Homeಮುಖಪುಟನಮ್ಮ ಪ್ರಜಾಪ್ರಭುತ್ವ ಪಾಕಿಸ್ತಾನಕ್ಕಿಂತ ದುರ್ಬಲವಾಗಬಾರದು: ಒಂದು ಆಶಯ

ನಮ್ಮ ಪ್ರಜಾಪ್ರಭುತ್ವ ಪಾಕಿಸ್ತಾನಕ್ಕಿಂತ ದುರ್ಬಲವಾಗಬಾರದು: ಒಂದು ಆಶಯ

- Advertisement -
- Advertisement -

ನೀಲಗಾರ |

ಕೆಲವು ವರ್ಷಗಳ ಕೆಳಗೆ ಪಾಕಿಸ್ತಾನದ ಕವಿಯೊಬ್ಬರು ನಮ್ಮ ದೇಶದಂತೆ ನೀವಾಗಬೇಡಿ ಎಂದು ಭಾರತವನ್ನು ಉದ್ದೇಶಿಸಿ ಬಹಳ ನೋವಿನಿಂದ ಕೂಡಿದ ಕವಿತೆಯೊಂದನ್ನು ಬರೆದಿದ್ದರು.

ನಮ್ಮದೇ ಸೋದರಿ ದೇಶ, ಇಂದಲ್ಲಾ ನಾಳೆ ಒಂದೇ ಆಗಬೇಕಿರುವ ನೆರೆಯ ದೇಶವು ಅತ್ಯಂತ ಅರಾಜಕವಾದ ಪರಿಸ್ಥಿತಿಯಲ್ಲಿರುವುದು ನಮಗೆಲ್ಲರಿಗೂ ಗೊತ್ತು. ಸೈನ್ಯ, ಇಂಟೆಲಿಜೆನ್ಸ್ ಸಂಸ್ಥೆ, ಮತೀಯವಾದಿಗಳು, ಅಮೆರಿಕಾ ಮತ್ತು ಭ್ರಷ್ಟ ರಾಜಕಾರಣಿಗಳು ಇವೆಲ್ಲದರ ಮಧ್ಯೆ ನಲುಗುತ್ತಿರುವ ಜನಸಾಮಾನ್ಯರು  ಇದೇ ಪಾಕಿಸ್ತಾನ. ಹಾಗಾಗಿಯೇ ಭಯೋತ್ಪಾದಕರನ್ನೂ ಮಟ್ಟ ಹಾಕಲಾಗದ ದುಸ್ಥಿತಿ. ಬಹುಶಃ ಇದೇ ಆ ಕವಿಯ ಮನದಾಳದಲ್ಲಿದ್ದದ್ದು.

ಆದರೆ, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ದುಃಖಕರವಾಗಿದೆ. ನಮ್ಮ ದೇಶದ ಸಿಆರ್‌ಪಿಎಫ್ ಮೇಲೆ ಭಯೋತ್ಪಾದಕ ದಾಳಿ ನಡೆದು ಸುಮಾರು 40ಕ್ಕೂ ಹೆಚ್ಚು ಯೋಧರು ಸಾವಿಗೀಡಾಗುತ್ತಾರೆ. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸರ್ವಪಕ್ಷ ಸಭೆ ಕರೆಯುತ್ತದೆ – ಪ್ರಧಾನಮಂತ್ರಿಯೇ ಅದರಲ್ಲಿ ಪಾಲ್ಗೊಳ್ಳದೇ ಪಕ್ಷದ ಪರ ಪ್ರಚಾರ ಮಾಡಲು ಹೋಗುತ್ತಾರೆ.

ಆ ನಂತರ ಭಾರತದ ವಾಯುಪಡೆಯು ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತದೆ. ಉದ್ವಿಗ್ನ ವಾತಾವರಣ ಹೆಚ್ಚಾಗುತ್ತಾ ಹೋಗುತ್ತದೆ. ಇನ್ನೊಂದು ಸರ್ವಪಕ್ಷ ಸಭೆ ನಡೆಯುತ್ತದೆ. ಆಗಲೂ ಪ್ರಧಾನಿ ಗೈರುಹಾಜರು. ಅವರು ಪ್ರತಿನಿತ್ಯ ಚುನಾವಣೆಯ ಸಿದ್ಧತೆಯಲ್ಲೇ ಹೆಚ್ಚು ತೊಡಗಿರುವುದು ಕಂಡು ಬರುತ್ತದೆ.

