Homeಕರ್ನಾಟಕವಕೀಲರ ಸಂಘದ ‘ಜಾತ್ಯಾತೀತತೆ’ – ಅಂಬೇಡ್ಕರ್ ಜಯಂತಿಗೆ ನಿರಾಕರಣೆ

ವಕೀಲರ ಸಂಘದ ‘ಜಾತ್ಯಾತೀತತೆ’ – ಅಂಬೇಡ್ಕರ್ ಜಯಂತಿಗೆ ನಿರಾಕರಣೆ

- Advertisement -
- Advertisement -

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‍ರವರು ಪ್ರತಿನಿಧಿಸುವ ರಾಮನಗರ ಜಿಲ್ಲಾ ವಕೀಲರ ಸಂಘದಲ್ಲಿ ‘ಅಂಬೇಡ್ಕರ್ ಜಯಂತಿ’ ಆಚರಿಸುವ ಹಾಗಿಲ್ಲ. ವಿಚಿತ್ರ ಎನಿಸಿದರೂ ಇದು ನಿಜ.

ರಾಮನಗರದ ಜಿಲ್ಲಾ ವಕೀಲರ ಸಂಘದ ಕೆಲ ಜನಪರ ವಕೀಲರು ಅಂಬೇಡ್ಕರ್ ಜಯಂತಿ ಹಾಗೂ ಪರಿನಿರ್ವಾಣ ದಿನವನ್ನು ಆಚರಣೆ ಮಾಡಲು ಕಳೆದ ಒಂದು ವರ್ಷದಿಂದ ಪ್ರಯತ್ನ ಪಡುತ್ತಿದ್ದರೂ ಸಂಘದ ಚುನಾಯಿತ ಪ್ರತಿನಿಧಿಗಳ ಕಾರ್ಯಕಾರಿ ಸಮಿತಿಯು ಅನುಮತಿ ನಿರಾಕರಿಸುತ್ತಿದ್ದರು. ಈ ವರ್ಷದ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ನಡೆಸಲು ಅನುಮತಿ ಕೋರಿ ಏಪ್ರಿಲ್ 11ರಂದು ಸಮಾನ ಮನಸ್ಕ ಸದಸ್ಯರು ಮನವಿ ಸಲ್ಲಿಸಿದ್ದು ಏಪ್ರಿಲ್ 12ರಂದು ಅನುಮತಿಯನ್ನು ಲಿಖಿತವಾಗಿ ನಿರಾಕರಿಸಲಾಗಿದೆ! ಅನುಮತಿಯನ್ನು ವಜಾಗೊಳಿಸಿರುವ ಪತ್ರದಲ್ಲಿ “ರಾಮನಗರ ವಕೀಲ ಸಂಘವು 1927ರಲ್ಲಿ ಸ್ಥಾಪನೆಗೊಂಡಿದ್ದು, ಅಂದಿನಿಂದ ಇಂದಿನವರೆಗು ಎಲ್ಲಾ ಜನಾಂಗದ ಸದಸ್ಯರು ಸೋದರ ಭಾವನೆಯಿಂದ ಯಾವುದೇ ಜಾತಿಬೇಧವಿಲ್ಲದೇ ವಕೀಲ ವೃತ್ತಿಯನ್ನು ನಡೆಸುತ್ತಾ ಬಂದಿರುತ್ತಾರೆ. ಸದರಿ ಸಂಘದಲ್ಲಿ ಹಿಂದಿನ ದಿನದಿಂದಲೂ ಈ ರೀತಿಯ ಯಾವ ಆಚರಣೆಯನ್ನು ನಮ್ಮ ಸಂಘದಲ್ಲಿ ಆಚರಿಸುತ್ತಾ ಬಂದಿರುವುದಿಲ್ಲ… ಸದರಿ ತಮ್ಮ ಮನವಿಯನ್ನು ವಜಾಗೊಳಿಸಿರುವುದಾಗಿ ತಿಳಿಯಪಡಿಸಲಾಗಿದೆ. ಸಂಘದ ಆವರಣದಲ್ಲಿ ಈ ರೀತಿ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಾರದಾಗಿ ಈ ಮೂಲಕ ತಿಳಿಯಪಡಿಸಲಾಗಿದೆ.” ಎಂದು ಬರೆಯಲಾಗಿದೆ.

ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುವುದು ಎಂದರೆ ಜಾತಿಬೇಧ ಮಾಡಿದಂತಾಗುತ್ತದೆ ಎನ್ನುವುದು ಕಾರ್ಯಕಾರಿ ಸಮಿತಿಯ ಅಭಿಪ್ರಾಯವಾಗಿದೆ! ಅಂಬೇಡ್ಕರ್ ಜಯಂತಿ ಅಧಿಕೃತವಾಗಿ ದೇಶದಾದ್ಯಂತ ರಜೆಯನ್ನು ನೀಡಿ ಸರ್ಕಾರದ ಭಾಗವಾಗಿ ನಡೆಯುವ ಕಾರ್ಯಕ್ರಮವಾಗಿದೆ. ಹೀಗಿದ್ದು ರಾಮನಗರದ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಆಚರಣೆಯ ಅನುಮತಿಯನ್ನು ವಜಾ ಮಾಡಿದೆ.

ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಸದಸ್ಯರ ಪ್ರತಿನಿಧಿ ಚಾಂದ್‍ಪಾಷ ಅವರನ್ನು ಮಾತನಾಡಿಸಿದಾಗ “ನಾವು ಕಳೆದ ವರ್ಷದಿಂದ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ, ಅಂಬೇಡ್ಕರ್ ಜಯಂತಿಯಾಗಲಿ ಪರಿನಿರ್ವಾಣ ದಿನಕ್ಕಾಗಲಿ ನಮಗೆ ಅನುಮತಿ ನೀಡುತ್ತಲೇ ಇಲ್ಲ. ಅಂಬೇಡ್ಕರ್ ಜಯಂತಿಯಿಂದ ಜಾತಿಭೇದ ಉಂಟಾಗುತ್ತದೆ ಹಾಗಾಗಿ ಮನವಿಯನ್ನು ವಜಾ ಮಾಡಲಾಗಿದೆ ಎಂದು ಲಿಖಿತ ಪತ್ರವನ್ನು ಉನ್ನತ ಸಮಿತಿ ನೀಡಿದೆ. ಇದನ್ನು ವಿರೋಧಿಸಿ ನಾವು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ದೂರನ್ನು ನೀಡಿದ್ದೇವೆ. ಅನುಮತಿ ನೀಡದೇ ಇದ್ದರೆ ಸಮಾನ ಮನಸ್ಕರ ಸಂಘಟನೆಗಳು ಎಲ್ಲರು ಒಂದಾಗಿ ಸೋಮವಾರದಂದು ಪ್ರತಿಭಟನೆ ನಡೆಸುತ್ತೇವೆ” ಎಂದರು.

