Homeಸಾಮಾಜಿಕಒಮ್ಮೆ ಕಣ್ಣು ಮುಚ್ಚಿ ಹೀಗೆ ಕಲ್ಪಿಸಿಕೊಳ್ಳಿ. ನಿಧಾನಕ್ಕೆ ಇದೇನೆಂದು ಅರ್ಥವಾಗಬಹುದು

ಒಮ್ಮೆ ಕಣ್ಣು ಮುಚ್ಚಿ ಹೀಗೆ ಕಲ್ಪಿಸಿಕೊಳ್ಳಿ. ನಿಧಾನಕ್ಕೆ ಇದೇನೆಂದು ಅರ್ಥವಾಗಬಹುದು

- Advertisement -
- Advertisement -

 ಡಾ. ಕಾರ್ತಿಕ್ ಬಿಟ್ಟು
ಕನ್ನಡಕ್ಕೆ: ರಾಜಶೇಖರ ಅಕ್ಕಿ |

ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ, ಅದರೊಂದಿಗೆ ನಿಮ್ಮ ಕೈಗಳನ್ನು ಮೇಲೆತ್ತಿ. ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ಕಾಣಿಸದಿದ್ದರೂ ನೀವು ನಿಮ್ ಕೈಗಳನ್ನು ಮೇಲಕ್ಕೆತ್ತಿದ್ದು ನಿಮಗೆ ಖಂಡಿತವಾಗಿಯೂ ಅನುಭವವಾಗುತ್ತದೆ. ನಿಮ್ಮ ಕೈಗಳು ಎಲ್ಲಿವೆ ಎನ್ನುವುದು ನಿಮಗೆ ತಿಳಿಯುತ್ತದೆ. ಹೀಗೇಕೆ ಎಂದರೆ, ನಮ್ಮ ಮಿದುಳು ದೇಹದ ಅಂಗಗಳ ಆಂತರಿಕ ಸ್ಪರ್ಶವನ್ನು ಗ್ರಹಿಸಿ, ಯಾವ ಅಂಗ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳುವಲ್ಲಿ ಸಶಕ್ತವಾಗಿದೆ.
ಯಾವುದಾದರೊಂದು ಅಪಘಾತಕ್ಕೀಡಾಗಿ ತಮ್ಮ ಕೈಯನ್ನು ಕಳೆದುಕೊಂಡ ವ್ಯಕ್ತಿಗಳಿಗೆ ಈಗ ಇಲ್ಲದಿರುವ ಆ ಕೈ ಇನ್ನೂ ಅಲ್ಲಿಯೇ ಇದೆ ಎನ್ನುವ ಅನುಭವ ಆಗುತ್ತಿರುತ್ತದೆ. ಆ ಕೈ ಅಲ್ಲಿ ಇಲ್ಲದಿರುವುದನ್ನು ಅವರು ಕಾಣಬಹುದು; ಆದರೆ ದೇಹದ ನರಗಳಿಂದ ಬರುವ ಮಾಹಿತಿಯಿಂದ ಆ ಕೈ ಇನ್ನೂ ಅಲ್ಲೇ ಇದೆ ಎಂದು ಮಿದುಳಿನ ಭಾಗ ಅರ್ಥೈಸುತ್ತದೆ. ಇದು ಆ ಕೈ ಜೊತೆಗೆ ಅಲ್ಲಿಯ ನರಗಳನ್ನೂ ತೆಗೆದುಹಾಕಿದ್ದರೂ ಈ ಅನುಭವ ಆಗುತ್ತಲೇ ಇರುತ್ತದೆ. ದೇಹದಲ್ಲಿ ಒಂದು ಅಂಗ ಇರದೇ ಇದ್ದರೂ, ಒಬ್ಬ ವ್ಯಕ್ತಿಯ ದೇಹದಿಂದ ಇಲ್ಲದೇ ಇರುವ ಅಂಗವನ್ನು ಹೇಗೆ ಅನುಭವಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ.
