Homeಅಂಕಣಗಳು“ಬದನೆಕಾಯಿ ತಿನ್ನಕ್ಕೆ ಪುರಾಣ ಹೇಳಕ್ಕೆ”

“ಬದನೆಕಾಯಿ ತಿನ್ನಕ್ಕೆ ಪುರಾಣ ಹೇಳಕ್ಕೆ”

- Advertisement -
- Advertisement -

ಬದನೆಕಾಯಿ ಇರೋದು ತಿನ್ನಕ್ಕೆ ಪುರಾಣ ಇರದು ಹೇಳಕ್ಕೆ. ಇದೊಂದು ಹಳ್ಳಿ ಕಡೆಯ ಗಾದೆ. ಇದನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಎಡೂರಪ್ಪನ ಸರಕಾರ ಕೊರೊನಾ ಕಾಯಿಲೆ ನಿಯಂತ್ರಿಸುವ ನಿಷೇಧಗಳನ್ನ ಜನಗಳ ಮೇಲೆ ಹೇರಿ ತಾವು ಮಾತ್ರ ಮದುವೆ ಮುಂಜಿ ಹಬ್ಬಹರಿದಿನಗಳಲ್ಲಿ ಆರಾಮವಾಗಿ ಅಡ್ಡಾಡುತ್ತಿವೆಯಂತಲ್ಲಾ. ಹಾಗೆ ನೋಡಿದರೆ ಈ ಬಿಜೆಪಿಗಳೇ ಹಾಗೆ. ಬಾಯಿಬಿಟ್ಟಕೂಡಲೇ ಪುರಾಣವನ್ನು ಹೇಳುವ ಪ್ರಧಾನಿಯನ್ನ ಪಡೆದಿರುವ ನಾವು, ಅವರ ಸರಕಾರಗಳು ಅಸ್ತಿತ್ವದಲ್ಲಿರುವ ರಾಜ್ಯಗಳ ನಾಯಕರಿಂದ ಇನ್ನೇನು ಪಡೆಯಲು ಸಾಧ್ಯ. ಮಂಡ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ನೂರು ಜನ ಸೇರಿ ಮಾಡುತ್ತಿದ್ದ ಅಮ್ಮನ ಹಬ್ಬ ತಡೆದ ಡಿ.ಸಿ, ಸಾಹಸವನ್ನೆ ಗೈದಂತೆ ಹೋಗುತ್ತಿದ್ದರೆ ಅತ್ತ ಎಡೂರಪ್ಪ `ಕೊರೊನ ಪರೋನ ನನಿಗೆ ಬರದಿಲ್ಲ’ ಅನ್ನಂಗೆ ತಪಾಸಣೆ ತಡಾಯ್ದು ಹೋಗುತ್ತಿದ್ದರೆ ಇತ್ತ ದೇವೇಗೌಡರು ನಾಲ್ಕೈದು ಸಾವಿರ ಜನ ಸೇರಿ ಮಾಡಿದ ಮದುವೆಯ ಮಧ್ಯದಲ್ಲಿದ್ದರು. ಇನ್ನ ಈಶ್ವರಪ್ಪನೂ ಕೂಡ ನಾನೇನು ಕಡಿಮೆ ಎನ್ನುವಂತೆ ಹಬ್ಬ ಸಡಗರದಲ್ಲಿದ್ದರಂತಲ್ಲಾ, ಥೂತ್ತೇರಿ.