ಇದೇ ಅವಧಿಯಲ್ಲಿ ಪಾಕಿಸ್ತಾನದ ಇಮ್ರಾನ್‌ಖಾನ್ ಅವರು ಮಾಡಿದ ಭಾಷಣವೊಂದು ಎಲ್ಲೆಡೆ ಚರ್ಚೆಯಲ್ಲಿದೆ. ಆ ಭಾಷಣ ಮಾಡಿದ್ದು ಎಲ್ಲಿ ಗೊತ್ತೇ? ಸಂಸತ್ತಿನಲ್ಲಿ. ಅದೂ ಸಹಾ, ಈ ಸನ್ನಿವೇಶದಲ್ಲಿ ದೇಶದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲೆಂದೇ ಕರೆದ ವಿಶೇಷ ಅಧಿವೇಶನ. ಅಲ್ಲಿಯೇ ಭಾರತದ ಜೊತೆಗೆ ಶಾಂತಿ ಹಸ್ತವನ್ನು ಚಾಚುವ ಉದ್ದೇಶದಿಂದ ನಾವು ಪೈಲಟ್ ಅಭಿನಂದನ್‌ರನ್ನು ಬಿಡುಗಡೆ ಮಾಡುತ್ತೇವೆ ಎಂದು ಇಮ್ರಾನ್‌ಖಾನ್ ಹೇಳಿದಾಗ, ಇಡೀ ಸಂಸತ್ತು ಮೇಜುತಟ್ಟಿ ಅದನ್ನು ಅನುಮೋದಿಸುತ್ತದೆ.

ಫೆ.28ರಂದು ನಡೆದ ಪ್ರಧಾನಿ ಮೋದಿಯವರ ಚುನಾವಣಾ ಪ್ರಚಾರದ ಬಿಜೆಪಿ ಜಾಹೀರಾತು

ಅಭಿನಂದನ್‌ರ ಬಿಡುಗಡೆಯ ಸಂದೇಶ ಹೊರಬಂದ ಕೆಲ ಹೊತ್ತಿನಲ್ಲಿ ಪಂಜಾಬಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರಧಾನಿ ಮೋದಿಯವರಲ್ಲಿ ಒಂದು ಕೋರಿಕೆ ಮುಂದಿಡುತ್ತಾರೆ. ಅಭಿನಂದನ್ ದೇಶದೊಳಕ್ಕೆ ಬರುವುದು ವಾಘಾ ಗಡಿಯಿಂದ. ವಾಘಾ ಆ ಕಡೆಯ ಪಂಜಾಬ್‌ನಲ್ಲಿದ್ದರೆ, ಈ ಕಡೆಗೆ ಭಾರತದ ಪಂಜಾಬಿನ ಅಟ್ಟಾರಿ ಇದೆ. ಅಮೃತಸರ ಮತ್ತು ಲಾಹೋರ್ ನಡುವಿನ ದೂರ ಕೇವಲ 58 ಕಿ.ಮೀ. ತಾನು ಖುದ್ದಾಗಿ ಹೋಗಿ ಅಭಿನಂದನ್‌ರನ್ನು ಕರೆತರುತ್ತೇನೆ ಎಂದು ಅಮರಿಂದರ್ ಕೋರಿಕೆ.

ಇದಕ್ಕೆ ಕಾರಣವಿದೆ. ಅವರು ಕ್ಯಾಪ್ಟನ್ ಅಮರಿಂದರ್. ಸ್ವತಃ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದವರು. ಜೊತೆಗೆ ಈ ಸದ್ಯ ವಾಘಾ-ಅಟ್ಟಾರಿ ಬಾರ್ಡರ್ ಬರುವ ಪಂಜಾಬಿನ ಮುಖ್ಯಮಂತ್ರಿ. ಅಭಿನಂದನ್ ಮತ್ತು ಅವರ ತಂದೆಯು  ಶಿಕ್ಷಣ ಹಾಗೂ ತರಬೇತಿ ಪಡೆದುಕೊಂಡ ನ್ಯಾಷನಲ್ ಡಿಫೆನ್ಸ್ ಅಕ್ಯಾಡೆಮಿಯಲ್ಲೇ ಅಮರಿಂದರ್ ಸಿಂಗ್ ಸಹಾ ತರಬೇತಿ ಪಡೆದುಕೊಂಡಿದ್ದರು. ಜೊತೆಗೆ ಈ ಮನವಿ ಮಾಡಿಕೊಳ್ಳುವ ಹೊತ್ತಿನಲ್ಲಿ ಅಮರಿಂದರ್ ಸಿಂಗ್ ಅದೇ ಪ್ರದೇಶದಲ್ಲಿದ್ದರು. ಒಂದು ವೇಳೆ ಕ್ಯಾಪ್ಟನ್ ಅಮರಿಂದರ್ ಅವರು ವ್ಯಕ್ತಿಗತ ಇಮೇಜ್ ಹೆಚ್ಚಿಸಿಕೊಳ್ಳಲೆಂದೇ ಈ ಪ್ರಸ್ತಾಪ ಮುಂದಿಟ್ಟಿದ್ದಾರೆಂದುಕೊಳ್ಳಿ.

