Homeಮುಖಪುಟಬಡತನ, ಸಾಂಕ್ರಾಮಿಕ ಮತ್ತು ಮತ ಮಾರಾಟ; ಮಣಿಪುರ ಚುನಾವಣೆ 2022

ಬಡತನ, ಸಾಂಕ್ರಾಮಿಕ ಮತ್ತು ಮತ ಮಾರಾಟ; ಮಣಿಪುರ ಚುನಾವಣೆ 2022

- Advertisement -
- Advertisement -

ಮಣಿಪುರದಲ್ಲಿ ಇತ್ತೀಚಿಗೆ ನಡೆದ ಚುನಾವಣೆಯ ಫಲಿತಾಂಶವು, ಎಲ್ಲ ವಯೋಮಾನದ ಶಿಕ್ಷಿತ ಸಮುದಾಯವನ್ನು ಅಚ್ಚರಿ ಮತ್ತು ಆಳವಾದ ಆತ್ಮಾವಲೋಕನಕ್ಕೆ ದೂಡಿದೆ. ಚುನಾವಣಾ ಫಲಿತಾಂಶವು ನೈಜ ಜಗತ್ತಿನ ಅನುಭವವಾಗಿದ್ದು, ಶಿಕ್ಷಿತ ಮತ್ತು ಬುದ್ಧಿಜೀವಿ ವರ್ಗಗಳು ಈಗ ಈ ಅನಿರೀಕ್ಷಿತ ಫಲಿತಾಂಶಕ್ಕೆ ಸರಿಹೊಂದುವ ರೀತಿಯ ವ್ಯಾಖ್ಯಾನಗಳನ್ನು ಮತ್ತು ಕಾರಣಗಳನ್ನು ಹುಡುಕುವಲ್ಲಿ ನಿರತವಾಗಿವೆ.

ಚುನಾವಣೆಗಳು ಪ್ರಜಾಪ್ರಭುತ್ವದಲ್ಲಿನ ಪ್ರಕ್ರಿಯೆಯಾಗಿ, ಅತಿ ಕಡಿಮೆ ಸಮಯದಲ್ಲಿ ಬಹಳ ಆಳವಾದ ಮತ್ತು ವಿಸ್ತಾರವಾದ ಬದಲಾವಣೆಯ ಚಲನಶೀಲ ಶಕ್ತಿಯನ್ನು ಹೊಂದಿರುವ ಪ್ರಕ್ರಿಯೆಗಳಾಗಿವೆ. ಚುನಾವಣೆ ನಡೆದ ದಿನಗಳನ್ನು ಮತ್ತು ಅದರ ಹಿಂದಿನ ಕೆಲವು ದಿನಗಳನ್ನು ಮಣಿಪುರದಲ್ಲಿ ಈ ಹಿಂದೆಂದೂ ಕಾಣದಿದ್ದಷ್ಟು ಹಿಂಸೆಯ ದಿನಗಳನ್ನಾಗಿ ಗುರುತಿಸಬಹುದಾಗಿದೆ. ಇದರಲ್ಲಿ ಮೂರು ಅಂಶಗಳಿವೆ. ಮೊದಲನೆಯದಾಗಿ, ಬಿಜೆಪಿಯ ಮತ್ತು ಆಡಳಿತಾರೂಢ ಪಕ್ಷದ ಸದಸ್ಯರುಗಳಾಗಿ ಧಮ್ಕಿಯ-ಬೆದರಿಕೆಯ ರೀತಿಯ ಭಾಷಾಪ್ರಯೋಗವನ್ನು ಯಾವುದೇ ಅಂಜಿಕೆಯಿಲ್ಲದೆ ಮಾಡಿದ್ದು ಮತ್ತು ಅದನ್ನು ಕಾರ್ಯರೂಪಕ್ಕೂ ತಂದಿದ್ದು. ಎರಡನೆಯದಾಗಿ, ಬಹಳಷ್ಟು ಪ್ರಕರಣಗಳಲ್ಲಿ, ಈ ರೀತಿಯ ಹಲ್ಲೆಗಳಿಗೆ ಒಳಗಾಗಿದ್ದು ಹಿಂಸೆಗೆ ಹೆಸರಾದ ಕ್ಷೇತ್ರಗಳಲ್ಲಿ ಮತ್ತು ಬಿಜೆಪಿಯ ವಿರುದ್ಧವಾಗಿ ಸಮರ್ಥ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದ್ದ ಪಕ್ಷಗಳ ನಾಯಕರು ಮತ್ತು ಬೆಂಬಲಿಗರು. ಮೂರನೆಯದಾಗಿ, ತನ್ನ ಚುನಾವಣಾ ಪ್ರಣಾಳಿಕೆಯನ್ನು ಕೊನೆಯ ಕ್ಷಣದವರೆಗೂ ಬಿಡುಗಡೆಗೊಳಿಸದೆ ವಿಳಂಬಿಸುವ ಮೂಲಕ ಬಿಜೆಪಿ ಮುಕ್ತ ಸಾರ್ವಜನಿಕ ಚರ್ಚೆಗಳ ಸಾಧ್ಯತೆಗಳನ್ನು ಕ್ಷೀಣಗೊಳಿಸಿತು ಮತ್ತು ಬಿಜೆಪಿಯನ್ನು ಒಂದು ರಾಜಕೀಯ ಪಕ್ಷವೆಂದಾಗಲೀ ಅಥವಾ ಸರ್ಕಾರವನ್ನು ಮುನ್ನಡೆಸುತ್ತಿದ್ದ ಪಕ್ಷವೆಂದಾಗಲಿ ತಿಳಿದು ಅದರ ನಿಲುವುಗಳನ್ನು, ಸಾಧನೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸುವುದನ್ನು ತಡೆಹಿಡಿಯಲಾಯಿತು.

