ಶೇಕಡಾ 75 ರಷ್ಟು ಖಾಸಗಿ ಉದ್ಯೋಗಗಳನ್ನು ರಾಜ್ಯದ ಸ್ಥಳೀಯರಿಗೆ ಮೀಸಲಿರಿಸುವ ಮಸೂದೆಗೆ ಹರಿಯಾಣ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾ ಮಂಗಳವಾರ ಮಾಹಿತಿ ನೀಡಿದ್ದಾರೆ. ಈ ಮಸೂದೆಯನ್ನು ಕಳೆದ ವರ್ಷ ರಾಜ್ಯ ವಿಧಾನಸಭೆ ಅಂಗೀಕರಿಸಿತ್ತು.
“ಇದು ರಾಜ್ಯದ ಯುವಕರಿಗೆ ಬಹಳ ಸಂತೋಷದ ದಿನವಾಗಿದೆ. ರಾಜ್ಯದ ಯುವಕರಿಗೆ ಈಗ ಖಾಸಗಿ ಉದ್ಯೋಗಗಳಲ್ಲಿ ಶೇಕಡಾ 75 ರಷ್ಟು ಮೀಸಲಾತಿ ಸಿಗುತ್ತದೆ” ಎಂದು ಅವರು ಹೇಳಿದರು.
ಸ್ಥಳೀಯರಿಗೆ ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವುದು ದುಶ್ಯಂತ್ ಚೌತಲಾ ಅವರ ಜನ್ನಾಯಕ್ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆಯ ಮುಖ್ಯ ಭರವಸೆಯಾಗಿತ್ತು. ಚುನಾವಣೆಯಲ್ಲಿ 90 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಗೆದ್ದ ನಂತರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚಿಸಿತ್ತು.
ಕಳೆದ ವರ್ಷ ದುಶ್ಯಂತ್ ಚೌತಲಾ ಅವರು ಮಂಡಿಸಿದ ಈ ಮಸೂದೆಯ ಪ್ರಕಾರ, ಖಾಸಗಿ ಕಂಪೆನಿಗಳು ಶೇಕಡಾ 75 ರಷ್ಟು ಉದ್ಯೋಗಗಳನ್ನು ಮತ್ತು ತಿಂಗಳಿಗೆ ₹ 50,000 ರೂ.ಗಳ ವರೆಗಿನ ವೇತನವನ್ನು ಹರಿಯಾಣದ ಸ್ಥಳೀಯರಿಗೆ ಕಾಯ್ದಿರಿಸುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರ: ಮಾಧ್ಯಮಗಳಿಗೆ ಮಾಹಿತಿ ಸೋರಿಕೆ – ಪೊಲೀಸರಿಗೆ ಹೈಕೋರ್ಟ್ ತರಾಟೆ
50000/- ರೂಪಾಯಿಗಿಂತ ಕಡಿಮೆ ಸಂಬಳದ ಎಲ್ಲಾ ಕೆಲಸಗಳು ಹರಿಯಾಣದವರಿಗೆ ಮೀಸಲು?