Homeಸಾಮಾಜಿಕಶತಾಯುಷಿಯಿಂದ ಮಠಾಧೀಶರಿಗೆ ಒಂದು ಪತ್ರ

ಶತಾಯುಷಿಯಿಂದ ಮಠಾಧೀಶರಿಗೆ ಒಂದು ಪತ್ರ

- Advertisement -
- Advertisement -

ಗೌರವಾನ್ವಿತ ಸ್ವಾಮೀಜಿಗಳೆ,

ಬಸವ ತತ್ವ ಅಸ್ತಿತ್ವಕ್ಕೆ ಬಂದ ಮೇಲೆ ಬಸವ ಅನುಯಾಯಿಗಳು ಜಾತಿ, ಮತ, ಪಂಥಗಳನ್ನು ತೊರೆದು ನಿಜ ಮಾನವರಾಗಿ ಬಾಳಬೇಕೆಂದು ತೀರ್ಮಾನಿಸಿದರೆಂಬುದು ತಿಳಿದ ಸಂಗತಿ. ಆದರೆ ಬಸವ ತತ್ವದ ಅಸ್ತಿತ್ವಕ್ಕೆ ಮುಂಚೆಯೇ ನಮ್ಮದು ಲಿಂಗಾಯತ ಮತ ಇತ್ತೆಂಬ ವಾದವನ್ನು ಪಂಚಾಚಾರ್ಯರು ಮುಂದಿಟ್ಟಿದ್ದಾರೆ. ಈಗ ಬಸವ ತತ್ವದವರಿಗೂ ತಮ್ಮ ರಂಭಾಪುರಿ ಮಠದವರಿಗೂ ನಡುವೆ ಹೋರಾಟ ಶುರುವಾಗಿದೆ. ಈ ಭಿನ್ನಾಭಿಪ್ರಾಯದ ವಿಚಾರವನ್ನು ಉಭಯತ್ರರೂ ಕೂತು, ಗೌರವಯುತವಾಗಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಬಹುದಿತ್ತು. ಬದಲಿಗೆ ನಿಮ್ಮ ಜಗಳ ಈಗ ಬೀದಿಗೆ ಬಂದಿದೆ.

ತಾವುಗಳು ಶಿವನ ಭಕ್ತರಿಗೂ ಹಾಗೂ ಬಸವನ ಅನುಯಾಯಿಗಳಿಗೂ ನಡುವೆ ಸಾಮರಸ್ಯ ಮೂಡಿಸುವ ಬದಲಿಗೆ ವೈಮನಸ್ಯ ಹೆಚ್ಚಾಗಲು ಕಾರಣರಾಗಿದ್ದೀರಿ ಎಂಬುದನ್ನು ಅತ್ಯಂತ ನೋವಿನಿಂದ ಹೇಳಲೇಬೇಕಿದೆ. ಮಠಾಧಿಪತಿಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ ಬಿತ್ತಬೇಕು. ಅದು ಬಿಟ್ಟು ನಿಮ್ಮ ಪರಸ್ಪರರ ಭಿನ್ನಾಭಿಪ್ರಾಯಗಳನ್ನು ಮುಂದಿಟ್ಟುಕೊಂಡು ನೀವೇ ಬೀದಿ ಹೋರಾಟಕ್ಕಿಳಿದರೆ ತಾವು ಭಕ್ತರಿಗೆ ಏನು ಸಂದೇಶ ಕೊಟ್ಟಂತಾಗುತ್ತದೆ?

ತಮ್ಮ ಅನುಯಾಯಿಗಳ ನಡುವೆಯೇ ತಾವು ಸಾಮರಸ್ಯ ಸಾಧಿಸಲಾಗದಿದ್ದ ಮೇಲೆ ಮತ್ತೇನನ್ನು ಸಾಧಿಸುತ್ತೀರಿ? ಹೋಗಲಿ, ಇಂಥ ಮಠಗಳಿದ್ದು ಸಮಾಜಕ್ಕೆ ಪ್ರಯೋಜನವಾದರೂ ಏನು?

ಭಿನ್ನಮತಗಳ ಕಾರಣಕ್ಕೆ ಮಠಾಧೀಶರಾದ ತಾವುಗಳೇ ಬೀದಿಗಿಳಿದಿರುವ ಸನ್ನಿವೇಶದಲ್ಲಿ ಜನಸಾಮಾನ್ಯರು ಮಾರ್ಗದರ್ಶನಕ್ಕಾಗಿ ಯಾರ ಬಳಿಗೆ ಹೋಗಬೇಕು?

ಇದು ನಿಮಗೆ ಸಲ್ಲದು. ಇದು ಮಠಾಧೀಶರಿಗೆ ತಕ್ಕುನಾದ ನಡೆಯಲ್ಲ. ನಿಮ್ಮ ಮಾತುಗಳು ಹಾಗೂ ನಡವಳಿಕೆ ಜನರಿಗೆ ಅಸಹ್ಯ ಉಂಟುಮಾಡುತ್ತಿವೆ. ಹೆಂಡ, ಹಣ ಹಂಚಿ ಓಟು ಗಳಿಸುವ ರಾಜಕಾರಣಿಗಳ ಮಟ್ಟಕ್ಕೆ ಕೆಲವು ಮಠಾಧೀಶರು ಇಳಿದಿರುವುದು ಜನರಲ್ಲಿ ಜಿಗುಪ್ಸೆ ಮೂಡಿಸಿದೆ.

