Homeಮುಖಪುಟನಾವೆಲ್ಲರೂ ಒಂದೇ ತಾಯಿಗೆ ಮಕ್ಕಳು: ವಿದ್ಯಾರ್ಥಿಗಳು ಕಲಿಯಲು ಬಿಡಿ

ನಾವೆಲ್ಲರೂ ಒಂದೇ ತಾಯಿಗೆ ಮಕ್ಕಳು: ವಿದ್ಯಾರ್ಥಿಗಳು ಕಲಿಯಲು ಬಿಡಿ

ಮಕ್ಕಳಿಗೆ ಸಭ್ಯತೆ, ಘನತೆ, ಗಾಂಭೀರ್ಯತೆಯೊಂದಿಗೆ ಶಿಕ್ಷಣವನ್ನು ಮುಗಿಸಲು ಅನುವು ಮಾಡಿಕೊಡಿ. ಪರಸ್ಪರರನ್ನು ಕಚ್ಚಾಡಿಸುವವರನ್ನು ಯಾವ ಧರ್ಮದಲ್ಲಿ ಇದ್ದರೂ ಖಂಡಿಸಿ, ದೂರವಿಡಿ.

- Advertisement -
- Advertisement -

ಭಾರತ ಬಹುಸಂಸ್ಕೃತಿಯ ರಾಷ್ಟ್ರ. ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎಂದು ರಾಷ್ಟ್ರಕವಿ ಕುವೆಂಪು ಹಾಡಿಹೊಗಳಿದ ವಿವಿಧ ಧರ್ಮ, ಜನಾಂಗ, ಜಾತಿ -ಪಂಥಗಳ, ಭಾಷೆ, ಉಡುಗೆ- ತೊಡುಗೆ, ಆಹಾರ ಪದ್ಧತಿಗಳನ್ನು ತಲೆತಲಾಂತರದಿಂದ ಗೌರವಿಸಿಕೊಂಡು ಸಹಬಾಳ್ವೆ ಮತ್ತು ಸೌಹಾರ್ದತೆಗೆ ಜಗತ್ತಿಗೆ ಮಾದರಿಯಾದ ದೇಶ. ಮಾದರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ ದೇಶ. ನಾನು ಯಾವುದೇ ಧರ್ಮವನ್ನು ಅನುಸರಿಸುತ್ತಿದ್ದರು ನನಗೆ ಭಾರತೀಯಳು ಎನ್ನುವುದಕ್ಕೆ ಹೆಮ್ಮೆ .ಏಕೆಂದರೆ ಈ ನೆಲದ ಸಂಸ್ಕೃತಿ ಎಲ್ಲವನ್ನೂ ಒಳಗೊಂಡು ಜೀವಿಸುವ ವಿಶಾಲ ಹೃದಯವನ್ನು ನೀಡಿದೆ.

