Homeಚಳವಳಿಗೌರಿ ಲಂಕೇಶ್ ಇದನ್ನೆಲ್ಲಾ ನೋಡಬೇಕಿತ್ತೇ - ಆನಂದ್ ತೇಲ್ತುಂಬ್ಡೆ

ಗೌರಿ ಲಂಕೇಶ್ ಇದನ್ನೆಲ್ಲಾ ನೋಡಬೇಕಿತ್ತೇ – ಆನಂದ್ ತೇಲ್ತುಂಬ್ಡೆ

- Advertisement -
- Advertisement -

ಮಹಾರಾಷ್ಟ್ರದ ರಾಜೂರಿನ ಬಡ ದಲಿತ ರೈತ ಕುಟುಂಬದಿಂದ ಬಂದ ಆನಂದ್ ತೇಲ್ತುಂಬ್ಡೆಯವರು ಇಂದು ಭಾರತದ ಅತಿಮುಖ್ಯ ಸಾರ್ವಜನಿಕ ವ್ಯಕ್ತಿಗಳಲ್ಲೊಬ್ಬರು ಮತ್ತು ಪ್ರಖರ ಚಿಂತಕರು. ಅಹಮದಾಬಾದಿನ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಿಂದ ಎಂಬಿಎ, ಪಿಎಚ್‍ಡಿ ಪಡೆದು, ಭಾರತ್ ಪೆಟ್ರೋಲಿಯಂನ ಉನ್ನತ ಮಟ್ಟದ ಅಧಿಕಾರಿಯಾಗಿದ್ದರು. ಚಳವಳಿಗಳಿಗೆ ಪೂರಕವಾಗಿ ತೀಕ್ಷ್ಣವಾದ ಬರವಣಿಗೆಯನ್ನೂ ಮಾಡುತ್ತಾ ಬಂದ ತೇಲ್ತುಂಬ್ಡೆಯವರು, ಅಂಬೇಡ್ಕರ್ ಮತ್ತು ಮಾಕ್ರ್ಸ್‍ರನ್ನು ಗಾಢವಾಗಿ ಓದಿಕೊಂಡಿರುವ ಸ್ವತಂತ್ರ ಚಿಂತಕರು. ಇವರ ಪತ್ನಿ ರಮಾ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗಳು. ಈ ಲೇಖನವನ್ನು ಪ್ರೊ. ಮಾಧವಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಗೌರಿ ಹೋಗಿದ್ದು ಒಳ್ಳೆಯದ್ದೇ ಆಯಿತು. ಗೌರಿಯಂತಹ ಆತ್ಮೀಯ ಸ್ನೇಹಿತೆಯನ್ನು ನೆನೆದು ಹೀಗೆ ಹೇಳುವುದು ಅತ್ಯಂತ ನೋವಿನ ಸಂಗತಿ. ಗೌರಿಯನ್ನು ನಾನು ನನ್ನ ಒಡನಾಡಿಗಳಾದ ಆಕ್ಟಿವಿಸ್ಟ್ ಗಳನ್ನು ತಿಳಿದಷ್ಟೇ ಆತ್ಮೀಯವಾಗಿ ಬಲ್ಲೆ. ಆಕೆ ಉತ್ಕಟಿ, ನಿರ್ಭೀತ, ಅವೇಶಪರ ಬಂಡುಕೋರಳಾಗಿದ್ದಳು. ಅಂತೆಯೇ ಮೃದು ಹೃದಯಿ ಹಾಗೂ ಪ್ರೀತಿಯ ಹೆಣ್ಣು ಮಗಳಾಗಿದ್ದಳು. ಉಳಿದ ಯಾವುದೇ ಆಕ್ಟಿವಿಸ್ಟ್‍ಗಳನ್ನು ಭೇಟಿ ಮಾಡಿದಂತೆಯೇ ನಾನು ಆಕೆಯನ್ನು ಒಂದರ್ಧ ಡಜನ್‍ಗಿಂತಲೂ ಕಡಿಮೆ ಸಲ ಭೇಟಿಯಾಗಿರಬಹುದು. ಆದರೆ ಅಷ್ಟರಲ್ಲೇ ಅತ್ಯಂತ ನಿಕಟವರ್ತಿಯೆನಿಸಿದ್ದ ಆಕೆ ಹಂತಕರ ಗುಂಡಿಗೆ ಬಲಿಯಾದ ಸುದ್ದಿ ಕೇಳುತ್ತಿದ್ದಂತೆಯೇ ನನ್ನೊಳಗಿನ ಒಂದು ಭಾಗ ಕುಸಿದು ಬಿದ್ದಂತೆ ಭಾಸವಾಯಿತು.

