Homeಅಂಕಣಗಳುಯೆಮೆನ್ ಜಗತ್ತಿನ ಅತಿದೊಡ್ಡ ಮಾನವ ಬಿಕ್ಕಟ್ಟು

ಯೆಮೆನ್ ಜಗತ್ತಿನ ಅತಿದೊಡ್ಡ ಮಾನವ ಬಿಕ್ಕಟ್ಟು

- Advertisement -
- Advertisement -

ಹಳೆಯ ಕನ್ನಡ ಪೌರಾಣಿಕ ಸಿನಿಮಾಗಳಲ್ಲಿ ಕೇಡಿಗಳ ಪಾತ್ರ ಮಾಡಿದವರು ತಮ್ಮ ಶತ್ರುಗಳನ್ನು ಮತ್ತು ಎದುರಾಳಿಗಳನ್ನು ಆಕಾಶಕಾಯಗಳ ಮೂಲಕ ನಾಶ ಮಾಡುವುದನ್ನು ನೋಡುತ್ತಿದ್ದೆವು. 2017ರ ಮೇ ತಿಂಗಳಿನಲ್ಲಿ ಅಮೆರಿಕದ ಅಧ್ಯಕ್ಷ ಮತ್ತು ಥಿಯೇಟ್ರಿಕ್ಸ್‍ನ ದೊಡ್ಡ ಅಭಿಮಾನಿ ಡೊನಾಲ್ಡ್‍ಟ್ರಂಪ್ ಅವರು ಸೌದಿಯದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಹಾಗೂ ಈಜಿಪ್ಟಿನ ಅಧ್ಯಕ್ಷ ಅಬ್ದುಲ್ ಫತೇಹ್ ಅಲ್-ಸಿಸಿಯ ಆಕಾಶಕಾಯದ ಮೇಲೆ ಕೈ ಹಿಡಿದುಕೊಂಡು ರಿಯಾದ್‍ನ ಮಹತ್ವಾಕಾಂಕ್ಷೆಯ ತೀವ್ರವಾದಿ ಸಿದ್ಧಾಂತದ ವಿರುದ್ಧ ಹೋರಾಡುವ ಗ್ಲೋಬಲ್ ಸೆಂಟರ್ ಒಂದಕ್ಕೆ ಚಾಲನೆ ನೀಡಿದರು. ಅದು ದುಖಾಂತ್ಯ ಕಾಣದಿದ್ದರೆ ಬಹಳ ತಮಾಷೆಯಾಗಿರುತ್ತಿತ್ತು. ಅವರ ತಥಾಕಥಿತ ಭಯೋತ್ಪಾದನಾ ಮಧ್ಯಪ್ರವೇಶ ಎಂಬುದು ಇಂದು ಪ್ರಪಂಚದ ಇತಿಹಾಸದಲ್ಲೇ ಅತಿದೊಡ್ಡ ಮನುಷ್ಯ ನಿರ್ಮಿತ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸೌದಿ ಅರೇಬಿಯಾದ ದಕ್ಷಿಣಕ್ಕಿರುವ ಯೆಮೆನ್ ಮಧ್ಯಪ್ರಾಚ್ಯದಲ್ಲೇ ಅತ್ಯಂತ ಬಡದೇಶ. 2015ರಲ್ಲಿ ಶುರುವಾದ ಈಗಿನ ಸಂಘರ್ಷಕ್ಕೆ ಮುನ್ನ ಅಲ್ಲಿನ ಜನಸಂಖ್ಯೆ 2.8 ಕೋಟಿಯಿತ್ತು. ಯೆಮೆನ್‍ನೊಂದಿಗೆ ಗಡಿ ಹಂಚಿಕೊಳ್ಳು ಸೌದಿ ಅರೇಬಿಯಾ ಮಧ್ಯಪ್ರಾಚ್ಯದ ಅತ್ಯಂತ ಶ್ರೀಮಂತ ದೇಶ. ಇಂದುಯೆಮೆನ್‍ನಲ್ಲಿರುವ ಬಿಕ್ಕಟ್ಟನ್ನು ಹೆಚ್ಚಿಸಿದ್ದು ಅಲ್ಲಿನ ವರ್ಷಾನುಗಟ್ಟಲೆಯ ನಿರುದ್ಯೋಗ, ಬಡತನ, ಬೆಲೆಯೇರಿಕೆ ಹಾಗೂ ಮುಸ್ಲಿಮರ ಭಿನ್ನ ಪಂಗಡಗಳ ನಡುವಿನ ತಾರತಮ್ಯಗಳು. ಶಿಯಾ ಹೌತಿಸ್ ಎಂದು ಕರೆಯಲಾಗುವ ಗುಂಪು ಚಾರಿತ್ರಿಕ ತಾರತಮ್ಯಕ್ಕೆ ಒಳಗಾಗಿದ್ದು ಸರ್ಕಾರದ ವಿರುದ್ಧ ಬಂಡಾಯ ಹೂಡಿದೆ. 2004ರಲ್ಲಿ ಈ ಪಂಗಡವು ತನ್ನ ನ್ಯಾಯಬದ್ಧಅಧಿಕಾರ ಹಂಚಿಕೆಗಾಗಿ ಸರಣಿ ಬಂಡಾಯಗಳನ್ನು ನಡೆಸಿತು. 2011ರಲ್ಲಿ ಅರಬ್‍ದಂಗೆಯ ತರುವಾಯ ಅಧ್ಯಕ್ಷ ಸಾಲೆಹ್ ಪದಚ್ಯುತನಾಗಿ 2012ರಲ್ಲಿ ಪ್ರಬಲ ಸೌದಿ ಅರೇಬಿಯಾ ಹಾಗೂ ಗಲ್ಫ್ ದೇಶಗಳ ಮೇಲ್ವಿಚಾರಣೆಯಲ್ಲಿ ಅಬ್ದ್-ರಬ್ಬು ಮನ್ಸೂರ್ ಹೌದಿ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾಯಿತು. ಹೌತಿಸ್ ಬಣವು ಈ ಮಧ್ಯಂತರ ಸರ್ಕಾರವನ್ನು ನಿರಾಕರಿಸಿ ರಾಜಧಾನಿ ಸನಾ ನಗರಕ್ಕೆ ಮುತ್ತಿಗೆ ನಡೆಸಿ 2014ರ ಸೆಪ್ಟೆಂಬರ್‍ನಲ್ಲಿ ರಾಜಧಾನಿಯನ್ನು ವಶಕ್ಕೆ ಪಡೆದುಕೊಂಡಿತು. ಅಧ್ಯಕ್ಷ ಹೌದಿ ಸನಾದಿಂದ ಸುನ್ನಿಗಳ ಬಾಹುಳ್ಯದ ಅಡೆನ್ ನಗರಕ್ಕೆ ಪರಾರಿಯಾದರು. ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗುತ್ತಿದ್ದಂತೆ ಅವರು ಯೆಮೆನ್‍ನಿಂದಲೇ ಓಡಿ ಹೋದರು. ಅಂದಿನಿಂದಲೂ ಸೌದಿ ಅರೇಬಿಯಾ ನೇತೃತ್ವದ ಮೈತ್ರಿಕೂಟವು ನಿರಂತರವಾಗಿ ಹಿಂಸಾಚಾರದಲ್ಲಿ ತೊಡಗಿದೆ.
