Homeಮುಖಪುಟಭಾರತವನ್ನು ನಂಬದ ಮನಸ್ಥಿತಿಯವರು ತಮ್ಮ ದ್ವೇಷಕ್ಕೆ ಉಡುಪಿ ಆಯ್ದುಕೊಂಡು ತಪ್ಪು ಮಾಡಿದರು: ಸಸಿಕಾಂತ್ ಸೆಂಥಿಲ್

ಭಾರತವನ್ನು ನಂಬದ ಮನಸ್ಥಿತಿಯವರು ತಮ್ಮ ದ್ವೇಷಕ್ಕೆ ಉಡುಪಿ ಆಯ್ದುಕೊಂಡು ತಪ್ಪು ಮಾಡಿದರು: ಸಸಿಕಾಂತ್ ಸೆಂಥಿಲ್

ನೀವು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದೀರಿ. ಅವರಿಗಾಗಿ ಆಸ್ತಿ ಮಾಡುತ್ತಿದ್ದೀರಿ. ಆದರೆ ಸಮಾಜದಲ್ಲಿ ಉತ್ತಮ ಸೌಹಾರ್ದ ವಾತವಾರಣ ಇಲ್ಲದೆ ಇದ್ದರೆ ಏನು ಪ್ರಯೋಜನ? ದ್ವೇಷಮಯ ಸಮಾಜದಲ್ಲಿ ಅವರು ಹೇಗೆ ಬದುಕಬೇಕು? ಸೆಂಥಿಲ್ ಪ್ರಶ್ನೆ

- Advertisement -
- Advertisement -

ನೀವು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದೀರಿ. ಅವರಿಗಾಗಿ ಆಸ್ತಿ ಮಾಡುತ್ತಿದ್ದೀರಿ. ಆದರೆ ಸಮಾಜದಲ್ಲಿ ಉತ್ತಮ ಸೌಹಾರ್ದ ವಾತವಾರಣ ಇಲ್ಲದೆ ಇದ್ದರೆ ಏನು ಪ್ರಯೋಜನ? ದ್ವೇಷಮಯ ಸಮಾಜದಲ್ಲಿ ಅವರು ಹೇಗೆ ಬದುಕಬೇಕು? ಹಾಗಾಗಿ ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ದನಿಯೆತ್ತಿ ಮಾತನಾಡಿ. ನಿಮಗೆ ಮಾತನಾಡದೆ ಬೇರೆ ಆಯ್ಕೆಯೇ ಇಲ್ಲ. ಅವರ ಬದುಕನ್ನು ಸುಂದರಗೊಳಿಸಲು ಸಹೋದರತ್ವವನ್ನು, ಭಾರತೀಯತೆಯನ್ನು ಆಚರಿಸಿ ಎಂದು ಮಾಜಿ ಐಎಸ್‌ಐ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಕರೆ ನೀಡಿದರು.

ಉಡುಪಿಯ ಕ್ರಿಶ್ಚಿಯನ್ ಶಾಲೆ ಮೈದಾನದಲ್ಲಿ ನಡೆದ ಸಹಬಾಳ್ವೆ ಸಮಾವೇಶದ ಅಧ್ಯಕ್ಷೀಯ ಮಾತುಗಳನ್ನಾಡಿದ ಅವರು, “ಇಂದು ನಡೆಯುತ್ತಿರುವುದು ಧರ್ಮಗಳ ಸಮಸ್ಯೆಯಲ್ಲ. ಇದು ಹಿಂದೂ ಮುಸ್ಲಿಂ ಸಮಸ್ಯೆಯೂ ಅಲ್ಲ. ಆದರೆ ಇದು ಎರಡು ಮನಸ್ಥಿತಿಗಳ ನಡುವಿನ ಸಮಸ್ಯೆಯಾಗಿದ್ದು, ಭಾರತದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ತಾವು ಎಲ್ಲರಿಗಿಂತ ಮೇಲೆಂಬ ಮನಸ್ಥಿತಿಯೊಂದಿದೆ. ಅದು ಸಮಾಜ ಎಂದರೆ ಮೇಲು ಕೀಳು ಇರಬೇಕೆಂದು ಬಯಸುತ್ತದೆ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಭಯ, ದ್ವೇಷ ಹುಟ್ಟುಹಾಕುತ್ತದೆ. ಅವರು ದೇಶವನ್ನು ತಮ್ಮ ಆಸ್ತಿಯಾಗಿ ಆಗಿ ನೋಡುತ್ತಾರೆ. ಈ ಮನಸ್ಥಿತಿಯು ಭಾರತೀಯತೆಗೆ ವಿರುದ್ಧವಾಗಿದೆ. ಈ ಸಮಸ್ಯೆಯು ಭಾರತವನ್ನು ನಂಬದೆ ಇರುವವರಿಂದ ಹುಟ್ಟಿದೆ” ಎಂದು ವಿಶ್ಲೇಷಿಸಿದರು.

