Homeಸಾಮಾಜಿಕಜನತೆಯ ಸಂಗಾತಿ ಲಕ್ಷ್ಮಣ್‌ಜಿ

ಜನತೆಯ ಸಂಗಾತಿ ಲಕ್ಷ್ಮಣ್‌ಜಿ

- Advertisement -
- Advertisement -

ಸಿರಿಮನೆ ನಾಗರಾಜ್ |

ಕನ್ನಡದ ಮಹತ್ವದ ಕವಿ-ಕತೆಗಾರ-ಬರಹಗಾರರಲ್ಲಿ ಒಬ್ಬರಾಗಿದ್ದ, ದಲಿತ ಮತ್ತು ಜನಪರ ಚಳವಳಿಗಳ ಸತತ ಒಡನಾಡಿಯಾಗಿದ್ದ ಲಕ್ಷ್ಮಣಜಿ ಅವರ ಆತ್ಮಕತೆ ‘ಸಂಬೋಳಿ’ಯ ಇಂಗ್ಲಿಷ್ ಅನುವಾದಿತ ಅದೇ ಹೆಸರಿನ ಕೃತಿ ಕಳೆದ ವಾರ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆದ ಚಿಕ್ಕ ಚೊಕ್ಕ ಕಾರ್ಯಕ್ರಮದಲ್ಲಿ ಬಿಡುಗಡೆಯಾಯಿತು. ಅದೇ ಸಮಯದಲ್ಲಿ ಲಕ್ಷ್ಮಣಜಿ ಅವರನ್ನು ಕುರಿತು ಅವರ ಸಮಕಾಲೀನ ಚಳವಳಿಗಾರರು, ಬರಹಗಾರರು ಮತ್ತಿತರ ಅವರ ಸಂಗಾತಿಗಳು ಬರೆದಿರುವ ಆಪ್ತ ಬರಹಗಳ ಸಂಕಲನ ‘ಜನತೆಯ ಸಂಗಾತಿ ಲಕ್ಷ್ಮಣಜಿ’ ಪುಸ್ತಕವೂ ಬಿಡುಗಡೆಯಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿಯವರು ಎರಡೂ ಕೃತಿಗಳನ್ನು ಬಿಡುಗಡೆ ಮಾಡಿದರು.

ಸಂಬೋಳಿ ಕೃತಿಯನ್ನು ಪ್ರೊ. ಸುಶೀಲಾ ಪುನೀತಾ ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ, ದೇಶದ ಗಣ್ಯ ಪ್ರಕಾಶನ ಸಂಸ್ಥೆಗಳಲ್ಲಿ ಒಂದೆನ್ನಿಸಿರುವ ದೆಹಲಿಯ ನಿಯೋಗಿ ಪ್ರಕಾಶನ ಅದನ್ನು ಪ್ರಕಟಿಸಿದೆ. (ಅದನ್ನು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಿಂದ ಪ್ರಕಟಿಸಲು ಈ ಮೊದಲು ಮಾತುಕತೆಯಾಗಿದ್ದು, ಅಲ್ಲಿ ಇನ್ನೂ ಬಹಳ ತಡವಾಗುತ್ತೆ ಎನ್ನುವ ಕಾರಣಕ್ಕೆ ನಿಯೋಗಿ ಪ್ರಕಾಶನ ಅದನ್ನು ತೆಗೆದುಕೊಂಡು ಪ್ರಕಟಿಸಿದೆ.)

ಕನ್ನಡದಲ್ಲಿ ನಾಲ್ಕು ಮುದ್ರಣ ಕಂಡಿದ್ದು, ಈಗಾಗಲೇ ತಮಿಳಿಗೆ ಅನುವಾದವಾಗಿ ಎರಡು ಮರುಮುದ್ರಣ ಕಂಡು ಬಹಳ ಮೆಚ್ಚುಗೆ, ಸಂವೇದನೆ ಹುಟ್ಟುಹಾಕಿರುವ ಸಂಬೋಳಿಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಒಂದು ಪಠ್ಯದಲ್ಲೂ ಕಾಣಿಸಿಕೊಂಡಿದೆ. ‘LISTEN TO THE FLAMES’ – texts and readings from the margins ಎಂಬ ಪಠ್ಯದಲ್ಲಿ ಸಂಬೋಳಿಯ ಒಂದು ಭಾಗವು undying love ಎಂಬ ಹೆಸರಿನಲ್ಲಿ ಸೇರ್ಪಡೆಯಾಗಿದೆ.

