Homeಕರ್ನಾಟಕHijab Live | ಹಿಜಾಬ್‌ ಲೈವ್‌ | ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Hijab Live | ಹಿಜಾಬ್‌ ಲೈವ್‌ | ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

- Advertisement -
- Advertisement -

ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ರಾಜ್ಯ ಹೈಕೋರ್ಟ್‌ 11 ದಿನವಾದ ಶುಕ್ರವಾರ ಮುಂದುವರೆಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ. ಎಂ. ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠವು ಹಿಜಾಬ್‌ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ಇಂದು ವಿಚಾರಣೆಯನ್ನು ಮುಗಿಸುವ ಸಾಧ್ಯತೆಯಿದೆ.


ಅಪ್‌ಡೇಟ್‌‌ – 04:40 PM

  • ವಕೀಲ ಮೊಹಮ್ಮದ್ ತಾಹಿರ್ ರಿಟ್‌ ಅರ್ಜಿ 2146/2022 ರಲ್ಲಿ ಸಲ್ಲಿಸುತ್ತಾರೆ.
  •  

    ನ್ಯಾಯಮೂರ್ತಿ ದೀಕ್ಷಿತ್: ದೇವದತ್‌ ಕಾಮತ್ ಈಗಾಗಲೇ ವಾದಿಸಿದ್ದಾರೆ. ಮತ್ತೇ ಮತ್ತೇ ಪ್ರತ್ಯುತ್ತರ ನೀಡಲು ಅನುಮತಿಸಲಾಗುವುದಿಲ್ಲ.

     

  • ತಾಹಿರ್: ಕಾಮತ್ ಈ ಅರ್ಜಿಯನ್ನು ವಾದಿಸಿಲ್ಲ.
  • ವಕೀಲ ಸುಭಾಷ್‌ ಝಾ ವಾದ ಪ್ರಾರಂಭಿಸುತ್ತಾರೆ. ಈ ಅರ್ಜಿಯನ್ನು ವಕೀಲ ಘನಶ್ಯಾಮ ಉಪಾಧ್ಯಾಯ ಸಲ್ಲಿಸಿದ್ದಾರೆ.

     

  • ಝಾ: ದೇಶದ ರಕ್ಷಣೆ, ಭದ್ರತೆ, ಸಮಗ್ರತೆ ದೃಷ್ಟಿಯಿಂದ ಕೆಲವು ಪ್ರಶ್ನೆಗಳನ್ನು ಎತ್ತಿ ವಕೀಲರೊಬ್ಬರು ಮನವಿ ಸಲ್ಲಿಸಿದ್ದಾರೆ.ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳಿಂದ ಪ್ರತಿಯೊಬ್ಬ ವ್ಯಕ್ತಿಯೂ ನೊಂದಿದ್ದಾರೆ. ಇದು ಎಲ್ಲೆಡೆ ವ್ಯಾಪಕ ಪರಿಣಾಮವನ್ನು ಬೀರುತ್ತಿದೆ. ಹಿಜಾಬ್, ಗಡ್ಡ ಅಥವಾ ಬುರ್ಖಾದ ವಿಚಾರಗಳ ಬಗ್ಗೆ ಎಷ್ಟು ವರ್ಷಗಳವರೆಗೆ ನ್ಯಾಯಾಲಯಗಳು ನಿರ್ಧರಿಸಲಿವೆ.
  • ಡ್ರೆಸ್ ಕೋಡ್‌ನ ಪ್ರಾಮುಖ್ಯತೆಯ ಕುರಿತು ಅಲಹಾಬಾದ್ ಹೈಕೋರ್ಟ್‌ ನಿರ್ಧಾರವನ್ನು ಝಾ ಉಲ್ಲೇಖಿಸುತ್ತಾರೆ.
  • ಝಾ: ನ್ಯಾಯಾಲಯದ ಕೊಠಡಿಯಲ್ಲಿ ವಕೀಲರು ಧೋತಿ-ಕುರ್ತಾ ಧರಿಸಿದ್ದಕ್ಕಾಗಿ ವಕೀಲರಿಂದ ಪ್ರಕರಣ ದಾಖಲಾಗಿದೆ. ಧೋತಿ-ಕುರ್ತಾಗೆ ಅನುಮತಿ ನೀಡದಿರುವುದು ರಾಷ್ಟ್ರೀಯ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಅವರು ವಾದಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್ ಇದನ್ನು ತಿರಸ್ಕರಿಸಿದೆ.
  • ನ್ಯಾಯಮೂರ್ತಿ ದೀಕ್ಷಿತ್: ಅದು ಶಾಲೆಯಲ್ಲ.

     

  • ಝಾ: ಆದರೆ ಇದು ಈಗ ನ್ಯಾಯಾಲಯದಲ್ಲಿದೆ. ಇದು ಡ್ರೆಸ್ ಕೋಡ್‌ನ ಪ್ರಾಮುಖ್ಯತೆಯ ಮೇಲೆ ನಡೆಯುತ್ತಿದೆ. ಕೇರಳ ಹೈಕೋರ್ಟ್‌ನಿಂದ ಬಂದ ಮತ್ತೊಂದು ತೀರ್ಪು ಇದೆ(ತೀರ್ಪು ಉಲ್ಲೇಖಿಸುತ್ತಾರೆ)
  • ಮುಖ್ಯ ನ್ಯಾಯಮೂರ್ತಿ: ಸಮವಸ್ತ್ರದ ಪ್ರಾಮುಖ್ಯತೆ ಬಗ್ಗೆ ನೀವು ಹೇಳುತ್ತಿದ್ದೀರಾ.
  • ಝಾ: ಹೌದು, ಪ್ರತಿ ನ್ಯಾಯಾಲಯದಲ್ಲೂ ಈ ವಿಚಾರವನ್ನು ತರಲಾಗುತ್ತಿದೆ.
  • ಝಾ ಅವರು ಹಿಜಾಬ್ ಕುರಿತು ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಉಲ್ಲೇಖಿಸುತ್ತಾ, “‘ಬಾಲಕಿಯರ ಶಾಲೆಗಳಲ್ಲಿ ಓದುವಾಗ ಮುಸ್ಲಿಂ ಹೆಣ್ಣುಮಕ್ಕಳು ತಲೆಗೆ ಸ್ಕಾರ್ಫ್ ಧರಿಸುವ ಯಾವುದೇ ಸ್ಥಾಪಿತ ಆಚರಣೆಯಿಲ್ಲ” ಎಂದು ಹೇಳುತ್ತಾರೆ.
  • ನ್ಯಾಯಮೂರ್ತಿ ದೀಕ್ಷಿತ್: ಈ ತೀರ್ಪು ಪ್ರತ್ಯೇಕವಾಗಿ ಬಾಲಕಿಯರ ಶಾಲೆಯ ಬಗ್ಗೆಯಾಗಿದೆ. ಪಾಯಿಂಟ್ ಎಲ್ಲಿದೆ?
  • ಝಾ: 1400 ವರ್ಷಗಳ ಹಿಂದೆ ಏನಾಯಿತು ಎಂಬುದನ್ನು 2022 ರಲ್ಲಿ ಅನ್ವಯಿಸಬೇಕು ಎಂಬುವುದು ಸಾಧ್ಯವೋ, ಕಾರ್ಯಸಾಧ್ಯವೋ? ನನ್ನ ಉತ್ತರ ಇಲ್ಲ ಎಂದಾಗಿದೆ. ಮಹಿಳೆಯರು ತಮ್ಮ ದೃಷ್ಟಿಯನ್ನು ತಗ್ಗಿಸಬೇಕು ಎಂದು ಹೇಳಲಾಗಿದೆ. ಇದು ಸಾಧ್ಯವೇ..ನಾವು ಸಿದ್ಧಾಂತಗಳ ಬಗ್ಗೆ ಮಾತನಾಡುತ್ತೇವೆ, ಆದರೆ ಅಕ್ಷರಶಃ ಅನುಸರಿಸಲು ಸಾಧ್ಯವಿಲ್ಲ.
  • ಝಾ: ನಾವು ಭಾರತ, ಭರತವರ್ಷದಲ್ಲಿ ಇದ್ದೇವೆ..

