Homeಸಾಮಾಜಿಕಹೀಗೊಂದು ‘ಅಂಬೇಡ್ಕರ್ ಹಬ್ಬ’

ಹೀಗೊಂದು ‘ಅಂಬೇಡ್ಕರ್ ಹಬ್ಬ’

- Advertisement -
- Advertisement -
  • ವಿಕಾಸ್ ಆರ್ ಮೌರ್ಯ |

‘ವಾಡಿ’ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ದಲಿತರಿಗೆ ಸುಪರಿಚಿತ ಹೆಸರು. 1874ರಲ್ಲಿ ಹೈದರಾಬಾದಿನ ನಿಜಾಮ ಈ ವಾಡಿ ರೈಲ್ವೇ ಜಂಕ್ಷನ್ ಸ್ಥಾಪಿಸಲು ಹಣ ಬಿಡುಗಡೆ ಮಾಡಿದ್ದನು. ಮುಂಬೈಯಿಂದ ಹೈದರಾಬಾದಿಗೆ ಹೋಗಬೇಕೆಂದರೆ ಈ ವಾಡಿಯಲ್ಲಿ ರೈಲು ಬದಲು ಮಾಡಬೇಕಿತ್ತು. ಅಷ್ಟೇ ಅಲ್ಲ, ರೈಲುಗಳು ಕಲ್ಲಿದ್ದಲು ತುಂಬಿಸಿಕೊಳ್ಳಲು ವಾಡಿಯಲ್ಲಿಯೇ ನಿಲ್ಲುತ್ತಿದ್ದವು. ಆದರೆ ‘ವಾಡಿ’ ಇಂದು ಮನೆಮಾತಾಗಿರಲು ಕಾರಣ ಇದಲ್ಲ. ಬಾಬಾಸಾಹೇಬ್ ಅಂಬೇಡ್ಕರರು ಅಲ್ಲಿಗೆ ಎರಡು ಬಾರಿ ಭೇಟಿ ನೀಡಿದ್ದರಿಂದ ಇಂದು ವಾಡಿ ಹೆಸರುವಾಸಿಯಾಗಿದೆ.