ಬೆದರಿಕೆ-ಧಮ್ಕಿ ಮತ್ತು ಹಲ್ಲೆ-ಹಿಂಸೆಗಳನ್ನು ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಬಳಸಿ ಚುನಾವಣೆಯ ಫಲಿತಾಂಶಗಳನ್ನು ಬದಲಾಯಿಸುವ ಕಾರ್ಯತಂತ್ರದ ಹಿನ್ನೆಲೆಯಲ್ಲಿ, ಶಿಕ್ಷಿತ ಮತ್ತು ತಿಳಿವಳಿಕೆಯುಳ್ಳ ಮತದಾರರಲ್ಲಿ ಬಹುತೇಕರು ಬಿಜೆಪಿಯು ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದು ಅನುಮಾನ ಎಂದೇ ಭಾವಿಸಿದ್ದರು. ಯಾವುದೇ ಪಕ್ಷ ಸರಳ ಬಹುಮತ ಸಾಧಿಸದೆ ಅತಂತ್ರ ವಿಧಾನಸಭೆಗೆ ಕಾರಣವಾಗುತ್ತದೆಯೆಂದೂ, ಅದರಲ್ಲೂ, 60 ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ 15ರಲ್ಲಿ ಗೆಲುವು ಸಾಧಿಸುವುದೆಂದೇ ಬಹಳಷ್ಟು ಲೆಕ್ಕಾಚಾರಗಳು ಸೂಚಿಸಿದ್ದವು. ಆದರೆ 60 ಕ್ಷೇತ್ರಗಳಲ್ಲಿ 32ನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಿಜೆಪಿಯು ಸರಳ ಬಹುಮತ ಸಾಧಿಸಿದೆ.

ಶಿಕ್ಷಿತ ಮತ್ತು ತಿಳಿದ ಎಲೈಟ್ ವರ್ಗದ ನಿರೀಕ್ಷೆಯು ಪೂರಾಪೂರ ಹುಸಿಯಾಗಿರುವುದು, ಈ ವರ್ಗದ ಜನರಲ್ಲಿ ಸಾಮಾನ್ಯ ಮತದಾರರ ಮನಸನ್ನು ಪ್ರಭಾವಿಸಿರುವುದು ಏನೆಂಬ ಯಕ್ಷಪ್ರಶ್ನೆಯೊಂದು ಮೂಡಿ ಕಾಡುತ್ತಿದೆ. ಇಲ್ಲಿ, ಸೂಕ್ಷ್ಮವಾಗಿ ಗಮನಿಸಿದರೆ, ಈ ಪ್ರಭಾವವು ಕೆಲಸ ಮಾಡಿರುವುದು ಮತದಾನ ನಡೆದ ಎರಡು ಹಂತಗಳ ಮುಂಚಿನ ಸುಮಾರು 5-6 ದಿನಗಳಲ್ಲಿ ಮಾತ್ರ ಎಂಬುದು ತಿಳಿಯುತ್ತದೆ. ಶಿಕ್ಷಿತ ಸಮುದಾಯವು ತಮ್ಮನ್ನು ಬೆಂಬಲಿಸುತ್ತಿಲ್ಲ ಎಂಬುದನ್ನು ಆರಂಭದಲ್ಲೇ ಬಿಜೆಪಿಯು ಮನಗಂಡಂತಿದೆ. ಆದಕಾರಣ ಶಿಕ್ಷಿತ ಸಮುದಾಯವನ್ನು ಬಿಟ್ಟು ಇತರೆ ಮತ ಗುಂಪುಗಳ ಬಗ್ಗೆ ಗಮನ ಹರಿಸಿದೆ.