ಕೈಗಳು, ಕಾಲುಗಳು ಹೀಗೆ ಗಂಡು ಮತ್ತು ಹೆಣ್ಣಿನ ದೇಹಗಳು ಬಹುತೇಕವಾಗಿ ಒಂದೇ ಬಗೆಯವಾಗಿರುತ್ತವೆ. ಜನನಾಂಗದ ಮತ್ತು ಎದೆಯ ಭಾಗಗಳು ಬೇರೆಯಾಗಿರುತ್ತವೆ. ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಅನುಭವವನ್ನು ತಿಳಿಯುವ ಒಂದು ವಿಧಾನವೇನೆಂದರೆ, ನಮ್ಮ ದೇಹದಲ್ಲಿ ಇರದಿರುವ ಅಥವಾ ನಮ್ಮ ದೇಹದಲ್ಲಿದ್ದ ಅಂಗಕ್ಕಿಂತ ಬೇರೆಯದೇ ಆದ ಒಂದು ಅಂಗದ ಸಂವೇದನೆಯನ್ನು ನಮ್ಮ ಮಿದುಳು ಅಪೇಕ್ಷಿಸುವುದು. ಹಾಗಾಗಿ ಒಬ್ಬ ಟ್ರಾನ್ಸ್‍ಜೆಂಡರ್ ಮಹಿಳೆ ತನಗೆ ಇಲ್ಲದಿರುವ ಸ್ತನಗಳು ಇದ್ದಂತೆ ಭಾವಿಸಬಹುದು. ಹಾಗೂ ತಮ್ಮ ದೇಹದಲ್ಲಿರುವ ಒಂದು ಅಂಗದ ಗ್ರಹಿಕೆ ಮಿದುಳಿಗೆ ಇಲ್ಲದೇ ಇದ್ದಾಗ ತಮ್ಮ ಜನನಾಂಗವನ್ನು ನೋಡಿ ಆ ವ್ಯಕ್ತಿಗಳು ಗೊಂದಲಕ್ಕೊಳಗಾಗಬಹುದು. ಅದರಂತೆ ಟ್ರಾನ್ಸ್‍ಜೆಂಡರ್ ಪುರುಷರು ಎದೆಯ ಭಾಗದಲ್ಲಿ ಒಂದು ರೀತಿಯ ಭಾರವನ್ನು ಅನುಭವಿಸಿ ಗೊಂದಲಕ್ಕೊಳಗಾಗಬಹುದು, ಏಕೆಂದರೆ ಅವರ ಮಿದುಳು ಅದನ್ನು ಅಪೇಕ್ಷಿಸುವುದಿಲ್ಲ. ಅನೇಕ ಟ್ರಾನ್ಸ್‍ಜೆಂಡರ್ ಪುರುಷರು ಪುರುಷರಿಗಿರುವ ಜನನಾಂಗಗಳು ಇರುವಂತೇ ಅನುಭವವಕ್ಕೀಡಾಗಬಹುದು. ವ್ಯಕ್ತಿಗಳ ಅನುವಂಶಿಕ ವ್ಯತ್ಯಾಸದ (genetic variation) ಆಧಾರದ ಮೇಲೆ ದೇಹ ಮತ್ತು ಮಿದುಳುಗಳೆರಡೂ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿ ಬೆಳವಣಿಗೆಯಾಗಿ, ತಮ್ಮ ದೇಹದಿಂದ ಅವರ ಮಿದುಳು ಮತ್ತು ದೇಹದ ಅಪೇಕ್ಷೆಗಳು ಬೇರೆಬೇರೆಯಾಗುವುದನ್ನು ಡಿಸ್‍ಫೋರಿಯಾ ಎಂದು ಕರೆಯುತ್ತಾರೆ.
