Homeಮುಖಪುಟಭಾರತವನ್ನು ನಂಬದ ಮನಸ್ಥಿತಿಯವರು ತಮ್ಮ ದ್ವೇಷಕ್ಕೆ ಉಡುಪಿ ಆಯ್ದುಕೊಂಡು ತಪ್ಪು ಮಾಡಿದರು: ಸಸಿಕಾಂತ್ ಸೆಂಥಿಲ್

ಭಾರತವನ್ನು ನಂಬದ ಮನಸ್ಥಿತಿಯವರು ತಮ್ಮ ದ್ವೇಷಕ್ಕೆ ಉಡುಪಿ ಆಯ್ದುಕೊಂಡು ತಪ್ಪು ಮಾಡಿದರು: ಸಸಿಕಾಂತ್ ಸೆಂಥಿಲ್

ನೀವು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದೀರಿ. ಅವರಿಗಾಗಿ ಆಸ್ತಿ ಮಾಡುತ್ತಿದ್ದೀರಿ. ಆದರೆ ಸಮಾಜದಲ್ಲಿ ಉತ್ತಮ ಸೌಹಾರ್ದ ವಾತವಾರಣ ಇಲ್ಲದೆ ಇದ್ದರೆ ಏನು ಪ್ರಯೋಜನ? ದ್ವೇಷಮಯ ಸಮಾಜದಲ್ಲಿ ಅವರು ಹೇಗೆ ಬದುಕಬೇಕು? ಸೆಂಥಿಲ್ ಪ್ರಶ್ನೆ

- Advertisement -
- Advertisement -

ನೀವು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದೀರಿ. ಅವರಿಗಾಗಿ ಆಸ್ತಿ ಮಾಡುತ್ತಿದ್ದೀರಿ. ಆದರೆ ಸಮಾಜದಲ್ಲಿ ಉತ್ತಮ ಸೌಹಾರ್ದ ವಾತವಾರಣ ಇಲ್ಲದೆ ಇದ್ದರೆ ಏನು ಪ್ರಯೋಜನ? ದ್ವೇಷಮಯ ಸಮಾಜದಲ್ಲಿ ಅವರು ಹೇಗೆ ಬದುಕಬೇಕು? ಹಾಗಾಗಿ ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ದನಿಯೆತ್ತಿ ಮಾತನಾಡಿ. ನಿಮಗೆ ಮಾತನಾಡದೆ ಬೇರೆ ಆಯ್ಕೆಯೇ ಇಲ್ಲ. ಅವರ ಬದುಕನ್ನು ಸುಂದರಗೊಳಿಸಲು ಸಹೋದರತ್ವವನ್ನು, ಭಾರತೀಯತೆಯನ್ನು ಆಚರಿಸಿ ಎಂದು ಮಾಜಿ ಐಎಸ್‌ಐ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಕರೆ ನೀಡಿದರು.

ಉಡುಪಿಯ ಕ್ರಿಶ್ಚಿಯನ್ ಶಾಲೆ ಮೈದಾನದಲ್ಲಿ ನಡೆದ ಸಹಬಾಳ್ವೆ ಸಮಾವೇಶದ ಅಧ್ಯಕ್ಷೀಯ ಮಾತುಗಳನ್ನಾಡಿದ ಅವರು, “ಇಂದು ನಡೆಯುತ್ತಿರುವುದು ಧರ್ಮಗಳ ಸಮಸ್ಯೆಯಲ್ಲ. ಇದು ಹಿಂದೂ ಮುಸ್ಲಿಂ ಸಮಸ್ಯೆಯೂ ಅಲ್ಲ. ಆದರೆ ಇದು ಎರಡು ಮನಸ್ಥಿತಿಗಳ ನಡುವಿನ ಸಮಸ್ಯೆಯಾಗಿದ್ದು, ಭಾರತದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ತಾವು ಎಲ್ಲರಿಗಿಂತ ಮೇಲೆಂಬ ಮನಸ್ಥಿತಿಯೊಂದಿದೆ. ಅದು ಸಮಾಜ ಎಂದರೆ ಮೇಲು ಕೀಳು ಇರಬೇಕೆಂದು ಬಯಸುತ್ತದೆ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಭಯ, ದ್ವೇಷ ಹುಟ್ಟುಹಾಕುತ್ತದೆ. ಅವರು ದೇಶವನ್ನು ತಮ್ಮ ಆಸ್ತಿಯಾಗಿ ಆಗಿ ನೋಡುತ್ತಾರೆ. ಈ ಮನಸ್ಥಿತಿಯು ಭಾರತೀಯತೆಗೆ ವಿರುದ್ಧವಾಗಿದೆ. ಈ ಸಮಸ್ಯೆಯು ಭಾರತವನ್ನು ನಂಬದೆ ಇರುವವರಿಂದ ಹುಟ್ಟಿದೆ” ಎಂದು ವಿಶ್ಲೇಷಿಸಿದರು.