ಕಾರ್ಯಕಾರಿ ಸಮಿತಿಯ ಅಧ್ಯಕ್ಷ ದೇವರಾಜ್ ಅವರನ್ನು ಮಾತನಾಡಿಸಿದಾಗ “ಇದೆಲ್ಲಾ ಏನು ಇಲ್ಲ, ಕೋಮುದ್ವೇಷ ಬಿತ್ತಲು ಸಂಚು ಹೂಡುತ್ತಿರುವವರು ಇದನ್ನು ದೊಡ್ಡದು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರ ಎಂಬ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ನಾವು ಎಲ್ಲಿಯೂ ಬಹಿಷ್ಕಾರ ಎಂಬ ಪದವನ್ನು ಬಳಸಿಯೇ ಇಲ್ಲ. 1927ರಿಂದ ನಮ್ಮ ಸಂಘ ಅಸ್ತಿತ್ವದಲ್ಲಿದೆ. ಅಂದಿನಿಂದ ಇಂತಹ ಕಾರ್ಯಕ್ರಮಗಳು ನಡೆದುಕೊಂಡು ಬಂದಿಲ್ಲ. ಅಂಬೇಡ್ಕರ್ ಅವರ ಮೇಲೆ ನಮಗೆ ಗೌರವ ಇದೆ, ಭಾರತದಲ್ಲಿ ಯಾರೂ ಸಹ ಅಂಬೇಡ್ಕರ್ ಅವರನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ. ಜಯಂತಿ ಆಚರಣೆ ಮಾಡಬಾರದು ಎಂದು ನನ್ನ ಅಭಿಪ್ರಾಯವಲ್ಲ ಆದರೆ ನಾನೂ ಸಂಘದ ಇತರ ಸದಸ್ಯರ ಅಭಿಪ್ರಾಯಕ್ಕೆ ಬದ್ಧನಾಗಿರಬೇಕಾಗುತ್ತದೆ. ಆಚರಣೆಗೆ ಅನುಮತಿ ನೀಡಿದರೆ ನಾಳೆ ಟಿಪ್ಪು, ವಾಲ್ಮೀಕಿ, ಕನಕದಾಸ ಹೀಗೆ ಎಲ್ಲರೂ ಅನುಮತಿ ಕೇಳುತ್ತಾರೆ ಇದರಿಂದ ಕೋಮುದ್ವೇಷ ಹೆಚ್ಚಾಗಬಹುದು. ರಾಮನಗರ ಸೂಕ್ಷ್ಮ ಪ್ರದೇಶವಾಗಿದೆ. ಹಾಗಾಗಿ ಅಪಾಯ ತಪ್ಪಿಸಲು ನಮ್ಮ ಸಮಿತಿ ಈ ತೀರ್ಮಾನಕ್ಕೆ ಬರಬೇಕಾಯಿತು” ಎಂದರು.

ಆದರೆ ವಕೀಲರ ಪರಿಷತ್ತಿಗೆ ದೂರು ನೀಡಿರುವ ಪತ್ರದ ಪ್ರಕಾರ ಜಿಲ್ಲಾ ಸಂಘದ ಆವರಣದಲ್ಲಿ ಹಿಂದಿನಿಂದಲೂ ಶ್ರೀ ರಾಮನವಮಿ, ಹನುಮ ಜಯಂತಿ, ವಿವೇಕಾನಂದ ಜಯಂತಿ, ಅಂಬರೀಶ್ ಹಾಗೂ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ, ವಕೀಲರು ಮೃತರಾದಾಗ ಶ್ರದ್ಧಾಂಜಲಿ ಕಾರ್ಯಕ್ರಮಗಳು, ವರ್ಷದಲ್ಲಿ 2 ಬಾರಿ ಪೌರಾಣಿಕ ನಾಟಕಗಳು, ಗಣೇಶ ಚತುರ್ಥಿ ಅಂತಹ ಧಾರ್ಮಿಕ ಆಚರಣೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಆದರೆ ಜಾತಿ ವಿನಾಶಕ್ಕೆ ತಮ್ಮಿಡೀ ಜೀವನವನ್ನು ಬೆಸೆದ ಇಡೀ ದೇಶಕ್ಕೆ ಸಲ್ಲಬೇಕಾದ ಮಾನವತಾವಾದಿ ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸೀಮಿತವಾಗಿ ನೋಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉಳಿಯುತ್ತದೆ.