ಜನ ಸೇರುವ ಹಬ್ಬ, ಹರಿದಿನ ಹುಡುಕುತ್ತ, ತಿರುಗುತ್ತಿರುವ ಈಶ್ವರಪ್ಪ ಬದುಕಿನಲ್ಲಿ ಬಹಳ ಪುರಾಣ ಹೇಳುವ ಮನುಷ್ಯನಂತಲ್ಲಾ. ಮಾಂಸ ನಿಷೇಧವಿದ್ದಾಗಲೇ ಭಕ್ಷಣೆ ಮಾಡಿ ತಾನು ಅಸುರ ಸಂತತಿ ಎಂದು ಹೇಳಿದವರು. ಚಡ್ಡಿಗಳಿಗೆ ಎಡೂರಪ್ಪನಿಗಿಂತಲೂ ಪ್ರಿಯರಾದವರು. ಅದಕ್ಕೇ ಏನೋ ಎಡೂರಪ್ಪನವರು ದಾವಣಗೆರೆ ಉಸ್ತುವಾರಿ ಸಚಿವರನ್ನಾಗಿ ಮಾಡಿಬಿಟ್ಟಿದ್ದಾರೆ. ಲಂಕೇಶ್ ಹೇಳುತ್ತಿದ್ದ ಪ್ರಕಾರ, ದಾವಣಗೆರೆಯಲ್ಲಿ ಒಂದು ಕಲ್ಲು ಬೀಸಿದರೆ ಅದು ಒಬ್ಬ ಲಿಂಗಾಯತನಿಗೇ ತಗಲುತ್ತದಂತೆ. ಮೊದಲು ಸೆಕ್ಯುಲರ್ ಎಂದೇಳುವ ಶ್ಯಾಮನೂರು ಜೊತೆಗಿದ್ದು, ಈಗ ಬಿಜೆಪಿ ಸಿದ್ದೇಶನ ಜೊತೆ ಸೇರಿಕೊಂಡು ಮೋದಿ ಭಜನೆ ಮಾಡುತ್ತಿರುವ ದಾವಣಗೆರೆಗೆ ಈಶ್ವರಪ್ಪನನ್ನು ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡಿರುವುದು ಸೇಡುತೀರಿಸಿಕೊಳ್ಳುವ ಕ್ರಮವೆಂದು ಹೇಳುತ್ತಿದ್ದಾರಲ್ಲಾ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಲಿಂಗಾಯತರೆಲ್ಲಾ ಸೇರಿಕೊಂಡು ಈಶ್ವರಪ್ಪನನ್ನು ಹುಡುಕಿಕೊಡಿ ಎಂದು ಪ್ರತಿಭಟಿಸಿದಾಗ, ಈಶ್ವರಪ್ಪ ಹಬ್ಬದಲ್ಲಿ ಭಾಗವಹಿಸಿ ಕೊರೊನಾ ಗಿರೋನ ಯಲ್ಲ ದೇವೇಗೌಡನಂತ ಮುದುಕರಿಗೆ ಬತ್ತದೆ ಕಂಡ್ರಿ ನಮಗಲ್ಲ ಎಂದರಂತಲ್ಲಾ, ಥೂತ್ತೇರಿ.

ವಿಧಾನಸೌಧದ ಹೊರಗೆ ಈ ಕತೆಯಾದರೆ, ಇನ್ನ ವಿಧಾನಸೌಧದ ಒಳಗಿನ ಕತೆಗಳು ಮನಕರಗುವಂತಿವೆಯಲ್ಲ. ಪ್ರವಾಹ, ಜನರ ಗೋಳು, ದೊರೆಸ್ವಾಮಿ ನಿಂದನೆಯ ವಿಚಾರ ಚರ್ಚೆಯಾಗಲು ಅವಕಾಶ ಕೊಡದೆ ಕಾಗೇರಿ, ಸಂವಿಧಾನ ಚರ್ಚೆಯಾಗಲು ಧಾರಾಳ ಅವಕಾಶಕೊಟ್ಟು, ಅಳುತ್ತ ಹೋದರಂತಲ್ಲ. ಇವರ ಬುದ್ಧವಂತಿಕೆ ಗ್ರಹಿಸುವುದಾದರೆ, ಪ್ರವಾಹಸಂತ್ರಸ್ತರ ವಿಷಯಕ್ಕೆ ಸಮಯ ಕೊಟ್ಟರೆ ಸರಕಾರದ ಮರ್ಯಾದೆ ಹರಾಜಾಗುತ್ತದೆ. ಜನರ ಗೋಳಿನ ಚರ್ಚೆಯೂ ಅಂತಹ ಅನಾಹುತವನ್ನೆ ಮಾಡಬಹುದು. ಇನ್ನ ದೊರೆಸ್ವಾಮಿ ವಿಷಯ ಪಾರ್ಟಿಯಲ್ಲಿ ಅನಾಗರಿಕರ ಅಪೂರ್ವ ಗುಣಗಳನ್ನ ಅನಾವರಣಮಾಡಬಹುದು. ಸಂವಿಧಾನಕ್ಕೆ ಅವಕಾಶ ಕೊಟ್ಟರೆ ಹಾಗಾಗುವುದಿಲ್ಲ. ಚಡ್ಡಿಗಳಿಗೂ ಸಂವಿಧಾನದ ಬಗ್ಗೆ ಗೌರವವಿದೆ ಎಂಬುದು ಜಗಜ್ಜಾಹೀರಾಗುತ್ತದೆ. ಇಂತಹ ಯೋಚನೆಯ ಕಾಗೇರಿ ಹೊಗಳುಭಟ್ಟರ ಸಂತತಿಯವರಾದ ರಮೇಶಕುಮಾರರಿಂದ ಹಿಗಾಮುಗ್ಗ ಹೊಗಳಿಸಿಕೊಂಡು ನಿರ್ಗಮಿಸಿದರಂತಲ್ಲಾ, ಥೂತ್ತೇರಿ.