     

  • ಮುಖ್ಯ ನ್ಯಾಯಮೂರ್ತಿ: ಸರ್ಕಾರದ ಆದೇಶದ ಬಳಿಕ ದೇಶಾದ್ಯಂತ ನಡೆಯುತ್ತಿರುವ ಹೋರಾಟದ ಬಗ್ಗೆ ಸಿಬಿಐ, ಎನ್‌ಐಎ ತನಿಖೆಗೆ ಆದೇಶಿಸಬೇಕು ಎಂದು ನೀವು ಕೋರಿದ್ದೀರಿ. ಪ್ರತಿಭಟನೆಗೆ ಹೊರಗಿನ ಸಂಘಟನೆ ಅಥವಾ ಸಂಸ್ಥೆ ಬೆಂಬಲ ನೀಡಿದೆ ಎಂಬುದನ್ನು ಸಾಬೀತುಪಡಿಸಲು ದಾಖಲೆ ಇದೆಯೇ?. ಅದನ್ನು ತೋರಿಸಿದರೆ ನಾವು ನಿಮ್ಮ ಅರ್ಜಿಯನ್ನು ಪರಿಗಣಿಸುತ್ತೇವೆ. ಧಾರ್ಮಿಕ ಮತ್ತು ಸಾಂವಿಧಾನಿಕ ಸಮಸ್ಯೆಗಳನ್ನು ನಾವು ಎರಡೂ ಕಡೆಯಿಂದ ಆಲಿಸಿದ್ದೇವೆ.
  • ಝಾ: ನಾವು ವಿದೇಶಿ ತೀರ್ಪುಗಳ ಬಗ್ಗೆ ಮಾತನಾಡುತ್ತೇವೆ. ಮಲೇಷಿಯಾದ ನ್ಯಾಯಾಲಯದ ತೀರ್ಪು ಇಲ್ಲಿ ಅನ್ವಯಿಸುವುದಿಲ್ಲ.
  • ಮುಖ್ಯ ನ್ಯಾಯಮೂರ್ತಿ: ನಿಮ್ಮ ಮೊದಲ ಮನವಿಗೆ ಬನ್ನಿ. ಅದರ ಬಗ್ಗೆ ವಾದಿಸಿ.
  • ಝಾ: ಭಾರತವನ್ನು ಇಸ್ಲಾಮೀಕರಣಗೊಳಿಸಲು PFI, ಕ್ಯಾಂಪಸ್ ಫ್ರಂಟ್, SIO, ಜಮಾತ್ ಇ ಇಸ್ಲಾಮಿ ಸಂಸ್ಥೆಗಳು ಸೌದಿ ವಿಶ್ವವಿದ್ಯಾನಿಲಯಗಳಿಂದ ಧನಸಹಾಯ ಪಡೆಯುತ್ತಿವೆ. ಈ ಸಂಸ್ಥೆಗಳ ಒಳಗೊಳ್ಳುವಿಕೆಯನ್ನು ನೋಡಿದರೆ, ಉತ್ತರವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಇಷ್ಟು ದೊಡ್ಡ ಪ್ರಮಾಣದ ಆಂದೋಲನವನ್ನು ರಾತ್ರೋರಾತ್ರಿ ಆಯೋಜಿಸಲು ಸಾಧ್ಯವಿಲ್ಲ. ಹುಡುಗಿಯರು ಮೊದಲು ಹಿಜಾಬ್ ಧರಿಸಿರಲಿಲ್ಲ ಎಂದು ಚಿತ್ರಗಳು ಸಾಬೀತುಪಡಿಸುತ್ತಿವೆ. ಏಕಾಏಕಿ ಒಂದರ ಹಿಂದೆ ಒಂದರಂತೆ ಅರ್ಜಿಗಳು ಸಲ್ಲಿಕೆಯಾಗಿ, ದೇಶಾದ್ಯಂತ ಹಿರಿಯ ವಕೀಲರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ.
  • ಮುಖ್ಯ ನ್ಯಾಯಮೂರ್ತಿ: ನಾವು ಊಹಿಸಲು ಸಾಧ್ಯವಿಲ್ಲ. ಪ್ರತಿಭಟನೆ ಹಿಂದೆ ಜನರಿದ್ದಾರೆ ಎಂಬುವುದರ ಬಗ್ಗೆ ದಾಖಲೆ ಸಂಗ್ರಹಿಸಲು ನೀವು ಪ್ರಯತ್ನಿಸಿದ್ದೀರಾ? ನಿಮ್ಮ ಬಳಿ ಯಾವ ದಾಖಲೆಯಿದೆ?.

     

  • ಝಾ: ಹರ್ಷ ಎಂಬ ಯುವಕನನ್ನು ಕೊಲ್ಲಲಾಯಿತು, ಈ ಕ್ರೂರ ಹತ್ಯೆಯಲ್ಲಿ CFI ಭಾಗಿಯಾಗಿದೆ ಎಂದು ನನಗೆ ತಿಳಿಸಲಾಗಿದೆ.

     

  • ಮುಖ್ಯ ನ್ಯಾಯಮೂರ್ತಿ: ತನಿಖೆ ಬಾಕಿ ಇದೆ. ಈ ಬಗ್ಗೆ ನಾವು ಊಹಿಸಲು ಸಾಧ್ಯವಿಲ್ಲ.
  • ಝಾ : ನ್ಯಾಯಾಲಯವು ಯೂನಿಯನ್ ಆಫ್ ಇಂಡಿಯಾದಿಂದ ವರದಿಯನ್ನು ಕೇಳಬಹುದು.

     

  • ಮುಖ್ಯ ನ್ಯಾಯಮೂರ್ತಿ: ಪ್ರಾಥಮಿಕ ದಾಖಲೆಯನ್ನು ತೋರಿಸಿ.
  • ಝಾ: ಆಂಧ್ರದ ವಿನೋದ್ ಅಣ್ಣಾ ಎಂಬಾತ ವೀಡಿಯೊಗಳನ್ನು ಬಿಡುಗಡೆ ಮಾಡಿದ್ದಾನೆ. ಜೊತೆಗೆ ಅಯ್ಯರ್ ಎಂಬವರು ಪಾಪಿ ಸಂಘಟನೆಗಳ ವಿವರ ನೀಡಿದ್ದಾರೆ. ಒಂದು ಸಂಘಟನೆಯನ್ನು ನಿಷೇಧಿಸಿದರೆ, ಅದು ಇನ್ನೊಂದು ಹೆಸರಿನಲ್ಲಿ ಪ್ರಾರಂಭವಾಗುತ್ತದೆ.
  • ಝಾ: ನಿಯಮಿತವಾಗಿ ಮಧ್ಯಂತರದಲ್ಲಿ ಅಂತಹ ಅರ್ಜಿಗಳನ್ನು ಸಲ್ಲಿಸಬಹುದೇ?. ನ್ಯಾಯಾಲಯದ ಎಷ್ಟು ಗಂಟೆಗಳ ನ್ಯಾಯಾಂಗ ಸಮಯವನ್ನು ವ್ಯರ್ಥ ಮಾಡಬೇಕಾಯಿತು.
  • ಮುಖ್ಯ ನ್ಯಾಯಮೂರ್ತಿ: ನಿಮ್ಮ ಅರ್ಜಿಯನ್ನು ನಾವು ಪರಿಗಣಿಸುತ್ತೇವೆ. ಈಗಾಗಲೇ ಸರ್ಕಾರದಿಂದ ವರದಿ ಕೇಳಿದ್ದೇವೆ.

