Homeಮುಖಪುಟಮಹಾರಾಷ್ಟ್ರ ಬಿಜೆಪಿ ಬಿಕ್ಕಟ್ಟು: ಫಡ್ನವೀಸ್ ವಿರುದ್ಧ ಸಿಡಿದ ಪಂಕಜಾ ಮುಂಡೆಗೆ ಖಡ್ಸೆ, ಮೆಹ್ತಾ ಬಲ!

ಮಹಾರಾಷ್ಟ್ರ ಬಿಜೆಪಿ ಬಿಕ್ಕಟ್ಟು: ಫಡ್ನವೀಸ್ ವಿರುದ್ಧ ಸಿಡಿದ ಪಂಕಜಾ ಮುಂಡೆಗೆ ಖಡ್ಸೆ, ಮೆಹ್ತಾ ಬಲ!

- Advertisement -
- Advertisement -

ಸರ್ಕಾರ ರಚಿಸುವ ವಿಫಲ ಯತ್ನಕ್ಕೆ ಮುಂದಾಗಿ ಕೈಸುಟ್ಟುಕೊಂಡ ನಂತರ ಮಹಾರಾಷ್ಟ್ರ ಬಿಜೆಪಿಯೊಳಗೆ ಎಲ್ಲವೂ ನೆಟ್ಟಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸದೆ, ದೇವೇಂದ್ರ ಫಡ್ನವೀಸ್‌ರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಯತ್ನಿಸಿದ ಹೈಕಮಾಂಡ್‌ನ ಆತುರದ ಕ್ರಮದ ವಿರುದ್ಧ ಈಗ ಒಬ್ಬೊಬ್ಬರೇ ಸಿಡಿದೇಳುತ್ತಿದ್ದಾರೆ. ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ದಿವಂಗತ ಗೋಪಿನಾಥ ಮುಂಡೆಯವರ ಜನ್ಮದಿನದ ಪ್ರಯುಕ್ತ ಭೀಡ್‌ನಲ್ಲಿ ಅವರ ಮಗಳು ಪಂಕಜಾ ಮುಂಡೆ ಇಂದು ಆಯೋಜಿಸಿದ್ದ ರ್‍ಯಾಲಿ ಭಿನ್ನಮತದ ಮತ್ತೊಂದು ಮಜಲಿಗೆ ಸಾಕ್ಷಿಯಾಯಿತು.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದ ಭದ್ರ ಕೋಟೆಯಾಗಿದ್ದ ಪಾರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲನುಭವಿಸಿದ ನಂತರ ಪಂಕಜಾ ಮುಂಡೆ ಬಹಿರಂಗವಾಗಿಯೇ ಪಕ್ಷದ ವಿರುದ್ಧ ಕಿಡಿಕಾರಿದ್ದರು. ತಮ್ಮ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳ ಬ್ಯಾನರ್‌ಗಳಲ್ಲಿ ಬಿಜೆಪಿ ಚಿಹ್ನೆಯನ್ನು ತೆರವುಗೊಳಿಸಿ ಪಕ್ಷ ತೊರೆಯುವರೇ ಎಂಬ ಅನುಮಾನ ಮೂಡಿಸಿದ್ದರು.

ತನ್ನ ಸೋಲಿಗೆ ಸ್ವಪಕ್ಷೀಯರ, ಮುಖ್ಯವಾಗಿ ದೇವೇಂದ್ರ ಫಡ್ನವೀಸ್‌ರ ಚಿತಾವಣೆಯೇ ಕಾರಣ ಎನ್ನುವ ಬಲವಾದ ಸಂಶಯ ಪಂಕಜಾ ಅವರಿಗಿದೆ. ಹಿಂದಿನ ಫಡ್ನವೀಸ್ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ, ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಪಂಕಜಾ ತಮ್ಮ ಕುಟುಂಬದ ಪ್ರಭಾವ ಬಳಸಿಕೊಂಡು ಮುಂದಿನ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದರಿಂದಾಗಿಯೇ ತನಗೆ ಆಕೆ ಪ್ರತಿಸ್ಪರ್ಧಿಯಾಗದಿರಲೆಂದು ಫಡ್ನವೀಸ್, ಪಂಕಜಾರನ್ನು ಸೋಲಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದರಿಂದ ಸಿಟ್ಟಿಗೆದ್ದಿರುವ ಪಂಕಜಾ ಫಲಿತಾಂಶ ಬಂದ ಕ್ಷಣದಿಂದಲೂ ಪಕ್ಷ ತೊರೆಯುವ ಸೂಚನೆಗಳನ್ನು ನೀಡುತ್ತಲೇ ಬಂದಿದ್ದರು. ಪ್ರತಿವರ್ಷದಂತೆ ಈ ವರ್ಷವೂ ತನ್ನ ತಂದೆಯ ಜನ್ಮದಿನವಾದ ಡಿಸೆಂಬರ್ ೧೨ರಂದು ನಡೆಸುವ ರ್‍ಯಾಲಿಯಲ್ಲಿ ತನ್ನ ಮುಂದಿನ ನಿರ್ಧಾರ ಘೋಷಿಸುವುದಾಗಿ ಹೇಳಿದ್ದರು. ಹಾಗಾಗಿ ಇವತ್ತಿನ ರ್‍ಯಾಲಿಗೆ ವಿಶೇಷ ಮಹತ್ವ ಬಂದಿತ್ತು.