ಮೂರು ವರ್ಷಗಳ ಆಂತರಿಕ ಯುದ್ಧದ ನಂತರದಲ್ಲಿ ಯೆಮೆನ್ ಜನರು ದೊಡ್ಡ ಮಾನವ ಬಿಕ್ಕಟ್ಟನ್ನೆದುರಿಸುತ್ತಿದ್ದಾರೆ. ದೇಶದ 50 ಲಕ್ಷ ಮಕ್ಕಳು ಹಸಿವಿನ ದವಡೆಯಲ್ಲಿ ಸಿಲುಕಿದ್ದಾರೆ. ದೇಶದ ಪ್ರಮುಖ ಮೂಲಸೌಕರ್ಯ ವ್ಯವಸ್ಥೆ ಬಹುತೇಕ ನಾಶವಾಗಿದೆ. ದೇಶದ ಸಂಸ್ಕøತಿ ಪಾರಂಪರೆಯ ಗುರುತುಗಳೆಲ್ಲವೂ ಧ್ವಂಸಗೊಂಡಿವೆ. ಜಗತ್ತಿನ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ಈಗಿನ ಯೆಮೆನ್ ರಾಜಧಾನಿ ಸನಾ ಮತ್ತು ಸದಾ ನಗರಗಳೂ ಇದರಲ್ಲಿ ಸೇರಿವೆ. ಯೆಮೆನ್‍ನ ನಾಗರಿಕ ಯುದ್ಧದ ಸೌದಿ ಮತ್ತು ಇರಾನ್‍ಗಳ ನಡುವಿನ ಬದಲಿ ಯುದ್ಧದಂತೆ (ಪ್ರಾಕ್ಸಿ ವಾರ್) ತೋರಿದರೂ ನಿಜವಾದ ಕಾರಣ ಬಹಳ ಸಂಕೀರ್ಣವಾಗಿದೆ. ಎರಡೂ ಕಡೆಯಿಂದ ಪರಸ್ಪರ ನಿಂದನೆಗಳು ನಡೆದು ಇಬ್ಬರೂ ಅಪರಾಧಿ ಸ್ಥಾನದಲ್ಲಿ ನಿಂತಿದ್ದರೂ ಈ ಯುದ್ಧಕ್ಕೆ ಯುಕೆ, ಅಮೆರಿಕ, ಫ್ರಾನ್ಸ್ ಮತ್ತು ಕೆನಡಾಗಳು ಒದಗಿಸಿರುವ ಶಸ್ತ್ರಾಸ್ತ್ರಗಳ ಪ್ರಮಾಣ ಬೆಚ್ಚಿ ಬೀಳಿಸುತ್ತದೆ. ಮುಖ್ಯವಾಹಿನಿ ಮಾಧ್ಯಮಗಳಿಂದ ನಿರ್ಲಕ್ಷ್ಯಗೊಳಗಾಗಿ ಅತ್ಯಂತ ಬಾಧಿತವಾಗಿರುವ ಯೆಮೆನ್ ನಾಗರಿಕರು ಮಾಧ್ಯಮಗಳ ಮೂಲಕ ಜಗತ್ತಿನ ಗಮನ ಸೆಳೆಯಲು ಸಾಧ್ಯವಾಗಲಿಲ್ಲ.
ಹೌತಿ ಬಂಡುಕೋರರ ನೆಲೆಗಳ ಮೇಲೆ ಸೌದಿ ಬೆಂಬಲಿತ ಮೈತ್ರಿಕೂಟವು ವಾಯುದಾಳಿಗಳನ್ನು ನಡೆಸಿತು. ಲೆಕ್ಕವಿಲ್ಲದಷ್ಟು ಅಮಾಯಕ ಜನರು ಕೊಲ್ಲಲ್ಪಟ್ಟರೆ, ಅಪಾರ ಮಟ್ಟದ ಆಸ್ತಿಪಾಸ್ತಿ ನಾಶವಾಯಿತು. ಈ ಮೈತ್ರಿಕೂಟದಲ್ಲಿ ಮುಖ್ಯವಾಗಿ ಸೌದಿ ಅರೇಬಿಯಾ ಹಾಗೂ ಸಂಯುಕ್ತ ಅರಬ್ ಸಂಸ್ಥಾನಗಳು, ಅಮೆರಿಕ, ಬ್ರಿಟನ್, ಕೆನಡಾ ಮತ್ತು ಫ್ರಾನ್ಸ್‍ಗಳ ಸೈನಾ ತರಬೇತಿ, ಶಸ್ತ್ರಾಸ್ತ್ರ ಪೂರೈಕೆಗಳಿವೆ. ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧಗಳ ಹಿನ್ನೆಲೆಯಲ್ಲಿ ಕಳೆದ ವರ್ಷ ವಿಶ್ವಸಂಸ್ಥೆಯು ಇದನ್ನು ಕಪ್ಪುಪಟ್ಟಿಗೆ ಸೇರಿಸಿದ ತರುವಾಯ ಹಾಲೆಂಡ್ ಮತ್ತು ನಾರ್ವೆಗಳು ಶಸ್ತ್ರಾಸ್ತ್ರಗಳ ಪೂರೈಕೆಯನ್ನು ನಿಲ್ಲಿಸಿದರೂ ಇತರ ದೇಶಗಳ ಮೇಲೆ ಸೌದಿ ಒತ್ತಡ ತಂದು ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿತು. ಕಪ್ಪುಪಟ್ಟಿಗೆ ಸೇರಿಸಿದ ವಿಶ್ವಸಂಸ್ಥೆಯ ವರದಿಯಲ್ಲಿ ಹೇಳುವ ಪ್ರಕಾರ, ಸೌದಿ ನೇತೃತ್ವದ ಮಿತ್ರಕೂಟವು 10 ಆಸ್ಪತ್ರೆಗಳು, ಮದುವೆ ಸಮಾರಂಭಗಳು, ಶವಸಂಸ್ಕಾರಗಳು, ನಿರಾಶ್ರಿತರ ಶಿಬಿರಗಳು, ಆಹಾರ ಸರಬರಾಜು ಟ್ರಕ್‍ಗಳು, ಕಾರ್ಖಾನೆಗಳು, ಸಾರಿಗೆ ಮಾರ್ಗಗಳು, ಕೃಷಿ ಭೂಮಿಗಳು, ವಸತಿ ಪ್ರದೇಶಗಳು ಮತ್ತು ಶಾಲೆಗಳನ್ನು ಗುರಿಪಡಿಸಿ ದಾಳಿ ನಡೆಸಿದೆ. ಇವ್ಯಾವೂ ಭಯೋತ್ಪಾದಕರ ತಾಣಗಳಲ್ಲ. ಮಕ್ಕಳು, ಸಾಮಾನ್ಯಜನರು ಹೋಗುವ ಸ್ಥಳಗಳು. ತಮ್ಮನ್ನು ವಿಶ್ವಸಂಸ್ಥೆ ಕಪ್ಪುಪಟ್ಟಿಗೆ ಸೇರಿಸದ ಮೇಲೆ ಸೌದಿಯ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ತನ್ನ ಸೇನಾ ಪಡೆಗಳಿಗೆ `ಅಂತರರಾಷ್ಟ್ರೀಯ ಟೀಕೆಗೆಲ್ಲಾ ತಲೆಕೆಡಿಸಿಕೊಳ್ಳಬೇಡಿ. ಯೆಮೆನ್‍ನ ಮುಂದಿನ ಪೀಳಿಗೆಗಳ ಪ್ರಜ್ಞೆಯ ಮೇಲೆ ದೊಡ್ಡ ಪರಿಣಾಮವನ್ನು ನಾವು ಉಂಟು ಮಾಡಬೇಕಿದೆ. ಸೌದಿ ಅರೇಬಿಯಾ ಹೆಸರು ಕೇಳಿದರೇ ಅವರ ಹೆಂಗಸರು, ಮಕ್ಕಳು ಮತ್ತು ಗಂಡಸರೂ ಗಡಗಡ ನಡುಗುವಂತೆ ಮಾಡಬೇಕು’’ ಎಂದು ಹೇಳಿದ್ದಾನೆ. ಮಿತ್ರಕೂಟದ ವಾಯುಸೇನಾ ದಾಳಿಯು 1000ಕ್ಕಿಂತ ಹೆಚ್ಚು ಮಕ್ಕಳೂ ಸೇರಿದಂತೆ ಸುಮಾರು 10,000 ಜನರ ಕಗ್ಗೊಲೆಗೈದಿದೆ. 