ಆಗ ಮೂರು ಮತ ಗುಂಪುಗಳು ಬಹುಮುಖ್ಯವಾಗಿರುವುದು ಗೋಚರಿಸುತ್ತದೆ ಮತ್ತು ಅದು ಬಿಜೆಪಿಯ ಪರ ಮತಗಳು ಬೀಳುವುದನ್ನು ಖಾತ್ರಿಪಡಿಸಿದ್ದು ಕಂಡುಬರುತ್ತದೆ.

ಒಂದು, ಒಟ್ಟು ಮತದಾರರಲ್ಲಿ ಸುಮಾರು 80%ರಷ್ಟಿರುವವರು ಬಡ ಕುಟುಂಬಗಳು. ಇನ್ನುಳಿದ 20% ಮತದಾರರಲ್ಲಿ ಅರ್ಧದಷ್ಟು ಮಾತ್ರ (10%) ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ನಿಲುವುಗಳನ್ನು ಹೊಂದಿದ್ದು ಇನ್ನುಳಿದ 10% ಮತದಾರರು ಯಾವುದೇ ಪಕ್ಷಕ್ಕೂ ಮತ ಚಲಾಯಿಸುವವರಾಗಿದ್ದರು. (ಅಂದರೆ ಬೇರೆಬೇರೆ ಪ್ರಭಾವಕ್ಕೆ ಒಳಗಾಗುವಂತವರು.) ಎರಡನೆಯದಾಗಿ, ನಿರೀಕ್ಷೆಯಂತೆಯೇ, ಸಾಮೂಹಿಕ ನಿರುದ್ಯೋಗದ ಸಮಸ್ಯೆಯ ಮತ್ತು ನೌಕರಿಗಳು ಸೃಷ್ಟಿಯಾಗದ ಹಿನ್ನೆಲೆಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿದ್ದ ಯುವಕರಲ್ಲಿ ಹಿಂಸಾತ್ಮಕ ಭಾವನೆಗಳನ್ನು ಬಳಸಿ ಕೆರಳಿಸಬಹುದು ಎಂಬುದನ್ನು ಮನಗಂಡಿದ್ದು ಮತ್ತು ಮೂರನೆಯದಾಗಿ, ಹಿಂಸೆಯ ನಿರಂತರ ಮುಂದುವರೆಸುವಿಕೆಯು, ಅಪಾಯಕ್ಕೆ ತುತ್ತಾಗಬಹುದಾದ ಸಮುದಾಯಗಳನ್ನು ಶರಣಾಗತಿ ಕಡೆಗೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದಕ್ಕೆ ಕಾರಣವಾಗುತ್ತದೆ.

ಇಲ್ಲಿ ನಾವು ಬಡತನದ ವ್ಯಾಪಕತೆ ಮತ್ತು ಕೊರೊನಾದ ಕಾರಣದಿಂದಾಗಿ ಅದು ಇನ್ನಷ್ಟು ಸಂಕಿರ್ಣಗೊಂಡಿದ್ದನ್ನು ಮನಗಾಣಬಹುದು. ಬಡತನವು, ಎಂತಹದ್ದೇ ಸಂದರ್ಭದಲ್ಲೂ ಯಾವ ಕುಟುಂಬವು ಅಪೇಕ್ಷಿಸುವಂತಹದ್ದಲ್ಲ. ಭ್ರಷ್ಟಾಚಾರದಿಂದಾಗಿ ಅವಕಾಶಗಳು ಸಮವಾಗಿ ಹಂಚಿಕೆಯಾಗುವುದಿಲ್ಲ ಎಂಬುದರ ಜೊತೆಗೆ ಆದಾಯ ಗಳಿಕೆಗೆ ಸರಿಯಾದ ಅವಕಾಶಗಳಿಲ್ಲ ಎಂಬುದೂ ಕೂಡಿ ಬಡತನದ ಸಂಕಷ್ಟಗಳನ್ನು ಬಹಳಷ್ಟು ಉಲ್ಬಣಿಸಿದೆ. ಇದು, ಅಧಿಕಾರ ಒಡ್ಡುವ ಸುಳ್ಳು ಆಶ್ವಾಸನೆಗಳಿಗೆ ಅಥವಾ ತತ್ ಕ್ಷಣದ ಮೋಹಗಳಿಗೆ, ಬಡಕುಟುಂಬಗಳ ಮತ ಚಲಾಯಿಸುವ ಹಕ್ಕು ಮತ್ತು ಅದರೊಳಗಿನ ಆಯ್ಕೆಗಳನ್ನು ಅತೀ ಸುಲಭವಾಗಿ ತುತ್ತಾಗಿಸುತ್ತವೆ. ಕಳೆದ ಎರಡು ವರ್ಷಗಳ ಕೋವಿಡ್ ಸಾಂಕ್ರಾಮಿಕವು ಆಹಾರ ಮತ್ತು ಆರೋಗ್ಯವೆಂಬ ದಿನನಿತ್ಯ ಜೀವನದ ಸಮಸ್ಯೆಗಳಿಂದ ಬಡ ಕುಟುಂಬಗಳು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ತಮ್ಮ ಜೀವನದ ಸಂಕಷ್ಟಗಳನ್ನು ಎದುರಿಸುವ ತಾಕತ್ತು ಈ ಹಿಂದೆ ಅಷ್ಟಿಷ್ಟೋ ಇದ್ದಿದ್ದನ್ನು ಸಾಂಕ್ರಾಮಿಕವು ಕಿತ್ತುಕೊಂಡಿದೆ.

