Homeಸಾಮಾಜಿಕಜೋಯಿಸರ ‘ವರ್ಚುವಲ್’ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ಮು!

ಜೋಯಿಸರ ‘ವರ್ಚುವಲ್’ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ಮು!

- Advertisement -
- Advertisement -

ನಕಲಿ ಜೋಯಿಸರ ಬುರುಡೆ ಶಾಸ್ತ್ರಗಳು ಹೇಗೆ, ಜನ್ಮದಿಂದ ಸುತ್ತಿಕೊಂಡು, ಹೆಸರಿನಿಂದ ಗಟ್ಟಿಗೊಂಡು, ಪಂಚಾಂಗಗಳೆಂಬ ಬಾಹುಗಳಿಂದ ಕಟ್ಟಿಹಾಕುತ್ತವೆಂಬುದನ್ನು ನೋಡಿದೆವು. ಕಳೆದ ಬಾರಿ ವಿವರಿಸಿದ ಹಲ್ಲಿ ಶಕುನ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಸೂಚಿಸಲು ಓದುಗರಾದ ಪುಷ್ಪಾ ಸುರೇಂದ್ರ ಅವರು ಕಾಂಚಿಪುರಂ ದೇವಾಲಯದ ಉದಾಹರಣೆ ಕೊಟ್ಟಿದ್ದಾರೆ. ಅಲ್ಲೊಂದು ಕಲ್ಲಿನ ಹಲ್ಲಿಯಿದೆಯಂತೆ. ಈ ಹಲ್ಲಿಪತನ ಫಲದಿಂದ ಭಯಗೊಂಡವರು ಬೇರೆಬೇರೆ ರಾಜ್ಯಗಳಿಂದ ಪರಿಹಾರಾರ್ಥ ಇಲ್ಲಿ ಬಂದು ಅದರ ಮೇಲೆ ಎಣ್ಣೆ ಸುರಿಯುತ್ತಾರಂತೆ! ಅಂದರೆ ಈ ಹಲ್ಲಿಯನ್ನೇ ಜನರ ಮೇಲೆಸೆದು ಬೆದರಿಸಿ ದೋಚುವ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದೆ ಎಂದಾಯಿತು! ಅದಿರಲಿ, ನಾವೀಗ ಹುಟ್ಟಿನಿಂದ ನೇರವಾಗಿ ಸಾವಿಗೆ ಹೋಗಿ ಅಲ್ಲಾಗಿರುವ ಮಹಾನ್ ಆವಿಷ್ಕಾರಗಳನ್ನು ನೋಡೋಣ. ನಂತರ ವಿಸ್ತಾರವಾದ ಜೀವನಕ್ಕೆ ಬರೋಣ.
ಕೆಲ ವರ್ಷಗಳ ಹಿಂದೆ ನನ್ನ ದೊಡ್ಡಪ್ಪ ಮುಂಬಯಿಯಲ್ಲಿ ತೀರಿಕೊಂಡಾಗ ಅವರ ಮತ್ತು ಅದಕ್ಕೆ ಕೇವಲ ಒಂದು ವಾರ ಮೊದಲು ತೀರಿಕೊಂಡಿದ್ದ ಅವರ ಪತ್ನಿ- ದೊಡ್ಡಮ್ಮನ ಶವಸಂಸ್ಕಾರವನ್ನು ಅವರ ಗೆಳೆಯರು ವಿದ್ಯುತ್ ಚಿತೆಯಲ್ಲಿ ಯಾವುದೇ ಧಾರ್ಮಿಕ ಕ್ರಿಯಾಕರ್ಮ ಇಲ್ಲದೇ ಮಾಡಿದ್ದರು. ಅವರಿಗೆ ಮಕ್ಕಳಿರಲಿಲ್ಲ.