ಏಪ್ರಿಲ್ 27, 1945 ನೇ ಇಸವಿ. ಅಂದು ಗುಲ್ಬರ್ಗಾ ಜಿಲ್ಲೆಯ ‘ವಾಡಿ’ ರೈಲ್ವೇ ಜಂಕ್ಷನ್ನಿನಲ್ಲಿ ಹೈದರಾಬಾದ್‍ಗೆ ತೆರಳುತ್ತಿದ್ದ ರೈಲು ಕಲ್ಲಿದ್ದಲು ತುಂಬಿಸಿಕೊಳ್ಳಲು ಎರಡು ಗಂಟೆಗಳ ಕಾಲ ನಿಂತಿತ್ತು. ಅಲ್ಲಿ ಅದ್ಯಾರೋ ಅಂಬೇಡ್ಕರರು ರೈಲಿನಲ್ಲಿರುವ ವಿಚಾರವನ್ನು ಮಾತಾಡುತ್ತಿದ್ದದ್ದನ್ನು ಕೇಳಿಸಿಕೊಂಡ ಸ್ಟೇಷನ್ನಿನಲ್ಲಿ ಟೀ ಮಾರುತ್ತಿದ್ದ ದಿಲ್ದಾರ್ ಹುಸೇನ್‍ರವರು ಇದನ್ನು ತಿಳಿಸಲು ಅತೀವ ಸಂತಸದಿಂದ ‘ವಾಡಿ’ಗೆ ಓಡಿ ಬಂದು ‘ಬಾಬಾಸಾಹೇಬ್ ಅಂಬೇಡ್ಕರ್’ ರೈಲಿನಲ್ಲಿದ್ದಾರೆ ಎಂದು ತಿಳಿಸಿದ ತಕ್ಷಣ ಅಮೃತರಾವ್ ಕೋಮಟೆ, ಜ್ಞಾನೋಬ ಗಾಯಕ್‍ವಾಡ್, ಬಸಪ್ಪ ಬಟ್ರಿಕಿ ಜೊತೆ ಇಡೀ ವಾಡಿಯೇ ಅಂಬೇಡ್ಕರರನ್ನು ನೋಡಲು ತೆರಳಿತು. ಅದಾಗಲೇ ಗಾಯಕ್‍ವಾಡ್ ಅವರು ಮರಾಠಿ ಪತ್ರಿಕೆ ‘ಪ್ರಬುದ್ಧ ಭಾರತ’ ಓದುತ್ತಿದ್ದರಾದ್ದರಿಂದ ಅಂಬೇಡ್ಕರರ ಹೋರಾಟದ ಪರಿಚಯವಿತ್ತು. ಅಂದು ಅಂಬೇಡ್ಕರರು ತನ್ನ ಜನಗಳನ್ನು ಉದ್ದೇಶಿಸಿ ಮಾತನಾಡಿದರು. ಭಾವಚಿತ್ರವನ್ನೂ ತೆಗೆಸಿಕೊಂಡರು. ಬಾಬಾಸಾಹೇಬರನ್ನು ಬೀಳ್ಕೊಟ್ಟ ವಾಡಿ ಜನತೆ ಅಂದೇ ಸೈಕಲ್ಲುಗಳ ಮೇಲೆ ಬಾಬಾಸಾಹೇಬ್ ಅಂಬೇಡ್ಕರರ ಫೋಟೋ ಕಟ್ಟಿಕೊಂಡು ಊರೆಲ್ಲಾ ಮೆರವಣಿಗೆ ಮಾಡಿದ್ದರು. ಕಾಕತಾಳೀಯವೆಂಬಂತೆ ಅಂಬೇಡ್ಕರರು ವಾಡಿಗೆ ಮತ್ತೊಮ್ಮೆ ಭೇಟಿ ಇತ್ತದ್ದು 1952 ಏಪ್ರಿಲ್ 28 ರಂದು. ಆದ್ದರಿಂದ ವಾಡಿಯ ಜನತೆ ಏಪ್ರಿಲ್ 27 ಮತ್ತು 28 ರಂದು ಪ್ರತಿವರ್ಷ ‘ಅಂಬೇಡ್ಕರ್ ಹಬ್ಬ’ವೆಂದು ಆಚರಿಸುತ್ತಾರೆ. 1956 ರಲ್ಲಿ ಅಂಬೇಡ್ಕರರು ಬೌದ್ಧ ಧಮ್ಮಕ್ಕೆ ಮತಾಂತರವಾದಾಗಲೂ ಇಲ್ಲಿಂದ ಹತ್ತು ಮಂದಿ ನಾಗಪುರಕ್ಕೆ ಹೋಗಿ ಮತಾಂತರಗೊಂಡು ಬಂದರು. ಇಂದಿಗೂ ಸಹ ಅಮೃತರಾವ್ ಕೋಮಟೆಯವರ ಮಗ ಟೋಪಣ್ಣ ಕೋಮಟೆಯವರು ಮತಾಂತರ ದಿನದ ಕರಪತ್ರ, ಪ್ರಬುದ್ಧ ಭಾರತದಲ್ಲಿ ಪ್ರಕಟವಾದ ಅಂಬೇಡ್ಕರರ ದೇಹವನ್ನು ಹೊತ್ತೊಯ್ದ ಭಾವಚಿತ್ರಗಳನ್ನು ಕಾಪಿಟ್ಟುಕೊಂಡಿದ್ದಾರೆ.

ಅಂಬೇಡ್ಕರರು ವಾಡಿಗೆ ಬಂದುಹೋಗಿ 73 ವರ್ಷಗಳು ಉರುಳಿವೆ. ಅಲ್ಲಿನ ದಲಿತರು ಒಗ್ಗಟ್ಟಿನಿಂದ ಹಿಂದೂ ದೇವಾಲಯಗಳ ಬದಲು ಬುದ್ಧ ವಿಹಾರಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಂಬೇಡ್ಕರರು ಬಂದು ಕುಳಿತುಹೋದ ಜಾಗದಲ್ಲಿ ಅಂಬೇಡ್ಕರರು ಕುಳಿತಿರುವ ಭಂಗಿಯಲ್ಲಿ ಮೂರ್ತಿ ನಿರ್ಮಿಸಿದ್ದಾರೆ. ಆ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂದು ಹೆಸರಿಟ್ಟಿದ್ದಾರೆ. ಅಂಬೇಡ್ಕರ್ ಕಲ್ಯಾಣಮಂಟಪವನ್ನೂ ಕಟ್ಟಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಂಟು ಮಂದಿ ತಮ್ಮವರನ್ನೇ ಗೆಲ್ಲಿಸಿಕೊಂಡಿದ್ದಾರೆ.