ಇದರ ಕುರಿತು ನಾವು ರಾಮನಗರದ ಸಾಮಾಜಿಕ ಕಾರ್ಯಕರ್ತೆ ರಾಣಿಯವರನ್ನು ವಕೀಲರನ್ನು ಮಾತಾಡಿಸಿದಾಗ, ‘ಸರ್, ಇದು ಮಿದುಳಿನಲ್ಲೇ ಅಸ್ಪೃಶ್ಯ ಆಚರಣೆಯ ಮನೋಭಾವ ಇಟ್ಟುಕೊಂಡಿರುವುದರ ಪರವಾಗಿದೆ. ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ ಅಷ್ಟೇ. ದೇಶದಲ್ಲಿ ಅದೇಷ್ಟೋ ಮೂಲೆಗಳಲ್ಲಿ ಈ ರೀತಿ ಅಂಬೇಡ್ಕರ್ ಜಯಂತಿ ಮಾಡಲಾಗದ ಸ್ಥಿತಿ ಇರಲು ಸಾಧ್ಯ. ಇನ್ನು ದಲಿತರ ಸ್ಥಿತಿ?! ಅಂಬೇಡ್ಕರ್ ಅವರ ಆಶಯವನ್ನು ಪಸರಿಸುವ ಜಯಂತಿಯನ್ನು ಮಾಡುತ್ತಾ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದ ವಕೀಲರೇ ಇಂದು ಜಾತಿಗೆ ಸೀಮಿತವಾಗಿ ನೋಡುವುದು ನಿಜಕ್ಕು ಮನುಷ್ಯತ್ವಕ್ಕೆ ಮಾಡಿದ ಅವಮಾನವಾಗಿದೆ. ಇಂತಹ ವೈರಸ್‍ಗಳು ಹರಡದಂತೆ ತಡೆಯಬೇಕಿದೆ. “ಮೊದಲನೆಯದಾಗಿ ಮತ್ತು ಕೊನೆಯದಾಗಿ, ನಾವು ಭಾರತೀಯರು” ಎನ್ನುವ ಅಂಬೇಡ್ಕರ್ ಅವರ ಮಾತುಗಳನ್ನು ವಕೀಲರಿಗೆ ಪಾಠ ಮಾಡುವ ಅವಶ್ಯಕತೆ ಬಂದಿರುವುದು ದುರಂತ’ ಎಂದರು.