ರ್‍ಯಾಲಿಯಲ್ಲಿ ಪಕ್ಷ ತೊರೆಯುವ ಬಗ್ಗೆ ಸ್ಪಷ್ಟವಾಗಿ ಘೋಷಿಸದೆ ಹೋದರು, ತಾನು ಇನ್ಮುಂದೆ ಬಿಜೆಪಿ ಕೋರ್ ಕಮಿಟಿಯ ಸದಸ್ಯೆಯಾಗಿ ಉಳಿದಿಲ್ಲ ಎನ್ನುವ ಮೂಲಕ ಪಕ್ಷದಿಂದ ಈಗ ಮೊದಲಿಗಿಂತ ದೂರ ಸರಿದಿದ್ದೇನೆ ಎಂಬ ಸುಳಿವು ನೀಡಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಒಳಗೊಂಡಂತೆ ರಾಜ್ಯದ ಘಟಾನುಘಟಿ ನಾಯಕರು ಭಾಗವಹಿಸಿದ್ದ ರ್‍ಯಾಲಿಯ ವೇದಿಕೆಯಲ್ಲಿ ಪರೋಕ್ಷವಾಗಿ ದೇವೇಂದ್ರ ಫಡ್ನವೀಸ್‌ರನ್ನು ಪಂಕಜಾ ತರಾಟೆಗೆ ತೆಗೆದುಕೊಂಡದ್ದು ವಿಶೇಷವಾಗಿತ್ತು.

ಏಕನಾಥ್ ಖಡ್ಸೆ

ಕುಮಾರಿ ಮುಂಡೆ ತರಹ ಬೇರೆಬೇರೆ ಕಾರಣಗಳಿಗೆ ಫಡ್ನವೀಸ್ ನಾಯಕತ್ವದ ಮೇಲೆ ಮುನಿಸಿಕೊಂಡಿರುವ ಏಕನಾಥ್ ಖಡ್ಸೆ ಮತ್ತು ಪ್ರಕಾಶ್ ಮೆಹ್ತಾ ಕೂಡಾ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪಂಕಜಾ ಮುಂಡೆಯ ಜೊತೆಗೆ ಬಂಡಾಯಕ್ಕೆ ಕೈಜೋಡಿಸಿರುವ ಸೂಚನೆ ನೀಡಿರೋದು ಬಿಜೆಪಿಯ ಭಿನ್ನಮತದ ಬೇಗುದಿಯನ್ನು ಹೆಚ್ಚಿಸಿದೆ.

