Homeಸಾಮಾಜಿಕಜೋಯಿಸರ ‘ವರ್ಚುವಲ್’ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ಮು!

ಜೋಯಿಸರ ‘ವರ್ಚುವಲ್’ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ಮು!

- Advertisement -
- Advertisement -

ನಕಲಿ ಜೋಯಿಸರ ಬುರುಡೆ ಶಾಸ್ತ್ರಗಳು ಹೇಗೆ, ಜನ್ಮದಿಂದ ಸುತ್ತಿಕೊಂಡು, ಹೆಸರಿನಿಂದ ಗಟ್ಟಿಗೊಂಡು, ಪಂಚಾಂಗಗಳೆಂಬ ಬಾಹುಗಳಿಂದ ಕಟ್ಟಿಹಾಕುತ್ತವೆಂಬುದನ್ನು ನೋಡಿದೆವು. ಕಳೆದ ಬಾರಿ ವಿವರಿಸಿದ ಹಲ್ಲಿ ಶಕುನ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಸೂಚಿಸಲು ಓದುಗರಾದ ಪುಷ್ಪಾ ಸುರೇಂದ್ರ ಅವರು ಕಾಂಚಿಪುರಂ ದೇವಾಲಯದ ಉದಾಹರಣೆ ಕೊಟ್ಟಿದ್ದಾರೆ. ಅಲ್ಲೊಂದು ಕಲ್ಲಿನ ಹಲ್ಲಿಯಿದೆಯಂತೆ. ಈ ಹಲ್ಲಿಪತನ ಫಲದಿಂದ ಭಯಗೊಂಡವರು ಬೇರೆಬೇರೆ ರಾಜ್ಯಗಳಿಂದ ಪರಿಹಾರಾರ್ಥ ಇಲ್ಲಿ ಬಂದು ಅದರ ಮೇಲೆ ಎಣ್ಣೆ ಸುರಿಯುತ್ತಾರಂತೆ! ಅಂದರೆ ಈ ಹಲ್ಲಿಯನ್ನೇ ಜನರ ಮೇಲೆಸೆದು ಬೆದರಿಸಿ ದೋಚುವ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದೆ ಎಂದಾಯಿತು! ಅದಿರಲಿ, ನಾವೀಗ ಹುಟ್ಟಿನಿಂದ ನೇರವಾಗಿ ಸಾವಿಗೆ ಹೋಗಿ ಅಲ್ಲಾಗಿರುವ ಮಹಾನ್ ಆವಿಷ್ಕಾರಗಳನ್ನು ನೋಡೋಣ. ನಂತರ ವಿಸ್ತಾರವಾದ ಜೀವನಕ್ಕೆ ಬರೋಣ.
ಕೆಲ ವರ್ಷಗಳ ಹಿಂದೆ ನನ್ನ ದೊಡ್ಡಪ್ಪ ಮುಂಬಯಿಯಲ್ಲಿ ತೀರಿಕೊಂಡಾಗ ಅವರ ಮತ್ತು ಅದಕ್ಕೆ ಕೇವಲ ಒಂದು ವಾರ ಮೊದಲು ತೀರಿಕೊಂಡಿದ್ದ ಅವರ ಪತ್ನಿ- ದೊಡ್ಡಮ್ಮನ ಶವಸಂಸ್ಕಾರವನ್ನು ಅವರ ಗೆಳೆಯರು ವಿದ್ಯುತ್ ಚಿತೆಯಲ್ಲಿ ಯಾವುದೇ ಧಾರ್ಮಿಕ ಕ್ರಿಯಾಕರ್ಮ ಇಲ್ಲದೇ ಮಾಡಿದ್ದರು. ಅವರಿಗೆ ಮಕ್ಕಳಿರಲಿಲ್ಲ.