ಅಧಿಕಾರದಲ್ಲಿದ್ದರಿಂದ ಆದ ಅನುಕೂಲಗಳು ಇವೇ ಆಗಿವೆ – ಸಂಕಷ್ಟದಲ್ಲಿದ್ದ 80% ಮತದಾರರಿಗೆ ಆ ತಕ್ಷಣಕ್ಕೆ ಬೇಕಿರುವ ಅಗತ್ಯಗಳನ್ನು ಪೂರೈಸಿದರೆ ಅವರ ಮತಗಳನ್ನು ಒಲಿಸಿಕೊಳ್ಳುವುದು ಕಷ್ಟವಲ್ಲ; ಹೇಗಿದ್ದರೂ ಬಡವರು ಹೊತ್ತಿಂದಹೊತ್ತಿಗೆ ತಾನೇ ಬದುಕುವುದು! ಸಾಂಕ್ರಾಮಿಕದೊಂದಿಗೆ ಬಡತನವೂ ಸೇರಿರುವುದರಿಂದ ಯಾವುದೇ ರಾಜಕೀಯ ಪಕ್ಷವಾಗಲೀ ಬಡವರ ಆಯ್ಕೆಗಳ ಖರೀದಿಗೆ ಮುಂದಾಗುವಂತೆ ಮಾಡುತ್ತದೆ. ’ಬಹುಸಂಖ್ಯಾತ’ 80% ಜನರಿಗೆ ಅತೀ ಹೆಚ್ಚು ಹಣ ಹಂಚುವ ಪಕ್ಷವು, ಚುನಾವಣಾ ಫಲಿತಾಂಶದ ವೇಳೆಗೆ ಜನರ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದಕಾರಣ, ಮಣಿಪುರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ನಿರ್ಣಯಿಸಿದ ಮೂರು ಅಂಶಗಳೆಂದರೆ – ಬಡತನ, ಸಾಂಕ್ರಾಮಿಕ ಮತ್ತು ಗೌಪ್ಯ ಮಾರುಕಟ್ಟೆಯಲ್ಲಿ ನಡೆದ ಮತಗಳ ಕೊಳ್ಳುವಿಕೆ. ಸಂವಿಧಾನವು ಸಮಾನತೆಯನ್ನು ಉಲ್ಲೇಖಿಸಿದರೂ, ಅತೀ ಹೆಚ್ಚು ವ್ಯಾಪಕವಾಗಿರುವ ಬಡತನದ ವಾಸ್ತವತೆಯು ಅಧಿಕಾರಸ್ಥರು ಆ ಹೊತ್ತಿನ ಸಾಮಾಜಿಕ ಭ್ರಷ್ಟಾಚಾರದಲ್ಲಿ ತೊಡಗುವಂತೆ ಮಾಡಿ, ಪ್ರಜಾಪ್ರಭುತ್ವದ ಅತೀ ಮುಖ್ಯ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಲು ಕಾರಣವಾಗುತ್ತದೆ. ಆದ್ದರಿಂದ, ಅಧಿಕಾರದಲ್ಲಿರುವ ಜನರಿಗೆ ಮತ್ತು ಮುಂದೆ ಅಧಿಕಾರ ಹಿಡಿಯಬೇಕಾದ ಜನರ ಹಿತಾಸಕ್ತಿಯು ಬಡತನದ ಮುಂದುವರಿಕೆಯನ್ನು ಬಯಸುತ್ತವೆ. ಬಡತನದ ಜೊತೆ ಸಾಂಕ್ರಾಮಿಕವೂ ಕೂಡಿ ಅಧಿಕಾರಸ್ಥರು ಸಾಮಾಜಿಕ ಭ್ರಷ್ಟಾಚಾರದಲ್ಲಿ ತೊಡಗಲು ಬಯಸಿದಷ್ಟು ಹೆಚ್ಚೆಚ್ಚು ಒಳ್ಳೆಯ ಸಂದರ್ಭವನ್ನು ಒದಗಿಸಿಕೊಡುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಬಡವ ಕೂಡ ತಾನು ಹೊಂದಿರುವ ಯಾವುದೇ ಮಹತ್ವದ ಮತ್ತು ವಿರಳ ಶಕ್ತಿಯಾದ, ಐದು ವರ್ಷಕ್ಕೊಮ್ಮೆ ಮಾತ್ರ ಸಿಗುವ ಮತ ಚಲಾಯಿಸುವ ಹಕ್ಕನ್ನೂ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೆಲೆಗೆ ಮಾರಿಕೊಳ್ಳಲು
ಉತ್ಸುಕನಾಗಿರುತ್ತಾನೆ. ಆದ್ದರಿಂದ ಮತಗಳನ್ನು ಕೊಳ್ಳಲು ಮಾರುಕಟ್ಟೆಯೂ ಆ ಕ್ಷಣವೇ ಸೃಷ್ಟಿಯಾಗುತ್ತದೆ. ಇದರಲ್ಲಿ, ಮತಗಳಿಗೆ ಅತೀ ಹೆಚ್ಚು ಬೆಲೆ ಕೂಗುವವನು ಅವನ್ನು ಪಡೆದುಕೊಳ್ಳುತ್ತಾನೆ.

