Homeಮುಖಪುಟಎರಡು ಪ್ರೆಸ್ ಮೀಟ್: ಹೊಳೆದ ರಾಹುಲ್, ಕನಲಿದ ಮೋದಿ!

ಎರಡು ಪ್ರೆಸ್ ಮೀಟ್: ಹೊಳೆದ ರಾಹುಲ್, ಕನಲಿದ ಮೋದಿ!

ಸುಲಲಿತ ಮಾತು, ವಿನಯವಂತಿಕೆ, ವಾಸ್ತವದ ಅರಿವು, ಲಘುಹಾಸ್ಯ: 'ಲೀಡರ್ ಮಟಿರಿಯಲ್' ಹಾದಿಯಲ್ಲಿ ರಾಹುಲ್...

- Advertisement -
- Advertisement -

| ನಾನುಗೌರಿ ಡೆಸ್ಕ್ |

ಶುಕ್ರವಾರ ಸಾಯಂಕಾಲ ನಡೆದ ಎರಡು ಪತ್ರಿಕಾಗೋಷ್ಠಿಗಳ ಸ್ವರೂಪ ತದ್ವಿರುದ್ಧವಾಗಿದ್ದವು. ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಕುಳಿತ ದೇಶದ ಪ್ರಧಾನಿಯ ಮುಖದಲ್ಲಿ ಮಂದಹಾಸವಿರಲಿಲ್ಲ, ಇನ್ನೊಂದು ಪ್ರೆಸ್‍ಮೀಟ್‍ನಲ್ಲಿ ರಾಹುಲ್ ಗಾಂಧಿ ಹಸನ್ಮುಖಿಯಾಗಿದ್ದರು. ಪ್ರಧಾನಿ ಯಾವ ಪ್ರಶ್ನೆಗೂ ಉತ್ತರಿಸದೇ ಸೊಕ್ಕೆ ಪ್ರದರ್ಶಿಸಿದರೆ, ರಾಹುಲ್ ಎಲ್ಲ ಪ್ರಶ್ನೆಗಳಿಗೂ ಸರಳವಾಗಿ, ವಿನಯವಂತಿಕೆಯಿಂದ ಉತ್ತರಿಸಿದರು.

ಸುಲಲಿತ ಮಾತಿನ ಓಘ, ಅಲ್ಲಲ್ಲಿ ಲಘು ಹಾಸ್ಯ ಮತ್ತು ದೇಶದ ಪ್ರಚಲತ ಸಮಸ್ಯೆಗಳ ಬಗೆಗೆನ ಅರಿವು… ರಾಹುಲ್ ಪಳಗಿದ್ದಾರೆ. ನಿಜವಾದ ‘ಲೀಡರ್ ಮಟಿರಿಯಲ್’ ಆಗುವ ಹಾದಿಯಲ್ಲಿ ಸದೃಡ ಹೆಜ್ಜೆ ಹಾಕುತ್ತಿದ್ದಾರೆ ಎಂಬುದಕ್ಕೆ ರಾಹುಲ್ ನಡೆಸಿದ ಪತ್ರಿಕಾಗೋಷ್ಠಿ ನಿದರ್ಶನವಾಗಿತ್ತು. ರಾಹುಲ್ ಮಾತಾಡಿದ್ದನ್ನು ಇಲ್ಲಿ ಸಾರಾಂಶೀಕರಿಸಿ, ಅವರದೇ ಮಾತಿನ ಲಹರಿಯಲ್ಲಿ ಕನ್ನಡದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇವೆ…..

‘ಮೊದಲಿಗೆ ಮಾಧ್ಯಮದ ಎಲ್ಲರಿಗೂ ಧನ್ಯವಾದಗಳು. ಅದಕ್ಕಿಂತ ಮುಖ್ಯವಾಗಿ ಬರಲಿರುವ ದಿನಗಳಲ್ಲಿ ಈ ದೇಶ ಯಾವ ದಾರಿಯಲ್ಲಿ ಸಾಗಬೇಕೆಂದು ಸೂಚಿಸುವ ಈ ದೇಶದ ಜನರಿಗೆ ಧನ್ಯಾವಾದಗಳು… ನಮ್ಮ ಕಾರ್ಯಕರ್ತರು, ಬೂತ್ ಕಮಿಟಿ ಸದಸ್ಯರು, ನಮ್ಮ ಅಭ್ಯರ್ಥಿಗಳು, ಎಲ್ಲ ನಾಯಕರಿಗೂ ಧನ್ಯವಾದಗಳು….

