ್ರೆಗೇಶನ್ ಸಿಸ್ಟಮ್’ ಎಂಬ ಅವಿಷ್ಕಾರವು ಹೇಗೆ ನಿಕೃಷ್ಟ ಮಾನವರನ್ನು ಗುರುತಿಸಿ, ಜೀವನದುದ್ದಕ್ಕೂ ಪ್ರತ್ಯೇಕಿಸಿ ಮೂಲೆಗುಂಪು ಮಾಡುತ್ತದೆ ಎಂಬುದನ್ನು ಕಳೆದ ಸಂಚಿಕೆಯಲ್ಲಿ ನೋಡಿದೆವು.

ದಶಕಗಳ ಹಿಂದೆ ಪಂಚಾಂಗಗಳು ಮನೆಮನೆಯನ್ನು ಪ್ರವೇಶಿಸಲು ಅರಂಭಿಸಿದವು. ದಿನಮಾನವನ್ನು ಅಂದರೆ ಭೂಮಿ ಚಂದ್ರಾದಿ ಗ್ರಹಗಳ ಚಲನೆಯನ್ನು, ಋತುಗಳನ್ನು, ಗ್ರಹಣಗಳನ್ನು ನಿಖರವಾಗಿ ಗುರುತಿಸುವ ಈ ಪಂಚಾಂಗಗಳು ವಾಸ್ತವಿಕವಾಗಿ ನಮ್ಮ ಪುರಾತನ ಖಗೋಳಶಾಸ್ತ್ರಜ್ಞರ, ಗಣಿತಜ್ಞರ, ವೈಜ್ಞಾನಿಕ ಕೊಡುಗೆ. ಅದರೆ, ಅದರ ಪೇಟೆಂಟ್ ಪಡೆದುಕೊಂಡ ಬುರುಡೆ ಶಾಸ್ತ್ರಜ್ಞರು ಅದಕ್ಕೆ ತಮ್ಮದೇ ಆದ ಹೊಸಹೊಸ ಆವಿಷ್ಕಾರಗಳನ್ನು ಸೇರಿಸಿ, ಮುಗ್ಧ ಜನರ ‘ಇಯರ್ ಮೇಲೆ ಫ್ಲವರ್’ ಇಡಲು ಪ್ರಾರಂಭಿಸಿದರು.
ಒಂದು ಪ್ರದೇಶದ ಋತುಮಾನ, ಹವಾಮಾನ, ಮಳೆಯ ಸಮಯವನ್ನು ಗುರುತಿಸಲು ಈ ಲೆಕ್ಕಾಚಾರಗಳು ರೈತಾಪಿ ಜನರಿಗೆ ಅನುಕೂಲಕರವಾದುದರಿಂದ ಸ್ವಲ್ಪ ಅಕ್ಷರ ಬಲ್ಲವರ ಮನೆಗಳಲ್ಲಿ ಪಂಚಾಂಗಗಳು ಇರುತ್ತಿದ್ದವು. ಅವರು ಕಾಂಪೌಂಡರ್‍ಗಳಂತೆ ಉಳಿದವರ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮದ್ದು ಕೊಡುತ್ತಿದ್ದರು. ದೊಡ್ಡ ಸಮಸ್ಯೆಗಳು ಎದುರಾದರೆ ಜೋಯಿಸರ ಬಳಿಯೇ ಹೋಗಬೇಕಾಗುತ್ತಿತ್ತು.