ಇದನ್ನು ತಿಳಿದುಕೊಳ್ಳಲು ಇದನ್ನು ಊಹಿಸಿ; ನಾಳೆ ಬೆಳಗ್ಗೆ ನೀವು ನಿದ್ರೆಯಿಂದ ಎದ್ದಾಗ, ನಿಮ್ಮ ಮಿದುಳು ಮತ್ತು ಮನೋಭಾವಗಳಲ್ಲಿ ಯಾವುದೇ ಬದಲಾವಣೆ ಆಗದೆ, ನಿಮ್ಮ ಭುಜದಿಂದ ಒಂದು ಹೆಚ್ಚಿನ ಕೈ ಉದ್ಭವಿಸಿದೆ ಎಂದುಕೊಳ್ಳಿ. ಈ ಹೊಸ ಕೈ ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಮಾಡುತ್ತಿಲ್ಲ ಎಂದು ಅಂದುಕೊಳ್ಳೊಣ. ಆದರೂ ಏನೋ ಕಿರಿಕಿರಿ ಅನುಭವಿಸುತ್ತೀರಿ, ಇರಬಾರದ್ದೇಕಿದೇ ಎನ್ನುವ ತೊಂದರೆ ಇರುತ್ತದೆ. ಈ ಅಂಗದಿಂದ ನಿಮಗೆ ಉಂಟಾಗುವ ಅಸೌಖ್ಯದ ಅನುಭವವು, ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಈ ಹೊಸ ಅಂಗ ಎಷ್ಟು ಅಡ್ಡಿಪಡಿಸುತ್ತೆ ಎನ್ನುವುದರ ಜೊತೆಗೆ ನೀವು ಮುಂಚೆ ಮಾಡುತ್ತಿದ್ದ ದೈನಂದಿನ ಚಟುವಟಿಕೆಗಳನ್ನು ಹಾಗೆಯೇ ಮುಂದುವರೆಸಲು ಈ ಅಂಗದಿಂದ ಎಷ್ಟು ಅಡೆತಡೆ ಎದುರಾಗುತ್ತದೆ ಎಂಬುದನ್ನೂ ಸೇರಿ ಅವಲಂಬಿಸಿದೆ.
ಅದರ ಮೇಲೆ, ನೀವು ಎದುರಿಸುವ ಎಲ್ಲಾ ಜನರೂ ಆಶ್ಚರ್ಯ ಹಾಗೂ ಕೌತುಕದಿಂದ ಪ್ರತಿಕ್ರಿಯಿಸಿದಾಗ, ನಿಮ್ಮನ್ನು ಭೇಟಿಯಾಗುವ ಎಲ್ಲರೂ ನಿಮ್ಮ ಭುಜದಿಂದ ಈ ಕೈ ಏಕೆ ಉದ್ಭವಿಸಿದೆ ಎಂದು ಕೇಳಿದಾಗ, ನೀವು ಸಾರ್ವಜನಿಕ ಸಾರಿಗೆಯನ್ನು ಬಳಸಿದಲ್ಲಿ ನೂರಾರು ಜನರು ನಿಮ್ಮನ್ನು ನೋಡಿ ಆಶ್ಚರ್ಯ ಮತ್ತು ಕೌತುಕ ವ್ಯಕ್ತಪಡಿಸಿ, ತಮ್ಮಲ್ಲೇ ಮಾತನಾಡಿಕೊಳ್ಳುತ್ತ ನಿಮ್ಮನ್ನು ಗೇಲಿ ಮಾಡಿದಾಗ, ಇದೇನು ಎಂದು ಕೇಳಿದಾಗ, ಒಬ್ಬ ಟ್ರಾನ್ಸ್‍ಜೆಂಡರ್ ವ್ಯಕ್ತಿ ಯಾವ ಅನುಭವಗಳಿಂದ ಹಾದು ಹೋಗಬೇಕಾಗುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ದೈಹಿಕ ಅಂಗವೈಕಲ್ಯತೆಯುಳ್ಳವರೂ ಇಂತಹ ಅನುಭವ ಹೊಂದಿರುತ್ತಾರೆ.