ಇನ್ನೊಂದು ಮನಸ್ಥಿತಿ ಇದೆ. ಅದು ನಮ್ಮ ನಮ್ಮ ಮನಸ್ಥಿತಿ. ತಾರತಮ್ಯವಿಲ್ಲದ ಸಮಾನತೆಯ ಕನಸು ಹೊತ್ತಿರುವ ಮನಸ್ಥಿತಿ. ಅಂದರೆ ದೇಶವನ್ನು ನಂಬುವ ಭಾರತೀಯ ಎಂಬ ಚಿಂತನೆಯನ್ನು ಆಧರಿಸಿರುವ ಮನಸ್ಥಿತಿ. ದೇಶವೆಂದರೆ ಅಲ್ಲಿನ ಜನರು ಎಂದು ನಂಬಿ ಭಾರತದ ಜನತೆಗೆ ಜಯವಾಗಲಿ ಎಂದು ಕೂಗುತ್ತೇವೆ. ಈ ಎರಡು ಮನಸ್ಥಿತಿಗಳ ನಡುವೆ ಹೋರಾಟ ನಡೆಯುತ್ತಿದೆ. ಹಾಗಾಗಿ ಇದನ್ನು ಭಾರತವನ್ನು ನಂಬದ ಅವರ ಮತ್ತು ಭಾರತವನ್ನು ನಂಬುವ ನಮ್ಮ ಮನಸ್ಥಿತಿಗಳ ನಡುವಿನ ಹೋರಾಟವನ್ನಾಗಿ ನೋಡಬೇಕು ಎಂದರು.

“ನಮ್ಮ ಸಮಸ್ಯೆ ಎಂದರೆ ಭಾರತೀಯತೆ ಎಂಬ ಚಿಂತನೆಯನ್ನು ಆಚರಿಸುವುದನ್ನು ಮರೆತುಬಿಟ್ಟಿದ್ದೇವೆ. 50 ವರ್ಷಗಳಿಂದ ನಿಜವಾದ ಭಾರತವನ್ನು ಆಚರಣೆ ಮಾಡುವುದನ್ನು ನಾವು ಮರೆತಿದ್ದೇವೆ. ನಾವು ಇನ್ನು ಮುಂದೆ ಆಚರಣೆ ಮಾಡಬೇಕಾಗಿದೆ. ಈ ಆಚರಣೆ ಇಲ್ಲಿಂದ ಶುರುವಾಗಬೇಕಿದೆ ಅದಕ್ಕೆ ಸಮಾವೇಶ ಹಮ್ಮಿಕೊಂಡಿದ್ದೇವೆ. ಎಲ್ಲಾ ಕಡೆ ಈ ಸಹೋದರತ್ವ, ಬಂಧುತ್ವವನ್ನು ಆಚರಿಸಬೇಕಿದೆ” ಎಂದು ತಿಳಿಸಿದರು.

ಭಾರತವನ್ನು ನಂಬದೆ ಇರುವವರು ಕೇವಲ ಶೇ. 10-15 ಮಾತ್ರ ಇದ್ದಾರೆ. ಆದರೆ ನಾವು ಶೇ. 85% ಕ್ಕಿಂತ ಹೆಚ್ಚಿದ್ದರೂ ಸುಮ್ಮನಿದ್ದೇವೆ. ಇಂದು ’ದ್ವೇಷ‘ ಹರಡುತ್ತಿರುವುದು ಸಮಸ್ಯೆಯಲ್ಲ. ಆದರೆ ಅದನ್ನು ನೋಡಿಕೊಂಡು ಸುಮ್ಮನಿರುವುದು ಸಮಸ್ಯೆಯಾಗಿದೆ. ಎಲ್ಲರೂ ಒಳ್ಳೆಯವರೇ ಆದರೆ ಅವರು ಮಾತನಾಡುತ್ತಿಲ್ಲ. ನಮ್ಮನ್ನು ಎಲ್ಲಿ ಸಿಕ್ಕಿ ಹಾಕಿಸುತ್ತಾರೊ ಎಂಬ ಭಯ ಅವರದು. ಎಚ್.ಎಸ್ ದೊರೆಸ್ವಾಮಿಯವರು ಯಾರಿಗೆ ಸಮಸ್ಯೆಯಾದರೂ ನಾವು ಅವರ ಜೊತೆ ನಿಲ್ಲಬೇಕೆಂದು ಹೇಳುತ್ತಿದ್ದರು ಮತ್ತು ಹೋರಾಡುತ್ತಿದ್ದರು. ಅವರು ನಮಗೆ ಮಾದರಿಯಾಗಬೇಕು. ದಲಿತರಿಗೆ, ಅಲ್ಪಸಂಖ್ಯಾತರಿಗೆ ಯಾರಿಗೆ ಸಮಸ್ಯೆಯಾದರೂ ನಾವು ಅವರ ಜೊತೆ ನಿಲ್ಲಬೇಕೆಂದು ಸೆಂಥಿಲ್ ಹೇಳಿದರು.