ಈ ಪಂಚಾಂಗಗಳಲ್ಲಿ ನಕ್ಷತ್ರಗಳ ಪಟ್ಟಿ, ಘಳಿಗೆ, ಇಲ್ಲದ ರಾಹುಕಾಲ, ಗುಳಿಕಕಾಲ, ಯಮಗಂಡ ಕಾಲ, ರಾಶಿ, ದೋಷಗಳು, ಫಲಗಳು, ಕಾಟಗಳು ಇತ್ಯಾದಿಗಳನ್ನು ಸೇರಿಸಲಾಯಿತು. ಇವರ ಅತ್ಯಂತ ದೊಡ್ಡ ಆವಿಷ್ಕಾರವೆಂದರೆ ವೈಜ್ಞಾನಿಕವಾದ ಪುರಾತನ ಆವಿಷ್ಕಾರಗಳಿಗೆ ಬುರುಡೆ ಅಪ್ಲಿಕೇಷನ್‍ಗಳನ್ನು ಕಂಡುಹಿಡಿದು, ಅವುಗಳ ಜೊತೆಗೆ ಭಯದ ಪ್ರೋಗ್ರಾಮ್ ಚಿಪ್ಪನ್ನು ಜನರ ಮೆದುಳಿಗೆ ಇಂಪ್ಲಾಂಟ್ ಮಾಡಿದ್ದು! ಇಂದಿಗೂ ವಿದ್ಯಾವಂತರೆನಿಸಿಕೊಂಡವರು ಕೂಡಾ ಇಂತಹ ಒಂದು ಚಿಪ್ಪನ್ನು ತಲೆಯೊಳಗೆ ಹೊತ್ತು ತಿರುಗುವುದನ್ನು ನೋಡಬಹುದು. ನಮ್ಮ ಮಾಧ್ಯಮದಲ್ಲೂ ಇಂತಹ ‘ಚಿಪ್ಪು’ ಹಂದಿಗಳು ದಂಡಿಯಾಗಿವೆ!
ಪಂಚಾಂಗಗಳ ದೊಡ್ಡ

ಸಾಧನೆ ಎಂದರೆ ಮನುಷ್ಯನ ಹುಟ್ಟು-ಸಾವು-ಕರ್ಮಗಳಿಗೂ ಗ್ರಹ-ನಕ್ಷತ್ರ-ಘಳಿಗೆಗಳಿಗೂ, ಭವಿಷ್ಯಕ್ಕೂ ಇಲ್ಲದ ಸಂಬಂಧ ಕಲ್ಪಿಸಿದ್ದು! ಮತ್ತು ಮಂತ್ರವಾದಿ ಕತೆಗಳಂತಹ ಕಾಲ್ಪನಿಕ ಚಿತ್ರಣವನ್ನು ಪಂಚಾಂಗಕ್ಕೆ ಸೇರಿಸಿ ಸಂವತ್ಸರಗಳು ಪಿಶಾಚಿಗಳಂತೆ ಜನರ ತಲೆಯಲ್ಲಿ ಕುಣಿಯುವಂತೆ ಮಾಡಿದ್ದು.
ನನ್ನ ಬಾಲ್ಯದಲ್ಲಿ ಪಂಚಾಂಗ ಮನೆ ಸೇರಿದ ಕೂಡಲೇ ತಂದೆಯವರು ಒಮ್ಮೆ ಕಣ್ಣಾಡಿಸಿದ್ದೇ ತಡ ಅದು ನನ್ನ ಪಾಲಾಗುತ್ತಿತ್ತು. ಯಾಕೆಂದರೆ ಶಾಲೆಗಳಲ್ಲಿ ಅಶ್ವಿನಿ, ಭರಣಿ, ಕೃತ್ತಿಕಾ… ಮುಂತಾದ ನಕ್ಷತ್ರಗಳು, ಮೇಷ, ವೃಷಭ, ಮಿಥುನ… ಮುಂತಾದ ರಾಶಿಗಳು, ಚೈತ್ರ, ವೈಶಾಖ, ಆಷಾಡ…ಇತ್ಯಾದಿ ಋತುಗಳು, ಪ್ರಭವ, ವಿಭವ, ಶುಕ್ಲ…ಇತ್ಯಾದಿ ಸಂವತ್ಸರಗಳನ್ನು ಉರುಹೊಡೆಸಲಾಗುತ್ತಿತ್ತು.