ವಾಡಿಯ ದಲಿತರನ್ನು ಭೇಟಿಯಾದ ತಕ್ಷಣ ನಿಮಗೆ ‘ಜೈ ಭೀಮ್’ ಎಂಬ ನಮಸ್ಕಾರ ಎದುರಾಗುತ್ತದೆ. ಮಕ್ಕಳ ಹೆಸರಿನ ಜೊತೆ ‘ಬೌದ್’ ಎಂಬ ಪದನಾಮ ಸೇರಿದೆ. ಬಹುತೇಕ ಮಕ್ಕಳ ಹೆಸರು ಬೌದ್ಧರ ಹೆಸರಾಗಿವೆ. ಮನೆಗಳ ಮೇಲೆ ‘ಅಶೋಕ ಚಕ್ರ’ವುಳ್ಳ ನೀಲಿ ಬಾವುಟ ಮತ್ತು ‘ಬೌದ್ಧ ಧರ್ಮ’ದ ಬಾವುಟಗಳು ಹಾರಾಡುತ್ತಿರುತ್ತವೆ. ಏಪ್ರಿಲ್ ತಿಂಗಳು ಬಂತೆಂದರೆ ಬೀದಿಗಳೆಲ್ಲ ನೀಲಿ ಬಣ್ಣಕ್ಕೆ ತಿರುಗುತ್ತವೆ. ಇವರು ಆಚರಿಸುವ ಮೂರು ಹಬ್ಬಗಳು ದಲಿತರ ಮೂಲದ್ದಾಗಿವೆ. ಒಂದು ಕೊರೆಗಾವ್ ವಿಜಯೋತ್ಸವ, ಎರಡನೆಯದ್ದು ಅಂಬೇಡ್ಕರ್ ಹಬ್ಬ, ಮೂರನೆಯದ್ದು ಬುದ್ಧ ಪೂರ್ಣಿಮೆ.

ಏಪ್ರಿಲ್ 27 ಮತ್ತು 28 ಈ ಎರಡು ದಿನಗಳ ಅಂಬೇಡ್ಕರ್ ಹಬ್ಬವನ್ನು ಆಚರಿಸುವ ಪರಿ ನಿಜಕ್ಕೂ ಕುತೂಹಲಕಾರಿ. ಮೊದಲ ದಿನ ಸಂಜೆ ವೇದಿಕೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಅದು ಕೇವಲ ಭಾಷಣ ಕಾರ್ಯಕ್ರಮವಲ್ಲ. ಪ್ರತಿವರ್ಷ ಸರತಿಯ ಮೇಲೆ ಅಶೋಕ ಚಕ್ರ ಮೆರವಣಿಗೆ ಮಾಡಿ ಅದು ವೇದಿಕೆ ತಲುಪಿದಾಗಲೇ ವೇದಿಕೆ ಕಾರ್ಯಕ್ರಮ ಆರಂಭವಾಗುವುದು. ಈ ವರ್ಷ ಆ ಸರತಿ ಅಂಬೇಡ್ಕರ್ ನಗರದ ಪಾಲಾಗಿತ್ತು.

ಎರಡನೆಯ ದಿನದ ಸಂಭ್ರಮ ನಿಜಕ್ಕೂ ವಿಸ್ಮಯ. ದೂರದೂರಿನಿಂದ ನೆಂಟರು-ನಿಷ್ಟರನ್ನು ಅಂಬೇಡ್ಕರ್ ಹಬ್ಬಕ್ಕೆ ಆಹ್ವಾನಿಸಲಾಗಿರುತ್ತದೆ. ಎಲ್ಲರೂ ಹೊಸ ಬಟ್ಟೆ. ಅಕ್ಕ-ತಂಗಿಯರಿಗೆ ತವರುಮನೆಯಿಂದ ಸೀರೆಯನ್ನು ಉಡುಗೊರೆಯಾಗಿ ನೀಡಿ ಆಹ್ವಾನಿಸಲಾಗಿರುತ್ತದೆ. ಊರಿನ ತುಂಬಾ ಬಣ್ಣಬಣ್ಣದ ಬಟ್ಟೆ ಮತ್ತು ತಲೆಗೆ ನೀಲಿ ರುಮಾಲು ತೊಟ್ಟ ಮಕ್ಕಳು, ಯುವಕರ ಸಂಭ್ರಮ. ಯುವತಿಯರು ಕೆನ್ನೆಗೆ ನೀಲಿ ಬಣ್ಣ ಬಳಿದುಕೊಂಡು, ಯುವಕರು ನೀಲಿ ತಿಲಕವಿಟ್ಟುಕೊಂಡು ಮೆರವಣಿಗೆಗಾಗಿ ಕಾಯುತ್ತಿರುತ್ತಾರೆ. ಕೇವಲ ನೋಡಲು ಮಾತ್ರವಲ್ಲ. ಕುಣಿಯಲು, ಕುಣಿದು ಕುಪ್ಪಳಿಸಲು. ಹೌದು ಎರಡನೆಯ ದಿನದ ಮುಖ್ಯ ಆಕರ್ಷಣೆ ಬುದ್ಧ ಮತ್ತು ಅಂಬೇಡ್ಕರರ ಪ್ರತಿಮೆಗಳ ಮೆರವಣಿಗೆ. ಆಹಾರವೂ ವಿಭಿನ್ನ. ಮೊದಲ ದಿನ ಮಾಂಸಾಹಾರವಾದರೆ ಎರಡನೆಯ ದಿನ ಹೋಳಿಗೆ ಊಟ.