ನಿಮಗೆ ರಾಜ್ಯಾಂಗದ ಪರಿಕಲ್ಪನೆಯೇ ಇಲ್ಲವೇ? ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಸಾರುವ ರಾಜ್ಯಾಂಗದ ಮಹತ್ವದ ಬಗ್ಗೆ ಅರಿವಿದೆಯೆ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಮಠಾಧೀಶರೆನಿಸಿಕೊಂಡ ತಾವು ಸಮಾಜದಲ್ಲಿ ಉನ್ನತ ಮೌಲ್ಯಗಳನ್ನು, ಆದರ್ಶಗಳನ್ನು ಬೋಧಿಸಬೇಕೆಂಬುದು ಶ್ರೀಸಾಮಾನ್ಯರ ಅಪೇಕ್ಷೆ.

ಈ ಹಿಂದೆ ಸಿರಿಗೆರೆ ಮಠದವರು ಜಗಳೂರು ಕ್ಷೇತ್ರದಲ್ಲಿ ಭ್ರಷ್ಟಾಚಾರರಹಿತವಾಗಿ, ಸೌಹಾರ್ದಯುತವಾಗಿ ಚುನಾವಣೆ ನಡೆಸುವ ಪ್ರಯೋಗ ಮಾಡಿದ್ದಾರೆ. ಜನರ ನಡುವೆ ಸಾಮರಸ್ಯ ಮೂಡಿಸಲು ಪ್ರಯತ್ನಿಸಿದ್ದಾರೆ. ಇದು ಸಂತರು, ಸನ್ಯಾಸಿಗಳು ಮಾಡಬೇಕಾದ ಮಾದರಿ ಕೆಲಸ. ಆದರೆ ತಾವು ಇಂಥಾ ಸನ್ಮಾರ್ಗವನ್ನು ಬಿಟ್ಟು ದುರ್ಮಾರ್ಗವನ್ನು ತುಳಿದಿದ್ದೀರಿ. ತಮ್ಮ ಮೇಲೆ ವಿಶ್ವಾಸವಿರಿಸಿರುವ ಭಕ್ತರನ್ನು ದಿಕ್ಕುತಪ್ಪಿಸುವ ಕೃತ್ಯದಲ್ಲಿ ತೊಡಗಿದ್ದೀರಿ.

ಸ್ವಾಮಿಗಳೇ,
ಇಂದಿನ ರಾಜಕೀಯ ಯಾವ ಹಂತಕ್ಕೆ ತಲುಪಿದೆಯೆಂಬುದು ಪಾಮರರಿಗೂ ತಿಳಿದಿರುವ ವಿಚಾರ. ಹೀಗಿರುವಾಗ ನಿತ್ಯವೂ ಜನರಿಗೆ ಉಪದೇಶ ಮಾಡುವ ತಮಗೆ ಈ ವಿಷಯ ತಿಳಿಯದೇ ಹೋಗಿರುವುದು ವಿಷಾದಕರ. ಅಧೋಗತಿಗಿಳಿದಿರುವ ರಾಜಕೀಯದ ಜೊತೆಗೆ ಧರ್ಮವನ್ನು ಬೆರೆಸುವ ನಿಮ್ಮ ಕೃತ್ಯದಿಂದ ಸಮಾಜವನ್ನು ಮತ್ತಷ್ಟು ವಿಪ್ಪತ್ತಿಗೆ ದೂಡಿದಂತಾಗುತ್ತದೆ.

ಮಠಾಧೀಶರೆನಿಸಿಕೊಂಡವರು ಜನರಿಗೆ ಸಾತ್ವಿಕ ಮಾರ್ಗ ಸೂಚಿಸುವ ಮಹತ್ಕಾರ್ಯ ಮಾಡಬೇಕಿತ್ತು. ಆದರೆ ಅದು ಬಿಟ್ಟು ರಾಜಕೀಯ ಪಕ್ಷಗಳಿಗೆ ಓಟು ಹಾಕಿಸುವ ಏಜೆಂಟರಂತೆ ವರ್ತಿಸುತ್ತಿರುವ ನಿಮ್ಮ ನಡೆ ಖಂಡನಾರ್ಹವಾದುದು. ಇದು `ಮಠಾಧೀಶ’ರ ಸ್ಥಾನಮಾನಕ್ಕೆ ಎಸಗುವ ಮಹಾಪರಾಧವಾಗುತ್ತದೆ. ಪೀಠಕ್ಕೆ ಮಾಡುವ ದ್ರೋಹವಾಗುತ್ತದೆ.

ಆದ್ದರಿಂದ ತಮ್ಮಲ್ಲಿ ನನ್ನ ಕಳಕಳಿಯ ಮನವಿ ಇಷ್ಟೆ. ಜನರ ಭಾವನೆಗಳಿಗೆ ಬೆಲೆ ಕೊಟ್ಟು ದಯಮಾಡಿ ತಮ್ಮ ಬೀದಿ ಕಚ್ಚಾಟವನ್ನು ಕೂಡಲೇ ನಿಲ್ಲಿಸಿ, ತಮ್ಮ ತಾತ್ವಿಕ ಭಿನ್ನಮತವನ್ನು ಸೌಹಾರ್ದಯುತ ಚರ್ಚೆಯ ಮೂಲಕ ಪರಿಹರಿಸಿಕೊಳ್ಳಿ. ಹಾಗೆಯೆ ತಮ್ಮ ರಾಜಕೀಯ ಪ್ರೇರಿತ ನಡವಳಿಕೆಗಳನ್ನು ಬದಲಿಸಿಕೊಂಡು ಪೀಠದ ಗೌರವವನ್ನು ಹಾಗೂ ತಮ್ಮ ಸ್ಥಾನಮಾನದ ಘನತೆಯನ್ನು ಕಾಪಾಡುತ್ತೀರೆಂದು ಆಶಿಸುತ್ತೇನೆ.

ವಂದನೆಗಳೊಂದಿಗೆ,
ಎಚ್.ಎಸ್.ದೊರೆಸ್ವಾಮಿ
ಬೆಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...