ಮಹಾ ಕುತೂಹಲಕಾರಿ, ಅದ್ಭುತ, ಭಯಾನಕವಾಗಿದ್ದುದು ಮಾತ್ರ ಚಂದಾಮಾಮ ಕತೆಗಳನ್ನು ಮೀರಿಸುವ ಸಂವತ್ಸರ ಫಲ! ಅವುಗಳಲ್ಲಿ ಆಯಾ ಸಂವತ್ಸರಕ್ಕೆ ಒಂದೊಂದು ಭಯಾನಕ ರೂಪ ಕೊಡಲಾಗುತ್ತಿತ್ತು. “ರಕ್ತಾಕ್ಷಿ ನಾಮದ ದೇವತೆಯು ಪೀತವಸ್ತ್ರಧಾರಿಣಿಯಾಗಿ, ಒಂದು ಕೈಯಲ್ಲಿ ಕಪಾಳವನ್ನೂ ಇನ್ನೊಂದು ಕೈಯ್ಯಲ್ಲಿ ಶೂಲವನ್ನೂ ಹಿಡಿದುಕೊಂಡು, ನೇರಳೆ ಬಣ್ಣದ ಹೂವಿನ ಮಾಲೆಯನ್ನು ಧರಿಸಿಕೊಂಡು, ಭಿಕ್ಷಾನ್ನವನ್ನು ಮುಕ್ಕುತ್ತಾ, ಪಶ್ಚಿಮದಿಂದ ಪೂರ್ವಾಭಿಮುಖವಾಗಿ ದಕ್ಷಿಣ ದಿಕ್ಕನ್ನು ದಿಟ್ಟಿಸುತ್ತಾ ಕತ್ತೆಯ ಮೇಲೇರಿ ಪಯಣಿಸುವಳು… ಎರಡು ಕೊಳಗ ಮಳೆಯನ್ನು ಸುರಿಸುವಳು… ಇಷ್ಟ ಧಾನ್ಯ ಗೋಧಿ… ಆಕೆ ಬಳಸಿದ ವಸ್ತುಗಳಿಗೆ ಕೊರತೆಯಾಗುವುದು… ಹೀಗೆ ಸಾಗುವ ಕತೆಯನ್ನು ಓದಿ ನಾವು ಮಕ್ಕಳು ರಾತ್ರಿ ವೇಳೆ ಭಯಾನಕ ಕನಸುಬಿದ್ದು ಬೆವರುತ್ತಿದ್ದರೆ, ಹಿರಿಯರು ಇವುಗಳಿಗೆ ತಮ್ಮದೇ ಕಾಲ್ಪನಿಕ ಅರ್ಥ ಕಲ್ಪಿಸಿ, ಈ ಸಲ ಮಳೆ ಕಡಿಮೆ, ಕಾಲ ಕಷ್ಟ, ಗೋಧಿಗೆ ಹೇಗೋ ಗೊತ್ತಿಲ್ಲ; ಭತ್ತಕ್ಕೆ ತೊಂದರೆಯಿಲ್ಲ ಎಂಬಿತ್ಯಾದಿ ಚಿಂತೆಗಳಲ್ಲಿ ಮುಳುಗಿರುತ್ತಿದ್ದರು. ಇಂತಹಾ ಒಂದು ಸಾಮೂಹಿಕ ಸನ್ಮೋಹನದ, ಸಮೂಹ ಸನ್ನಿಯ ಮನಶ್ಶಾಸ್ತ್ರೀಯ ಆವಿಷ್ಕಾರವನ್ನು ಭಾರತದ ಬುರುಡೆ ಜ್ಯೋತಿಷಿಗಳು ಬಿಟ್ಟರೆ ಪ್ರಪಂಚದಲ್ಲಿ ಬೇರಾರೂ ಮಾಡಿರಲಿಕ್ಕಿಲ್ಲ.
ಒಂದೆರಡು ಕೊಳಗ ಮಳೆ ಎಂದರೆ ಬರ ಬರುತ್ತದೆಂದೂ, ನಾಲ್ಕು ಕೊಳಗ ಎಂದರೆ ಪ್ರಳಯವೆಂದೂ ನಂಬುವ ರೈತಾಪಿ ಜನರು, ಈ ಸಂವತ್ಸರವು ಇಡೀ ಜಗತ್ತಿಗೆ ಅನ್ವಯಿಸುವುದಾದರೆ ಮರುಭೂಮಿಯಲ್ಲಿ ಕಡಿಮೆ ಮಳೆ, ಕರಾವಳಿ-ಮಲೆನಾಡುಗಳಲ್ಲಿ ಹೆಚ್ಚು ಮಳೆ ಯಾಕೆ ಸುರಿಸುತ್ತದೆ ಎಂದು ಎಂದಿಗೂ ಯೋಚಿಸುವುದಿಲ್ಲ! ಏನಾದರೂ ಹೆಚ್ಚುಕಡಿಮೆ ಅದರೆ, ಸಮಜಾಯಿಷಿ ಕೊಡಲು ಜೋಯಿಸರಿಗೆ ಮಾತ್ರ ಈ ತರ್ಕ ಅನುಕೂಲಕ್ಕೆ ಬರುತ್ತದೆ.