     

  • ಝಾ: ಇನ್ನೂ 10 ನಿಮಿಷಗಳು ಬೇಕು.

     

  • ಮುಖ್ಯ ನ್ಯಾಯಮೂರ್ತಿ: ನಾವು ನಿಮ್ಮ ವಾದವನ್ನು ಆಲಿಸಿದ್ದೇವೆ.
  • ಹಿರಿಯ ವಕೀಲ ಎ.ಎಂ. ದಾರ್ (ಝಾ ಅವರ ವಾದಗಳಿಗೆ ಆಕ್ಷೇಪಣೆ ಮಾಡುತ್ತಾ):ನನ್ನ ಸ್ನೇಹಿತ ಹಿರಿಯ ವಕೀಲರಿಗೆ ಕೆಲವು ಉದ್ದೇಶಗಳಿವೆ ಎಂದು ಆರೋಪಿಸಿದ್ದಾರೆ. ಇದು ಸರಿಯಲ್ಲ. ನಾವು ನಿಯಮದಂತೆ ಮುಂದುವರೆಯೋಣ.
  • ಝಾ: ಇಲ್ಲ, ಇಲ್ಲ…ಮಿಸ್ಟರ್ ಧರ್..ನಮಗೆ ತುಸು ವರ್ಷಗಳ ಅಭ್ಯಾಸವಿದೆ.
  • ಝಾ ಅವರು ಮಲೇಷಿಯಾದ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸುತ್ತಾರೆ.

     

  • ನ್ಯಾಯಮೂರ್ತಿ ದೀಕ್ಷಿತ್: ವಕೀಲರು ವೀಸಾ ಇಲ್ಲದೆ ವಿದೇಶಗಳಿಗೆ ಪ್ರಯಾಣಿಸುತ್ತಿದ್ದಾರೆ.
  • ಝಾ ಅವರು ಮಲೇಷಿಯಾದ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸುತ್ತಾ, ಪ್ರವಾದಿಯವರು ಧರಿಸಿದ್ದಕ್ಕಾಗಿ ಮುಸ್ಲಿಂ ಹುಡುಗ ಪೇಟ ಧರಿಸುವುದು ಅನಿವಾರ್ಯವಲ್ಲ ಎಂದು ಹೇಳುತ್ತಾರೆ.
  • ಝಾ: ಇದು ಧರ್ ಮತ್ತು ಇತರರಿಗೆ ಉತ್ತರವಾಗಿದೆ.
  • ಝಾ: ನಾವು ಇಸ್ಲಾಂನಿಂದ ಮಾತನಾಡಲು ಪ್ರಾರಂಭಿಸಿದರೆ, ಅದು ಸೌದಿ ಅರೇಬಿಯಾದಲ್ಲಿ ಹುಟ್ಟಿಕೊಂಡಿತು. ಅಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ಮಹಿಳೆಯರಿಗೆ ವಾಹನ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಸಾವಿರಾರು ಮಹಿಳೆಯರು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದರು. ಸೌದಿ ರಾಜಕುಮಾರ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ದೇಶ ಮೊದಲು. ನೀವು ಮೊದಲು ದೇಶದ ಕಾನೂನನ್ನು ಅನುಸರಿಸಬೇಕು.
  • ಮುಖ್ಯ ನ್ಯಾಯಮೂರ್ತಿ: ಸರಿ, ಸರಿ.
  • ಮುಖ್ಯ ನ್ಯಾಯಮೂರ್ತಿ: ನಾವು ಇಂದು ಪ್ರಕರಣವನ್ನು ಮುಗಿಸುತ್ತಿದ್ದೇವೆ. ಇಂದೇ ತೀರ್ಪನ್ನು ಕಾಯ್ದಿರಿಸುತ್ತೇವೆ.
  •  

    ವಕೀಲ ಮೊಹಮ್ಮದ್‌ ತಾಹಿರ್ ಕೆಲವು ವಾಸ್ತವಿಕ ಸ್ಪಷ್ಟೀಕರಣವನ್ನು ಮಾಡಲು ಸಮಯವನ್ನು ಕೇಳುತ್ತಾರೆ. ಪೀಠವೂ ಇದಕ್ಕೆ ಅನುಮತಿಸುತ್ತದೆ.

  • ಕಾಲೇಜು ಅಭಿವೃದ್ಧಿ ಸಮಿತಿ ಮಾಡಿರುವ ಸಮವಸ್ತ್ರ ನಿರ್ಣಯವನ್ನು ಪ್ರಕರಣದ ಉದ್ದೇಶಕ್ಕಾಗಿ ತಯಾರಿಸಲಾಗಿದೆ ಎಂದು ತಾಹಿರ್ ವಾದಿಸುತ್ತಾರೆ. “ಇದನ್ನು ನಾನು ದಾಖಲೆಯಿಂದಲೇ ಸಾಬೀತುಪಡಿಸಬಲ್ಲೆ. ಹಲವು ವರ್ಷಗಳ ಹಿಂದೆ ಸಮವಸ್ತ್ರ ಸೂಚಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಧರಿಸಿರುವ ದಾಖಲೆಯನ್ನು ತಿರುಚಲಾಗಿದೆ” ಎಂದು ಅವರು ಹೇಳುತ್ತಾರೆ

     

  • ವಕೀಲ ಎಸ್.ಎಸ್.ನಾಗಾನಂದ್: ಅವರು ತೋರಿಸುತ್ತಿರುವ ದಾಖಲೆಯಲ್ಲಿ ಮುದ್ರಣ ದೋಷವಿದೆ. ಅದನ್ನು ಅವರು ಉಲ್ಲೇಖಿಸುತ್ತಿದ್ದಾರೆ. ನಾನು ದಾಖಲೆ ಸಲ್ಲಿಸಿರುವೆ.
  • ತಾಹೀರ್:‌ ಎಲ್ಲರೂ ಅದೇ ರೀತಿಯ ತಪ್ಪು ಮಾಡಲಾಗದು.
  • ನಾಗಾನಂದ್‌: ಟೈಪ್‌ ಮಾಡುವ ಸಮಸ್ಯೆಯಾಗಿದೆ. ಕನ್ನಡ ಅವತರಣಿಕೆಯಲ್ಲಿ ದಿನಾಂಕ ಸರಿ ಇದೆ.
  • ವಾದ ಮಂದುವರಿಸಿದ ತಾಹೀರ್‌.
  • “ಭುಜದ ಮೇಲೆ ಶಾಲು” ಎಂದು ಹೇಳುವ ನಿರ್ಣಯದ ಪದವನ್ನು ಉಲ್ಲೇಖಿಸುವ ತಾಹಿರ್‌, ಸಮವಸ್ತ್ರವನ್ನು ಸೂಚಿಸಲು ಬಯಸಿದರೆ ಅದನ್ನು ಎಲ್ಲಿ ಧರಿಸಬೇಕೆಂದು ಅವರು ಹೇಳುವುದಿಲ್ಲ. 2013-18ರಲ್ಲಿ ಬೇರೊಬ್ಬ ಶಾಸಕರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರ ಅವಧಿಯಲ್ಲಿ ಯಾವುದೆ ನಿರ್ಣಯವನ್ನು ಮಾಡಿರಲಿಲ್ಲ.
  • ತಾಹಿರ್: ಕಾಲೇಜು ಅಭಿವೃದ್ಧಿ ಸಮಿತಿ 2014 ರಲ್ಲಿ ಜಾರಿಗೆ ಬಂತು. ಅದಕ್ಕೂ ಮೊದಲು ಯಾವುದೇ ಕಾಲೇಜು ಅಭಿವೃದ್ಧಿ ಸಮಿತಿ ಇರಲಿಲ್ಲ.