ಇದರ ಬಗ್ಗೆ ಕಾನೂನು ವಿದ್ಯಾರ್ಥಿ ಪುಷ್ಟಾ ಅವರೊಡನೆ ನಾನುಗೌರಿ.ಕಾಂ ಮಾತಾಡಿದಾಗ ಅವರು ಸುದೀರ್ಘವಾಗಿ ತಮ್ಮ ಅನಿಸಿಕೆಗಳನ್ನು ಹೇಳಿದರು “ ‘ಪ್ರಗತಿಯ ಹಾದಿಯಲ್ಲಿ ಯಾವುದೇ ದಿಕ್ಕಿಗೆ ನೀವು ಸಾಗಿದರು ಜಾತಿ ಎಂಬ ಭೂತ ನಿಮ್ಮನ್ನು ಎದುರುಗೊಳ್ಳುತ್ತದೆ. ಈ ಭೂತವನ್ನು ನೀವು ನಾಶ ಮಾಡದೇ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ನಾನು ಹೇಳುವ ಮಾರ್ಗದಲ್ಲಿ ಅಲ್ಲದಿದ್ದರೂ ಸರಿ ನಿಮ್ಮದೇ ಆದ ಯಾವುದಾದರೂ ಮಾರ್ಗದಲ್ಲಿ ಜಾತಿ ವಿನಾಶಕ್ಕೆ ಹೋರಾಡಿ’ ಹೀಗೆಂದು ಹೇಳಿದವರು ಮಹಾ ಮಾನವತಾವಾದಿ ಬಾಬಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು. ಭೂಮಿ ಮೇಲೆ ಎಲ್ಲೂ ಇಲ್ಲದ ಕ್ರೂರವಾದ ಭಾರತದಲ್ಲಿನ ಜಾತಿಪದ್ಧತಿಯ ವಿರುದ್ಧ ಆಳವಾದ ಅಧ್ಯಯನ ಮಾಡಿ ಜಾತಿ ವಿನಾಶಕ್ಕೆ ಹೋರಾಟಗಳನ್ನು ರೂಪಿಸಿದವರು ಅಂಬೇಡ್ಕರ್. ಶೋಷಣೆಯ ವಿರುದ್ಧದ ವಿಮೋಚನೆಯ ಹೋರಾಟಗಳಲ್ಲಿಯೂ ಸಹ ಅಂಬೇಡ್ಕರ್ ಅವರು ಕೆಲವೇ ಸಮುದಾಯಗಳಿಗೆ ಸೀಮಿತವಾಗಿರದೆ ಮೇಲ್ಜಾತಿ ಎಂದು ಕರೆಯಲ್ಪಡುವ ಬ್ರಾಹ್ಮಣ ಜಾತಿಯಲ್ಲಿನ ಮಹಿಳೆಯರ ಶಿಕ್ಷಣ, ಸ್ವಾತಂತ್ರದ ಬಗ್ಗೆ ದನಿ ಎತ್ತಿ ಹಿಂದೂ ಕೋಡ್ ಬಿಲ್ ನಂತಹ ನೀತಿಗಳನ್ನು ರೂಪಿಸಲು ಮುಂದಾಗಿದ್ದರು. ಗಣಿ ಕಾರ್ಮಿಕರ ಹಕ್ಕುಗಳು, ಭಾರತದ ರೂಪಾಯಿ ಸಮಸ್ಯೆ, ಶಿಕ್ಷಣ, ನೀರಾವರಿ ಅಣೆಕಟ್ಟು… ಹೀಗೆ ಪುಟಗಳನ್ನು ತುಂಬಿಸಬಹುದಾದಷ್ಟು ಜನಪರ ವಿಚಾರಗಳಲ್ಲಿ ಅಂಬೇಡ್ಕರ್ ಅವರು ಕೆಲಸಗಳನ್ನು ಮಾಡಿದ್ದಾರೆ.

1950ರ ದಶಕದಲ್ಲಿ ಎಲ್ಲಾ ಜಾತಿಯಲ್ಲಿನ ಶೋಷಿತ ಹೆಣ್ಣುಮಕ್ಕಳ ಹಕ್ಕಿಗಾಗಿ ಅಂಬೇಡ್ಕರ್ ಅವರು ರಚಿಸಿದ್ದ ಹಿಂದೂ ಕೋಡ್ ಬಿಲ್‍ನ ವಿರುದ್ಧ, ಅದರ ಫಲಾನುಭವಿಗಳಾಗಬೇಕಿದ್ದ ಮೇಲ್ಜಾತಿಯ ಹೆಣ್ಣು ಮಕ್ಕಳೇ ಪ್ರತಿಭಟನೆ ನಡೆಸಿದ್ದರು. ಅಂದಿನ ಮನಸ್ಥಿತಿಯ ಜನರು ಇಂದಿಗೂ ಜೀವಂತವಾಗಿರುವುದು ದುರಂತ’. ದೇಶದ ಸಮಸ್ತ ಜನರಿಗೂ ಸಿಗಬೇಕಾದ ಹಕ್ಕುಗಳಿಗಾಗಿ ಹೋರಾಡಿದವರು, ಶೋಷಿತ ಸಮುದಾಯಗಳ ವಿಮೋಚನೆಯ ಮೂಲಕ ಎಲ್ಲರ ಮನಸ್ಸಿನಲ್ಲಿರುವ ಕೊಳೆಯನ್ನೂ ಕಳೆಯಲು ಹೊರಟವರನ್ನು ಜಾತಿಗೆ ಸೀಮಿತಗೊಳಿಸುತ್ತಿರುವುದು ದುರಂತ’ ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...