ಈಗ ಇನ್ನೊಂದು ಪ್ರಸಂಗವನ್ನು ಊಹಿಸಿ, ನೀವು ಬೆಳಗ್ಗೆ ಎದ್ದಾಗ, ನೀವು ಗಂಡಾಗಿದ್ದರೆ ನಿಮ್ಮ ದೇಹ ಹೆಣ್ಣಿನಂತೆ, ಹೆಣ್ಣಾಗಿದ್ದರೆ ಗಂಡಿನಂತೆ ಬದಲಾಗಿದೆ. ಜನರೊಂದಿಗೆ ವ್ಯವಹರಿಸುವಾಗ ಎಷ್ಟು ಬಾರಿ ಒಬ್ಬ ವ್ಯಕ್ತಿಯ ಜೆಂಡರ್ ಅನ್ನು ನೋಡಲಾಗುತ್ತದೆ ಹಾಗೂ ಎಷ್ಟು ಬಾರಿ ನಿಮ್ಮನ್ನು ನೋಡಿ ನಗಲಾಗುತ್ತದೆ, ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಹಾಗೂ ನಿಮ್ಮ ಗುರುತು ಮುಂಚಿನಂತೆಯೇ ಇದ್ದು, ನಿಮ್ಮ ಉಡುಪೂ ಮುಂಚಿನಂತಿದ್ದು ಹಾಗೂ ನೀವು ಮುಂಚಿನಂತೇ ವರ್ತಿಸುತ್ತಿದ್ದೀರಿ, ಆದರೆ ನಿಮ್ಮ ದೇಹ ಬದಲಾಗಿದ್ದರೆ?
ಇನ್ನು ಕೊನೆಯ ಒಂದು ಪ್ರಯೋಗ: ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಒಬ್ಬ ವ್ಯಕ್ತಿಯನ್ನು ಊಹಿಸಿ, ಒಬ್ಬ ಡಾಕ್ಟರ್ ಅಂತಿಟ್ಟುಕೊಳ್ಳಿ, ಆ ವ್ಯಕ್ತಿಯ ಜೊತೆಗೆ ಮಾತನಾಡುತ್ತಿದ್ದೀರಿ ಎಂದು ಊಹಿಸಿ. ಈಗ ಕಣ್ಣು ಬಿಡಿ. ನಿಮಗೆ ಆ ಡಾಕ್ಟರ್‍ನ ಜೆಂಡರ್ ನೆನಪಿದೆಯೇ? ಗಂಡೋ, ಹೆಣ್ಣೋ, ಎರಡೂ ಅಲ್ಲವೋ? ನಾವು ಯಾವುದೇ ವ್ಯಕ್ತಿಯೊಂದಿಗೆ ವ್ಯವಹರಿಸುವುದನ್ನು ಊಹೆ ಮಾಡಿದಾಗ, ಮೊಟ್ಟಮೊದಲಿಗೆ ಆ ವ್ಯಕ್ತಿಯ ಜೆಂಡರ್ ಅನ್ನು ಊಹಿಸುತ್ತೇವೆ. ಇದಕ್ಕೆ ನಮ್ಮ ಭಾಷೆಗಳೂ ಸಹಕರಿಸುತ್ತವೆ. ಅಧಿಕಾಂಶ ಭಾಷೆಗಳ ಸರ್ವನಾಮಗಳು ಒಬ್ಬ ವ್ಯಕ್ತಿಯ ಜೆಂಡರ್ ಅನ್ನು ಸೂಚಿಸುತ್ತವೆ (ಬಂಗಾಳಿ ಭಾಷೆ ಹೊರತುಪಡಿಸಿ). ಹಾಗಾಗಿ ಒಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸುವುದನ್ನು ನಾವು ಊಹೆ ಮಾಡಿದಾಗ, ಆ ವ್ಯಕ್ತಿಯ ವರ್ಗ, ಜಾತಿ, ಧರ್ಮ ಇತ್ಯಾದಿಗಳಿಗಿಂತ ಮುಂಚೆ ಮೂಲಭೂತವಾಗಿ ಆ ವ್ಯಕ್ತಿಯ ಜೆಂಡರ್ ಅನ್ನು ಊಹಿಸಿಕೊಂಡಿರುತ್ತೇವೆ. ನೀವು ಮೊದಲ ಬಾರಿಗೆ ಯಾರನ್ನಾದರೂ ಭೇಟಿಯಾದಾಗ ಮೊದಲು ಅವರ ಜೆಂಡರ್ ಅನ್ನು