ಕಡುದಾರಿದ್ರ್ಯದ, ಜೀತದ ದಲಿತ ಬದುಕಿನಿಂದ ಬಂದು, ಹೇಗೋ ಕಾಲೇಜು ಕಲಿತು ಕೆಎಲ್‌ಇ ಸೊಸೈಟಿಯ ಕಾಲೇಜಿನಲ್ಲಿ ಗುಮಾಸ್ತರಾಗಿದ್ದ ಅತ್ಯಂತ ಸ್ನೇಹಜೀವಿ ಲಕ್ಷ್ಮಣಜಿ, ಎಷ್ಟು ಸ್ನೇಹಜೀವಿಯೋ ಅಷ್ಟೇ ಗಟ್ಟಿಯಾದ ಸಾಮಾಜಿಕ ಬದ್ಧತೆ ಹೊಂದಿದ್ದವರು. ಎಂಥ ಕಷ್ಟವೇ ಇದ್ದರೂ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುವುದನ್ನು ತಪ್ಪಿಸುತ್ತಿರಲಿಲ್ಲ. ದಲಿತ ಸಂಘಟನೆಗಳು ಒಡೆದು ಚೂರಾಗುತ್ತ, ನಾಯಕರಲ್ಲಿ ಪ್ರಾಮಾಣಿಕತೆ-ಕಳಕಳಿ ಕಡಿಮೆಯಾಗಿ, ಚಳವಳಿಯೊಂದು ಬದುಕಿನ ದಾರಿಯಾಗತೊಡಗಿದ್ದುದು, ದೇಶದಲ್ಲಿ ಎಡಪಂಥೀಯ ಚಳವಳಿ ಹಿನ್ನಡೆಗೆ ಈಡಾಗಿ ಸಂಘಪರಿವಾರದ ಫ್ಯಾಸಿಸ್ಟ್ ಶಕ್ತಿಗಳು ವಿಜೃಂಭಿಸತೊಡಗಿದ್ದು ಇವೆಲ್ಲ ಅವರನ್ನು ಬಹಳವಾಗಿ ಕಾಡುತ್ತಿದ್ದವು. ಹಾಗಂತ ಯಾವುದೇ ಚಳವಳಿಯ ಯಾವ ನಾಯಕರ ಜೊತೆಗೂ ಮನಸ್ತಾಪ ಮಾಡಿಕೊಂಡವರಲ್ಲ. ಅವರವರು ಒಂದುವೇಳೆ ಪರಸ್ಪರ ಮುಖ ನೋಡದ, ಮಾತಾಡದ ಹಗೆತನ ಬೆಳೆಸಿಕೊಂಡಿದ್ದರೂ ಲಕ್ಷ್ಮಣಜಿ ಎಲ್ಲರಿಗೂ ಬೇಕಾದವರಾಗಿದ್ದರು. 1989ರಲ್ಲಿ ‘ಕರ್ನಾಟಕ ವಿಮೋಚನಾ ರಂಗ’ ಸ್ಥಾಪನೆಯಾದಾಗ ಅದರ ಜೊತೆಗೂಡಿದ ಲಕ್ಷ್ಮಣಜಿ, ಕವಿರಂ ಇದ್ದಷ್ಟು ಕಾಲವೂ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

ಲಕ್ಷ್ಮಣಜಿ ಐವತ್ತರವತ್ತು ವರ್ಷ ಹಿಂದಿನ ಬೆಂಗಳೂರು ಸೀಮೆಯ ಜೀತದ ಬದುಕನ್ನು ಕಂಡುಂಡು ಬೆಳೆದುಬಂದವರು. ಅಂದಿನ ಜೀತಗಾರರ ಬದುಕಿನ ದಟ್ಟ ಚಿತ್ರಣ ಅವರ ಕವಿತೆ-ಕತೆ-ಬರಹಗಳಲ್ಲಿ ಅತ್ಯಂತ ಸಹಜವಾಗಿ ಬಿಂಬಿತವಾಗಿವೆ. ಅಂಬೇಡ್ಕರ್ ಬಗ್ಗೆ ಅಪಾರ ಅಭಿಮಾನ, ಆದರ. ಮಾರ್ಕ್ಸ್ ಮತ್ತು ಮಾರ್ಕ್ಸ್‌ವಾದದ ಬಗ್ಗೆಯೂ ಅಷ್ಟೇ ಆಸಕ್ತಿ, ಒಲವು. ದಲಿತ ಸಮುದಾಯದ ದುರ್ಭರ ಬದುಕಿನ ಬಗ್ಗೆ ಗಾಢವಾದ ಕ್ರಿಯಾಶೀಲ ಕಳಕಳಿ. ಹಾಗೆಯೇ ಎಲ್ಲ ದುಡಿವ ಜನರ, ಶೋಷಿತರ, ದಮನಿತರ ಬಗ್ಗೆಯೂ ಸಮಾನ ಅನುಕಂಪ, ತುಡಿತ. ಎಲ್ಲೋ ಯಲಹಂಕವೋ, ಪೀಣ್ಯವೋ, ಕಮಗೊಂಡನಹಳ್ಳಿಯೋ … ಎಲ್ಲೆಲ್ಲಿಯದೋ ಗುಡಿಸಲು ವಾಸಿಗಳ, ಬಡಜನರ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೇಗೋ ನಾಲ್ಕಾರು ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ಹೋಗಿ, ಮನವರಿಕೆ ಮಾಡಿಯೋ, ಬೆದರಿಕೆ ಹಾಕಿಯೋ ಸಮಸ್ಯೆ ಬಗೆಹರಿಸದೆ ಬಿಡುತ್ತಿರಲಿಲ್ಲ.

ಲಕ್ಷ್ಮಣಜಿ ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಹೆಜ್ಜೆಹೆಜ್ಜೆಗೂ ಹೋದಲ್ಲಿ ಬಂದಲ್ಲಿ, ಮಾತಲ್ಲಿ ಕ್ರಿಯೆಯಲ್ಲಿ ಎಲ್ಲೆಲ್ಲೂ ಅವರು ಎಡೆಬಿಡದೆ ನೆನಪಾಗುತ್ತಾರೆಂದರೆ, ಯಾರೇ ಒಬ್ಬ ಕ್ರಿಯಾಶೀಲ ವ್ಯಕ್ತಿಯ ಸಾಮಾಜಿಕ ಬದುಕು ಸಾರ್ಥಕವೆನ್ನಿಸುವುದು ಹೀಗೇ ಅಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...