ಈ ಮೆರವಣಿಗೆ ಮೈಸೂರು ದಸರೆಯನ್ನು ನೆನಪಿಸುವುದರಲ್ಲಿ ಸಂಶಯವಿಲ್ಲ. ವಾಡಿಯ ಅಂಬೇಡ್ಕರ್ ಕಾಲೋನಿ, ಭೀಮ್ ನಗರ, ಸಿದ್ದಾರ್ಥ ನಗರ, ಗೌತಮ್ ನಗರ ಮತ್ತು ಇಂದಿರಾನಗರಗಳಿಂದ ತಲಾ ಒಂದೊಂದು ಬುದ್ಧ ಮತ್ತು ಅಂಬೇಡ್ಕರ್ ಪ್ರತಿಮೆಗಳನ್ನು ಟ್ರ್ಯಾಕ್ಟರ್ ಮೇಲೆ ವಿಶಿಷ್ಟವಾಗಿ ಹಾಗು ವಿಭಿನ್ನವಾಗಿ ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಸಿಂಗರಿಸಿಕೊಂಡಿರುತ್ತಾರೆ. ಪ್ರತಿ ಪ್ರತಿಮೆಯ ಮುಂದೆ ಅಬ್ಬರಿಸುವ ಡಿಜೆ ಸೌಂಡ್ ಸಿಸ್ಟಮ್ ಇರುತ್ತದೆ. ಅದರ ಹಿಂದೆ ಮನಬಿಚ್ಚಿ ಕುಣಿಯುವ ಯುವಜನರ ತಂಡವಿರುತ್ತದೆ. ಹೀಗೆ ಐದೂ ನಗರಗಳಿಂದ ಹೊರಟ ಐದು ಪ್ರತಿಮೆಗಳು ಅಂಬೇಡ್ಕರ್ ವೃತ್ತದ ಬಳಿ ನಿರ್ಮಿಸಿರುವ ಅವರÀ ಪುತ್ಥಳಿ ಹತ್ತಿರ ಬಂದು ಸೇರುತ್ತವೆ. ಅಲ್ಲಿಂದ ಶುರು. ಅಂಬೇಡ್ಕರ್ ಹಬ್ಬದ ಮೆರವಣಿಗೆ. ಹಾಡು, ಕುಣಿತ, ಅಂಬೇಡ್ಕರ್ ಹಾಗು ಬುದ್ಧನಿಗೆ ಜೈಕಾರ. ಬಿರು ಬಿಸಿಲಿನ ಮಧ್ಯಾಹ್ನ ಆರಂಭವಾಗುವ ಮೆರವಣಿಗೆ ಮುಗಿಯುವುದು ಮಧ್ಯ ರಾತ್ರಿ 12 ಗಂಟೆಗೆ. ಪ್ರತಿ ಏರಿಯಾದ ಮಕ್ಕಳು, ಯುವಕರು ಹದಿನೈದು ದಿನಗಳಿಂದ ಕಲಿತುಕೊಂಡ ನೃತ್ಯಗಳನ್ನ ಮೆರವಣಿಗೆಯುದ್ದಕ್ಕೂ ಪ್ರದರ್ಶಿಸುತ್ತಾ ಹೋಗುತ್ತಾರೆ. ಅವರ ಜೊತೆ ಇಡಿ ಊರಿಗೇ ಊರೇ ಕುಣಿಯುತ್ತದೆ. ಸಂತಸವೆಂದರೆ ಹೆಂಗಸರು ತಮ್ಮ ಮಕ್ಕಳೊಂದಿಗೆ ಹೆಜ್ಜೆ ಹಾಕುವ ಪರಿ. ದಣಿವಾರಿಸಲು ದಾರಿಯುದ್ದಕ್ಕೂ ಮಜ್ಜಿಗೆ ಮತ್ತು ತಂಪು ನೀರು ಉಚಿತವಾಗಿ ಸಿಗುತ್ತದೆ.
ವಾಡಿಯಲ್ಲಿ ಅಂಬೇಡ್ಕರ್ ಜಯಂತಿ ಎಂದರೆ ಹಬ್ಬ. ದಸರಾ ನೆನಪಿಸುವ ಹಬ್ಬ. ಇಂತಹ ಹಬ್ಬ ದೇಶ ವ್ಯಾಪಿ ಬೇಗ ಹಬ್ಬಿಕೊಳ್ಳಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...