ನಾಸ್ತಿಕರಾಗಿದ್ದ ಅವರ ಪಿಂಡ ಪ್ರಧಾನವನ್ನೂ ಯಾರೂ ಮಾಡಿಲ್ಲ ಎಂದು ಬಹುವಾಗಿ ನೊಂದ ಮುಂಬಯಿಯಲ್ಲೇ ಇದ್ದ ಅವರ ತಂಗಿ, ಅಂದರೆ ನನ್ನ ಅತ್ತೆ ಪಿಂಡ ಬಿಡಲು ನನ್ನನ್ನು ಕರೆಸಿದರು. ಹಿಂದೂ ಆಚರಣೆಗಳ ಬಗ್ಗೆ ಅತೀವ ಶ್ರದ್ಧೆ ಇದ್ದ ಅತ್ತೆ ಮದುವೆಯಾದದ್ದು ಕ್ರೈಸ್ತರನ್ನು ಎಂದರೆ ನಿಮಗೆ ಆಶ್ಚರ್ಯ ಆಗಬಹುದು!
ದೊಡ್ಡಪ್ಪನ ಶಿಷ್ಯನೂ, ದೇವ-ಧರ್ಮ ನಿರ್ಲಿಪ್ತನೂ ಅದ ನಾನು, ಅವರ ಮನ ನೋಯಿಸಲು ಇಚ್ಛಿಸದೇ ಒಪ್ಪಿಕೊಂಡಿದ್ದೆ. ಮುಂಬಯಿಯಲ್ಲೇ ಕೆಲ ವರ್ಷ ಇದ್ದ ನನಗೆ ಜನ ನಿಭಿಡ ಮೆರೀನ್ ಲೈನ್ಸ್ನಲ್ಲಿ ಎತ್ತರವಾದ ಗೋಡೆಗಳ ಹಿಂದೆ ಅಷ್ಟೊಂದು ದೊಡ್ಡ ಸ್ಮಶಾನವಿದೆ ಎಂದು ಗೊತ್ತೇ ಇರಲಿಲ್ಲ. ಅದೊಂದು ಹಳ್ಳಿಯೇ ಅಗಿದ್ದು, ಬೇರೆ ಬೇರೆ ಜಾತಿಗಳವರು ನೂರಾರು ವರ್ಷಗಳ ಹಿಂದೆಯೇ ಕ್ರಿಯಾಕರ್ಮಗಳಿಗೆಂದು ಕಟ್ಟಿಸಿದ್ದ ದೊಡ್ಡ ದೊಡ್ಡ ಪುರಾತನ ಮನೆಗಳಿದ್ದವು. ಅಲ್ಲಿ ಅದಕ್ಕಾಗಿಯೇ ಹಲವಾರು ಅರ್ಚಕ ಕುಟುಂಬಗಳೂ ವಾಸಿಸುತ್ತಿದ್ದವು! ಅದೊಂದು ಬ್ರಾಹ್ಮಣ ಗ್ರಾಮವಾಗಿದ್ದು, ಇವೆಲ್ಲಾ ಬೇಕಾಬಿಟ್ಟಿ ಹಣ ಮಾಡುವ ಅಧಿಕೃತ ಏಜೆನ್ಸಿಗಳು!
ನನ್ನ ಸಂಬಂಧಿಯೊಬ್ಬರು ಕ್ರಿಯೆಗೆ ಕೂತುದರಿಂದ ನನಗೆ ಸಂಕಷ್ಟ ತಪ್ಪಿತು. ನಮಗೆ ಸಿಕ್ಕಿದ ಭಟ್ರು ಮಂತ್ರದ ಅರ್ಥ ಮಾತ್ರವಲ್ಲದೆ, ಆ ಪದ್ಧತಿ ಬಂದುದರ ಹಿನ್ನೆಲೆ, ಆಚರಣೆಯ ವೈದಿಕ ಅರ್ಥ, ಕಾಲಾನುಕ್ರಮದಲ್ಲಿ ಆದ ಬದಲಾವಣೆಗಳು ಎಲ್ಲವನ್ನೂ ವಿವರಿಸಿ ಹೇಳುತ್ತಿದ್ದರು. “ನಿಮಗೆ ಅರ್ಧವಾಗದೆ ನೀವಿದನ್ನು ಮಾಡಿ ಏನು ಪ್ರಯೋಜನ?” ಎಂಬ ಅವರ ಮಾತನ್ನು ಈಗಿನ ಸುಲಿಗೆಕೋರರಿಗೂ, ಅವರ ಬಕ್ರಾಗಳಿಗೂ ಕೇಳಬೇಕು!