ಇನ್ನ ವಿಧಾನಪರಿಷತ್‍ನಲ್ಲಿ ಯಾತಕ್ಕೂ ಲಾಯಕ್ ಅಲ್ಲದ ಕೋಟ ಶ್ರೀನಿವಾಸ ಪೂಜಾರಿ ಎಂಬ ಸಭಾನಾಯಕ ಕರ್ನಾಟಕದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿ ಇಲ್ಲ ಎಂದು ಬಿಟ್ಟಿದ್ದಾನಲ್ಲ. ಈ ಅಜ್ಞಾನಿಗೆ ಬಹುಶ ದೃಷ್ಟಿದೋಷವಿರಬಹುದು ಇಲ್ಲವೇ ಕೂಪಮಂಡೂಕನಿರಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಬಿ.ಜೆ.ಪಿ.ಯ ಭಯಂಕರ ಸುಳ್ಳುಗಾರನಿರಬಹುದು. ಈತನನ್ನ ಹಿಡಿದುಕೊಂಡು ಹೋಗಿ ಅಸ್ಪøಶ್ಯತೆ ಭೀಕರವಾಗಿರುವ ನಮ್ಮ ಹಳ್ಳಿಗಳ ಆಚರಣೆ ತೋರಿಸಬೇಕು. ಅಲ್ಲಿ ಹೊಲೆಯರವನು ಇನ್ನೂ ಅಮ್ಮನಗುಡಿ ಮುಂದೆ ತಮಟೆ ಬಡಿಯುತ್ತಿದ್ದಾನೆ. ಮಾದಿಗರವನು ಕೊಂಡ ಹಾಕುತ್ತಿದ್ದಾನೆ. ಮಡಿವಾಳರವನ್ನು ನೆಡೆಮಡಿಹಾಸಿ ಪತ್ತು ಹಿಡಿಯುತ್ತಿದ್ದಾನೆ. ಕ್ಷೌರಿಕರವನು ವಾಲಗ ಊದುತ್ತಿದ್ದಾನೆ ಇವರೆಲ್ಲಾ ತಮ್ಮತಮ್ಮ ಸ್ಥಾನದಲ್ಲಿ ತಮ್ಮ ಕರ್ತವ್ಯ ಅಂದರೆ ಭಕ್ತಿ ಅರ್ಪಿಸುತ್ತಿದ್ದಾರೆ. ಇನ್ನ ಹೊಟೇಲುಗಳಿಗೆ ಪ್ಲಾಸ್ಟಿಕ್ ಲೋಟ ಬಂದಿರುವುದರಿಂದ ಅದರ ಸಮಸ್ಯೆ ಸಾಲ್ವು ಆಗಿದೆ. ಇಂತಹ ಕೇರಿಗಳಿಗೆ ಈ ಪೂಜಾರಿ ಹೋಗಿ ನೋಡಬೇಕು. ಅವನು ಅಲ್ಲಿಗೆಲ್ಲ ಹೋಗುವುದಿಲ್ಲ. ಸುಳ್ಳುಗಾರ ಜನಕ್ಕೆ ಪ್ರತ್ಯಕ್ಷದ ಅಗತ್ಯವಿಲ್ಲವಂತಲ್ಲಾ, ಥೂತ್ತೇರಿ.