ಕರ್ನಾಟಕ ಸರ್ಕಾರವು ಜುಲೈ 2017ರಲ್ಲಿ ಅಂಬೇಡ್ಕರ್ ಅವರ ಬಗೆಗೆ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ನಾವು ಕೊನೆಯ ಬಾರಿ ಭೇಟಿಯಾಗಿದ್ದೆವು. ಅಂದು ನಾವು ಒಟ್ಟಿಗೆ ಊಟ ಮಾಡಿದ್ದೆವು. ಮಹಡ್ ಬಗ್ಗೆ ನಾನು ಬರೆದ ಪುಸ್ತಕವನ್ನು ಕನ್ನಡದಲ್ಲಿ ಪ್ರಕಟಿಸುವ ಇಚ್ಛೆಯನ್ನು ಆಕೆ ಪುನರುಚ್ಚರಿಸಿದ್ದಳು ಮತ್ತು ಅದನ್ನು ಅನುವಾದಿಸಲು ನನ್ನ ಸ್ನೇಹಿತರು ಸಹಕರಿಸಲಿಲ್ಲವೆಂದೂ ದೂರಿದ್ದಳು. ಆಕೆಯ ಇಚ್ಛೆಗನುಗುಣವಾಗಿ ನ್ಯಾಯಪಥ ಪ್ರಕಾಶನ ಇದನ್ನು ಪ್ರಕಟಿಸಿದರೆ ನನಗೆ ಸಂತಸವಾಗುತ್ತದೆ. ಆಕೆಯ ಆನೇಕ ಆಶಯಗಳನ್ನು ಈಡೇರಿಸುವ ಸಾಧ್ಯತೆಯು ವೇಗವಾಗಿ ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಪ್ರಯಶಃ ಇಂಥವುಗಳನ್ನಷ್ಟೇ ನಮಗೆ ಮಾಡಲು ಸಾಧ್ಯ. ಭಾರತವು ಜಾತ್ಯತೀತವಾದುದು ಎನ್ನಬಹುದೇ? ದಲಿತರು ಮತ್ತು ಅಲ್ಪಸಂಖ್ಯಾತರಿಗೆ ನ್ಯಾಯ ದೊರೆಯುವುದೆಂದು ನಿರೀಕ್ಷಿಸಬಹುದೇ? ನಮ್ಮ ಜನರ ಮನಸ್ಸುಗಳಿಂದ ಕೋಮುವಾದದ ವಿಷವನ್ನು ಹೊರಹಾಕಲಾಗುವುದೇ? ಗೌರಿ ಆಶಿಸಿದ ಇಂತಹ ಅನೇಕ ಸಂಗತಿಗಳು ಇಂದು ನಾವು ತಲುಪಲಾಗದಷ್ಟು ದೂರ ಸರಿಯುತ್ತಿವೆ.