ಈ ಹೊಗಳಿಕೆ ಅತಿಯಾಯಿತು ಎಂದು ಅನಿಸುವ ವಿಭಾಗಕ್ಕೆ ನೀವು ಸೇರಿದ್ದರೆ ಅದು ನಿಮ್ಮ ದೃಷ್ಟಿಕೋನ. ಈ ಬಹುಸಂಸ್ಕೃತಿ, ಬಹುಧರ್ಮೀಯತಿಯನ್ನು ಒಪ್ಪಿಕೊಂಡು ಬಾಳುವುದನ್ನು ಕಲಿಸುವ ಪ್ರಥಮ ಮೆಟ್ಟಿಲು ಶಿಕ್ಷಣ ಸಂಸ್ಥೆಗಳು. ಅದರಲ್ಲೂ ಸರಕಾರಿ ಶಿಕ್ಷಣ ಸಂಸ್ಥೆಗಳು. ಇಂದಿನಂತೆ ಮಧ್ಯಮ, ಮೇಲುವರ್ಗದ ಜನರೆಲ್ಲರೂ ತಮ್ಮ ಮಕ್ಕಳನ್ನು ಆಂಗ್ಲ ಶಾಲೆಗೆ ಸೇರಿಸುವ ವ್ಯವಸ್ಥೆ ಅಂದಿರಲಿಲ್ಲ. ಹೆಚ್ಚಿನ ಎಲ್ಲರೂ ಸರಕಾರಿ ಶಾಲೆಗಳಿಗೆ ಹೋಗುತ್ತಿದ್ದರು ಮತ್ತು ಅದು ನಮಗೆ ಕೀಳರಿಮೆಯ ವಿಚಾರವಾಗಿರಲಿಲ್ಲ. ನನ್ನ ಸರಕಾರಿ ಶಾಲೆ ಹಾಗಿತ್ತು. ಮಾನವೀಯತೆಯನ್ನು, ವಿಶ್ವ ಭ್ರಾತೃತ್ವವನ್ನು ಕಲಿಸುವ, ಹಿರಿಯರನ್ನು ಹೇಗೆ ಗೌರವಿಸಬೇಕು? ಒಡನಾಡಿಗಳನ್ನು ಹೇಗೆ ಸ್ನೇಹದೊಂದಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು? ಕಿರಿಯರನ್ನು ಯಾವ ರೀತಿ ಪ್ರೀತಿಸಬೇಕು? ಎಂಬುದನ್ನು ಕಲಿಸಿಕೊಟ್ಟ ಶಾಲೆಗಳು ನಮ್ಮವು. ಅಂದಿನ ಬಾಲ್ಯದ ಗೆಳತಿ ರಶ್ಮಿ ಇಂದು ಸಿಕ್ಕರು ಅದೇ ಪ್ರೀತಿಯಿಂದ ಬಾಲ್ಯದ ಮುಗ್ಧತೆಯೊಂದಿಗೆ ಮಾತನಾಡಿಸುತ್ತಾಳೆ. ಸಹಪಾಠಿಗಳಾಗಿದ್ದ ಜೋಕಿಮ್, ರಮೇಶ್ ಈಗ ಎಲ್ಲಿರಬಹುದು ಅವರ ಸಂಸಾರ ಹೇಗಿರಬಹುದು? ಎಂಬ ಕುತೂಹಲ ಈಗಲೂ ನನಗಿದೆ  ಹೈಸ್ಕೂಲು ಕಾಲೇಜು ಗೆಳತಿಯರಾದ ದೀಪ ಕಲಾ, ರೂಪ, ಪ್ರಫುಲ್ಲ, ಚೇತನ, ಮಮತಾ, ಸುನೀತಾ, ಪ್ರೆಸಿಲ್ಲಾ, ಪ್ರಿಯಾ, ಮೀನಾ, ತಾವ್ರೋ ಹೀಗೆ ಪಟ್ಟಿ ಬೆಳೆಯುತ್ತದೆ. ನಮಗ್ಯಾರಿಗೂ ನಾವು ಒಂದೇ ತಂದೆ ತಾಯಿಯ ಮಕ್ಕಳಲ್ಲ ಎಂದು ಎಂದಿಗೂ ಅನಿಸಿದ್ದೇ ಇಲ್ಲ. ಅನೇಕ ಬಾರಿ ಅವರ ಮನೆಗೆ ಹೋಗಿದ್ದೆ, ಉಂಡಿದ್ದೆ. ಅವರ ಅಕ್ಕರೆಯಲ್ಲಿ ಮಿಂದು ಎದ್ದಿದ್ದೆ. ನನ್ನ ಧರ್ಮ ಅದ್ಯಾವುದಕ್ಕೂ ನನಗೆ ತಡೆಯಾಗಲಿಲ್ಲ. ನಾನು ಧರಿಸಿದ್ದ ಹಿಜಾಬ್ ಅವರಿಗೆ ಸಮಸ್ಯೆಯಾಗಿರಲಿಲ್ಲ.

ಇಂದು ಹಿಜಾಬ್ ಕಟಕಟೆಯಲ್ಲಿ ನಿಂತಿರುವುದಕ್ಕೆ, ಬೀದಿ ವಿಷಯವಾಗಿ ಮಾರ್ಪಟ್ಟಿರುವುದಕ್ಕೆ ವಿಷಾದವಿದೆ. ಒಂದೇ ಬೆಂಚಿನಲ್ಲಿ ಒಟ್ಟಿಗೆ ಕುಳಿತು ತರಲೆ ಮಾತುಗಳನ್ನಾಡುತ್ತಿದ್ದ, ವಿಮರ್ಶಿಸುತ್ತ, ಟೀಕಿಸುತ್ತಿದ್ದ ಅದರಾಚೆಗೆ ಅಷ್ಟೇ ಪ್ರೀತಿ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದ ಸಹಪಾಠಿಗಳು ದಿನಬೆಳಗಾದರೆ ಅನ್ಯ ಧರ್ಮದವರಾಗಿ ಹೇಗೆ ಮಾರ್ಪಟ್ಟರು?

ನಿಜ ಹಿಜಾಬ್ ಒಂದು ಧರ್ಮದ ಸಹೋದರಿಯರು ಅನುಸರಿಸುತ್ತಿರುವ ವಸ್ತ್ರ ಪದ್ಧತಿ. ಅದನ್ನು ಬೇರೆ ಯಾವುದೋ ವಸ್ತ್ರದೊಂದಿಗೆ ಪ್ರತಿಸ್ಪರ್ಧಿಯಾಗಿಸಿದ್ದು ಯಾರು? ನಾವು ಇಂದಿಗೂ ಹಿಂದೂ-ಮುಸ್ಲಿಂ ಸಹೋದರಿಯರು ಪರಸ್ಪರ ಪ್ರೀತಿ ಗೌರವಗಳಿಂದ ನಡೆಸಿಕೊಳ್ಳುತ್ತಿದ್ದೇವೆ. ಹಬ್ಬಗಳಲ್ಲಿ, ಸಂತೋಷ ಮತ್ತು ದುಃಖದ ಸಂದರ್ಭಗಳಲ್ಲಿ ಪರಸ್ಪರ ಜೊತೆಗಿದ್ದೇವೆ. ಈ ರೀತಿ ಹಿಜಾಬ್ ಅನ್ನು ಚರ್ಚಾ ವಿಷಯವಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ದಾಳಕ್ಕೆ ನಾವೆಂದೂ ಬಲಿ ಬೀಳಬಾರದು.