ನಾವು ಸಮಾಜದ ಸಮಸ್ಯೆಗಳನ್ನು ಹಿಂದೂ ಮುಸ್ಲಿಂ ಸಮಸ್ಯೆ ಎಂದು ಪರಿಗಣಿಸಬಾರದು. ಇದು ಧರ್ಮದ ಒಳಗಿನ ಜಗಳವಲ್ಲ. ಭಾರತೀಯರು ಮತ್ತು ಭಾರತವನ್ನು ಒಪ್ಪದೆ ಇರುವವರ ಸಮಸ್ಯೆ ಎಂದು ಮಾತನಾಡಬೇಕು, ಅದರನ್ನು ಸರಿಪಡಿಸಲು ಹೋರಾಡಬೇಕು. ನಮ್ಮಲ್ಲಿರುವ ಸಹೋದರತ್ವ, ಪ್ರೀತಿಯನ್ನು ಆಚರಿಸೋಣ, ಹಂಚೋಣ. ಅದೇ ಸರಿಯಾದ ಉತ್ತರವಾಗಿರುತ್ತದೆ. ಆಗ ಮಾತ್ರ ಭಾರತದ ಆತ್ಮವನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ಇದನ್ನೂ ಓದಿ: ದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್

ಭಾರತವನ್ನು ನಂಬದ ಮನಸ್ಥಿತಿಯವರು ತಮ್ಮ ದ್ವೇಷ ಹರಡಲು ಉಡುಪಿ ಆಯ್ದುಕೊಂಡು ತಪ್ಪು ಮಾಡಿದ್ದಾರೆ. ಅದಕ್ಕೆ ಈಗ ಭಾರತೀಯ ಜನರಿಂದಲೇ ದೊಡ್ಡ ಪ್ರತಿಕ್ರಿಯೆ ಬರುತ್ತಿದೆ. ಈ ಸಮಾವೇಶ ಸಂಪೂರ್ಣ ಯಶಸ್ವಿಯಾಗಿದೆ. ಈ ಯಶಸ್ಸನ್ನು ಎಲ್ಲಾ ಜಿಲ್ಲೆಗಳಿಗೂ ತೆಗೆದುಕೊಂಡು ಹೋಗಬೇಕು. ಇಲ್ಲಿನ ಆಶಯವನ್ನು ಹಳ್ಳಿಹಳ್ಳಿಗೆ ತಲುಪಿಸಬೇಕು. ಅದಕ್ಕೆ ಯುವಶಕ್ತಿ ಸಜ್ಜುಗೊಳ್ಳಬೇಕು ಎಂದರು.

ತಾವು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಸಮಯವನ್ನು ಸ್ಮರಿಸಿಕೊಂಡ ಅವರು, ಆಗ ನಾನು ಅತಿ ಹೆಚ್ಚಿನ ಮಳೆಯಿಂದಾಗಿ ಶಾಲಾ ಮಕ್ಕಳಿಗೆ 13 ದಿನ ರಜೆ ಕೊಟ್ಟಿದೆ. ನನ್ನ ಮಕ್ಕಳ ಸುರಕ್ಷತೆಯ ಬಗ್ಗೆ ನನಗೆ ಭಯ ಇತ್ತು. ಅದಕ್ಕಾಗಿ ಇಂದಿಗೂ ಮಕ್ಕಳು ನನ್ನನ್ನು ನೆನೆಸಿಕೊಳ್ಳುತ್ತಾರೆ. ಆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಮಾತನಾಡಬೇಕಿದೆ. ವಯಕ್ತಿಕ ನೆಲೆಯಲ್ಲಾದರೂ ನೀವು ಮಾತನಾಡಿ, ಫೇಸ್‌ಬುಕ್‌ನಲ್ಲಿ ಸಹಬಾಳ್ವೆಯ ಸ್ಟೇಟಸ್ ಹಾಕಿ, ಹಾಡು ಹಾಡಿ ಮತ್ತು ಭಾರತೀಯತೆಯನ್ನು ಆಚರಿಸಿ ಎಂದು ಸೆಂಥಿಲ್ ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....