ನಾಸ್ತಿಕರಾಗಿದ್ದ ಅವರ ಪಿಂಡ ಪ್ರಧಾನವನ್ನೂ ಯಾರೂ ಮಾಡಿಲ್ಲ ಎಂದು ಬಹುವಾಗಿ ನೊಂದ ಮುಂಬಯಿಯಲ್ಲೇ ಇದ್ದ ಅವರ ತಂಗಿ, ಅಂದರೆ ನನ್ನ ಅತ್ತೆ ಪಿಂಡ ಬಿಡಲು ನನ್ನನ್ನು ಕರೆಸಿದರು. ಹಿಂದೂ ಆಚರಣೆಗಳ ಬಗ್ಗೆ ಅತೀವ ಶ್ರದ್ಧೆ ಇದ್ದ ಅತ್ತೆ ಮದುವೆಯಾದದ್ದು ಕ್ರೈಸ್ತರನ್ನು ಎಂದರೆ ನಿಮಗೆ ಆಶ್ಚರ್ಯ ಆಗಬಹುದು!
ದೊಡ್ಡಪ್ಪನ ಶಿಷ್ಯನೂ, ದೇವ-ಧರ್ಮ ನಿರ್ಲಿಪ್ತನೂ ಅದ ನಾನು, ಅವರ ಮನ ನೋಯಿಸಲು ಇಚ್ಛಿಸದೇ ಒಪ್ಪಿಕೊಂಡಿದ್ದೆ. ಮುಂಬಯಿಯಲ್ಲೇ ಕೆಲ ವರ್ಷ ಇದ್ದ ನನಗೆ ಜನ ನಿಭಿಡ ಮೆರೀನ್ ಲೈನ್ಸ್ನಲ್ಲಿ ಎತ್ತರವಾದ ಗೋಡೆಗಳ ಹಿಂದೆ ಅಷ್ಟೊಂದು ದೊಡ್ಡ ಸ್ಮಶಾನವಿದೆ ಎಂದು ಗೊತ್ತೇ ಇರಲಿಲ್ಲ. ಅದೊಂದು ಹಳ್ಳಿಯೇ ಅಗಿದ್ದು, ಬೇರೆ ಬೇರೆ ಜಾತಿಗಳವರು ನೂರಾರು ವರ್ಷಗಳ ಹಿಂದೆಯೇ ಕ್ರಿಯಾಕರ್ಮಗಳಿಗೆಂದು ಕಟ್ಟಿಸಿದ್ದ ದೊಡ್ಡ ದೊಡ್ಡ ಪುರಾತನ ಮನೆಗಳಿದ್ದವು. ಅಲ್ಲಿ ಅದಕ್ಕಾಗಿಯೇ ಹಲವಾರು ಅರ್ಚಕ ಕುಟುಂಬಗಳೂ ವಾಸಿಸುತ್ತಿದ್ದವು! ಅದೊಂದು ಬ್ರಾಹ್ಮಣ ಗ್ರಾಮವಾಗಿದ್ದು, ಇವೆಲ್ಲಾ ಬೇಕಾಬಿಟ್ಟಿ ಹಣ ಮಾಡುವ ಅಧಿಕೃತ ಏಜೆನ್ಸಿಗಳು!
ನನ್ನ ಸಂಬಂಧಿಯೊಬ್ಬರು ಕ್ರಿಯೆಗೆ ಕೂತುದರಿಂದ ನನಗೆ ಸಂಕಷ್ಟ ತಪ್ಪಿತು. ನಮಗೆ ಸಿಕ್ಕಿದ ಭಟ್ರು ಮಂತ್ರದ ಅರ್ಥ ಮಾತ್ರವಲ್ಲದೆ, ಆ ಪದ್ಧತಿ ಬಂದುದರ ಹಿನ್ನೆಲೆ, ಆಚರಣೆಯ ವೈದಿಕ ಅರ್ಥ, ಕಾಲಾನುಕ್ರಮದಲ್ಲಿ ಆದ ಬದಲಾವಣೆಗಳು ಎಲ್ಲವನ್ನೂ ವಿವರಿಸಿ ಹೇಳುತ್ತಿದ್ದರು. “ನಿಮಗೆ ಅರ್ಧವಾಗದೆ ನೀವಿದನ್ನು ಮಾಡಿ ಏನು ಪ್ರಯೋಜನ?” ಎಂಬ ಅವರ ಮಾತನ್ನು ಈಗಿನ ಸುಲಿಗೆಕೋರರಿಗೂ, ಅವರ ಬಕ್ರಾಗಳಿಗೂ ಕೇಳಬೇಕು!