ಪ್ರಶ್ನೆ ಕೇಳಲು ಶುರು ಮಾಡಿ…

(ಪ್ರೆಸ್: ನೀವು ಪದೇ ಪದೇ ಮೋದಿಯವರು ಉತ್ತರ ನೀಡಲ್ಲ, ಪ್ರೆಸ್‍ನಿಂದ ದೂರ ಅಂತಿದ್ದಿರಿ. ಈಗ ಅವರು ಪ್ರೆಸ್ ಮೀಟ್ ಮಾಡ್ತಾ ಇದ್ದಾರೆ)

ಹಾಂ ಹಾಂ ಹಾಂ…. ನಾನೂ ಈ ವಿಷಯ ಕೇಳಿದೆ… ಬಡಾ ಕಾಮ್! ಅಂತೂ ಈ ದೇಶದ ಪ್ರಧಾನಿ ಮೊದಲ ಹೆಜ್ಜೆ ಇಟ್ಟರಲ್ಲ. ಗ್ರೇಟ್… ನಮ್ಮ ರಣದೀಪ್ (ಸುರ್ಜೇವಾಲ) ಹೇಳ್ತಾ ಇದ್ದರು: ಅಮಿತ್ ಶಾ ಜೊತೆ ಪ್ರಧಾನಿ ಪ್ರೆಸ್‍ಮೀಟ್‍ಗೆ ಹೋಗಿದ್ದಾರೆಂದು… ವಾವ್ ಎಂತಹ ಅಸಾಂಪ್ರದಾಯಿಕ ನಡೆ.. ಈ ದೇಶದ ಪ್ರಧಾನಿ ಮೊದಲ ಬಾರಿಗೆ ಪಾರ್ಟಿ ಅಧ್ಯಕ್ಷರ ಜೊತೆಗಾರರಾಗಿ ಪ್ರೆಸ್ ಮೀಟ್ ಮಾಡ್ತಾ ಇದ್ದಾರೆ…ನೋಡೋಣ ಅಲ್ಲಿ ಉತ್ತರ ನೀಡ್ತಾರಾ ಅಂತ.. ಮತ್ತೆ ರಣದೀಪ್ ಹೇಳಿದರು ಅಲ್ಲಿ ಬೇಗನೇ ಎಲ್ಲ ಬಾಗಿಲು ಮುಚ್ಚಿ ಬಂದೋಬಸ್ತ್ ಮಾಡಿದ್ದರು ಅಂತಾ… ನಮ್ಮ ಕಡೆಯಿಂದ ಕೆಲವು ಪ್ರಶ್ನೆಗಳನ್ನು ಕೇಳಲು ಒಂದಿಬ್ಬರು ಜರ್ನಲಿಸ್ಟ್‍ಗೆ ಹೇಳಿದ್ದೆವು. ಆದರೆ ಬಾಗಿಲು ತೆಗೆಯದೇ ಇದ್ದುದರಿಂದ ವಾಪಸ್ ಬಂದರು…

ಪ್ರಧಾನಿಯ ಪ್ರೆಸ್ ಮೀಟ್ ಲೈವ್ ಇರಬೇಕಿತ್ತು. ನಾನೂ ಒಂಡೆರಡು ಪ್ರಶ್ನೆ ಕೇಳುವುದಿತ್ತು. ರಫೇಲ್ ಡೀಲ್ ಬಗ್ಗೆ ನನ್ನ ಜೊತೆ ಚರ್ಚಿಸಲು ನೀವೇಕೆ ಹಿಂಜರಿದಿರಿ? ನಾನು ಕೇಳಬೇಕಿತ್ತು: ಈ ಹಿಂದೂಸ್ತಾನದ ಜನರ ಬೆವರಿನ 30 ಸಾವಿರ ಕೋಟಿ ರೂ.ಗಳನ್ನು ಅಂಬಾನಿಗೇಕೆ ನೀಡಿದಿರಿ? ಈ ಚರ್ಚೆ ಮಾಡಲು ನೀವು ಹೆದರಿಬಿಟ್ಟಿರಲ್ಲ?