ಪ್ರಕಾಶ್ ಮೆಹ್ತಾ

“ಒಂದು ಚುನಾವಣೆಯ ಸೋಲಿನ ಬಗ್ಗೆ ನಾನು ಅಷ್ಟಾಗಿ ತಲೆಕೆಡಿಸಿಕೊಳ್ಳುವವಳಲ್ಲ. ಆದರೆ ಪರಿಸ್ಥಿತಿಗಳು ಹೇಗಿವೆಯೆಂದರೆ ನನ್ನನ್ನು ಹತಾಶೆಗೆ ತಳ್ಳುತ್ತಿವೆ. ಆದರೆ ನಾನು ಖಂಡಿತ ಪಕ್ಷ ತೊರೆಯುವುದಿಲ್ಲ. ಬೇಕಾದರೆ ಪಕ್ಷಕ್ಕೆ ನಾನು ಬೇಡವಾಗಿದ್ದರೆ, ಪಕ್ಷವೇ ನಿರ್ಧಾರ ತೆಗೆದುಕೊಳ್ಳಲಿ. ಕೆಲವರು ನನ್ನನ್ನು ‘ಮಹಾತ್ವಾಕಾಂಕ್ಷಿ ಹೆಣ್ಣು’ ಅಂತ ಬ್ರಾಂಡ್ ಮಾಡಿದಾರೆ. ನನ್ನ ವಿರುದ್ಧ ಪಕ್ಷಕ್ಕೆ ಕಿವಿಚುಚ್ಚಿದ್ದಾರೆ. ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಂತ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಯಾವತ್ತೂ ನಾನು ಆ ಮಾತು ಹೇಳಿದವಳಲ್ಲ. ಆದ್ರೆ ನನ್ನದೊಂದು ಪ್ರಶ್ನೆ ಇದೆ. ಒಬ್ಬ ವ್ಯಕ್ತಿ ಮಹತ್ವಾಕಾಂಕ್ಷಿಯಾಗುವುದೇ ತಪ್ಪಾ? ರಾಜ್ಯವನ್ನು ಒಬ್ಬ ಮಹಿಳೆ ಮುನ್ನಡೆಸಬಾರದಾ?” ಎಂದು ರ್‍ಯಾಲಿಯಲ್ಲಿ ಪಂಕಜಾ ಕಿಡಿಕಾರಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಅವರು ಪಾರ್ಲಿ ಕ್ಷೇತ್ರದಲ್ಲಿ ಎನ್‌ಸಿಪಿಯಿಂದ ಸ್ಪರ್ಧಿಸಿದ್ದ ತಮ್ಮ ಸೋದರ ಸಂಬಂಧಿಯಾದ ಧನಂಜಯ್ ಮುಂಡೆ ವಿರುದ್ಧ ಸೋಲನುಭವಿಸಿದ್ದರು. ತನ್ನ ಭಾಷಣದಲ್ಲಿ ಈ ಸೋಲಿಗೆ ನಡೆದಿದ್ದ ತಂತ್ರಗಾರಿಕೆಯ ಪ್ರಚೋದನೆಗಳನ್ನು ಉಲ್ಲೇಖಿಸಿದ್ದ ಪಂಕಜಾ ಮುಂಡೆ ನಮ್ಮದೇ ಕೆಲ ನಾಯಕರಿಗೆ (ದೇವೇಂದ್ರ ಫಡ್ನವೀಸ್‌ರನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ) ನಾನು ಗೆಲ್ಲುವುದು ಇಷ್ಟವಿರಲಿಲ್ಲ. ಹಾಗಾಗಿ ಸೋಲಬೇಕಾಯಿತು ಎಂದಿದ್ದಾರೆ.

“ನಾನು ಪಕ್ಷ ತ್ಯಜಿಸುವುದಿಲ್ಲ. ಆದರೆ 2020ರ ಜನವರಿ 27ರಂದು ಔರಂಗಾಬಾದ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ” ಎಂದು ಸಾರುವ ಮೂಲಕ, ಪಕ್ಷ ತೊರೆದು ತನ್ನನ್ನು ಸೋಲಿಸಿದವರಿಗೆ ಹಾದಿ ಸುಲಭ ಮಾಡಿಕೊಡುವುದಿಲ್ಲ, ಬದಲಿಗೆ ಪಕ್ಷದೊಳಗೆ ಬಂಡಾಯದ ತಿದಿ ಊದುತ್ತೇನೆ ಎಂಬ ಸುಳಿವು ನೀಡಿದ್ದಾರೆ. ಇಂದಿನ ರ್‍ಯಾಲಿಯಲ್ಲಿ ಏಕನಾಥ್ ಖಡ್ಸೆ ಮತ್ತು ಪ್ರಕಾಶ್ ಮೆಹ್ತಾರಂತಹ ಅತೃಪ್ತರ ಉಪಸ್ಥಿತಿ ಅದನ್ನು ಒತ್ತಿಹೇಳುತ್ತಿದೆ.
ಅಂದಹಾಗೆ, ಪಂಕಜಾ ಮುಂಡೆಯ ತಂಗಿ ಪ್ರೀತಮ್ ಮುಂಡೆ ಭೀಡ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ. ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ದಿವಂಗತ ಪ್ರಮೋದ್ ಮಹಾಜನ್‌ರ ಸೋದರ ಸೊಸೆಯೂ ಹೌದು. ಹಾಗಾಗಿ ಮಹಾರಾಷ್ಟ್ರ ರಾಜಕಾರಣದಲ್ಲಿ ಪಂಕಜಾ ಮುಂಡೆ ಕುಟುಂಬಕ್ಕೆ ರಾಜಕೀಯ ಪ್ರಭಾವವಿದೆ. ಪಂಕಜಾ ಮುಂಡೆ ಬಿಜೆಪಿ ತೊರೆದು ಶಿವಸೇನೆ ಸೇರಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...