ಇನ್ನೊಂದು ಮನಸ್ಥಿತಿ ಇದೆ. ಅದು ನಮ್ಮ ನಮ್ಮ ಮನಸ್ಥಿತಿ. ತಾರತಮ್ಯವಿಲ್ಲದ ಸಮಾನತೆಯ ಕನಸು ಹೊತ್ತಿರುವ ಮನಸ್ಥಿತಿ. ಅಂದರೆ ದೇಶವನ್ನು ನಂಬುವ ಭಾರತೀಯ ಎಂಬ ಚಿಂತನೆಯನ್ನು ಆಧರಿಸಿರುವ ಮನಸ್ಥಿತಿ. ದೇಶವೆಂದರೆ ಅಲ್ಲಿನ ಜನರು ಎಂದು ನಂಬಿ ಭಾರತದ ಜನತೆಗೆ ಜಯವಾಗಲಿ ಎಂದು ಕೂಗುತ್ತೇವೆ. ಈ ಎರಡು ಮನಸ್ಥಿತಿಗಳ ನಡುವೆ ಹೋರಾಟ ನಡೆಯುತ್ತಿದೆ. ಹಾಗಾಗಿ ಇದನ್ನು ಭಾರತವನ್ನು ನಂಬದ ಅವರ ಮತ್ತು ಭಾರತವನ್ನು ನಂಬುವ ನಮ್ಮ ಮನಸ್ಥಿತಿಗಳ ನಡುವಿನ ಹೋರಾಟವನ್ನಾಗಿ ನೋಡಬೇಕು ಎಂದರು.

“ನಮ್ಮ ಸಮಸ್ಯೆ ಎಂದರೆ ಭಾರತೀಯತೆ ಎಂಬ ಚಿಂತನೆಯನ್ನು ಆಚರಿಸುವುದನ್ನು ಮರೆತುಬಿಟ್ಟಿದ್ದೇವೆ. 50 ವರ್ಷಗಳಿಂದ ನಿಜವಾದ ಭಾರತವನ್ನು ಆಚರಣೆ ಮಾಡುವುದನ್ನು ನಾವು ಮರೆತಿದ್ದೇವೆ. ನಾವು ಇನ್ನು ಮುಂದೆ ಆಚರಣೆ ಮಾಡಬೇಕಾಗಿದೆ. ಈ ಆಚರಣೆ ಇಲ್ಲಿಂದ ಶುರುವಾಗಬೇಕಿದೆ ಅದಕ್ಕೆ ಸಮಾವೇಶ ಹಮ್ಮಿಕೊಂಡಿದ್ದೇವೆ. ಎಲ್ಲಾ ಕಡೆ ಈ ಸಹೋದರತ್ವ, ಬಂಧುತ್ವವನ್ನು ಆಚರಿಸಬೇಕಿದೆ” ಎಂದು ತಿಳಿಸಿದರು.

ಭಾರತವನ್ನು ನಂಬದೆ ಇರುವವರು ಕೇವಲ ಶೇ. 10-15 ಮಾತ್ರ ಇದ್ದಾರೆ. ಆದರೆ ನಾವು ಶೇ. 85% ಕ್ಕಿಂತ ಹೆಚ್ಚಿದ್ದರೂ ಸುಮ್ಮನಿದ್ದೇವೆ. ಇಂದು ’ದ್ವೇಷ‘ ಹರಡುತ್ತಿರುವುದು ಸಮಸ್ಯೆಯಲ್ಲ. ಆದರೆ ಅದನ್ನು ನೋಡಿಕೊಂಡು ಸುಮ್ಮನಿರುವುದು ಸಮಸ್ಯೆಯಾಗಿದೆ. ಎಲ್ಲರೂ ಒಳ್ಳೆಯವರೇ ಆದರೆ ಅವರು ಮಾತನಾಡುತ್ತಿಲ್ಲ. ನಮ್ಮನ್ನು ಎಲ್ಲಿ ಸಿಕ್ಕಿ ಹಾಕಿಸುತ್ತಾರೊ ಎಂಬ ಭಯ ಅವರದು. ಎಚ್.ಎಸ್ ದೊರೆಸ್ವಾಮಿಯವರು ಯಾರಿಗೆ ಸಮಸ್ಯೆಯಾದರೂ ನಾವು ಅವರ ಜೊತೆ ನಿಲ್ಲಬೇಕೆಂದು ಹೇಳುತ್ತಿದ್ದರು ಮತ್ತು ಹೋರಾಡುತ್ತಿದ್ದರು. ಅವರು ನಮಗೆ ಮಾದರಿಯಾಗಬೇಕು. ದಲಿತರಿಗೆ, ಅಲ್ಪಸಂಖ್ಯಾತರಿಗೆ ಯಾರಿಗೆ ಸಮಸ್ಯೆಯಾದರೂ ನಾವು ಅವರ ಜೊತೆ ನಿಲ್ಲಬೇಕೆಂದು ಸೆಂಥಿಲ್ ಹೇಳಿದರು.