ನಮಗೆ ಶಿಕ್ಷಣ ಮುಖ್ಯ. ಅದಕ್ಕಿಂತಲೂ ಮುಖ್ಯವಾಗಿ ಈ ದೇಶದ ಅಖಂಡತೆ ಸಾಮರಸ್ಯದ ಜೀವನ ಬಹಳ ಮುಖ್ಯ. ಅಲ್ಪಸಂಖ್ಯಾತರ ಎಲ್ಲ ಗುರುತುಗಳನ್ನು ಒಂದೊಂದಾಗಿ ಅಳಿಸಿ ಬಯಸುವ ಸಂವೇದನ ಶೂನ್ಯತೆ ಯುವಜನತೆಯನ್ನು ಯಾವ ದಿಕ್ಕಿನೆಡೆಗೆ ಕೊಂಡೊಯ್ಯುತ್ತದೆ, ಎಂಬುದರ ಬಗ್ಗೆ ದಿಗಿಲು ಆಗುತ್ತಿದೆ.

ಸಿಖ್ ಧರ್ಮೀಯ ಸಹೋದರರ ಶಿರವಸ್ತ್ರಕ್ಕಿಲ್ಲದ, ಕ್ರೈಸ್ತ ಸನ್ಯಾಸಿ ಭಗಿನಿಯರ ವಸ್ತ್ರಧಾರಣೆಗೆ ಇಲ್ಲದ ವಿರೋಧ ಹಿಜಾಬಿಗೆ ಯಾಕೆ? ತಲೆಯಮೇಲೆ ಹಾಕಿಕೊಳ್ಳುವ ಒಂದು ತುಂಡು ಬಟ್ಟೆಯ ಬಗ್ಗೆ ಇಷ್ಟು ಗೊಂದಲವೇಕೆ?

ಮಕ್ಕಳಿಗೆ ಸಭ್ಯತೆ, ಘನತೆ, ಗಾಂಭೀರ್ಯತೆಯೊಂದಿಗೆ ಶಿಕ್ಷಣವನ್ನು ಮುಗಿಸಲು ಅನುವು ಮಾಡಿಕೊಡಿ. ನಾಲಾಯಕ್ ಆದವರು, ಪರಸ್ಪರರನ್ನು ಕಚ್ಚಾಡಿಸುವವರನ್ನು ಯಾವ ಧರ್ಮದಲ್ಲಿ ಇದ್ದರೂ ಖಂಡಿಸಿ, ದೂರವಿಡಿ. ನಮ್ಮ ಮಕ್ಕಳು ವಿವಿಧ ಸಂಸ್ಕೃತಿಯನ್ನು ಪರಿಚಯಿಸಿಕೊಂಡು ಜೀವಿಸುವ ಹಕ್ಕನ್ನು ಅವರಿಂದ ಕಿತ್ತುಕೊಳ್ಳಬೇಡಿ. ರಾಜಕೀಯದವರ ಹಿತಾಸಕ್ತಿಗೆ ನೀವು ಬಲಿಯಾಗಬೇಡಿ. ಚೆನ್ನಾಗಿ ಕಲಿತು, ಬೆಳೆದು ನಮ್ಮ ಸಾಮರ್ಥ್ಯವನ್ನು ಅವರಿಗೆ ಗೊತ್ತುಪಡಿಸುವ. ಹೆಣ್ಣು ಮಕ್ಕಳ ಉಡುಪು ಅವರ ಹಕ್ಕು. ಹಾಗಾಗಿ ಹಿಜಾಬ್ ಸೇರಿದಂತೆ ಎಲ್ಲರ ವಸ್ತ್ರಗಳ ಪರವಾಗಿ ನಿಲ್ಲೋಣ. ನನ್ನ ವಸ್ತ್ರಧಾರಣೆ ನನ್ನ ಮೂಲಭೂತ ಹಕ್ಕು. ಅದು ನಿಮಗೆ ತೊಂದರೆಯನ್ನುಂಟು ಮಾಡುವುದಾದರೆ ಅದು ನನ್ನ ಅಥವಾ ಹಿಜಾಬಿನ ತಪ್ಪಲ್ಲ. ನಿಮ್ಮ ಮಾನಸಿಕತೆ, ಅದನ್ನು ಸ್ವಲ್ಪ ಶುದ್ಧವಾಗಿಟ್ಟುಕೊಳ್ಳಿ. ಸಮಸ್ಯೆಗೆ ಪರಿಹಾರ ನಿಮ್ಮಲ್ಲೇ ಇದೆ.

  • ಸಬೀಹ ಫಾತಿಮ

ಇದನ್ನೂ ಓದಿ: ಹೆಣ್ಣುಮಕ್ಕಳ ಬದುಕು, ಉಡುಪು ಮತ್ತು ಆಯ್ಕೆಯ ಹಕ್ಕುಗಳು ಮತ್ತು ಪುರುಷಾಧಿಪತ್ಯದ ಆಯ್ಕೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...