ಹಿಂದೂ ಧರ್ಮ ಪ್ರಕಾರ ನನ್ನ ದಿವಂಗತ ದೊಡ್ಡಪ್ಪ ಮತ್ತು ದೊಡ್ಡಮ್ಮನಿಗೆ ಸ್ಥಾನಮಾನ ಬೇರೆ ಬೇರೆಯಾಗಿದ್ದುದರಿಂದ ಪಿತೃ ಪ್ರಧಾನ ಸಂಸ್ಕೃತಿಯಂತೆ ಗಂಡು-ಹೆಣ್ಣು ತಾರತಮ್ಯದ ಕ್ರಿಯೆಗಳು ನಡೆದವು. ಅದು ಯಾಕೆ ಇತ್ಯಾದಿಗಳನ್ನೂ ಅವರು ‘ವೇದಾಧಾರದಲ್ಲಿ’ ವಿವರಿಸಿದರು.
ಇದನ್ನು ಯಾಕೆ ಹೇಳಿದೆನೆಂದರೆ ಈಗ ನಿಮ್ಮನ್ನು ಹುಸಿಮಂತ್ರಗಳ ಭಯದ ಕತ್ತಲಲ್ಲಿಟ್ಟು ನೀವು ಬೆರಳು ತೋರಿಸದೆಯೇ ಹಸ್ತ ಮಾತ್ರವಲ್ಲ, ಇಡೀ ದೇಹವನ್ನೇ ನುಂಗುವ ಜೋಯಿಸರುಗಳು ಟಿವಿಗಳಲ್ಲೇ ವಕ್ಕರಿಸುತ್ತಿರುವಾಗ ಇಂತವರು ‘ನವಗ್ರಹ’ ಯೋಗದಂತೆ ತಾತಾ ಅಪರೂಪ!
ವಿಶೇಷವೆಂದರೆ ಸರಳವಾಗಿದ್ದ ಈ ವ್ಯಕ್ತಿ ‘ಶಾಸ್ತ್ರ’ದಲ್ಲಿ ಎಷ್ಟು ಹೇಳಿದೆಯೋ ಅಷ್ಟೇ- ಅಂದರೆ, ಪೈಸೆ, ಅಣೆ ಲೆಕ್ಕದಲ್ಲಿ ಚಿಲ್ಲರೆ ಹಣ ಮಾತ್ರ ಪಡೆಯುತ್ತಿದ್ದರು!
“ನಿಮ್ಮಲ್ಲಿ ಚಿಲ್ಲರೆ ಇರಲಿಕ್ಕಿಲ್ಲವಾದುದರಿಂದ ಅದನ್ನೂ ನಾನೇ ತಂದಿದ್ದೇನೆ” ಎಂದು ಜೋಳಿಗೆಯಿಂದ ಹಳೆಯ ನಾಣ್ಯಗಳನ್ನು ತೆಗೆದರು. “ನಿಮಗೆ ನಾನು ಸಾಲ ಕೊಡುತ್ತೇನೆ. ಅದನ್ನು ನೀವು ಶಾಸ್ತ್ರದಂತೆ ನನಗೆ ದಾನ ಮಾಡಬೇಕು. ನಂತರ ನನ್ನ ಸಾಲವನ್ನು ಒಟ್ಟಿಗೆ ತೀರಿಸಿ. ಶಾಸ್ತ್ರದ ಪ್ರಕಾರ ನೀವು ನನಗೆ ಗೋದಾನ ಮಾಡಬೇಕು. ಈಗ ಈ ನಗರದಲ್ಲಿ ಗೋವನ್ನು ಎಲ್ಲಿಂದ ತರುತ್ತೀರಿ? ನಾನೆಲ್ಲಿ ಸಾಕಲಿ? ಗೋವು ಇಲ್ಲದಿದ್ದಲ್ಲಿ ಶಾಸ್ತ್ರದಲ್ಲಿ ಚಿನ್ನದ ಪ್ರತಿಮೆ ದಾನ ಮಾಡಬಹುದೆಂದಿದೆ. ನಾನು ಅದನ್ನೂ ತಂದಿದ್ದೇನೆ” ಎಂದು ಜೋಳಿಗೆಯಿಂದ ಚಿನ್ನದ ಚಿಕ್ಕ ದನದ ಪ್ರತಿಮೆ ತೆಗೆದರು.