     

  • ಮುಖ್ಯ ನ್ಯಾಯಮೂರ್ತಿ: 2014 ರ ಮೊದಲು ಯಾವುದಿತ್ತು.
  • ಅಡ್ವೋಕೇಟ್‌ ಜನರಲ್‌: ಈ ಮೊದಲು ಸಮಿತಿಯನ್ನು “ಕಾಲೇಜ್‌ ಬೆಟರ್‌ಮೆಂಟ್‌ ಕಮಿಟಿ” ಎಂದು ಕರೆಯಲಾಗುತ್ತಿತ್ತು.
  • ತಾಹಿರ್: ಅದಕ್ಕೂ ಮೊದಲು ಅಂತಹ ಸಮಿತಿ ಇರಲಿಲ್ಲ. 2014 ರಲ್ಲಿ ಇಂತಹ ಅಧಿಕಾರವನ್ನು ನೀಡಲಾಗಿದೆ.
  • ತಾಹಿರ್: ಹಿಜಾಬ್ ಅತ್ಯಗತ್ಯ ಎಂದು ಕೋರ್ಟ್ ಘೋಷಿಸಿದರೆ, ಅದನ್ನು ಎಲ್ಲರೂ ಧರಿಸಬೇಕಾಗುತ್ತದೆ ಮತ್ತು ಅದನ್ನು ಧರಿಸದ ಇತರ ಮುಸ್ಲಿಂ ಮಹಿಳೆಯರ ಹಿತಾಸಕ್ತಿಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಅಡ್ವೋಕೇಟ್‌ ಹೇಳಿದ್ದಾರೆ. ನಮಾಜ್‌ ಇಸ್ಲಾಮಿನ ಅವಿಭಾಜ್ಯ ಅಂಗವಾಗಿದೆ ಎಂಬುವುದರ ಬಗ್ಗೆ ಯಾರಿಗೂ ತಕರಾರು ಇಲ್ಲ. ಎಷ್ಟೋ ಜನರು ನಮಾಜ್‌ ಮಾಡುವುದಿಲ್ಲ. ಆದ್ದರಿಂದ ಅವರು ಇಸ್ಲಾಂ ಧರ್ಮದಿಂದ ಹೊರಬರುತ್ತಾರೆಯೆ, ಅವರನ್ನು ಯಾರಾದರೂ ಮುಸ್ಲಿಂ ಅಲ್ಲ ಎಂದು ಯಾರಾದರೂ ಹೇಳುತ್ತಾರೆಯೆ?.
  • ತಾಹಿರ್: ಹಿರಿಯ ವಕೀಲರೊಬ್ಬರು ಜಾತ್ಯತೀತತೆಗೆ ಒತ್ತು ನೀಡಿದ್ದಾರೆ. ಮೊದಲ ಪ್ರಶ್ನೆ ನಮ್ಮ ಸಂಸ್ಥೆ ನಿಜವಾಗಿಯೂ ಜಾತ್ಯತೀತವೇ? ಸರಸ್ವತಿ ಪೂಜೆ ಮತ್ತು ಆಯುಧ ಪೂಜೆಗೆ ಅವಕಾಶವಿದೆ, ಯಾರ ಹಕ್ಕುಗಳಿಗೂ ಅಡ್ಡಿಯಾಗದ ಆಚರಣೆಗಳಿಗೆ ಅವಕಾಶ ನೀಡಬಹುದು ಎಂದು ಕೋರ್ಟ್ ಹೇಳಿದೆ.
  • ತಾಹಿರ್: ಈ ನಿರ್ದಿಷ್ಟ ಸರ್ಕಾರಿ ಆದೇಶ, ಪರೋಕ್ಷವಾಗಿ ತಾರತಮ್ಯದ ಮಾಡುವ ಪ್ರಕರಣವಾಗಿದೆ. ಆಪರೇಟಿವ್ ಭಾಗವು ನಾವು ಸಮಿತಿಗೆ ನೀಡುತ್ತಿದ್ದೇವೆ ಎಂದು ಹೇಳುತ್ತಿದೆ ಎಂದು ಸರ್ಕಾರ ಹೇಳುತ್ತಿದೆ.

     

  • ಮುಖ್ಯ ನ್ಯಾಯಮೂರ್ತಿ: ಆರ್ಟಿಕಲ್ 14 ರ ಅಡಿಯಲ್ಲಿ ಯಾರೂ ತಾರತಮ್ಯದ ವಾದವನ್ನು ಎತ್ತಲಿಲ್ಲ.
  • ತಾಹಿರ್: ಜಾತ್ಯತೀತತೆಯ ಹೆಸರಿನಲ್ಲಿ ಏಕರೂಪತೆ ಎಂದರೆ ಅಲ್ಪಸಂಖ್ಯಾತರಿಗೆ ಮಾತ್ರ ನಷ್ಟವಾಗುತ್ತದೆ, ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ನಷ್ಟವಾಗುತ್ತದೆ.
  • ತಾಹಿರ್: ಮಧ್ಯಂತರ ಆದೇಶದಲ್ಲಿ, ಎರಡು ವಿಷಯಗಳನ್ನು ಉಲ್ಲೇಖಿಸಲಾಗಿದೆ, ಹಿಜಾಬ್ ಮತ್ತು ಕೇಸರಿ ಶಾಲು. ನಾವು ಕೇಸರಿ ಶಾಲುಗಳನ್ನು ಧರಿಸಲು ಬಯಸುತ್ತೇವೆ ಎಂದು ಯಾರೂ ಕೇಳಲಿಲ್ಲ. ಹಿಜಾಬ್ ಧರಿಸಿರುವ ವಿದ್ಯಾರ್ಥಿಗಳು ಮಾತ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
  • ತಾಹಿರ್: ಶಾಲೆಯು ಜಾತ್ಯತೀತ ಸ್ಥಳವಾಗಿದೆ, ಆದ್ದರಿಂದ ಸ್ಕಾರ್ಫ್‌ಗೆ ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯವು ಹೇಳುತ್ತವೆ ಎಂದು ಭಾವಿಸೋಣ. ನಾಳೆ ಸರ್ಕಾರಗಳು ಬಂದು ಈ ಮಾಲ್ ಜಾತ್ಯತೀತ ಸ್ಥಳವಾಗಿದೆ, ನಮ್ಮ ಸಂಪ್ರದಾಯಗಳು ಮನೆಯ ಒಳಗಡೆ ಇರಲಿ ಎಂದು ಹೇಳುತ್ತದೆ.
  • ವಿಚಾರಣೆ ಮುಕ್ತಾಯ. ತೀರ್ಪು ಕಾಯ್ದಿರಿಸಲಾಗಿದೆ.

     

  • ಲಿಖಿತ ಸಲ್ಲಿಕೆಗಳನ್ನು ನೀಡುವಂತೆ ನ್ಯಾಯ ಪೀಠವು ಕಕ್ಷಿದಾರರಿಗೆ ಕೇಳುತ್ತದೆ.