ಗೌರಿ ಇದ್ದಿದ್ದರೆ ಹಾರರ್ ಸಿನಿಮಾಗಳಲ್ಲಿ ಕ್ಷಿಪ್ರವಾಗಿ ಚಲಿಸುವ ಫ್ರೇಮುಗಳಂತೆ ನಮ್ಮ ಸುತ್ತಮುತ್ತ ಜರುಗುತ್ತಿರುವ ಸಂಗತಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಳು ಎಂದು ಬೆರಗುಗೊಳ್ಳುತ್ತೇನೆ. ನಮಗೆ ಗ್ರಹಿಸಲೂ ಸಾಧ್ಯವಾಗದಷ್ಟು ವೇಗವಾಗಿ ನಮ್ಮ ಕೆಟ್ಟ ದುಃಸ್ವಪ್ನಗಳು ಒಂದಾದ ಮೇಲೊಂದರಂತೆ ನಮ್ಮ ಕಣ್ಣಮುಂದೆ ಜೀವ ತಳೆಯುವಂತೆ ತೋರುತ್ತಿದೆ. ಮಾಧ್ಯಮಗಳು ಅಧಿಕಾರಸ್ಥರ ಪಾದಗಳಿಗೆರಗಿರುವುದನ್ನು ಕಂಡು ಆಕೆಗೇನೆನ್ನಿಸುತ್ತಿತ್ತು? ಮೂಢರಾಗಿರುವ ಜನರನ್ನು ಅಥವಾ ತಾವೇ ದುಃಸ್ವಪ್ನಗಳಲ್ಲಿ ಭಾಗಿಗಳಾಗಿರುವವರನ್ನು ಕಂಡು ಆಕೆ ಏನೆಂದುಕೊಳ್ಳುತ್ತಿದ್ದಳು. ತಮ್ಮ ಬದುಕಿನ ಬಹುಭಾಗ ಜನರನ್ನು ಪ್ರೀತಿಸುವುದು ಹೇಗೆಂದು ಕಲಿಸಿದವರಿಗೆ ಅಸಹಾಯಕ ಮನುಷ್ಯರನ್ನು ಕ್ರೂರ ಮೃಗಗಳಂತೆ ಗುಂಪಾಗಿ ಹತ್ಯೆಗೈಯುವುದನ್ನು ನೋಡಿ ಏನೆನ್ನಿಸಬಹುದು? ಹೀಗೆ ಕೊಲ್ಲುವುದು, ಅತ್ಯಾಚಾರವೆಸಗುವುದು ಮತ್ತು ವ್ಯಭಿಚಾರಿಗಳೆಂದು ಅಪಖ್ಯಾತಿಗೊಳಿಸುವುದನ್ನು ಕಂಡು ಸಂಭ್ರಮಿಸುವವರನ್ನು ನೋಡಿ ಆಕೆಗೆ ಏನೆನ್ನಿಸುತ್ತಿತ್ತು? ನಮ್ಮನ್ನು ಕಾಯುವ ಸಂಸ್ಥೆಗಳು ಅಪರಾಧಿಗಳೊಂದಿಗೆ ಕೈ ಜೋಡಿಸಿದಾಗ ಕಾಡುವ ಅಸಹಾಯಕತೆ ಮತ್ತು ಅಸುರಕ್ಷತೆಯಿಂದ ಅನುಭವಿಸುವ ತಲ್ಲಣವೆಂತಹುದು?

23 ವರ್ಷದ ವಿದ್ಯಾರ್ಥಿನಿಯೊಬ್ಬಳು, ತನ್ನ ಕಾಲೇಜಿನ ಅಧ್ಯಕ್ಷನೂ, ಸಂಸತ್ ಸದಸ್ಯನೂ ಹಾಗೂ ಕೇಂದ್ರದ ಮಂತ್ರಿಯೂ ಆಗಿದ್ದು ಪ್ರಸಕ್ತ ಮುಖ್ಯಮಂತ್ರಿಯ ನಿಕಟವರ್ತಿಯೂ ಆಗಿರುವ ಅತ್ಯಾಚಾರಿಯೊಬ್ಬನ ಹಿಡಿತದಿಂದ ಬಿಡಿಸಿಕೊಂಡು ಓಡುತ್ತಾ, ಈ ಶಕ್ತಿಶಾಲಿ ದುರುಳನ ವಿರುದ್ಧ ದನಿ ಎತ್ತುವ ಅಸಾಧಾರಣ ಧೈರ್ಯವನ್ನು ತೋರುತ್ತಾಳೆ. ಸಂತನ ಸೋಗಿನಲ್ಲಿರುವ ಈತ ಒಂದು ವರ್ಷಕ್ಕೂ ಹೆಚ್ಚು ಕಾಲ ಈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿರುವ ಮತ್ತು ಆಕೆಯ ವಸತಿನಿಲಯದ ಇತರ ಹಲವು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗಿದ ಆಪಾದನೆಗೊಳಗಾಗಿದ್ದಾನೆ. ಆದರೂ ಸುಪ್ರೀಂಕೋರ್ಟ್‍ನ ನಿರ್ದೇಶನದಂತೆ ರಚಿತವಾಗಿರುವ ಎಸ್‍ಐಟಿ ಈ ವಿದ್ಯಾರ್ಥಿನಿಯನ್ನು ಸತತ 15 ಗಂಟೆಗಳ ಕಾಲ ಪ್ರಶ್ನಿಸುತ್ತದೆ. ಆಕೆಯ ವಾಸಸ್ಥಳವನ್ನು ಶೋಧಿಸುತ್ತದೆ ಆದರೆ ಈ ದುರುಳನ ವಿರುದ್ಧ ಎಫ್‍ಐಆರ್‍ಅನ್ನು ದಾಖಲಿಸುವುದಿಲ್ಲ. ಅಷ್ಟೇ ಅಲ್ಲ ಆತನನ್ನು ಪ್ರಶ್ನಿಸುವುದೂ ಇಲ್ಲ. ಆ ಪಾಪದ ಹುಡುಗಿಗೆ ಮಸಿಬಳಿಯುವುದರೊಂದಿಗೆ ಕೊನೆಗೊಳ್ಳಲಿರುವ ಈ ದಿಗಿಲುಗೊಳಿಸುವ ವೃತ್ತಾಂತ ದೇಶದಲ್ಲಿ ಯಾವುದೇ ರೀತಿಯ ಸದ್ದು ಮಾಡುವಲ್ಲಿ ಸೋಲುತ್ತದೆ.

ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಉನ್ನಾವೋದ 17 ವರ್ಷದ ಹುಡುಗಿಯೊಬ್ಬಳು ಆಡಳಿತ ಪಕ್ಷದ ಶಾಸಕನೊಬ್ಬನಿಂದ ಅತ್ಯಾಚಾರಕ್ಕೀಡಾಗಿ ಜೂನ್ 2017ರಿಂದ ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾಳೆ. ಈ ಹೋರಾಟದಲ್ಲಿ ಆಕೆ ನ್ಯಾಯಾಂಗ ಬಂಧನದಲ್ಲಿದ್ದ ತನ್ನ ತಂದೆಯನ್ನು ಕಳೆದುಕೊಂಡಿದ್ದಾಳೆ, ತಾನು ಪ್ರಯಾಣಿಸುತ್ತಿದ್ದ ಕಾರಿಗೆ ವೇಗವಾಗಿ ಬಂದ ಟ್ರಕ್ಕೊಂದು ಗುದ್ದಿದ ಕಾರಣ ತನ್ನ ಮತ್ತಿಬ್ಬರು ಬಂಧುಗಳನ್ನು ಕಳೆದುಕೊಂಡಿದ್ದಾಳೆ. ಮುಂದೆ ತನಗಾಗಿರುವ ಹಾನಿಯನ್ನು ನೋಡಲು ಪ್ರಯಾಸದಿಂದ ಬದುಕುಳಿದಿದ್ದಾಳೆ. ಇಂತಹ ಕೊಲೆಗಳ ಹಿಂದಿರುವವರು ಯಾರು ಎಂಬುದು ದಾರಿಹೋಕನಿಗೂ ತಿಳಿಯುತ್ತದೆ. ಆದರೆ ಈ ದಿನಗಳಲ್ಲಿ ನಮ್ಮ ನ್ಯಾಯ ದಾನ ಮಾಡುವ ವ್ಯವಸ್ಥೆಗೆ ಅದು ಕಾಣುವುದಿಲ್ಲ. ಅಧಿಕಾರಸ್ಥರು ನೋಡಲು ಸೂಚಿಸಿದ್ದನ್ನೇ ಅದು ನೋಡುತ್ತಿರುವಂತೆ ಕಾಣುತ್ತದೆ.