ಹಿಂದೂ ಧರ್ಮ ಪ್ರಕಾರ ನನ್ನ ದಿವಂಗತ ದೊಡ್ಡಪ್ಪ ಮತ್ತು ದೊಡ್ಡಮ್ಮನಿಗೆ ಸ್ಥಾನಮಾನ ಬೇರೆ ಬೇರೆಯಾಗಿದ್ದುದರಿಂದ ಪಿತೃ ಪ್ರಧಾನ ಸಂಸ್ಕೃತಿಯಂತೆ ಗಂಡು-ಹೆಣ್ಣು ತಾರತಮ್ಯದ ಕ್ರಿಯೆಗಳು ನಡೆದವು. ಅದು ಯಾಕೆ ಇತ್ಯಾದಿಗಳನ್ನೂ ಅವರು ‘ವೇದಾಧಾರದಲ್ಲಿ’ ವಿವರಿಸಿದರು.
ಇದನ್ನು ಯಾಕೆ ಹೇಳಿದೆನೆಂದರೆ ಈಗ ನಿಮ್ಮನ್ನು ಹುಸಿಮಂತ್ರಗಳ ಭಯದ ಕತ್ತಲಲ್ಲಿಟ್ಟು ನೀವು ಬೆರಳು ತೋರಿಸದೆಯೇ ಹಸ್ತ ಮಾತ್ರವಲ್ಲ, ಇಡೀ ದೇಹವನ್ನೇ ನುಂಗುವ ಜೋಯಿಸರುಗಳು ಟಿವಿಗಳಲ್ಲೇ ವಕ್ಕರಿಸುತ್ತಿರುವಾಗ ಇಂತವರು ‘ನವಗ್ರಹ’ ಯೋಗದಂತೆ ತಾತಾ ಅಪರೂಪ!
ವಿಶೇಷವೆಂದರೆ ಸರಳವಾಗಿದ್ದ ಈ ವ್ಯಕ್ತಿ ‘ಶಾಸ್ತ್ರ’ದಲ್ಲಿ ಎಷ್ಟು ಹೇಳಿದೆಯೋ ಅಷ್ಟೇ- ಅಂದರೆ, ಪೈಸೆ, ಅಣೆ ಲೆಕ್ಕದಲ್ಲಿ ಚಿಲ್ಲರೆ ಹಣ ಮಾತ್ರ ಪಡೆಯುತ್ತಿದ್ದರು!
“ನಿಮ್ಮಲ್ಲಿ ಚಿಲ್ಲರೆ ಇರಲಿಕ್ಕಿಲ್ಲವಾದುದರಿಂದ ಅದನ್ನೂ ನಾನೇ ತಂದಿದ್ದೇನೆ” ಎಂದು ಜೋಳಿಗೆಯಿಂದ ಹಳೆಯ ನಾಣ್ಯಗಳನ್ನು ತೆಗೆದರು. “ನಿಮಗೆ ನಾನು ಸಾಲ ಕೊಡುತ್ತೇನೆ. ಅದನ್ನು ನೀವು ಶಾಸ್ತ್ರದಂತೆ ನನಗೆ ದಾನ ಮಾಡಬೇಕು. ನಂತರ ನನ್ನ ಸಾಲವನ್ನು ಒಟ್ಟಿಗೆ ತೀರಿಸಿ. ಶಾಸ್ತ್ರದ ಪ್ರಕಾರ ನೀವು ನನಗೆ ಗೋದಾನ ಮಾಡಬೇಕು. ಈಗ ಈ ನಗರದಲ್ಲಿ ಗೋವನ್ನು ಎಲ್ಲಿಂದ ತರುತ್ತೀರಿ? ನಾನೆಲ್ಲಿ ಸಾಕಲಿ? ಗೋವು ಇಲ್ಲದಿದ್ದಲ್ಲಿ ಶಾಸ್ತ್ರದಲ್ಲಿ ಚಿನ್ನದ ಪ್ರತಿಮೆ ದಾನ ಮಾಡಬಹುದೆಂದಿದೆ. ನಾನು ಅದನ್ನೂ ತಂದಿದ್ದೇನೆ” ಎಂದು ಜೋಳಿಗೆಯಿಂದ ಚಿನ್ನದ ಚಿಕ್ಕ ದನದ ಪ್ರತಿಮೆ ತೆಗೆದರು.