(ಪ್ರೆಸ್: ಸರ್ಕಾರ ರಚನೆ ಕುರಿತು…ಈ ಪ್ರಶ್ನೆ ವಿವಿಧ ರೂಪದಲ್ಲಿ ಮತ್ತೆ ಮತ್ತೆ ಬಂತು)

ನಾನು ಮೊನ್ನೇನೆ ಹೇಳಿದ್ದೀನಿ..ಆದರೂ ಅದೇ ಪ್ರಶ್ನೆಯನ್ನು ಬೇರೆ ಬೇರೆ ರೂಪದಲ್ಲಿ ಮತ್ತೆ ವಾಪಸ್ ಕೇಳ್ತಾ ಇದ್ದೀರಿ. ಮೇ 23ಕ್ಕೆ ಕಾಯೋಣ… ನಿಮಗ್ಯಾಕೆ ಇಷ್ಟು ಆತುರ? ಜನರ ನಿರ್ಧಾರ ನೋಡಿದ ನಂತರವಷ್ಟೇ ಆ ಬಗ್ಗೆ ನಾನು ಮಾತಾಡುವೆ… ಜನಾದೇಶಕ್ಕೆ ನಾನು ಗೌರವ ಕೊಡುವೆ….

ನೀವು ನನಗೆ ಎಂತಹ ಕಠಿಣ ಪ್ರಶ್ನೆ ಕೇಳುತ್ತ ಬಂದಿದ್ದೀರಿ. ನ್ಯಾಯ್ ಯೋಜನೆಗೆ ದುಡ್ಡನ್ನು ಎಲ್ಲಿಂದ ತರುತ್ತೀರಿ ಇತ್ಯಾದಿ… ಆದರೆ ಮೋದೀಜಿಗೆ, ನೀವು ಮಾವಿನ ಹಣ್ಣು ಹೇಗೆ ತಿಂತೀರಿ, ನೀವು ಕುರ್ತಾ ತೋಳನ್ನು ಕಟ್ ಮಾಡ್ತಿದ್ದಿರಂತೆ, ಡ್ರೆಸ್ ಹೇಗೆ ಹಾಕಿಕೊಳ್ಳುತ್ತೀರಿ, ಈ ಕುರ್ತಾ ಎಲ್ಲಿಂದ ತಂದೀರಿ?
(ಮಂದಹಾಸದಲ್ಲಿ) ಇಂತಹ ಪ್ರಶ್ನೆ ಕೇಳ್ತಿರಪ್ಪ…

(ಪ್ರೆಸ್: ಸರ್ ಅದು ಪ್ರೆಸ್‍ನವರ ಸಂದರ್ಶನ ಅಲ್ಲ ಎಂದು ತಮಾಷೆ)

ಹಾ ಗೊತ್ತು… ಮೊನ್ನೆ ಪ್ರೆಸ್‍ನವರೇ ಬಾಲಾಕೋಟ್ ಬಗ್ಗೆ ಕೇಳಿದರಲ್ಲ? ಅದಕ್ಕೆ ಮೋದೀಜಿ, ಮಳೆ ಬರ್ತಾ ಇದೆ ಅಂತಾ ಹವಾಮಾನ ವರದಿ ಹೇಳೋಕೆ ಶುರು ಮಾಡಿದಾಗ ನನಗೆ ಗಾಬರಿ ಆಯ್ತು… ಅವರು ಏರ್‍ಫೋರ್ಸ್‍ನ ಅಧಿಕಾರಿಗಳಿಗೆ ಹೇಳಿದರಂತೆ: ಮೋಡ ಇವೆ, ರೇಡಾರ್‍ನಿಂದ ತಪ್ಪಿಸಿಕೊಬಹುದು, ದಾಳಿ ಮಾಡಿಬಿಡಿ…(ಬಲಗೈಯಿಂದ 4-5 ಸಲ ಮೇಜು ಕುಟ್ಟುತ್ತ) ಪ್ರೈಮ್ ಮಿನಿಸ್ಟರ್ ಎಕ್ಸ್‍ಲೆಂಟ್! ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ ಎಕ್ಸ್‍ಲೆಂಟ್…..