ಬಾಲಕಿಯನ್ನು ಮಾಧ್ಯಮದವರು ಬೆನ್ನಟ್ಟುತ್ತಿದ್ದಾರೆ: ಹೈಕೊರ್ಟ್‌ನಲ್ಲಿ ಹಿರಿಯ ವಕೀಲ ಬಾಲನ್‌

ಅಪ್‌ಡೇಟ್‌‌ – 03:35 PM

  • ಡಾ. ವಿನೋದ್ ಕುಲಕರ್ಣಿ ತಮ್ಮ PIL ನ ವಾದಗಳನ್ನು ಪ್ರಾರಂಭಿಸುತ್ತಾರೆ.
  • ಡಾ. ವಿನೋದ್ ಕುಲಕರ್ಣಿ:“ಹಿಜಾಬ್ ಧರಿಸದಿರುವುದರಿಂದ ನಮ್ಮ ರಾಜ್ಯದಲ್ಲಿ ಸಾರ್ವಜನಿಕ ಅವ್ಯವಸ್ಥೆ ಉಂಟಾಗಿದೆ. ಗಲಭೆಗಳು ನಡೆಯುತ್ತಿದೆ, ಶಿವಮೊಗ್ಗದಲ್ಲಿ ಇತ್ತೀಚೆಗೆ ಕೊಲೆಯಾಗಿದೆ. ಹಿಜಾಬ್ ಧರಿಸುವುದು ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಲ್ಲ”.
  • ಕುಲಕರ್ಣಿ: ಟರ್ಕಿ ಅಥವಾ ಇತರ ಯಾವುದೇ ದೇಶಗಳ ಸಂವಿಧಾನವನ್ನು ಗಣನೆಗೆ ತೆಗೆದುಕೊಳ್ಳುವುದು ಅಗತ್ಯವಿಲ್ಲ. ನಮ್ಮ ಸಂವಿಧಾನವು ಸರ್ವೋಚ್ಚವಾಗಿದೆ. ಪವಿತ್ರ ಕುರಾನ್ ಪ್ರಕಾರ, ಹಿಜಾಬ್ ಅನ್ನು ಹಲವಾರು ವರ್ಷಗಳಿಂದ ಆಚರಣೆ ಮಾಡಲಾಗುತ್ತಿದೆ.ಪಟ್ಟಭದ್ರ ಹಿತಾಸಕ್ತಿಗಳು ಹಚ್ಚಿದ ಕಿಡಿ ಸಮಾಜದಲ್ಲಿ ದ್ವೇಷದ ಅಣುಬಾಂಬ್ ಆಗಿ ಉರಿಯುತ್ತಿದೆ.
  • ಇದಕ್ಕೆ ಅಡ್ವೊಕೇಟ್‌ ಜನರಲ್‌ ಅಡ್ಡಿಪಡಿಸುತ್ತಾರೆ.
  • ಕುಲಕರ್ಣಿ ಅವರು ವಿದ್ಯಾರ್ಥಿಗಳಿಗೆ ಕನಿಷ್ಠ ಶುಕ್ರವಾರದಂದು ಮತ್ತು ರಂಜಾನ್ ಸಮಯದಲ್ಲಿ ಹಿಜಾಬ್ ಧರಿಸಲು ಅನುಮತಿಸುವ ಮಧ್ಯಂತರ ಆದೇಶಕ್ಕಾಗಿ ಕೇಳಿಕೊಳ್ಳುತ್ತಾರೆ.
  • ಮುಖ್ಯ ನ್ಯಾಯಮೂರ್ತಿ: ನಾವು ಅಂತಿಮ ವಿಚಾರಣೆಯ ಮಧ್ಯದಲ್ಲಿ ಇದ್ದೇವೆ. ಮಧ್ಯಂತರ ಆದೇಶದ ಪ್ರಶ್ನೆ ಇಲ್ಲ. ನಾವು ಅಂತಿಮ ತೀರ್ಪನ್ನು ನೀಡುತ್ತೇವೆ.
  • ಕುಲಕರ್ಣಿ ಅವರ ವಾದ ಮುಕ್ತಾಯ
  • ಕಾಲೇಜು ಗೇಟ್‌ಗಳಲ್ಲಿ ಹುಡುಗಿಯರು ಹಿಜಾಬ್ ತೆಗೆಯುವ ವೀಡಿಯೊಗಳು ಮತ್ತು ಚಿತ್ರಗಳನ್ನು ತೆಗೆಯದಂತೆ ಮಾಧ್ಯಮಗಳನ್ನು ನಿರ್ಬಂಧಿಸುವಂತೆ ಕೋರಿ ಹಿರಿಯ ವಕೀಲ ಎಸ್‌ ಬಾಲಕೃಷ್ಣನ್‌ PIL ಸಲ್ಲಿಕೆಗಳನ್ನು ಮಾಡುತ್ತಾರೆ. ಪಿಯು ಕಾಲೇಜಿನ ವಿದ್ಯಾರ್ಥಿಗಳು ಅಪ್ರಾಪ್ತ ವಯಸ್ಕರು ಎಂದು ಅವರು ನ್ಯಾಯಾಲಯದ ಗಮನಸೆಳೆಯುತ್ತಾರೆ.
  • ಬಾಲಕೃಷ್ಣನ್‌: ನಾನು ಕಾಲೇಜಿನ ಗೇಟಿನವರೆಗೂ ಬುರ್ಖಾ ಅಥವಾ ಹಿಜಾಬ್ ಧರಿಸಬಹುದು, ನಾನು ಕಾಲೇಜು ಪ್ರವೇಶಿಸಬಹುದು, ತಿರುಗಾಡಬಹುದು. ನ್ಯಾಯಾಲಯದ ಆದೇಶ ಕಾಲೇಜಿನ ತರಗತಿಗೆ ಮಾತ್ರ ಸೀಮಿತವಾಗಿದೆ. ಆದರೆ ವಾಸ್ತವದಲ್ಲಿ ಎಲ್ಲಾ ಕಾಲೇಜುಗಳಲ್ಲಿ ಹೀಗೆ ಆಗುತ್ತಿಲ್ಲ.
  • ಬಾಲಕೃಷ್ಣನ್‌: 14ರಿಂದ 15 ವರ್ಷದ ಬಾಲಕಿಯನ್ನು ಮಾಧ್ಯಮದವರು ಬೆನ್ನಟ್ಟುತ್ತಿದ್ದಾರೆ. ಒಬ್ಬ ಶಿಕ್ಷಕಿಯನ್ನು ಬೆನ್ನಟ್ಟಲಾಯಿತು. ಇದು ಕೋರ್ಟ್ ನೀಡಿದ ಆದೇಶವೇ. ನ್ಯಾಯಾಲಯದ ಆದೇಶ ತರಗತಿಗಳಿಗೆ ಮಾತ್ರ ಅನ್ವಯಿಸುತ್ತದೆ.