“ನಾನು ನಿಮಗೆ ಹಣ ಸಾಲಕೊಟ್ಟು ಇದನ್ನು ಮಾರುತ್ತೇನೆ. ಆ ಕಾಲದ ರೇಟು ಒಂದೂ ಕಾಲು ರೂಪಾಯಿ. ಹಣ ನಂತರ ಕೊಡಿ” ಎಂದು ಚಿನ್ನದ ದನವನ್ನು ಅತ್ತೆಗೆ ಮಾರಿದರು. ನಂತರ ಅದನ್ನೇ ದಾನವಾಗಿ ಪಡೆದರು ಎನ್ನಿ! ಮಾರಿದ ಹಣ ಬೇರೆ, ದಾನ ಲಾಭ ಪ್ರತ್ಯೇಕ! ಅದರೂ ಅವರು ದನದ ಪ್ರಸ್ತುತ ರೇಟು ಪಡೆಯಲಿಲ್ಲ! ಅದೇ ರೀತಿ ಜೋಳಿಗೆಯಿಂದ ಮಣ್ಣನ್ನು ತೆಗೆದು ತಾವೇ ಮಾರಿ, ಭೂದಾನವನ್ನೂ ಪಡೆದರು. ಎಲ್ಲವನ್ನೂ ಅಣೆ ಪೈ ಲೆಕ್ಕದಲ್ಲಿ ದಕ್ಷಿಣೆ ಪಡೆದರು. ನಾನು ಈ ವರ್ಚುವಲ್ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ ನೋಡಿ ಅಚ್ಚರಿಪಟ್ಟೆ.
ನನ್ನ ಅತ್ತೆಯವರಿಗಂತೂ ಖುಷಿಯಾಗಿ ಕೊನೆಗೆ ಉದಾರ ದಕ್ಷಿಣೆ ಕೊಟ್ಟ ರೂ, ಅವರು ಅದರಲ್ಲಿ ಈಗಿನ ಲೆಕ್ಕಾಚಾರ ಹಾಕಿ ಸ್ವಲ್ಪವನ್ನೇ ತೆಗೆದುಕೊಂಡರು! “ನಿಮಗಿದು ಈಗ ಕಡಿಮೆ ಕಾಣಬಹುದು. ಹಿಂದಿನ ಕಾಲದಲ್ಲಿ ಇದು ಭಾರೀ ದೊಡ್ಡ ಹಣ!” ಎಂದು ನೆನಪಿಸಿದರು ಬೇರೆ!!
ಇವೆಲ್ಲಾ ನಮಗೆ ಜೀವನದ ಅರ್ಥ ಮಾಡಿಸುವ ಸಾಂಕೇತಿಕ ಕ್ರಿಯೆಗಳು ಮಾತ್ರ ಅವುಗಳಿಗೆ ಪ್ರಸ್ತುತತೆ ಅರ್ಥ ಇಲ್ಲ. ಹಿಂದಿನವರ ಜೀವನಕ್ರಮ, ಅವರು ಕಂಡುಕೊಂಡ ಅರ್ಥವನ್ನು ನೆನಪಿಸುವುದು ಇವುಗಳ ಉದ್ದೇಶ ಎಂದೂ ವಿವರಿಸಿದರು.
ನಾನು ಒಂದು ಕಡೆ ಬೆರಗಾಗುತ್ತಾ, ಇನ್ನೊಂದು ಕಡೆ ಮನಸ್ಸಿನಲ್ಲೇ ನಗುತ್ತಾ ಇದ್ದೆ! ಯಾಕೆಂದರೆ, ಕ್ರಿಯೆ ನಡೆಯುತ್ತಿದ್ದಾಗ ನಾನು ಈ ರೀತಿಯ ಪಿಂಡ ಪ್ರಧಾನ ನಡೆಯುವ ಕೆಲವು ಕಡೆಗೆಲ್ಲ ಹೋಗಿ ಇಣುಕ್ಕಿದ್ದೆ! ಕಾಟಾಚಾರಕ್ಕೆ ಕ್ರಿಯೆಗಳು ಅವಸರವಸರದಲ್ಲಿ ನಡೆದು, ಕಂತೆ ಕಂತೆ ನೋಟುಗಳು ಕೈಬದಲಿಸುತ್ತಿದ್ದವು! ದಂಧೆ ಜೋರಾಗಿ ನಡೆಯುತ್ತಿತ್ತು.