“ನಾನು ನಿಮಗೆ ಹಣ ಸಾಲಕೊಟ್ಟು ಇದನ್ನು ಮಾರುತ್ತೇನೆ. ಆ ಕಾಲದ ರೇಟು ಒಂದೂ ಕಾಲು ರೂಪಾಯಿ. ಹಣ ನಂತರ ಕೊಡಿ” ಎಂದು ಚಿನ್ನದ ದನವನ್ನು ಅತ್ತೆಗೆ ಮಾರಿದರು. ನಂತರ ಅದನ್ನೇ ದಾನವಾಗಿ ಪಡೆದರು ಎನ್ನಿ! ಮಾರಿದ ಹಣ ಬೇರೆ, ದಾನ ಲಾಭ ಪ್ರತ್ಯೇಕ! ಅದರೂ ಅವರು ದನದ ಪ್ರಸ್ತುತ ರೇಟು ಪಡೆಯಲಿಲ್ಲ! ಅದೇ ರೀತಿ ಜೋಳಿಗೆಯಿಂದ ಮಣ್ಣನ್ನು ತೆಗೆದು ತಾವೇ ಮಾರಿ, ಭೂದಾನವನ್ನೂ ಪಡೆದರು. ಎಲ್ಲವನ್ನೂ ಅಣೆ ಪೈ ಲೆಕ್ಕದಲ್ಲಿ ದಕ್ಷಿಣೆ ಪಡೆದರು. ನಾನು ಈ ವರ್ಚುವಲ್ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ ನೋಡಿ ಅಚ್ಚರಿಪಟ್ಟೆ.
ನನ್ನ ಅತ್ತೆಯವರಿಗಂತೂ ಖುಷಿಯಾಗಿ ಕೊನೆಗೆ ಉದಾರ ದಕ್ಷಿಣೆ ಕೊಟ್ಟ ರೂ, ಅವರು ಅದರಲ್ಲಿ ಈಗಿನ ಲೆಕ್ಕಾಚಾರ ಹಾಕಿ ಸ್ವಲ್ಪವನ್ನೇ ತೆಗೆದುಕೊಂಡರು! “ನಿಮಗಿದು ಈಗ ಕಡಿಮೆ ಕಾಣಬಹುದು. ಹಿಂದಿನ ಕಾಲದಲ್ಲಿ ಇದು ಭಾರೀ ದೊಡ್ಡ ಹಣ!” ಎಂದು ನೆನಪಿಸಿದರು ಬೇರೆ!!
ಇವೆಲ್ಲಾ ನಮಗೆ ಜೀವನದ ಅರ್ಥ ಮಾಡಿಸುವ ಸಾಂಕೇತಿಕ ಕ್ರಿಯೆಗಳು ಮಾತ್ರ ಅವುಗಳಿಗೆ ಪ್ರಸ್ತುತತೆ ಅರ್ಥ ಇಲ್ಲ. ಹಿಂದಿನವರ ಜೀವನಕ್ರಮ, ಅವರು ಕಂಡುಕೊಂಡ ಅರ್ಥವನ್ನು ನೆನಪಿಸುವುದು ಇವುಗಳ ಉದ್ದೇಶ ಎಂದೂ ವಿವರಿಸಿದರು.
ನಾನು ಒಂದು ಕಡೆ ಬೆರಗಾಗುತ್ತಾ, ಇನ್ನೊಂದು ಕಡೆ ಮನಸ್ಸಿನಲ್ಲೇ ನಗುತ್ತಾ ಇದ್ದೆ! ಯಾಕೆಂದರೆ, ಕ್ರಿಯೆ ನಡೆಯುತ್ತಿದ್ದಾಗ ನಾನು ಈ ರೀತಿಯ ಪಿಂಡ ಪ್ರಧಾನ ನಡೆಯುವ ಕೆಲವು ಕಡೆಗೆಲ್ಲ ಹೋಗಿ ಇಣುಕ್ಕಿದ್ದೆ! ಕಾಟಾಚಾರಕ್ಕೆ ಕ್ರಿಯೆಗಳು ಅವಸರವಸರದಲ್ಲಿ ನಡೆದು, ಕಂತೆ ಕಂತೆ ನೋಟುಗಳು ಕೈಬದಲಿಸುತ್ತಿದ್ದವು! ದಂಧೆ ಜೋರಾಗಿ ನಡೆಯುತ್ತಿತ್ತು.