ಆದ್ದರಿಂದ, ಮಣಿಪುರದ ಚುನಾವಣೆಯ ಫಲಿತಾಂಶವು ನಮಗೆ ತಿಳಿಸುವ ಪಾಠ ಇಂತಿದೆ: ಚುನಾವಣೆಯ ಹಿತಾಸಕ್ತಿಗಾಗಿ ಬಡತನವನ್ನು ’ಮುಂದುವರೆಸಬೇಕಾಗುತ್ತದೆ’ ಮತ್ತು ಅಧಿಕಾರಸ್ಥ ವರ್ಗವು ಬಡತನವನ್ನು ಮುಂದುವರೆಸಲು ಸಾಧ್ಯವಾದರೆ ಆಡಳಿತದ ಗುಣಮಟ್ಟ ಮತ್ತು ರೀತಿ-ನೀತಿಗಳ ಬಗ್ಗೆ ಚಿಂತಿಸುವ ಯಾವುದೇ ಅಗತ್ಯವಿಲ್ಲ. ಪ್ರಜಾಪ್ರಭುತ್ವದ ಜ್ವಲಂತ ಸಮಸ್ಯೆಗಳನ್ನು ಮುಂದೆ ರಚಿಸಲಾಗುವ ಸರ್ಕಾರವು ನೀಡುವ ಅನುದಾನದಿಂದ ನಡೆಸಲಾಗುವ ವಿಚಾರ ಸಂಕಿರಣದಲ್ಲಿ ಚರ್ಚಿಸಿಕೊಳ್ಳೋಣ!

ಕನ್ನಡಕ್ಕೆ: ಶಶಾಂಕ್

ಪ್ರೊ. ಅಮರ್ ಯುಮ್ನಮ್

ಪ್ರೊ. ಅಮರ್ ಯುಮ್ನಮ್
ಮಣಿಪುರ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿಗಳು ಮತ್ತು ಅರ್ಥಶಾಸ್ತ್ರ ಪ್ರಾಧ್ಯಾಪಕರು


ಇದನ್ನೂ ಓದಿ: ರಾಜಕೀಯ ಪಕ್ಷಗಳು ಚುನಾವಣಾ ಭರವಸೆಗಳನ್ನು ಈಡೇರಿಸದಿದ್ದರೆ ದಂಡ ವಿಧಿಸಲು ಸಾಧ್ಯವಿಲ್ಲ: ಅಲಹಾಬಾದ್ ಹೈಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...