ನಮಗೆ ಸಿಕ್ಕಂತಹ ಪ್ರಾಮಾಣಿಕ ಅರ್ಚಕನನ್ನು ನಾನು ಜನ್ಮದಲ್ಲಿ ನೋಡಿಲ್ಲ. ಸುಲಿಯುವವರೇ ಹೆಚ್ಚು!
ನನಗೆ ಸಂಸ್ಕೃತ ಅರೆಬರೆ ಅರ್ಥ ಅಗುವುದರಿಂದ ತಪ್ಪು ಮಂತ್ರ ಹೇಳಿದ್ದಕ್ಕೆ ಹಿಂದೆ ನಾನು ಒಂದಿಬ್ಬರು ಪರಿಚಯದ ಅರ್ಚಕರನ್ನು ಪ್ರಶ್ನಿಸಿದ್ದೆ! ನನ್ನ ವಿಷಯ ಗೊತ್ತಿದ್ದುದರಿಂದ ‘ನಮ್ಮದು ಬಾಯಿಪಾಠ ಮಾರಾಯ್ರೆ, ಎಲ್ಲರೆದುರು ಮರ್ಯಾದೆ ತೆಗೆಯಬೇಡಿ’ ಅಂದಿದ್ದರು!
ನಂಬಿಕೆ ಸಂಕೀರ್ಣವಾದ ವಿಷಯ. ನುಂಗುವಂತಿಲ್ಲ, ಉಗುಳುವಂತಿಲ್ಲ! ಅದಕ್ಕಾಗಿ ಸುಮ್ಮನಿದ್ದೆ! ಇಂತವರನ್ನು ನಾವು ದೇವರ ಕಮೀಷನ್ ಏಜೆಂಟರಾಗಿ ಒಪ್ಪಿಕೊಂಡು ಬಕ್ರಾಗಳಾಗುತ್ತಿದ್ದೇವೆ.
ಮೇಲೆ ಹೇಳಿದ ಅರ್ಚಕರಿಗೆ ವ್ಯತಿರಿಕ್ತವಾಗಿ ಈಗಿನ ವಂಚಕರು ಗೋದಾನ, ಭೂದಾನ, ಸುವರ್ಣ ದಾನ ಎಂದು ಅವರೇ ಮಾರಿ, ಅವರೇ ಪಡೆದು ಎಂತಹ ದರೋಡೆ ಮಾಡುತ್ತಿದ್ದಾರೆಂಬುದಕ್ಕೆ ಹಿನ್ನೆಲೆಯಾಗಿ ಈ ಘಟನೆಯನ್ನು ವಿವರಿಸಿದೆ. ಇವರಲ್ಲಿ ಕೆಲವರು ‘ಕನ್ಯಾದಾನ’ ಪಡೆಯಲು ಹೋಗಿ ಏಟುತಿಂದ, ಕೇಸು ಸುತ್ತಿಸಿಕೊಂಡ ಮಹಾನುಭಾವರೂ ಇದ್ದಾರೆಂಬುದನ್ನು ನೆನಪಿಸಿಕೊಳ್ಳಿ! ಸಾವಿನಂತಹ ದುಃಖದ ಘಟನೆಯಿಂದಲೂ ಹಿಂಡಲು ಎಂತಹಾ ಮಹಾ ಭಯಂಕರ ಆವಿಷ್ಕಾರಗಳನ್ನು ಮಾಡಲಾಗಿದೆ ಎಂಬುದನ್ನು ಮುಂದೆ ನೋಡೋಣ. ಅದಕ್ಕಿದು ಪೀಠಿಕೆ ಅಷ್ಟೇ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತರು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ವಿಶ್ವಸಂಸ್ಥೆಯ ಕಠಿಣ ಪ್ರಶ್ನೆ: ಸಂಶೋಧನಾತ್ಮಕ ವರದಿಗಳನ್ನು ಆಧರಿಸಿ ಭಾರತಕ್ಕೆ CERD ಚಾಟಿ