ನಾಲ್ಕು ಕೊಳಗ ಮಳೆ ಎಂದಿದ್ದಾಗ ತೀರಾ ಕಡಿಮೆ ಮಳೆ ಬಂದಿದ್ದನ್ನೂ, 1974ರಲ್ಲಿ ಎರಡೋ ಮೂರೋ ಕೊಳಗ ಎಂದಿದ್ದಾಗ, ನೇತ್ರಾವತಿ ನದಿಯಲ್ಲಿ ಒಂದು ಇಡೀ ತಲೆಮಾರು ಮರೆಯದ, ಪ್ರಳಯದಂತಹ ಮಳೆ ಮತ್ತು ನೆರೆ ಬಂದದ್ದನ್ನೂ ನಾನು ಕಂಡಿದ್ದೇನೆ, ಆ ಮಾತು ಬೇರೆ.
ಈ ಜೋಯಿಸರು ಒಳ್ಳೆಯ ಹಾಸ್ಯಪಟುಗಳೂ ಹೌದು! ಅದಕ್ಕಾಗಿಯೇ ಅವರು ‘ಗವಳಿ ಪತನ ಫಲ’ ಎಂದೇನೋ ಒಂದು ಶಕುನವನ್ನೂ ಕೊಡುತ್ತಿದ್ದರು. ಅಂದರೆ, ಅಕಸ್ಮಾತ್ ಹಲ್ಲಿಯೇನಾದರೂ ಮೈಮೇಲೆ ಬಿದ್ದರೆ ಯಾವ ಫಲ ಇತ್ಯಾದಿ. ಕೈಗೆ ಬಿದ್ದರೆ, ಹೆಗಲಿಗೆ ಬಿದ್ದರೆ…ಹೀಗೆ ಫಲಗಳಿರುತ್ತವೆ. ಇರುವ ಎಲ್ಲಾ ಮನೆವಾರ್ತೆ ಪ್ರಾಣಿಗಳಲ್ಲಿ ಹಲ್ಲಿ ಏಕೆ ವಿಶೇಷ ಎಂದು ನನಗಿನ್ನೂ ಒಗಟು. ಹಲ್ಲಿ ಏನಾದರೂ ಬ್ಯಾಲೆನ್ಸ್ ತಪ್ಪಿ ಜೋಕಾಲಿಯಿಂದ ಬಲೆಗೆ ಬೀಳುವ ಸರ್ಕಸಿನ ಜೋಕರ್‍ನಂತೆ ಅನ್ನದ ಪಾತ್ರೆಗೆ ಬಿದ್ದರೆ ಏನು ಫಲ ಎಂದರೆ, ತಿಂದವರಿಗೆ ವಾಂತಿ-ಬೇಧಿ ಎಂದು ಕಂಡಿದ್ದೇನೆ. ಅದರೆ ಹಲ್ಲಿ ಬೀಳುವುದಕ್ಕೂ ಭವಿಷ್ಯಕ್ಕೂ ಏನು ಸಂಬಂಧ? ಆಗ ಭವಿಷ್ಯದ ಮೇಲೆ ಪ್ರಭಾವ ಬೀರುವ ಗ್ರಹ, ನಕ್ಷತ್ರಗಳು ರಜೆ ಹಾಕಿರುತ್ತವೆಯೆ!?
ನಾನು ಏಳನೇ ತರಗತಿಯಲ್ಲಿರುವಾಗ ಹಲ್ಲಿ ಪತನದ ಪರಿಣಾಮವನ್ನು ಕಣ್ಣಾರೆ ಕಾಣುವಂತಾಯಿತು. ಆ ಭಯಾನಕ ಘಟನೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ! ನಮ್ಮದು ಅಗಲೇ ಏಳ್ನೂರು ವಿದ್ಯಾರ್ಥಿಗಳಿದ್ದ ಅತ್ಯಂತ ಹಳೆಯ ಖಾಸಗಿ ಅನುದಾನಿತ ಕನ್ನಡ ಮಾಧ್ಯಮ ಶಾಲೆ! ಭಾರಿ ಕಟ್ಟಡ, ಇಪ್ಪತ್ತೈದು ಅಡಿ ಮೀರಿದ ಛಾವಣಿ.