  • ಮುಖ್ಯ ನ್ಯಾಯಮೂರ್ತಿ: ಇದನ್ನು ಹೇಗೆ ನಮಗೆ ತೋರಿಸುತ್ತೀರಿ?
  • ಬಾಲಕೃಷ್ಣನ್‌: 65ಬಿ ಪ್ರಮಾಣ ಪತ್ರದ ಸಿಡಿಯನ್ನು ತಯಾರಿಸಿದ್ದೇನೆ.
  • ಮುಖ್ಯ ನ್ಯಾಯಮೂರ್ತಿ: ಅದರಲ್ಲಿ ವಿದ್ಯಾರ್ಥಿಗಳನ್ನು ಬೆನ್ನಟ್ಟುತ್ತಿರುವ ದೃಶ್ಯಗಳು ತೋರಿಸುತ್ತಿವೆಯೇ?
  • ಬಾಲಕೃಷ್ಣನ್‌: ಇದು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ. ತುಮಕೂರಿನಲ್ಲಿ ಮಗುವನ್ನು ಪೊಲೀಸರು ಅಟ್ಟಿಸಿಕೊಂಡು ಹೋಗಿದ್ದಾರೆ.
  • ಮುಖ್ಯ ನ್ಯಾಯಮೂರ್ತಿ: ನಿಮ್ಮ ಅಸಮಾಧಾನವೇನು?
  • ಬಾಲಕೃಷ್ಣನ್‌: ನನ್ನ ಖಾಸಗಿತನದ ಹಕ್ಕಿನಲ್ಲಿ ಮಧ್ಯಪ್ರವೇಶಿಸದಂತೆ ಮಾಧ್ಯಮ ಸಂಸ್ಥೆಗಳಿಗೆ ನಿರ್ಬಂಧ ಹೇರಬೇಕು ಎಂಬುದು ನನ್ನ ಕೋರಿಕೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬುರ್ಖಾ ತೆಗೆಯುವ ದೃಶ್ಯಗಳನ್ನು ಮಾಧ್ಯಮಗಳು 24/7 ತೋರಿಸುತ್ತಿವೆ.
  • ಮುಖ್ಯ ನ್ಯಾಯಮೂರ್ತಿ: ಅದು ಎಲ್ಲಿದೆ?
  • ಬಾಲಕೃಷ್ಣನ್‌: ನಾನು ಸಿಡಿಯಲ್ಲಿ ನೀಡಿದ್ದೇನೆ.
  • ಮುಖ್ಯ ನ್ಯಾಯಮೂರ್ತಿ: ಸಿಡಿ ನಾವು ಪ್ಲೇ ಮಾಡಲು ಸಾಧ್ಯವಿಲ್ಲ.
  • ಬಾಲಕೃಷ್ಣನ್‌: ದಯವಿಟ್ಟು ಸ್ಕ್ರೀನ್‌ಶಾಟ್‌ಗಳನ್ನು ನೋಡಿ.
  • ಮುಖ್ಯ ನ್ಯಾಯಮೂರ್ತಿ: ನೀವು ಅಧಿಕಾರಿಗಳಿಗೆ ದೂರು ನೀಡಿದರೆ ಅವರು ಕ್ರಮ ತೆಗೆದುಕೊಳ್ಳುತ್ತಾರೆ.
  • ನ್ಯಾಯಮೂರ್ತಿ ದೀಕ್ಷಿತ್: ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವ ವಿವಿಧ ಕಾಯ್ದೆಗಳಿವೆ, ಅದನ್ನು ಬಳಸಿಕೊಳ್ಳಿ. ಪಿಐಎಲ್ ಹಾಕುವುದಲ್ಲ. ನೀವು ಯಾವುದೇ ಪ್ರಾತಿನಿಧ್ಯ ನೀಡಿದ್ದೀರಾ?
  • ಮುಖ್ಯ ನ್ಯಾಯಮೂರ್ತಿ: ನೀವು ಪೊಲೀಸರಿಗೆ ದೂರು ನೀಡಿಲ್ಲ.
  • ಬಾಲಕೃಷ್ಣನ್‌: ಬಡವರು ಅಧಿಕಾರಿಗಳ ಬಳಿ ತೆರಳಿ ದೂರು ನೀಡುವುದು ಅಸಾಧ್ಯ.
  • ಮುಖ್ಯ ನ್ಯಾಯಮೂರ್ತಿ: ಯಾರಾದರೂ ನೊಂದಿದ್ದರೆ ಸೂಕ್ತವಾದ ಪ್ರಾಧಿಕಾರಕ್ಕೆ ದೂರು ನೀಡಬಹುದು ಎಂದು ನಾವು ಹೇಳುತ್ತೇವೆ.
  • ಬಾಲಕೃಷ್ಣನ್‌: ಮಾಧ್ಯಮಗಳು ಬೆನ್ನಟ್ಟದಂತೆ ಮಧ್ಯಂತರ ಆದೇಶ ನೀಡುವಂತೆ ಪ್ರಾರ್ಥಿಸುತ್ತೇನೆ.
  • ಮುಖ್ಯ ನ್ಯಾಯಮೂರ್ತಿ: ನೊಂದ ವ್ಯಕ್ತಿಗಳು ಸೂಕ್ತ ಅಧಿಕಾರಿಗಳ ಮುಂದೆ ದೂರು ನೀಡಬಹುದೆಂಬ ಕಾರಣದಿಂದ ನಾವು ನಿಮ್ಮ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ.