ನವದೆಹಲಿ: ಭಾರತದಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಹಿಂಸೆ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ (CERD) ತೀವ್ರ...

ಪಶ್ಚಿಮ ಬಂಗಾಳ| ಕಳೆದ ಒಂದು ತಿಂಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ಸತತ ದಾಳಿ

ಪಶ್ಚಿಮ ಬಂಗಾಳದ ಚರ್ಚ್ ಒಂದರ ಆವರಣದಲ್ಲಿರುವ ಸ್ಮಶಾನದಲ್ಲಿ ಮೃತರೊಬ್ಬರಿಗೆ ಕೊನೆಯ ವಿದಾಯ ಕೋರುತ್ತಿದ್ದ ಕ್ರಿಶ್ಚಿಯನ್ ಕುಟುಂಬದ ಮೇಲೆ ಹಿಂದುತ್ವ ಗುಂಪೊಂದು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಆಗಸ್ಟ್ 14 ರಂದು ಪೂರ್ಬ...

‘ನಮ್ಮ ರಕ್ತದಿಂದ ಅವರು ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆಯೇ?’: ಕೇರಳ ವಿವಿಯಲ್ಲಿ ಜಾತಿ ತಾರತಮ್ಯದ ವಿರುದ್ಧ ದಲಿತ ಸಂಶೋಧನಾ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಉಪವಾಸ

ತಿರುವನಂತಪುರಂ: ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳ ನಿರಾಕರಣೆಯ ಆರೋಪಗಳನ್ನು ಮುಂದಿಟ್ಟುಕೊಂಡು ಕೇರಳದ ತುಂಚತ್ ಎಳುಥಾಚನ್ ಮಲಯಾಳಂ ವಿಶ್ವವಿದ್ಯಾಲಯದ ದಲಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಅನಘಾ ಶಾಸಿ...

ಸ್ವತಂತ್ರ ಭಾರದ್ವಾಜ್ ಬಂಧನದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಮನೆ ಮೇಲೆ ಕಲ್ಲು ತೂರಾಟ, ಪೊಲೀಸರ ರಕ್ಷಣೆಗೆ ಮನವಿ

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಸಂಜಯ್ ಆಝಾದ್ ಎಂಬುವವರ ಮೇಲೆ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಭೀಕರವಾಗಿ ಹಲ್ಲೆ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ...

ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಬ್ಯಾಂಕ್‌ ಖಾತೆ ನಿಷ್ಕ್ರಿಯ: ಆರ್‌ಟಿಐ ಮಾಹಿತಿ

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಲಭ್ಯವಾಗಿರುವ ಉತ್ತರದ ಪ್ರಕಾರ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಖಾತೆಯು ನಿಷ್ಕ್ರಿಯಗೊಂಡಿದೆ. ಸುಮಾರು 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದೆ. ಆಗಸ್ಟ್ 12,...

ಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ (ಸೆ.6) ಬೆಂಗಳೂರಿನ...

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...