ಗುರುತಿಸಿ ಅವರನ್ನು ಸಂಬೋಧಿಸಲು ಯಾವ ಭಾಷೆಯನ್ನು ಬಳಸಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತೀರಿ. ಒಬ್ಬ ವ್ಯಕ್ತಿಯ ದೇಹರಚನೆ ಸಾಮಾಜಿಕವಾಗಿ ಗುರುತಿಸಿಕೊಂಡ ಗಂಡು ಅಥವಾ ಹೆಣ್ಣಿನಂತೆ ಇಲ್ಲದಿದ್ದಾಗ ಗಂಭೀರ ಸಮಸ್ಯೆ ಎದುರಾಗುತ್ತದೆ. ಅನೇಕ ಸಲ ಆ ವ್ಯಕ್ತಿಯನ್ನು ಇನ್ನಷ್ಟು ಸೂಕ್ಷ್ಮವಾಗಿ, ಉಡುಪಿನ ಒಳಗೆ ಎಂತಹ ದೇಹ ಇರಬಹುದು ಎಂದು ನೋಡಲಾಗುತ್ತದೆ. ಆಗ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳಿಗೆ ತಮ್ಮ ದೇಹದ ಜೊತೆಗೆ ಇರುವ ಮುಜುಗರ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ತಾನು ಯಾವ ಜೆಂಡರ್‍ನೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸುತ್ತಾರೋ ಆ ಜೆಂಡರ್ ಬದಲಾಗಿ ಬೇರೆ ಜೆಂಡರ್‍ನೊಂದಿಗೆ ಜನರು ಆ ವ್ಯಕ್ತಿಯನ್ನು ಗುರುತಿಸಿದಾಗ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಖಿನ್ನತೆಗೆ ಒಳಗಾಗಬಹುದು. ಇದು ಡಿಸ್‍ಫೋರಿಯಾದ ಸಾಮಾಜಿಕ ಅಂಶ.
ಹಾಗಾಗಿ ಜೆಂಡರ್ ಅನ್ನು ನೋಡುವ ರೀತಿಯಲ್ಲಿ ಬದಲಾವಣೆ ಮಾಡುತ್ತ, ಸಾಮಾಜಿಕ ಡಿಸ್‍ಫೋರಿಯಾವನ್ನು ಕಡಿಮೆ ಮಾಡಲು ನಮ್ಮ ಸಮಾಜದಲ್ಲಿ ಅನೇಕ ಅವಕಾಶಗಳಿವೆ. ಸಮಾಜವು ಜೆಂಡರ್‍ಗಳ ಮೇಲೆ ಹೇರಿದ ನಿರೀಕ್ಷೆಗಳನ್ನು ಕೆಲವರು ಪೂರ್ಣಗೊಳಿಸುತ್ತಾರೋ ಇಲ್ಲವೋ ಎನ್ನುವುದರ ಆಧಾರದ ಮೇಲೆ ಗೇಲಿ ಮಾಡುವುದನ್ನು ಬಿಡಬೇಕಿದೆ. ಸಮಾಜವು ಇಂತಹ ಅಪಹಾಸ್ಯ ಮಾಡುವುದನ್ನು ಬಿಟ್ಟರೆ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಹಾಗೂ ಸಿಸ್‍ಜೆಂಡರ್ ವ್ಯಕ್ತಿಗಳೂ ಕೂಡ ಮುಕ್ತವಾಗಿ ಸಂಚರಿಸಬಹುದು ಮತ್ತು ಜಗತ್ತನ್ನು ಸಾವಧಾನವಾಗಿ ಅನುಭವಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....