ರಾಜಕೀಯ ವ್ಯಕ್ತಿಯಾದ ಶಾಸಕನಿಗೆ ಕಾಲೇಜನ್ನು ತಟ್ಟೆಯಲ್ಲಿಟ್ಟು ನೀಡಲಾಗಿದೆ: ಹಿರಿಯ ವಕೀಲ ರವಿವರ್ಮ ಕುಮಾರ್‌‌ ವಾದ

ಅಪ್‌ಡೇಟ್‌‌ – 03:10 PM

11 ನೇ ದಿನವಾದ ಶುಕ್ರವಾರದ ವಿಚಾರಣೆ ಆರಂಭ

  • ಮುಖ್ಯ ನ್ಯಾಯಮೂರ್ತಿ: ನಾವು ಬೇಗನೆ ವಿಚಾರಣೆ ಮುಗಿಸಬೇಕು. ನಾವು ಸಂಜೆ 4 ಗಂಟೆಗೆ ಮುಗಿಸುತ್ತೇನೆ. ಆದ್ದರಿಂದ ದಯವಿಟ್ಟು ಆ ಹೊತ್ತಿಗೆ ನಿಮ್ಮ ವಾದಗಳನ್ನು ಮುಗಿಸಿ.
  • ಹಿರಿಯ ವಕೀಲ ಯೂಸುಫ್ ಮುಚ್ಚಾಲಾ ಅವರು ತಾವು ಮತ್ತೆ ಮಾಡುವುದಾಗಿ ಹೇಳುತ್ತಾರೆ.
  • ಮುಚ್ಚಾಲ: ದೇವದತ್‌ ಕಾಮತ್ ಅವರು ಅಡ್ವೊಕೇಟ್‌‌ ಜನರಲ್‌‌ ಮತ್ತು ಇತರ ಹಿರಿಯ ವಕೀಲರಿಗೆ ಸಮಗ್ರ ಉತ್ತರವನ್ನು ನೀಡಿದ್ದಾರೆ. ಅವರು ಹೇಳಿದ್ದನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ನಾನು ಕೆಲವು ವಿಷಯಗಳನ್ನು ಸೇರಿಸಲು ಬಯಸುತ್ತೇನೆ. ನಾನು ಸಂಕ್ಷಿಪ್ತವಾಗಿ ಹೇಳುತ್ತೇನೆ.
  • ಅರ್ಜಿದಾರರು ಸಾಮಾನ್ಯ ಘೋಷಣಾ ಪರಿಹಾರವನ್ನು ಕೋರಿಲ್ಲ ಮತ್ತು ಸರ್ಕಾರಿ ಆದೇಶವನ್ನು ಅನ್ನು ರದ್ದುಗೊಳಿಸಲು ಮತ್ತು ಹಿಜಾಬ್‌ನೊಂದಿಗೆ ತರಗತಿಗಳಿಗೆ ಹಾಜರಾಗಲು ಅನುಮತಿಯನ್ನು ಕೋರಿದ್ದಾರೆ ಎಂದು ಮುಚ್ಚಲಾ ಹೇಳುತ್ತಾರೆ.
  • ಮುಚ್ಚಾಳ: ನಾವು ತಲೆಗೆ ಮಾತ್ರ ಸ್ಕಾರ್ಫ್ ಹಾಕಿಕೊಂಡಿದ್ದೇವೆ, ಅದು ತಲೆಯ ಮೇಲೆ ಹಾಕುವ ಬಟ್ಟೆಯ ತುಂಡು ಹೊರತು ಮುಖವನ್ನು ಮುಚ್ಚುವುದಿಲ್ಲ. ಹಿಜಾಬ್‌ ಅನ್ನು ಬಳಸಲು ಅನುಮತಿ ನೀಡಬೇಕು. ಹಾಗೆ ಮಾಡದಂತೆ ಕಾಲೇಜು ತಡೆಯುವುದು ಸರಿಯಲ್ಲ.
  • ಮುಚ್ಚಾಳ : ಇದು ಆತ್ಮಸಾಕ್ಷಿಯ ಪ್ರಾಮಾಣಿಕ ಆಚರಣೆಯಾಗಿದ್ದರೆ, ಅದನ್ನು 25 ನೇ ವಿಧಿಯ ಅಡಿಯಲ್ಲಿ ಅನುಮತಿಸಬೇಕು. ಇದು ಅತ್ಯಗತ್ಯ ಧಾರ್ಮಿಕ ಆಚರಣೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸುವ ಅಗತ್ಯವಿಲ್ಲ.
  • ಮುಖ್ಯ ನ್ಯಾಯಮೂರ್ತಿ: ನಿಮ್ಮ ವಾದ ನಮಗೆ ನೆನಪಿದೆ. ದಯವಿಟ್ಟು ಪುನರಾವರ್ತಿಸಬೇಡಿ.
  • ಮುಚ್ಚಾಳ: ಈಗ ನೆನಪಿಸುತ್ತಿದ್ದೇನೆ ಅಷ್ಟೆ.
  • ಮುಚ್ಚಾಳ: ನನ್ನ ಮನವಿಯನ್ನು ಪರಿಗಣಿಸುವವರೆಗೆ ಅತ್ಯಗತ್ಯ ಧಾರ್ಮಿಕ ಆಚರಣೆ ಬಗ್ಗೆ ಹೇಳುವ ಅಗತ್ಯವಿಲ್ಲ ಎಂಬುದು ನಮ್ಮ ನಿಲುವು, ಆದರೆ ನ್ಯಾಯಾಲಯವು ಅತ್ಯಗತ್ಯ ಧಾರ್ಮಿಕ ಆಚರಣೆಯನ್ನು ಪರಿಗಣಿಸುವ ಅಗತ್ಯವಿದೆ ಎಂದು ಭಾವಿಸಿದರೆ ನಾನು ದೇವದತ್‌‌ ಕಾಮತ್ ಅವರ ವಾದಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ.
  • ನಿಜವಾದ ಇಸ್ಲಾಮಿಕ್ ಸಂಪ್ರದಾಯಕ್ಕೆ ತಲೆಗೆ ಬಟ್ಟೆ ಹಾಕುವ ಅಗತ್ಯವಿದೆ ಎಂದು ವಿದ್ವಾಂಸ ಮುಹಮ್ಮದ್ ಪಿಕ್‌ಥಾಲ್ ಅವರ ಹೇಳಿಕೆಯನ್ನು ಮುಚ್ಚಾಳ ಉಲ್ಲೇಖಿಸುತ್ತಾರೆ. ಇದನ್ನು ಸರ್ಕಾರವು ತನ್ನ ಉತ್ತರದಲ್ಲಿ ಅನುಮೋದನೆಯೊಂದಿಗೆ ಉಲ್ಲೇಖಿಸಿದೆ ಎನ್ನುತ್ತಾರೆ.
  • ಮುಚ್ಚಾಳ: ಹದೀಸ್ ಕೂಡ ಮುಖವನ್ನು ಮುಚ್ಚಬೇಕಾಗಿಲ್ಲ ಆದರೆ ಹಿಜಾಬ್ ಧರಿಸಬೇಕು ಎಂದು ಸಾಬೀತು ಪಡಿಸುತ್ತದೆ. ಹಲವಾರು ಧರ್ಮ ಸಂಪ್ರದಾಯಗಳಿವೆ, ಇದನ್ನು ಸರ್ಕಾರವು ತಮ್ಮ ಉತ್ತರದಲ್ಲಿ ಒಪ್ಪಿಕೊಂಡಿದೆ.
  • ಶಬರಿಮಲೆ ಪ್ರಕರಣದಲ್ಲಿ ನ್ಯಾಯಮೂರ್ತಿ ನಾರಿಮನ್ ಅವರ ತೀರ್ಪನ್ನು ಮುಚ್ಚಳಾ ಉಲ್ಲೇಖಿಸುತ್ತಾ: “ಅಗತ್ಯವಾದ ಆಚರಣೆ ಯಾವುದು ಎಂಬ ಬಗ್ಗೆ ನ್ಯಾಯಾಲಯವು ಸಾಮಾನ್ಯ ಸಂವೇದನಾಶೀಲ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು”. ನಾವು ಬಟ್ಟೆಯ ತುಂಡನ್ನು ಮಾತ್ರ ಇಟ್ಟುಕೊಳ್ಳುತ್ತೇವೆ.
  • ದೇವತಾಶಾಸ್ತ್ರದ ಚರ್ಚೆಗಳಿಗೆ ಪ್ರವೇಶಿಸದಂತೆ ನ್ಯಾಯಾಲಯವು ಜಾಗರೂಕರಾಗಿರಬೇಕು ಮತ್ತು ಆರಾಧಕನ ನಂಬಿಕೆ ಮತ್ತು ನಂಬಿಕೆಯು ಪ್ರಾಮಾಣಿಕವಾಗಿ ನಡೆಯುತ್ತದೆಯೇ ಎಂದು ಮಾತ್ರ ನೋಡಬೇಕು ಎಂದು ಮುಚ್ಚಾಳ ಅಯೋಧ್ಯೆ ಪ್ರಕರಣದ ಅವಲೋಕನಗಳನ್ನು ಉಲ್ಲೇಖಿಸುತ್ತಾನೆ.