ನಮಗೆ ಸಿಕ್ಕಂತಹ ಪ್ರಾಮಾಣಿಕ ಅರ್ಚಕನನ್ನು ನಾನು ಜನ್ಮದಲ್ಲಿ ನೋಡಿಲ್ಲ. ಸುಲಿಯುವವರೇ ಹೆಚ್ಚು!
ನನಗೆ ಸಂಸ್ಕೃತ ಅರೆಬರೆ ಅರ್ಥ ಅಗುವುದರಿಂದ ತಪ್ಪು ಮಂತ್ರ ಹೇಳಿದ್ದಕ್ಕೆ ಹಿಂದೆ ನಾನು ಒಂದಿಬ್ಬರು ಪರಿಚಯದ ಅರ್ಚಕರನ್ನು ಪ್ರಶ್ನಿಸಿದ್ದೆ! ನನ್ನ ವಿಷಯ ಗೊತ್ತಿದ್ದುದರಿಂದ ‘ನಮ್ಮದು ಬಾಯಿಪಾಠ ಮಾರಾಯ್ರೆ, ಎಲ್ಲರೆದುರು ಮರ್ಯಾದೆ ತೆಗೆಯಬೇಡಿ’ ಅಂದಿದ್ದರು!
ನಂಬಿಕೆ ಸಂಕೀರ್ಣವಾದ ವಿಷಯ. ನುಂಗುವಂತಿಲ್ಲ, ಉಗುಳುವಂತಿಲ್ಲ! ಅದಕ್ಕಾಗಿ ಸುಮ್ಮನಿದ್ದೆ! ಇಂತವರನ್ನು ನಾವು ದೇವರ ಕಮೀಷನ್ ಏಜೆಂಟರಾಗಿ ಒಪ್ಪಿಕೊಂಡು ಬಕ್ರಾಗಳಾಗುತ್ತಿದ್ದೇವೆ.
ಮೇಲೆ ಹೇಳಿದ ಅರ್ಚಕರಿಗೆ ವ್ಯತಿರಿಕ್ತವಾಗಿ ಈಗಿನ ವಂಚಕರು ಗೋದಾನ, ಭೂದಾನ, ಸುವರ್ಣ ದಾನ ಎಂದು ಅವರೇ ಮಾರಿ, ಅವರೇ ಪಡೆದು ಎಂತಹ ದರೋಡೆ ಮಾಡುತ್ತಿದ್ದಾರೆಂಬುದಕ್ಕೆ ಹಿನ್ನೆಲೆಯಾಗಿ ಈ ಘಟನೆಯನ್ನು ವಿವರಿಸಿದೆ. ಇವರಲ್ಲಿ ಕೆಲವರು ‘ಕನ್ಯಾದಾನ’ ಪಡೆಯಲು ಹೋಗಿ ಏಟುತಿಂದ, ಕೇಸು ಸುತ್ತಿಸಿಕೊಂಡ ಮಹಾನುಭಾವರೂ ಇದ್ದಾರೆಂಬುದನ್ನು ನೆನಪಿಸಿಕೊಳ್ಳಿ! ಸಾವಿನಂತಹ ದುಃಖದ ಘಟನೆಯಿಂದಲೂ ಹಿಂಡಲು ಎಂತಹಾ ಮಹಾ ಭಯಂಕರ ಆವಿಷ್ಕಾರಗಳನ್ನು ಮಾಡಲಾಗಿದೆ ಎಂಬುದನ್ನು ಮುಂದೆ ನೋಡೋಣ. ಅದಕ್ಕಿದು ಪೀಠಿಕೆ ಅಷ್ಟೇ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...