ಆದರೂ, ದೇಶದ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ದೇಶದ ಪ್ರಧಾನಿಗೆ ಇದೊಂದು ಅವಕಾಶವಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಾಜಿ ಸೈನಿಕರಾದ ಅಮರಿಂದರ್‌ರನ್ನು ಅದಕ್ಕೆ ಕಳಿಸುವುದಕ್ಕಿಂತ ಒಳ್ಳೆಯ ನಡೆ ಇನ್ನೇನಾಗಿರಲು ಸಾಧ್ಯವಿತ್ತು?

ಆದರೆ ಮೋದಿಯವರು ಅಂಥಾ ಪ್ರಬುದ್ಧ ನಡೆಯನ್ನು ತೋರಲೇ ಇಲ್ಲ. ನಮ್ಮದೇ ದೇಶದ ಪ್ರಧಾನಿ ಹುದ್ದೆಯನ್ನು ಹೀಗಳೆಯುವುದು ಯಾರಿಗೂ ಇಷ್ಟವಿಲ್ಲದ ಸಂಗತಿ, ಆದರೆ ಪುಲ್ವಾಮಾ ಘಟನೆಯ ತರುವಾಯ ಪಾಕಿಸ್ತಾನದ ಪ್ರಧಾನಿ ವ್ಯವಹರಿಸಿದ ರೀತಿಗೂ ನಮ್ಮ ಭಾರತದ ಪ್ರಧಾನಿಯಾಗಿ ಮೋದಿಯವರು ತೋರಿದ ರಾಜಕೀಯ ಪ್ರೇರಿತ ನಡವಳಿಕೆಗಳಿಗೂ ಹೋಲಿಕೆ ಮಾಡಿದರೆ ನಿಜಕ್ಕೂ ಭಾರತೀಯರು ವಿಷಾದಗೊಳ್ಳಬೇಕಾಗಿ ಬಂದಿದೆ.

ಫೆಬ್ರವರಿ 28ರಂದು ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷವು `ಕಾಂಗ್ರೆಸ್ ಕಾರ್ಯಕಾರಿ ಸಮಿತಿ’ (ಸಿಡ್ಬ್ಲುಸಿ) ಯ ಸಭೆ ಆಯೋಜಿಸಿತ್ತು. ಕಳೆದ ಆರು ದಶಕಗಳ (60 ವರ್ಷಗಳ) ನಂತರ ಈ ಅತಿದೊಡ್ಡ ಸಭೆ ನಡೆಸಲು ಕಾಂಗ್ರೆಸ್ ಯೋಜಿಸಿಕೊಂಡಿತ್ತು. ಜೊತೆಗೆ ಚುನಾವಣಾ ಪ್ರಚಾರಕ್ಕಾಗಿ `ಜನಸಂಕಲ್ಪ ಯಾತ್ರೆ’ಗೆ ಚಾಲನೆ ನೀಡುವುದೂ ಅದರ ಭಾಗವಾಗಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ್ದರಿಂದ ದೇಶದ ಭದ್ರತೆಗೆ ಒತ್ತು ಕೊಟ್ಟು ಕಾಂಗ್ರೆಸ್ ಆ ಸಭೆಗಳನ್ನು ಮುಂದಕ್ಕೂಡಿತು.