  • “.. ಈ ನ್ಯಾಯಾಲಯವು ದೇವತಾಶಾಸ್ತ್ರದ ಕ್ಷೇತ್ರವನ್ನು ಪ್ರವೇಶಿಸುವುದು ಮತ್ತು ಹದೀಸ್‌ನ ವ್ಯಾಖ್ಯಾನಕಾರನ ಪಾತ್ರವನ್ನು ವಹಿಸುವುದು ಸೂಕ್ತವಲ್ಲ. ನಂಬುವ ಮತ್ತು ಆರಾಧಿಸುವವರಿಗೆ ಧಾರ್ಮಿಕ ಪರಿಣಾಮಕಾರಿತ್ವದಲ್ಲಿ ನಂಬಿಕೆ ಇದೆಯೇ ಎಂಬುದು ನಿಜವಾದ ಪರೀಕ್ಷೆ” ಎಂದು ಅಯೋಧ್ಯೆ ತೀರ್ಪಿನ ಭಾಗವನ್ನು ಮುಚ್ಚಾಳ ಉಲ್ಲೇಖಿಸುತ್ತಾರೆ.
  • ಮುಚ್ಚಾಳ: ಇಲ್ಲಿನ ನಂಬಿಕೆ ಮತ್ತು ವಿಶ್ವಾದ ವಿಷಯವಾಗಿದೆ. ಕುರಾನ್‌ನಲ್ಲಿ ಹೇಳಿರುವಂತೆ ಬಟ್ಟೆ ಧರಿಸಬೇಕು ಮತ್ತು ಹಿಜಾಬ್ ಧರಿಸಬೇಕು. ಇದನ್ನು ನ್ಯಾಯಾಲಯವು ಗೌರವಿಸಬೇಕು. ಕುರಾನ್‌ನಲ್ಲಿ ಹೇಳಿರುವುದು ಕಡ್ಡಾಯವಲ್ಲ ಎಂದು ಅಡ್ವೋಕೇಟ್‌ ಜನರಲ್‌ ಹೇಳಿಕೆ ನೀಡಿದ್ದು ಶಾಯಿರಾ ಬಾನೊ ಪ್ರಕರಣದಲ್ಲಿ ವ್ಯತಿರಿಕ್ತವಾಗಿದೆ. ಕುರಾನ್, ಹದೀಸ್ ಮತ್ತು ಇಮಾದಲ್ಲಿ ಏನು ಹೇಳಲಾಗಿದೆಯೋ ಅದನ್ನು ಪಾಲಿಸಬೇಕು. ಅಷ್ಟೇ.
  • ಮುಚ್ಚಾಳ ತನ್ನ ಪ್ರತ್ಯುತ್ತರ ವಾದವನ್ನು ಮುಗಿಸುತ್ತಾರೆ.
  • ಹಿರಿಯ ವಕೀಲ ಪ್ರೊಫೆಸರ್ ರವಿವರ್ಮ ಕುಮಾರ್ ಅವರಿಂದ ಪ್ರತ್ಯುತ್ತರ ಪ್ರಾರಂಭಿಸುತ್ತಾರೆ.
  • ರವಿವರ್ಮ: “ಕಾಲೇಜು ಅಭಿವೃದ್ದಿ ಸಮಿತಿಗೆ ಅಧಿಕಾರವನ್ನು ನೀಡುವ ಆದೇಶವನ್ನು ಯಾವುದೇ ನಿರ್ದಿಷ್ಟ ನಿಬಂಧನೆಗಳಿಂದ ಪಡೆಯಲಾಗುವುದಿಲ್ಲ ಎಂದು ಹೇಳಲು ಅಡ್ವೋಕೇಟ್‌ ಜನರಲ್‌ ಪ್ರಯತ್ನಿಸಿದ್ದಾರೆ. ಆದರೆ ತೊಂದರೆಗಳ ಷರತ್ತನ್ನು ತೆಗೆದುಹಾಕುವುದರಿಂದ ಇದನ್ನು ಪಡೆಯಬಹುದು ಎಂದು ಅವರು ಹೇಳಿದರು”.
  • ನ್ಯಾಯಮೂರ್ತಿ ದೀಕ್ಷಿತ್‌: ನಮಗೆ ಅಡ್ವೋಕೇಟ್‌ ಜನರಲ್ ಅವರು ಈ ಹೇಳಿಕೆಯು ಖಂಡಿತವಾಗಿಯೂ ಸಂತೃಪ್ತಿಯಾಗಿಲ್ಲ. ಹೀಗಾಗಿ, ನೀವು ಇತರೆ ಅಂಶಗಳ ಬಗ್ಗೆ ಮಾತನಾಡಿ.
  • ರವಿವರ್ಮ: ಇನ್ನೊಂದು ವಿಷಯವೆಂದರೆ ಪೂವಯ್ಯ ಅವರು ಸ್ಥಳೀಯ ಶಾಸಕರು ಅಧಿಕಾರ ಹಂಚಿಕೆ ಮಾಡಿರುವುದು ಸಂವಿಧಾನಕ್ಕೆ ವಿರುದ್ಧವಾಗಿಲ್ಲ ಎಂದು ಹೇಳಿದ್ದಾರೆ. ದಯವಿಟ್ಟು ಕಾಲೇಜು ಅಭಿವೃದ್ಧಿ ಸಮಿತಿಯ ರಚನೆಯನ್ನು ನೋಡಿ. ಅಧ್ಯಕ್ಷರು ಸ್ಥಳೀಯ ಶಾಸಕರಾಗಿರುತ್ತಾರೆ, ಒಬ್ಬರು ನಾಮನಿರ್ದೇಶಿತ ಸದಸ್ಯ, ಶಾಸಕರ ಸ್ಥಳೀಯ ಪ್ರತಿನಿಧಿಯಾದ ಉಪಾಧ್ಯಕ್ಷರು. ಸದಸ್ಯರ ನಾಲ್ಕು ನಾಮನಿರ್ದೇಶಿತರು. ಇಲ್ಲಿ ಶಾಸಕರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ರಾಜಕೀಯ ವ್ಯಕ್ತಿಯಾಗಿರುವ ಶಾಸಕರಿಗೆ ಕಾಲೇಜನ್ನು ತಟ್ಟೆಯಲ್ಲಿ ನೀಡಲಾಗಿದೆ. ಶಾಸಕರ ನಿರ್ಧಾರವನ್ನು ಅನುಷ್ಠಾನಗೊಳಿಸಲು ಪ್ರಾಂಶುಪಾಲರಿದ್ದಾರೆ.
  • ಕುಮಾರ್: ಶಾಸಕರಿಗೆ ಕಾರ್ಯಾಂಗದ ಅಧಿಕಾರ ನೀಡುವುದು ಒಪ್ಪುವಂಥದ್ದಲ್ಲ. ಕಾಲೇಜಿನ ಮೇಲೆ ನಿರಂಕುಶ ಪ್ರಭುವಿನಂತೆ ಕಾರ್ಯನಿರ್ವಹಿಸುವ ಶಾಸಕರಿಗೆ ಯಾವುದೇ ಹೊಣೆಗಾರಿಕೆ ಇಲ್ಲ. ಅವರ ಮೇಲೆ ಯಾವುದೆ ನಿಯಂತ್ರಣವಿಲ್ಲ. ಶಾಸಕರಿಗೆ ನಿಯಂತ್ರಣ ನೀಡುವುದು ಅನಾಹುತಕಾರಿಯಾಗಿದೆ. ಶಾಸಕರನ್ನು ಯಾರಿಗಾದರೂ ಹೊಣೆಗಾರರನ್ನಾಗಿ ಮಾಡಬೇಕು.

ವಾದ ಪೂರ್ಣಗೊಳಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್‌.


 

ಅಪ್‌ಡೇಟ್‌ – 02:30 PM

ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮಾಡಿರುವುದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ರಾಜ್ಯ ಹೈಕೋರ್ಟ್‌ 11 ದಿನವಾದ ಶುಕ್ರವಾರ ಮುಂದುವರೆಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ. ಎಂ. ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠವು ಹಿಜಾಬ್‌ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ಇಂದು ವಿಚಾರಣೆಯನ್ನು ಮುಗಿಸುವ ಸಾಧ್ಯತೆಯಿದೆ.

ಗುರುವಾರ ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರು, “ನಾಳೆ ವಿಚಾರಣೆ ಮುಗಿಯಲಿದೆ” ಎಂದು ಹೇಳಿದ್ದರು.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...