ಇದೇ ವರ್ಷ ಜೂನ್‍ನಲ್ಲಿ ನಿರ್ದಯವಾಗಿ ಹೊಡೆದು ಕೊಲ್ಲಲಾದ 24 ವರ್ಷದ ಮುಸ್ಲಿಂ ಯುವಕ ತಬ್ರೇಜ್ ಅನ್ಸಾರಿಯ ಪ್ರಕರಣ ನಡೆಯಿತು. ತನ್ನ ಆತ್ಮವನ್ನು ಸಂಪೂರ್ಣವಾಗಿ ಮಾರಿಕೊಂಡ ಮಾಧ್ಯಮಗಳ ಪ್ರಭಾವದಲ್ಲಿರುವ ನಮ್ಮ ನೆನಪಿನ ಗಡಿಯಾರಗಳಿಗೆ ಅದಾಗಿ ಈಗಾಗಲೇ ದಶಕಗಳಾಗಿವೆ ಎಂಬಂತೆ ತೋರುತ್ತದೆ. ದೂರದರ್ಶನದಲ್ಲಿ ಸಾರ್ವಜನಿಕವಾಗಿ ಬಿತ್ತರಗೊಂಡ ಚಿತ್ರದಲ್ಲಿ ತೋರಿದಂತೆ ಆತ ತನ್ನ ಮೇಲೆ ದೌರ್ಜನ್ಯವೆಸಗುತ್ತಿರುವವರ ಆದೇಶದಂತೆ ಅಸಹಾಯಕವಾಗಿ ಜೈ ಶ್ರೀರಾಮ್ ಎಂದು ಕೂಗುತ್ತಾ ನಿರ್ದಯವಾಗಿ ಥಳಿಸಲ್ಪಟ್ಟ. ಆತನ ಮರಣೋತ್ತರ ವರದಿಯಲ್ಲಿ ಹೇಳಿದಂತೆ ಆತ ಆಸ್ಪತ್ರೆಯಲ್ಲಿ ಹೃದಯಸ್ತಂಭನದಿಂದ ಮೃತಪಟ್ಟ. ಅದೇ ವರದಿಯು ಅಮಾನುಷ ಹೊಡೆತಗಳಿಂದ ಆತನಿಗಾದ ಗಾಯಗಳು ಹೃದಯಸ್ತಂಭನಕ್ಕೆ ಕಾರಣವೆಂದೂ ಹೇಳಿತು. ಆದರೆ ಈ ಕೃತ್ಯಕ್ಕೆ ಕಾರಣರು ಎನ್ನಲಾದ 11 ಆರೋಪಿಗಳ ಮೇಲೆ ಹಾಕಿದ್ದ ಕೊಲೆ ಕೇಸನ್ನು ಕೈಬಿಡಲು ಪೊಲೀಸರಿಗೆ ಕಂಡಿದ್ದು ‘ಹೃದಯಸ್ತಂಭನ’ ಎಂಬ ಪದ ಮಾತ್ರ. ಹೀಗೆ ಘೋರವಾದ ರೀತಿಯಲ್ಲಿ ತನ್ನ ಗಂಡನನ್ನು ಕಳೆದುಕೊಂಡ ಮುಗ್ಧ ಹೆಣ್ಣುಮಗಳು ಎಂದಿಗೂ ದೊರೆಯದಿರಬಹುದಾದ ನ್ಯಾಯಕ್ಕಾಗಿ ಆಗ್ರಹಿಸುತ್ತಾ ಶೂನ್ಯನೋಟ ಬೀರುತ್ತಾಳೆ.

ಸಂವಿಧಾನಿಕ ನೈತಿಕತೆಯ ನೇರ ಉಲ್ಲಂಘನೆಯಾದ ಕಾಶ್ಮೀರದ ಬಗ್ಗೆಯಾಗಲೀ ಅಥವಾ ತಮಗೇನಾಗುತ್ತಿದೆ ಎಂದು ಸದ್ದಿಲ್ಲದೇ ನಿಬ್ಬೆರಗಾಗಿರುವ ಕಾಶ್ಮೀರಿಗಳ ಬಗ್ಗೆಯಾಗಲೀ ಮತ್ತು ಸನ್ಮಾನ್ಯ ಗೃಹಮಂತ್ರಿಗಳು ನೀಡಿರುವ ಭರವಸೆಯಂತೆ ಅನಾವರಣಗೊಂಡಲ್ಲಿ ಆಧುನಿಕ ಇತಿಹಾಸದ ಅತಿದೊಡ್ಡ ದುರಂತವಾಗಿಬಿಡಬಹುದಾದ ಎನ್‍ಆರ್‍ಸಿ ಬಗ್ಗೆಯಾಗಲೀ ನಾವು ಮಾತಾಡುವಂತೆಯೇ ಇಲ್ಲ. ಪ್ರತಿದಿನ ನಮ್ಮ ಅಧಿಕಾರ ಮತ್ತು ಆಳರಸರು ಎಸಗುತ್ತಿರುವ ಇಂತಹ ಅನೇಕ ದುಷ್ಕೃತ್ಯಗಳು ನಮ್ಮ ಸುತ್ತ-ಮುತ್ತ ನಡೆಯುತ್ತಿವೆ. ಇವು ಅವರ ಭಕ್ತಗಣಕ್ಕೆ ಧೈರ್ಯ ತುಂಬುತ್ತಿವೆ.

ಅಂದು ಗೌರಿ ನಮ್ಮನ್ನು ಅಗಲದಿದ್ದರೂ, ಬಹುಶಃ ಸದಾ ವಿಸ್ತರಿಸುತ್ತಲೇ ಇರುವ ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಆಕೆಯನ್ನೂ ಸಿಕ್ಕಿಹಾಕಿಸುತ್ತಿದ್ದರು ಎನಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...