ಆದರೆ ಪ್ರಧಾನಿಯಾಗಿ ಮೋದಿಯವರು ಪುಲ್ವಾಮಾ ಘಟನೆಯ ತರುವಾಯ ನಿರಂತರವಾಗಿ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಆ ಭಯೋತ್ಪಾದಕ ದಾಳಿ ನಡೆದ ಸುದ್ದಿ ನಡೆದ ಮೇಲೂ ಮೋದಿಯವರು ಜಿಮ್ ಕಾರ್ಬೆಟ್  ನ್ಯಾಶನಲ್ ಪಾರ್ಕಿನಲ್ಲಿ ಜಾಹಿರಾತೊಂದರ ಶೂಟಿಂಗ್ ಮುಂದುವರೆಸಿದರು ಎಂಬ ಆಪಾದನೆ ಸುಳ್ಳೋ ನಿಜವೋ ಎಂದು ಇತ್ಯರ್ಥಗೊಳ್ಳುವ ಮೊದಲೇ ಅವರು ಝಾಂಸಿಯೂ ಒಳಗೊಂಡಂತೆ ಬೇರೆಬೇರೆ ಕಡೆ ಪಕ್ಷದ ಪರವಾಗಿ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವನ್ನು ರಾಜಕೀಯ ವೇದಿಕೆಯಲ್ಲಿ ಸರಕಾಗಿಸಿಕೊಂಡು ಮಾತನಾಡಿದರು. ಯಾವ ಆತಂಕವೂ ಇಲ್ಲದಂತೆ `ಖೇಲೊ ಇಂಡಿಯಾ’ ಆಪ್ ಬಿಡುಗಡೆ ಮಾಡಿದರು.

ಫೆಬ್ರವರಿ 28ರಂದು ವಿಶ್ವದ ಅತಿದೊಡ್ಡ ವೀಡಿಯೋ ಕಾನ್ಫರೆನ್ಸ್ ಮೂಲಕ `ಮೇರಾ ಬೂತ್ ಸಬ್ ಸೇ ಮಜಬೂತ್’ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚುನಾವಣಾ ಪ್ರಚಾರ ಮಾಡಿದರು. ದೇಶದ ರಾಜಕಾರಣಿಗಳಲ್ಲೆ ಅತಿಹೆಚ್ಚು ಸೋಶಿಯಲ್ ಮೀಡಿಯಾ ಬಳಸುವ, ಫಾಲೋವರ್ ಗಳನ್ನು ಹೊಂದಿರುವ ರಾಜಕಾರಣಿ ಅಂದ್ರೆ ಮೋದಿಯವರು. ಟ್ವೀಟ್ಟರ್ ನಲ್ಲಿ ನಾಲ್ಕೂವರೆ ಕೋಟಿಗೂ ಹೆಚ್ಚು ಫಾಲೋವರ್.ಗಳನ್ನು ಹೊಂದಿದ್ದಾರೆ. ಆದರೆ ಪುಲ್ವಾಮಾ ಘಟನೆಯ ನಂತರ ಟ್ವಿಟ್ಟರ್ ನಲ್ಲೂ ಅವರು ಬಿಜೆಪಿ ರಾಜಕೀಯ ಪ್ರಚಾರಗಳನ್ನು ಹೆಚ್ಚಾಗಿ ಟ್ವೀಟ್ ಮಾಡಿದ್ದಾರೆಯೇ ವಿನಾಃ ಆತಂಕದ ಸ್ಥಿತಿಯಲ್ಲಿ ದೇಶಕ್ಕೆ ಅಗತ್ಯವಿರುವ ನಾಯಕತ್ವದ ಮಾತುಗಳು ಅವರಿಂದ ಟ್ಟೀಟುಗೊಂಡಿಲ್ಲ.

ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವುದಕ್ಕೆಂದೇ ವಿಶೇಷ ಅಧಿವೇಶನ ಕರೆದು ವಿರೋಧ ಪಕ್ಷಗಳನ್ನೂ ಸಹಮತಕ್ಕೆ ತೆಗೆದುಕೊಂಡು ಸಮತೂಕದ ಮಾತುಗಳನ್ನಾಡುವ ಇಮ್ರಾನ್ ಖಾನ್ ಜಿನೆವಾ ಒಪ್ಪಂದವನ್ನು ಗೌರವಿಸಿ ತನ್ನ ವಶದಲ್ಲಿದ್ದ ಭಾರತದ ಕಮಾಂಡರ್ ಅಬಿನಂದನ್ ಬಿಡುಗಡೆಯನ್ನು ಸಂಸತ್ತಿನಲ್ಲೇ ಘೋಷಿಸುವಾಗ ಒಂದು ಆಶಯವಂತೂ ಭಾರತದ ಶಾಂತಿಪ್ರಿಯತೆ ಮತ್ತು ಸೌಹಾರ್ದತೆಯನ್ನು ಗೌರವಿಸುವ ನಿಜವಾದ ದೇಶಪ್ರೇಮಿಗಳಲ್ಲ ಮನಸಿನಲ್ಲಿ ಪುಟಿದೇಳುತ್ತಿರುತ್ತದೆ.  ಅದು, ಮೋದಿಯವರ ಕಾಲದಲ್ಲಿ ಭಾರತ ಪಾಕಿಸ್ತಾನದಂತಾಗದಿರಲಿ, ದೇಶದ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲಿ ಎಂಬುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...