30 ಲಕ್ಷ ಯೆಮೆನ್ ನಾಗರಿಕರು ತಮ್ಮ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆಕ್ಸ್‍ಫಾಮ್ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ ಈ ಯುದ್ಧವು ಯೆಮೆನ್‍ನನ್ನು ಸಂಪೂರ್ಣಕ್ಷಾಮದ ಸ್ಥಿತಿಗೆ ತಳ್ಳಿದೆ. ಇಲ್ಲಿನ ಜನರ ಪರಿಸ್ಥಿತಿ ಇಡೀ ಭೂ ಗ್ರಹದಲ್ಲಿಯೇ ಅತ್ಯಂತ ಹೀನ ಸ್ಥಿತಿಗೆ ಮುಟ್ಟಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ, ಸುಮಾರು 1.7ಕೋಟಿ ಜನರಿಗೆ ಸರಿಯಾದ ಗಂಜಿ ನೀರಿಗೂ ತತ್ವಾರವಾಗಿದೆ. ಸು.70 ಲಕ್ಷಜನರು ಕ್ಷಾಮ ಸ್ಥಿತಿಗೆ ಒಂದು ಹೆಜ್ಜೆ ಹಿಂದಿದ್ದಾರಷ್ಟೆ. ಮನುಷ್ಯರು ಎಲೆಗಳನ್ನು ಮತ್ತು ಹುಲ್ಲನ್ನು ತಿನ್ನುವ ದಾರುಣ ಸ್ಥಿತಿ ಏರ್ಪಟ್ಟಿದೆ. ಮಿತ್ರಕೂಟವು ಯೆಮೆನ್‍ಗೆ ಆಹಾರ, ಔಷದಿ ಸಹಾಯದ 80% ಬರುತ್ತಿದ್ದ ಹೊಡೆದಾಹ್ ಬಂದರನ್ನು ಬಂದ್ ಮಾಡಿ ಯೆಮೆನ್‍ಗೆ ಯಾವುದೇ ಮಾನವಿಕ ನೆರವು ಸಿಗದಂತೆ ಮಾಡಿದೆ.
ಇಂಡಿಯಾದ ಮಾಧ್ಯಮಗಳಿಗೆ ಐಸಿಸ್ ಮತ್ತು ಕಿಮ್‍ಜಾಂಗ್ ವಿಷಯಗಳನ್ನು ಬಿಟ್ಟರೆ ಯೆಮೆನ್‍ನ ಬಿಕ್ಕಟ್ಟು ಕಾಣುತ್ತಿಲ್ಲ. ನಿರಾಶ್ರಿತರ ಸುದ್ದಿ ಎಂದಾಗ ಪ್ಯಾಲೆಸ್ತೀನ್ ಮತ್ತು ಸಿರಿಯಾಗಳ ಬಗ್ಗೆ ತಲೆಬರಹಗಳು ಕಾಣುತ್ತವೆಯೇ ಹೊರತು ಯೆಮೆನ್ ಕಾಣಿಸುವುದಿಲ್ಲ. ಯೆಮೆನ್‍ಗಾಗಿ ಯಾರೂ ಕಾಳಜಿ ವಹಿಸುತ್ತಿಲ್ಲ. ವಿಕಟ ವಿಪರ್ಯಾಸವೆಂದರೆ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಇಲ್ಲಿನ ಸ್ಥಿತಿಯ ಕುರಿತು ವರದಿ ನೀಡಿದ ಮೇಲೂ, ವಿಶ್ವಸಂಸ್ಥೆಯು ಕಪ್ಪುಪಟ್ಟಿಗೆ ಸೇರಿಸಿದ ಮೇಲೆಯೂ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಮುಖ್ಯಸ್ಥನಾಗಿ ಮುಂದುವರೆದಿರುವುದು ಸೌದಿ ಆರೇಬಿಯಾ!!

– ಭರತ್ ಹೆಬ್ಬಾಳ್
ಕನ್ನಡಕ್ಕೆ:
ಹರ್ಷಕುಮಾರ್ ಕುಗ್ವೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...