(ಪ್ರೆಸ್: ವೈಯಕ್ತಿಕ ಟೀಕೆ ಕುರಿತಂತೆ)

ನೋಡಿ, ನನಗೆ ಮೋದಿಯವರ ಬಗ್ಗೆ, ಅವರ ತಂದೆ ತಾಯಿಯವರ ಬಗ್ಗೆ ಗೌರವವಿದೆ. ಅವರ ತಂದೆ ತಾಯಿ ರಾಜಕೀಯದಲ್ಲಿ ಇಲ್ಲ, ಆದರೆ ಅವರೂ ತಪ್ಪು ಮಾಡಿದ್ದರೆ, ಅದನ್ನು ನಾನು ಪ್ರಶ್ನಿಸಲು ಹೋಗುವುದಿಲ್ಲ… ನನ್ನ ಬಗ್ಗೆ, ನನ್ನ ಪರಿವಾರದ ಬಗ್ಗೆ, ನನ್ನ ತಂದೆ-ತಾಯಿ ಬಗ್ಗೆ ಟೀಕಿಸಿವುದು, ಕೆಟ್ಟದಾಗಿ ಮಾತಾಡುವುದು ಮೋದೀಜಿಯವರಿಗೆ ಬಿಟ್ಟಿದ್ದು… ಅವರು ಎಷ್ಟಾದರೂ ಟೀಕಿಸಲಿ…

(ಪ್ರೆಸ್: ವಿಪಕ್ಷವಾಗಿ ಕಾಂಗ್ರೆಸ್ ಪಾತ್ರದ ಕುರಿತು)

2014ರ ಸಂಸತ್‍ನಲ್ಲಿ ನಮಗೆ ತುಂಬ ಕಡಿಮೆ ಸೀಟು ಇದ್ದವು. ಆದರೆ ನಾನು ಖುಷಿಯಿಂದ, ಗರ್ವದಿಂದ ಹೇಳುತ್ತೇನೆ: ವಿಪಕ್ಷವಾಗಿ ಕಾಂಗ್ರೆಸ್ ಅತ್ಯುತ್ತಮ ಅಂದರೆ ‘ಎ’ ಗ್ರೇಡ್ ಮಟ್ಟದ ರಚನಾತ್ಮಕ ವಿರೋಧವನ್ನು ಮಾಡಿದೆ. ಮೋದೀಜಿ ತಪ್ಪಿಸಿಕೊಳ್ಳದಂತೆ ನಾವು ಶೇ 90ರಷ್ಟು ಬಾಗಿಲುಗಳನ್ನು ಮುಚ್ಚಿದ್ದೇವೆ….
ಮೋದಿಯವರಿಗೆ ದೊಡ್ಡ ಅವಕಾಶಗಳಿದ್ವು.. ಅವರಿಂದ ನಾವು ಉತ್ತಮ ಕೆಲಸ ನಿರೀಕ್ಷಿದ್ದೆವು.. ಜನರ ಸಮಸ್ಯೆಗಳನ್ನು ಅವರು ಅರ್ಥ ಮಾಡಿಕೊಳ್ಳಲೇ ಇಲ್ಲ. ಅವರು ಯಾವ ಪ್ರಪಂಚದಲ್ಲಿ ಇದ್ದಾರೋ? ಜನರು ಅವರನ್ನು ಪ್ರಧಾನಿ ಪಟ್ಟದಲ್ಲಿ ಕೂಡಿಸಿದ್ದು ಅವರ ಬೋಧನೆಗಳನ್ನು ಕೇಳುತ್ತ ಕೂಡಲಲ್ಲ. ಅವರು ಸಮಸ್ಯೆ ಬಗೆಹರಿಸಲು.. ನಿರುದ್ಯೋಗ, , ರೈತರ ಬಿಕ್ಕಟ್ಟು, ಆರ್ಥಿಕತೆಯ ಕುಸಿತ ಇದ್ಯಾವುದಕ್ಕೂ ಅವರು ಸ್ಪಂದಿಸಲೇ ಇಲ್ಲ… ನೋಟ್‍ಬ್ಯಾನ್, ಗಬ್ಬರ್‍ಸಿಂಗ್ ಟ್ಯಾಕ್ಸ್ ಮೂಲಕ ಅರ್ಥವ್ಯವಸ್ಥೆಯನ್ನು ಹಾಳು ಮಾಡಿದರು…