ನಾವು ಸಮಾಜದ ಸಮಸ್ಯೆಗಳನ್ನು ಹಿಂದೂ ಮುಸ್ಲಿಂ ಸಮಸ್ಯೆ ಎಂದು ಪರಿಗಣಿಸಬಾರದು. ಇದು ಧರ್ಮದ ಒಳಗಿನ ಜಗಳವಲ್ಲ. ಭಾರತೀಯರು ಮತ್ತು ಭಾರತವನ್ನು ಒಪ್ಪದೆ ಇರುವವರ ಸಮಸ್ಯೆ ಎಂದು ಮಾತನಾಡಬೇಕು, ಅದರನ್ನು ಸರಿಪಡಿಸಲು ಹೋರಾಡಬೇಕು. ನಮ್ಮಲ್ಲಿರುವ ಸಹೋದರತ್ವ, ಪ್ರೀತಿಯನ್ನು ಆಚರಿಸೋಣ, ಹಂಚೋಣ. ಅದೇ ಸರಿಯಾದ ಉತ್ತರವಾಗಿರುತ್ತದೆ. ಆಗ ಮಾತ್ರ ಭಾರತದ ಆತ್ಮವನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ಇದನ್ನೂ ಓದಿ: ದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್

ಭಾರತವನ್ನು ನಂಬದ ಮನಸ್ಥಿತಿಯವರು ತಮ್ಮ ದ್ವೇಷ ಹರಡಲು ಉಡುಪಿ ಆಯ್ದುಕೊಂಡು ತಪ್ಪು ಮಾಡಿದ್ದಾರೆ. ಅದಕ್ಕೆ ಈಗ ಭಾರತೀಯ ಜನರಿಂದಲೇ ದೊಡ್ಡ ಪ್ರತಿಕ್ರಿಯೆ ಬರುತ್ತಿದೆ. ಈ ಸಮಾವೇಶ ಸಂಪೂರ್ಣ ಯಶಸ್ವಿಯಾಗಿದೆ. ಈ ಯಶಸ್ಸನ್ನು ಎಲ್ಲಾ ಜಿಲ್ಲೆಗಳಿಗೂ ತೆಗೆದುಕೊಂಡು ಹೋಗಬೇಕು. ಇಲ್ಲಿನ ಆಶಯವನ್ನು ಹಳ್ಳಿಹಳ್ಳಿಗೆ ತಲುಪಿಸಬೇಕು. ಅದಕ್ಕೆ ಯುವಶಕ್ತಿ ಸಜ್ಜುಗೊಳ್ಳಬೇಕು ಎಂದರು.

ತಾವು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಸಮಯವನ್ನು ಸ್ಮರಿಸಿಕೊಂಡ ಅವರು, ಆಗ ನಾನು ಅತಿ ಹೆಚ್ಚಿನ ಮಳೆಯಿಂದಾಗಿ ಶಾಲಾ ಮಕ್ಕಳಿಗೆ 13 ದಿನ ರಜೆ ಕೊಟ್ಟಿದೆ. ನನ್ನ ಮಕ್ಕಳ ಸುರಕ್ಷತೆಯ ಬಗ್ಗೆ ನನಗೆ ಭಯ ಇತ್ತು. ಅದಕ್ಕಾಗಿ ಇಂದಿಗೂ ಮಕ್ಕಳು ನನ್ನನ್ನು ನೆನೆಸಿಕೊಳ್ಳುತ್ತಾರೆ. ಆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಮಾತನಾಡಬೇಕಿದೆ. ವಯಕ್ತಿಕ ನೆಲೆಯಲ್ಲಾದರೂ ನೀವು ಮಾತನಾಡಿ, ಫೇಸ್‌ಬುಕ್‌ನಲ್ಲಿ ಸಹಬಾಳ್ವೆಯ ಸ್ಟೇಟಸ್ ಹಾಕಿ, ಹಾಡು ಹಾಡಿ ಮತ್ತು ಭಾರತೀಯತೆಯನ್ನು ಆಚರಿಸಿ ಎಂದು ಸೆಂಥಿಲ್ ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....