ಒಂದು ದಿನ ಬೋಳು ತಲೆಯ ಒಬ್ಬರು ಮೇಷ್ಟ್ರು ಪಾಠ ಮಾಡುತ್ತಿದ್ದರು. ಮೇಲ್ಜಾತಿಗೆ ಸೇರಿದ ಅವರು ಮಕ್ಕಳನ್ನು ಜಾತಿ-ಧರ್ಮದ ಹೆಸರೆತ್ತಿ ಅವಮಾನಿಸುತ್ತಿದ್ದರಿಂದ, ಹೊಡೆಯುತ್ತಿದ್ದುದರಿಂದ ಅವರನ್ನು ಕಂಡರೆ ನಮಗ್ಯಾರಿಗೂ ಆಗುತ್ತಿರಲಿಲ್ಲ! ಆ ದಿನ ಮಟಮಟ ಮಧ್ಯಾಹ್ನ! ಒಂದು ಹಲ್ಲಿ ತಟಕ್ಕನೇ ಅವರ ಬೋಳು ನೆತ್ತಿಯ ಮೇಲೆ ಬಿತ್ತು! ಇಡೀ ತರಗತಿ ದಂಗಾಯಿತು. ನನ್ನನ್ನೂ ಸೇರಿದಂತೆ ಹೆಚ್ಚಿನವರಿಗೇ ಒಳಗೊಳಗೇ ಖುಷಿ ಕೂಡ- “ಮಾಷ್ಟ್ರು ಸಾಯುತ್ತಾರೆ!”. ನಡುನೆತ್ತಿಗೆ ಹಲ್ಲಿ ಬಿದ್ದರೆ ಮರಣ ಅಂತ ಪಂಚಾಂಗದಲ್ಲಿ ಬರೆದಿದೆ! ಕೊನೆಗೂ ಹಾಗೆಯೇ ಆಯಿತು!
ಮೇಷ್ಟ್ರು ಕೇಳಿದರು, “ಪಂಚಾಂಗ ನೋಡುತ್ತೀರ?! ನಡು ನೆತ್ತಿಯ ಮೇಲೆ ಹಲ್ಲಿ ಬಿದ್ದರೆ ಏನು ಫಲ?”
ನಾನು ತಟ್ಟನೇ ಉತ್ತರಿಸಿದೆ, “ಮರಣ!”
ಮೇಷ್ಟ್ರು “ಹೌದು! ಮರಣ! ಯಾರಿಗೆ?…ಹಲ್ಲಿಗೆ!” ಎಂದವರೇ ನೆಲ ತೋರಿಸಿದರು. ಅಲ್ಲಿ ಅಷ್ಟು ಎತ್ತರದಿಂದ ಬಿದ್ದಿದ್ದ ಹಲ್ಲಿ ಕಾಲು ಮೇಲಾಗಿ ಬಿಳಿಹೊಟ್ಟೆ ತೋರಿಸುತ್ತಾ ಸತ್ತುಬಿದ್ದಿತ್ತು! ಅಂದೇ, ಈ ಬುರುಡೆ ಜ್ಯೋತಿಷ್ಯ ಕುರಿತ ನನ್ನ ನಂಬಿಕೆ ಕಳಚಿಹೋಯಿತು. ಈ ಮೇಷ್ಟ್ರು ಇಂದಿಗೂ ಮುಂಬಯಿಯಲ್ಲಿ ಮಕ್ಕಳ ಮನೆಯಲ್ಲಿ ಇದ್ದಾರೆಂದು ಕೇಳಿದ್ದೆ!
ಇವೆಲ್ಲವುಗಳ ವಾಸ್ತವವನ್ನು ಮುಂದೆ ಆಧುನಿಕ ವಿಜ್ಞಾನದ ಮೂಲಕ ವಿವರವಾಗಿ ಮತ್ತು ತಾರ್ಕಿಕವಾಗಿ ಪರಿಶೀಲಿಸುವ ಮೊದಲು ಇಂತಹ ಇನ್ನಷ್ಟು ಆವಿಷ್ಕಾರಗಳ ಕತೆಗಳನ್ನು ಕೇಳೋಣ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...