ನಾವು ಈ ಎಲ್ಲ ಸಮಸ್ಯೆ ಇಟ್ಟುಕೊಂಡು ದೇಶಾದ್ಯಂತ ಹೋರಾಟ ಮಾಡಿದ್ದೇವೆ. ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸಘಡಗಳಲ್ಲಿ ಅದರ ಪರಿಣಾಮ ನೀವು ನೋಡಿದ್ದೀರಿ.. ಈ ಚುನಾವಣೆಯಲ್ಲಿ ಮೇಲೆ ಹೇಳಿದ ಸಮಸ್ಯೆಗಳನ್ನು ಇಟ್ಟುಕೊಂಡೇ ನಾವು ಪ್ರಚಾರ ಮಾಡಿದ್ದೇವೆ…

ಇದನ್ನು ಓದಿರಿ ನರೇಂದ್ರ ಮೋದಿಯವರ ಮೀಟ್ ದಿ ಪ್ರೆಸ್ಸೂ ಕಾರ್ಟೂನುಗಳು

ಪ್ರೆಸ್: ಉತ್ತರ ಪ್ರದೇಶದಲ್ಲಿ ಮೈತ್ರಿ ಆಗದೇ ಇದ್ದುದರ ಕುರಿತು)

ಕೇಳಿ ಇಲ್ಲಿ. ಈ ಸಲ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಸ್ಪೇಸ್‍ಗಾಗಿ ಹುಡುಕಾಡಿಲ್ಲ. ನಮ್ಮ ಮೊದಲ ಉದ್ದೇಶ ಮೋದಿಯನ್ನು ಸೋಲಿಸುವುದು… ಕಾಂಗ್ರೆಸ್ ನೀತಿಗಳನ್ನು ಜನರಿಗೆ ತಲುಪಿಸುವುದು… ಮುಂದಿನದು ಅಸೆಂಬ್ಲಿ ಚುನಾವಣೆ…

ಎಸ್‍ಪಿ-ಬಿಎಸ್‍ಪಿ ಮೈತ್ರಿಯನ್ನು ನಾವು ಸ್ವಾಗತಿಸಿದ್ದೇವೆ. ಮಾಯಾವತಿಯವರ ಬಗ್ಗೆ ನನಗೆ ಗೌರವವಿದೆ… ಮಾಯಾವತಿ, ಮಮತಾ ಬ್ಯಾನರ್ಜಿ, ನಾಯ್ಡು ಇವರ್ಯಾರೂ ಮೋದಿ ಬೆಂಬಲಿಸುವುದಿಲ್ಲ ಎಂಬ ಖಾತ್ರಿಯಿದೆ…

ಈ ಚುನಾವಣೆ ಆರೆಸ್ಸೆಸ್ ಬಿಜೆಪಿಗಳಿಂದ ನಮ್ಮ ಸಂವಿಧಾನ ರಕ್ಷಿಸಲು, ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಕಾಪಾಡಿಕೊಳ್ಳಲು ನಡೆದಿದೆ,, ಜನ ನಮಗೆ ಅವಕಾಶ ಕೊಡುತ್ತಾರೆ ಎಂಬ ನಂಬಿಕೆಯಿದೆ…

ಎಲ್ಲರಿಗೂ ಧನ್ಯವಾದ…(ಮತ್ತೆ ನಗುತ್ತ) ನಾನೀಗ ಪ್ರೆಸ್ ಮೀಟ್ ಚೆನ್ನಾಗಿ ಮಾಡ್ತಾ ಇದ್ದೀನಿ ಅಲ್ಲವಾ? ಹೌದಲ್ಲೋ ನೀವೇ ನೋಡಿದಿರಲ್ಲ ಈಗ.. ಅದಕ್ಕೆ ಯಾರು ಕಾರಣ? ನೀವೇ… ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ನೆರವಾಗಿದ್ದೀರಿ… ಥ್ಯಾಂಕ್ಸ್, ಆಲ್ ದಿ ಬೆಸ್ಟ್

ಇದನ್ನು ಓದಿರಿ ಇದಿಂನ ಅಮಿತ್ ಷಾ ಪತ್ರಿಕಾಗೋಷ್ಠಿಯಲ್ಲಿ ಒಂದೂ ಪ್ರಶ್ನೆಯನ್ನು ತೆಗೆದುಕೊಳ್ಳದ ಪ್ರಧಾನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...