ಪ್ರಭಾಕರ ಕೋರೆಗೆ ಕೆಂಗಲ್ ಹನುಮಂತಯ್ಯ ಸಂಸ್ಕøತಿ ದತ್ತಿ ಪ್ರಶಸ್ತಿ ಪ್ರಾಪ್ತವಾಗಿದೆ. ಕೋರೆಗೆ ಅಭಿನಂದನೆ, ಆದರೆ ಅದನ್ನ ಕೊಡಮಾಡಿದ ಲೀಡರ್ ಬಗ್ಗೆ ಅನುಮಾನ ಎದ್ದಿವೆಯಲ್ಲಾ. ಏಕೆಂದರೆ, ಈ ಪ್ರಶಸ್ತಿಯನ್ನ ಕನ್ನಡ ಸಾಹಿತ್ಯ ಪರಿಷತ್ ಕೊಡುತ್ತದೆ. ಅದರ ಅಧ್ಯಕ್ಷ ಮನುಬಳಿಗಾರ. ಈತ ಪ್ರಶಸ್ತಿ ಕೊಡುವ ಮೊದಲೇ ಸದಸ್ಯರಿಗೆ ಸೂಚನೆ ಕೊಡುವ ಗಿರಾಕಿ. ಆದ್ದರಿಂದ ಕೆಂಗಲ್ ಮತ್ತು ಕೋರೆಗೆ ಜೊತೆಯಾಗಿಯೇ ಅವಮಾನವಾಗಿದೆ. ಕೆಂಗಲ್ ಕರ್ನಾಟಕ ಕಂಡ ಅಪ್ರತಿಮ ನಾಯಕ. ವಿಧಾನಸೌಧ ಕಟ್ಟಿದವರು. ನೆಹರೂಗೆ ಹೆದರದ ಧೀರ. ಇಂದಿರಾಗಾಂಧಿ ಎದುರು ಪಾರ್ಟಿ ಕಟ್ಟಿದವರು. ಭಗವಧ್ಗೀತೆ ಸಾಮಾನ್ಯನೂ ಓದಲೆಂದು ಮುದ್ರಿಸಿ ಹಂಚಿದವರು. ಕನ್ನಡದ ಸಂಸ್ಕøತಿ ಮತ್ತು ರಾಜಕಾರಣದ ಪ್ರತಿನಿಧಿ ಅನ್ನಬಹುದು. ಇಂತಹ ಮಹಾನಾಯಕನ ಹೆಸರಿನ ಪ್ರಶಸ್ತಿ ಕೋರೆಗೆ ಅನವುನ್ಸಾದಾಗ ಬಹುಶ: ಕೋರೆಗೆ ಅಚ್ಚರಿಯಾಗಿರಬಹುದು. ಕೊಟ್ಟವರಾರು ಎಂದು ಗೊತ್ತಾದಾಗ ಈಸಿಕೊಳ್ಳಲು ಸಂಕೋಚವೂ ಆಗಿರಬಹುದು. ಅದಕ್ಕಾಗಿ ಪ್ರಶಸ್ತಿ ಹಣವಾದ 25 ಸಾವಿರವನ್ನು ನೀನೇ ಇಟ್ಟಗಳೊ ಬಳಿಗಾರ ಅನ್ನುವ ಸಂಭವವಿದೆಯೆಂದು ಸಣ್ಣ ಸಂಸ್ಕøತಿ ಜನ ಆಡಿಕೊಳ್ಳುತ್ತಿದ್ದಾರಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...